Saturday, July 30, 2016

ಆತ್ಮಹತ್ಯೆ...ಒಂದು ಜಿಜ್ಞಾಸೆ

'ಆತ್ಮಕ್ಕೆ ಸಾವಿಲ್ಲ. ಸಾವೇನಿದ್ದರೂ ಅದು ದೇಹಕ್ಕೆ ಮಾತ್ರ,' ಅಂತ ಸಾರಿದ ಸನಾತನ ಸಂಸ್ಕೃತಿಯ ಶಬ್ದ ಭಂಡಾರದಲ್ಲೇ 'ಆತ್ಮಹತ್ಯೆ' ಎಂಬ ಶಬ್ದದ ಉದ್ಭವ ಹೇಗಾಯಿತು ಮತ್ತು ಉಪಯೋಗ ಹೇಗೆ ಶುರುವಾಯಿತು?

ಹೀಗೆ ಮೇಲಿನಂತೆ ಒಂದು ಪ್ರಶ್ನೆ ಫೇಸ್ಬುಕ್ ಮೇಲೆ ಕೇಳಿದ್ದೆ.

ಪಂಡಿತ  ತಿರುಮಲೇಶ್ವರ ಭಟ್ಟರು ಕೆಳಗಿನಂತೆ ಉತ್ತರಿಸಿದರು:

ಇಲ್ಲಿ ಎರಡು ರೀತಿಯ ಆತ್ಮನನ್ನು ಶಾಸ್ತ್ರಗಳು ತಿಳಿಸಿದೆ. 
೧) ಜನ್ಮ ಮರಣ ಇಲ್ಲದ ಆತ್ಮ
೨) ಶರೀರವೇ ಆತ್ಮ ಎಂದು ತಿಳಿಯುವದು. ಇದನ್ನು ಜೀವಾತ್ಮ ಎಂದೂ ಕರೆಯುತ್ತಾರೆ. ಆದ್ದರಿಂದ ಶರೀರವನ್ನು ಅವಲಂಬಿಸಿ ಜನ್ಮ ಮರಣ ವ್ಯವಸ್ಥೆ. 

ಇನ್ನು ನಿಮ್ಮ ಪ್ರಶ್ನೆಯಾದ ಆತ್ಮ ಹತ್ಯೆಯೂ ಎರಡು ವಿಧ. 
೧) ಶರೀರಸ್ಥನಾದ ಆತ್ಮನನ್ನು (ಜೀವಾತ್ಮನನ್ನು) ಅವಿಧಿಯಾಗಿ ಹೊರಹಾಕಿದರೆ ಅದು ಆತ್ಮಹತ್ಯೆ. ಆದರೆ ವಿಧಿ ಪೂರ್ವಕ ಹಾಕಿದರೆ ಅದು ಆತ್ಮಹತ್ಯೆ ಆಗಲಾರದು. (ವಿಧಿಯನ್ನು ಇಲ್ಲಿ ತಿಳಿಸಲು ಸಾಧ್ಯವಿಲ್ಲ ) ಇದು ಲೌಕಿಕ ಆತ್ಮಹತ್ಯೆ. 
೨) ಯಾರು ಶುದ್ಧ ಆತ್ಮನನ್ನು ಅರಿಯದೆ ಸಾಯುತ್ತಾರೋ ಅದು ಕೂಡ ಆತ್ಮಹತ್ಯೆ. ಇದು ಪರಮಾರ್ಥ ರೂಪದ್ದು.

ಈ ಮಾಹಿತಿಯ ಮೂಲ ಯಾವದು ಅಂದು ಕೇಳಿದಾಗ ಪಂಡಿತರು ಉತ್ತರಿಸಿದ್ದು:

ಉಪನಿಷತ್ತುಗಳು. 

೨ನೇ ಆತ್ಮಹತ್ಯೆ ವಿಚಾರ ಈಶಾವಾಸ್ಯ ಉಪನಿಷತ್ತಿನ ಶಂಕರ ಭಾಷ್ಯದಲ್ಲಿ ಇದೆ. ೩ನೇ ಮಂತ್ರ. 
೧ನೇ ಆತ್ಮಹತ್ಯೆ ಲೋಕಸಿದ್ಧ.

Wednesday, July 27, 2016

Docs, tetracycline and some memories..

Penned after seeing this picture on Facebook

 

I also request doctors to listen to patients with an open mind. Some patients are sometimes far more well read than the doctors treating them.

I would like to give an example. In 1970s, tetracycline was the antibiotics of choice. For whatever reasons, soon after taking tetracycline, teeth would discolor and turn violet-tinged black. Nobody knew why. Hardly anybody correlated discoloring with tetracycline. At least not in our small town Dharwad.

My father, who is not a medical doctor, but a voracious reader had read about the side effects of tetracycline in some American book or periodical which he typically got from his returning NRI friends. What was not known to Indian doctors about the side effects of tetracycline was already known in the west and they had started to moderate its usage or stop it.

But in India, it was prescribed left and right. Whole generations of people had their teeth discolored permanently. Thankfully we were very young and had only our baby teeth discolored.

Sometimes doctors and other professionals can be so stubborn and closed minded that even when my father waved the books/magazines that stated side effects of tetracycline in front of their haughty faces, medical professionals, many of whom were his good friends, were not willing to listen or be open to the possibility because they thought they knew everything and a non-medical professional like my dad could not tell them anything that they did not know! Even the books/periodicals referenced by a layman were not palatable despite they being reputed publications.

This was was not the only case. There were a couple of other instances as well when my dad's explanations proved right. Not many doctors got books from the USA and read them. Their knowledge of latest medications was limited to what their medical representative told them or rather conned them to believe.

Hello, wake up and smell coffee. Your medical knowledge or for that matter any other knowledge also needs to be updated regularly. And for heaven's sake don't think you know everything and layman knows nothing.

I still trust my doctors but always get a second opinion if I feel like.

U.S. emerges as safe haven amid chaotic world

A few thoughts penned after reading this article - U.S. emerges as safe haven amid chaotic world

Nothing new. This is always been the case. During the times of chaos, uncertainty, and global meltdown, more money rushes into the US and the demand for the US dollar only goes up. Happened even during the height of 2008 meltdown as well. More money flowed into the US system than before during that time (ref: Prof. Easwar Prasad's book has all the details.)

I wonder, if the US, in my opinion, has degraded its image as the financial superpower since 1974. First, the gold standard was removed. Before that anybody could pay $36 and ask for an ounce of gold. No questions asked. And return one ounce gold and you got $36. That was a big hit and made US dollar extremely popular and really 'valuable' as it was tied directly to gold. That was the first to go. Then dollar became a paper currency and value became relative to other currencies and economic factors. For the first time people questioned if the dollar was a safe investment.

In 2008, whole banking and financial mess, self-inflicted pain definitely eroded the trust and confidence in the US system.

Despite all this if the global investment community continues to treat US markets and the dollar kindly and favorably, I think some things are still good and worth preserving without screwing up further.

Also where else people can park their wealth???? In China?? Brazil?? India??? Investments may be made in those countries but the profit is all taken out and converted back to crispy greenbacks (dollars) and parked in some tax heaven. Does not matter where it is parked as long as the demand for greenbacks continues. Printing presses in our mint never get tired. Bring in all the world's wealth! :)

Once Euro was thought it would be a contender for the dollar. Does not look like that anymore. The euro union as well as their currency are imploding. So, the dollar rules!

Friday, July 22, 2016

ಕೌಪೀನ ಪಂಚಕಂ

ಆದಿ ಗುರು ಶ್ರೀ ಶಂಕರಾಚಾರ್ಯ ವಿರಚಿತ ಕೌಪೀನ ಪಂಚಕಂ

ವೇದಾಂತದ ಬಗ್ಗೆಯೇ ಸದಾ ಚಿಂತನೆ ಮಾಡುತ್ತ
ಭಿಕ್ಷಾಟನೆ ಮಾಡಿದ ಆಹಾರದಿಂದಲೇ ಸದಾ ಸಂತುಷ್ಟನಾಗಿ
ದುಃಖ ವಿಷಾದಗಳ ಛಾಯೆಯೂ ಇಲ್ಲದೆ ಸದಾ ಅಂತರಾತ್ಮದ ಬಗ್ಗೆ ಧ್ಯಾನ ಮಾಡುವ
ಕೌಪೀನಧಾರಿಯು ನಿಜವಾಗಿಯೂ ಅದೃಷ್ಟಶಾಲಿ  (೧)

ಗಡ್ಡೆಗೆಣಸುಗಳ ಮೇಲೆಯೇ ಸದಾ ಅವಲಂಬಿತನಾಗಿ
ಎರಡು ಹಸ್ತಗಳಲ್ಲಿ ಹಿಡಿಸಿದಷ್ಟೇ ಆಹಾರವನ್ನು ಸದಾ ಸ್ವೀಕರಿಸಿ
ಧರಿಸಿರುವ ಹರಿದ ಬಟ್ಟೆಯ ತುಂಡನ್ನೊಂದೇ (ಕೌಪೀನ) ಸಕಲ ಸಂಪತ್ತು ಎಂದು ಭಾವಿಸಿರುವ
ಕೌಪೀನಧಾರಿಯು ನಿಜವಾಗಿಯೂ ಅದೃಷ್ಟಶಾಲಿ (೨)

ತನ್ನ ಆಲೋಚನೆಗಳಿಂದಲೇ ಸದಾ ಅತ್ಯಾನಂದಿತನಾಗಿ
ಶಾಂತಿಯಿಂದ ಪಂಚೇದ್ರಿಯಗಳನ್ನು ಸದಾ ನಿಗ್ರಹಿಸಿ
ಹಗಲೂ ರಾತ್ರಿ ಬ್ರಹ್ಮಜ್ಞಾನದ ಸಂತೋಷದಲ್ಲಿ ಮುಳುಗೇಳುತ್ತಿರುವ
ಕೌಪೀನಧಾರಿಯು ನಿಜವಾಗಿಯೂ ಅದೃಷ್ಟಶಾಲಿ (೩)

ದೇಹದಲ್ಲಾಗುವ ಬದಲಾವಣೆಗಳನ್ನು ನಿರ್ಲಿಪ್ತ ಸಾಕ್ಷಿಯಂತೆ ಅವಲೋಕಿಸುತ್ತ
ತನ್ನನ್ನು ತಾನು ಆತ್ಮವೆಂದು ಪರಿಗಣಿಸಿ
ಜೀವನದ ಆದಿ, ಮಧ್ಯ, ಅಂತ್ಯಗಳ ಬಗ್ಗೆ ಕಿಂಚಿತ್ತೂ ವಿಚಾರ ಮಾಡದಿರುವ
ಕೌಪೀನಧಾರಿಯು ನಿಜವಾಗಿಯೂ ಅದೃಷ್ಟಶಾಲಿ (೪)

ಬ್ರಹ್ಮಾಕ್ಷರವನ್ನು (ಓಂ) ಸದಾ ಜಪಿಸುತ್ತ
ತನ್ನನ್ನು ತಾನು ಬ್ರಹ್ಮನ್ ಎಂದು ಸದಾ ನಂಬಿ
ಭಿಕ್ಷೆಯಿಂದ ಬಂದ ದಾನದ ಮೇಲೆ ಅವಲಂಬಿತನಾಗಿ ಗೊತ್ತುಗುರಿಯಿಲ್ಲದೆ ಅಲೆದಾಡುವ
ಕೌಪೀನಧಾರಿಯು ನಿಜವಾಗಿಯೂ ಅದೃಷ್ಟಶಾಲಿ (೫)

ಸಕಲವನ್ನೂ ತ್ಯಜಿಸಿ ಗುರು ನೀಡಿದ ಕೌಪೀನವೊಂದನ್ನೇ ಉಳಿಸಿಕೊಂಡಿರುವ ಸನ್ಯಾಸಿ ಅದೆಂತಹ ಮಹಾ ಭಾಗ್ಯವಂತ ಎಂದು ಸನ್ಯಾಸಿಯ ಅದೃಷ್ಟವನ್ನು ಕೊಂಡಾಡುವ ಪಂಚಕ.

ಕೌಪೀನ = ಸನ್ಯಾಸಿಗಳು ಧರಿಸುವ ಲಂಗೋಟಿ.

ಕೇವಲ ಕೌಪೀನ ಧರಿಸಿಯೇ ಜೀವನ ಕಳೆದ ಪೂಜ್ಯ ಶ್ರೀ ರಮಣ ಮಹರ್ಷಿಗಳು

'ಕೌಪೀನವಂತಃ ಖಲು ಭಾಗ್ಯವಂತಃ' ಅನ್ನುವದು ಸಂಸ್ಕೃತ ಭಾಷೆಯಲ್ಲಿನ ಹಾಸ್ಯೋಕ್ತಿ ಅಂತ ತಿಳಿದಿದ್ದ ಅಜ್ಞಾನಿ ಮೂಢ ನಾನು. ಮೊನ್ನೆ ಗುರು ಪೂರ್ಣಿಮೆಯಂದು ಆದಿ ಶಂಕರರು ಬರೆದ ಒಂದಿಷ್ಟು ಶ್ಲೋಕಗಳನ್ನು internet ಮೇಲೆ ಹುಡುಕುತ್ತ ಕೂತಾಗ ಇದು ಸಿಕ್ಕಿತು. ಆವಾಗ ಗೊತ್ತಾಯಿತು.

ಹೂಂ....ಇರಲಿ. ಕೌಪೀನ ಪಂಚಕವನ್ನು ಓದಿ, ತಿಳಿದು, ಅನುವಾದಿಸಿ, ಆನಂದಿಸಿ ಎಲ್ಲ ಮಾಡಿದ ಮೇಲೆ ಒಂದು ತರಹದ ವಿಷಾದ. ಸಾಂದ್ರ ವಿಷಾದ. ಜೀವನದಲ್ಲಿ ಕೌಪೀನ ಹಾಕುವ 'ಲಂಗೋಟಿ ಭಾಗ್ಯ' ಒಂದು ಬಾರಿ ಬಂದಿತ್ತು. ಅದೇ ಉಪನಯನದ (ಮುಂಜಿ) ಸಂದರ್ಭದಲ್ಲಿ. ಬ್ರಹ್ಮೋಪದೇಶ ಮುಗಿದಾಕ್ಷಣ ಗಡಿಬಿಡಿಯಲ್ಲಿ ಕೌಪೀನವನ್ನು ಕಿತ್ತಿ ಬಿಸಾಕಿ, VIP ಅಥವಾ Tantex ಬ್ರಾಂಡಿನ ಚಡ್ಡಿ ಧರಿಸಿ, ಮೇಲಿಂದ ಪ್ಯಾಂಟ್ ಹಾಕಿಬಿಟ್ಟೆ ನೋಡಿ.....ಅದೇ ಜೀವನದಲ್ಲಿ ಮಾಡಿದ ಅತಿ ದೊಡ್ಡ ಘೋರ ಅಪರಾಧ. ಇಲ್ಲವಾದರೆ ನಾವೂ ಸದಾ ಕೌಪೀನವಂತರಾಗಿ ಹೀಗೇ ಆರಾಮ ಇರಬಹುದಿತ್ತೇನೋ!? ಅಂತ ಈಗ ಅನ್ನಿಸುತ್ತಿದೆ. ಏನು ಮಾಡೋದು? ಯೋಗಿ ಪಡೆದುಕೊಂಡು ಬಂದಿದ್ದು ಯೋಗಿಗೆ. ಭೋಗಿ ಪಡೆದುಕೊಂಡು ಬಂದಿದ್ದು ಭೋಗಿಗೆ. ಅಂದು ಕೌಪೀನ ಬಿಚ್ಚಾಕಿ ಪ್ಯಾಂಟ್ ಏರಿಸಿದ್ದೇ ದೊಡ್ಡ ಸಾಧನೆ ಅಂತ ತಿಳಿದಿದ್ದಕ್ಕೆ ಇಂದು ಸಂಸಾರದ 'ಸುಖ' ಸಾಗರದಲ್ಲಿ ತೇಲಾಡುವ 'ಭಾಗ್ಯ' ನಮ್ಮದು. ಆಹಾ! ಆಹಾ! ಏನು ಈ ಸಂಸಾರದ ಸಂತೋಷ, ಏನು ಸಂಸಾರದ ಸುಖ! ಶಿವಾಯ ನಮಃ!

ನಮ್ಮ  'ಲಂಗೋಟಿ ಭಾಗ್ಯ'ದ ಉರ್ಫ್ ಉಪನಯನ ಉರ್ಫ್ ಮುಂಜಿ ಬಗ್ಗೆ ಮತ್ತೊಮ್ಮೆ ಬರೆಯೋಣ ಬಿಡಿ. ತಲೆ ಬೋಳಿಸಿಕೊಳ್ಳದೇ, ಜುಟ್ಟು ಬಿಡದೇ, ಅಂದಿನ ಫ್ಯಾಷನ್ ಆಗಿದ್ದ ಕಿವಿ ಮುಚ್ಚುವ ಉದ್ದ ಕೂದಲಿನ ಹಿಪ್ಪಿ ಕಟಿಂಗ್ ಎಂಬ ಹೇರ್ ಸ್ಟೈಲ್ ಇಟ್ಟುಕೊಂಡೇ ಮುಂಜಿ ಮಾಡಿಸಿಕೊಂಡ ಭೂಪ ನಾನು. ಮುಂಜಿ ಮಾಡಲು ಬಂದಿದ್ದ ಭಟ್ಟರ ಸಮೂಹದ ಜೊತೆಗೇ ನನ್ನದು ದೊಡ್ಡ ವಾಗ್ವಾದ ಮುಂಜಿ ಊಟದ ನಂತರ. ನಾನು ಊಟದ ನಂತರ ಒಂದು ಸೊಗಸಾದ ಜರ್ದಾ ಕವಳ (ಪಾನ್) ಹಾಕೋಣ ಅಂತ ಸ್ಕೀಮ್ ಹಾಕಿ, ಮಸ್ತಾಗಿ ಕವಳ ರೆಡಿ ಮಾಡಿಕೊಂಡು ಕೂತರೆ ಮೈಸೂರ್ ಶಾಸ್ತ್ರಿ ಎಂಬ ಕರ್ಕಿಯ ದೊಡ್ಡ ಪಂಡಿತರು ಬ್ರಹ್ಮೋಪದೇಶ ತೆಗೆದುಕೊಂಡ ವಟುವಿಗೆ ತಾಂಬೂಲ (ಎಲೆಅಡಿಕೆ) ಹೇಗೆ ವರ್ಜ್ಯ, ನಿಷೇಧಿತ ಎಂಬುದರ ಬಗ್ಗೆ ದೊಡ್ಡ ಉಪದೇಶವನ್ನೇ ಕೊಟ್ಟುಬಿಟ್ಟರು. ನಡುನಡುವೆ ಇಟ್ಟರು ಕೂಡ. ಅಂದರೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಸಂಸ್ಕೃತದ ಏನೇನೋ ಸುಭಾಷಿತಗಳ ಮತ್ತು ಶ್ಲೋಕಗಳ ಫಿಟ್ಟಿಂಗ್ ಇಟ್ಟರು ಅಂತ. ನಾನೂ ಯಾವದಕ್ಕೂ ಕೇರ್ ಮಾಡದೇ ತಿರಸಟ್ಟನಂತೆ ವಿತಂಡವಾದಕ್ಕೆ ನಿಂತೆ. ನನ್ನ ಅಂದಿನ ಕಿರಾತಕ ವರ್ತನೆ ಬಗ್ಗೆ ಬರೋಬ್ಬರಿ ಮಾಹಿತಿ ಇದ್ದ ಪಾಲಕರು ಗುರು ನಿಂದನೆ ಮಾಡಿದ ಪಾಪ ಬಂದೀತು ಅಂತ ಹೆದರಿ, 'ಜರ್ದಾ ಪಾನ್ ಆದರೂ ಹಾಕು. ಸಿಗರೇಟ್ ಬೇಕಾದರೂ ಸೇದು. ಏನಾದರೂ ಮಾಡಿಕೋ ಮಾರಾಯಾ. ಆದರೆ ಭಟ್ಟರ ಜೊತೆ ಜಗಳ ಮಾತ್ರ ಮಾಡಬೇಡ. ಮೊದಲೇ ದೊಡ್ಡ ಭಟ್ಟರು ಅವರು. ಮೈಸೂರ್ ಮಹಾರಾಜನಿಂದ ಸನ್ಮಾನಿತರು. ದೊಡ್ಡ ಮನಸ್ಸು ಮಾಡಿ ಮನೆಗೆ ಬಂದಿದ್ದಾರೆ. ಹೋಗು, ಹೋಗು, ಏನಾದರೂ ಮಾಡಿಕೋ ಹೋಗು,' ಅಂತ ರಮಿಸಿ ಕಳಿಸಿದಾಗಲೇ ಬಾಯಲ್ಲಿ ಕವಳವನ್ನು ಹೆಟ್ಟಿಕೊಂಡು, ಜಗಿದು, ಪಚಾಕ್ ಒಂದು ಪಿಚಕಾರಿ ಹಾರಿಸಿಯೇ ಜಾಗ ಖಾಲಿ ಮಾಡಿದ ಭೂಪ ನಾನು. ಈಗ ನೆನಸಿಕೊಂಡರೆ ಸಿಕ್ಕಾಪಟ್ಟೆ ನಗು ಬಂತು. ಮೈಸೂರ್ ಶಾಸ್ತ್ರಿಗಳು ಅದ್ವೈತದ ದೊಡ್ಡ ಪಂಡಿತರು. ಅಂತಹ ಮಹನೀಯರ ಆಶೀರ್ವಾದ ಈಗ ವರ್ಕೌಟ್ ಆಗುತ್ತಿದೆ ಅಂತ ಕಾಣುತ್ತಿದೆ. ಏನೋ ನಮಗೂ ಈಗ ಅದ್ವೈತದಲ್ಲಿ ಸಿಕ್ಕಾಪಟ್ಟೆ ಆಸಕ್ತಿ. ಮೈಸೂರ್ ಶಾಸ್ತ್ರಿಗಳ ಆತ್ಮಕ್ಕೆ ಕಿಂಚಿತ್ತಾದರೂ ನೆಮ್ಮದಿ ಸಿಕ್ಕಿರಬಹದು ನಮ್ಮ ಬದಲಾದ ವರ್ತನೆ ನೋಡಿ. ಜರ್ದಾ ಕವಳ ಹೋಗಲಿ ಎಲೆಅಡಿಕೆಯನ್ನೇ ಬಿಟ್ಟು ಆರೇಳು ವರ್ಷಗಳಾಗಿ ಹೋಗಿವೆ. ಈಗ ಬಿಟ್ಟಿಯಲ್ಲಿ ಪರಮ ದುಬಾರಿ ಬಾಬಾ-೧೬೦ ಕೇಸರಿಯುಕ್ತ ಜರ್ದಾ, ನವರತ್ನ ಕಿಮಾಮ್, ಏನೇ ಕೊಟ್ಟರೂ ಬೇಡ. ವ್ಯಾಂಡಾ. ವ್ಯಾಂಡಾ. ವ್ಯಾಂಡಾ ವ್ಯಾಂಡಾ ಯಾಕೆ? ಕಬಾಲಿಡಾ. ನೆರಪ್ಪುಡಾ! :)

ಆದಿ ಗುರು ಶ್ರೀ ಶಂಕಾರಾಚಾರ್ಯ

Swami Sarvananda ji provided the following translation after he went through the translation used by me and found it not accurate enough. I am grateful to him. Swamiji was my college-mate in BITS, Pilani.

वेदान्तवाक्येषु सदा रमन्तो
भिक्षान्नमात्रेण च तुष्टिमन्तः |
विशोकवन्तः करणे चरन्तः

कौपीनवन्तः खलु भाग्यवन्तः || १||

Reveling always in the statements of Vedanta viz. Upanishads,
Content with food just obtained by भिक्षा,
Free from sadness and traveling on foot,
Blessed indeed is the one content with (just) a loin-cloth. (1)

मूलं तरोः केवलं आश्रयन्तः
पाणिद्वयं भोक्तुममत्रयन्तः |
कन्थामिव श्रीमपि कुत्सयन्तः
कौपीनवन्तः खलु भाग्यवन्तः || २||

Having the base of trees alone for shelter,
Having his two hands for a plate i.e. eating only as much as his two hands can hold,
Disregarding wealth as one would ignore rags,
Blessed indeed is the one content with (just) a loin-cloth. (2)

स्वानन्दभावे परितुष्टिमन्तः
सुशान्तसर्वेन्द्रियवृत्तिमन्तः |
अहर्निशं ब्रह्मसुखे रमन्तः
कौपीनवन्तः खलु भाग्यवन्तः || ३||

Totally satisfied in the happiness within,
Having pacified well the cravings of all the senses,
Delighting day and night in Brahman that is nothing but (limitless) happiness,
Blessed indeed is the one content with (just) a loin-cloth. (3)

देहादिभावं परिवर्तयन्तः
स्वात्मानमात्मन्यवलोकयन्तः |
नान्तं न मध्यं न बहिः स्मरन्तः
कौपीनवन्तः खलु भाग्यवन्तः || ४||

Witnessing the changes of physical body,
Himself beholding his own true nature (आत्मा),
Not thinking about either the end, middle or outer,
Blessed indeed is the one content with (just) a loin-cloth. (4)

ब्रह्माक्षरं पावनमुच्चरन्तो
ब्रह्माहमस्मीति विभावयन्तः |
भिक्षाशिनो दिक्षु परिभ्रमन्तः
कौपीनवन्तः खलु भाग्यवन्तः || ५||

Chanting the purifying Omkara,
Contemplating on (the knowledge) `I am Brahman',
Living on alms and wandering freely everywhere,
Blessed indeed is the one content with (just) a loin-cloth. (5)


Another translation. I used it but Swamiji found it not up to the mark.

Kaupeena Panchakam

Kaupeena Panchakam
By Adi Shankara
[The Pentad of the Loin Cloth]
Translated by P. R. Ramachander

[This is a very short poem with five stanzas which glorifies the life of a sannyasi (Ascetic). An ascetic in India is supposed to give away all his wealth before entering in to renunciation and get a loin cloth (kaupeena) from his teacher. That would be his only property.]

Vedantha Vakhyeshu Sada ramantho,
Bhikshannamathrena trishtimantha,
Vishokamantha karane charantha,
Kaupeenavantha Khalu bhaghyavantha 1

Always thinking about words of philosophy,
Always getting satisfied with food got by begging,
And always without trace of sorrow, thinking of the inner self,
The man with the loin cloth is indeed the lucky one.

Moolam tharo kevalam ashrayantha,
Panidhvayam bhokthuma manthrayantha,
Kandhamiva sreemapi kuthsayantha,
Kaupeenavantha Khalu bhaghyavantha 2

Always depending on only roots and plants,
Always taking only two hands full of food,
And always thinking of wealth as a torn piece of cloth,
The man with the loin cloth is indeed the lucky one.

Swananda bhava pari thushti mantha,
Sushantha sarvendriya vruthi mantha,
Aharnisam brahma sukhe ramantha,
Kaupeenavantha Khalu bhaghyavantha 3

Always getting elated in his own thoughts,
Always peacefully controlling all his senses,
And always drowned in the pleasure of Brahmam,
The man with the loin cloth is indeed the lucky one.

Dehadhi bhavam parivarthayantha,
Swathmana athmanyavalokayantha,
Naantha na Madhyam na bahi smarantha,
Kaupeenavantha Khalu bhaghyavantha 4

Always witnessing his own changes of the body,
Who is seeing himself as his soul,
And who never thinks of ends, middle and outside,
The man with the loin cloth is indeed the lucky one.

Brahmaksharam pavanamucharantho,
Brahmahamasmeethi vibhavayantha,
Bhikshashano dikshu paribramayantha,
Kaupeenavantha Khalu bhaghyavantha 5

Always reciting the name of Brahmam with devotion,
Always thinking that he himself is Brahmam,
And who wanders aimlessly depending on alms obtained,
The man with the loin cloth is indeed the lucky one. 

Saturday, July 16, 2016

Big slide in engg admission: 135 courses shut in 5 years

Wrote this post after reading this article - Big slide in engg admission: 135 courses shut in 5 years

Why do you need so many engineering branches at the undergraduate level????

Ideally, only branches that should be taught and taught really well at the UG level are - civil, mechanical, chemical, electrical. And maybe metallurgy & mining. All other branches such as instrumentation, biomedical engineering, polymer engineering, environmental engineering, software engineering, etc. etc. are better suited for PG level specialization.

Electrical engineering should cover electronics and computer engineering (hardware) as well.

Computer science can be taught as a science faculty with ability take electives from other branches as needed. Most of the computer science (theoretical part) is anyway heavy duty maths. Profs with strong math background make good CS teachers. We had many such profs.

And bring back 5 years engineering course. It was so till 1981 or so. I think my brother's batch 82-86 was the first batch to have a 4 years engineering course.

And make one year of the 5 years an industrial internship year. Students have to work as trainees in a company. Whether you make it one full year at the end or six months after the third year and another six months after the fourth year, can be deliberated.

Keep all other courses such microelectronics, VLSI, Biomed, info systems, instrumentation etc. as PG level courses or as UG electives. In UG, teach good quality problem solving and basic engineering in depth. What we have now is only superficial engineering education and no wonder students are so miserably qualified to join the workforce.

Not my original thoughts. My father has had these views for more than 50+ years. He seems to be right!

Friday, July 15, 2016

ಹೆಸರಾಗೇನೈತಿ? ಇರೋದೆಲ್ಲಾ ಅಡ್ಡಹೆಸರಿನಾಗೇ ಐತಿ....

ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸಪಿಯರ್ ಉತ್ತರ ಕರ್ನಾಟಕದ ಕಡೆ, ನಮ್ಮ ಧಾರವಾಡ ಕಡೆ ಬಂದು ಹೋಗಿದ್ದ ಅಂತ ಕಾಣಸ್ತದ.

ಹಾಂಗಾಗೇ 'ಹೆಸರಲ್ಲೇನಿದೆ?' (What's in a name?) ಅಂತ ಕೇಳಿದನೇ ಹೊರತು 'ಅಡ್ಡಹೆಸರಿನಲ್ಲೇನಿದೆ?' (What's in a surname?) ಅಂತ ಕೇಳಲಿಲ್ಲ. ಹಾಂಗೆನಾದರೂ ಕೇಳಿದ್ದರ ಅಂವಾ ವಾಪಸ್ ಹೋಗೋದರ ಬಗ್ಗೆ ಖಾತ್ರಿ ಇರಲಿಲ್ಲ. ನಮ್ಮ ಊರ ಕಡೆ ಬಂದು 'ಸರ್ ನೇಮ್' ಬಗ್ಗೆ ಮಾತಾಡಿದರೆ ಸರ್ (ತಲೆ) ಉಳಿತದ ಏನ್ರೀ??!!

ಅವಂಗೂ ಗೊತ್ತು. ಶಾಣ್ಯಾ. ನಮ್ಮ ಕಡೆ ಇರೋದಷ್ಟೂ ಅಡ್ಡಹೆಸರಿನಲ್ಲಿಯೇ ಹೊರತೂ ಹೆಸರಿನಲ್ಲಿ ಅಲ್ಲ ಅಂತ. Everything is in surname only, Sir. ಸರ್ ನೇಮಿನಲ್ಲೇ ಸರ್ವವೂ ಇರೋದು.

ಆಹಾ! ಆಹಾ! ಎಂತೆಂತಾ ಕಲರ್ಫುಲ್, ರಂಗ್ರಂಗೀನ್, ಡಿಸೈನರ್ ಡಿಸೈನರ್ ಅಡ್ಡಹೆಸರುಗಳು ನಮ್ಮ ಕಡೆ! ಅತೀ ಸ್ವಾರಸ್ಯಕರ ಮತ್ತು ವಿಶಿಷ್ಟ.

ನಮ್ಮ ಕಡೆಯ ವಿಶಿಷ್ಟ ಅಡ್ಡಹೆಸರುಗಳನ್ನು ಕೇಳಿ, ಗೌರವಿಸಿ, ಆನಂದಿಸಿ. ಅಪಹಾಸ್ಯ, ಕುಹಕ, ವ್ಯಂಗ್ಯ ಬೇಡ. at least ಅಡ್ಡಹೆಸರುಗಳ ಬಗ್ಗೆ. 

ಅಪಹಾಸ್ಯ, ಕುಹಕ, ವ್ಯಂಗ್ಯ ಯಾಕ ಬ್ಯಾಡ ಅಂದೆ ಅಂದ್ರ ನಮ್ಮ ಕಡೆ ಹುಡುಗಿ ಒಬ್ಬಳು, 'ಅಡ್ನಾಡಿ ಅಡ್ಡಹೆಸರಿನ ವರಾ ತೋರಿಸಿದರ ನಾ ಲಗ್ನಾ ಮಾಡಿಕೊಂಬಾಕಿ ಅಲ್ಲ!' ಅಂತ ಕಂಡೀಷನ್ ಒಗೆದು ಕೂತುಬಿಟ್ಟಾಳ. 

ಆ ಪುಣ್ಯಾತ್ಮಿಗೆ ನಾನೇ ಹೇಳಿದೆ, 'ನೋಡವಾ, ಅಡ್ಡಹೆಸರು, ಹೆಸರು ಅಂತ ಹೇಳಿಕೋತ್ತ ಕೂಡಬ್ಯಾಡ. ಅಡ್ಡಹೆಸರು is just ಅಡ್ಡಹೆಸರು. ಬೀಜ ಗಣಿತದಾಗ ಬೀಜ ಇದ್ದಂಗ. ತಿಳಿತs?'

'ಬೀಜ ಗಣಿತದಾಗ ಬೀಜ?? ಏನು ಹಾಂಗಂದ್ರ ಮಾಮಾ? ಏನೇನರೇ ಹುಚ್ಚು ಹುಚ್ಚು ಮಾತಾಡಬ್ಯಾಡ. ನಮ್ಮವ್ವನ, 'ಲಗ್ನಾ ಮಾಡಿಕೋ, ಲಗ್ನಾ ಮಾಡಿಕೋ,' ಇದೇ ಉಪದೇಶ ಕೇಳಿ ನನ್ನ ತಲಿ ಮೊದಲs ಕೆಟ್ಟದ. ನೀ ನನ್ನ ಕೆಟ್ಟು ಮೊಸರ ಗಡಿಗಿ ಆದ ತಲಿ ಕಡೆದು ಲಸ್ಸಿ ಮಾಡಿ ಇಡಬ್ಯಾಡ ಮಾರಾಯಾ!' ಅಂತ ವಾರ್ನಿಂಗ್ ಕೊಟ್ಟಳು. 

'ಬೀಜ ಗಣಿತದಾಗ ಬೀಜ ಅಂದ್ರ ಮತ್ತೇನೂ ಅಲ್ಲವಾ. ಬೀಜ ಗಣಿತದಾಗ ಬೀಜ ಅಂದ್ರ x, y, z ಅಂತ ಸಮೀಕರಣದಾಗ ಹೆಸರು ಇಡೋದಿಲ್ಲೇನವಾ? ಹಾಂಗೇ ಇವು ಅಡ್ಡಹೆಸರು. x, y, z ಇದ್ದಂಗ. ಅದಕ್ಯಾಕ ಅಷ್ಟು ತಲಿ ಕೆಡಿಸಿಕೋತ್ತಿ ನಮ್ಮವ್ವಾ?' ಅಂದು convince ಮಾಡಲಿಕ್ಕೆ ನೋಡಿದೆ.

'ಈಗ ಸಮೀರಣ ಅಂದ್ರ ಯಾರು. ನೀನೂ ನನಗ ವರ ಹುಡುಕ್ಲಿಕತ್ತಿಯೇನು? ನಮ್ಮವ್ವಾ ಎಲ್ಲರಿಗೂ ಅದೇ ಕೆಲಸ ಹಚ್ಯಾಳ. ಎಲ್ಲಿ ತನಕಾ ಅಂದ್ರ ನಮ್ಮ ಬೂಬು ಸುದಾ ಭಾಂಡೆ ತಿಕ್ಕೋದು ಬಿಟ್ಟು ನನಗ ವರಾ ಹುಡ್ಕೋತ್ತ ಊರೂರು ಅಡ್ಯಾಡ್ಲಿಕತ್ತದ. ಏ ನಿನ್ನ! ಹೋಗೋ!' ಅಂದಳು. 

ಹಾಪ್ ಹುಡುಗಿ! ಸಮೀಕರಣ ಅಂದರೆ ಸಮೀರಣ ಅನ್ನುತ್ತದೆ. 'ಕನ್ನಡ ಮೀಡಿಯಂ ಸಾಲಿಗೆ ಹಾಕವಾ,' ಅಂತ ಅವರ ಅವ್ವಗ ಬಡಕೊಂಡೆ. ಎಲ್ಲಿ ಕೇಳಬೇಕು? ಈಗ ಇತ್ಲಾಗ ಕನ್ನಡವೂ ಸರಿ ಬರೋದಿಲ್ಲಾ ಅತ್ಲಾಗ ಇಂಗ್ಲೀಷ್ ಸಹಾ ಸರಿ ಬರೋದಿಲ್ಲಾ. ಎಲ್ಲಾ ಅಷ್ಟೇ ಈ ಟಸ್ ಪುಸ್ ಇಂಗ್ಲೀಷ್ ಮೀಡಿಯಂ ಮಂದಿದು.

'ಸಮೀರಣ ಅಲ್ಲವಾ. ಸಮೀಕರಣ. ಅಂದ್ರ equation. ಅಡ್ಡಹೆಸರು ಅಂದ್ರ equation ದಾಗ x, y, z ಇದ್ದಂಗ. ಅದನ್ನೇ ಹೇಳಿದೆ. x, y, z ಬದಲಿ a,b,c  ಅಂತ ಬರೆದುಕೊಂಡು ಫಾರ್ಮುಲಾ ಹಚ್ಚಿದರೂ ನಡಿತದ. ತಿಳಿತೇನವಾ? ಅಡ್ಡಹೆಸರು ಒಮ್ಮೊಮ್ಮೆ ಅಡ್ನಾಡಿ ಅನ್ನಿಸಬಹುದು. ಹೆಸರೇ ಅಡ್ಡಹೆಸರು ನೋಡು. ಉದ್ದಹೆಸರು ಅಲ್ಲ ನೋಡು. ಹಾಂಗಾಗಿ ಅಡ್ಡಹೆಸರು ಒಮ್ಮೊಮ್ಮೆ ಅಡ್ನಾಡಿ ಅನ್ನಿಸಬಹದು. ಅಸಡ್ಡಾಳ ಅನ್ನಿಸಬಹದು. ಏನವಾ?' ಅಂತ ವಿವರಿಸಿದೆ. 

'ಮಾಮಾ, ಅದು ಬ್ಯಾರೆ. ಇದು ಬ್ಯಾರೆ. ಅಡ್ಡಹೆಸರು ಒಮ್ಮೆ ಬಿತ್ತು ಅಂದ್ರ ನಂತ್ರ ಏನೂ ಮಾಡಲಿಕ್ಕೆ ಬರಂಗಿಲ್ಲ. x, y, z ಬದಲಿ a,b,c ಹಚ್ಚಿದಷ್ಟು ಸರಳ ಅಲ್ಲ ಅದು. ತಿಳಿತs??' ಅಂತ ರಿವರ್ಸ್ ಬಾರಿಸಿದಳು. 

ತಡಿ ಇಕಿ ತಲಿಗೆ ಬರೋಬ್ಬರಿ ಶಿಕಾಕಾಯಿ ಸೋಪ್ ಹಚ್ಚಿಯೇ ಬ್ರೈನ್ ವಾಷ್ ಮಾಡಬೇಕು ಅಂತ ಹೊಸಾ ಧಾಟಿಯೊಳಗ ಮಾತಾಡ್ಲಿಕ್ಕೆ ಶುರು ಮಾಡಿದೆ. 

'ವರನ್ನ ಅಡ್ಡಹೆಸರು ನಿನಗ ಸೇರಿ ಬರಲಿಲ್ಲ ಅಂದ್ರ ಒಂದು ಕೆಲಸ ಮಾಡಬಹದು ನೋಡವಾ.......' ಅಂದೆ. 

'ಏನದು???'

'ಹೆಸರು ಬದಲಿ ಮಾಡಿಕೊಂಡಂಗ ಅಡ್ಡಹೆಸರನ್ನು ಬದಲಿ ಮಾಡಿಕೊಳ್ಳೋದು. ಹೆಂಗೂ ಲಗ್ನಾದ ಮ್ಯಾಲೆ ಅತ್ತಿ ಮನಿಯವರು ನಿನ್ನ ಹೆಸರು ಬದ್ಲಿ ಮಾಡ್ತಾರ. ನೀ ಒಂದು ಕಂಡೀಷನ್  ಒಗಿ ಬೇಕಾದ್ರ. 'ನೀವು ನಿಮ್ಮ ಅಡ್ಡಹೆಸರು ಚೇಂಜ್ ಮಾಡಿಕೊಂಬೋದಾದ್ರ ಮಾತ್ರ ನಾನು ನನ್ನ ಹೆಸರು ಚೇಂಜ್ ಮಾಡಿಕೊಳ್ಳಲಿಕ್ಕೆ ಒಪ್ಪಾಕಿ. ಇಲ್ಲಂದ್ರ ಇಲ್ಲ,' ಅಂತ ಖಡಕ್ ಆಗಿ ಹೇಳಿಬಿಡು. ಲಗ್ನನಂತೂ ಆಗಿಹೋಗಿರ್ತದ. ಏನೂ ಮಾಡಲಿಕ್ಕೆ ಬರಂಗಿಲ್ಲ. ಒಪ್ಪಿಕೊಂಡರೂ ಒಪ್ಪಿಕೊಂಡ್ರು. ಯಾರಿಗೆ ಗೊತ್ತು? ಮತ್ತ ಒಪ್ಪಬೇಕಾದವರು ಯಾರು? ನಿನ್ನ ಗಂಡ. ಆಗೋ ಭವಿಷ್ಯದ ಗಂಡ. ಅಡ್ನಾಡಿ ಅಡ್ಡಹೆಸರಿನ ಯಬಡ. ಹೊಸದಾಗಿ ಮದ್ವಿಯಾದ ಗಂಡು ಮುಂಡೆಗಂಡರಂತೂ ಮತ್ತೂ ಯಬಡ ಆಗಿಬಿಟ್ಟಿರತಾವ. ಖಬರೇ ಇರಂಗಿಲ್ಲ. ಹನಿಮೂನಿನ್ಯಾಗ ಹೆಂಡ್ತಿ ಹೇಳಿದ್ದಕ್ಕೆಲ್ಲ ಹೂಂ ಹೂಂ ಅಂತ ನಾಗಪ್ಪಾ ಪುಂಗಿಗೆ ತಲಿ ಅಲ್ಲಾಡಿಸಿದ ಹಾಂಗ ಅಲ್ಲಾಡಿಸಿಕೋತ್ತ ಕೂತಿರ್ತಾವ. ಭುಸ್ ಅನ್ನೋದು ಮರ್ತೇ ಹೋಗಿರ್ತದ. ಹನಿಮೂನ್ ಗಾಡ್ ಪ್ರಾಮಿಸ್ ಅಂತ ಹೇಳಿ ಪ್ರಾಮಿಸ್ ತೊಗೊಂಡು ಬಿಡು. ಒಮ್ಮೆ ಪ್ರಾಮಿಸ್ ಕೊಟ್ಟಾ ಅಂದ ಮ್ಯಾಲೆ ಮುಗೀತು. ಅಷ್ಟೇ. ನಂತ್ರ ನೀ ಹೇಳಿದ ಅಡ್ಡಹೆಸರಿಗೆ ಚೇಂಜ್ ಮಾಡಿಸಿಬಿಡ್ತಾನ. ಸಾಕಲ್ಲಾ? ಮತ್ತೇನು ಬೇಕವಾ? ಒಂದೆರೆಡು ತಲೆಮಾರು ಮುಗಿದ ಮ್ಯಾಲೆ ಹಳೇ ಅಡ್ನಾಡಿ ಅಡ್ಡಹೆಸರು ಯಾರಿಗೂ ನೆನಪ ಇರೋದಿಲ್ಲಾ. ಗೊತ್ತಾತ?' ಅಂತ ಫಿಟ್ಟಿಂಗ್ ಇಟ್ಟೆ. ಸಂಯುಕ್ತ ಕರ್ನಾಟಕ ಪೇಪರಿನ್ಯಾಗ ಬರೇ 'ಹೆಸರನಲ್ಲಿ ಬದಲಾವಣೆ' ಅಂತ ಓದಿ ಓದಿ ಸಾಕಾಗಿಬಿಟ್ಟದ. ನಮ್ಮ ಹುಡುಗಿ ಕಾಲದಾಗಾದರೂ 'ಅಡ್ಡಹೆಸರಿನಲ್ಲಿ ಬದಲಾವಣೆ' ಅಂತ ಬಂದ್ರೂ ಬರಬಹುದು. ನಾನೇ ನಿಂತು ಮಾಡಿಸಿಕೊಡತೇನಿ ಬೇಕಾದ್ರ. 

ಈ ಫಿಟ್ಟಿಂಗ್ ಕೇಳಿ ನಮ್ಮ ಹುಡುಗಿ ಯಾವದೋ ವಿಚಿತ್ರ ಮೂಡಿಗೆ ಹೋತು. ಐಡಿಯಾ ಲೈಕ್ ಆತು ಅಂತ ಕಾಣಿಸ್ತದ. 

'ಮಾಮಾ, ನಿನ್ನ ಐಡಿಯಾ ಏನೋ ಒಂದು ತರಾ ಮಜಾ ಅದ. ಆದ್ರ workout ಆಗ್ತದ ಅಂತಿಯೇನು? ಅಕಸ್ಮಾತ workout ಆದ್ರೂ ಯಾವ ಅಡ್ಡಹೆಸರಿಗೆ ಬದಲಾಯಿಸೋದು???' ಅಂದಳು. 

ಇಷ್ಟು reciprocate ಮಾಡಿದಳು ಅಂದ್ರ ಕಬ್ಬಿಣ ಕಾದದ. ಈಗೇ ಹತೋಡಾ ಹೊಡಿಬೇಕು. ಶೋಲೆ ಸಿನೇಮಾದ ಸೀನ್ ನೆನಪಿಲ್ಲೇನ್ರೀ? ಠಾಕೂರ್ ಏನಂತಾನ? ಲೋಹಾ ಗರಮ್ ಹೈ. ಹತೋಡಾ ಮಾರ್ ದೋ. ಯಾವ ಲೋಹಾ ಗರಂ ಇತ್ತೋ? ಯಾರು ಹತೋಡಾ ಹೊಡೆದರೋ? ನಂತರ ನೋಡಿದ್ರ ಅರ್ಧಾ ಕುಂಡಿ ಕಾಣೋ ಹಾಂಗ ಡ್ರೆಸ್ ಹಾಕಿಕೊಂಡು ಬಂದ ಹೆಲೆನ್ ಮಾತ್ರ 'ಮೆಹಬೂಬಾ ಮೆಹಬೂಬಾ' ಅಂತ ಮಸ್ತ ಕ್ಯಾಬರೆ ಡ್ಯಾನ್ಸ್ ಹೊಡೆದಳು ನೋಡ್ರಿ. 

ನಾನೂ 'ಮೆಹಬೂಬಾ ಮೆಹಬೂಬಾ' ಅಂತ ಡ್ಯಾನ್ಸ್ ಹೊಡೆಯೋಣ.... ಛೀ... ಛೀ ಅಲ್ಲಲ್ಲ..... ಹತೋಡಾ ಹೊಡೆಯೋಣ ಅಂತ ವಿಚಾರ ಮಾಡಿದೆ. 

'ಹಾಂಗ ಕೇಳವಾ ಮಗಳs! ಕೇಳು ಹಾಂಗ! ನಿನಗ ಯಾವ ತರಹದ ಅಡ್ಡಹೆಸರು ಬೇಕು? ಡಿಸೈನರ್ ಡಿಸೈನರ್ ಅಡ್ಡಹೆಸರು suggest ಮಾಡ್ತೇನಿ,' ಅಂದೆ. 

'ನೀನೇ ಹೇಳ ಮಾಮಾ. ಎಲ್ಲಾ ನಿನಗ ಗೊತ್ತಿದ್ದಂಗ ಅದ,' ಅಂದಳು. ಆಲಸಿ ಪರಮಿ. ಈಗಲೇ ಇಷ್ಟು ಆಲಸಿ. ಅತ್ತಿಮನಿಗೆ ಹೋದ ಮ್ಯಾಲೆ ಮುಂದೇನೋ?? 

'ಸಿಂಪಲ್ಲಾಗಿ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅಂತ ಯಾವದಾದರೊಂದು ಅಡ್ಡಹೆಸರು select ಮಾಡಿಬಿಡು. ಇವೆಲ್ಲಾ universal ಅಡ್ಡಹೆಸರು. ನಮ್ಮ ದೇಶದ ಎಲ್ಲಾ ಕಡೆ ಇರ್ತಾವ. ಯಾವದು ಸೇರ್ತು ನಿನಗ?' ಅಂದೆ. 

'ಅಯ್ಯೋ ಮಾಮಾ!' ಅಂತ ಬೋಂಗಾ ಹೊಡೆದಳು. ನನಗ ಘಾಬ್ರಿ ಆತು. 

'ಯಾಕವಾ? ಏನಾತು? ಯಾವದೂ ಅಡ್ಡಹೆಸರು ಸೇರಲಿಲ್ಲ? ಇರಲಿ ತೊಗೋ. ಬ್ಯಾರೆ ವಿಚಾರ ಮಾಡೋಣಂತ. ಶಂಖಾ ಯಾಕ ಹೊಡಿತಿ?' ಅಂತ ಕೇಳಿದೆ. 

'ಏ, ಸುಮ್ಮ ಕೂಡ ಮಾಮಾ. ಏನೋ ಹೇಳ್ತಾನ ಅಂದ್ರ ಮತ್ತ ಹೋಗಿ ಹೋಗಿ ಅವೇ ಹಳೆ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅನ್ಕೋತ್ತ,' ಅಂತ ನನಗs ಝಾಡಿಸಿದಳು. 

'ಯಾಕ!?' ಅಂತ ಕೇಳಿದೆ. 

'ಈ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಇವೆಲ್ಲಾ ಇಷ್ಟು ಕಾಮನ್ ಆಗಿಹೋಗ್ಯಾವಲ್ಲಾ ಅಂದ್ರ ಅಷ್ಟು ಕಾಮನ್ ಆಗಿಹೋಗ್ಯಾವ. ಅಡ್ನಾಡಿ ಅಡ್ಡಹೆಸರನ್ನ ಶರ್ಮಾ, ಗಿರ್ಮಾ, ಅದು, ಇದು ಅಂತ ಬದಲಿ ಮಾಡಿಕೊಂಡ್ರ ನಂತ್ರ ಭಾಳ ತ್ರಾಸು ಪಡೋದಾಗ್ತಾದ. ಗೊತ್ತದ ಏನು? ಹಾಂ??' ಅಂತ ಕೇಳಿದಳು. 

'ಏನ? ಏನ ತ್ರಾಸು ಪಡೋದಾಗ್ತದ? ಹಾಂ?' ಅಂತ ನಾನೂ ಸ್ವಲ್ಪ rise ಆಗಿಯೇ ಕೇಳಿದೆ. ಇನ್ನೂ ಚೋಟುದ್ದದ ಹುಡುಗಿ ನನಗs ಉಪದೇಶ ಮಾಡ್ಲಿಕತ್ತದ. ಅದೂ ಉಪದೇಶ ಸಹಸ್ರಿ ಮಾಡ್ಲಿಕತ್ತದ. 

'ಈ ಶರ್ಮಾ, ಗಿರ್ಮಾ, ಪಂಡಿತ್, ಗಿಂಡಿತ್, ಶಾಸ್ತ್ರಿ, ಇಸ್ತ್ರಿ, ಅದು ಇದು ಅಂತ ಅಡ್ಡಹೆಸರು ಬದಲು ಮಾಡಿಕೊಂಡ್ರ ಅಮೇರಿಕಾದಾಗ ಹಿಡಿದು ಚಡ್ಡಿ ಕಳಿತಾರಂತ. ಗೊತ್ತೇನು? ಮತ್ತ ನಾನೂ ಆ ಕಡೆನೇ ಹೋಗಿ ಸೆಟಲ್ ಆಗಬೇಕು ಅಂತ ಮಾಡೇನಿ ನೋಡು. ಎಲ್ಲರೆ ಮುಂದ ಮಾಡಿಕೊಳ್ಳೋ ನನ್ನ ಯಬಡ ಗಂಡ ನನ್ನ ಮಾತು ಕೇಳಿ ತನ್ನ ಅಸಡ್ಡಾಳ ಅಡ್ಡಹೆಸರನ್ನು ಇಂತಾ ಕಾಮನ್ ಅಡ್ಡಹೆಸರಿಗೆ ಬದಲು ಮಾಡಿಕೊಂಡಾ ಅಂದ್ರ ಅಷ್ಟೇ ಮತ್ತ. ಅಮೇರಿಕಾದಾಗ ಹಿಡಿದು ಬೆಂಡ್ ಎತ್ತತಾರ ನಮಗ. ಏ, ಹೋಗ ಮಾಮಾ. ಏನಂತ ಐಡಿಯಾ ಕೊಡ್ತೀ?' ಅಂತ ಏನೋ ವಿಚಿತ್ರವಾಗಿ ಹೇಳಿದಳು. 

ಅಡ್ಡಹೆಸರು ಬದಲಿ ಮಾಡಿಕೊಂಡವರನ್ನ ಅಮೇರಿಕಾದಾಗ ಹಿಡಿದು ಚಡ್ಡಿ ಕಳಿತಾರ? ಯಾಕ? ಚಡ್ಡಿ ಕಳಿಯೋದು ಅಂದ್ರ ನಮ್ಮ ಧಾರವಾಡ ಭಾಷೆಯಲ್ಲಿ ಕಷ್ಟಕ್ಕೆ ಸಿಲುಕಿಸೋದು, red hand ಆಗಿ ಹಿಡಿಯೋದು ಅಂತ ಕೂಡ ಅರ್ಥ ಇದೆ. ಗೊತ್ತಾಯ್ತಾ? ನನ್ಮಗಂದ್! ಚಡ್ಡಿ ಕಳೆಯೋದು ಅಂದ್ರೆ ಚಡ್ಡಿ ಬಿಚ್ಚೋದು ಅಲ್ಲಾ ಅಂತ ಎಲ್ಲರಿಗೂ ಗೊತ್ತಾಗ್ಬೇಕ್! ಅಷ್ಟೇ! ಅಂತ ಹುಚ್ಚಾ ವೆಂಕಟ್ ಶೈಲಿಯಲ್ಲಿ ಡೈಲಾಗ್ ಒಂದು ಮೂಡಿ ಬಂತು.

'ಅಲಲಲಾ, ಏನು ಮಾತಾಡ್ತೀಯವ್ವಾ? ಅಡ್ಡಹೆಸರು ಬದಲಿ ಮಾಡಿಕೊಂಡ್ರ ಅಮೇರಿಕಾದಾಗ ಏನು ಮಾಡ್ತಾರ?'  ಅಂತ ಕೇಳಿದೆ. 

'ನೋಡ ಮಾಮಾ. ನಮ್ಮ ಕಡೆ ಇರೋ ಜವಾರಿ ಅಡ್ನಾಡಿ ಅಡ್ಡಹೆಸರಿನ ಹುಚ್ಚಡೂಗಳು ಶರ್ಮಾ, ಪಂಡಿತ್, ಅದು ಇದು ಅಂತ ಅಡ್ಡಹೆಸರು ಬದಲಿ ಮಾಡಿಕೊಂಡು ಅಲ್ಲಿ ಹೋಗ್ತಾರ? ಹೋಗ್ತಾರೋ ಇಲ್ಲೋ?'

'ಹೂಂ ಹೋಗ್ತಾರವಾ. ಮುಂದ? ಏನು ತೊಂದ್ರಿ ಬರ್ತದ ಅದನ್ನು ಹೇಳು ಮಾರಾಳ.'

'ಅಲ್ಲೆ green card ಮಾಡಿಸೋವಾಗ ಎಲ್ಲಾ ಡಾಕ್ಯುಮೆಂಟ್ಸ್ ತೆಕ್ಕೊಂಡು ಕೂಡ್ತಾರ. ಯಾರು ಹೇಳು?'

'ಯಾರು???'

'ಮತ್ತ ಯಾರು ಅಂತ ಕೇಳ್ತಿಯಲ್ಲಾ ಮಾಮಾ?? ಅವರೇ ಅಮೇರಿಕಾದ green card ಕೊಡೋ ಆಫೀಸರ್ ಮಂದಿ,' ಅಂದಳು ನಮ್ಮ ಹುಡುಗಿ. 

'ಮುಂದ??'

'ಎಲ್ಲಾ ಡಿಟೇಲ್ ಆಗಿ ಚೆಕ್ ಮಾಡ್ತಾರ. ನೀವು ಶರ್ಮಾ, ಚರ್ಮಾ ಅಂತ ಕಾಮನ್ ಅಡ್ಡಹೆಸರು ಹೆಸರು ಇಟ್ಟುಗೊಂಡು ಹೋದರಂತೂ ಮುಗಿದs ಹೋತು. ರವಗಾಜ್ (magnifying glass) ಹಾಕಿಕೊಂಡು ನೋಡ್ತಾರ. 'ನೀವು ಏನೇನೋ ಅಡ್ನಾಡಿ ಅಡ್ಡಹೆಸರು ಇದ್ದವರು ಅದೆಂಗ ಶರ್ಮಾ, ಚರ್ಮಾ, ಪಂಡಿತ್, ಗಿಂಡಿತ್, ಅದು ಇದು ಆದ್ರೀ?? ಹಾಂ??' ಅಂತ ಫುಲ್ ತನಿಖಾ ಮಾಡ್ತಾರ. ಗೊತ್ತದೇನು???' ಅಂತ ಫುಲ್ ವಿವರಣೆ ಕೊಟ್ಟಳು. 

'ಮಾಡ್ಲೆಲ್ಲಾ. ಅದಕ್ಕೇನು? 'ಅದು ಹೀಂಗ್ರೀ ಸರ್.... ನಮ್ಮ ಅಡ್ಡೆಸರು ಮೊದಲು ಬ್ಯಾರೆ ಇತ್ತು. ಈಗ ಬ್ಯಾರೆ ಆದ. ಎಲ್ಲಾ ಕಾನೂನು ಬದ್ಧ ಮಾಡಿಸೇವಿ. ನೀವ ನೋಡ್ರಿ. ನಮ್ಮ ಕಡೆ 'ಸಂಯುಕ್ತ ಕರ್ನಾಟಕ' ಪೇಪರ್ ಒಳಗ ಹಾಕಿಸಿದ ನೋಟಿಸ್ ಕಾಪಿ ಸುದಾ ಅದ.. ' ಅಂತ ಹೇಳೋದು. ವಿವರಣೆ ಕೊಡೋದು. ಅದಕ್ಕೇನು ತಕರಾರು ತೆಗಿತಾರ ಅವರು? ಹೆಸರು, ಅಡ್ಡಹೆಸರು ಬದಲು ಮಾಡಿಕೊಂಡವರು ಏನು ಖೂನಿ ಮಾಡಿರ್ತಾರೋ ಅಥವಾ ಹೊಡೆದಾಟ ಮಾಡಿರ್ತಾರೋ? ಒಳ್ಳೆ ಮಾತಾತವಾ ನಿಂದು.....' ಅಂದೆ. ನಮ್ಮ ಮಂದಿ ಅಡ್ಡಹೆಸರು ಚೇಂಜ್ ಮಾಡಿಕೊಂಡ್ರ ಅಮೇರಿಕಾ ಮಂದಿಗೇನು? ಅವರಿಗ್ಯಾಕ ಚಿಂತಿ?

'ಮಾಮಾ, ಅದು ಹಾಂಗಲ್ಲಾ. ಅವರೇನು ಹೇಳ್ತಾರ ಅಂದ್ರ, 'ನೀವು ಶರ್ಮಾ ಅಂತ ಅಡ್ಡಹೆಸರು ಇರಬೇಕು ಅಂದ್ರ ಅಷ್ಟೂ ಕಾಗದಾ ಪತ್ರಾ ಅದೇ ಹೆಸರಿನ್ಯಾಗ ಮಾಡಿಕೊಂಡು ಬರ್ರಿ. ಇಲ್ಲಾ ನಿಮ್ಮ ಮೂಲ ದಾಖಲೆಯೊಳಗ ಏನು ಅಡ್ಡಹೆಸರು ಅದನೋ ಅದೇ ಹೆಸರಾಗ green card ತೊಗೋರಿ. ಏನು ಮಾಡವರು ನೀವು?' ಅಂತ ಆಖ್ರೀ ಸವಾಲ್ ಒಗಿತಾರ ಅವರು. ತಿಳಿತಾ??' ಅಂದಳು ಹುಡುಗಿ. 

'ಹಾಂಗss????'  ಅಂತ ಊದ್ದಕ ಎಳೆದೆ. 

'ಮತ್ತ? ಈ ಅಡ್ನಾಡಿ ಅಡ್ಡಹೆಸರಿನ ಮಂದಿಯ ಹಳೆ ಕಾಗದಾ ಪತ್ರಾ ಎಲ್ಲಾ ಅಡ್ನಾಡಿ ಅಡ್ಡಹೆಸರಿನ್ಯಾಗೇ ಇರ್ತಾವ. ಯಾವಾಗೋ ತಲಿ ಬಂದಾಗ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅಂತ ಏನೇನೋ ಮಾಡಿಕೊಂಡಿರ್ತಾರ. ಈಗ ಅಮೇರಿಕಾದ ಆಫೀಸರ್ ಮಂದಿ, 'ಹೋಗಿ ಎಲ್ಲಾ ಕಾಗದಾ ಪತ್ರಾ ತಿದ್ದಿಸಿಕೊಂಡು, ಎಲ್ಲಾದ್ರಾಗೂ ನಿಮ್ಮ ಹೊಸಾ ಅಡ್ಡಹೆಸರು ಹಾಕಿಸಿಕೊಂಡು, attest ಮಾಡಿಸಿಕೊಂಡು ಬರ್ರಿ,' ಅಂದಾಗ ಸುಸ್ತಾಗಿ ಮಕ್ಕೊಂಡು ಬಿಡ್ತಾರ. ಗೊತ್ತದಯೇನು? ಹಾಂ??' ಅಂತ ಎಲ್ಲ ಡಿಟೈಲ್ ಆಗಿ ಹೇಳಿದಳು. ಚೋಟುದ್ದದ ಹುಡುಗಿಗೆ ಎಲ್ಲಾ ಗೊತ್ತದ ನೋಡ್ರಿ. 

'ಹೀಂಗೆಲ್ಲಾ ಇರ್ತದ ಅಂತಾತು. ಅಡ್ಡಹೆಸರು ಬದಲಾಯಿಸಿಕೊಂಡರೂ ಸುಖಾ ಇಲ್ಲ ಅಂತಾತು. ಸುಡುಗಾಡು ಅಮೇರಿಕಾ ಬಿಡು. ಇಲ್ಲೇ ಮಸ್ತ ಹಾಂಗಿದ್ರ. ಅಲ್ಲಾ? ಒಂದು ಕಡೆ ಶರ್ಮಾ, ಮತ್ತೊಂದು ಕಡೆ ಅಡ್ನಾಡಿ ಅಡ್ಡಹೆಸರು, ಮತ್ತೊಂದು ಕಡೆ ಬರೇ initials ಎಲ್ಲಾ ನಡಿತದ. ಅಲ್ಲಾ? ಇರಲಿ. ಇದೆಲ್ಲಾ ನಿನಗ ಹ್ಯಾಂಗ ಗೊತ್ತಾತವಾ?' ಅಂತ ಕೇಳಿದೆ. 

'ನನ್ನ ಗೆಳತಿ ಒಬ್ಬಾಕಿ ಜವಾರಿ ಶರ್ಮಾ ಅನ್ನೋವನ್ನ ಲಗ್ನಾ ಮಾಡಿಕೊಂಡಳು. ಅಕಿಗೂ ಅಡ್ನಾಡಿ ಅಡ್ಡಹೆಸರಿನ ಗಂಡ ಹರ್ಗೀಸ್ ಬ್ಯಾಡ ಅಂತಿತ್ತು. ಶರ್ಮಾ ಅಂತ ಮಾಡಿಸಿದಳು. ಹನಿಮೂನ್ ಪ್ರಾಮಿಸ್ ಮಾಡಿಬಿಟ್ಟಿದ್ದ ಅಕಿ ಗಂಡಾ ದೂಸರಾ ಮಾತಾಡದೇ ಶರ್ಮಾ ಅಂತ ಅಡ್ಡಹೆಸರು ಬದಲು ಮಾಡಿಸಿಕೊಂಡ. ಎಲ್ಲಾರ ಕಡೆ ತನ್ನ ಹೊಸಾ ಅಡ್ಡಹೆಸರು ಶರ್ಮಾ ಅಂದ. ಮಂದಿ ಕುಂಡಿ ತಟ್ಟಿಕೊಂಡು ನಕ್ಕರು. ಇಬ್ಬರೂ ಅಮೇರಿಕಾಕ್ಕ ಹೋದರು. ಅಲ್ಲೆ ಹೋದಮ್ಯಾಲೆ ಹೀಂಗಾತು. green card ಕೊಡೋ ಮುಂದ ಹಾಕ್ಕೊಂಡು ಸತಾಯಿಸಿಬಿಟ್ಟರು. ಸಾಕಾಗಿ ಹೋತು. ಹಾಳಾಗಿ ಹೋಗಲಿ ಶರ್ಮಾ ಅಂತ ಹೇಳಿ ತಮ್ಮ ಮೊದಲಿನ ಅಡ್ಡಹೆಸರಿಗೇ ಬಂದಾರ . ಕೆಟ್ಟ ಅಸಹ್ಯ ಅಡ್ಡಹೆಸರು. ಕೇಳಿದ್ರ ನನಗ ವಾಕರಕಿ ಬರ್ತದ. ಅದೇ ಹೆಸರಾಗs ಫೇಸ್ಬುಕ್ ಮ್ಯಾಲೆ ಕಂಡಳು. ನನಗ ಘಾತ ಆತು. 'ಯಾಕಲೇ ಹೀಂಗಾತು? ವಾಪಸ್ ಅಡ್ನಾಡಿ ಅಡ್ಡಹೆಸರಿಗೇ ವಾಪಸ್ ಬಂದಾ ನಿನ್ನ ಗಂಡಾ?' ಅಂತ ಕೇಳಿದೆ ಅಕಿ ಕಡೆ. ಕಣ್ಣೀರು ಹಾಕ್ಕೋತ್ತ ಎಲ್ಲಾ ಹೇಳಿದಳು ಮಾಮಾ. ಆವಾಗ ಎಲ್ಲಾ ಗೊತ್ತಾತು ನೋಡು,' ಅಂದಳು ನಮ್ಮ ಹುಡುಗಿ. 

'ಭಾಳ ಶಾಣ್ಯಾ ಇದ್ದಿ ಬಿಡವಾ. ಎಲ್ಲಾ ಈಗೇ ಮಾಹಿತಿ ಇಟ್ಟಿ. ನಿನಗ ಒಳ್ಳೇ ಅಡ್ಡಹೆಸರಿನ ಗಂಡನೇ ಸಿಗಲಿ ಅಂತ ದೇವರ ಕಡೆ ಪ್ರಾರ್ಥನಾ ಮಾಡತೇನಿ. ಆತೇನವಾ?' ಅಂದೆ. 

'ಅಷ್ಟು ಮಾಡು ಸಾಕು ಮಾಮಾ. ಅದು ಬಿಟ್ಟು ನನಗ ವರಾ ಗಿರಾ ಅಂತ ಹುಡುಕಲಿಕ್ಕೆ ಶುರು ಮಾಡಿದಿ ಅಂದ್ರ ನೋಡ್ಕೋ ಮತ್ತ!' ಅಂತ ಬೆರಳು ಹೀಂಗ ಹೀಂಗ ಹಿಂದ ಮುಂದ ಮಾಡಿ ವಾರ್ನಿಂಗ್ ಕೊಟ್ಟಳು. 

ಅಕಟಕಟಾ!

Saturday, July 02, 2016

American revolution to French revolution

Did the American revolution (war of independence) instigate the French revolution?

There are some facts to support the possibility. The French, who supported the US against Britain, were in serious debt and that eventually lead to the French revolution.

That's how true revolutions are and should be. Inspiring. One revolution leading to another. A single torch lighting many torches, one after another.

>>
The French spent 1.3 billion livres (about £56 million). Their total national debt was £187 million, which they could not easily finance; over half the French national revenue went to debt service in the 1780s. The debt crisis became a major enabling factor of the French Revolution as the government could not raise taxes without public approval
<<

America may also choose to extend a small amount of gratitude to an Indian prince, Tipu Sultan, who took on British in India around the same time, possibly at the behest of French to inflict more damages to the worldwide interests of the British. French, Spain, Netherlands dragged Britain into war at many places around the world and hence the British could not focus on fighting the American revolutionaries alone. Their focus and might was scattered and they suffered a bitter defeat and thus the sweet independence of this great country was achieved.

Sadly, Tipu Sultan, who was promised French help when he took on British did not get it in time and died on the battlefield and the kingdom of Mysore came under the British rule. That might have been a small solace to the British after getting hammered by US revolutionaries and their allies in various parts of the world.

Happy independence day, July 4th.

Friday, July 01, 2016

ವಿಶ್ವ ವೈದ್ಯರ ದಿನದಂದು ಹೀಗೊಂದಿಷ್ಟು ಡಾಕ್ಟರ್ ಮಂದಿ ನೆನಪಾದರು.....

ಜುಲೈ ೧, ವಿಶ್ವ ವೈದ್ಯರ ದಿವಸವಂತೆ. ಭಾರತದಲ್ಲಂತೂ ಹೌದು. ಇಲ್ಲಿ ನಮ್ಮ ಅಮೇರಿಕಾದಲ್ಲಿ ಮಾರ್ಚ್ ೩೦ ರಂದು ವಿಶ್ವ ವೈದ್ಯರ ದಿವಸ ಆಚರಿಸುತ್ತಾರೆ.

ವೈದ್ಯೋ ನಾರಾಯಣೋ ಹರಿಃ - ಸತ್ಯವಾದ ಮಾತು. ಹುಟ್ಟಿದಾಗಿಂದ ಇಲ್ಲಿಯವರೆಗೆ ಅದೆಷ್ಟು ಮಂದಿ ವೈದ್ಯರು ಈ ನಮ್ಮ ಬಾಡಿಯನ್ನು, ಮಂಡೆಯನ್ನು ಕಾಪಾಡಿದರೋ ಏನೋ. ನೂರಾರು ಮಂದಿ. ಅವರಲ್ಲಿ ನೆನಪಾದ ಕೆಲವು ಮಂದಿಯನ್ನು ನೆನೆಯೋಣ. ಕೃತಜ್ಞತೆ ಅರ್ಪಿಸೋಣ. ಒಂದಿಷ್ಟು ಹಳೆಯ ನೆನಪುಗಳನ್ನು ಮೆಲಕು ಹಾಕೋಣ ಅಂತ.

****

ಅಮ್ಮನನ್ನು ಜತನದಿಂದ ಹೆರಿಗೆ ಮಾಡಿಸಿ ನಮ್ಮ ಹುಟ್ಟಿಗೆ ಕಾರಣರಾದವರು ಧಾರವಾಡದ ಅಂದಿನ ಖ್ಯಾತ ಪ್ರಸೂತಿ ತಜ್ಞ  ಡಾಕ್ಟರ್ ಕಮಲಾಪುರ ಅವರು. ಮಾಳಮಡ್ಡಿಯಲ್ಲಿದ್ದ ಅವರ ಆಸ್ಪತ್ರೆಯಲ್ಲಿಯೇ ನಮ್ಮ ಅಭೂತಪೂರ್ವ ಜನನ. ಅಭೂತಪೂರ್ವ ಜನನ ಯಾಕೆಂದರೆ ನಾವು ಹುಟ್ಟಿದಾಗ ನಮ್ಮ ತೂಕ ಬರೋಬ್ಬರಿ ಹನ್ನೊಂದು ಪೌಂಡ್. ಅಂದರೆ ಐದು ಕೇಜಿ. ಹೊಸ ದಾಖಲೆ ಕಮಲಾಪುರ ಆಸ್ಪತ್ರೆ ಮಟ್ಟಿಗೆ. ಅದಕ್ಕೇ ಅಭೂತಪೂರ್ವ ಜನನ ಅಂದಿದ್ದು. ಅಂತದ್ದೊಂದು ದೈತ್ಯ ರೂಪದ ಕೂಸನ್ನು ಆ ಡಾಕ್ಟರಾಗಲಿ, ಅಲ್ಲಿಯ ನರ್ಸುಗಳಾಗಲೀ ಹಿಂದೆಂದೂ ನೋಡಿಯೇ ಇರಲಿಲ್ಲ. 'ಏನ್ರೀ ಇದು ಇಂತಾ ಹೊನಗ್ಯಾ ಕೂಸು???' ಅಂತ ನಮ್ಮನ್ನು ಎತ್ತಿಕೊಂಡ ಕಮಲಾಪುರ ಡಾಕ್ಟರ ಅಮ್ಮನ ಕಡೆ ನೋಡಿದರೆ ಅಷ್ಟೇ. ದೈತ್ಯ ಕೂಸನ್ನು ಹೆತ್ತು ಸುಸ್ತಾಗಿ ನಮೋ ನಮಃ ಅಂತ ಮಲ್ಕೊಂಡು ಬಿಟ್ಟಿದ್ದರು ಅಮ್ಮ. ಅಂತಹ ಹೊನಗ್ಯಾ ಸೈಜಿನ ನಮ್ಮಂತವರನ್ನು ಹೊತ್ತು, ಹೆತ್ತು, ಹಡೆಯೋದು ಅಂದ್ರೆ ಸಾಮಾನ್ಯವೇ????

ಹೀಗೆ ಹುಟ್ಟುಹುಟ್ಟುತ್ತಲೇ ದಾಖಲೆ ಬರೆದೇ ಹುಟ್ಟಿದ್ದ ನಮ್ಮ ಮೇಲೆ ಕಮಲಾಪುರ ಡಾಕ್ಟರಿಗೆ ಏನೋ ಪ್ರೀತಿ. ಬಾಲ್ಯದಲ್ಲಿ ಅವರ ಮನೆಗೆ ಹೋದಾಗೊಮ್ಮೆ, 'ನಮ್ಮ ಹೊನಗ್ಯಾ ಕೂಸು,' ಅಂತಲೇ ಪ್ರೀತಿಯಿಂದ ತಲೆ ಸವರಿ ಮಾತಾಡಿಸಿದ್ದು ಇನ್ನೂ ನೆನಪಿದೆ ಬಿಡಿ. ಅವರಿಗೂ ಆಗಲೇ ತುಂಬಾ ವಯಸ್ಸಾಗಿತ್ತು. ನಮಗೆ ಐದಾರು ವರ್ಷವಾಗುವಷ್ಟರಲ್ಲಿ ಅವರೂ ನಿಧನರಾಗಿದ್ದರು.

ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು ಅನ್ನುವಂತೆ ಮುಂದೆ ದೈತ್ಯಾಕಾರವಾಗಿ ಬೆಳೆಯುವ ಆದ್ಮಿಯನ್ನು ಹೊನಗ್ಯಾಕಾರದ ಕೂಸಿನಲ್ಲಿ ಕಾಣು. ಆ ಮಾತು ನಿಜವಾಗಿ ಈಗ ಇರುವ ದೈತ್ಯಾಕಾರವನ್ನು ಸಂಬಾಳಿಸಿಕೊಂಡು ಹೋದರೆ ಸಾಕಾಗಿದೆ.

****

ಪುರಾತನ ಕಾಲದ ಉಪಾಧ್ಯೆ ಡಾಕ್ಟರ್ ನಮ್ಮ ತಂದೆಯವರ ಡಾಕ್ಟರ್. ಉಪಾಧ್ಯೆ ಪ್ರಾಕ್ಟೀಸ್ ಬಿಡುವ ಮೊದಲು ಮಾಳಮಡ್ಡಿಯ ಡಾ. ಜೀ.ಟಿ. ಪಾಟೀಲ್ ಎಂಬ ಡಾಕ್ಟರ್ ಒಬ್ಬರನ್ನು ಪರಿಚಯಿಸಿದ್ದರು. ಅಂದಿನಿಂದ ಅವರೇ ನಮಗೆ ಫ್ಯಾಮಿಲಿ ಡಾಕ್ಟರ್.

(ಹಿಂದಿನ ವರ್ಷ ಇದೇ ದಿನ ಉಪಾಧ್ಯೆ ಡಾಕ್ಟರ್ ಬಗ್ಗೆ ಬರೆದಿದ್ದ ಲೇಖನ ಇಲ್ಲಿದೆ.)

ಜೀ.ಟಿ. ಪಾಟೀಲ್ ಡಾಕ್ಟರ್ ಬಗ್ಗೆ ಬರೆಯುತ್ತ ಹೋದರೆ ಒಂದು ನಾಲ್ಕು ಪುಸ್ತಕ ಬರೆಯಬಹುದು. ತುಂಬಾ ಒಳ್ಳೆಯ ಮನಸ್ಸಿನ ಡಾಕ್ಟರ್. ಆದ್ರೆ ರಫ್ ಅಂಡ್ ಟಫ್ ಅನ್ನುವ ರೀತಿಯಲ್ಲಿ ಅವರ ಖಡಕ್ ಟ್ರೀಟ್ಮೆಂಟ್. ಎಲ್ಲೋ ಸೈನ್ಯದಲ್ಲಿ ಸೈನಿಕರನ್ನು ಯುದ್ಧಭೂಮಿಯ ಮೇಲೆಯೇ ಚಿಕಿತ್ಸೆ ಮಾಡುತ್ತಿದ್ದಾರೋ ಅನ್ನುವ ಮಾದರಿಯಲ್ಲಿ ಅವರ ಚಿಕಿತ್ಸೆ. ಅವರ ಇಂಜೆಕ್ಷನ್ ಅಂದ್ರೆ ಭಯಾನಕ. ಆಗೆಲ್ಲ ಇಂಜೆಕ್ಷನ್ ಔಷಧಿ ಗಾಜಿನ ಬಾಟಲಿಗಳಲ್ಲಿ ಬರುತ್ತಿತ್ತು. ಮೇಲೆ ಒಂದು ರಬ್ಬರ್ ಬಿರಡೆ ಇರುತ್ತಿತ್ತು. ಇಂಜೆಕ್ಷನ್ ಸೂಜಿಯನ್ನು ಸೀದಾ ಆ ರಬ್ಬರ್ ಬಿರಡೆಯ ಮೂಲಕ ನುಗ್ಗಿಸಿ, ಔಷಧಿ ಎಳೆದುಕೊಂಡು, ದಪ್ಪನೆಯ ಸೂಜಿ ಬದಲಾಯಿಸಿ, ಸಣ್ಣನೆಯ ಸೂಜಿ ಹಾಕಿಕೊಂಡು, ತುಂಬಾ ನಾಜೂಕಿನಿಂದ ಇಂಜೆಕ್ಷನ್ ಕೊಟ್ಟರೂ ಸಾಕಷ್ಟು ನೋಯುತ್ತಿತ್ತು. ಪಾಟೀಲ್ ಡಾಕ್ಟರಿಗೆ ಅದೆಲ್ಲ ನಾಜೂಕು ಇಲ್ಲವೇ ಇಲ್ಲ. ಔಷಧಿ ಎಳೆದುಕೊಂಡ ದಪ್ಪ ಸೂಜಿ ಬದಲು ಮಾಡುತ್ತಲೇ ಇರಲಿಲ್ಲ. ಅದರಲ್ಲೇ ಚುಚ್ಚಿಬಿಡುತ್ತಿದ್ದರು. ಯಪ್ಪಾ! ಸಾಯುವ ಮಾದರಿಯಲ್ಲಿ ನೋವು. ಹುಟ್ಟುವಾಗ ಐದು ಕೇಜಿಯ ಬೇಬಿ ಆಗಿದ್ದರೂ ನಂತರ ಬಡಕಲಾಟಿಯಾಗಿ ಬದಲಾಗಿ ರಟ್ಟೆಯಲ್ಲಿ ಮಾಂಸವೇ ಇರದ ನಮಗೆ ಅವರ ಖತರ್ನಾಕ್ ಇಂಜೆಕ್ಷನ್ ಅಂದರೆ ಜೀವ ಹೋದ ಅನುಭವ. ಅಪ್ಪ, ಅಣ್ಣ ಕೈಕಾಲು ಹಿಡಿದುಕೊಂಡರೆ ಯಮದೂತನ ಪರ್ಸನಾಲಿಟಿ ಇದ್ದ ಪಾಟೀಲ್ ಡಾಕ್ಟರ್ ರಟ್ಟೆಗೆ ಇಂಜೆಕ್ಷನ್ ನುಗ್ಗಿಸುತ್ತಿದ್ದರು. ನಾವು ಲಬೋ! ಲಬೋ! ಲಬೋ! ಅಂತ ಹೊತ್ತಲ್ಲದ ಹೊತ್ತಿನಲ್ಲಿ ಹೋಳಿ ಹುಣ್ಣಿಮೆ ಕೂಗು ಹಾಕುತ್ತಿದ್ದೆವು. ಉಳಿದವರು ಹಲಗೆಯನ್ನು ಬಾರಿಸುತ್ತಿದ್ದರು. ನಮಗೇ ಬಾರಿಸುತ್ತಿದ್ದರು.

ಬಾಲ್ಯದಲ್ಲಿ ಎಂಟು ವರ್ಷಗಳಾಗುವವರೆಗೆ ಪಾಟೀಲ್ ಡಾಕ್ಟರ ಇದ್ದಿದ್ದು ನಮ್ಮ ಬಾಲಲೀಲೆಗಳನ್ನು ಅದೆಷ್ಟೋ ಮಟ್ಟಿಗೆ ನಿಯಂತ್ರಿಸಲು ಮನೆ ಮಂದಿಗೆ ಸಹಾಯವಾಗಿರಬೇಕು ಬಿಡಿ. 'ಭಾಳ ನೀರಾಗ ಆಡಬ್ಯಾಡ. ಜ್ವರಾ ಬಂತು ಅಂದ್ರ ಮತ್ತ ಇಂಜೆಕ್ಷನ್ ಕೊಡ್ತಾರ ನೋಡು ಡಾಕ್ಟರ್ ಜೀಟಿ ಪಾಟೀಲರು,' ಅಂದರೆ ಸಾಕು. ನೀರಾಟ ತಾಪಡ್ತೋಪ್ ನಿಲ್ಲುತ್ತಿತ್ತು. ಮಧ್ಯಾನ ನಿದ್ದೆ ಮಾಡದೇ ಬಿಸಿಲಲ್ಲಿ ಬೀದಿ ತಿರುಗಲು ಹೊಂಟರೆ ಮತ್ತೆ ಅದೇ ರೀತಿ ಹೆದರಿಕೆ. ಅವರ ಇಂಜೆಕ್ಷನ್ ಅಂತೂ ಬಿಡಿ. ಕೊಡುತ್ತಿದ್ದ mixture ಔಷಧಿ ಕೂಡ ಡೆಡ್ಲಿ ಆಗಿರುತ್ತಿತ್ತು. ಕಹಿ ಅಂದರೆ ಅಷ್ಟು ಕಹಿ. ಕುಡಿಯಲು ಆಗುತ್ತಲೇ ಇರುತ್ತಿರಲಿಲ್ಲ. ನಾವು ಹಾಗೆ ಸುಮ್ಮನೆ ಕುಡಿಯುತ್ತಲೂ ಇರಲಿಲ್ಲ. ರುಚಿರುಚಿಯಾದ ಊಟ ಮಾಡಲೂ ಹಟ ಮಾಡುವವರು ನಾವು. ಇನ್ನು ಆ ಕೆಟ್ಟ ಕಹಿ ಔಷಧಿ ಕುಡಿಯುತ್ತೆವೆಯೇ? ಸಾಧ್ಯವೇ ಇಲ್ಲ. ಮತ್ತೆ ಟಾರ್ಚರ್ ಸೆಶನ್. ಮನೆ ಮಂದಿ ಕೈಕಾಲು ಹಿಡಿದು ಮಲಗಿಸುತ್ತಿದ್ದರು. ಅಪ್ಪ ಮೂಗು ಹಿಡಿಯುತ್ತಿದ್ದ. ಮೂಗು ಹಿಡಿದ ತಕ್ಷಣ ಬಾಯಿ ಅಗಲಕ್ಕೆ ಓಂ ಅನ್ನುವ ಹಾಗೆ ಬಿಡುತ್ತಿತ್ತು. ಅಮ್ಮ ಬಾಯಿಗೆ ಕೆಟ್ಟ ಕಹಿ ಔಷಧ ಹೊಯ್ಯುತ್ತಿದ್ದಳು. ರಾಮ ರಾಮ!

ಮಕ್ಕಳಿಗೆ ಟೈಫಾಯಿಡ್, ಕಾಲರಾ ಬರದೇ ಇರಲಿ ಅಂತ ಪ್ರತಿ ವರ್ಷ ವ್ಯಾಕ್ಸೀನ್ ತೆಗೆದುಕೊಳ್ಳುವದು ಪದ್ಧತಿ. ಯಾಕೆಂದರೆ ತಂದೆಯವರು MSc ಮಾಡುತ್ತಿರುವಾಗ ಅಂತಿಮ ಪರೀಕ್ಷೆ ಸಮಯಕ್ಕೆ ಟೈಫಾಯಿಡ್ ಆಗಿ ಒಂದು ವರ್ಷ ಕಳೆದುಕೊಂಡಿದ್ದರು. ಹಾಗಾಗಿ ಮಕ್ಕಳಿಗೆ ಪ್ರತಿ ವರ್ಷ ಖಾಯಂ ವ್ಯಾಕ್ಸೀನ್. ಆ ವ್ಯಾಕ್ಸೀನ್ ಹಾಕಿಸಿಕೊಂಡ ನಂತರ ಸಣ್ಣ ಜ್ವರ ಬರುತ್ತದೆ. ದೇಹ ರೋಗನಿರೋಧಕ ಶಕ್ತಿಯನ್ನು ತಯಾರಿಸುತ್ತಿರುವಾಗ ಬರುವ ಜ್ವರ ಅಂತ ಹೇಳಿದ್ದರು. ಮೇಲಿಂದ ಇವರೋ ದಬ್ಬಣ ಚುಚ್ಚಿದಾಂಗೆ ಚುಚ್ಚುತ್ತಾರೆ. ವ್ಯಾಕ್ಸೀನ್ ತೆಗೆದುಕೊಂಡ ನಂತರ ಒಂದು ವಾರ ಬೇಕಾಗುತ್ತಿತ್ತು ಸುಧಾರಿಸಿಕೊಳ್ಳಲಿಕ್ಕೆ. ಟೈಫಾಯಿಡ್, ಕಾಲರಾ ಬಂದರೆ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಪೂರ್ತಿ ಗುಣಮುಖರಾಗಲು. ಹಾಗಾಗಿ ವ್ಯಾಕ್ಸೀನ್ ತೆಗೆದುಕೊಳ್ಳುವದರಲ್ಲಿ ಶಾಣ್ಯಾತನವಿತ್ತು.

ಒಮ್ಮೆ ನಮ್ಮ ಮಾಳಮಡ್ಡಿಯ ನೆರೆಹೊರೆಯವರಾದ ಹುದ್ದಾರರ ಮನೆಗೆ ಹೋಗಿದ್ದೆವು. ದಾಂಡೇಲಿಗೆ ಪರೀಕ್ಷಾ ಕೆಲಸಕ್ಕೆ ಹೋಗಿದ್ದ ತಂದೆಯವರಿಗೆ ಒಂದು ಒಂದು ಟ್ರಂಕ್ ಕಾಲ್ ಮಾಡಬೇಕಿತ್ತು. ಫೋನ್ ಇದ್ದಿದ್ದು ಹುದ್ದಾರ ಅವರ ಮನೆಯಲ್ಲಿ ಮಾತ್ರ. ಅಮ್ಮನ ಜೊತೆ ಅಲ್ಲಿ ಹೋದರೆ ಸುಮ್ಮನಿರುವ ಪೈಕಿಯೇ ನಾನು? ನಾನೇ ಅವರ ಮನೆ ಯಬಡ ನಾಯಿಯನ್ನು ರೇಗಿಸಿದೆನೋ ಅಥವಾ ಅದಾಗೇ ರೈಸ್ ಆಗಿಬಿಡ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾಲಿಗೆ ಬಾಯಿ ಹಾಕಿಯೇಬಿಡ್ತು. ಜಾಸ್ತಿ ಏನೂ ಕಚ್ಚಲಿಲ್ಲ. ಸ್ವಲ್ಪ ಹಲ್ಲು ತಾಗಿತು ಅಷ್ಟೇ. ಹುದ್ದಾರ ಮಾಮಿ ಸುಣ್ಣ ಮತ್ತು ಬೆಲ್ಲ ತಿಕ್ಕಿ ಕಳಿಸಿದ್ದರು. ನಾಯಿ ಕಚ್ಚಿದ ನಂತರ ಸುಣ್ಣ ಮತ್ತು ಬೆಲ್ಲ ಹಚ್ಚಿಕೊಳ್ಳಬೇಕು ಅಂತ ಹೊಸ ವಿಷಯ ಗೊತ್ತಾಗಿದ್ದು ಆವಾಗೇ.

ಈಗ ಬಂತಲ್ಲ ದೊಡ್ಡ ಗಂಡಾಂತರ. ನಾಯಿ ಕಚ್ಚಿದರೆ ಹದಿನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳಬೇಕು. ಅದೂ ಹೊಟ್ಟೆ ಮೇಲೆ ಹೊಕ್ಕುಳ ಸುತ್ತ ಕೊಡುತ್ತಾರೆ. ಯಮನೋವು ಅಂತ ಕೇಳಿದ್ದೆ. ಅದನ್ನು ಡಾಕ್ಟರ್ ಜೀಟಿ ಪಾಟೀಲರ ಕೈಯಲ್ಲಿ ತೆಗೆದುಕೊಳ್ಳುವದನ್ನು ಊಹಿಸಿಕೊಂಡರೆ ಎಲ್ಲೆಲ್ಲೋ ಏನೇನೋ ಆಗತೊಡಗಿತು. ತೆಗೆದುಕೊಳ್ಳಲಿಲ್ಲ ಅಂದರೆ ನಾಯಿ ಹುಚ್ಚು ಹಿಡಿದರೆ ಅಂತ ಮತ್ತೊಂದು ತರಹದ ಹೆದರಿಕೆ. ಹಾಗಾಗಿ ಏನೋ ಧೈರ್ಯಮಾಡಿ ಹೋದೆ. ಜೀಟಿ ಪಾಟೀಲ್ ಎಲ್ಲ ಚೆಕ್ ಮಾಡಿ, ನಾಯಿಯ ವಿವರಣೆ ಕೇಳಿ, ಏನೂ ಬೇಡ ಅಂತ ಹೇಳಿದರು. ಬದುಕಿದೆಯಾ ಬಡಜೀವವೇ ಅಂತ ಹೇಳಿ ಬಂದೆ. ಅದೇ ಕೊನೆ. ಮುಂದೆ ನಾಯಿಗಳಿಗೆ ಬಾಲ ಗೀಲ ಎಳೆದು ಎಂದೂ ರೇಗಿಸಿಲ್ಲ.

****

ಎಲ್ಲ ಡಾಕ್ಟರುಗಳೂ ಜೀಟಿ ಪಾಟೀಲರ ಹಾಗೆ ರಫ್ ಅಂಡ್ ಟಫ್ ಇರುವದಿಲ್ಲ, ಕೆಲವರು ನಾಜೂಕಾಗಿಯೂ ಇರುತ್ತಾರೆ ಅಂತ ತಿಳಿಯಲಿಕ್ಕೆ ಒಮ್ಮೆ ಪಾಟೀಲ್ ಡಾಕ್ಟರ್ ರಜೆ ಹಾಕಿ ಎಲ್ಲೋ ಹೋಗಬೇಕಾಯಿತು. ಆವಾಗಲೇ ಜಡ್ಡು ಬಿದ್ದೆ. ಆವಾಗ ಬಂದವರು ಕಮಲಾಪುರ ಡಾಕ್ಟರ್  ಬಾಯಿ. ಲೇಡಿ ಡಾಕ್ಟರ್. ನಮ್ಮನ್ನು ಈ ಭೂಮಿಗೆ ತಂದ ಪುರಾತನ ಕಮಲಾಪುರ ಡಾಕ್ಟರ್ ಅವರ ಸೊಸೆ. ಅವರು ಚೈಲ್ಡ್ ಸ್ಪೆಷಲಿಸ್ಟ್ ಆಗಿದ್ದರೇ? ನೆನಪಿಲ್ಲ. ತುಂಬಾ ಒಳ್ಳೆ ಡಾಕ್ಟರ್. ಅವರು ಕೊಡುತ್ತಿದ್ದ ಇಂಜೆಕ್ಷನ್ ಜೀಟಿ ಪಾಟೀಲರು ಕೊಡುತ್ತಿದ್ದ ಇಂಜೆಕ್ಷನ್ ನೋವಿನ ೧೦% ಸಹಿತ ಆಗುತ್ತಿರಲಿಲ್ಲ. ಮತ್ತೆ ಎಲ್ಲಿ ಕೊಬ್ಬು ಜಾಸ್ತಿ ಇದೆಯೋ ಅಲ್ಲಿಯೇ ಕೊಡುತ್ತಿದ್ದರು. ತಿಕ ಕೊಬ್ಬು ಇರುವದು ಯಾವದಕ್ಕೆ ಉಪಯೋಗವಾಗದಿದ್ದರೂ ಇಂಜೆಕ್ಷನ್ ತೆಗೆದುಕೊಳ್ಳಲು ಮಾತ್ರ ಸಹಾಯಕಾರಿ. ರಟ್ಟೆಯಲ್ಲಿ ಬಲವಿರಬೇಕು. ಇಲ್ಲವಾದರೆ ತಿಕದಲ್ಲಿ ಕೊಬ್ಬಿರಬೇಕು. ಎರಡರಲ್ಲಿ ಒಂದಾದರೂ ಇದ್ದರೆ ಇಂಜೆಕ್ಷನ್ ತೆಗೆದುಕೊಳ್ಳಲು ಸಹಾಯಕಾರಿ ಅಂತ ಅರ್ಥ.

ಮತ್ತೆ ಕಮಲಾಪುರ ಡಾಕ್ಟರಿಣಿ ಬಾಯಿ ಕೊಡುತ್ತಿದ್ದ ಔಷಧಿ ಸಹ ಸಿಹಿಯಾಗಿರುತ್ತಿತ್ತು. ಮೂಗು ಹಿಡಿಯುವದು, ಬಾಯಿ ತೆಗೆಸುವದು ಯಾವದೂ ಬೇಕಾಗುತ್ತಿರಲಿಲ್ಲ. ಖುದ್ದಾಗಿ ಕೇಳಿ ಇಸಿದುಕೊಂಡು ಕುಡಿಯುತ್ತಿದ್ದೆ. ಇವರೇ ನಮ್ಮ ಖಾಯಂ ಡಾಕ್ಟರಿಣಿ ಆಗಿದ್ದರೆ ಎಷ್ಟು ಒಳ್ಳೆಯದಿತ್ತು ಅಂತ ಅನ್ನಿಸಿತ್ತು. ಆದರೆ ಜೀಟಿ ಪಾಟೀಲರು ತಂದೆಯವರಿಗೆ ತುಂಬಾ ಖಾಸ್ ದೋಸ್ತರು. ಹೀಗಾಗಿ ಆಗಾಗ ನರಕ ಸದೃಶ ಅವರ ದವಾಖಾನೆಯ ದರ್ಶನವಾಗುತ್ತಿತ್ತು. ಆದರೆ ಅದು ಕಹಿ ಔಷಧಿಗೇ ಜಾಸ್ತಿ ನಿಲ್ಲುತ್ತಿತ್ತು. ಹೆಚ್ಚಿನ ಇಂಜೆಕ್ಷನ್ ತೆಗೆದುಕೊಳ್ಳುವ ಪರಿಸ್ಥಿತಿ ಬರಲಿಲ್ಲ. ಅದೇ ದೊಡ್ಡ ನಸೀಬ್.

(ಹಿಂದಿನ ವರ್ಷ ಬರೆದಿದ್ದ ಲೇಖನವೊಂದರಲ್ಲಿ ಜೀಟಿ ಪಾಟೀಲ ಡಾಕ್ಟರ್, ಕಮಲಾಪುರ ಡಾಕ್ಟರ್ ಬಾಯಿ ಬಗ್ಗೆ ಪ್ರಸ್ತಾಪಿಸಿದ್ದೆ. ಇಲ್ಲಿದೆ ಆ ಲೇಖನ.)

****

ಎಲ್ಲ ವೈದ್ಯರಿಗೆ ವಿಶ್ವ ವೈದ್ಯ ದಿವಸದ ಶುಭಕಾಮನೆಗಳು, ಶುಭಾಶಯಗಳು.

ಮುಂದಿನ ವರ್ಷ ಮತ್ತೊಂದಿಷ್ಟು ವೈದ್ಯರನ್ನು ನೆನೆಯೋಣ.