Sunday, April 29, 2018

'ನಿಮ್ಮ ಡಿಗ್ರಿ ನೀವೇ ಇಟ್ಟುಕೊಳ್ಳಿ!' ಎಂದಿತ್ತು ಹಾರ್ವರ್ಡ್ ವಿಶ್ವವಿದ್ಯಾಲಯ

೧೯೬೦ ನೇ ಇಸವಿಯ ಕಾಲ. ಅವನೊಬ್ಬ ಆಗಷ್ಟೇ ಹೈಸ್ಕೂಲ್ (12th class) ಮುಗಿಸಿದ್ದ ಹುಡುಗ. ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ. ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರು.

ಹೈಸ್ಕೂಲ್ ಮುಗಿಯಿತು. ಕಾಲೇಜು ಸೇರಲು ದೆಹಲಿಯ ಪ್ರಖ್ಯಾತ ಸೇಂಟ್ ಸ್ಟೆಫೆನ್ಸ್ ಕಾಲೇಜಿಗೆ ಅರ್ಜಿ ಹಾಕೋಣ ಎಂದು ಫಾರ್ಮ್ ತರಲು ಕಾಲೇಜಿಗೆ ಹೋಗಿದ್ದ. ಬೇಸಿಗೆ ಸಮಯ. ಸರಳವಾಗಿ ಹಾಫ್ ಶರ್ಟ್ ಮತ್ತು ಹಾಫ್ ಪ್ಯಾಂಟ್ ಹಾಕಿಕೊಂಡೇ ಹೋಗಿದ್ದ. ಅದು ಆಗಿನ ಕಾಲದ ಮಧ್ಯಮವರ್ಗದ ಹುಡುಗರ ಸ್ಟ್ಯಾಂಡರ್ಡ್ ಡ್ರೆಸ್. ಮೊದಲು ತಲೆ ಮೇಲೆ ಗಾಂಧಿ ಟೋಪಿ ಕೂಡ ಇರುತ್ತಿತ್ತು. ಸ್ವಾತಂತ್ರ್ಯದ ನಂತರ ಗಾಂಧಿ ಟೋಪಿ ರಾಜಕಾರಣಿಗಳ ಪಾಲಾಗಿ, ಅದಕ್ಕೊಂದು ಕೆಟ್ಟ ಹೆಸರು ಬಂದು, ಹುಡುಗರು ಟೋಪಿ ಹಾಕುವದನ್ನು ಬಿಟ್ಟಿದ್ದರು.

ಸೇಂಟ್ ಸ್ಟೆಫೆನ್ಸ್ ದೇಶದಲ್ಲೇ ಹೆಸರಾಂತ ಕಾಲೇಜು. ಬ್ರಿಟಿಷರು ಎಂದೋ ದೇಶ ಬಿಟ್ಟು ಹೋಗಿದ್ದರು. ಅವರೂ ಸಹಿತ ಎಂದೋ ಬಿಟ್ಟಿರಬಹುದಾದ ಸಂಪ್ರದಾಯಗಳನ್ನೂ ಸಹ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದ ಸಂಸ್ಥೆಗಳಲ್ಲಿ ಸೇಂಟ್ ಸ್ಟೆಫೆನ್ಸ್ ಕೂಡ ಒಂದು. ಅಲ್ಲಿ ಒಂದು ರೀತಿಯ superiority complex. ಥಳಕುಬಳುಕಿಲ್ಲದ ಸಾಮಾನ್ಯ ದೇಶಿ ಜನರ ಬಗ್ಗೆ ಮತ್ತು ಅವರ ಸರಳ ಮತ್ತು ಸಹಜ ಜೀವನಶೈಲಿಯ ಬಗ್ಗೆ ಕಾರಣವಿಲ್ಲದ ಅಸಡ್ಡೆ ಮತ್ತು ಹೇವರಿಕೆ. ಎಲ್ಲ ಮೆಕಾಲೆಯ ಶನಿ ಸಂತಾನಗಳು.

ಈ ಹುಡುಗ ಹೋಗಿ 'ಪ್ರವೇಶ ಪಡೆಯಬೇಕಾಗಿದೆ. ಒಂದು ಅರ್ಜಿ ಫಾರ್ಮ್ ಕೊಡಿ,' ಅಂದ.

ಅರ್ಜಿ ಕೊಡುವ ಕ್ಲಾರ್ಕ್ ಕೂಡ ಮೆಕಾಲೆ ಸಂತಾನಿಯೇ. ಹತ್ತಿಯ ಶುದ್ಧ ಶುಭ್ರ ದೇಶಿ ದಿರುಸಿನಲ್ಲಿ ಕಂಗೊಳಿಸುತ್ತಿದ್ದ ಈ ಹುಡುಗನಿಗೆ ಅರ್ಜಿ ಫಾರ್ಮ್  ಏನೋ ಕೊಟ್ಟ. ಅಸಡ್ಡೆಯಿಂದ ನೋಡುತ್ತಾ ಹೇಳಿದ, 'ಹಳ್ಳಿ ಹುಂಬನಂತವರಿಗೆ ಈ ಕಾಲೇಜಿನಲ್ಲಿ ಪ್ರವೇಶ ದೊರೆಯುವದಿಲ್ಲ!' ಯಾರ ಬಗ್ಗೆ ಹೇಳಿದ ಎಂದು ತಿಳಿಯದಷ್ಟು ದಡ್ಡನಾಗಿರಲಿಲ್ಲ ಆ ಹುಡುಗ. ಸಾಕಷ್ಟು ಪ್ರತಿಭಾವಂತನಾಗಿದ್ದ ಅವನಿಗೆ ಆ ಕಾಲೇಜೊಂದರಲ್ಲೇ ಅಲ್ಲ ದೆಹಲಿಯ ಬೇಕಾದ ಕಾಲೇಜಿನಲ್ಲಿ ಪ್ರವೇಶ ಸಿಗುತ್ತಿತ್ತು.

'ಎಲಲಾ, ನಿನ್ನ ಸೊಕ್ಕೇ! ನೀನೂ ಬೇಡ, ನಿನ್ನ ಅರ್ಜಿಯೂ ಬೇಡ, ನಿನ್ನ ಕಾಲೇಜೂ ಬೇಡ,' ಎಂದು ಆ ಕಾರಕೂನನ ಮುಖದ ಮೇಲೆ ಅರ್ಜಿ ಎಸೆದು ಬಂದ ಆ ಹುಡುಗ ಅದೇ ಕಾಲೇಜಿನ ಎದುರಿಗೇ ಇದ್ದ ಹಿಂದೂ ಕಾಲೇಜ್ ಸೇರಿದ. ಅಂದು ಸೇಂಟ್ ಸ್ಟೆಫೆನ್ಸ್ ಕಾಲೇಜಿಗೆ ಗೊತ್ತಿರಲಿಕ್ಕಿಲ್ಲ ತಾವು ಎಂತಹ ಮೇಧಾವಿ ವಿದ್ಯಾರ್ಥಿಯೊಬ್ಬನನ್ನು ಕಳೆದುಕೊಂಡೆವು ಎಂದು. ಅದು ಅವರ ಅರಿವಿಗೆ ಬರಲು ಐದಾರು ವರ್ಷ ಕಾಯಬೇಕಾಯಿತು. ನಂತರ ವರ್ಷಾನುಗಟ್ಟಲೆ, ಈಗಲೂ ಸಹ, ಆ ಕಹಿಯನ್ನು ಅನುಭವಿಸುತ್ತಿರಬೇಕು.

ಹಿಂದೂ ಕಾಲೇಜಿನಲ್ಲಿ ಪದವಿಗೆ ಪ್ರವೇಶ ಪಡೆದ ಹುಡುಗ ಅತ್ಯಂತ ಉತ್ತಮ ಅಂಕಗಳೊಂದಿಗೆ ಗಣಿತ, ಸಂಖ್ಯಾಶಾಸ್ತ್ರಗಳಲ್ಲಿ ಪದವಿ ಗಳಿಸಿದ. ಉನ್ನತ ಶಿಕ್ಷಣಕ್ಕಾಗಿ ಎಲ್ಲೂ ಹೋಗಬಹುದಾಗಿತ್ತು. ಅಷ್ಟು ಉತ್ಕೃಷ್ಟವಾಗಿತ್ತು ಆತನ ಸಾಧನೆ. ಆತ ಪೋಸ್ಟ್ ಗ್ರ್ಯಾಜುಯೆಟ್ ಡಿಗ್ರಿ ಮಾಡಲು ಹೋಗಿದ್ದು ಕಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಗೆ (Indian Statistical Institute).  ಅನೇಕ ಮೇಧಾವಿ ಶಿಕ್ಷಕರನ್ನು ಹೊಂದಿದ್ದ ಆ ಸಂಸ್ಥೆಗೆ ದೊಡ್ಡ ಪ್ರಮಾಣದ ಪ್ರತಿಷ್ಠೆ, ಮನ್ನಣೆ ಎಲ್ಲ ಇತ್ತು.

ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಅಂದಿನ ಮುಖ್ಯಸ್ಥರು ದೊಡ್ಡ ಸಂಖ್ಯಾಶಾಸ್ತ್ರಜ್ಞರು. ಅಥವಾ ಹಾಗಂತ ಬಿಲ್ಡಪ್ ಕೊಟ್ಟುಕೊಂಡು, ರಾಜಕಾರಣಿಗಳ ಸಖ್ಯ ಮಾಡಿಕೊಂಡು, ತಮ್ಮ ಸುತ್ತ ಒಂದು ಪ್ರಭಾವಳಿ ಸೃಷ್ಟಿಸಿಕೊಂಡು ಕೂತಿದ್ದರು. ಮೇಲಿಂದ ದೊಡ್ಡ ಮಟ್ಟದ ಅಹಂ ಬೇರೆ.

ಈ ಹುಡುಗನ ತಂದೆ ಕೂಡ ದೊಡ್ಡ ಸಂಖ್ಯಾಶಾಸ್ತ್ರಜ್ಞರೇ. ಅವರು ಸರ್ಕಾರಿ ನೌಕರಿ ಮಾಡಿಕೊಂಡಿದ್ದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಮುಖ್ಯಸ್ಥರಿಗೂ ಮತ್ತು ಈ ಹುಡುಗನ ತಂದೆಗೂ ಏನೋ ಒಂದು ತರಹದ ego clash. ಒಮ್ಮೊಮ್ಮೆ ಮೇಧಾವಿಗಳಲ್ಲಿ, ಅದರಲ್ಲೂ ತಾವೇ ದೊಡ್ಡ ಜ್ಞಾನಿಗಳು, ತಮ್ಮನ್ನು ಬಿಟ್ಟರೆ ಬೇರೆ ಯಾರಿಲ್ಲ ಅಂತೆಲ್ಲ ಅಂದುಕೊಂಡವರ ಮಧ್ಯೆ ಅಹಂ ಯುದ್ಧಗಳು ಆಗುತ್ತಿರುತ್ತವೆ. ಅದೇ ರೀತಿಯ ಅಹಂ ಯುದ್ಧ ಆ ಇಬ್ಬರು ಹಿರಿಯರಲ್ಲಿ.

ತನ್ನ ವೈರಿಯ ಪುತ್ರ ತನ್ನ ಸಂಸ್ಥೆಗೆ ಪೋಸ್ಟ್ ಗ್ರ್ಯಾಜುಯೆಟ್ ಡಿಗ್ರಿ ಓದಲು ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದ ಆ ಸಂಸ್ಥೆಯ ಮುಖ್ಯಸ್ಥರಿಗೆ ಸಮ್ಮಿಶ್ರ ಭಾವನೆ. ಒಮ್ಮೆ ಆ ಹುಡುಗನ ತಂದೆ ಭೇಟಿಯಾದಾಗ, 'ನಿಮ್ಮ ಹುಡುಗನ ಚಿಂತೆ ಬಿಡಿ. ಈಗ ನಮ್ಮ ಉಸ್ತುವಾರಿಯಲ್ಲಿದ್ದಾನೆ. ಸರಿಯಾಗಿ ನೋಡಿಕೊಳ್ಳುತ್ತೇವೆ,' ಎಂದು ತುಂಬಾ patronizing ಮಾಡಿದ ರೀತಿಯಲ್ಲಿ ಹೇಳಿದ್ದರು. ಹಾಗೆ ಹೇಳಿದ್ದರ ಹಿಂದಿನದರ ಮರ್ಮ, 'ಈಗ ನಿಮ್ಮ ಹುಡುಗನ ಜುಟ್ಟು ನಮ್ಮ ಕೈಯಲ್ಲಿದೆ. ದುವಾ ಸಲಾಮಿ ಮಾಡಿಕೊಂಡು, ನಮಗೆ ತಗ್ಗಿ ಬಗ್ಗಿ ನಡೆದುಕೊಂಡು ಹೋದರೆ ಬಚಾವ್. ಇಲ್ಲವಾದರೆ ಅಷ್ಟೇ ಮತ್ತೆ!' ಅನ್ನುವ ಸಂದೇಶವಿತ್ತು. ಹುಡುಗನ ತಂದೆಗೆ ಆ ಸಂದೇಶದ ಮರ್ಮ ತಿಳಿಯಿತು. ಅವರಿಗೇನು ಆತ್ಮಾಭಿಮಾನ, ಮಗನ ಮೇಲೆ ಅಭಿಮಾನ ಇರುವದಿಲ್ಲವೇ? ಉರಿದುಕೊಂಡ ಅವರು, 'ನಿಮ್ಮ ಕೆಲಸ ನೀವು ಮಾಡಿಕೊಳ್ಳಿ. ನನ್ನ ಮಗ ಖುದ್ದಾಗಿ ಎಲ್ಲ ಸಂಬಾಳಿಸಿಕೊಂಡು ಹೋಗುತ್ತಾನೆ. ನಿಮ್ಮ ಸಹಾಯವೇನೂ ಬೇಕಾಗಿಲ್ಲ,' ಎಂದು ಮುಖದ ಮೇಲೆ ತಪರಾಕಿ ಬಾರಿಸಿದಂತೆ ಹೇಳಿದ್ದರು. 'ನೀವೇ ದೇವರು. ನನ್ನ ಮಗನನ್ನು ನಿಮ್ಮ ಸುಪರ್ದಿಯಲ್ಲಿ ತೆಗೆದುಕೊಂಡು ಚೆನ್ನಾಗಿ ತಯಾರು ಮಾಡಿ ಮಹಾಪ್ರಭುಗಳೇ,' ಎಂದು ಹೇಳುತ್ತಾರೇನೋ, ಹಾಗೆ ಹೇಳಲಿ ಎಂದು ಬಯಸಿದ್ದ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಪ್ರಮಾಣದ ಅವಮಾನವಾಗಿತ್ತು. ಅದನ್ನು ಅವರು ಮರೆಯಲು ಸಾಧ್ಯವೇ ಇರಲಿಲ್ಲ. ಕಲ್ಕತ್ತಾಗೆ ಬಂದವರೇ ಕತ್ತಿ ಮಸೆಯತೊಡಗಿದರು. 'ನೀನು ಹೇಗೆ ಇಲ್ಲಿಂದ ಪಾಸಾಗಿ, ಡಿಗ್ರಿ ತೆಗೆದುಕೂಂಡು ಹೋಗುತ್ತೀಯೋ ಎಂದು ನೋಡೇಬಿಡುತ್ತೇನೆ!' ಎಂದು ಅವಡುಗಚ್ಚಿ ಕೊಕ್ಕೆ ಹಾಕಲು ಕುಳಿತರು.

ಕಲ್ಕತ್ತಾದ ಆ ಸಂಸ್ಥೆಗೆ ಅನಭಿಷಿಕ್ತ ಮಹಾರಾಜ ಅವರು. ಮೇಲಿಂದ ಅಂದಿನ ಪ್ರಧಾನಿ ನೆಹರೂವಿಗೆ ಏಕ್ದಂ ಖಾಸಮ್ ಖಾಸ್. ಅಂತಹ ಪ್ರಭಾವಿಗಳು ಕೈತೊಳೆದುಕೊಂಡು ಹಿಂದೆ ಬಿದ್ದರೆ ಒಬ್ಬ ವಿದ್ಯಾರ್ಥಿಗೆ ತೊಂದರೆ ಕೊಟ್ಟು, ಹಣ್ಣು ಮಾಡಿ, ಹೈರಾಣ ಮಾಡಿ ಒಗೆಯುವದು ಒಂದು ದೊಡ್ಡ ಮಾತೇ? ತುಂಬಾ ಸುಲಭ ಅದು. ಮತ್ತೆ ಭಾರತೀಯ ವಿದ್ಯಾಸಂಸ್ಥೆಗಳಲ್ಲಿ ಪಾರದರ್ಶಕತೆ ಬಹಳ ಕಮ್ಮಿ. ದೊಡ್ಡ ಮಂದಿಯ ಅಂದಾದುಂಧಿ ಮನ್ಮಾನಿಯನ್ನು ಯಾರೂ ಕೇಳುವದಿಲ್ಲ. ಕೇಳಿದರೆ ಅವರ ಜೀವನವನ್ನು ನರಕ ಮಾಡಿ ಒಗೆಯುತ್ತಾರೆ.

ಮುಖ್ಯಸ್ಥರು ಒಂದು ಅಲಿಖಿತ ಆಜ್ಞೆ ಹೊರಡಿಸಿದರು. 'ಆ ಹುಡುಗ ಉತ್ತೀರ್ಣನಾಗಕೂಡದು. ಅವನಿಗೆ ಎಲ್ಲಾ ವಿಧದ ತೊಂದರೆ ಕೊಡಿ. ಫೇಲ್ ಮಾಡಿ ಒಗೆಯಿರಿ. ತಾನಾಗಿಯೇ ಬಿಟ್ಟು ಹೋಗಬೇಕು ಅನ್ನುವಷ್ಟು ತೊಂದರೆ, ತಾಪತ್ರಯ ಕೊಡಿ. ಉಳಿದ ಚಿಂತೆ ನನಗಿರಲಿ!' ಎಂಬ ಠರಾವು ಪಾಸ್ ಮಾಡಿದರು.

ಮೊದಲಿನ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ಹುಡುಗ ಒಮ್ಮೆಲೇ ಫೇಲಾಗತೊಡಗಿದ. ಫೇಲ್ ಆದ ಅನ್ನುವದಕಿಂತ ಫೇಲ್ ಮಾಡಲ್ಪಟ್ಟ. ಯಾಕೆ ಎಂದು ಕೇಳಿದರೆ ಕೆಲವು ಶಿಕ್ಷಕರು ಉಡಾಫೆಯ ಉತ್ತರ ಕೊಟ್ಟರು. ಉಳಿದ ಕೆಲವರು ಏನೇನೋ ಹೇಳಿ ಜಾರಿಕೊಂಡರು. ಆತ್ಮಸಾಕ್ಷಿ ಇದ್ದ ಕೆಲವರು ಮತ್ತು ಈ ಹುಡುಗನನ್ನು ಇಷ್ಟಪಡುತ್ತಿದ್ದ ಕೆಲವರು ಮಾತ್ರ ಹುಡುಗ ಸಡನ್ನಾಗಿ ಫೇಲ್ ಆಗುತ್ತಿರುವ ಹಕೀಕತ್ತಿನ ಹಿಂದಿನ ನಿಜವಾದ ಕಾರಣ ಹೇಳಿದರು. ಆ ಸಂಸ್ಥೆಯನ್ನು ಬಿಟ್ಟು ಹೋಗಿ ಬೇರೆ ಎಲ್ಲಿಯಾದರೂ ಓದುವಂತೆ ಹೇಳಿದರು.

ಹುಡುಗನಿಗೆ ಬೇಜಾರಾಗಿದ್ದು ನಿಜ. ಈ ದೊಡ್ಡವರ ಸಣ್ಣತನ ನೋಡಿ ಹೇವರಿಕೆ, ಹೇಸಿಗೆ ಕೂಡ ಮನದಲ್ಲಿ ಮೂಡಿತು. ಈ ಸಂಸ್ಥೆಯಲ್ಲಿ ಪ್ರವೇಶ ಪಡೆದದ್ದಾಗಿದೆ. ಶಿಷ್ಯವೇತನ ಬರುತ್ತಿದೆ. ಈ ಶಿಕ್ಷಕರು ಪರೀಕ್ಷೆಯಲ್ಲಿ ಫೇಲ್ ಮಾಡಿದರೆ ಏನಂತೆ? ಸ್ವಂತ ಓದಿ ಜ್ಞಾನ ಸಂಪಾದಿಸುತ್ತೇನೆ ಎಂದು ಖುದ್ದಾಗಿ ಓದಲು ಕೂತ. ಸಂಸ್ಥೆಯ ಗ್ರಂಥಾಲಯವೇ ಅವನ ಮನೆಯಾಗಿ ಹೋಯಿತು. ಸದಾ ಅಲ್ಲೇ ಇದ್ದು ಸಾಧಾರಣ ವಿದ್ಯಾರ್ಥಿಗಳು ಓದದ ಪುಸ್ತಕಗಳನ್ನು ಮತ್ತು ದೇಶವಿದೇಶಗಳ ಮೇಧಾವಿ ಪತ್ರಿಕೆಗಳನ್ನು ವಿವರವಾಗಿ ಓದತೊಡಗಿದ.

ಆ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಮಟ್ಟದ ಮನ್ನಣೆ ಇತ್ತು. ಸಂಖ್ಯಾಶಾಸ್ತ್ರದ ಅತಿ ಕ್ಲಿಷ್ಟ ಸಮಸ್ಯೆಯೊಂದನ್ನುಜಗತ್ತಿನಲ್ಲೇ 'ಪಪ್ರಥಮವಾಗಿ'  ಬಗೆಹರಿಸಿದ್ದಕ್ಕಾಗಿ ಅವರಿಗೆ ದೊಡ್ಡ ಹೆಸರು ಬಂದಿತ್ತು.  ಅವರು ಬಗೆಹರಿಸಿದ್ದ ಆ ಕ್ಲಿಷ್ಟ ಪ್ರಮೇಯ ದೇಶವಿದೇಶಗಳ ಸಂಖ್ಯಾಶಾಸ್ತ್ರದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.  ಅದಾದ ನಂತರ ಅವರನ್ನು ಹಿಡಿಯುವರೇ ಇರಲಿಲ್ಲ. ತಮ್ಮ ಸುತ್ತ ಪ್ರಭಾವಳಿ ಸೃಷ್ಟಿಸಿಕೊಂಡು, ಬಿಲ್ಡಪ್ ಕೊಟ್ಟುಕೊಂಡು, ಭೋ ಪರಾಕ್ ಹೇಳುವ ಭಟ್ಟಂಗಿಗಳ ಸಮೂಹ ಸೃಷ್ಟಿಸಿಕೊಂಡು, ತಮ್ಮದೇ ಅಹಂನ ಅಮಲಿನ ಮಹಲಿನಲ್ಲಿ ಇರುತ್ತಿದ್ದರು ಅವರು.

ವಿಧಿಯ ಲೀಲೆಗಳು ವಿಚಿತ್ರವಾಗಿರುತ್ತವೆ. ಈ ಹುಡುಗ ಕೂಡ ಸಂಖ್ಯಾಶಾಸ್ತ್ರದ ಅದೇ ಸಮಸ್ಯೆಯನ್ನು ಅಧ್ಯಯನ ಮಾಡತೊಡಗಿದ. ಆಳವಾಗಿ ಅಧ್ಯಯನ ಮಾಡಿದ. ಏನೋ ಹೊಳೆಯಿತು. 'ಅರೇ! ಈ ಸಮಸ್ಯೆಯನ್ನು ಈಗ ನಾಲ್ಕು ಶತಮಾನಗಳ ಹಿಂದೆಯೇ ಬೇರೊಬ್ಬ ಗಣಿತಜ್ಞ ಬೇರೆ ರೀತಿಯಲ್ಲಿ ಬಿಡಿಸಿದ್ದಾನೆ. ನಮ್ಮ ಸಂಸ್ಥೆಯ ಮುಖ್ಯಸ್ಥರು ಬೇರೆ ರೀತಿಯಲ್ಲಿ ಬಿಡಿಸಿದ್ದಾರೆಯೇ ವಿನಃ ಈ ಸಮಸ್ಯೆಯನ್ನು ಬಿಡಿಸಿದವರಲ್ಲಿ ಇವರು ಮೊದಲನೆಯವರು ಖಂಡಿತ ಅಲ್ಲ. ಮೊದಲು ಬಿಡಿಸಿದ ಗಣಿತಜ್ಞ ಅಷ್ಟು ವಿವರವಾಗಿ ಬಿಡಿಸಿರಲಿಕ್ಕಿಲ್ಲ. ನಾನು ಅದನ್ನು ವಿವರವಾಗಿ ಬಿಡಿಸಿದರೆ ನಿಖರ ಉತ್ತರ ದೊರೆಯುತ್ತದೆ,' ಎಂದು ಫ್ಲಾಶ್ ಆಯಿತು.

ನಾಲ್ಕು ಶತಮಾನಗಳ ಹಿಂದೆ ಗಣಿತಜ್ಞ ಹೇಗೆ ಬಿಡಿಸಿದ್ದನೋ ಅದನ್ನು ಮತ್ತೂ ಉತ್ತಮಗೊಳಿಸಿ, ಪರಿಹಾರವನ್ನು ಸರಳೀಕರಿಸುವ ಕೆಲಸಕ್ಕೆ ಪದ್ಮಾಸನ ಹಾಕಿ ಕುಳಿತುಬಿಟ್ಟ ಈ ಹುಡುಗ. ಎಷ್ಟೇ ಓದಿದರೂ ಶಿಕ್ಷರು ಫೇಲ್ ಮಾಡಿ ಒಗೆಯತೊಡಗಿದ್ದರು ಅಥವಾ ಜಸ್ಟ್ ಪಾಸ್ ಮಾಡುತ್ತಿದ್ದರು. ಹಾಗಾಗಿ ಡಿಗ್ರಿಗಾಗಿ ಓದುವದರಲ್ಲಿ ಮಜವೇ ಇರಲಿಲ್ಲ. ಈಗ ಈ ಕ್ಲಿಷ್ಟ ಸಮಸ್ಯೆಯನ್ನು ಬಿಡಿಸಿ, ಅದೇನಾದರೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿಬಿಟ್ಟರೆ.... ಎನ್ನುವುದನ್ನು ಊಹಿಸಿಕೊಂಡರೆ ಸಿಕ್ಕಾಪಟ್ಟೆ ಹುರುಪು, ಉಮೇದಿ ಬರತೊಡಗಿತು.

ಬಹಳ ಶ್ರಮಪಟ್ಟು ಒಂದು ಪ್ರೌಢ ಪ್ರಬಂಧವನ್ನು ಸಿದ್ಧಪಡಿಸಿದ. ಅಡಿಯಲ್ಲಿ ಒಂದು ಖಡಕ್ ಟಿಪ್ಪಣಿ ಬರೆಯುವದನ್ನು ಮರೆಯಲಿಲ್ಲ, 'ಭಾರತದ ಸಂಖ್ಯಾಶಾಸ್ತ್ರಜ್ಞರೊಬ್ಬರು graph theory ಉಪಯೋಗಿಸಿ ಈ ಸಮಸ್ಯೆಯನ್ನು ಬಿಡಿಸಿದ್ದಾರೆ. ಈ ಸಮಸ್ಯೆಯನ್ನು ಮೊತ್ತ ಮೊದಲನೆಯದಾಗಿ ತಾವೇ ಬಿಡಿಸಿದ್ದು ಎಂದು ಬಿಂಬಿಸಿಕೊಂಡಿದ್ದಾರೆ. ನಿಮ್ಮ ಪತ್ರಿಕೆ ಕೂಡ ಅದನ್ನು ಒಪ್ಪಿಕೊಂಡಿದೆ. ನನ್ನ ಈ ಪ್ರಬಂಧದ ತಿರುಳೇನೆಂದರೆ - ಈ ಸಮಸ್ಯೆಯನ್ನು integral calculus ಉಪಯೋಗಿಸಿ ನಾಲ್ಕು ಶತಮಾನಗಳ ಹಿಂದೆಯೇ ಬೇರೊಬ್ಬ ಗಣಿತಜ್ಞ ಬಿಡಿಸಿದ್ದಾನೆ. ಆತನ ಸಿದ್ಧಾಂತವನ್ನು ಮತ್ತೂ ಸರಳೀಕರಿಸಿದ್ದೇನೆ ಮತ್ತು ಸಮಸ್ಯೆಗೆ ಉತ್ತರವನ್ನು ನೇರವಾಗಿ ಕಂಡುಕೊಂಡಿದ್ದೇನೆ. ಈ ಪ್ರಬಂಧವನ್ನು ನಿಮ್ಮ ಪತ್ರಿಕೆಯಯಲ್ಲಿ ಪ್ರಕಟಿಸಿ. ಈ ಸಮಸ್ಯೆಯನ್ನು ಬಿಡಿಸಿದ ಮೊದಲಿಗರು ಭಾರತದ ಈ ಸಂಖ್ಯಾಶಾಸ್ತ್ರಜ್ಞರು ಅಲ್ಲ ಎಂಬ ತಿದ್ದುಪಡಿಯನ್ನು ಕೂಡ ಪ್ರಕಟಿಸಿ.'

ಹೀಗೆ ಸಿದ್ಧಪಡಿಸಿದ ಪ್ರಬಂಧವನ್ನು ಅಮೇರಿಕಾದ ಖ್ಯಾತ ಸಂಖ್ಯಾಶಾಸ್ತ್ರದ ಪತ್ರಿಕೆಗೆ ಕಳುಹಿಸಿಬಿಟ್ಟ. ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಬಂಧಗಳು ಹಾಗೇ ಸುಮ್ಮನೆ ಪ್ರಕಟವಾಗುವದಿಲ್ಲ. ಹಲವಾರು ಖ್ಯಾತ ಪಂಡಿತರಿಂದ peer review ಮಾಡಲ್ಪಡುತ್ತವೆ. ತಪ್ಪುಗಳೇನಾದರೂ ಇವೆಯೋ ಎಂದು ಭೂತಗನ್ನಡಿ ಹಿಡಿದು ನೋಡುತ್ತಾರೆ. ಆಕ್ಷೇಪಣೆಗಳನ್ನು ಎತ್ತುತ್ತಾರೆ. ಒಮ್ಮೊಮ್ಮೆ ಒಂದು ಪ್ರಬಂಧ peer review ಆಗಿ, ಎತ್ತಿದ ಎಲ್ಲ ಆಕ್ಷೇಪಣೆಗಳಿಗೆ ತಕ್ಕ ಉತ್ತರ ಕೊಟ್ಟು, ಬೇಕಾದ ತಿದ್ದುಪಡಿಗಳನ್ನು ಮಾಡಿದ ನಂತರ ಪ್ರಕಟವಾಗಲು ಒಂದೆರೆಡು ವರ್ಷ ಹಿಡಿದರೂ ಆಶ್ಚರ್ಯವಿಲ್ಲ.

ಈ ಹುಡುಗನ ಪ್ರಬಂಧವನ್ನು ತಪಾಸಣೆ ಮಾಡಲು ಕುಳಿತವರು ಅಮೇರಿಕಾದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದ ಒಬ್ಬ ಖ್ಯಾತ ಪ್ರೊಫೆಸರ್. ಇನ್ನೂ ಸ್ನಾತ್ತಕೋತ್ತರ ಪದವಿ ಮಾಡುತ್ತಿರುವ ಹುಡುಗನ ಪ್ರಬಂಧ ಅವರನ್ನು ತುಂಬಾ ಇಂಪ್ರೆಸ್ ಮಾಡಿತ್ತು. ಇಂತಹ ಮೇಧಾವಿ ಹುಡುಗ ತಮ್ಮ ವಿಶ್ವವಿದ್ಯಾಲಯವಾದ ಹಾರ್ವರ್ಡಿಗೆ ಮುದ್ದಾಂ ಬರಬೇಕು ಎಂದೆನ್ನಿಸಿತು ಅವರಿಗೆ. ಅಮೇರಿಕಾದ ಖ್ಯಾತ ವಿಶ್ವವಿದ್ಯಾಲಯಗಳಿಗೆ ಒಂದು ವಿಷಯ ಬರೋಬ್ಬರಿ ಗೊತ್ತಿರುತ್ತದೆ. ತಮ್ಮ ವಿಶ್ವವಿದ್ಯಾಲಯದ ಪ್ರತಿಷ್ಠೆ ನಿಂತಿರುವದೇ ಮೇಧಾವಿ ಶಿಕ್ಷಕರ ಮತ್ತು ಜಾಣ ವಿದ್ಯಾರ್ಥಿಗಳಿಂದ ಮೇಲೆ ಎಂದು. ಬಾಕಿ ಎಲ್ಲ ನಗಣ್ಯ. ಹಾಗಾಗಿ ಅತ್ಯುತ್ತಮ ವಿಶ್ವವಿದ್ಯಾಲಯಗಳು ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ ಸದಾ ಬಲೆ ಹಾಕಿಕೊಂಡು ಕುಳಿತಿರುತ್ತವೆ.

ಈ ಹುಡುಗ ಕಲ್ಕತ್ತಾದಿಂದ ಬರೆದು ಕಳಿಸಿದ್ದ ಅತ್ಯುತ್ತಮ ಮತ್ತು landmark ಅನ್ನಿಸುವಂತಹ ಪ್ರಬಂಧವನ್ನು ಮುದ್ದಾಂ ಪ್ರಕಟಿಸುವಂತೆ ಟಿಪ್ಪಣಿ ಬರೆದು ಸಂಪಾದಕ ಮಂಡಳಿಗೆ ಕಳಿಸಿದ ಆ ಹಾರ್ವರ್ಡ್ ಯೂನಿವರ್ಸಿಟಿ ಅಧ್ಯಾಪಕರು ಮತ್ತೊಂದು ಖತರ್ನಾಕ್ ಕೆಲಸ ಮಾಡಿಬಿಟ್ಟರು.

ಅದೇನೆಂದರೆ.....

ಹಾರ್ವರ್ಡ್ ಯೂನಿವರ್ಸಿಟಿಯ ಪ್ರವೇಶ ಮಂಡಳಿಯ ಮುಖ್ಯಸ್ಥರಿಗೆ ಒಂದು ಪತ್ರ ಬರೆದರು. 'ಕಲ್ಕತ್ತಾದ ಸಂಸ್ಥೆಯೊಂದರಲ್ಲಿ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬನಿದ್ದಾನೆ. ಅಂತಹ ಪ್ರತಿಭಾನ್ವಿತ ಹಾರ್ವರ್ಡಿನಲ್ಲಿ ಓದಲಿಲ್ಲ ಅಂದರೆ ಅದು ನಮಗೇ ನಷ್ಟ. ತ್ವರಿತವಾಗಿ ಅವನಿಗೆ ಪ್ರವೇಶ ಮಂಜೂರು ಮಾಡಿ. ದೊಡ್ಡ ಪ್ರಮಾಣದ ಪೂರ್ತಿ ಶಿಷ್ಯವೇತನ, ಇತರೆ ಆರ್ಥಿಕ ಸಹಾಯದ ಬಗ್ಗೆ ಖಾತ್ರಿ ಕೊಟ್ಟು ಆದಷ್ಟು ಬೇಗ ಸಂದೇಶ ಕಳುಹಿಸಿ. ಮುಂದಿನ ಟರ್ಮಿನಲ್ಲಿ ಆತ ನನ್ನ ಜೊತೆ ಮತ್ತು ಇತರೆ ಹಾರ್ವರ್ಡ್ ಪ್ರೊಫೆಸರ್ ಜನರ ಜೊತೆ ಕೆಲಸ ಮಾಡಲು ಇಲ್ಲಿ ಬಂದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತು ಗೆಲುವು ಇನ್ನೊಂದಿಲ್ಲ. ಆ ವಿದ್ಯಾರ್ಥಿ ನಮ್ಮ ಹಾರ್ವರ್ಡ್ ಆಹ್ವಾನವನ್ನು ಸ್ವೀಕರಿಸಿದ ಬಗ್ಗೆ ಮಾಹಿತಿ ನೀಡುತ್ತಿರಿ.'

ಹೀಗೆ ಕಲ್ಕತ್ತಾದಲ್ಲಿ ಅಲ್ಲಿನ ಪ್ರೊಫೆಸರ್ ಮಂದಿ ಕೊಡಬಾರದ ಕಾಟ ಕೊಟ್ಟು, ಫೇಲ್ ಮಾಡುತ್ತಾ, ಕೊಕ್ಕೆ ಹಾಕುತ್ತಿದ್ದರೆ ಈ ಕಡೆ ಹಾರ್ವರ್ಡ್ PhD ಗೆ ಬರುವಂತೆ ಆಹ್ವಾನ ಕಳಿಸಿತ್ತು. ಏನೇನೋ ಕಷ್ಟಪಟ್ಟು ಅರ್ಜಿ ಹಾಕಿದ ೦.೦೫% ಜನರಿಗೂ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಪ್ರವೇಶ ಸಿಗುವದಿಲ್ಲ. ಅಂತದ್ದರಲ್ಲಿ ಈ ಹುಡುಗನ ಅಸಾಧಾರಣ ಬುದ್ಧಿಮತ್ತೆಯಿಂದ ತುಂಬಾ ಪ್ರಭಾವಿತವಾಗಿದ್ದ ಹಾರ್ವರ್ಡ್ ಯೂನಿವರ್ಸಿಟಿ ತಾನೇ ಆಹ್ವಾನ ಕಳಿಸಿತ್ತು. Pure meritocracy ಅಂದರೆ ಅದು.

ಹಾರ್ವರ್ಡ್ ಯೂನಿವರ್ಸಿಟಿಯಿಂದ ಬಂದ ಅನಿರೀಕ್ಷಿತ ಆಹ್ವಾನ ನೋಡಿ ಹುಡುಗನಿಗೆ ಆಶ್ಚರ್ಯ ಮತ್ತು ಖುಷಿ. ಅದಕ್ಕಿಂತ ಹೆಚ್ಚಾಗಿ ತನ್ನ ಬುದ್ಧಿಮತ್ತೆಗೆ, ಶ್ರದ್ಧೆಗೆ ಸಿಕ್ಕ ಗೌರವದಿಂದ ನೆಮ್ಮದಿ ಮತ್ತು ಆತ್ಮತೃಪ್ತಿ. ಕಲ್ಕತ್ತಾದ ಸಂಸ್ಥೆಯಿಂದ ಡಿಗ್ರಿ ಕೂಡ ಸಿಗದಿದ್ದರೆ ಮುಂದೇನು ಎಂಬ ಚಿಂತೆ ಗಾಢವಾಗಿ ಕಾಡಿತ್ತು. ಕುಹಕಿಗಳು, ವಿಘ್ನಸಂತೋಷಿಗಳು ಹೇಳಿದ್ದರು - 'ಉಕ್ಕಿನ ಕಾರ್ಖಾನೆಗಳಲ್ಲಿ ಲೆಕ್ಕ ಬರೆಯುವ ಗುಮಾಸ್ತನ ಕೆಲಸ ಖಾಲಿ ಇವೆ. ನಿನ್ನ BSc ಡಿಗ್ರಿ ಸಾಕು ಅವುಗಳಿಗೆ. ಅರ್ಜಿ ಹಾಕು. ಜೀವನೋಪಾಯಕ್ಕೆ ಒಂದು ಕೆಲಸ ಅಂತಾದೀತು!' ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು.

ಹುಡುಗ ಕಳಿಸಿದ್ದ ಪ್ರಬಂಧ ಪ್ರಕಟವೂ ಆಯಿತು. ಆ ಕ್ಲಿಷ್ಟಕರ ಸಮಸ್ಯೆಯನ್ನು ಬಗೆಹರಿಸಿದ ಮೊದಲಿಗ ಆ ಸಂಸ್ಥೆಯ ಮುಖ್ಯಸ್ಥರು ಅಲ್ಲ ಎನ್ನುವ ತಿದ್ದುಪಡಿ ಕೂಡ ಪ್ರಕಟವಾಯಿತು. ನಾಲ್ಕು ಶತಮಾನಗಳ ಹಿಂದಿನ ಗಣಿತದ ಪ್ರಮೇಯವನ್ನು ಮುಂದುವರೆಸಿ ಶುದ್ಧ ಗಣಿತದಿಂದಲೇ ಅದನ್ನು ಸೃಜನಾತ್ಮಕವಾಗಿ ಬಿಡಿಸಿದ್ದಕ್ಕೆ ಹುಡುಗನಿಗೆ ಅಭಿನಂದನೆಯನ್ನು ವಿಶ್ವದ ಅತಿ ದೊಡ್ಡ ದೊಡ್ಡ ಗಣಿತಜ್ಞರು ಮತ್ತು ಸಂಖ್ಯಾಶಾಸ್ತ್ರಿಗಳು ಸಲ್ಲಿಸಿದ್ದರು.

ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಪ್ರಮಾಣದ ಮುಖಭಂಗ. ಆದರೂ ಆ ಹುಡುಗನ ಭವಿಷ್ಯಕ್ಕೆ ಕೊಕ್ಕೆ ಹಾಕಿ ಮುಗಿದಿರಲಿಲ್ಲ. ಕೊನೆಯ ಬ್ರಹ್ಮಾಸ್ತ್ರ ಬಿಟ್ಟರು. ಹಾರ್ವರ್ಡ್ ಯೂನಿವರ್ಸಿಟಿಗೆ ಅಧಿಕೃತವಾಗಿ ಒಂದು ಪತ್ರ ಬರೆದರು. ಅದರಲ್ಲೂ ತಮ್ಮ ಕಾರ್ಕೋಟಕ ವಿಷ ಕಾರಿಕೊಂಡಿದ್ದರು.

ಆ ಪತ್ರದ ಸಾರಾಂಶ ಇಷ್ಟು. 'ನಿಮ್ಮ ಹಾರ್ವರ್ಡ್ ವಿಶ್ವವಿದ್ಯಾಲಯ ನಮ್ಮ ಸಂಸ್ಥೆಯ ವಿದ್ಯಾರ್ಥಿಗೆ PhD ಪದವಿಗೆ ಆಹ್ವಾನ ನೀಡಿರುವ ವಿಷಯ ತಿಳಿದುಬಂದಿದೆ. ಈ ಸದರಿ ವಿದ್ಯಾರ್ಥಿ MSc ಪದವಿಯನ್ನು ಮುಗಿಸುವ ಬಗ್ಗೆ ಖಾತ್ರಿ ಇಲ್ಲ. ಅವನ ಶೈಕ್ಷಣಿಕ ಪ್ರಗತಿ ಸಮಾಧಾನಕರವಾಗಿಲ್ಲ. ನಿಗದಿತ ಸಮಯದಲ್ಲಿ MSc ಡಿಗ್ರಿ ಮುಗಿಸುತ್ತಾನೆ ಎನ್ನುವ ನಂಬಿಕೆಯ ಮೇಲೆ ನೀವು ಅವನಿಗೆ PhD ಪದವಿಗಾಗಿ ಪ್ರವೇಶದ ಆಹ್ವಾನ ಕೊಟ್ಟಿದ್ದರೆ ನೀವು ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸುವದು ಉತ್ತಮ.'

ಇಂತಹ ಪತ್ರ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರವೇಶ ವಿಭಾಗದ ಡೀನ್ ಅವರ ಮೇಜಿಗೆ ಬಂದಿತು. ಆ ವಿದ್ಯಾರ್ಥಿಯ ಬಗ್ಗೆ ಹಾರ್ವರ್ಡ್ ತನ್ನದೇ ಆದ ರೀತಿಯಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಿತ್ತು. ಅದೆಷ್ಟೋ ಪ್ರಬಂಧಗಳನ್ನು ಆತ ಆಗಲೇ ಪ್ರಕಟಿಸಿದ್ದ. ಅದೆಷ್ಟೋ ಪ್ರಬಂಧಗಳ ಮೇಲೆ ವಿಮರ್ಶೆಗಳನ್ನು ಬರೆದು ಪ್ರಕಟಿಸಿದ್ದ. ಅವೆಲ್ಲವನ್ನು ಗಣನೆಗೆ ತಗೆದುಕೊಡಿತ್ತು ಹಾರ್ವರ್ಡ್.

ಹಾರ್ವರ್ಡ್ ಚಿಕ್ಕದಾಗಿ ಒಂದು ಪತ್ರ ವಾಪಸ್ ಬರೆಯಿತು. 'ನಿಮ್ಮ ಸಂಸ್ಥೆ ಕೊಡಬಹುದಾದ ಅಥವಾ ಕೊಡದೇಇರಬಹುದಾದ ಡಿಗ್ರಿಯನ್ನು ನಾವು ಗಣನೆಗೆ ತೆಗೆದುಕೊಂಡಿಲ್ಲ. ವಿದ್ಯಾರ್ಥಿಯನ್ನು ಬೇರೆ ಬೇರೆ ಕೋನಗಳಿಂದ ನಮ್ಮದೇ ರೀತಿಯಲ್ಲಿ ಮೌಲ್ಯಮಾಪನ ಮಾಡಿ PhD ಆಹ್ವಾನ ಕಳಿಸಿದ್ದೇವೆ. ಹಾಗಾಗಿ ನಿಮ್ಮ ಸಂಸ್ಥೆಯ ಡಿಗ್ರಿಯ ಮೇಲೆ ನಮ್ಮ ಆಹ್ವಾನ ನಿಂತಿಲ್ಲ!'

In short, ಹಾರ್ವರ್ಡ್ ಪತ್ರದ ಧಾಟಿ ನೋಡಿದರೆ, ಅವರ ಸಂದೇಶ ಹೀಗಿತ್ತು - ನಿಮ್ಮ ಡಿಗ್ರಿ ನೀವೇ ಇಟ್ಟುಕೊಳ್ಳಿ ಅಥವಾ ಹೆಟ್ಟಿಕೊಳ್ಳಿ!

ಹೀಗೆ ಕಪಾಳಕ್ಕೆ ರಪ್ರಪಾ ಎಂದು ಬಾರಿಸಿದಂತೆ ಬರೆದಿದ್ದ ಹಾರ್ವರ್ಡ್ ಪತ್ರ ನೋಡಿ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರು ದಂಗಾದರು. ಭಗ ಭಗ ಉರಿದುಕೊಂಡರು. ಎಷ್ಟು ಬರ್ನಾಲ್ ಎಲ್ಲೆಲ್ಲಿ ಹಚ್ಚಿಕೊಂಡು ಉಫ್ ಉಫ್ ಅಂತ ಗಾಳಿಯಾಡಿಸಿಕೊಂಡರೋ ಅವರಿಗೇ ಗೊತ್ತು. ಇಲ್ಲದ ಕೆತ್ತೆಬಜೆ ಮಾಡಲು ಹೋದವರಿಗೆ ಬರೋಬ್ಬರಿ ಮಂಗಳಾರತಿ ಆಗಿತ್ತು.

ಹಾರ್ವರ್ಡ್ ಮಂಗಳಾರತಿ ಮಾಡಿತು. ಆದರೆ ಪೂಜೆಯ ಪ್ರಸಾದವನ್ನು ಇವರೇ ಕೊಟ್ಟುಕೊಳ್ಳಬೇಕಾಯಿತು. ಇವರು ಡಿಗ್ರಿ ಕೊಡಲಿ ಬಿಡಲಿ ಹಾರ್ವರ್ಡ್ ಅಂತೂ ಪ್ರವೇಶ ಕೊಟ್ಟುಬಿಟ್ಟಿದೆ. ಹುಡುಗ ಹಾರ್ವರ್ಡ್ ಯೂನಿವರ್ಸಿಟಿಯನ್ನು ಹೋಗಿ ಸೇರಿಕೊಳ್ಳುತ್ತಾನೆ. ಹಾರ್ವರ್ಡ್ ಸೇರಿಕೊಳ್ಳುವ ಬುದ್ಧಿಮತ್ತೆ ಇರುವ ಹುಡುಗ ಕಲ್ಕತ್ತಾದ ಸಂಸ್ಥೆಯಲ್ಲಿ ಫೇಲಾದವ ಅಂದರೆ ಯಾರೂ ನಂಬುವದಿಲ್ಲ. ಇಂತಹ ಬುದ್ಧಿವಂತನನ್ನು ಫೇಲ್ ಮಾಡಿದ್ದಾರೆ ಅಂದ ಮೇಲೆ ಆ ಸಂಸ್ಥೆಯ ಬಗ್ಗೆಯೇ ಸಂಶಯ ವ್ಯಕ್ತಪಡಿಸುತ್ತಾರೆ. ಹಾಗಾಗಿಬಿಟ್ಟರೆ ಕಲ್ಕತ್ತಾದ ಸಂಸ್ಥೆಯ ಹೆಸರು ಹಾಳಾಗುತ್ತದೆ. ಹೀಗಾಗಿ ಹುಡುಗನನ್ನು ನಪಾಸ್ ಮಾಡಿದರೆ ತಮ್ಮ ಸಂಸ್ಥೆಯ ಪ್ರತಿಷ್ಠೆಗೇ ಕುತ್ತು ಬರುತ್ತದೆ. ಒಟ್ಟಿನಲ್ಲಿ ಅವರ ಬ್ರಹ್ಮಾಸ್ತ್ರ ಅವರಿಗೇ ಬೂಮ್ ರಾಂಗ್ ಆಗಿ ತಿರುಗಿ ಬಂದು ಬಡಿದಿತ್ತು! ಕಪಾಳಕ್ಕೆ ರಪ್ ಅಂತ ಅಪ್ಪಳಿಸಿತ್ತು!

ಮುಂದಾಲೋಚನೆ ಮಾಡಿದ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರು ಒಮ್ಮೆಲೇ ಪ್ಲೇಟ್ ಬದಲಾಯಿಸಿದರು. ಎಲ್ಲ ಶಿಕ್ಷಕರನ್ನು ಕರೆದರು. ತಮ್ಮ ಹಿಂದಿನ ಅಲಿಖಿತ ಆಜ್ಞೆಗಳನ್ನು ಹಿಂದೆ ತೆಗೆದುಕೊಂಡರು. ಆ ಹುಡುಗನಿಗೆ ಪರೀಕ್ಷೆಯಲ್ಲಿ ಸರಿಯಾಗಿ ಮಾರ್ಕ್ ಹಾಕುವಂತೆ ಹೇಳಿ ಮುಖ ಮುಚ್ಚಿಕೊಂಡು ಎದ್ದು ಹೋದರು. ತಮ್ಮದೇ ಅಸ್ತ್ರ ತಮಗೇ ರಿವರ್ಸ್ ಹೊಡೆದಿತ್ತು. ಎಲ್ಲರ ದೃಷ್ಟಿಯಲ್ಲಿ ಅಷ್ಟು ದೊಡ್ಡ ಸಂಖ್ಯಾಶಾಸ್ತ್ರಜ್ಞರು. ಆದರೆ ವಿಷಸರ್ಪ. ಪಾಪದ ಹುಡುಗನ ಮೇಲೆ, ಅವನ ತಂದೆ ಮೇಲೆ ತಮಗಿದ್ದ ಅಹಂನ ಕಾರಣದಿಂದ, ದ್ವೇಷ ಸಾಧಿಸಲು ಹೋಗಿ ವಿಧಿಯಿಂದ ತಾರಾಮಾರಾ  ಬಾರಿಸಿಕೊಂಡಿದ್ದರು. ಬರೋಬ್ಬರಿಯಾಯಿತು.

ಮೊದಲು ಹುಡುಗನನ್ನು ಫೇಲ್ ಮಾಡುವ ಆತುರವಾದರೆ ಈಗ ಹೇಗಾದರೂ ಮಾಡಿ ಪಾಸ್ ಮಾಡಿ ಸಾಗಹಾಕುವ ಆತುರ. ಫೇಲ್ ಆಗಿಬಿಟ್ಟ ಅಂದರೆ ಸಂಸ್ಥೆಯ ಮಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆ. ಹಿಂದೆ ಬೇಕಂತಲೇ ಕಮ್ಮಿ ಮಾರ್ಕ್ ಹಾಕಿದ್ದ ಪರೀಕ್ಷೆಗಳನ್ನು ಮತ್ತೊಮ್ಮೆ ಇವನೊಬ್ಬನಿಗಾಗಿಯೇ ಪ್ರತ್ಯೇಕವಾಗಿ ಮಾಡಲಾಯಿತು. ಒಳ್ಳೊಳ್ಳೆ ಅಂಕಗಳನ್ನು ನೀಡಲಾಯಿತು. ಹೊಡೀರಿ ಹಲಗಿ!

ಅಂದು ಗುರುವಿಗೇ ತಿರುಮಂತ್ರ ಹಾಕಿದ್ದ ಆ ವಿದ್ಯಾರ್ಥಿ ಮತ್ಯಾರೂ ಅಲ್ಲ. ಅವರೇ ಇಂದಿನ ಖತರ್ನಾಕ್ ರಾಜಕಾರಣಿ - ಸುಬ್ರಮಣಿಯನ್ ಸ್ವಾಮಿ. ತಿರುಮಂತ್ರ ಹಾಕಿಸಿಕೊಂಡಿದ್ದ ಗುರುಗಳೂ  ದೊಡ್ಡ ಮನುಷ್ಯರೇ. ಅವರು ಯಾರೆಂದರೆ ದೊಡ್ಡ ಸಂಖ್ಯಾಶಾಸ್ತ್ರಜ್ಞ ಪ್ರಸನ್ನ ಚಂದ್ರ ಮಹಾಲನೋಬಿಸ್. ದೊಡ್ಡ ಮಿದುಳು ಇತ್ತು. ಏನುಪಯೋಗ? ಹೃದಯ ಸಂಕುಚಿತವಾಗಿತ್ತು. ಎಲ್ಲವನ್ನೂ ಮೀರಿದ ಅಹಂಕಾರ ಬೇರೆ.

ಇಪ್ಪತ್ತೂ ಚಿಲ್ಲರೆ ವಯಸ್ಸಿನ ವಿದ್ಯಾರ್ಥಿ ಸುಬ್ರಮಣಿಯನ್ ಸ್ವಾಮಿ ಹಾರ್ವರ್ಡ್ ಯೂನಿವರ್ಸಿಟಿ ಸೇರಿಕೊಂಡರು. ಅಲ್ಲೂ ದಾಖಲೆಗಳ ಮೇಲೆ ದಾಖಲೆ ಮಾಡಿದರು. ಅರ್ಥಶಾಸ್ತ್ರದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ PhD ಗಳಿಸಿದ ದಾಖಲೆ ಇನ್ನೂ ಸ್ವಾಮಿಯವರ ಹೆಸರಲ್ಲೇ ಇದೆ. ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮಂದಿಯೊಂದಿಗೆ ಅನೇಕ ಪ್ರೌಢ ಪ್ರಬಂಧಗಳನ್ನು ಪ್ರಕಟಿಸಿದರು. ದೇಶಗಳ GDP ಅಳೆಯುವ ಸೂತ್ರವನ್ನು ಸ್ವಾಮಿಯವರ ಮತ್ತು ಅವರ ಗುರುಗಳಾದ ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಸ್ಯಾಮ್ಯುಯೆಲ್ಸೆನ್ ಹೆಸರಿಂದ ಕರೆಯಲಾಗುತ್ತದೆ.

ಈ ಘಟನೆಯ ತಮಾಷೆಯ ಕ್ಲೈಮಾಕ್ಸ್ ಅಂದರೆ.... ಕೆಲ ವರ್ಷಗಳ ನಂತರ ಇದೇ ಸಣ್ಣ ಮನಸ್ಸಿನ ದೊಡ್ಡ ಸಂಖ್ಯಾಶಾಸ್ತ್ರಜ್ಞ ಮಹಾಲನೋಬಿಸ್ ಹಾರ್ವರ್ಡ್ ಯೂನಿವರ್ಸಿಟಿಗೆ ಭೇಟಿ ಕೊಟ್ಟಿದ್ದರು. ಎಲ್ಲರೂ ಅವರ ಮುಂದೆ ಸುಬ್ರಮಣಿಯನ್ ಸ್ವಾಮಿಗಳ ಪ್ರಶಂಸೆ ಮಾಡಿದರು. ಸ್ವಾಮಿ ಆಗಲೇ ಹಾರ್ವರ್ಡ್ ಮತ್ತು ಪಕ್ಕದ MIT ಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಹಾಗಾಗಿ ಅಲ್ಲಿನ ಜನ ತೆರೆದ ಮನಸ್ಸಿನಿಂದ ಭಾರತದಿಂದ ಬಂದ ಅತಿಥಿಯ ಮುಂದೆ ಸ್ವಾಮಿಗಳ ಪ್ರಶಂಸೆ ಮಾಡಿದ್ದರು. ಅವರಿಗೇನು ಗೊತ್ತು ಈ ಗುರು ಹೇಗೆ ತಮ್ಮ ಶಿಷ್ಯನಿಗೆ ಕೊಕ್ಕೆ ಹಾಕಿದ್ದರು ಮತ್ತು ಶಿಷ್ಯ ಹೇಗೆ ಗುರುವಿಗೇ ತಿರುಮಂತ್ರ ಹಾಕಿದ್ದ ಎಂತೆಲ್ಲ.

ತಮ್ಮ ಒಂದು ಕಾಲದ ಶಿಷ್ಯನ ಪ್ರಶಂಸೆ ಕೇಳಿದ ಮಹಾಲನೋಬಿಸ್ ಒಳೊಳಗೇ ಉರಿದುಕೊಂಡಿರಬೇಕು. ಆದರೆ ಮೇಲಿಂದ ಮಾತ್ರ ದೊಡ್ಡದಾಗಿ ಗಫಾ ಹೊಡೆದರು. ಏನೆಂದುಬಿಟ್ಟರು ಗೊತ್ತೇ? 'ಸುಬ್ರಮಣ್ಯ ಸ್ವಾಮಿ ಅಂದರೆ ಯಾರ ಶಿಷ್ಯ ಅಂದುಕೊಂಡಿದ್ದೀರಿ? ನನ್ನ ಶಿಷ್ಯ ಕಣ್ರೀ ಅವನು. ನನ್ನ ಶಿಷ್ಯ. ನನ್ನ ಶಿಷ್ಯ ಅಂದ ಮೇಲೆ ಇಷ್ಟು ಮೇಧಾವಿಯಾಗಿರಲೇಬೇಕು ತಾನೇ!? ಅದರಲ್ಲಿ ಆಶ್ಚರ್ಯವೇನಿದೆ!?'

ಇದನ್ನು ಕೇಳಿ, ಮಹಾಲನೋಬಿಸರ ಕೊಕ್ಕೆ ಕಾಮಗಾರಿ ಬಗ್ಗೆ ಗೊತ್ತಿದ್ದವರು ಎಲ್ಲೆಲ್ಲಿಂದ ನಕ್ಕರೋ ದೇವರಿಗೇ ಗೊತ್ತು.

ಸುಬ್ರಮಣಿಯನ್ ಸ್ವಾಮಿ ಅಂದರೆ ಅಷ್ಟೇ ಮತ್ತೆ! deadly and lethal!

ಮಾಹಿತಿ ಆಧಾರ: ಸುಬ್ರಮಣಿಯನ್ ಸ್ವಾಮಿಯವರ ಪತ್ನಿ ರೋಕ್ಸ್ನಾಸ್ವಾಮಿಯವರು ಬರೆದ ಪುಸ್ತಕ - Evolving with Subramanian Swamy: A Roller Coaster Ride.





Tuesday, April 17, 2018

ಮತ್ತೊಬ್ಬ ಪ್ಯಾಲೆಸ್ಟೈನಿ ಉಗ್ರನ ಗೇಮ್ ಬಾರಿಸಿತೇ ಇಸ್ರೇಲಿನ ಮೊಸ್ಸಾದ್!?

ಅರಬ್ ದೇಶಗಳ ಉಗ್ರಗಾಮಿಗಳ ವಲಯದಲ್ಲಿ ಒಂದೇ ಗುಸುಗುಸು. ಅದೇನೆಂದರೆ - ಇಸ್ರೇಲಿನ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮತ್ತೊಂದು ಗೇಮ್ ಬಾರಿಸಿದೆ. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ರಮದಾನ್ ಶಾಲ್ಲಾ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದವ ಸೀದಾ ಕೋಮಾಗೆ ಹೋಗಿಬಿಟ್ಟಿದ್ದಾನೆ. ಇನ್ನೂ ಕೋಮಾದಲ್ಲೇ ಇದ್ದಾನೋ ಅಥವಾ ಅಲ್ಲಾನಿಗೆ ಪ್ಯಾರೇ ಆಗಿಬಿಟ್ಟಿದ್ದಾನೋ ಗೊತ್ತಿಲ್ಲ. ಹೇಗಾದರೂ ಮಾಡಿ ಮುಖ ಉಳಿಸಿಕೊಳ್ಳಬೇಕಾಗಿರುವದು ಅವನ ಸಂಘಟನೆಯಾದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಗೆ.  'ನಮ್ಮ ಬಾಸ್ ವಯೋಸಹಜ ಕಾರಣಗಳಿಂದ ಕೊಂಚ ಅಸ್ವಸ್ಥರಾಗಿದ್ದಾರೆ. ಅದು ಬಿಟ್ಟರೆ ಎಲ್ಲ ಓಕೆ,' ಎಂದು ಅದು ಪತ್ರಿಕಾ ಹೇಳಿಕೆಗಳಲ್ಲಿ ಪುಂಗುತ್ತಿದೆ. ಆದರೆ ಬೇಹುಗಾರಿಕೆ ವಲಯದಲ್ಲಿ ಮಾತ್ರ  - for all practical purposes he is finished. ಇದ್ದರೂ ಅಷ್ಟೇ ಬಿಟ್ಟರೂ ಅಷ್ಟೇ. ಕೋಮಾದಲ್ಲಿದ್ದರೆ ಸುಮ್ಮನೆ ಖರ್ಚು. ಮೊದಲೇ ಕಾಸಿಲ್ಲದ ಚಿಕ್ಕ ಸಂಘಟನೆ ಇಸ್ಲಾಮಿಕ್ ಜಿಹಾದ್.

ರಮದಾನ್ ಶಾಲ್ಲಾ 
ಈ ರಮದಾನ್ ಶಾಲ್ಲಾ ಯಾರು ಅಂತ ನೋಡುತ್ತಾ ಹೋದರೆ ಅದೇ ಒಂದು ಅಚ್ಚರಿಯ ಕತೆ. ಇವನು ಆಕ್ರಮಿತ ಪ್ಯಾಲೆಸ್ಟೈನ್ ದೇಶದಲ್ಲಿ ಜನಿಸಿದರೂ ಇಂಗ್ಲೆಂಡಿಗೆ ಹೋಗಿ ಅರ್ಥಶಾಸ್ತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ PhD ಮಾಡಿಕೊಂಡಿದ್ದ ಪ್ರತಿಭಾವಂತ. ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿದ್ದ ಮತ್ತೊಬ್ಬ ಅಂಡೆಪಿರ್ಕಿ ಪ್ಯಾಲೆಸ್ಟೈನ್ ವಲಸಿಗ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಎಂಬಾತ ಇವನನ್ನು ಅಮೇರಿಕಾಗೆ ಕರೆದುಕೊಂಡು ಬಂದ. ತಾನು ಪಾಠ ಮಾಡಿಕೊಂಡಿದ್ದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲೇ ಪಾರ್ಟ್-ಟೈಮ್ ಉಪನ್ಯಾಸಕನ ಕೆಲಸ ಹಚ್ಚಿಕೊಟ್ಟ.

ಪ್ಯಾಲೆಸ್ಟೈನ್ ಉಗ್ರರನ್ನು ಖುಲ್ಲಂ ಖುಲ್ಲಾ ಬೆಂಬಲಿಸುತ್ತಿದ್ದ ಸಾಮಿ ಅಲ್-ಅರಿಯನ್ ಮೇಲೆ ಅಮೇರಿಕಾದ ತನಿಖಾ ಸಂಸ್ಥೆ FBI  ಒಂದು ಖಡಕ್ ನಜರ್ ಮಡಗಿತ್ತು. ಯಾವಾಗ ಈ ಸಾಮಿ ಅಲ್-ಅರಿಯನ್ ಇಲ್ಲಿನ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಸಂಗ್ರಹಿಸುತ್ತಿದ್ದ ದೇಣಿಗೆ ಸೀದಾ ಮಾನವಬಾಂಬುಗಳನ್ನು ತಯಾರು ಮಾಡಿ, ದೂರದ ಇಸ್ರೇಲಿನಲ್ಲಿ ಸ್ಫೋಟಗಳಿಗೆ ಕಾರಣವಾಗಿ, ನೂರಾರು ನಿಷ್ಪಾಪಿ ಇಸ್ರೇಲಿಗಳ ಪ್ರಾಣ ತೆಗೆಯುತ್ತಿದೆ ಅಂತಾದಾಗ ಅಮೇರಿಕಾ ಅಲ್-ಅರಿಯನ್ ಎಂಬ ಅಂಡೆಪಿರ್ಕಿ ಪ್ರೊಫೆಸರನ ಅಂಡಿನ ಮೇಲೆ ಒದ್ದು ಗಡಿಪಾರು ಮಾಡಿತು. ಹಾಗೇ ಸುಮ್ಮನೆ ಹೋದಾನೆಯೇ ಪ್ರೊಫೆಸರ್? ಅವನೂ ಸಕತ್ ಕಾನೂನು ಕಾಳಗ ಮಾಡಿದ. ಮೊದಲಿನ ಕೆಲ ಸುತ್ತುಗಳಲ್ಲಿ FBI  ಗೇ ನೀರು ಕುಡಿಸಿದ. ತನ್ನ ಪರವಾಗಿ ತೀರ್ಪುಗಳು ಬಂದಾಗ 'ಹೆಂಗೆ??!!' ಎಂಬಂತೆ ಗರ್ವದಿಂದ ಗಡ್ಡ ನೀವಿಕೊಂಡಿದ್ದ.

೨೦೦೧ ರಲ್ಲಿ ಬಿಲ್ ಕ್ಲಿಂಟನ್  ಸಾಹೇಬರು ಹೋಗಿ ಜಾರ್ಜ್ ಬುಷ್ ಸಾಹೇಬರು ಬಂದು ಕುಂತರು ನೋಡಿ. ಗಾಳಿ ಬೇರೆ ದಿಕ್ಕಿನಲ್ಲಿ ಬೀಸತೊಡಗಿತು. ಮೇಲಿಂದ ೯/೧೧ ದುರಂತ ಕೂಡ ಆಗಿಹೋಯಿತು. ಆವಾಗ ಇಂತಹ ಬುದ್ಧಿಜೀವಿ ಪ್ರೊಫೆಸರ್ ಮುಖವಾಡ ಧರಿಸಿ ಉಗ್ರರನ್ನು ಬೆಂಬಲಿಸುತ್ತಿದ್ದ ಮಂದಿಯ ಮೇಲಿನ ಮೃದು ಧೋರಣೆ ಬದಲಾಯಿತು. ಅಂತೂ ಸಾಮಿ ಅಲ್-ಅರಿಯನ್ನನ್ನು ಯಾವುದೋ ಕೊಲ್ಲಿ ದೇಶಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿಗೆ ಒಂದು ಪೀಡೆ ತೊಲಗಿತು.

ಅವನು ಹೋದರೇನಾಯಿತು ಆದರೆ ಇವನಿದ್ದನಲ್ಲ ಶಿಷ್ಯ - ರಮದಾನ್ ಶಾಲ್ಲಾ. ಬಹುಬೇಗನೆ ತಯಾರಾಗಿಬಿಟ್ಟಿದ್ದ. ಗುರುವಿಗಿಂತ ಜೋರಾಗಿ ದೇಣಿಗೆ ಸಂಗ್ರಹ ಮಾಡಿ ಮಾಡಿ ದೂರದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ ಫಾತಿ ಶಕಾಕಿ ಎಂಬ ದುರುಳನಿಗೆ ಮಿಲಿಯನ್ ಗಟ್ಟಲೆ ಡಾಲರುಗಳನ್ನು ನೀಟಾಗಿ ಬ್ಯಾಂಕ್ ವೈರ್ ಮಾಡುತ್ತಿದ್ದ. ಕಲಿತಿದ್ದ ಮತ್ತು ಕಲಿಸುತ್ತಿದ್ದ ಬ್ಯಾಂಕಿಂಗ್ ವಿದ್ಯೆ ಅಲ್ಲಿಗೆ ಸಾರ್ಥಕವಾಯಿತು.

ಆಗಲೇ ಸಾಕಷ್ಟು ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಗಳು ಇದ್ದವು. ಪ್ರತ್ಯೇಕವಾಗಿ ತನ್ನದೂ ಒಂದು ಇರಲಿ ಅಂತ ಫಾತಿ ಶಾಕಾಕಿ ಕೂಡ ಹೊಸ ಸಂಘಟನೆ ಶುರು ಮಾಡಿದ್ದ. ಎಲ್ಲರಿಗೂ ಕೈಬಿಚ್ಚಿ ಕಾಸು ಕೊಡುತ್ತಿದ್ದ ಲಿಬಿಯಾದ ಸರ್ವಾಧಿಕಾರಿ ಮೊಹಮದ್ ಗಡಾಫಿಯ ಉತ್ತುಂಗದ ದಿನಗಳು ಅವು. ಅವನ ಅಬ್ಬರ ಜೋರಾಗಿತ್ತು. ಅದರಲ್ಲೂ ೧೯೯೧ ರ ಗಲ್ಫ್ ಯುದ್ಧದಲ್ಲಿ ತಾರಾಮಾರಾ ಬಡಿಸಿಕೊಂಡ ಸದ್ದಾಮ್ ಹುಸೇನ್ ಮುದಿಯೆತ್ತಿನಂತಾಗಿ ಹೋದ ಮೇಲಂತೂ ಇಡೀ ಕೊಲ್ಲಿ ಪ್ರದೇಶಕ್ಕೆ ಗಡಾಫಿಯೇ ದಾದಾ! ಅವನದೇ ಫುಲ್ ಹವಾ! ಫುಲ್ ದಾದಾಗಿರಿ.

ಫಾತಿ ಶಾಕಾಕಿ 
ಹೀಗಿರುವಾಗ ಫಾತಿ ಶಕಾಕಿ ಎಂಬ ಗಾಜಾ ಪಟ್ಟಿಯ ಗಿರಾಕಿ ಬಂದು, 'ಸಾರ್, ಇಸ್ರೇಲ್ ವಿರುದ್ಧ ಸಂಗ್ರಾಮ ಶುರುಮಾಡುತ್ತೇನೆ. ಹೊಸ ಸಂಘಟನೆ ಆರಂಭಿಸುತ್ತೇನೆ. ಕೊಂಚ ಫಂಡಿಂಗ್ ಕೊಡಿ' ಎಂದು ಸಲಾಂ ಮಾಡಿದರೆ ಗಡಾಫಿ ಇಲ್ಲ ಅಂದಾನೆಯೇ? ಚಾನ್ಸೇ ಇಲ್ಲ. ಮತ್ತೆ ಗಡಾಫಿಗೆ ಹಳೆ ಉಗ್ರರಾಗಿದ್ದ ಯಾಸೀರ್ ಅರಾಫತ್, ಅಬು ನಿದಾಲ್ ಮುಂತಾದವರ ಮೇಲೆ ಒಂದು ತರಹದ ಭ್ರಮನಿರಸನವಾಗಿತ್ತು. ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಮುಂತಾದವರ ಪ್ರಭಾವದಲ್ಲಿ  ಬಂದಿದ್ದ ಅರಾಫತ್ ಉಗ್ರವಾದವನ್ನು ಕಮ್ಮಿ ಮಾಡಿದ್ದರು. ಶಾಂತಿ ವಾಂತಿ ಅಂತ ಏನೇನೋ ಬಡಬಡಿಸುತ್ತಿದ್ದರು. ಕರೆದಲ್ಲಿ ಹೋಗಿ ಇಸ್ರೇಲ್ ಜೊತೆ ಮಾತುಕತೆಗೆ ಕೂಡುತ್ತಿದ್ದರು. ಕೂತಲ್ಲೇ ತೂಕಡಿಸುತ್ತಿದ್ದರು. ನಂತರ ಎಲ್ಲವೂ ಸರಿಹೊಂದಿ ಪ್ಯಾಲೆಸ್ಟೈನ್ ಸಮಸ್ಯೆ once for all ಪರಿಹಾರವಾಗಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ರಚ್ಛೆ ಹಿಡಿದ ಮಗುವಿನಂತೆ ಏನೋ ಒಂದು ರಗಳೆ ತೆಗೆದು ಮಾತುಕತೆಯನ್ನು ಬರಕಾಸ್ತು ಮಾಡಿ ಎದ್ದು ಹೊರಟುಬಿಡುತ್ತಿದ್ದರು. ಅರಾಫತ್ ಅವರ unpredictable ವರ್ತನೆಯಿಂದ ಎಲ್ಲರಿಗೂ ಪೂರ್ತಿ frustration.

ಅರಾಫತ್ ಬಣದವರಿಗೆ ಪ್ಯಾಲೆಸ್ಟೈನ್ ಸಂಗ್ರಾಮ ರೊಕ್ಕ ಮಾಡಿಕೊಳ್ಳುವ ದಂಧೆಯಾಗಿ ಹೋಗಿತ್ತು. ಲೆಬನಾನಿನಲ್ಲಿ ಝೇಂಡಾ ಹೊಡೆದುಕೊಂಡು ಗೂಂಡಾಗಿರಿ ಮಾಡುತ್ತಾ ಕುಳಿತಿದ್ದರು ಅರಾಫತ್ ಮತ್ತು ಅವರ ಫತಾ ಸಂಘಟನೆ. ರೋಸಿಹೋದ ಇಸ್ರೇಲ್ ಅರಾಫತ್ ಅವರನ್ನು ಲೆಬನಾನಿಂದ ಒದ್ದು ಓಡಿಸಿತ್ತು. ಮತ್ತೊಮ್ಮೆ ನಿರಾಶ್ರಿತರಾದ ಅರಾಫತ್ ಬಣಕ್ಕೆ ಅಂತಾರಾಷ್ಟ್ರೀಯ ಸಮುದಾಯ ಆಫ್ರಿಕಾದ ಚಿಕ್ಕ ದೇಶ ಟ್ಯುನೀಸಿಯಾದ ರಾಜಧಾನಿ ಟ್ಯೂನಿಸ್ಸಿನಲ್ಲಿ ಒಂದು ರೆಸಾರ್ಟ್ ಮಾದರಿಯ ಶಿಬಿರ ಮಾಡಿಕೊಟ್ಟಿತ್ತು. ಅಲ್ಲಿಂದ ಅರಾಫತ್ ಸಾಹೇಬರ ರೊಕ್ಕ ಮಾಡುವ ನಾಮ್ಕೆವಾಸ್ತೆ ಸಂಗ್ರಾಮ ನಡೆಯುತ್ತಿತ್ತು. ಇಂತಹ ಲಂಪಟ ಸ್ವಾತಂತ್ರ್ಯ ಹೋರಾಟಗಾರನಿಗೆ ಮಿಲಿಯನ್ ಗಟ್ಟಲೆ ರೊಕ್ಕ ಕೊಟ್ಟು ಮಂಗ್ಯಾ ಆದೆನಲ್ಲ ಎನ್ನುವ ವಿಷಾದ ಗಡಾಫಿಗೆ. ಕೊಟ್ಟ ರೊಕ್ಕಕ್ಕೆ ಬರೋಬ್ಬರಿ ಪಟಾಕಿ ಹಾರಿದರೆ ಮಾತ್ರ ಗಡಾಫಿಗೆ ವಿಕೃತ ಸಂತೋಷ. ಒಂದಿಷ್ಟು ವಿಮಾನಗಳು ಆಕಾಶದಲ್ಲೇ ಸಿಡಿದುಹೋಗಬೇಕು. ಮತ್ತೊಂದಿಷ್ಟು ವಿಮಾನಗಳ ಅಪಹರಣವಾಗಿ, ಪಶ್ಚಿಮ ದೇಶಗಳು ಮಂಡಿಯೂರಿ, ಜೈಲಲ್ಲಿರುವ ಪ್ಯಾಲೆಸ್ಟೈನ್ ಉಗ್ರರನ್ನು ಬಿಡುಗಡೆ ಮಾಡಿ, ತಮ್ಮ ತಮ್ಮ ವಿಮಾನಗಳನ್ನು ಮತ್ತು ನಾಗರೀಕರನ್ನು ಬಚಾವ್ ಮಾಡಿಕೊಳ್ಳಬೇಕು. ಆಗ ಗಡಾಫಿ ಗಹಗಹಿಸಿ ರಕ್ಕಸ ನಗೆ ನಗುತ್ತಿದ್ದ. ಹಾಗಾದಾಗ ಮಾತ್ರ ಉಗ್ರರ ಮೇಲೆ ಸುರಿದ ರೊಕ್ಕಕ್ಕೆ ತಕ್ಕ ಪ್ರತಿಫಲ ಬಂತು ಅಂತ ಅವನ ಭಾವನೆ.

ಅರಾಫತ್ ಸಾಹೇಬರು ಶಾಂತಿಯ ಹಿಂದೆ ಹೋದರೆ ಮತ್ತೊಬ್ಬ ಹಳೆ ಕಿರಾತಕ ಅಬು ನಿದಾಲ್ ಫುಲ್ ಸೈಕೋ ಆಗಿಹೋಗಿದ್ದ. ಅವನ ANO ಸಂಘಟನೆಯನ್ನು ತುಂಬಾ ಡೀಪಾಗಿ penetrate ಮಾಡಿದ್ದ ಮೊಸ್ಸಾದ್ ಅವನ ಅನೇಕ ಹಿರಿತಲೆಗಳನ್ನು compromise ಮಾಡಿತ್ತು. ಅವರಿಗೆ ಮೊಸ್ಸಾದ್ ಹೇಳಿದಂತೆ ಕೇಳುವುದನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. ಪರಿಸ್ಥಿತಿ ಕೊನೆಗೆ ಎಲ್ಲಿಗೆ ಬಂದುಮುಟ್ಟಿತು ಅಂದರೆ ಪೂರ್ತಿ ಮತಿಭ್ರಾಂತನಾದ ಅಬು ನಿದಾ ಪ್ಯಾಲೆಸ್ಟೈನ್ ಸಂಗ್ರಾಮ ಮಾಡುವುದು ದೂರವಿರಲಿ ತನ್ನದೇ ಬಣದ ಉಗ್ರಗಾಮಿಗಳನ್ನು wholesale ರೇಟಿನಲ್ಲಿ ಕೊಲ್ಲತೊಡಗಿದ. ಎಲ್ಲರ ಮೇಲೂ ಅವನಿಗೆ ಸಂಶಯ. ಎಲ್ಲಿಯಾದರೂ ಶತ್ರುವಾದ ಇಸ್ರೇಲಿ ಮೊಸ್ಸಾದ್ ಜೊತೆ ಹೊಂದಾಣಿಕೆ ಮಾಡಿಕೊಂಡ ಈ ಮುಂಡೇಮಕ್ಕಳು ತನ್ನ ಬುಡಕ್ಕೆ ಬಾಂಬಿಟ್ಟುಬಿಟ್ಟರೆ ಏನು ಗತಿ ಎಂದು ತನ್ನದೇ ಜನರನ್ನು ಸಿಕ್ಕಾಪಟ್ಟೆ ಕೊಂದುಬಿಟ್ಟ. ಕ್ರಮಬದ್ಧವಾಗಿ disinformation campaign ಮಾಡಿ, ಸುಳ್ಳು ಸುದ್ದಿ ಹರಿಬಿಟ್ಟು, ಅಬು ನಿದಾಲನನ್ನು ಸೈಕೋ ಮಂಗ್ಯಾ ಮಾಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಪೆಕಪೆಕಾ ಎಂದು ನಕ್ಕಿತು. ಕಮ್ಮಿ ಖರ್ಚಿನಲ್ಲಿ ಅವರ ಕೆಲಸವಾಗಿತ್ತು.

ಒಮ್ಮೆಯಂತೂ ಫಂಡ್ ಎತ್ತಲು ಗಡಾಫಿಯ ಲಿಬಿಯಾಕ್ಕೆ ಹೋಗಿದ್ದ ಅಬು ನಿದಾಲ್ ಖತರ್ನಾಕ್ ಕೆಲಸ ಮಾಡಿಬಿಟ್ಟ. ಅಲ್ಲಿ ಅವನ ಉಗ್ರಗಾಮಿಗಳ ಶಿಬಿರ ಇತ್ತು. ಗಡಾಫಿಯ ಸೇನೆಯ ಜನ ಅರಬ್ ಯುವಕರಿಗೆ ಉಗ್ರಗ್ರಾಮಿಗಳ ತರಬೇತಿ ಕೊಡುತ್ತಿದ್ದರು. ಅಷ್ಟೊತ್ತಿಗೆ ಅಬು ನಿದಾಲ್ ಪೂರ್ತಿ ಸಂಶಯಪಿಶಾಚಿಯಾಗಿ ತಲೆ ಹನ್ನೆರೆಡಾಣೆ ಮಾಡಿಕೊಂಡಿದ್ದ. ಅಲ್ಲಿನ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರೆಲ್ಲ ಮೊಸ್ಸಾದಿಗೆ, ಸಿಐಎಗೆ compromise ಆಗಿಬಿಟ್ಟಿದ್ದಾರೆ ಎಂದು ತಲೆಯಲ್ಲಿ ಬಂದುಬಿಟ್ಟಿತು. ತರಬೇತಿ ಪಡೆಯುತ್ತಿದ್ದ ಆ ಜನರಿಂದಲೇ ಅಲ್ಲೇ ಒಂದು ದೊಡ್ಡ ಸಾಮೂಹಿಕ ಗೋರಿ ತೋಡಿಸಿದ. ಗೋರಿ ತೋಡಿದವರು ಗೋರಿಯಲ್ಲಿ ಹೋಗಿ ನಿಂತರು. ನೂರಾರು ಜನ. ಅವರೆಲ್ಲರನ್ನೂ ಮಷೀನ್ ಗನ್ ಹಚ್ಚಿ ನುಣ್ಣಗೆ ಬೀಸಿದಂತೆ ರುಬ್ಬಿಬಿಟ್ಟ ಕಿರಾತಕ ಅಬು ನಿದಾಲ್. ಒಂದೇ ಕ್ಷಣದಲ್ಲಿ ನೂರಾರು ಜನ ಮಟಾಷ್! ಸಂತೃಪ್ತ ವಿಕೃತ ನಗೆ ಗಹಗಹಿಸಿ ನಕ್ಕ ಅಬು ನಿದಾಲ್ ಆ ಸಾಮೂಹಿಕ ಗೋರಿ ಮುಚ್ಚಿಸಿದವನೇ ಅದರ ಮೇಲೆ ಡೇರೆ ಹಾಕಿಸಿಕೊಂಡು ಬೋರಲಾಗಿ ಮಲಗಿಬಿಟ್ಟ. ನೂರಾರು ಜನ so-called ಗದ್ದಾರರನ್ನು ಕೊಂದ ಮೇಲೆ ಏನೋ ಒಂದು ತರಹದ ನೆಮ್ಮದಿ, ಶಾಂತಿ! ಅಪರೂಪಕ್ಕೆ ನಿದ್ದೆ ಸೊಗಸಾಗಿ ಬಂತು.

ಅಬು ನಿದಾಲನ ಈ ಯಬಡತನದ ಕಾರ್ನಾಮೆಯ ಬಗ್ಗೆ ಕೇಳಿದ ಗಡಾಫಿ ತಲೆ ತಲೆ ಚಚ್ಚಿಕೊಂಡ. ತನ್ನ ದೇಶದಲ್ಲಿ ಉಗ್ರಗಾಮಿ ಶಿಬಿರ ಮಾಡಿಕೊಟ್ಟ, ಸಾವಿರಾರು ಜನ ನಿರುದ್ಯೋಗಿ ಅರಬ್ ಯುವಕರನ್ನು ಹಿಡಿದು ತರಿಸಿಕೊಟ್ಟ, ಅವರಿಗೆ ತನ್ನದೇ ಸೈನ್ಯದ ಮೂಲಕ ಉಗ್ರಗಾಮಿ ತರಬೇತಿ ಕೊಡಿಸಿದ, ಹಲವಾರು ಮಿಲಿಯನ್ ಡಾಲರುಗಳ ಫಂಡಿಂಗ್ ಕೊಟ್ಟ. ಇಷ್ಟೆಲ್ಲಾ ಕೊಟ್ಟ ಮೇಲೂ ಈ ಮತಿಭ್ರಾಂತ, ಒಂದು ಕಾಲದ ಟಾಪ್ ಉಗ್ರಗಾಮಿ, ಅಬು ನಿದಾಲ್ ಅವರೆಲ್ಲರ ಮೇಲೆ ಸಂಶಯಪಟ್ಟು ಎಲ್ಲರನ್ನೂ ಮಷೀನ್ ಗನ್ ಹಚ್ಚಿ ಉಡಾಯಿಸಿ ಉದ್ದಕ್ಕೆ ಲಂಬಾ ಲಂಬಾ ಮಲಗಿಬಿಟ್ಟ. ಅಲ್ಲಿಗೆ ಅಬು ನಿದಾಲನನ್ನೂ ತನ್ನ ಫೇವರಿಟ್ ಉಗ್ರರ ಪಟ್ಟಿಯಿಂದ ತೆಗೆದುಹಾಕಿದ ಗಡಾಫಿ.

ಹೀಗೆ ಪ್ಯಾಲೆಸ್ಟೈನ್ ಉಗ್ರರ ಹಳೆ ತಲೆಗಳಿಂದ ಭ್ರಮನಿರಸನಕ್ಕೆ ಒಳಗಾಗಿದ್ದ ಗಡಾಫಿ ಹೊಸ ತಲೆಮಾರಿನ ಉಗ್ರರಾಗಿ ಕಾದುಕುಳಿತಿದ್ದ. ಆಗಲೇ ಫಾತಿ ಶಾಕಾಕಿ ಪ್ರತ್ಯಕ್ಷನಾಗಿ ಹೊಸ ಸಂಘಟನೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದಿನ ಪ್ರಪೋಸಲ್ ಇಟ್ಟಿದ್ದ. ಸಿಕ್ಕಾಪಟ್ಟೆ excite ಆದ ಗಡಾಫಿ ನೀಟಾಗಿ ಒಂದಿಷ್ಟು ಮಿಲಿಯನ್ ಡಾಲರ್ ಕಾಣಿಕೆ ಕೊಟ್ಟಿದ್ದ.

ಗಡಾಫಿಯ ಕಾಣಿಕೆ, ದೂರದ ಅಮೇರಿಕಾದಿಂದ ಇಬ್ಬರು ಪ್ರೊಫೆಸರ್ ಜನರಾದ ಸಾಮಿ ಅಲ್-ಅರಿಯನ್ ಮತ್ತು ರಮದಾನ್ ಶಾಲ್ಲಾ ಕಳಿಸಿಕೊಡುತ್ತಿದ್ದ ಕಾಣಿಕೆ ಸಾಕಷ್ಟಾಗಿತ್ತು. ಆ ಫಂಡ್ ಎತ್ತಿಕೊಂಡ ಫಾತಿ ಶಾಕಾಕಿ ಸೀದಾ ಹೋಗಿ ಗಾಜಾ ಪಟ್ಟಿಯಲ್ಲಿ ಕುಳಿತ. ಮೊದಲೇ ನರಕಸದೃಶ ಜಾಗ ಗಾಜಾ ಪಟ್ಟಿ. ಜನರಿಗೆ ಊಟಕ್ಕೆ ಗತಿಯಿಲ್ಲ. ಗಳಿಸಿದ ಅಷ್ಟೂ ರೊಕ್ಕವನ್ನು ಪ್ಯಾಲೆಸ್ಟೈನ್ ಸ್ವಾತಂತ್ರ ಸಂಗ್ರಾಮದ ಹೆಸರಿನಲ್ಲಿ ಬೇರೆ ಬೇರೆ ದಾದಾಗಳು ಕಿತ್ತುಕೊಳ್ಳುತಿದ್ದರು. ಇವರ ರೊಕ್ಕ ಕಿತ್ತುಕೊಂಡ 'ಓರಾಟಗಾರರು' ದುಂಡಗಾಗಿ ದುಬೈ, ಶಾರ್ಜಾ ಇತ್ಯಾದಿ ಕೊಲ್ಲಿ ದೇಶಗಳಲ್ಲಿ ವ್ಯಾಪಾರ ಅದು ಇದು ಮಾಡಿಕೊಂಡು ಹಾಯಾಗಿರುತ್ತಿದ್ದರು. ಅಲ್ಲಿಗೆ ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಸಂಗ್ರಾಮ ಹಳ್ಳ ಹಿಡಿದಿತ್ತು. ಗಾಜಾ ಪಟ್ಟಿಯ ಜನ ಭ್ರಮನಿರಸನಗೊಂಡಿದ್ದರು. ಹೊಸ ನಾಯಕತ್ವಕ್ಕೆ ಹಾತೊರೆಯುತ್ತಿದ್ದರು. ಆಗ ಎಂಟ್ರಿ ಕೊಟ್ಟ ಫಾತಿ ಶಾಕಾಕಿ! ಕೈಯಲ್ಲಿ ಗಡಾಫಿ ಕೊಟ್ಟಿದ್ದ ರೊಕ್ಕದ ಥೈಲಿ! 'ಬನ್ನಿ, ಹೊಸ ಸ್ವಾತಂತ್ರ್ಯ ಸಂಗ್ರಾಮ ಶುರುಮಾಡೋಣ!' ಎಂದು ಛೋಡಿದ. ಅನಕ್ಷರಸ್ಥ ಮುಗ್ಧ ಜನ. ಅವರಿಗೆ ಧರ್ಮದ ಅಫೀಮು, ದ್ವೇಷದ ಅಫೀಮುಗಳನ್ನು ಬರೋಬ್ಬರಿ ಕೊಟ್ಟ ಫಾತಿ ಶಾಕಾಕಿ, ಮಾನವ ಬಾಂಬುಗಳ ತಯಾರಿಕೆಗೆ ಕುಳಿತುಬಿಟ್ಟ.

ಗಾಜಾ ಪಟ್ಟಿಯಲ್ಲೇನು ಅಬ್ಬೇಪಾರಿಗಳಿಗೆ ಕೊರತೆಯೇ? ಸತ್ತ ಮೇಲೆ ಮನೆ ಕಡೆ, ಉಳಿಯುವ ಕುಟುಂಬದ ಕಡೆ ಗಮನಿಸಿಕೊಂಡರೆ ಸಾಕು. ಬಾಕಿ ಏನೂ ಕೇಳುವದಿಲ್ಲ ಅವರು. ಸೊಂಟಕ್ಕೆ ಬಾಂಬಿನ ಬೆಲ್ಟ್ ಕಟ್ಟಿಕೊಂಡು, 'ಅಲ್ಲಾ ಹೋ ಅಕ್ಬರ್!' ಎಂದು ಕೂಗುತ್ತ ಇಸ್ರೇಲಿಗಳ ಗುಂಪಿನ ಮೇಲೆ ಬಿದ್ದು ಸ್ಪೋಟಿಸಿಕೊಂಡುಬಿಡುತ್ತಾರೆ. ಕಮ್ಮಿ ಕಮ್ಮಿ ೧೦-೧೫ ಇಸ್ರೇಲಿ ಯಹೂದಿಗಳು ಮಟಾಷ್. ಕೆಲವೇ ಕೆಲವು ನೂರು ಡಾಲರುಗಳನ್ನು ಖರ್ಚು ಮಾಡಿದರೆ ಸಾಕು. ದೊಡ್ಡ ಪ್ರಮಾಣದ ಧಮಾಕಾ ಆಗಿಹೋಗುತ್ತದೆ. ಜಿಹಾದಿನ ಕುರ್ಬಾನಿಯ ಬಳಿಕ ೭೨ ವರ್ಜಿನ್ ಕನ್ಯೆಯರ ಸುಖ ಹುಡುಕುತ್ತ ಬಾಂಬಿನ ಬೆಂಕಿಯ ಜ್ವಾಲೆಗಳಲ್ಲಿ ಕಳೆದುಹೋಗುವ ಉಗ್ರರ ಕುರುಹು ಕೂಡ ಸಿಗುವದಿಲ್ಲ.

ಹೊಸದಾಗಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸ್ಥಾಪಿಸಿದ ಫಾತಿ ಶಾಕಾಕಿ ಕೆಲವು spectacular ಅನ್ನಿಸುವಂತಹ ಸುಯಿಸೈಡ್ ಬಾಂಬಿಂಗ್ ಕಾರ್ಯಾಚರಣೆಗಳನ್ನು ಮಾಡಿಸಿದ. ಹಲವಾರು ಬಲಿ ತೆಗೆದುಕೊಂಡ. ಲಿಬಿಯಾದ ದುರುಳ ಗಡಾಫಿ 'ಮೊಗ್ಯಾಂಬೋ ಖುಷ್ ಹುವಾ !' ಮಾದರಿಯಲ್ಲಿ ತೊಡೆ ತಟ್ಟಿಕೊಂಡು ತಟ್ಟಿಕೊಂಡು ಸಂಭ್ರಮಿಸಿದ. ವಿಕೃತ ಮನಸ್ಸು ಅವನದು. ಕೆಲವೇ ವರ್ಷಗಳ ಹಿಂದೆ ಅವನ ಉಗ್ರಗಾಮಿ ಉಪಟಳಗಳಿಂದ ಸಾಕಾಗಿ ಹೋಗಿದ್ದ ಅಂದಿನ ಅಮೇರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಸಾಹೇಬರು ಅವನ ಅರಮನೆ ಮೇಲೆ ಬಾಂಬಿನ ಮಳೆಗರೆದು ಬಂದಿದ್ದರು. ಆ ಬಾಂಬ್ ದಾಳಿಯಲ್ಲಿ ಮಗನನ್ನು ಕಳೆದುಕೊಂಡರೂ ಗಡಾಫಿ ಅದೆಲ್ಲೋ ನೆಲಮಾಳಿಗೆಯ ಪಾಯಖಾನೆಯಲಲ್ಲಿ ಬಚ್ಚಿಟ್ಟುಕೊಂಡು ಬಚಾವಾಗಿದ್ದ.

'ಇದ್ಯಾವ ಹೊಸ ಪೀಡೆ ಗಾಜಾ ಪಟ್ಟಿಗೆ ಬಂದು ವಕ್ಕರಿಸಿಕೊಂಡಿದೆ?' ಎಂದು ತಲೆಕೆಡಿಸಿಕೊಂಡವರು ಇಸ್ರೇಲಿನ ಶಿನ್-ಬೆಟ್ ಅನ್ನುವ ಆಂತರಿಕ ರಕ್ಷಣಾಸಂಸ್ಥೆಯವರು. ಮೊಸ್ಸಾದ್ ಏನಿದ್ದರೂ ಬಾಹ್ಯ ಬೇಹುಗಾರಿಕೆ ಮತ್ತು ಕಪ್ಪು ಕಾರ್ಯಾಚರಣೆಗಳ ಉಸ್ತುವಾರಿ ಮಾತ್ರ. ಆಂತರಿಕ ವಿಷಯವೆಲ್ಲವನ್ನೂ ಶಿನ್-ಬೆಟ್ ಸಂಬಾಳಿಸುತ್ತದೆ.

ಗಾಜಾ ಪಟ್ಟಿಯ ತಮ್ಮ ಮಾಹಿತಿದಾರರನ್ನು activate ಮಾಡಿದ ಶಿನ್-ಬೆಟ್ ತನಿಖಾಧಿಕಾರಿಗಳಿಗೆ ಫಾತಿ ಶಾಕಾಕಿ ಬಗ್ಗೆ ಮಾಹಿತಿ ಹನಿಹನಿಯಾಗಿ ದೊರೆಯತೊಡಗಿತು. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಗೆ ಪರೋಕ್ಷವಾಗಿ ಅಥವಾ ನೇರವಾಗಿ ಸಂಬಂಧವಿರುವ ಜನರನ್ನು ಜೊತೆಯಲ್ಲಿ ಅವರ ಗೆಳತಿಯರನ್ನು, ಹೆಂಡತಿಯರನ್ನು ಜೆರುಸಲೇಮಿನ ನೆಲಮಾಳಿಗೆ ಕಾರಾಗೃಹಗಳಿಗೆ ಎತ್ತಾಕಿಕೊಂಡು ಬಂದರು ಶಿನ್ - ಬೆಟ್ ಅಧಿಕಾರಿಗಳು. ಶಿನ್-ಬೆಟ್ ಸಂಸ್ಥೆಯ ನುರಿತ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನ ತಮ್ಮದೇ ರೀತಿಯಲ್ಲಿ ಮಾತಾಡಿಸತೊಡಗಿದಾಗ ಮೊದಲು ಏನೂ ಗೊತ್ತಿಲ್ಲ ಸಾರ್! ಎಂದು ಮೊಂಡು ಹಿಡಿದವರು ನಂತರ ಗಿಣಿಗಳಂತೆ ಹಾಡಿದ್ದರು. ಇಸ್ರೇಲಿಗಳ ತರಹತರಹದ ಚಿತ್ರಹಿಂಸೆಗಳನ್ನು ಅನುಭವಿಸುವದು ದೂರದ ಮಾತು. ಅವುಗಳ ವರ್ಣನೆ ಕೇಳಿದರೂ ಚಡ್ಡಿ ಒದ್ದೆಯಾಗಿಬಿಡುತ್ತದೆ. ಹಾಗಿರುತ್ತವೆ ಅವರ ಬಾಯಿಬಿಡಿಸುವ ವಿಧಾನಗಳು.

ಹೀಗೆ ಜೆರುಸಲೇಮ್ ಜೈಲಿನ ಕಗ್ಗತ್ತಲ ನೆಲಮಾಳಿಗೆಯಲ್ಲಿ ಶಿನ್-ಬೆಟ್ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನರಿಂದ ನುಣ್ಣಗೆ ರುಬ್ಬಿಸಿಕೊಂಡಿದ್ದ ಗಾಜಾ ಪಟ್ಟಿಯ ಅರಬರು ಫಾತಿ ಶಾಕಾಕಿ ಬಗ್ಗೆ ತಮಗೆ ಗೊತ್ತಿದ್ದ ಎಲ್ಲ ವಿವರಗಳನ್ನು ಹಂಚಿಕೊಂಡಿದ್ದರು. ಈ ಫಾತಿ ಶಾಕಾಕಿ ಆಸಾಮಿ ಲಿಬಿಯಾದ ಗಡಾಫಿ ಜೊತೆ ಮತ್ತು ಮತ್ತೊಬ್ಬ ಖದೀಮ ಸಿರಿಯಾದ ಹಫೀಜ್ ಅಲ್-ಅಸಾದ್ ಜೊತೆ ಜಕ್ಕಣಕ್ಕ ಶುರುಮಾಡಿಕೊಂಡಿದ್ದಾನೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಖಿಲಾಡಿಯಾಗಿದ್ದಾನೆ ಎಂದು ಗೊತ್ತಾದ ಕೂಡಲೇ ಶಿನ್-ಬೆಟ್ ಮತ್ತೂ ತಡ ಮಾಡಲಿಲ್ಲ. ಇಸ್ರೇಲಿನ ಬಾಹ್ಯ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಜೊತೆ ವಿವರ ಹಂಚಿಕೊಂಡರು. ಮೊಸ್ಸಾದ್ ತನ್ನ ಇತರೆ ಸಂಪರ್ಕಗಳನ್ನು ಉಪಯೋಗಿಸಿಕೊಂಡು ಫಾತಿ ಶಾಕಾಕಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿತು. ಶಿನ್-ಬೆಟ್ ಸಂಗ್ರಹಿಸಿದ್ದ ಮಾಹಿತಿ, ಮೊಸ್ಸಾದ್ ಕಲೆಹಾಕಿದ್ದ ಮಾಹಿತಿ, ಸಿಐಎ ಮತ್ತಿತರ ಫ್ರೆಂಡ್ಲಿ ಬೇಹುಗಾರಿಕೆ ಸಂಸ್ಥೆಗಳು ಕೊಟ್ಟ ಮಾಹಿತಿಯೆಲ್ಲವನ್ನೂ ಕ್ರೋಢಿಕರಿಸಿದಾಗ ಫಾತಿ ಶಾಕಾಕಿ ಬಗ್ಗೆ ಒಂದು ಫುಲ್ ಪಿಕ್ಚರ್ ಬಂತು. ಚಿತ್ರಣ ತುಂಬಾ ಖರಾಬಾಗಿತ್ತು. ಇವನನ್ನು ಹೀಗೇ ಬಿಟ್ಟರೆ ಮುಂದೆ ಕೆಲವೇ ವರ್ಷಗಳಲ್ಲಿ ಇವನು ಇಸ್ರೇಲಿಗೆ ದೊಡ್ಡ ತಲೆನೋವಾಗುತ್ತಾನೆ ಎನ್ನುವದರಲ್ಲಿ ಇಸ್ರೇಲಿನ ಹಿರಿತಲೆಗಳಿಗೆ ಯಾವುದೇ ಸಂದೇಹವಿರಲಿಲ್ಲ. ಇಂಥವನ್ನೆಲ್ಲ ಮೊಳಕೆಯಲ್ಲಿರುವಾಗಲೇ ಚಿವುಟಿಹಾಕಬೇಕು. ಅಲ್ಲಿಗೆ ಫಾತಿ ಶಾಕಾಕಿಯ ಮರಣಶಾಸನಕ್ಕೆ ಇಸ್ರೇಲಿ ಕ್ಯಾಬಿನೆಟ್ಟಿನ ಮುದ್ರೆ ಬಿದ್ದಿತ್ತು. ಇನ್ನು ಫಾತಿ ಶಾಕಾಕಿಯನ್ನು ಮೇಲೆ ಅಲ್ಲಾಹುವಿನ ಬಳಿಗೆ ಕಳಿಸುವ ಸಮಾರಂಭಕ್ಕೆ ಮುಹೂರ್ತವಿಡುವದು ಬಾಕಿ ಇತ್ತು.

ಎಂದಿನಂತೆ ಇಸ್ರೇಲಿ ಪ್ರಧಾನಿ ಸಹಿ ಹಾಕಿದ ಫಾತಿ ಶಾಕಾಕಿಯ ಮರಣಶಾಸನ ಅಂದಿನ ಮೊಸ್ಸಾದಿನ ಅರಿಭಯಂಕರ ಡೈರೆಕ್ಟರ್ ಶಾಬ್ಟೈ ಶಾವಿತ್ ಅವರ ಟೇಬಲ್ ಮೇಲೆ ಬಂದು ಬಿತ್ತು. ಅವರಿಗೆ ಅದೊಂದು ಔಪಚಾರಿಕತೆ (formality) ಅಷ್ಟೇ. ಅವರ ಏಳು ವರ್ಷದ ಅವಧಿಯಲ್ಲಿ ಅದೆಷ್ಟು ಮಂದಿ ಅರಬ್ ಉಗ್ರರಿಗೆ ಮೋಕ್ಷ ತೋರಿಸಿದ್ದರೋ ಅವರು. ಅತಿಫ್ ಬೀಸೋ ಎಂಬ ದುರುಳನನ್ನು ಪ್ಯಾರಿಸ್ ನಗರದಲ್ಲಿ ಮೊಸ್ಸಾದ್ ಗುಂಡಿಕ್ಕಿ ಕೊಂದಿತ್ತು. ಅತಿ ಮುಖ್ಯ ಉಗ್ರನಾಗಿದ್ದ ಅವನಿಗೆ ಮುಹೂರ್ತವಿಡಲು ಖುದ್ದಾಗಿ ಡೈರೆಕ್ಟರ್ ಶಾವಿತ್ ಅವರೇ ಬಾಕಿ ಹಂತಕರಂತೆ ಮಾರುವೇಷದಲ್ಲಿ ಪ್ಯಾರಿಸ್ಸಿಗೆ ಹೋಗಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಪ್ಯಾರಿಸ್ ನಗರದ ಹೃದಯಭಾಗದಲ್ಲಿ ಒಂದು ಸುಳಿವೂ ಸಿಗದಂತೆ ಅತಿಫ್ ಬೀಸೋನ ಗೇಮ್ ಬಾರಿಸಿತ್ತು ಮೊಸ್ಸಾದ್. ಫ್ರೆಂಚ್ ಸರ್ಕಾರಕ್ಕೆ ಅವನ ಹೆಣ ಎತ್ತುವದನ್ನು ಬಿಟ್ಟರೆ ಬೇರೆ ಕೆಲಸವಿರಲಿಲ್ಲ.

ಎಂದಿನಂತೆ ಫಾತಿ ಶಾಕಾಕಿಗೆ ಒಂದು ಗತಿ ಕಾಣಿಸುವ ಜವಾಬ್ದಾರಿ ವಹಿಸಿಕೊಂಡಿದ್ದು ಮೊಸ್ಸಾದಿನ ಅತಿ ಖತರ್ನಾಕ್ ಹಂತಕರ ಕಿಡೋನ್ ತಂಡ. ಅವರಿಗೆ ಬೇಕಾಗುವ ಎಲ್ಲ ಮಟ್ಟದ ಸಹಕಾರ ಬೇರೆಲ್ಲ ಸಂಸ್ಥೆಗಳಿಂದ ಸಿಗುತ್ತಿತ್ತು.

ಫಾತಿ ಶಾಕಾಕಿಗೆ ಮೊಸ್ಸಾದ್ ಮುಹೂರ್ತವಿಟ್ಟಿದ್ದು ಮಾಲ್ಟಾ ಎಂಬ ಚಿಕ್ಕ ದ್ವೀಪದಲ್ಲಿ. ಇಟಲಿ ದೇಶದ ಕೆಳಗೇ ಇದೆ ಸುಂದರ ಮಾಲ್ಟಾ ದ್ವೀಪ. ಎದುರಿನ ಕಡಲನ್ನು ದಾಟಿದರೆ ಸಿಗುತ್ತದೆ ಲಿಬಿಯಾ ದೇಶದ ಟ್ರಿಪೋಲಿ ಶಹರ. ಟ್ರಿಪೋಲಿ ಮತ್ತು ಮಾಲ್ಟಾ ನಡುವೆ ಫೆರ್ರಿ (ಹಡಗು) ಸಂಚಾರ ವ್ಯಾಪಕವಾಗಿದೆ. ಮಾಲ್ಟಾ ಒಂದು ಕೇಂದ್ರ ಹಬ್ ಇದ್ದಂತೆ. ಮಾಲ್ಟಾದಿಂದ ಎಲ್ಲಿ ಬೇಕಾದರೂ ಹೋಗಬಹುದು.

ಗಾಜಾ ಪಟ್ಟಿಯಲ್ಲಿ ಹೀಟ್ ಕೊಂಚ ಹೆಚ್ಚಾದ ಕಾರಣ ಫಾತಿ ಶಾಕಾಕಿ ಸಿರಿಯಾದ ಡಮಾಸ್ಕಸ್ಸಿಗೆ ಹಾರಿದ್ದ. ಆಗ ಅಲ್ಲಿ ಹಫೀಜ್ ಅಲ್-ಅಸಾದ್ ಇದ್ದ. ಈಗಿರುವ ಬಶೀರ್ ಅಲ್-ಅಸ್ಸಾದನ ಪಿತಾಜಿ. ಸಿರಿಯಾ ಅಂದರೆ ಸಮಸ್ತ ಅರಬ್ ಉಗ್ರರಿಗೆ ತೋಟದಪ್ಪನ ಛತ್ರ ಇದ್ದಂತೆ. ಸಿರಿಯಾದ ಅಸಾದ್ ಬಳಿ ಅವರಿಗೆ ಲಿಬಿಯಾದ ಗಡಾಫಿ, ಇರಾಕಿನ ಸದ್ದಾಮ್ ಹುಸೇನ್ ಕೊಟ್ಟಷ್ಟು ಕಾಸು ಕೊಡುವ ಹೈಸಿಯತ್ತು ಇರಲಿಲ್ಲ. ಆದರೆ ಯಾವುದೇ ಉಗ್ರರಿಗೂ ಜಾಗವಿಲ್ಲ ಎಂದು ಅವರು ಬಾಗಿಲು ಹಾಕಿರಲಿಲ್ಲ. ಬಂದ ಉಗ್ರರೆಲ್ಲರಿಗೂ ಊಟ, ವಸತಿ, ಸೂಳೆಯರನ್ನು ಒದಗಿಸುವಷ್ಟು ಕಾಸು ಮತ್ತು ಒಳ್ಳೆ ಬುದ್ಧಿಯನ್ನು ದೇವರು ಹಫೀಜ್ ಅಲ್-ಅಸಾದನಿಗೆ ಕೊಟ್ಟಿದ್ದ. ಹಾಗಾಗಿ ಅಬು ಮೂಸಾನಂತಹ ರಿಟೈರ್ಡ್ ಉಗ್ರಗಾಮಿಗಳಿಂದ ಹಿಡಿದು ಫಾತಿ ಶಕಾಕಿಯಂತಹ ಹೊಸಬರೂ ಸಹ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಗೆ ಹೋಗಿ, ಅಸಾದ್ ನ ಛತ್ರಛಾಯೆಯಲ್ಲಿ ಆತನ ತೋಟದಪ್ಪನ ಛತ್ರದಲ್ಲಿ ಝೇಂಡಾ  ಹೊಡೆದು ಕೂತಿದ್ದರು. ಸಿರಿಯಾದ  ಮುಖ್ಬಾರಾತ್ ಎಂಬ ಪರಮ ಕ್ರೂರಿ ರಕ್ಷಣಾ ಸಂಸ್ಥೆ ಅಲ್ಲಿ ನೆಲೆಸಿದ್ದ ಅರಬ್ ಉಗ್ರರಿಗೆ ತಕ್ಕ ಮಟ್ಟಿನ ರಕ್ಷಣೆ ಕೊಡುತ್ತಿತ್ತು. ಇಲ್ಲವಾದರೆ ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಬಿಟ್ಟರೆ ಎನ್ನುವ ಆತಂಕ. ಇಷ್ಟೆಲ್ಲಾ ಇದ್ದರೂ ಹಫೀಜ್ ಅಲ್-ಅಸಾದ್ ನ ಹಿರಿಯ ಮಗನನ್ನು ಕಾರ್ ಆಕ್ಸಿಡೆಂಟ್ ಒಂದರಲ್ಲಿ ಮುಗಿಸಿದ್ದು, ಮತ್ತದೇ, ಮೊಸ್ಸಾದ್ ಎಂದು ಊಹಾಪೋಹಗಳಿವೆ. ಮಗನನ್ನು ಕಳೆದುಕೊಂಡ ಅಸಾದ್ ಇಸ್ರೇಲ್ ಬಗ್ಗೆ ಮತ್ತೂ ಕ್ರುದ್ಧನಾಗಿದ್ದ. ಇದ್ದ ಬಿದ್ದ ಎಲ್ಲ ಉಗ್ರಗಾಮಿಗಳಿಗೆ ಕೆಂಪುಗಂಬಳಿಯ ಸ್ವಾಗತ ಕೋರಿದ್ದ.

ಫಾತಿ ಶಾಕಾಕಿ ಸಿರಿಯಾಗೆ ಹೋದ ಆದರೆ ಈ ಮೊದಲು ಹೇಳಿದಂತೆ ಸಿರಿಯಾದ ಕಡೆ ರೊಕ್ಕವಿರಲಿಲ್ಲ. ರೊಕ್ಕವಿಲ್ಲ ಅಂದರೆ ಇಸ್ರೇಲಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತು ಬಿಡುತ್ತವೆ. ರೊಕ್ಕ ಬೇಕು ಅಂದರೆ ಗಡಾಫಿಯೇ ಬೇಕು. ಹಾಗಾಗಿ ಒಂದಿಷ್ಟು ಫಂಡ್ ಎತ್ತಿಕೊಂಡು ಬರೋಣ ಎಂದು ಶಾಕಾಕಿ ಲಿಬಿಯಾಗೆ ಹೊರಟ. ಆಗಲೇ ಮೊಸ್ಸಾದ್  ಅವನನ್ನು ಟ್ರ್ಯಾಕ್ ಮಾಡಲು ಶುರುಮಾಡಿತ್ತು. ಶಾಕಾಕಿಯ ಅಂತಿಮ ಗೇಮ್ ಬಾರಿಸಲು ಕ್ಷಣಗಣನೆ ಶುರುವಾಗಿತ್ತು. ಅಷ್ಟೇ ಅದು ಶಾಕಾಕಿಗೆ ಗೊತ್ತಿರಲಿಲ್ಲ.

ಶಾಕಾಕಿ ಲಿಬಿಯಾಗೆ ಬಂದ. ಫಾತಿ ಶಾಕಾಕಿ ಹುಟ್ಟುಹಾಕಿದ್ದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಕಾರ್ನಾಮೆಗಳಿಂದ ಗಡಾಫಿ ಬಹಳ ಸಂತುಷ್ಟನಾಗಿದ್ದ. ಕೊಟ್ಟ ರೊಕ್ಕಕ್ಕೆ ನಿಯತ್ತಾಗಿ ಕೆಲಸ ಮಾಡಿಕೊಟ್ಟಿದ್ದ ಶಾಕಾಕಿ. ಹತ್ತಾರು ಆತ್ಮಹತ್ಯಾ ದಾಳಿಗಳಲ್ಲಿ ಹಲವಾರು ಇಸ್ರೇಲಿಗಳನ್ನು ಬರ್ಬರವಾಗಿ ಕೊಂದಿದ್ದರು ಶಾಕಾಕಿಯ ಶಿಷ್ಯರು. ಹಾಗಾಗಿ ಶಾಕಾಕಿಗೆ ಮತ್ತೊಂದಿಷ್ಟು ರೊಕ್ಕ ಕೊಡಲು ಗಡಾಫಿ ಹಿಂದೆ ಮುಂದೆ ನೋಡಲಿಲ್ಲ. ದೊಡ್ಡ ಮೊತ್ತದ ಕಾಣಿಕೆ ಕೊಟ್ಟು ಖುದಾ ಹಫೀಜ್ ಹೇಳಿ ಕಳಿಸಿದ್ದ.

ದೊಡ್ಡ ಮೊತ್ತದ ರೊಕ್ಕ ಸಿಕ್ಕಿದ್ದಕ್ಕೆ ಸಂತುಷ್ಟನಾದ ಫಾತಿ ಶಾಕಾಕಿ ತಡ ಮಾಡಲಿಲ್ಲ. ಟ್ರಿಪೋಲಿ ಶಹರಕ್ಕೆ ಬಂದವನೇ ಮಾಲ್ಟಾಗೆ ಹೋಗುವ ಫೆರ್ರಿ (ಹಡಗು) ಹತ್ತಿಬಿಟ್ಟ. ಸಮುದ್ರ ಶಾಂತವಾಗಿತ್ತು. ಅದರ ಮೌನ ಕರಾಳವಾಗಿತ್ತು. ಮುಂಬರುವ ಅನಾಹುತದ ಯಾವ ಸುಳಿವೂ ಇರಲಿಲ್ಲ ಶಾಕಾಕಿಗೆ.

ಮಾಲ್ಟಾಗೆ ಬಂದಿಳಿದ ಶಾಕಾಕಿ ಎಂದಿನಂತೆ ತನ್ನ ರೆಗ್ಯುಲರ್ ಹೋಟೆಲ್ಲಿಗೆ ಹೋದ. ಕೋಣೆಯಲ್ಲಿ ಸ್ವಲ್ಪ ಫ್ರೆಶ್ ಆದ ನಂತರ ಮಾಲ್ಟಾ ಶಹರವನ್ನು ಕೊಂಚ ಸುತ್ತಾಡಿ, ಮಕ್ಕಳಿಗೆ ಅಂಗಿ ಚಡ್ಡಿ ಶಾಪಿಂಗ್ ಮಾಡೋಣ ಅಂತ ಮಾಲ್ಟಾದ ರಸ್ತೆ ಗುಂಟ ನಡೆಯತೊಡಗಿದ. ಅವನು ಅದೆಷ್ಟು ಬಾರಿ ಆ ರಸ್ತೆಗಳ ಮೇಲೆ ಓಡಾಡಿದ್ದನೋ.

ಮೊಸ್ಸಾದಿನ ಕಿಡೋನ್ ಹಂತಕರು ಮೋಟಾರ್ ಸೈಕಲ್ ಮೇಲೆ ಕಾದಿದ್ದರು. ಬೇರೊಂದಿಷ್ಟು ಜನ ಮೊಸ್ಸಾದಿನ ಬೇಹುಗಾರರು ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಿದ್ದರು. ಮಾಲ್ಟಾದಲ್ಲಿ ನೆರೆದಿದ್ದ ಹತ್ತಾರು ಮೊಸ್ಸಾದ್ ವೃತ್ತಿಪರರ ಖಾಸಗಿ ರೇಡಿಯೋ ಜಾಲದಲ್ಲಿ ಮಾಹಿತಿಗಳು ಸರಸರನೆ ವಿನಿಮಯವಾಗಿ ಮೋಟಾರ್ ಸೈಕಲ್ ಮೇಲೆ ರೊಂಯ್ ರೊಂಯ್ ಅಂತ ಆಕ್ಸಿಲರೇಟರ್ ತಿರುವುತ್ತ ಕುಳಿತಿದ್ದ ಕಿಡೊನ್ ಹಂತಕರಿಗೆ ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯ ಮಾಹಿತಿ ತಕ್ಷಣ ತಲುಪುತ್ತಿತ್ತು.

ಫಾತಿ ಶಾಕಾಕಿ ಆಯಕಟ್ಟಿನ ಜಾಗಕ್ಕೆ ಬಂದು ತಲುಪಿದ ಅನ್ನುವ ಮಾಹಿತಿ ಕಿಡೊನ್ ಹಂತಕರ ಕಿವಿಗಳಲ್ಲಿ ಅಡಗಿದ್ದ ear piece ಗಳಲ್ಲಿ ಕೇಳಿಬಂದಿದ್ದೇ ಕೊನೆ. ಮುಂದೆ ಕೆಲ ನಿಮಿಷ ಏನೂ ಕೇಳಲಿಲ್ಲ. ಸುತ್ತುಮುತ್ತಲಿನ ಜನರು ಗಾಭರಿಗೊಳ್ಳಲಿ, distract ಆಗಲಿ ಅಂತಲೇ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ಮೋಟಾರ್ ಸೈಕಲ್ ಮೇಲಿದ್ದ ಹಂತಕರು ಅತಿ ವೇಗದಿಂದ ನುಗ್ಗಿ ಬಂದರು. ಮೋಟಾರ್ ಸೈಕಲ್ ಶಬ್ದ ವಿಪರೀತ ಕರ್ಕಶವಾಗಿತ್ತು. ಜನರು ಗಲಿಬಿಲಿಗೊಂಡರು. ಇದ್ಯಾರು ಇಂತಹ ಶಾಂತ ವಾತಾವರಣದಲ್ಲಿ ಇಂತಹ ಕರ್ಕಶ ಮೋಟಾರ್ ಸೈಕಲ್ ಮೇಲೆ ಬಂದು ರಸಭಂಗ ಮಾಡುತ್ತಿದ್ದಾರೆ ಅಂದುಕೊಂಡನೇನೋ ಫಾತಿ ಶಾಕಾಕಿ. ಯಾವನಿಗೆ ಗೊತ್ತು?

ಶಾಕಾಕಿಯನ್ನು ಕ್ಷಣಮಾತ್ರದಲ್ಲಿ ಸಮೀಪಿಸಿದರು ಹಂತಕರು. ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಹಿಂಬದಿಯ ಸವಾರ, ನುರಿತ ಹಂತಕ, ಮೋಟಾರ್ ಸೈಕಲ್ ಆಪಾಟಿ ವೇಗದಲ್ಲಿ ಹೋಗುತ್ತಿದ್ದರೂ, ಅರ್ಧಚಂದ್ರಾಕೃತಿಯಲ್ಲಿ ಸರ್ರ್ ಅಂತ ತಿರುಗಿದವನೇ ಒಂದು ಇಡೀ ಮ್ಯಾಗಜಿನ್ ಗುಂಡುಗಳನ್ನು ಫಾತಿ ಶಾಕಾಕಿಯ ಶರೀರದೊಳಗೆ ನುಗ್ಗಿಸಿದ್ದ. ಮೊದಲೇ ಸೈಲೆನ್ಸರ್ ಮಾರ್ಪಡಿಸಿದ್ದ ಮೋಟಾರ್ ಸೈಕಲ್. ಕಿವಿ ತಮ್ಮಟೆ ಹರಿದುಹೋಗುವಂತಹ ಅದರ ಶಬ್ದ. ಅಂತದ್ದರಲ್ಲಿ ಸೈಲೆನ್ಸರ್ ಹಾಕಿದ್ದ 'ಚಿಕ್ಕ ಆಯುಧಗಳ ವೈಢೂರ್ಯ' (jewel of small arms) ಅನ್ನಿಸಿಕೊಂಡಿರುವ ಬೆರೆಟ್ಟಾ ಇಟಾಲಿಯನ್ ಮೇಡ್ ಪಿಸ್ತೂಲಿನಿಂದ ಹಾರಿದ ಗುಂಡುಗಳು ಫಾತಿ ಶಾಕಾಕಿಯ ದೇಹವನ್ನು ಛಲ್ಲಿ ಛಲ್ಲಿ ಮಾಡಿಹಾಕಿದ್ದವು. ಶಾಕಾಕಿಯ ದೇಹ ಮಾಲ್ಟಾದ ರಸ್ತೆಯ ಫುಟ್ ಪಾತ್ ಮೇಲೆ ಬೀಳುವಷ್ಟರಲ್ಲಿ ಮೊಸ್ಸಾದಿನ ಹಂತಕರು ಚಲಾಯಿಸುತ್ತಿದ್ದ ಬೈಕ್ ಅಲ್ಲಿಂದ ಮಾಯವಾಗಿತ್ತು.

ಹೀಗೆ ಕ್ಷಣಾರ್ಧದಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮತ್ತು ಪ್ರಥಮ ಹಿರಿತಲೆ  ಫಾತಿ ಶಾಕಾಕಿ ಖಲಾಸ್! ಹಿಮ್ಮಡದಲ್ಲಿ ಚುಚ್ಚಿ ಇನ್ನಿಲ್ಲದ ಉಪದ್ರವ ಕೊಡುತ್ತಿದ್ದ ಮುಳ್ಳನ್ನು ಮುಳ್ಳಿನಿಂದಲೇ ತೆಗೆದೆಸೆದಾಗ ಆಗುವ ನಿರುಮ್ಮಳ ನೆಮ್ಮದಿ ಇಸ್ರೇಲಿಗೆ.

ಹೀಗೆ ಮಾಲ್ಟಾ ಎಂಬ ಪರದೇಶದಲ್ಲಿ ಫಾತಿ ಶಾಕಾಕಿ ಇಸ್ರೇಲಿಗಳ ಗುಂಡು ತಿಂದು ರಸ್ತೆ ಬದಿಯಲ್ಲಿ ನಾಯಿಯಂತೆ ಸತ್ತಿದ್ದೇ ಸತ್ತಿದ್ದು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಸಂಘಟನೆ ಬೇವರ್ಸಿಯಾಗಿಬಿಟ್ಟಿತು. ಹೊಸ ನಾಯಕನೇ ಇಲ್ಲ. ಕಾರಣವೇನೋ ಗೊತ್ತಿಲ್ಲ. ಒಳಮುಚ್ಚುಗ ಶಾಕಾಕಿ ಎರಡನೇ ಹಂತದ ನಾಯಕರನ್ನೂ ತಯಾರು ಮಾಡಿರಲಿಲ್ಲ. ಎಲ್ಲವನ್ನೂ ತನ್ನ ಹತೋಟಿಯಲ್ಲೇ ಇಟ್ಟುಕೊಂಡು ರಿಮೋಟ್ ಕಂಟ್ರೋಲ್ ಮೂಲಕ ಸಂಬಾಳಿಸುತ್ತಿದ್ದ. ಈಗ ಅವನಿಲ್ಲದೆ ಅವನ ಸಂಘಟನೆ ಅನಾಥವಾಗಿತ್ತು.

ಸಂಘಟನೆಯ ನಾಯಕತ್ವವನ್ನು ವಹಿಸಿಕೊಳ್ಳುವ ಕಾಬೀಲಿಯತ್ತು ಇರುವ ಜನರು ಯಾರೂ ಗಾಜಾ ಪಟ್ಟಿಯಲ್ಲಿ ಇರಲಿಲ್ಲ. ಇಡೀ ಮಧ್ಯಪ್ರಾಚ್ಯದಲ್ಲೇ ಇರಲಿಲ್ಲ. ಆಗಲೇ ಎಂಟ್ರಿ ಕೊಟ್ಟ ನಮ್ಮ ಕಥಾ ನಾಯಕ ರಮದಾನ್ ಶಾಲ್ಲಾ.

ಇಸ್ರೇಲ್ ಫಾತಿ ಶಾಕಾಕಿಯನ್ನು ಮಾಲ್ಟಾದಲ್ಲಿ ಉಡಾಯಿಸಿದ್ದು ೧೯೯೫ ರಲ್ಲಿ. ಆಗ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ರಮದಾನ್ ಶಾಲ್ಲಾ ಪಾರ್ಟ್ ಟೈಮ್ ಮಾಸ್ತರಿಕೆ ಮಾಡಿಕೊಂಡಿದ್ದ. ಪೂರ್ತಿ ಪ್ರಮಾಣದ ಪ್ರೊಫೆಸರ್ ಆಗಿದ್ದ ಸಾಮಿ ಆಲ್-ಅರಿಯನ್ ಅವನಿಗೆ ಗುರುವಿದ್ದಂತೆ.

ದೂರದ ಅಮೆರಿಕಾದಲ್ಲಿದ್ದರೂ ಪ್ಯಾಲೆಸ್ಟೈನ್ ಇಸ್ಲಾಮಿಕ್ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈ ಇಬ್ಬರು ಪ್ರೊಫೆಸರ್ ಮಹಾಶಯರು ತಕ್ಷಣ ಫೀಲ್ಡಿಗೆ ಇಳಿದರು. ಆಗಲೇ ಅಮೇರಿಕಾದ FBI ಜೊತೆ ತಿಕ್ಕಾಟಕ್ಕೆ ಇಳಿದಿದ್ದ ಸಾಮಿ ಅಲ್ - ಅರಿಯನ್ ರಮದಾನ್ ಶಾಲ್ಲಾನನ್ನು ಸಿರಿಯಾದ ಡಮಾಸ್ಕಸ್ ನಗರಕ್ಕೆ ಕಳಿಸಿಬಿಟ್ಟ. ಪ್ಯಾಲೆಸ್ಟೈನ್ ಉಗ್ರರ ಸಮುದಾಯದಲ್ಲಿ ಏನೇನು ಮಾತುಕತೆಗಳು ಆದವೋ, ಏನೇನು ಸಮೀಕರಣಗಳು ವರ್ಕೌಟ್ ಆದವೋ, ಗಡಾಫಿಯಂತಹ ಯಾವ್ಯಾವ ತಲೆತಿರುಕರು ತಮ್ಮ ತಮ್ಮ ಆಶೀರ್ವಾದ ಮಾಡಿದರೋ, ಒಟ್ಟಿನಲ್ಲಿ ಫ್ಲೋರಿಡಾ ಬಿಟ್ಟು ಉಟ್ಟ ಬಟ್ಟೆಯಲ್ಲಿ ಸಿರಿಯಾಕ್ಕೆ ಬಂದಿಳಿದಿದ್ದ ರಮದಾನ್ ಶಾಲ್ಲಾನಿಗೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕ ಅಂತ ಪಟ್ಟಾಭಿಷೇಕ ಮಾಡಲಾಯಿತು.

ಪಟ್ಟಾಭಿಷೇಕ ಮಾಡಿಸಿಕೊಂಡ ರಮದಾನ್ ಶಾಲ್ಲಾ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಅನಾಥ ಸಂಘಟನೆಯ ನಾಯಕತ್ವವನ್ನೇನೋ ವಹಿಸಿಕೊಂಡ. ಆದರೆ ರೊಕ್ಕವಿದ್ದ ತಿಜೋರಿಯ ಚಾವಿ ಫಾತಿ ಶಾಕಾಕಿಯ ಜೊತೆಗೇ ಅಲ್ಲಾಹುವಿನ ಪಾದ ಸೇರಿಕೊಂಡಿದೆ ಎಂದು ತಡವಾಗಿ ಗೊತ್ತಾಯಿತು.

ಯಾರನ್ನೂ ನಂಬದ ಹಿಂದಿನ ನಾಯಕ ಫಾತಿ ಶಾಕಾಕಿ ಅಷ್ಟೆಲ್ಲ ರೊಕ್ಕವಿದ್ದರೂ ಅದರ ವಿವರಗಳನ್ನು ಎಲ್ಲೂ ಕ್ರಮಬದ್ಧವಾಗಿ ರೆಕಾರ್ಡ್ ಮಾಡಿಟ್ಟಿರಲಿಲ್ಲ. ಅಲ್ಲಿಗೆ ಗಡಾಫಿ ಕೊಟ್ಟಿದ್ದ ಹಲವಾರು ಮಿಲಿಯನ್ ಡಾಲರುಗಳಿಗೆ, ಅಮೇರಿಕಾದ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಬೇಡಿದ್ದ ರೊಕ್ಕಕ್ಕೆ, ಇತರೆ ಅರಬ್ ಸೇಠು ಜನ ಕೊಟ್ಟಿದ್ದ ರೊಕ್ಕಕ್ಕೆ ಎಲ್ಲ ಶಿವಾಯ ನಮಃ! ರಮದಾನ್ ಶಾಲ್ಲಾ ಹುಚ್ಚನಂತಾಗಿ ತಲೆ ತಲೆ ಚಚ್ಚಿಕೊಂಡ. ಅದರಲ್ಲೂ ಅವನು ಬ್ಯಾಂಕಿಂಗ್ ಪಾಠ ಮಾಡುವ ಮಾಸ್ತರ್ ಬೇರೆ. ಇಲ್ಲಿ ನೋಡಿದರೆ ಸಂಘಟನೆಯ ಬ್ಯಾಂಕಿಂಗ್ ವಿವರಗಳೇ ಇಲ್ಲ. ಅವೆಲ್ಲ ಫಾತಿ ಶಾಕಾಕಿಯೊಂದಿಗೇ ಶಹೀದ್ ಆಗಿಬಿಟ್ಟಿವೆ. ಹೊಸ ಸಂಘಟನೆಗೆ ದೊಡ್ಡ ಮಟ್ಟದ ಬಾಲಗ್ರಹದ ಪೀಡೆ.

ಫಾತಿ ಶಾಕಾಕಿ ಸತ್ತ. ಸಾಯುವಾಗ ರೊಕ್ಕದ ಮೂಲಗಳನ್ನೆಲ್ಲ ಒಣಗಿಸಿಯೇ ಸತ್ತಿದ್ದ. ಆರ್ಥಿಕ ಮುಗ್ಗಟ್ಟಿನ ಆ ಹೊಡೆತದಿಂದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಮುಂದೆ ಚೇತರಿಸಿಕೊಳ್ಳಲೇ ಇಲ್ಲ. ಇತ್ತಕಡೆ ಅಮೇರಿಕಾದಲ್ಲಿ ಸಾಮಿ ಅಲ್-ಅರಿಯನ್ ಅಬ್ಬೇಪಾರಿಯಾಗಿ ಕುವೈತ್ ದೇಶಕ್ಕೋ, ಕತಾರ್ ದೇಶಕ್ಕೋ ಗಡಿಪಾರು ಮಾಡಲ್ಪಟ್ಟ. ಅಲ್ಲಿಗೆ ಅಮೇರಿಕಾದ ಮಸೀದಿಗಳಿಂದ ಬರುತ್ತಿದ್ದ ಅಷ್ಟಿಟ್ಟು ಕಾಸು ಕೂಡ ಒಣಗಿತು.

ಆದರೂ ಏನೇನೋ ಮಾಡಿ ರಮದಾನ್ ಶಾಲ್ಲಾ ಸಂಘಟನೆಯನ್ನು ನಡೆಸಿಕೊಂಡು ಬಂದಿದ್ದ. ವರ್ಷಕ್ಕೆ ಒಂದೆರೆಡು ಬಾರಿ ಗಾಜಾ ಪಟ್ಟಿಯಿಂದ ಇಸ್ರೇಲ್ ಒಳಗೆ ಕತ್ಯುಷಾ ರಾಕೆಟ್ ಹಾರಿಸಿ ಉಪಟಳ ಕೊಟ್ಟು, ಕೊಂಚ ಪ್ರೆಸ್ ಕವರೇಜ್ ಗಳಿಸಿ ಸುದ್ದಿಯಲ್ಲಿರುತ್ತಿದ್ದ. ಆದರೆ ತಾನು ಮಾತ್ರ ತೋಟದಪ್ಪನ ಛತ್ರ ಅಂದರೆ ಸಿರಿಯಾದಲ್ಲಿ ಇರುತ್ತಿದ್ದ. ಅಸಾದ್ ತಕ್ಕಮಟ್ಟಿನ ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದ. ಮತ್ತೆ ಇಸ್ರೇಲ್ ಕೂಡ priority ಮೇಲೆ ಉಗ್ರರ ಗೇಮ್ ಬಾರಿಸುತ್ತದೆ. ಎಲ್ಲ ಚಿಳ್ಳೆ ಪಿಳ್ಳೆ ಜನರ ಗೇಮ್ ಬಾರಿಸುತ್ತ ಹೋಗಲು ಮೊಸ್ಸಾದ್ ತನ್ನ ಲಿಮಿಟೆಡ್ ಸಂಪನ್ಮೂಲಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ. ಹಾಗಾಗಿ ರಮದಾನ್ ಶಾಲ್ಲಾನ ಗೇಮ್ ಬಾರಿಸಿರಲಿಲ್ಲ. ಆ ಮಟ್ಟದ ಕುಖ್ಯಾತಿಗೆ ಅವನೂ ಏರಿರಲಿಲ್ಲ.

ಮೊನ್ನಿತ್ತಲಾಗೆ ಏನೋ ಆರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗೆಂದು ಪಕ್ಕದ ದೇಶ ಲೆಬನಾನಿನ ರಾಜಧಾನಿ ಬಿರೂಟಿನ ಆಸ್ಪತ್ರೆಗೆ ರಹಸ್ಯವಾಗಿ ದಾಖಲಾಗಿದ್ದಾನೆ. ಇಷ್ಟಕ್ಕೂ ಈ ಹೆದರುಪುಕ್ಕ ಪುಣ್ಯಾತ್ಮ ಸಿರಿಯಾದ ತೋಟದಪ್ಪನ ಛತ್ರ ಬಿಟ್ಟು ಬಿರೂಟಿಗೆ ಯಾಕೆ ಬಂದ !!?? ಈಗ ಏಳೆಂಟು ವರ್ಷಗಳಿಂದ ಸಿರಿಯಾದಲ್ಲಿ ಅಂತರ್ಯುದ್ಧ ಶುರುವಾದಾಗಿನಿಂದ ಪರಿಸ್ಥಿತಿ ತುಂಬಾ ಹದೆಗೆಟ್ಟು ಹೋಗಿದೆ. ಬಷೀರ್ ಅಲ್-ಅಸಾದನಿಗೆ ತನ್ನನ್ನು ತಾನು ಕಾಪಾಡಿಕೊಂಡರೆ ಸಾಕಾಗಿದೆ. ಪೌರಾಡಳಿತ ಮತ್ತು ನಗರ ವ್ಯವಸ್ಥೆ ಪೂರ್ತಿ ಹಳ್ಳಹಿಡಿದು ಇಡೀ ಸಿರಿಯಾ ಒಂದು ದೊಡ್ಡ ಕೊಳಗೇರಿ ಆಗಿದೆ. ಹಾಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಒಳ್ಳೆ ಚಿಕಿತ್ಸೆ ಸಿಗುವುದು ಅಷ್ಟರಲ್ಲೇ ಇದೆ. ರೊಕ್ಕ ಕೊಟ್ಟರೂ ಅಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲ, ಔಷಧಗಳೂ ಇಲ್ಲ. ಹೀಗಿರುವಾಗಲೇ ರಮದಾನ್ ಶಾಲ್ಲಾನ ಆರೋಗ್ಯ ಬಿಗಡಾಯಿಸಿದೆ. ರಿಸ್ಕ್ ತೆಗೆದುಕೊಂಡು ಹೇಗೋ ಮಾಡಿ ಪಕ್ಕದ ಬಿರೂಟಿಗೆ ಬಂದಿದ್ದಾನೆ. ಆಪರೇಷನ್ ಥೀಯೇಟರ್ ಒಳಗೆ ಹೋಗುವಾಗ ಇದ್ದ ಪ್ರಜ್ಞೆ ನಂತರ ವಾಪಸ್ ಬಂದಿಲ್ಲ. ಕೋಮಾಗೆ ಜಾರಿದ್ದಾನೆ. ವಿಷಪ್ರಾಶನದಿಂದ ವಾಪಸ್ ತಿರುಗಿ ಬರಲಾರದಂತಹ ಕೋಮಾಕ್ಕೆ ಕಳಿಸಲಾಗಿದೆ ಅಂತ ಗುಸುಗುಸು.

ರಮದಾನ್ ಶಾಲ್ಲಾನಂತಹ ಚಿಲ್ಟು (insignificant) ಉಗ್ರಗಾಮಿಯ ಗೇಮನ್ನು ಮೊಸ್ಸಾದ್ ಖುದ್ದಾಗಿ ಬಾರಿಸಿರಲಿಕ್ಕಿಲ್ಲ. ಬಿರೂಟಿನಲ್ಲಿ ಕಾಸು ಕೊಟ್ಟರೆ ಎಂತಹ ಕೆಲಸವನ್ನು ಬೇಕಾದರೂ ಮಾಡಿಕೊಡಬಲ್ಲ ಭೂಗತಲೋಕದ ಭಾಡಿಗೆ ಜನರನ್ನು  (mercenary) ಬಿಟ್ಟು ರಮದಾನ್ ಶಾಲ್ಲಾನ ಕೇಸ್ ಖತಂ ಮಾಡಿದೆ ಅಂತಲೂ ಒಂದು ಸುದ್ದಿ ಮಧ್ಯಪ್ರಾಚ್ಯದ ಪತ್ರಿಕೆಗಳಲ್ಲಿ ಹರಿದಾಡುತ್ತಿದೆ. ಇಸ್ಲಾಮಿಕ್ ಜಿಹಾದ್ ಮಾತ್ರ 'ನಮ್ಮ ಸಾಹೇಬರು ಗುಣಮುಖರಾಗುತ್ತಿದ್ದಾರೆ. ಚಿಂತಿಸುವ ಕಾರಣವಿಲ್ಲ,' ಎಂದು ಒಣ ಒಣ ಪತ್ರಿಕಾಹೇಳಿಕೆಗಳನ್ನು ಬಿಡುಗಡೆ ಮಾಡಿ ರಮದಾನ್ ಶಾಲ್ಲಾನ ನಿಜ ಸ್ಥಿತಿಯನ್ನು obfuscate ಮಾಡಿ, ರಮದಾನ್ ಶಾಲ್ಲಾನ ಖೇಲ್ ಖತಂ ಆಗಿರಬಹುದೇ ಎನ್ನುವ ಸಂದೇಹವನ್ನು deflect ಮಾಡುತ್ತಿದೆ.

ಒಟ್ಟಿನಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆ ಮತ್ತೊಮ್ಮೆ ಹೊಸ ನಾಯಕನನ್ನು ಹುಡುಕಿಕೊಳ್ಳಬೇಕಾಗಿದೆ. ಅಮೇರಿಕಾದಿಂದ ಗಡಿಪಾರಾಗಿ ಅಲ್ಲೆಲ್ಲೋ ಕುವೈತಿನಲ್ಲೋ ಕತಾರಿನಲ್ಲೋ ಕುಳಿತಿರುವ ಮಾಜಿ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಬಂದು ಜುಗಾಡ್ ಮಾಡುವನಿದ್ದಾನೋ ಅಥವಾ ಇತರೆ ಅನೇಕ  ಚುಲ್ಟು ಪುಲ್ಟು ಸಂಘಟನೆಗಳಂತೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಕೂಡ 'ಯಾ ಅಲ್ಲಾ!' ಎಂದು ಒಂದು ಆಖ್ರಿ ಚೀಕ್ ಹೊಡೆದು ಗೋಣು ಚಲ್ಲಿ ಶಿವಾಯ ನಮಃ ಆಗಲಿದೆಯೋ? ಕಾದು ನೋಡಬೇಕು!

ಇಸ್ರೇಲೇ ರಹಸ್ಯ ಕಾರ್ಯಾಚರಣೆ ಮಾಡಿ ರಮದಾನ್ ಶಾಲ್ಲಾನನ್ನು ಕೋಮಾಕ್ಕೆ ತಳ್ಳಿದ್ದೇ ಹೌದಾದರೆ ಅದನ್ನು ಹೇಗೆ ಸಾಧಿಸಿತು? ಈ ಪ್ರಶ್ನೆಗೆ ಉತ್ತರ ಈಗಂತೂ ಇಲ್ಲ. ಚರಿತ್ರೆ ಏನಾದರೂ ಪಾಠವಾದರೆ (If history is any lesson), ಇಸ್ರೇಲ್ ಈ ಹಿಂದೆ ೧೯೭೦ ರ  ದಶಕದಲ್ಲಿ ವಾಡಿ ಹದ್ದಾದ್ ಎಂಬ ಖತರ್ನಾಕ್ ಉಗ್ರಗಾಮಿಯನ್ನು ಕಂಡುಹಿಡಿಯಲಾಗದ ವಿಷಬೆರೆತ ಪರಮ ದುಬಾರಿ ಬೆಲ್ಜಿಯನ್ ಚಾಕಲೇಟ್ ಮೂಲಕ ವಿಷಪ್ರಾಶನ ಮಾಡಿಸಿ, ಆ ದುರುಳ ಪ್ಯಾರಿಸ್ಸಿನ ದವಾಖಾನೆಯೊಂದರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಸಾಯುವಂತೆ ಮಾಡಿತ್ತು. ಚಾಕಲೇಟ್ ಪ್ರಿಯನಾಗಿದ್ದ ತಿಂಡಿಪೋತ ವಾಡಿ ಹದ್ದಾದ್ ತನ್ನ ಪ್ರೀತಿಯ ಬೆಲ್ಜಿಯನ್ ಚಾಕ್ಲೆಟ್ ಮೆದ್ದು ಗೊಟಕ್ ಅಂದಿದ್ದ. ೨೦೦೪ ರಲ್ಲಿ ಯಾಸಿರ್ ಅರಾಫತ್ ಕೂಡ ನಿಗೂಢವಾಗಿ ಕಂಡುಹಿಡಿಯಲಾಗದ ಬೇನೆ ಬಂದು ಸತ್ತರು. ಅವರನ್ನೂ ಸಹ ವಿಷ ಹಾಕಿ ಕೊಲ್ಲಲಾಯಿತು ಅನ್ನುವ ಗುಸುಗುಸು ಸುದ್ದಿ ಇಂಟರ್ನೆಟ್ ಮೇಲೆ ಹರಿದಾಡುತ್ತಿದೆ. 

Sunday, April 08, 2018

Dispassion Vs Depression

In one of his discourses, Swami Anubhavanandaji very cleverly explained the subtle difference between dispassion (ವೈರಾಗ್ಯ) and depression (ಖಿನ್ನತೆ).

Dispassion =  real detachment from the word with wisdom

Depression = apparent detachment from the world without wisdom (or with ignorance)

I think this gives the best way to evaluate our own condition when we feel we are detached from the world. Make sure it is not a case of sour grape syndrome. It is easy to feel detached or show that you are detached from things that you could not or did not get.

They say, you are really free when you have nothing to lose.

Another saying that comes to mind is, if you want to determine what truly is your possession, check what remains with you after you have lost everything. (Ans: Knowledge).

Yoga Vasishtha (ಯೋಗ ವಾಸಿಷ್ಠ) is one of the best books to cultivate real dispassion. It is not a book on Vedanta (i.e. Upanishads) but nevertheless regarded as one of the highest books of Advaita school. It is placed at the same level as Mandukya Upanishad and commentaries on Mandukya upanishad. These two books are the two highest summits of Advaita Vedanta.

Mythology says that sage Vasishta preached dispassion to lord Rama when Rama was confused and that became the book Yoga Vasishta. Scholars say it belongs to Kashmir shaivisam.

Swami Venkateshanada has translated this treasure to English. It is one of the best books if you have read and prepared yourself by going through foundational books of Advaita such as Viveka choodamani, Atmabodha, Aparokshanubhuti etc. by Shankarachyara and others. Even otherwise, you may come to appreciate and benefit from it very much if you are blessed with grace to understand it.

A shorter version of Yoga Vasishta called Yoga Vasishta Sara is a good pocket book for frequent reference.

Cheers!