Saturday, April 29, 2017

ವಾಲಿ & ಘರವಾಲಿ

ರಾಮಾಯಣದ ವಾಲಿ ಎಲ್ಲರಿಗೂ ಗೊತ್ತು. ಸುಗ್ರೀವನ ಅಣ್ಣ. ವಾನರರ ರಾಜ.

ರಾಮ ವಾಲಿಯನ್ನು ಕೊಂದ. ಸರಿ. ಆದರೆ ರಾಮ ಮರವೊಂದರ ಮರೆಯಲ್ಲಿ ನಿಂತು, ಕಾಣದಂತೆ ಬಾಣಬಿಟ್ಟು ವಾಲಿಯನ್ನು ಕೊಂದ. ರಾಮ ಹಾಗೇಕೆ ಮಾಡಿದ? ಮರ್ಯಾದಾಪುರುಷೋತ್ತಮನೆಂದು ಖ್ಯಾತನಾದ ರಾಮ ಮರದ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿಯೇ? ಹಾಗಂತ ಬಹಳ ಮಂದಿಗೆ ಅನ್ನಿಸಿರಬಹುದು ಬಿಡಿ.

ವಾಲಿಗೆ ಒಂದು ವಿಶಿಷ್ಟ ಶಕ್ತಿಯಿತ್ತಂತೆ. ಅದೇನೆಂದರೆ.....ಯಾರೇ ಅವನ ಎದುರಿಗೆ ಬಂದು ನಿಲ್ಲಲಿ. ಅವರ ಅರ್ಧದಷ್ಟು ಶಕ್ತಿ ಅಂದರೆ ೫೦% ವಾಲಿಯ ವಶವಾಗಿಬಿಡುತ್ತಿತ್ತು. ೫೦% ಶಕ್ತಿಯನ್ನು ಕಳೆದುಕೊಂಡ ಮೇಲೆ ಯಾರಾದರೂ ವಾಲಿಯನ್ನು ಸೋಲಿಸಬಲ್ಲರೇ? ಅಸಾಧ್ಯ. ಮೊದಲೇ ಅಷ್ಟು ಬಲಶಾಲಿಯಾದ ವಾನರರ ರಾಜ ಅವನು. ರಾವಣನನ್ನೇ ಸೋಲಿಸಿದ್ದನಂತೆ.

ಹೀಗಾಗಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ಕೊಂದುಬಿಟ್ಟ ಎಂದು ಒಂದು ಐತಿಹ್ಯವಿದೆ. ರೆಫರೆನ್ಸ್ ಸಿಕ್ಕಿಲ್ಲ. ಸಿಕ್ಕವರು ತಿಳಿಸಿ.

ಪತ್ನಿಗೆ ಘರವಾಲಿ ಅಂತ ಕರೆಯುವ ವಾಡಿಕೆ ಉತ್ತರ ಭಾರತದಲ್ಲಿದೆ.

ಎದುರಿಗೆ ಬಂದ ಪತಿಯ ೫೦% ಶಕ್ತಿಯನ್ನು ಹೀರಿ ಹಿಂಡಿ ಹಿಪ್ಪೆ ಮಾಡಿಬಿಡುತ್ತಾಳೆ. ಅದಕ್ಕೇ ಪತ್ನಿಗೆ ಘರ'ವಾಲಿ' ಅನ್ನುತ್ತಾರೇನೋ! ಯಾಕೆಂದರೆ ಅಲ್ಲೂ ವಾಲಿ ಇದೆ ನೋಡಿ! ಹೀಗೆ ಜೋಕು ಹೊಡೆದವರು ಶ್ರೀ ಅನುಭವಾನಂದ ಸರಸ್ವತಿಗಳು. ನಾನಂತೂ ಅವರ ಆ ಜೋಕಿಗೆ, ಅವರ ಡೈಲಾಗ್ ಡೆಲಿವರಿಯ ಅದ್ಭುತ ಟೈಮಿಂಗಿಗೆ ಸಿಕ್ಕಾಪಟ್ಟೆ ನಕ್ಕೆ. ಇನ್ನೂ ನಕ್ಕು ಮುಗಿದಿಲ್ಲ.

ವಾಲಿ, ಘರವಾಲಿ!

ಹಾ!! ಹಾ!!

4 comments:

sunaath said...

ನನ್ನ ‘ಘರವಾಲಿ’ಯು ನಾನು ಎದುರಿಗೆ ಬಂದಾಗ ೧೦೦% ಶಕ್ತಿಯನ್ನು ಸೆಳೆದುಕೊಳ್ಳುತ್ತಾಳೆ. ಆದುದರಿಂದ ಅವಳು ‘ಡಬಲ್ ವಾಲಿ’!

Mahesh Hegade said...

‘ಡಬಲ್ ವಾಲಿ’! too good Sunaath sir.

ವಿ.ರಾ.ಹೆ. said...

LOL.... :D

Mahesh Hegade said...

Thanks Vikas! :)