Friday, December 29, 2017

Relatives are called relatives for a reason....

Relatives are called relatives because happiness or unhappiness that comes from them is only relative. Not absolute.

The blunder we make is we try to find the absolute happiness in relatives. If they could provide absolute happiness, they would be called ABSOLUTES and not RELATIVES. :)

So, keep everything related to relatives on a relative plane only. Don't bring them on the absolute plane. This applies to all relatives. Does not matter how close or how distant they may be.

Relative means relative, that is dispensers of relative happiness or unhappiness.

**

All our pains and gains are tied to two things - our possessions and our relations. Examine it closely and you will find it is true.

All (perceived) happiness comes from our possessions and relations. All unhappiness or pain also comes from those two entities only.

The problem with pain and pleasure is they are on different scales. If pleasure is on linear scale, pain is on geometric scale. If something gives you one unit of pleasure, same thing is likely to give five units of pain later. Best example: alcohol. 4 hours of partying results in next entire day gone nursing a nasty hangover. 4 hours pleasure causing 24 hours of pain. Pleasure to pain ratio - 1 is to 6.

Pain and pleasure are two extremes of a pendulum. But this is a peculiar pendulum. Two extremes are at equal distance on a normal pendulum. But on this pendulum, pain extreme is five times the extreme of pleasure.

You will find an elaborate discourse on this very subject in 'complete works of Swami Vivekananda.' Read it and you will stop attaching so much importance to transient pleasures like food, drinks, friends, family etc.

So, be careful enjoying pleasures. Be careful about your possessions and relations.

Best example of possession is not our money or assets but our body. This most prized possession, human body, after some age, even if cared well, is the source of maximum grief. Worst grief comes from not being able make peace with the fact that it is body's very nature to age and wither away completely one day.

All make-up that is applied on the body is to hide its break-up. Make-up to hide break-up (wear and tear).

**

Relatives may provide only relative happiness. May be that's the reason they have named a vodka ABSOLUT.

May be many are trying to find absolute happiness in ABSOLUT vodka.

But remember - you may try to drown your sorrows in alcohol but sorrows know how to swim. They stare right back at you next morning. Their harsh stare will be worse than before. :)

**

A person wrote a suicide note and locked himself in a room. Somebody saw the note after some time and rushed to the room where he had locked himself in. They broke open the door and what they found was simply unbelievable.

The person was found hanging. But, wait. He was alive!

What knocked them out of senses was he was found hanging by waist instead of neck.

On one hand, they were relieved and happy to find the person was alive. But there were also intrigued why he was hanging by waist if he intended to commit suicide.

'Why are you hanging by waist? Don't you have to hang yourself by neck if you want to die, you fool!!?' they yelled at the person.

His answer.....

'I am having throat ache!'

:) :)

Still laughing at this joke......

**

Source: Borrowed wisdom from Swami Anubhavananda's discourses and other books etc.

Thursday, December 28, 2017

Nobel Prize for Two Professors of Brandeis University

A very happy news to end the year 2017.

Two renowned professors from my alma mater, Brandeis University, have won this year's most prestigious Nobel Prize in physiology and medicine.

Fantastic achievement indeed!

Hearty congratulations to professors Michael Rosbash and Jeff Hall. They have been awarded Nobel prize along with another scientist for their landmark research related to circadian rhythms. Circadian rhythms control our biological clock.

Brandeis University is very dear to my heart. That's where I got my first master's degree in 2001. Thanks to the encouragement and excellent recommendations from professors at Brandeis, I also got admission to pursue MBA at Suffolk University. In short, Brandeis University and what I learned there tremendously helped me in my career and in other areas of life. Ever grateful to Brandeis for that. Got good education, learnt a great deal and made some great friends.

I did not study under these Nobel laureates as I studied for masters in Software Engineering. I want to so wishfully believe I ran into them, even if unknowingly, on campus. :)

Nobel prizes were announced much earlier in October itself. Somehow I had missed that news. Only recently Brandeis sent a reply acknowledging my annual contribution. I normally discard such letters without paying much attention. But, this time I somehow glanced on it and was very happy to learn about this fantastic achievement.

A moment of great pride and sense of accomplishment for the entire Brandeis community.

Once again, congratulations to the professors and to the Brandeis university.

Brandeis University has a very interesting history. It was started by the Jewish community at the end of second world war. It is named after one of the eminent judges of the US supreme court. The most famous physicist of the last century, Albert Einstein, was one of the founders of this great institution.

There have been many renowned personalities at Brandeis. List is too long. Abraham Maslow, famous for his pyramid of human needs, worked at Brandeis. Eminent Indian physicist Prof. Balakrishnan of TIFR obtained his PhD from Brandeis. Ed Witten, the most eminent string theory physicist who may very well win physics Nobel in future,  studied at Brandeis.

I have always been a very proud and grateful alumnus of Brandeis university. This achievement has made it only stronger.

In addition to MS in Software Engineering, I had started working on another MS in Project Management at Brandeis in 2004 but abandoned it midway in 2006. No grief. It was a great learning experience completing half the degree. As they say 'it is not the degree but the education that matters.' :)

Cheers to 2018!

Happy new year in advance!

Monday, November 20, 2017

Two interesting new books

Read two very interesting books recently. Just wanted to pass on the information to fellow-book-lovers.


1) The Bhais of Bengaluru by Jyoti Shelar: An excellent and sensational book tracing the history of the Bangalore's underworld. Very well written and captivating. A lot information in a small book. If you are a total newbie to the subject, you may not understand all the linkages, alliances, strange incidents that happened in the underworld of silicon city over the years but I am sure it will keep you glued.

You may have to read other books on the subject to understand subtleties. Books by Agni Sridhar and Ravi Belagare (in Kannada) are excellent.

In 2011, Suvarna News Channel had run, a close to 100 episodes, serial on Bangalore's underworld called 'Underworld Flashback'. That was also very good. It's available on YouTube. Many notorious and still surviving characters from the Bangalore underworld appeared in it.



2) Don't Disturb the Dead : The Story of The Ramsay Brothers by Shamya Dasgutpa : This book is about the Bollywood's FIRST FAMILY as far as horror movie genre is concerned, The Ramsays.

There is a witty and funny saying, also used as a dialog in some movie, about this special Bollywood family. Ramsay!! dar lagta hai in ke naam se. (Ramsay, the name itself is so scary).

The book is about the Ramsay family which moved to Mumbai during the partition from Karachi. Ramsinghani family, originally involved in radio business, started making movies and horror genre became their specialty. They never looked back. Ramsay family is a close-knit family of 10-12 people with the father at the helm and brothers and their wives handling different aspects of movie making. Only outsiders were actors.

Despite being pioneers and trailblazers, Ramsays did not get adequate credit, recognition and appreciation for their innovation and creativity. This book tries to fill that void.

Taking a bow, Ramsays. There may be Kapoors, Chopras etc. who hogged all the Bollywood limelight. You guys are nothing less. Make more horror movies.

PS: For Hindi horror movie aficionados, one of the new generation Ramsay has digitized all their movies and made them available for free on YouTube. Watch and spook yourself to death! :)

Link to my all time favorite and my first ever Ramsey movie is below. The the great 'Purana Mandir' of 1984-85. Believe it or not, it was the movie that grossed second highest amount at box office in that year beating many other movies from bigger production houses and with superior star cast! It was in a class of its own. Crown jewel of Hindi horror movies!

 

Tuesday, October 31, 2017

ಯಾವಾಗ ಸುಳ್ಳು ಹೇಳಬಹುದು?

ಕೆಳಗಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದಂತೆ.

೧. ಪುರುಷ ಮತ್ತು ಮಹಿಳೆ ಮಿಲನಸುಖ ಅನುಭವಿಸುತ್ತಿರುವಾಗ ಪುರುಷನು ಸುಳ್ಳುಗಳನ್ನು ಹೇಳಬಹುದು. ಅವುಗಳನ್ನು ಹಾಸ್ಯೋಕ್ತಿ (Jokes) ಎಂದು ಪರಿಗಣಿಸಲಾಗುತ್ತದೆ.
೨. ಮಹಿಳೆಯನ್ನು ಗೆಲ್ಲಲು (ಪಟಾಯಿಸಲು) ಸುಳ್ಳುಗಳನ್ನು ಹೇಳಬಹುದು.
೩. ಮದುವೆ ಮಾಡಿಸಲು ಸುಳ್ಳು ಹೇಳಬಹುದು ('ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು,' ಎಂಬುದು ಇಲ್ಲಿಂದಲೇ ಬಂತೋ ಹೇಗೆ!?)
೪. ಪ್ರಾಣಾಪಾಯವಿರುವಾಗ ಪ್ರಾಣ ಉಳಿಯುತ್ತದೆ ಎಂದಾದರೆ ಸುಳ್ಳು ಹೇಳಬಹುದು.
೫. ಸಕಲ ಸಂಪತ್ತು ನಾಶವಾಗಲಿದೆ, ಕಳೆದುಹೋಗಲಿದೆ ಎಂದಾದಾಗ ಸುಳ್ಳು ಹೇಳಬಹುದು.

ಲೋಕದ ಜನ ಈ ಸಂದರ್ಭಗಳಲ್ಲೇ ಅಲ್ಲವೇ ಗರಿಷ್ಠ (ಮ್ಯಾಕ್ಸಿಮಮ್) ಸುಳ್ಳುಗಳನ್ನು ಹೇಳುವದು? ಮತ್ತು ಇದೇ ಸಂದರ್ಭಗಳಲ್ಲಿ ಜನ ಸುಳ್ಳುಗಳನ್ನು ನಂಬುತ್ತಾರೆ ಕೂಡ.

ಇದು ಭಾಗವತ ಪುರಾಣದಲ್ಲಿ (ಶ್ರೀಮದ್ಭಾಗವತದಲ್ಲಿ) ಬರುತ್ತದೆ.

ಸಂದರ್ಭದೊಡನೆ ಸ್ಪಷ್ಟೀಕರಣ: ಅಸುರ ರಾಜಕುಮಾರಿ ಶರ್ಮಿಷ್ಠಾ ಮಹಾರಾಜಾ ಯಯಾತಿಯಲ್ಲಿ ಮೋಹಗೊಳ್ಳುತ್ತಾಳೆ. ಯಯಾತಿ ಆಗಲೇ ವಿವಾಹಿತ. ಆದರೆ ಶರ್ಮಿಷ್ಠಾ ಸಿಕ್ಕಾಪಟ್ಟೆ ಸುಂದರಿ. ಅವನೂ ಆಕೆಯಲ್ಲಿ ಮೋಹಗೊಳ್ಳುತ್ತಾನೆ. ಆದರೆ ದೇವಯಾನಿಯನ್ನು ಮದುವೆಯಾಗಿರುತ್ತಾನಲ್ಲ. ಈ ದೇವಯಾನಿ ಶರ್ಮಿಷ್ಠಾಳ ಗೆಳತಿ. ದೈತ್ಯಗುರು ಶುಕ್ರಾಚಾರ್ಯರ ಮಗಳು. ಹಾಗಿರುವಾಗ ದೇವಯಾನಿಗೆ ಏನೆಂದು ಹೇಳಿ ಹೇಗೆ ಶರ್ಮಿಷ್ಠಾಳನ್ನು ಮದುವೆಯಾದಾನು ಯಯಾತಿ?

ಯಯಾತಿ ತನ್ನ ಸಂಕಷ್ಟವನ್ನು ಹೇಳಿಕೊಂಡಾಗ ಶರ್ಮಿಷ್ಠಾ ಹೇಳುತ್ತಾಳೆ, 'ಸುಳ್ಳು ಹೇಳಯ್ಯಾ!'

'ಹೇಗೆ ಸುಳ್ಳು ಹೇಳಲಿ? ಸುಳ್ಳು ಹೇಳುವದು ತಪ್ಪಲ್ಲವೇ?' ಎಂದು ಕೇಳುತ್ತಾನೆ ಯಯಾತಿ.

'ಎಲ್ಲ ಶಾಸ್ತ್ರಗಳನ್ನು ಓದಿರುವ ನಿನಗೆ ಗೊತ್ತಿಲ್ಲದೇನಿದೆ? ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎಂದು ಶಾಸ್ತ್ರಗಳಲ್ಲೇ ಹೇಳಿದ್ದಾರಲ್ಲ?' ಎನ್ನುತ್ತಾಳೆ ಶರ್ಮಿಷ್ಠಾ.

ಯಾಯಾತಿಗಂತೂ ಯಾವ ಶಾಸ್ತ್ರಗಳಲ್ಲಿ ಸುಳ್ಳು ಹೇಳುವ ಅನುಮತಿ ಇದೆ ಎಂದು ನೆನಪಾಗುವದಿಲ್ಲ.

ಆಗ ಶರ್ಮಿಷ್ಠಾ ಮೇಲಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎನ್ನುತ್ತಾಳೆ.

ಅಲ್ಲಿಗೆ ದೇವಯಾನಿಗೆ ಸವತಿ ಬರುವ ಸ್ಕೆಚ್ ತಯಾರಾಗುತ್ತದೆ.

ಆದರೆ ಸುಳ್ಳು ಹೇಳಲು ಸಮ್ಮತಿ ಯಾವ ಶಾಸ್ತ್ರದಲ್ಲಿ ಇದೆ ಎಂದು ಯಯಾತಿಯೂ ಕೇಳಿರಲಿಕ್ಕಿಲ್ಲ ಶರ್ಮಿಷ್ಠಾಳೂ ಹೇಳಿರಲಿಕ್ಕಿಲ್ಲ. ಅಲ್ಲವೇ!? ಆತುರವಾದಾಗ ರೆಫರೆನ್ಸ್ ಕೇಳುವ ಕೊಡುವ ವ್ಯವಧಾನ ಯಾರಿಗಿರುತ್ತದೆ? :)

ಭಾಗವತದಲ್ಲೇ ಬರಲಿ ಅಥವಾ ಬೇರೆ ಎಲ್ಲಾದರೂ ಬರಲಿ, ಆದಷ್ಟು ಸತ್ಯವನ್ನೇ ಹೇಳೋಣ. ಜಾಸ್ತಿ ತಲೆಬಿಸಿಯಿಲ್ಲ. ಆಕಸ್ಮಾತ್ ಸುಳ್ಳು ಹೇಳಿದ್ದರೆ ಮೇಲಿನ ಸಂದರ್ಭಗಳಲ್ಲಿ ಹೇಳಿದ್ದೀರೋ ನೋಡಿಕೊಳ್ಳಿ. ಮೇಲಿನ ಐದು ಸಂದರ್ಭಗಳಲ್ಲಿ ಬಾರಾ ಖೂನ್ ಮಾಫ್. ಬೇರೆ ಯಾವದಾದರೂ ಸಂದರ್ಭಗಳಲ್ಲಿ ಹೇಳಿದರೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೇನೋ.  ಅದಕ್ಕೂ ಶಾಸ್ತ್ರದಲ್ಲಿ ಎಲ್ಲೋ ರೆಫರೆನ್ಸ್ ಸಿಗುತ್ತದೆ ಬಿಡಿ. :)

ಸತ್ಯಮೇವ ಜಯತೆ. ಲಲ್ಲು ಸಾಹೇಬರು ಮೇವು ತಿಂದದ್ದು ನೋಡಿದ್ದಾಗ ಅದು 'ಸತ್ಯ ಮೇವು ಜಗಿತೇ!' ಎನ್ನಿಸಿತ್ತು. ಸತ್ಯವಾಗಿ ದನದ ಮೇವು ಜಗಿದು ತಿಂದು ಅರಗಿಸಿಕೊಂಡ ಭೂಪ ಅವರಲ್ಲವೇ! :)

ಮಾಹಿತಿ ಆಧಾರ: Srimad Bhagavatam by Kamala Subramaniam

Sunday, October 22, 2017

ಸ್ವಪ್ನಸಿಂಹ

ಅದ್ವೈತ ವೇದಾಂತದ ಸಾರವನ್ನು, ತಿರುಳನ್ನು ಒಂದೇ ವಾಕ್ಯದಲ್ಲಿ ಹೇಳಬೇಕು ಅಂದರೆ ಹೀಗೆ ಹೇಳಬಹುದು - 'ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ' ಅರ್ಥಾತ್  'ಬ್ರಹ್ಮ (ಪರಬ್ರಹ್ಮ) ಸತ್ಯ. ಜಗತ್ತೆಂಬುದು ಮಿಥ್ಯೆ. ಜೀವವು ಬ್ರಹ್ಮನೇ ಹೊರತು ಬೇರೆಯಲ್ಲ.'

ಇದು ಶ್ರೀ ಆದಿ ಶಂಕರಾಚಾರ್ಯ ವಿರಚಿತ 'ವಿವೇಕ ಚೂಡಾಮಣಿ' ಎಂಬ ಗ್ರಂಥದಲ್ಲಿ ಬರುವ ಒಂದು ಶ್ಲೋಕ ಅಥವಾ ಶ್ಲೋಕದ ಭಾಗ. ಇದೇ ಅದ್ವೈತ ವೇದಾಂತದ ತಿರುಳು (Essence, Gist, Crux).

ಬ್ರಹ್ಮ ಸತ್ಯ. ಜಗತ್ತು ಮಿಥ್ಯೆ.

ಇದನ್ನು ಕೇಳಿದಾಗ ಜಿಜ್ಞಾಸುಗಳಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಅದ್ವೈತ ವೇದಾಂತ ಸಹ ಸತ್ಯವನ್ನು ಅರಿಯಲು ಉಪಯೋಗಿಸುವದು ಪ್ರಸ್ಥಾನತ್ರಯವೇ. ಪ್ರಸ್ಥಾನತ್ರಯ ಅಂದರೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ. ವೇದಾಂತ ನಿಂತಿರುವದೇ ಇವುಗಳ ಬುನಾದಿಯ ಮೇಲೆ.

ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಇವೆಲ್ಲ ಇದೇ ಜಗತ್ತಿನಲ್ಲಿ ಇವೆ. ಜಗತ್ತು ಮಿಥ್ಯೆ ಎಂದಾಗಿದೆ. ಜಗತ್ತೇ ಮಿಥ್ಯೆ ಎಂದು ಒಪ್ಪಿಕೊಂಡ ಮೇಲೆ ಜಗತ್ತಿನಲ್ಲಿರುವ ಎಲ್ಲವೂ ಮಿಥ್ಯೆ ತಾನೇ? ಹಾಗಾದರೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಕೂಡ ಮಿಥ್ಯೆ. ಹಾಗಾಗಿ ಇಂತಹ ಮಿಥ್ಯೆಗಳ ಆಧಾರದ ಮೇಲೆ ನಿಂತಿರುವ ಅದ್ವೈತ ವೇದಾಂತ ಕೂಡ ಮಿಥ್ಯೆ. ಇಂತಹ ಮಿಥ್ಯೆಯ ಮೂಟೆ ಸತ್ಯವನ್ನು ಹೇಗೆ ತೋರಿಸೀತು? ಒಂದು ವೇಳೆ ತೋರಿಸುತ್ತದೆ ಅಂತಾದರೂ ಅದು ಸತ್ಯವಾಗಿರುತ್ತದೆಯೇ?

ಇಂತಹ ಮೂಲಭೂತ ಸಂಶಯ ಯಾರಿಗೂ ಬರಬಹುದು. ಈ ಸಂಶಯವನ್ನು ನಿವಾರಿಸಲು ವೇದಾಂತಿಗಳು ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾರೆ. 'ಸ್ವಪ್ನಸಿಂಹ' ಅಂತ ಆ ದೃಷ್ಟಾಂತದ ಹೆಸರು.

ಮಂಚದ ಮೇಲೆ ಮಲಗಿದ್ದೀರಿ. ಚೆನ್ನಾಗಿ ನಿದ್ದೆ ಬಂದಿದೆ. ಒಂದು ಕನಸು ಬೀಳುತ್ತದೆ. ಕನಸಿನಲ್ಲಿ ನೀವು ಕಾಡಿನಲ್ಲಿ ನಡೆದು ಹೋಗುತ್ತಿದ್ದೀರಿ. ಸುಂದರವಾದ ಕಾಡು. ರಮಣೀಯ ದೃಶ್ಯಗಳು. ಜುಳುಜುಳು ಹರಿಯುವ ನದಿ. ಅದರಲ್ಲಿ ತೇಲುತ್ತಿರುವ ಸುಂದರ ಹಂಸಗಳು. ಒಂದಕ್ಕಿಂತ ಒಂದು ಸುಂದರ. ಇಂತಹ ಕನಸನ್ನು ತುಂಬಾ ಸಂತಸದಿಂದ ಆಸ್ವಾದಿಸುತ್ತಿದ್ದೀರಿ.

ಆಗ ಒಮ್ಮೆಲೇ ಸಿಂಹಗರ್ಜನೆ ಕೇಳಿಬರುತ್ತದೆ. 'ಎಲ್ಲಿಂದ ಬಂತಪ್ಪಾ ಇದು?' ಎಂದು ಭಯದಿಂದ ಅತ್ತಿತ್ತ ನೋಡುವಷ್ಟರಲ್ಲಿ ದೈತ್ಯ ಭೀಕರ ಸಿಂಹವೊಂದು ನಿಮ್ಮೆದುರು ಪ್ರತ್ಯಕ್ಷವಾಗಿರುತ್ತದೆ. ಇನ್ನೇನು ಆ ಕ್ರೂರ ಸಿಂಹ ನಿಮ್ಮ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲಿ ಕನಸು ಮುರಿದುಬೀಳುತ್ತದೆ. ನಿದ್ದೆ ಮುಗಿಯುತ್ತದೆ. ಒಮ್ಮೆಲೇ ಎಚ್ಚರವಾಗುತ್ತದೆ. ಬೆಚ್ಚಿಬಿದ್ದು ಎದ್ದು ಕೂಡುತ್ತೀರಿ. ಕನಸು ಎಂದು ಅರಿವಾದರೂ ಭೀತಿ ಹೋಗಿರುವದಿಲ್ಲ. ಮೈ ಇನ್ನೂ ನಡುಗುತ್ತಿರುತ್ತದೆ. ಉಸಿರಾಟ ಯದ್ವಾತದ್ವಾ ಆಗಿರುತ್ತದೆ. ಕೊಂಚ ಸಮಯದ ನಂತರ ಎಲ್ಲ ಸಹಜಸ್ಥಿತಿಗೆ ಬರುತ್ತದೆ. ಆದರೆ ಒಂದು ಮಾತು ನಿಜ. ಒಮ್ಮೆ ಅಂತಹ ಭೀಕರ ಕನಸು ನೋಡಿ ಎದ್ದ ಮೇಲೆ ಅಷ್ಟು ಸುಲಭಕ್ಕೆ ನಿದ್ದೆ ಬರುವದಿಲ್ಲ.

ಕನಸಿನಲ್ಲಿ ಬಂದಿತ್ತು ಸಿಂಹ. ಅದು ಮಿಥ್ಯೆ. ಮಿಥ್ಯೆ ಎಂದರೆ ಸುಳ್ಳು ಅಂತ ಅರ್ಥವಲ್ಲ. ಸಂಪೂರ್ಣವಾಗಿ ಸತ್ಯ ಅಲ್ಲ ಅಷ್ಟೇ. ಕನಸಿನಲ್ಲಿ ಬಂದ ಸಿಂಹ ಕನಸು ಹಟಾತ್ತಾಗಿ ಮುರಿದು ಬೀಳುವ ತನಕ ನಿಜವೇ ಆಗಿತ್ತು. ನಿಮಗೆ ತುಂಬಾ ಹೆದರಿಕೆ ಆಗಿತ್ತು. ಅಲ್ಲಿಗೆ ಜೀವನ ಮುಗಿಯಿತು. ಸಿಂಹ ಕೊಂದು ತಿಂದು ಮುಗಿಸುತ್ತದೆ ಅಂತ ಭೀತಿಯಾಗಿತ್ತು. ಕನಸಿನಲ್ಲಿ ಬಂದ ಸಿಂಹದಿಂದ ಏನು ಪ್ರಯೋಜನವಾಯಿತೋ ಇಲ್ಲವೋ ಗೊತ್ತಿಲ್ಲ. ಕನಸು ಮುಗಿದು ಎಚ್ಚರವಂತೂ ಆಯಿತು. ಇಲ್ಲವಾದರೆ ಬಿದ್ದಿದ್ದ ಕನಸಿನಲ್ಲಿ ಸುಂದರ ಕಾಡಿನ ರಮಣೀಯ ದೃಶ್ಯಗಳನ್ನು ಸವಿಯುತ್ತ ಇನ್ನೂ ಅದೆಷ್ಟು ಗಂಟೆಗಳ ಕಾಲ ನಿದ್ರೆ ಮಾಡಿಕೊಂಡು ಇರುತ್ತಿದ್ದಿರೋ ಏನೋ.

ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರ ಮತ್ತು ಇನ್ನಿತರ ವೇದಾಂತದ ಗ್ರಂಥಗಳು, ಜ್ಞಾನದ ಮೂಲಗಳು ಕನಸಿನಲ್ಲಿ ಬಂದ ಸಿಂಹಗಳಿದ್ದಂತೆ. ಸ್ವಪ್ನಸಿಂಹಗಳು. ಮಿಥ್ಯೆ ನಿಜ. ಆದರೆ ನಿದ್ದೆಯಿಂದ ಬಡಿದೆಬ್ಬಿಸಲು ಮಾತ್ರ ತುಂಬಾ ಸಹಾಯಕಾರಿ. Very effective. Practically useful.

ನಮ್ಮ ಜಾಗ್ರತಾವಸ್ಥೆ ಕೂಡ ಸ್ವಪ್ನಾವಸ್ಥೆಯೇ. ಎಚ್ಚರವಿದ್ದಾಗ ಕಾಣುವದೂ ಕೂಡ ಕನಸೇ. ಹಾಗಾಗಿಯೇ ಜಗತ್ತು ಮಿಥ್ಯೆ. ಕೇವಲ ಹನ್ನೆರೆಡು ಮಂತ್ರಗಳಿರುವ ಮಾಂಡೂಕ್ಯ ಉಪನಿಷತ್ತು ಮತ್ತು ಅದರ ಮೇಲೆ ಆದಿ ಶಂಕರರ ಗುರುವಿನ ಗುರುಗಳಾದ ಗೌಡಪಾದಾಚಾರ್ಯರು ಬರೆದ ಕಾರಿಕ (commentary) ಈ ವಿಷಯವನ್ನು ಮನದಟ್ಟು ಮಾಡಿಕೊಡುತ್ತವೆ.

ನಾವು ಕಣ್ಣು ಬಿಟ್ಟುಕೊಂಡು ಕುಳಿತಾಗ ಇರುವ ಸ್ಥಿತಿ ಜಾಗ್ರತಾವಸ್ಥೆ. ಉಳಿದ ಎರಡು ಸ್ಥಿತಿಗಳು ಅಂದರೆ ಸ್ವಪ್ನಾವಸ್ಥೆ ಮತ್ತು ಸುಷುಪ್ತಿ (ಗಾಢ ನಿದ್ದೆ).

ಜಾಗ್ರತಾವಸ್ಥೆ ಕೂಡ ಒಂದು ತರಹದ ಸ್ವಪ್ನಾವಸ್ಥೆಯೇ. ಮಲಗಿ ಕನಸನ್ನು ಕಾಣುತ್ತಿರುವಾಗ ಆ ಕನಸು ಹೇಗೆ ೧೦೦% ನೈಜವಾಗಿರುತ್ತದೋ ಹಾಗೆಯೇ ಎಚ್ಚರವಾಗಿರುವಾಗ ಈ ಜಗತ್ತೆಂಬ (ಸಂಸಾರವೆಂಬ) ಕನಸು ಕೂಡ ೧೦೦% ನಿಜ ಅಂತ ಅನ್ನಿಸುತ್ತದೆ. ಹೀಗಿರುವಾಗ ಎಂದೋ ಒಂದು ದಿನ ಭಗವಂತನ ಕೃಪೆಯಾಗಿ ಯಾವುದೋ ಉಪನಿಷತ್ತನ್ನೋ, ಭಗವದ್ಗೀತೆಯನ್ನೋ ಅಥವಾ ಮತ್ತ್ಯಾವುದೋ ಅಮೋಘ ಗ್ರಂಥವನ್ನು ಕೈಗೆತ್ತಿಕೊಳ್ಳುತ್ತೇವೆ. ಅದರಲ್ಲಿರುವ ಅಮೂಲ್ಯ ಜ್ಞಾನ ಸ್ವಪ್ನಸಿಂಹದಂತೆ ಮೇಲೆರಗಿ ಬರುತ್ತದೆ. ಈ ಜಗತ್ತು, ಜೀವನ, ಸಂಸಾರ ಎಂಬ ಸುಂದರ ಕನಸು ಭಗ್ನಗೊಳ್ಳುತ್ತದೆ. ಅಷ್ಟರಮಟ್ಟಿಗೆ ಆ ಗ್ರಂಥಗಳು ಮತ್ತು ಅವುಗಳಲ್ಲಿರುವ ಜ್ಞಾನಶಕ್ತಿ ಕೆಲಸ ಮಾಡಿರುತ್ತದೆ. ಅಜ್ಞಾನದಿಂದ ತಾತ್ಕಾಲಿಕವಾಗಿ ಬಡಿದೆಬ್ಬಿಸಿರುತ್ತವೆ. ಆದರೆ ಆದಿಯಿಲ್ಲದ ಈ ಅಜ್ಞಾನ (ಮಾಯೆ) ಅದೆಷ್ಟು ದಟ್ಟವಾಗಿರುತ್ತದೆ ಅಂದರೆ ಮತ್ತೆ ನಿದ್ರೆಗೆ ಜಾರುತ್ತೇವೆ. ಮತ್ತೆ ಸಂಸಾರದ ಕನಸನ್ನು ರಸವತ್ತಾಗಿ ಆಸ್ವಾದಿಸುತ್ತ ಜೀವನವನ್ನು ಅಪವ್ಯಯ ಮಾಡುತ್ತೇವೆ. ಭಗವಂತನ ಕೃಪೆ ಇದ್ದರೆ ಮತ್ತೆ ಮತ್ತೆ ಈ ಸಂಸಾರವೆಂಬ ಕನಸಿನಲ್ಲಿ ಜ್ಞಾನವೆಂಬ ಸ್ವಪ್ನಸಿಂಹವನ್ನು ಕಂಡು ಬೆಚ್ಚಿಬಿದ್ದು ಎದ್ದು ಕೂಡುತ್ತವೆ. ಈ ಸಂಸಾರವೆಂಬ ಆದಿಯಿಲ್ಲದ ಅಜ್ಞಾನದ ಗಾಢ ಸ್ವಪ್ನವನ್ನು ಆಗಾಗ ತಾತ್ಕಾಲಿಕವಾಗಿಯಾದರೂ ಭಂಗಗೊಳಿಸಲು ಸ್ವಪ್ನಸಿಂಹ ಬೇರೆ ಬೇರೆ ರೂಪದಲ್ಲಿ ಬರಬಹುದು. ಗುರುವಿನ ರೂಪದಲ್ಲಿ ಬರಬಹುದು. ಅಧ್ಯಯನದ ರೂಪದಲ್ಲಿ ಬರಬಹುದು. ಅನುಭವಗಳ ರೂಪದಲ್ಲಿ ಬರಬಹುದು. ಕಷ್ಟಕಾರ್ಪಣ್ಯಗಳ ರೂಪದಲ್ಲಿ ಬರಬಹುದು. Possibilities are limitless.

ಈ ಸಂಸಾರವೆಂಬ ಸುಂದರ(!) ಕನಸನ್ನು ಜ್ಞಾನವೆಂಬ ಸ್ವಪ್ನಸಿಂಹ ಪದೇ ಪದೇ ಭಂಗಗೊಳಿಸಿದಾಗ ಮೊದಮೊದಲು ರಸಭಂಗವಾಗಿ ಕಿರಿಕಿರಿ ಉಂಟಾದರೂ ಮನುಷ್ಯ ತನ್ನ ಅಸ್ತಿತ್ವಕ್ಕೆ ಸಂಬಂಧಪಟ್ಟ ಕೆಲವು ಅತಿ ಮುಖ್ಯ ಪ್ರಶ್ನೆಗಳನ್ನು ಕೇಳಲು ಶುರು ಮಾಡುತ್ತಾನೆ. ಆ ಪ್ರಕ್ರಿಯೆ ಒಮ್ಮೆ ಆರಂಭವಾಯಿತೆಂದರೆ ಮೋಕ್ಷದತ್ತ ಹೊರಟಂತೆಯೇ. ಸಾವಿರಾರು ಜನ್ಮ ಬೇಕಾಗಬಹುದು. ಆದರೆ ಗುರಿಯತ್ತ ಬದಲಾಗದ ಪ್ರಯಾಣ ಶುರುವಾಗಿರುತ್ತದೆ.

ಮಿಥ್ಯೆಗಳೇ ಆದರೂ ವೇದ, ಉಪನಿಷತ್ತು, ಇತ್ಯಾದಿಗಳ ಉಪಯುಕ್ತತೆಯನ್ನು ಮನದಟ್ಟು ಮಾಡಿಸಲು ವೇದಾಂತಿಗಳು ಮತ್ತೊಂದು ದೃಷ್ಟಾಂತವನ್ನು ಕೊಡುತ್ತಾರೆ.

ಕಾಡಿನಲ್ಲಿ ನಡೆದುಹೋಗುತ್ತಿರುವಾಗ ಒಂದು ಮುಳ್ಳು ಕಾಲಿಗೆ ಚುಚ್ಚುತ್ತದೆ. ಮುಳ್ಳನ್ನು ತೆಗೆದೆಸೆದರೂ ಮುಳ್ಳಿನ ಒಂದು ಸಣ್ಣ ಚೂರು ಪಾದದಲ್ಲೇ ಉಳಿದುಕೊಳ್ಳುತ್ತದೆ. ಆಗ ಏನು ಮಾಡುತ್ತೀರಿ? ಮುಳ್ಳಿನ ಚೂರನ್ನು ಪಾದದಲ್ಲೇ ಇಟ್ಟುಕೊಂಡು ಮುಂದುವರೆಯುವದು ಅಪಾಯ. ಮುಂದೆ infection ಆಗಿ ಹೆಚ್ಚಿನ ಅಪಾಯ ಆಗಬಹುದು. ಮುಳ್ಳಿನ ಚೂರನ್ನು ತೆಗೆದುಹಾಕೋಣ ಅಂದರೆ ಅದಕ್ಕೆ ಬೇಕಾದ ಸೂಜಿ ಇತ್ಯಾದಿ ಸಲಕರಣೆ ತುರ್ತಕ್ಕೆ ನಿಮ್ಮಲ್ಲಿ ಇಲ್ಲ. ಏನು ಮಾಡಬೇಕು?

ಮತ್ತೊಂದು ಚೂಪಾದ ಮುಳ್ಳನ್ನು ತೆಗೆದುಕೊಳ್ಳಿ. ಆ ಮುಳ್ಳಿನಿಂದ ಪಾದದಲ್ಲಿರುವ ಮುಳ್ಳಿನ ಚೂರನ್ನು ಜತನದಿಂದ ತೆಗೆಯಿರಿ. ನಂತರ ಮುಳ್ಳಿನ ಚೂರನ್ನು ಮತ್ತು ಅದನ್ನು ತೆಗೆಯಲು ಉಪಯೋಗಿಸಿದ ಮುಳ್ಳನ್ನು, ಎರಡನ್ನೂ ಕೂಡ, ಎಸೆದು ಮುನ್ನೆಡೆಯಿರಿ.

ಇಲ್ಲಿ ಪಾದದಲ್ಲಿ ಹೊಕ್ಕಿರುವ ಮುಳ್ಳು ಅಜ್ಞಾನ (ಮಾಯೆ). ಅದನ್ನು ತೆಗೆಯಲು ಉಪಯೋಗಿಸಿದ್ದು ಕೂಡ ಮುಳ್ಳೇ. ಅದು ಜ್ಞಾನ. ಮುಳ್ಳಾದರೇನಾಯಿತು? ಉಪಯೋಗಕ್ಕೆ ಬಂತು ತಾನೇ? ವೇದೋಪನಿಷತ್ತಿನ ಮೇಲೆ ಆಧಾರಿತ ವೇದಾಂತ ಜ್ಞಾನ ಮತ್ತೊಂದು ಮುಳ್ಳಿದ್ದಂತೆ. ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮತ್ತೊಂದು ಮುಳ್ಳಿನಿಂದ ತೆಗೆಯಬೇಕು. ನಂತರ ಎರಡೂ ಮುಳ್ಳುಗಳನ್ನು ಎಸೆಯಬೇಕು.

ಜ್ಞಾನವೆಂಬ ಮುಳ್ಳು ಚೆನ್ನಾಗಿದೆ ಅಂತ ಜೊತೆಗಿಟ್ಟುಕೊಂಡರೆ ಉಪಯೋಗವಿಲ್ಲ. That is missing the point. ಅಂತವರು ಪಂಡಿತರಾದಾರೇ ವಿನಃ ಜ್ಞಾನಿಗಳಾಗುವದಿಲ್ಲ. ಆದರೆ ವೇದಾಂತ ಅಧ್ಯಯನ ಮಾಡುವ ಹಲವಾರು ಜನ ಕೇವಲ ಪಂಡಿತರಾಗುತ್ತಾರೆ ವಿನಃ ಜ್ಞಾನಿಗಳಾಗುವದಿಲ್ಲ. ಅವರಿಗೆ ಮುಳ್ಳಿನಿಂದ ಮುಳ್ಳನ್ನು ತೆಗೆಯಬಹುದು ಎಂಬ ವಿವೇಕ ಮೂಡಿರುವದಿಲ್ಲ. ಜ್ಞಾನವೆಂಬ ಮುಳ್ಳನ್ನು ಹಿಡಿದುಕೊಂಡು ಮಂದಿ ಮೈಗೆ ಚುಚ್ಚುತ್ತ ಅಡ್ಡಾಡುತ್ತಿರುತ್ತಾರೆ. ತಲೆ ತಿನ್ನುವ ವೇದಾಂತಿಗಳು. ದೀಡ ಪಂಡಿತರು.

ಆಧುನಿಕ ವೇದಾಂತಿಗಳು ಮತ್ತೊಂದು ದೃಷ್ಟಾಂತವನ್ನು ಕೊಡುತ್ತಾರೆ. ಪೋಲ್ ವಾಲ್ಟ್ (pole vault) ಕ್ರೀಡೆಯ ಬಗ್ಗೆ ನಿಮಗೆ ಗೊತ್ತಿರಬಹುದು. ಒಂದು ಉದ್ದನೆಯ ಗಳವನ್ನು ಹಿಡಿದು, ವೇಗವಾಗಿ ಓಡಿಬಂದು, ಗಳವನ್ನು ಭೂಮಿ ಮೇಲೆ ಊರಿ, ಅದನ್ನು ಬಲವಾಗಿ ಬಗ್ಗಿಸಿ, ಬಗ್ಗಿಸಿದಾಗ ಆಕರವಾದ spring ಶಕ್ತಿಯಿಂದ ಮೇಲೆ ಹೋಗುವಾಗ ಅದರ ಜೊತೆಯೇ ಮೇಲೆ ಹೋಗಿ, ಅತಿ ಎತ್ತರಕ್ಕೆ ಹೋದಾಗ ಗಳವನ್ನು ಬಿಟ್ಟು ಹಾರುವದು ಪೋಲ್ ವಾಲ್ಟ್. ಮೇಲೆ ಹೋದಾಗ ಗಳವನ್ನು ಬಿಡಲಿಲ್ಲ ಅಂದರೆ ಹಾರಲು ಆಗುವದಿಲ್ಲ. ಕೆಳಗೆ ಬೀಳಬೇಕಾಗುತ್ತದೆ. ವೇದೋಪನಿಷತ್ತಿನ ಜ್ಞಾನ ಎಂದರೆ ಪೋಲ್ ವಾಲ್ಟಿನ ಗಳವಿದ್ದಂತೆ. ಎತ್ತರಕ್ಕೆ ಹಾರಲು ಬೇಕೇಬೇಕು. ಆದರೆ ಅಜ್ಞಾನದ hurdle ಪಾರಾಗಬೇಕು ಅಂದರೆ ಸರಿಯಾದ ಸಮಯದಲ್ಲಿ ಗಳವನ್ನು ಬಿಟ್ಟು ಛಲಾಂಗ್ ಹೊಡೆಯಲೇಬೇಕು. ಗಳ ಚೆನ್ನಾಗಿದೆ, ಮೇಲೆ ಬರಲು ಸಹಾಯ ಮಾಡಿದೆ ಅಂತ ಮೋಹ ತೋರುವಂತಿಲ್ಲ.

ಮಿಥ್ಯೆಯ ಬಗ್ಗೆ ಒಂದು ಸಣ್ಣ ವಿವರಣೆ. ಮಿಥ್ಯೆ ಅಂದರೆ ಸುಳ್ಳು ಅಂತಲ್ಲ. ಮಿಥ್ಯೆ ಅಂದರೆ ಸಂಪೂರ್ಣ ಸತ್ಯವಲ್ಲ ಅಷ್ಟೇ. ವೇದಾಂತಿಗಳು ಅನೇಕ ಉದಾಹರಣೆ ಕೊಡುತ್ತಾರೆ. ಕನ್ನಡಿಯಲ್ಲಿನ ಪ್ರತಿಬಿಂಬ. ಕಣ್ಣಿಗೆ ಕಾಣುತ್ತದೆ. ಆದರೆ ತಂದುಕೊಡಿ ಅಂದರೆ ಸಾಧ್ಯವಿಲ್ಲ. ಮರಭೂಮಿಯಲ್ಲಿ ಕಾಣುವ ಮೃಗಜಲ (mirage) ಕೂಡ ಮಿಥ್ಯೆ. ಥೇಟ್ ನೀರಿನಂತೆಯೇ ಕಾಣುತ್ತದೆ. ಹೋಗಿ ನೋಡಿದರೆ ನೀರು ಇರುವದಿಲ್ಲ. ಜಾದೂಗಾರ ಏನೇನೋ ಜಾದೂ ಮಾಡುತ್ತಾನೆ. ಎಲ್ಲ ನೈಜವಾಗಿರುತ್ತದೆ. ಆದರೆ ನಿಜವಾಗಿರುವದಿಲ್ಲ.

ಸಿಂಹಸ್ವಪ್ನದ ಬಗ್ಗೆ ಕೇಳಿದ್ದೆ. ಆದರೆ ಸ್ವಪ್ನಸಿಂಹದ ಬಗ್ಗೆ ಕೇಳಿರಲಿಲ್ಲ. ಮನ್ನಿತ್ತಲಾಗೆ ಪಾರ್ಥಸಾರಥಿ ಎಂಬ ವೇದಾಂತಿಗಳು ಬರೆದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಸ್ವಪ್ನಸಿಂಹ ಬಂತು. ಸ್ವಲ್ಪ ಮಟ್ಟಿಗಾದರೂ ಅಜ್ಞಾನದ ಸುಂದರ ಕನಸಿನಿಂದ ಬಡಿದೆಬ್ಬಿಸಿತು. ಮತ್ತೊಮ್ಮೆ ಅಜ್ಞಾನದ ನಿದ್ದೆ ಬಂದು ಅದರಲ್ಲಿ ಸಂಸಾರವೆಂಬ ಸುಂದರ ಸ್ವಪ್ನದಲ್ಲಿ ಮುಳುಗಿಹೋಗುವ ಮೊದಲು ಮುಂದೊಂದು ದಿನ ಮತ್ತೊಮ್ಮೆ ಸ್ವಪ್ನಸಿಂಹ ದರ್ಶನವಾಗುವವರೆಗೆ ಮಾಹಿತಿಗೆ ಇರಲಿ ಅಂತ ಇಷ್ಟೆಲ್ಲ ಬರೆದೆ ಅಷ್ಟೇ! :)

ಸಿಂಹಸ್ವಪ್ನಕ್ಕೂ ಸ್ವಪ್ನಸಿಂಹಕ್ಕೂ ಏನು ಸಂಬಂಧ ಎಂಬ ಜಿಜ್ಞಾಸೆ. ಈಗ ಈ ಶಬ್ದಗಳ etymology ಹುಡುಕಿಕೊಂಡು ಹೋಗಬೇಕು. ಹೀಗೆ ಏನೇನೋ ಹುಡುಕುವದರಲ್ಲೂ ಮಜಾ ಇದೆ ಬಿಡಿ.

'ಸ್ವಪ್ನಸಿಂಹ' ಮಾಹಿತಿ ಆಧಾರ: Vedanta Treatise - The Eternities by A. Parthasarathy

ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಕರ್ಕಿ ಕೃಷ್ಣ ಹಾಸ್ಯಗಾರರು ಅದ್ಭುತ ಸಿಂಹನೃತ್ಯ ಪ್ರಯೋಗ ಮಾಡುತ್ತಿದ್ದರು. ಕೆಳಗೆ ಹಾಕಿದ್ದೇನೆ. ನೋಡಿ ಎಂಜಾಯ್ ಮಾಡಿ.

Saturday, October 14, 2017

ಇರುವ ಸಂಬಂಧಗಳನ್ನು ಹೇಳಿಕೊಳ್ಳಲೇನು ಧಾಡಿ!?

'ನಾನು ಚಿಕ್ಕವಳಿದ್ದಾಗ ಹನುಮಂತಪ್ಪ ನನ್ನನ್ನು ದಿನಾ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿ ಸ್ಕೂಲಿಗೆ ಬಿಟ್ಟುಬರುತ್ತಿದ್ದ.'

'ನಾನು ಚಿಕ್ಕವನಿದ್ದಾಗ ಶಾಂತಮ್ಮ ದಿನಾ ರುಚಿರುಚಿ ಅಡಿಗೆ ಮಾಡಿ, ನನ್ನ ಟಿಫನ್ ಬಾಕ್ಸ್ ತುಂಬಿಸಿ, ಸ್ಕೂಲಿಗೆ ಕಳಿಸುತ್ತಿದ್ದಳು.'

ಯಾರಾದರೂ ಹೀಗೆ ಹೇಳಿದರೆ ಏನೆಂದುಕೊಳ್ಳುತ್ತೀರಿ? ಮೇಲೆ ಹೇಳಿದ ಹನುಮಂತಪ್ಪ, ಶಾಂತಮ್ಮ ಯಾರಾಗಿರಬಹುದು ಎಂದು ನಿಮ್ಮ ಊಹೆ?

ಹನುಮಂತಪ್ಪ ಮನೆಯ ನಂಬಿಕಸ್ಥ ಕೆಲಸದಾಳಿರಬಹುದು. ಶಾಂತಮ್ಮ ಮನೆಯ ಅಕ್ಕರೆಯ ಅಡಿಗೆ ಮಾಡುವ ಮಹಿಳೆಯಾಗಿರಬಹುದು ಎಂದುಕೊಂಡರೆ ಅದು ಸಹಜ.

ಆದರೆ...ಹನುಮಂತಪ್ಪ ಅವರ ತಂದೆಯೆಂದೂ, ಶಾಂತಮ್ಮ ಅವರ ತಾಯಿಯೆಂದು ಯಾರಾದರೂ ಸ್ಪಷ್ಟೀಕರಣ ನೀಡಿದರೆ ನಂಬಲು ಕಷ್ಟವಾಗುತ್ತದೆ ತಾನೇ? ತಂದೆಯನ್ನು, ತಾಯಿಯನ್ನು ಇಷ್ಟು casual ಆಗಿ ಹೆಸರನ್ನು ಉಪಯೋಗಿಸಿ ಕರೆಯುವವರೂ ಇರುತ್ತಾರೆಯೇ ಎಂದು ಮೂಗಿನ ಮೇಲೆ ಬೆರಳಿಡಬೇಕಾದೀತು.

ಇಂತಹ ಸನ್ನಿವೇಶ ತುಂಬಾ ವಿರಳ ಬಿಡಿ. ವಿರಳವೇನು ಅಸಾಧ್ಯ ಅಂತಲೇ ಹೇಳಿ. ಯಾರೂ ತಮ್ಮ ತಂದೆಯನ್ನು, ತಾಯಿಯನ್ನು ಹೆಸರಿಡಿದು ಮಾತಾಡುವದಿಲ್ಲ. ಒಂದು ವೇಳೆ ಹಾಗೆ ಮಾತಾಡಿದರೆ ಸ್ಕ್ರೂ ಲೂಸಾದ ಕೇಸ್ ಎಂದುಕೊಂಡು ಅವರ ಮನಃಸ್ಥಿತಿಯ ಮೇಲೆ ಕನಿಕರ ತೋರಬಹುದು ಬಿಡಿ.

'ಈ ಸಂಜೀವ ನನ್ನ ಒಂದು ಮಾತೂ ಕೇಳಲ್ಲ. ವೀಕೆಂಡ್ ಬಂತು ಅಂದರೆ ಗೆಳೆಯರು ಅಂತ ಹೊರಟುಬಿಡುತ್ತಾನೆ,' ಅನ್ನುತ್ತಾಳೆ ಒಬ್ಬ ಮಹಿಳೆ.

'ಅಯ್ಯೋ! ರಂಜನಾ ಕೂಡ ಹಾಗೇ. ವೀಕೆಂಡ್ ಬಂತು ಅಂದರೆ ಆಕೆಯ ಫ್ರೆಂಡ್ಸ್ ಜೊತೆನೇ ಇರುತ್ತಾಳೆ,' ಅನ್ನುವವ ಒಬ್ಬ ಗಂಡಸು.

ಈಗ ಇವರ ಮಾತು ಕೇಳುತ್ತಿರುವ ನಮ್ಮಂತವರು ಇವರ ಮಾತಿನಲ್ಲಿ ಬಂದ ಸಂಜೀವ ಯಾರು, ರಂಜನಾ ಯಾರು ಎಂದು ತಲೆಕೆಡಿಸಿಕೊಳ್ಳಬೇಕು.

'ಸಂಜೀವ ಯಾರು? ನಿನ್ನ ಮಗನೇ?'

'ಅಲ್ಲ!'

'ಮತ್ತೇ? ನಿನ್ನ ಅಣ್ಣ ತಮ್ಮಂದಿರೋ ಹೇಗೆ?'

'ಅಯ್ಯೋ! ಅಲ್ಲ!'

'ಮತ್ತೆ!!? ನಿನ್ನ ಅಪ್ಪನೇ? ಪಿತಾಶ್ರೀ?!!'

'ಅಯ್ಯೋ! ನಿಮಗೇನಾಗಿದೆ? ತಲೆ ಸರಿಯಿದೆಯೇ?'

'ಯಾಕೆ?'

'ಸಂಜೀವ ನನ್ನ ಗಂಡ!'

ಈ ಪುಣ್ಯಾತ್ಗಿತ್ತಿಯ ಕಥಾನಾಯಕ, ವೀಕೆಂಡ್ ವೀರ ಸಂಜೀವ ಈಕೆಯ ಗಂಡ. ಹಾಗಂತ ಈಕೆ ಹೇಳಲಿಲ್ಲ. ಯಾರೋ ಕ್ಯಾಶುಯಲ್ ವ್ಯಕ್ತಿ ಎನ್ನುವಂತೆ ಕೇವಲ ಹೆಸರಿಡಿದು ಮಾತಾಡಿದಳು. ಹೆಸರಿಡಿದು ಕರೆಯುತ್ತಿದ್ದಾರೆ ಅಂದ ಮೇಲೆ ಮಗನೋ, ಅಣ್ಣನೋ, ತಮ್ಮನೋ ಅಂದುಕೊಂಡರೆ ಅಲ್ಲವಂತೆ. ನೋಡಿದರೆ ಹೋಗಿ ಹೋಗಿ ಪತಿಶ್ರೀ ಉರ್ಫ್ ಪತಿ ಪರಮೇಶ್ವರ.

ರಂಜನಾ, ರಂಜನಾ ಅಂತ ಬೊಬ್ಬೆ ಹೊಡೆದ ಗಂಡಸಿನ ಕೇಸ್ ಕೂಡ ಏನೂ ಭಿನ್ನವಾಗಿರುವದಿಲ್ಲ. ಆಕೆ ಅವನ ಮಗಳೋ, ಅಕ್ಕನೋ, ತಂಗಿಯೋ ಎಂದು ನೋಡಿದರೆ ಪತ್ನಿಶ್ರೀ ಉರ್ಫ್ ಹೆಂಡತಿಯಾಗಿರುತ್ತಾಳೆ.

ಹೆಸರು ಹಿಡಿದು ಸಂಬಂಧಗಳನ್ನು ಕರೆಯುವದು ಮಹಾನ್ ದರಿದ್ರ ಪದ್ಧತಿ. ಇಲ್ಲಿನ ಅಮೇರಿಕನ್ ಜನರು ಹಾಗೇ ಮಾಡುತ್ತಾರೆ. ಗಂಡ, ಹೆಂಡತಿಯ ಹೆಸರಿಡಿದು ಕರೆಯುತ್ತಾರೆ. ಬೇರೆಯವರ ಜೊತೆ ಮಾತಾಡುವಾಗ ಕೂಡ ಹಾಗೇ ಹೇಳುತ್ತಾರೆ. ಸಂದರ್ಭಾನುಸಾರವಾಗಿ ನಾವೇ ಅರ್ಥ ಮಾಡಿಕೊಳ್ಳಬೇಕು ಯಾರ ಬಗ್ಗೆ ಮಾತಾಡುತ್ತಿದ್ದಾರೆಂದು. ಇವರಿಗೆ ಗಂಡನ್ಯಾರೋ ಮಿಂಡನ್ಯಾರೋ. ಹೆಂಡತಿ ಯಾರೋ ಮಿಂಡತಿ ಯಾರೋ. ಇವತ್ತಿದ್ದ ಗಂಡ ನಾಳೆ ಇರುವದಿಲ್ಲ. ಹಿತ್ತಲಿನಲ್ಲಿ ಕೂತ ಹೆಂಡತಿ ಹೆಂಡ ಇಳಿಸುತಿದ್ದರೆ ಮುಂಬಾಗಿಲಿನಲ್ಲಿ ಮಿಂಡತಿ ಮದವೇರಿ ಕುಣಿಯುತ್ತಿರುತ್ತಾಳೆ. ಇಬ್ಬರ ನಡುವೆ ಒಬ್ಬಳಿಗೆ ಗಂಡನಾಗಿ ಇನ್ನೊಬ್ಬಳಿಗೆ ಬಾಯ್ ಫ್ರೆಂಡ್ ಆಗಿ ಡಬಲ್ ಡ್ಯೂಟಿಯನ್ನು ಖುಷಿಯಿಂದಲೇ ಮಾಡುತ್ತಿರುತ್ತಾನೆ ಒಬ್ಬ ಗಂಡು ಪ್ರಾಣಿ. ಹೀಗಿರುತ್ತವೆ ಇಲ್ಲಿನ ಜನರ ಸಂಬಂಧಗಳು!

ಇಂತಹ ಹಡಪೇಶಿ ಸಂಸ್ಕೃತಿಯ ಇಲ್ಲಿನ ಸ್ವೇಚ್ಛಾಚಾರಿ ಜನ ತಂದೆ, ತಾಯಿಗೆ ಒಮ್ಮೊಮ್ಮೆ My old man, My old lady ಅಂತ ಕೂಡ ಅನ್ನುತ್ತಾರೆ. ಆದರೂ ಕಮ್ಮಿ. ತಂದೆ ತಾಯಿಗೆ ಇವರೂ ಕೂಡ dad, mom ಅನ್ನುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ತಂದೆತಾಯಿಯನ್ನೂ ಹೆಸರಿಡಿದು ಕರೆಯುವ ಕೆಟ್ಟ ಆಚಾರವನ್ನು ಶುರುಮಾಡಿಕೊಂಡಿಲ್ಲ. ಇನ್ನೂ ಕಾಲ ಅಷ್ಟು ಕೆಟ್ಟಿಲ್ಲ.

ಇಲ್ಲಿನ ಜನ ಹಾಗೆನ್ನುತ್ತಾರೆ. ಇಲ್ಲಿ ಹೀಗೇ ಅನ್ನುವ ಕಾರಣಕ್ಕೆ ನಮ್ಮ ಜನ ಕೂಡ ಹಾಗೇ ಮಾಡಿದರೆ ವಿಚಿತ್ರವಾಗಿ ಕಾಣುತ್ತದೆ. ಸಿಕ್ಕಾಪಟ್ಟೆ ಕಿರಿಕಿರಿಯಾಗುತ್ತದೆ.

ಕಾಲ ಬದಲಾಗಿದೆ. ಅದು ನಮಗೂ ಗೊತ್ತಿದೆ. ಮೊದಲಿನಂತೆ ಮಹಿಳೆಯರು ಗಂಡನಿಗೆ ಬಹುವಚನ ಉಪಯೋಗಿಸಿ 'ನಮ್ಮ ಮನೆಯವರು,' 'ನಮ್ಮ ಯಜಮಾನರು,' ಎಂದೆಲ್ಲ ಹೇಳಬೇಕು ಅಂತ ಯಾರೂ ನಿರೀಕ್ಷೆ ಮಾಡುವದಿಲ್ಲ. ಹಾಗೆಯೇ ಗಂಡ ಹೆಂಡತಿಯನ್ನು 'ಆಕೆ', 'ಮನೆಯಾಕೆ,' ಅಂತ ಕಿಮ್ಮತ್ತಿಲ್ಲದೆ ಕರೆದರೂ ಓಕೆ ಅಂತ ಯಾರೂ ಹೇಳುತ್ತಿಲ್ಲ. ಆದರೆ ಇರುವ ಶಾಸ್ತ್ರೋಕ್ತ ಸಂಬಂಧಗಳನ್ನು ಬಾಯ್ತುಂಬ ಹೇಳಲು ಏನು ಧಾಡಿ? ನನ್ನ ಪತಿ, ನನ್ನ ಪತ್ನಿ, ನಮ್ಮ ಮಕ್ಕಳು ಎಂದು ಹೇಳದೇ ಕೇವಲ ಹೆಸರಿಡಿದು ಕೂಗಿ, ಅದು ಉಳಿದವರಿಗೂ ಅರ್ಥವಾಗಬೇಕು ಅಂತ ನಿರೀಕ್ಷೆ ಮಾಡಿದಾಗ ಅಂತವರನ್ನು ಹಿಡಿದು ಬುರುಡೆಗೆ ಸಮಾ ಎರಡು ಚಡಾಬಡಾ ಅಂತ ಬಾರಿಸಿಬಿಡಬೇಕು ಅನ್ನಿಸುತ್ತದೆ. ಅಲ್ಲರೀ.... ನನ್ನ ಗಂಡ ಸಂಜೀವ. ನನ್ನ ಪತ್ನಿ ರಂಜನಾ ಅಂತ ಒಂದು ಬಾರಿ, ಕೇವಲ ಒಂದು ಬಾರಿ, ಹೇಳಿ ನಂತರ ಮಾತಿಗೊಮ್ಮೆ ಕೇವಲ ಹೆಸರಿಡಿದೇ ಕೂಗಿ. ಹಾಗೇ ಕೂಗಿಕೊಂಡು ಸಾಯಿರಿ. ಅಭ್ಯಂತರವಿಲ್ಲ. ಅಷ್ಟೂ ಮಾಡಲಿಲ್ಲ ಅಂದರೆ ಹೇಗೆ?

ಕೆಲಸದ ಜಾಗದಲ್ಲಿ ತುಂಬಾ ಜನ ಭಾರತೀಯರಿದ್ದಾರೆ. ಎಲ್ಲರೂ ಈ ಕೆಟ್ಟ ಅಭ್ಯಾಸ ಕಲಿತವರೇ. ನಾನಂತೂ ಮುದ್ದಾಂ ಕೊಕ್ಕೆ ಹಾಕುತ್ತೇನೆ. ಗಂಡನ ಹೆಸರು ಹೇಳಿದರೆ 'ಯಾರು ನಿಮ್ಮಪ್ಪನೇ?' ಎಂದು ಕೇಳಿ ಅವರು ಕೆಟ್ಟ ಮುಖ ಮಾಡಿಕೊಂಡು, 'ಅಲ್ಲ ನನ್ನ ಗಂಡ' ಎಂದು ಹೇಳುವಂತೆ ಮಾಡಿದಾಗಲೇ ನನಗೆ ಸಂತೃಪ್ತಿ. ಹಾಗೆಯೇ ಹೆಂಡತಿಯ ಹೆಸರು ಹೇಳಿದವರಿಗೆ 'ಯಾರು ನಿನ್ನ ಗರ್ಲ್ ಫ್ರೆಂಡೇ?' ಎಂದು ಕಿಚಾಯಿಸಿ ಮುಜಗರಕ್ಕೀಡು ಮಾಡಲಿಲ್ಲ ಅಂದರೆ ಉಂಡನ್ನ ಅರಗುವದಿಲ್ಲ. ಒಬ್ಬರಿಗೆ ಒಮ್ಮೆ ಮಾತ್ರ ಹಾಗೆ ಮಾಡುತ್ತೇನೆ. ಅಷ್ಟೇ! :)

ಸಂಬಂಧಗಳೇ ಕಮ್ಮಿಯಾಗುತ್ತಿವೆ. ಇರುವ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಮತ್ತೆ ಸಂಬಂಧಗಳಲ್ಲೇ ಸಕಲ ಐಶ್ವರ್ಯವನ್ನೂ, ಸರ್ವಸ್ವವನ್ನೂ ಕಂಡುಕೊಳ್ಳುವದು ನಮ್ಮ ಸಂಸ್ಕೃತಿ. ದೂರದೂರದ ಸಂಬಂಧಗಳನ್ನೂ ಕೂಡ ನೆನಪಿಟ್ಟುಕೊಂಡು ಅವನ್ನು celebrate ಮಾಡುವ ದೊಡ್ಡ ಮನಸ್ಸು, ಶ್ರೀಮಂತ ಸಂಸ್ಕೃತಿ ನಮ್ಮದು. ಹೀಗಿರುವಾಗ ಸಂಬಂಧಗಳ ಮನೆ ಹಾಳಾಗಲಿ, ಎದುರಿಗೆ ಕುಳಿತವರಿಗೆ ತಿಳಿಯಲಿ ಅಂತಾದರೂ ಬಾಯ್ಬಿಟ್ಟು ಒಮ್ಮೆ, ನಿಮ್ಮ ಲಡಕಾಸಿ ಇಂಗ್ಲೀಷಿನಲ್ಲೇ ಬೇಕಾದರೆ, My husband so and so or My wife so and so ಎಂದು ಹೇಳಲಿಕ್ಕೆ ಈ ಜನರಿಗೆ ಏನು ಧಾಡಿರೀ?

ವಿ.ಸೂ: ಮೊದಲು ತಲೆಗೆ ಬಂದ ಹೆಸರುಗಳನ್ನು ಉಪಯೋಗಿಸಿದ್ದೇನೆ. ತಮ್ಮ ಕುರಿತಾಗಿ ಬರೆದಿದ್ದು ಎಂದು ಯಾರೂ ತಿಳಿಯಬೇಕಾಗಿಲ್ಲ. ತಿಳಿದುಕೊಂಡರೆ ಅವರ ಕರ್ಮ ಅಷ್ಟೇ.

Aarushi Talwar double murder mystery

Recently the parents of Aarushi have been acquitted by the high court of UP for the lack of evidence, giving them the benefit of doubt in the double murder of their daughter Aarushi and servant Hemraj.

It will surely remain as one of the most mysterious murder cases of all times. The very first investigation was done by the local police. They arrested the father. Then CBI stepped in. The first CBI team gave clean chit to the parents but suspected the 3 friends of the murdered servant of having molested the girl and killed the servant who objected to it. However due to lack of firm evidence they were not charged.

Then there was a change in the leadership of CBI. A new team was formed. That team once again suspected the parents of killing their daughter and servant. Termed it as honor killing. However, the second CBI team also stated that they did not have enough evidence to bring charges against  Talwars, the parents. A closure report was submitted to the court. The parents were free but they were not satisfied with the probe. They wanted the real killers found out. They petitioned in the court against the closure report and ending the probe. I don't know what to call it but the particular judge who heard their petition took a very unpredictable and surprising decision - the closure report has enough evidence to charge the parents. Charge them and hold the trial!!!! Very strange decision to say the least!

Now the parents were charged. A moment ago they were free and now charged of having committed double murder! And one victim is the only daughter of the couple!! Go figure!

The lower court convicted them based on the charge-sheet which was based on the closure report of all things for God's sake! It is hard to understand how the lower court found enough evidence to establish, beyond all reasonable doubt, that the parents are GUILTY!!! Must be one of the rarest cases. The investigating agency itself had said they did not have enough evidence to charge in the first place but the judge indeed found them guilty as charged and sentenced them for life term in jail.

Finally after 4 years, the high court has acquitted them for lack of evidence. Hopefully justice is done. CBI can always go to supreme court, who knows! They may not because they did not want the case tried in the first place.

If you read the several books and watch a couple of movies that have appeared on the subject, you get all the details. As different investigative groups have felt, sometimes parents indeed look responsible for the double murder. Sometimes the acquaintances of the servant do indeed look responsible. But, the point, according to seasoned investigators, was the evidence was not adequate to establish one or the other as guilty beyond reasonable doubt. That's the crux. We might be very strongly drawn to judge someone guilty based on certain facts but such judgement is considered biased and not complete.

It took 9 years to come to this conclusion. The parents were arrested, released, arrested again and finally sent to jail since 2013 till now. Effectively nine years of their life have been wasted. Losing the only child and its pain, that you can't quantify. Defending themselves must have made them take huge debts. Some of the very senior lawyers charge tens of lakhs of rupees per appearance.

Once again some people have very correctly raised the point of needing to start to clean up the ancient and arcane Indian criminal justice system which is a remnant from the days of the British Raj. As some eminent legal personality had pointed out, British criminal system in India and other colonies was put in place to suppress the natives. It was not there to dispense justice. Just the opposite. It was there to persecute the natives. We have been following the same cruel system even after 70 years of independence from those evil people. Go and see in Britain how fine is their justice system. Very very rarely their citizens are mistreated or dealt a raw deal. The justice is delivered very quickly. That's the most important thing. If this or any case ends, say in 1-2 years at the max, no complaints. One has to accept that much time and inconvenience as part of living in a society. But 9 years? Not acceptable by any standards.

And another point is about granting bail. In other civilized countries, bail is granted almost by default. Bail is the norm and detaining without bail is an exception. But in India it's exactly the opposite. In very rare cases the accused is in a position to hamper investigation and influence witnesses. But, the old criminal justice system believes in locking up the accused without bail for a long time. So, by the time case comes for trial, the accused would have already served good amount of time regardless of guilty or not. The process of requesting and granting bail is the first thing that needs  major overhaul.

India did away with the jury system after the famous Nanavati case of 1960s. They felt it is very hard to entrust a group of 12 common people (jury) to understand fine legal  details of the trial, judicial details in a country where people are have very little or no education. It is true but it gave all the power to the judge. Made him/her like God with full control over the destiny of the accused. The judge is also a human being. They have their own failings. Is it wise to give all the power to one person like that? Definitely NOT. That is the reason behind the jury system. A legally trained person like judge may rush to judgement. Bias is more. It is hard to convince a group of 12 common people that someone is guilty. The prosecutors (accusing party) has to do a much much better job of explaining the case in most simplest terms and convince the jury that the accused is indeed guilty and the jury must award the most stringent sentence. The role of judge is only to guide and advise the members of jury during the trial and sentencing.

It is true that instituting the jury system in a large country like India with many poor people and poor infrastructure is very very hard. But the cases like Aarushi murder case bring out the need for trial by jury. In this case, the UP high court seriously criticized the way the lower court handled the case and called it as through the lower court judge enacted a drama. That shows how shabby was the trial at the lower court. If well endowed people like Talwars, who hired the best lawyers met such a treatment, you can imagine the plight of commoners without access to good legal representation. Pathetic!

If uniform country-wide jury system is not possible, at least, the accused should have right to demand trial by jury. The court may choose to charge extra for it but that must be permitted.

This is not the first high profile case where the higher court has totally overturned the judgement of the lower court. Not only that but also criticized the lower court for the way the trial was conducted.

Along with so called economic development, other aspects of the society also need to be developed. What's the use of economic prosperity if people have to constantly worry that they might become victims of a botched up judicial system and may end up spending years and years in jail when there was no case against them. Read again. I am saying no case against them. It does not mean they did not commit the crime. They may very well have committed the crime. But if there is not enough evidence, they are as not-guilty as any other person. That's why accused are pronounced not-guilty. Never pronounced INNOCENT. Justice system can't talk about innocence. It can only say guilty or not. That's it.

It has been already very late. Globalization, liberalization etc. started almost 30 years back. A lot of improvements have been made. A lot of prosperity has come. Now it is high time to start revising the legal system, criminal justice system. It will take good 30-40 years but a start must be made NOW. Otherwise don't be surprised if you are hauled and put in jail if your neighbor dies under suspicious circumstances and God forbid by chance you end up being accused!

Legal system should be such that nobody have to fear police, courts, jury etc. if they are clean. Only the really guilty have to be worried. That too only be worried of how to defend themselves against charges on them. Nobody need to worry that they may be victimized by the system. That's how it should be. No country or society can promise legal Nirvana but at least no victimization of the common man can be and must be aspired for.

If interested, read following books and watch following movies. All are excellent sources to get good information about the Aarushi double murder case.

Books:

Aarushi by Avirook Sen. A book by a journalist who followed the lower court trial very closely.

The killing of Aarushi and Murder of Justice by Rajesh Talwar. This Rajesh Talwar is different than the father of Aarushi who is also a Rajesh Talwar. The author is a lawyer. The highlight of this book is, in the book the author tries to develop a plausible alternate theory using his legal acumen. If parents did not commit those murders and if the friends of the servant did not commit them, whodunit?? Everyone is asking who killed Aarushi. Some answers may be found here.

Betrayed : My cousin's wrongful conviction for the murder of her daughter, Aarushi by Shree Paradkar. The author is a Canada based journalist and also the aunt of Aarushi (i.e. mother Nupur Talwar's cousin).

ಏನಾಯ್ತು ಮಗಳೇ by ರವಿ ಬೆಳಗೆರೆ - A book in Kannada based on the CBI report.

Movies:

Talvar - Excellent movie by Meghna Gulzar. Well made!

Rahasya - Loosely based on the incident. An ok movie.

Thursday, October 12, 2017

ಭಾವಿಗೆ ಬಿದ್ದ ಚಂದ್ರ

ಮುಲ್ಲಾ ನಸ್ರುದ್ದೀನ್ ಒಮ್ಮೆ ರಾತ್ರಿಯಲ್ಲಿ ನಡೆದು ಬರುತ್ತಿದ್ದ. ರಸ್ತೆ ಪಕ್ಕದಲ್ಲೊಂದು ಭಾವಿಯಿತ್ತು. ಯಾಕೋ ಇಣುಕಿ ನೋಡಿದ. ಭಾವಿಯ ನೀರಿನಲ್ಲಿ ಚಂದ್ರನನ್ನು ಕಂಡ. 

'ಅಯ್ಯೋ! ಚಂದ್ರ ನೀರಿನಲ್ಲಿ ಬಿದ್ದುಬಿಟ್ಟಿದ್ದಾನೆ. ದೊಡ್ಡ ಘಾತವಾಯಿತಲ್ಲ! ಚಂದ್ರನನ್ನು ತಕ್ಷಣ ರಕ್ಷಿಸಬೇಕು!' ಎಂದುಕೊಂಡ ಮುಲ್ಲಾ ನಸ್ರುದ್ದೀನ್. ಅಬ್ಬಾ! ಮುಲ್ಲಾನ ತಲೆಯೇ! ಅದಕ್ಕೊಂದು ದೊಡ್ಡ ಸಲಾಂ.

ಅಲ್ಲೇ ಅಕ್ಕಪಕ್ಕದವರ ಜೊತೆ ಮಾತಾಡಿ ಹೇಗೋ ಒಂದು ಹಗ್ಗ ಮತ್ತು ಅದಕ್ಕೊಂದು ಕೊಕ್ಕೆಯನ್ನು ಸಂಪಾದಿಸಿದ. ಹಗ್ಗದ ತುದಿಗೆ ಕೊಕ್ಕೆಯನ್ನು ಕಟ್ಟಿ ನೀರಿಗೆ ಇಳಿಬಿಟ್ಟ. ಭಾವಿಗೆ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಹಿಡಿದು ಮೇಲಕ್ಕೆತ್ತುವ ಪ್ರಯತ್ನ ಶುರುಮಾಡಿದ.

ಚಂದ್ರ ಕೊಕ್ಕೆಗೇನೋ ಸಿಗುತ್ತಿದ್ದ(!?). ಆದರೆ ಹಗ್ಗ ಮೇಲೆಳೆದಾಕ್ಷಣ ಜಾರಿ ಮತ್ತೆ ಭಾವಿಗೆ ಬಿದ್ದುಬಿಡುತ್ತಿದ್ದ. ಆದರೆ ಮುಲ್ಲಾ ನಸ್ರುದ್ದೀನ್ ಜಿದ್ದಿ ಮನುಷ್ಯ. ಅಷ್ಟು ಸುಲಭಕ್ಕೆ ಆಗದು ಎಂದು ಕೆಲಸ ಬಿಡುವವನಲ್ಲ. ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಮತ್ತೆ ಹಗ್ಗ ಇಳಿಬಿಟ್ಟು ಭಾವಿಗೆ ಬಿದ್ದ ಚಂದ್ರನನ್ನು ಮೇಲೆತ್ತಲು ಪ್ರಯತ್ನಿಸಿಯೇ ಪ್ರಯತ್ನಿಸಿದ.

ತುಂಬಾ ಹೊತ್ತಿನ ನಂತರ ಕೊಕ್ಕೆಗೆ ಏನೋ ಬರೋಬ್ಬರಿ ಸಿಕ್ಕಿಕೊಂಡಂತಾಯಿತು. ಸುಲಭವಾಗಿ ಹಗ್ಗವನ್ನು ಮೇಲೆ ಎಳೆಯಲು ಆಗಲಿಲ್ಲ.

'ಏನೋ ಬಹಳ ಭಾರವಾದದ್ದೇ ತಗಲಾಕಿಕೊಂಡಿದೆ. ಇಷ್ಟು ಹೊತ್ತಿನ ವರೆಗೆ ಕೊಕ್ಕೆಗೆ ಸಿಗದೇ ಕಾಡಿದ ಚಂದ್ರ ಈಗ ಸಿಕ್ಕಾಕಿಕೊಂಡಿದ್ದಾನೆ. ಇದೇ ಚಾನ್ಸ್. ಬಿಡಲೇಬಾರದು. ಇದ್ದೆಲ್ಲ ಶಕ್ತಿ ಹಾಕಿ ಎಳೆದೇಬಿಡಬೇಕು,' ಎಂದು ಮುಲ್ಲಾ ಧೃಡ ನಿರ್ಧಾರ ಮಾಡಿದ.

ಭಾವಿ ಕಟ್ಟೆಗೆ ಕಾಲು ಕೊಟ್ಟು, ಅಷ್ಟೂ ಶಕ್ತಿ ಹಾಕಿ, ಹಗ್ಗವನ್ನು ಎಳೆದ. ಕೊಕ್ಕೆ ಸಿಕ್ಕಾಕಿಕೊಂಡಿತ್ತು. ಮತ್ತೂ ಜೋರಾಗಿ ಎಳೆದ. ಎಳೆದ ಅಬ್ಬರಕ್ಕೆ ಹಗ್ಗ ಹರಿದುಕೊಂಡು ಮೇಲೆ ಬಂತು. ಹಗ್ಗ ಹರಿದು ಮೇಲೆ ಬಂದ ಅಬ್ಬರಕ್ಕೆ ಮುಲ್ಲಾ ನಸ್ರುದ್ದೀನ್ ಹಿಂದೆ ಸರಿದುಹೋಗಿ ಕುಸಿದು ಬಿದ್ದ.

ಬೆನ್ನು ನೆಲಕ್ಕೆ ಊರಿತ್ತು. ತಲೆ ನೆಲಕ್ಕೆ ಬಡಿದಿತ್ತು. ಒಂದು ಕ್ಷಣ ಕಣ್ಣಿಗೆ ಕತ್ತಲೆ ಬಂದಂತಾಯಿತು. ನಂತರ ಪ್ರಜ್ಞೆ ವಾಪಸ್ ಬಂತು. ನೆಲದ ಮೇಲೆ ಬಿದ್ದವ ಸಹಜವಾಗಿ ಕಣ್ತೆರೆದು ಮೇಲೆ ನೋಡಿದ. ಬಾನಿನಲ್ಲಿ ಚಂದ್ರ ನಗುತ್ತಿದ್ದ. ಅದನ್ನು ನೋಡಿದ ಮುಲ್ಲಾ ಸಂತುಷ್ಟನಾದ.

'ಭಾವಿಯಲ್ಲಿ ಬಿದ್ದಿದ್ದ ಚಂದ್ರನನ್ನು ರಕ್ಷಿಸಿಬಿಟ್ಟೆ. ನಾ ಎಳೆದ ಅಬ್ಬರಕ್ಕೆ ಭಾವಿಯಿಂದ ಮೇಲೆ ಬಂದ ಚಂದ್ರ ಮತ್ತೆ ಆಕಾಶಕ್ಕೆ ಹೋಗಿ ಅಲ್ಲಿ ಸ್ಥಾಪಿತನಾಗಿದ್ದಾನೆ. ನನ್ನ ಉಪಕಾರಕ್ಕೆ ಧನ್ಯವಾದ ಹೇಳುವವನಂತೆ ಮುಗುಳ್ನಗುತ್ತಿದ್ದಾನೆ'' ಎಂದುಕೊಂಡು ಮೈಕೈ ಕೊಡವಿಕೊಂಡು ತನ್ನ ದಾರಿ ಹಿಡಿದು ಹೋದ.

ಅಸಲಿಗೆ ಏನಾಗಿತ್ತು? ಕೊಕ್ಕೆ ಭಾವಿಯಲ್ಲಿನ ಕಲ್ಲಿಗೆ ಸಿಕ್ಕಾಕಿಕೊಂಡಿತ್ತು. ಜೋರಾಗಿ ಎಳೆದಾಗ ಹಗ್ಗ ತುಂಡಾಯಿತು. ಮುಲ್ಲಾ ನೆಲಕ್ಕುರುಳಿದ್ದ. ಕಣ್ಬಿಟ್ಟಾಗ ಮೇಲೆ ಮೇಲೆ ಚಂದ್ರ ಕಂಡಿದ್ದ.

ಈ ಕಥೆ ತುಂಬಾ ಸಿಲ್ಲಿ ಎನ್ನಿಸಬಹುದು. ಇಷ್ಟು ಬಾಲಿಶವಾದ ಮೌಢ್ಯ ಕಂಡು ಮುಲ್ಲಾ ನಸ್ರುದ್ದೀನನನ್ನು ಗೇಲಿ ಮಾಡಿ ನಗಬಹದು. ಆದರೆ ನಮ್ಮ ಮೌಢ್ಯವೇನೂ ಕಮ್ಮಿಯಿಲ್ಲ.

ಮುಕ್ತಿಗಾಗಿ (enlightenment) ಸಾಧನೆ ಮಾಡುವದೆಂದರೆ ಭಾವಿಗೆ ಬಿದ್ದ ಚಂದ್ರನನ್ನು ಮೇಲೆ ಎತ್ತಿದಂತೆ. How absurd!

ಚಂದ್ರ ಆಕಾಶದಲ್ಲೇ ಇದ್ದಾನೆ, ಭಾವಿಯಲ್ಲಿ ಕಾಣುವದು ಕೇವಲ ಪ್ರತಿಬಿಂಬ ಎಂದು ಮೊದಲೇ ಅರಿವಾಗಿಬಿಟ್ಟರೆ ಹಗ್ಗ ತಂದು, ಕೊಕ್ಕೆ ಹಾಕಿ, ಇದ್ದಬಿದ್ದ ಶಕ್ತಿಯನ್ನೆಲ್ಲ ಬಸಿದು ಚಂದ್ರನನ್ನು ಮೇಲೆ ತೆಗೆಯುವ ಕೆಲಸಕ್ಕೆ ಯಾರೂ ಇಳಿಯುವದಿಲ್ಲ. ಪರಮಾತ್ಮನೇ ಆದ ಜೀವಾತ್ಮ ನಾವು. ಪರಮಾತ್ಮನ ಪ್ರತಿಬಿಂಬ ಅಜ್ಞಾನವೆಂಬ ಭಾವಿಯಲ್ಲಿ ಜೀವಾತ್ಮ ರೂಪದಲ್ಲಿ ಕಾಣುತ್ತದೆ ಅಷ್ಟೇ ಎಂದು ಖಡಕ್ಕಾಗಿ ತಿಳಿದುಬಿಟ್ಟರೆ ಸಾಧನೆಯ ಅವಶ್ಯಕತೆಯೇ ಇರುವದಿಲ್ಲ. paradoxically ನಾವು ನಿತ್ಯಮುಕ್ತರು, ಬಂಧಿತರಲ್ಲ ಎಂದು ನಮಗೆ ಅರಿವಾಗುವದಿಲ್ಲ. ಅದೇ ಅಜ್ಞಾನ. so called ಸಾಧನೆ ಕೂಡ ಅದೇ ಅಜ್ಞಾನದ / ಮಾಯೆಯ ಪರಿಧಿಯಲ್ಲೇ ಬರುತ್ತದೆ.

ಹಾಗಾದರೆ ಅಧ್ಯಾತ್ಮ ಸಾಧನೆ ಮಾಡಬೇಕೋ ಬೇಡವೋ ಅಂತ ಪ್ರಶ್ನೆ ಬಂದರೆ ಉತ್ತರಿಸಲು ಮತ್ತೊಂದು ಕಥೆ ಕೇಳಿ.

ಒಮ್ಮೆ ಶಿಷ್ಯನೊಬ್ಬ ಗುರುಗಳ ಹತ್ತಿರ ಕೇಳಿದ, 'ಜ್ಞಾನೋದಯವಾಗಲು (ಮುಕ್ತಿ ಸಿಗಲು) ಏನು ಮಾಡಬೇಕು?'

'ಸೂರ್ಯೋದಯವಾಗಲು ಏನು ಮಾಡಬೇಕೋ ಅಷ್ಟು ಮಾಡು ಸಾಕು,' ಅಂದರು ಗುರುಗಳು.

'ಸೂರ್ಯೋದಯವಾಗಲು ನಾನು ಏನೂ ಮಾಡಬೇಕಿಲ್ಲ. ಅದು ತಾನಾಗೇ ಆಗುತ್ತದೆ!' ಅಂದ ಶಿಷ್ಯ.

'ಜ್ಞಾನೋದಯವೂ ಅಷ್ಟೇ. ಅದಾಗೇ ಆಗುತ್ತದೆ. ಬಿಡು,' ಅಂದು ಎದ್ದರು ಗುರುಗಳು.

'ಹಾಗಾದರೆ ಈ ಧ್ಯಾನ, ಜಪ, ಪೂಜೆ, ಪುನಸ್ಕಾರ ಇತ್ಯಾದಿ ಯಾಕೆ?' ಎಂದು ಕೇಳಿದ ಶಿಷ್ಯ.

'ಸೂರ್ಯೋದಯವು ತಂತಾನೇ ಆದರೂ ಅದನ್ನು ನೋಡಬೇಕು ಅಂದರೆ ಅಷ್ಟೊತ್ತಿಗೆ ನಿದ್ದೆಯಿಂದ ಎದ್ದಿರಬೇಕಾಗಿರುತ್ತದೆ. ಅದಕ್ಕಾಗಿ ಗಡಿಯಾರ ಉಪಯೋಗಿಸಬಹುದು. ಹೇಗೆ ಗಡಿಯಾರವು ನಿನ್ನನ್ನು ಸೂರ್ಯೋದಯದ ಸಮಯಕ್ಕೆ ಎಬ್ಬಿಸಿ ಸೂರ್ಯೋದಯವನ್ನು ನೋಡುವಂತೆ ಮಾಡುತ್ತದೆಯೋ ಹಾಗೇ ಅಧ್ಯಾತ್ಮ ಸಾಧನೆಗಳು (ಧ್ಯಾನ, ಜಪ ಇತ್ಯಾದಿ) ನಿನಗೆ ಜ್ಞಾನೋದಯವಾದಾಗ ಅದನ್ನು ತಿಳಿಯಲು ಸಹಾಯಕಾರಿ. ಅಷ್ಟು ಬಿಟ್ಟರೆ ಜಾಸ್ತಿ ಉಪಯೋಗವಿಲ್ಲ. ಜ್ಞಾನೋದಯ ಅದರ ಪಾಡಿಗೆ ಅದಾಗುತ್ತಿರುತ್ತದೆ,' ಎಂದರು ಗುರುಗಳು.

ಮುಲ್ಲಾ ನಸ್ರುದ್ದೀನನ ಕಥೆಯನ್ನು ಉಪಯೋಗಿಸಿ ಅದ್ವೈತದ ಪ್ರಕಾರ ಮುಕ್ತಿಯ (enlightenment) ಸಾರವನ್ನು ಹೇಳಿದವರು ಸ್ವಾಮಿ ಪರಮಾರ್ಥಾನಂದರು. ಅವರಿಗೊಂದು ಹಾಟ್ಸ್ ಆಫ್. Ultimate interpretation! Gist is - there is nothing to do. YOU are already free. But, till you know that you are free, you need to do rituals and practices! That's the paradox and the riddle.

ಬಂಧಿತರಾಗಿಯೇ ಇಲ್ಲವೆಂದ ಮೇಲೆ ಮುಕ್ತಿಯ ಪ್ರಶ್ನೆಯೇ ಬರುವದಿಲ್ಲ. ಬಂಧಿತರಾಗಿದ್ದೇವೆ ಎಂಬ ತಪ್ಪು ತಿಳುವಳಿಕೆಗೆ ಕಾರಣ ಅಜ್ಞಾನ. ಚಂದ್ರ ಭಾವಿಯಲ್ಲಿ ಬಿದ್ದಿದ್ದಾನೆ ಎಂದುಕೊಂಡಂತೆ.

ಇಂತಹ ದೃಷ್ಟಾಂತಗಳನ್ನು (metaphor) ತುಂಬಾ literally ಆಗಿ ತೆಗೆದುಕೊಳ್ಳಬೇಡಿ. ಅವುಗಳ ಉದ್ದೇಶ ಅದಲ್ಲ. ಅವು ಅಂತಿಮ ಜ್ಞಾನದೆಡೆಗಿನ ಮಾರ್ಗಸೂಚಿಗಳು ಅಷ್ಟೇ. ಓದಿದಾಗ 'ಆಹಾ!' ಅನ್ನುವಂತಹ epiphany ತರಹದ್ದು ಆದರೆ ಅವುಗಳ ಉದ್ದೇಶ ಸಾರ್ಥಕ. ಆಗಲಿಲ್ಲ ಅಂದರೆ ನಾವಿನ್ನೂ ಆ ಮಟ್ಟಕ್ಕೆ ಹೋಗಿಲ್ಲ, ಬೌದ್ಧಿಕವಾಗಿ ತಯಾರಾಗಿಲ್ಲ ಎಂದರ್ಥ. ಪ್ರಯತ್ನ ಮುಂದುವರೆಯಲಿ. ಮುಂದೊಮ್ಮೆ ಸರಿಯಾದ ಸಮಯದಲ್ಲಿ ಬರೋಬ್ಬರಿ ಅರ್ಥವಾಗುತ್ತದೆ.

ಮಾಹಿತಿ ಆಧಾರ: The book of ONE by Dennis Waite

**

ಒಮ್ಮೊಮ್ಮೆ ಈ coincidences ಎಷ್ಟು ಮಜವಾಗಿರುತ್ತವೆ ಅಂದರೆ....ಬಿಂಬ ಪ್ರತಿಬಿಂಬಗಳ ಬಗ್ಗೆ ಬರೆದು YouTube ಮೇಲೆ ಕಣ್ಣಾಯಿಸಲು ಹೋದರೆ ಮತ್ತೊಂದು ಅದ್ವೈತದ ದೃಷ್ಟಾಂತ ಅಚಾನಕ್ಕಾಗಿ ಕಣ್ಣಿಗೆ ಬೀಳಬೇಕೇ!?

ಕೆಳಗೆ ಹಾಕಿದ ವಿಡಿಯೋದಲ್ಲಿ ಹಕ್ಕಿಯೊಂದು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡು ಹೇಗೆ ವರ್ತಿಸುತ್ತಿದೆ ನೋಡಿ.

ಅದು ತನ್ನದೇ ಪ್ರತಿಬಿಂಬ ಎಂದು ತಿಳಿಯುವಷ್ಟು ಬುದ್ಧಿ ಆ ಹಕ್ಕಿಗೆ ಇಲ್ಲ ಅನ್ನುವ ನಮಗೆಷ್ಟು ಬುದ್ಧಿಯಿದೆ? ಜಗತ್ತೆಂಬುದು ಮಾಯೆ ಎಂಬ ಕನ್ನಡಿಯಲ್ಲಿ ಕಾಣುವ ಭಗವಂತನ ಪ್ರತಿಬಿಂಬ ಅಷ್ಟೇ ಎನ್ನುವ ವಿವೇಕ ನಮಗೂ ಮೂಡುವದೇ ಇಲ್ಲ. ನಾವೂ ಸಹ ಆ ಹಕ್ಕಿಯಂತೆ ಪ್ರತಿಬಿಂಬದೊಂದಿಗೆ (ಜಗತ್ತೆಂಬ ಮಿಥ್ಯೆಯೊಂದಿಗೆ) ಗುದ್ದಾಡುತ್ತಲೇ ಇರುತ್ತೇವೆ. ವ್ಯಾವಹಾರಿಕ ನೆಲೆಗಟ್ಟಿನಲ್ಲಿ ಗುದ್ದಾಟ ಅವಶ್ಯಕವಿರಬಹದು. ಆದರೆ ಜಗತ್ತು, ಅದರೊಂದಿಗಿನ ಗುದ್ದಾಟವೆಲ್ಲ ಪರಮಸತ್ಯ ಎಂದು ತಿಳಿದು ಗುದ್ದಾಡುತ್ತೇವಲ್ಲ ಅದು ಅಜ್ಞಾನ.

ಇದ್ಯಾಕೋ 'ಕರ್ಮಣ್ಯೇ ವಾಧಿಕಾರಸ್ತೇ' ಕಡೆ ಹೊರಟಿತು.... :) ಸಾಕು. ಬೇರೊಂದು ಬ್ಲಾಗ್ ಪೋಸ್ಟಿಗೆ ವಸ್ತು ಬೇಕಲ್ಲ!? :)

ಹಕ್ಕಿಯ ಈ ದೃಷ್ಟಾಂತವನ್ನು ಸ್ವಾಮಿ ಅನುಭವಾನಂದಜೀ ಸದಾ ಹೇಳುತ್ತಿರುತ್ತಾರೆ. ಈ ಹಕ್ಕಿಗೊಂದು ಥ್ಯಾಂಕ್ಸ್! :)

 

Wednesday, October 11, 2017

WHYling away our life HOWling

We while away our life howling.

!! ??

What is that supposed to mean?

While away = waste, spend without purpose.

If you write the same line as 'we WHYle away our life HOWling', it becomes more appropriate. Grammatically incorrect. Perhaps. But very insightful and meaningful.

Our tendency to ask 'why' and 'how' for everything is the root cause of our miseries.

Why and How are very powerful questions and are tremendously helpful to understand things in the material world. But, they are extreme time-wasters if used to ponder over spiritual or metaphysical things.

Why is the world like this? Why does God let this happen? Why so much misery? Why such and a such thing happened to me? Why me????

After we get tired of WHY, we start wasting time on HOW. That's also useless.

Forget WHY and HOW and develop acceptance. You will be happier and more peaceful.


**

All your happiness and miseries are found in the same two things in life - your possessions and your relations.

Happiness is linear and misery is geometric. So be careful where you try to find happiness. You may find some happiness as promised. But, be assured, the same thing will cause many times misery too.

Minimalism is to the rescue. Cut down both possessions and relations. You will be lighter and happier. Why stop at traveling light? Live light!

External clutter causes internal clutter and vice versa. Reducing one helps reduce the other as well.

**

Insights from the discourses of Swami Anubhavananda Saraswati


Sunday, October 08, 2017

ಸಪ್ತಾಪುರದ ಹನುಮಪ್ಪ

ನಿನ್ನೆ ಶನಿವಾರ. ಹನುಮಪ್ಪ ನೆನಪಾಗಿದ್ದ.

'ಯಾವ ಹನುಮಪ್ಪ?' ಅಂತ ಕೇಳಿದರೆ ಹನುಮಂತ, ಮಾರುತಿ, ದೇವರು. ಹನುಮಾನ್, ವಾಯುಪುತ್ರ, ಆಂಜನೇಯ ಅಂತೆಲ್ಲ ಹೇಳಬೇಕಾಗುತ್ತದೆ.

ನಮ್ಮ ಧಾರವಾಡ ಕಡೆ ದೇವರಾದ ಹನುಮಂತನಿಗೆ ಯಾರೂ ಶುದ್ಧವಾಗಿ ಹನುಮಂತ, ಮಾರುತಿ, ವಾಯುಪುತ್ರ, ಅದು ಇದು ಅಂತೆಲ್ಲ ಶಾಸ್ತ್ರಬದ್ಧವಾಗಿ ಹೇಳುವುದು ಬಹಳ ಕಮ್ಮಿ. ಅವನು ದೇವರಾಗಿದ್ದರೂ ಸರಿ. ಅವನು ಹನುಮಪ್ಪನೇ. ಅವನ ದೇವಸ್ಥಾನ ಶಾರ್ಟ್ & ಸ್ವೀಟಾಗಿ 'ಹನುಮಪ್ಪನ ಗುಡಿ'. ಒಂದಕ್ಕಿಂತ ಹೆಚ್ಚು ಹನುಮಪ್ಪನ ಗುಡಿಗಳಿರುವ ಕಾರಣ 'ನುಗ್ಗಿಕೇರಿ ಹನುಮಪ್ಪ', 'ಸಪ್ತಾಪುರ ಹನುಮಪ್ಪ' ಅಂತ ಗ್ರಾಮ / ಬಡಾವಣೆಗಳ prefix ಬೇಕಾದರೆ ಸೇರಿಸುತ್ತಾರೆ. To differentiate between different Hanumpappas.

ದೇವರಾದ ಹನುಮಂತನಿಗೆ ಹನುಮಪ್ಪ ಎನ್ನುವದರಲ್ಲಿ ಅದೇನೋ ಅಪ್ಯಾಯತೆ, ಆತ್ಮೀಯತೆ ಎಲ್ಲ ಇದೆ ಅಂತ ಅನ್ನಿಸುತ್ತದೆ. ಹನುಮಪ್ಪ ಅಂದುಬಿಟ್ಟರೆ ಚಿಕ್ಕಪ್ಪನೋ, ದೊಡ್ಡಪ್ಪನೋ, ಅಪ್ಪಣ್ಣನೋ, ಅಣ್ಣಪ್ಪನೋ ಅನ್ನುವ ಕ್ಲೋಸ್ ಫೀಲಿಂಗ್ ಬರುತ್ತದೆ. ದೇವರು ದಿಂಡರು ಅನ್ನುವ ಔಪಚಾರಿಕತೆಯೆಲ್ಲ ಮಾಯವಾಗಿ ಹನುಮಪ್ಪ ಕೂಡ ನಮ್ಮವನೇ, ಕುಟುಂಬದವನೇ ಆಗಿಬಿಡುತ್ತಾನೆ. ಒಮ್ಮೆ ಹನುಮಪ್ಪ ಕೂಡ ನಮ್ಮವನೇ ಆಗಿಬಿಟ್ಟರೆ 'ಹೋಳಿಗೆ ತುಪ್ಪ, ಹೊಡಿ ಹನುಮಪ್ಪ!' ಅಂತ ದೇವರಿಗೆ ಹೋಳಿಗೆ ತುಪ್ಪದ ನೈವೇದ್ಯ ಮಾಡಿ ನಾವು ಬರೋಬ್ಬರಿ ಬಾರಿಸಲಿಕ್ಕೆ, ಅಂದರೆ ಹೋಳಿಗೆಯನ್ನು ತುಪ್ಪದ ಜೊತೆ ಬಾರಿಸಲಿಕ್ಕೆ, ಮಜಾ ಬರುತ್ತದೆ.

ಅದೇನೋ ಗಾದೆ ಮಾತು ಇದೆಯೆಲ್ಲ. 'ಏನೇ ಆದರೂ ಹನುಮಪ್ಪ ಮಾತ್ರ ಊರ ಹೊರಗೆ...' ಧಾರವಾಡದ ಮಟ್ಟಿಗಂತೂ ಈ ಮಾತು ಸತ್ಯ. ಧಾರವಾಡ ಊರನ್ನು ಯಾವುದೇ ದಿಕ್ಕಿನಿಂದ ಪ್ರವೇಶಿಸಿ, ನಿಮಗೆ ಒಂದು ಹನುಮಪ್ಪನ ಗುಡಿ ಕಾಣುತ್ತದೆ. ಹುಬ್ಬಳ್ಳಿ ಕಡೆಯಿಂದ ಬೈಪಾಸ್ ರಸ್ತೆ ಮೇಲೆ ಬಂದರೆ ವಿಖ್ಯಾತ ನುಗ್ಗಿಕೇರಿ ಹನುಮಪ್ಪನ ಗುಡಿ ಇದೆ. ದೊಡ್ಡ ಕೆರೆಯೊಂದನ್ನು ಹೊಂದಿದ ಅದ್ಭುತ ದೇವಸ್ಥಾನ. ಗೋವಾ, ಹಳಿಯಾಳ ಕಡೆಯಿಂದ ಎಂಟ್ರಿ ಕೊಟ್ಟರೆ ಸಪ್ತಾಪುರ ಹನುಮಪ್ಪ ಕಾವಲಿಗೆ ನಿಂತಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶದ್ವಾರದ ಪಕ್ಕದಲ್ಲೇ ಇದೆ ಸಪ್ತಾಪುರ ಹನುಮಪ್ಪನ ಗುಡಿ. ಬೇರೆ ಬೇರೆ ದಿಕ್ಕಿನಿಂದ ಪ್ರವೇಶ ಮಾಡಿದರೂ ಹನುಮಪ್ಪನ ಗುಡಿ ಇರಲೇಬೇಕು. ಧಾರವಾಡದಲ್ಲಿ ಮಾರಿಗೊಬ್ಬ ಹನುಮಪ್ಪ ಇರುತ್ತಾನೆ. ಖಾಲಿ ಜಾಗಗಳ ಅತಿಕ್ರಮಣ ಮಾಡುವವರಿಗೂ ಹನುಮಪ್ಪ ಆರಾಧ್ಯದೈವ. ಎರಡು ಇಟ್ಟಿಗೆ ಇಟ್ಟು, ಒಳಗೊಂದು ಕಲ್ಲಿಗೆ ಕೆಂಪನೆಯ ಬಣ್ಣ ಬಳಿದು, 'ಇದು ಹನುಮಪ್ಪನ ಗುಡಿ!' ಅಂದುಬಿಟ್ಟರೆ ಮುಗಿಯಿತು. ಆಜನ್ಮ ಬ್ರಹ್ಮಚಾರಿಯಾದ ಹನುಮಪ್ಪ ಹೆಚ್ಚಿನ ಡಿಮ್ಯಾಂಡ್ ಮಾಡುವದಿಲ್ಲ. ಬಂದು ಕೂತುಬಿಡುತ್ತಾನೆ. ಅಲ್ಲಿಗೆ ಗುಡಿ ರೆಡಿ. ಹನುಮಪ್ಪ ಬಂದು ಕೂತ ಅಂದರೆ ಮುಗಿಯಿತು. ಸರ್ಕಾರಿ ಜಾಗ, ಖಾಸಗಿ ಜಾಗದ ಆಸೆ ಕೈಬಿಟ್ಟಂತೆಯೇ. ಹೀಗೆ ಹನುಮಪ್ಪನ ಹೆಸರಿನಲ್ಲಿ ಜಾಗದ ಅತಿಕ್ರಮಣ ಮಾಡಿದವರು ಒಮ್ಮೆ ಆ ಜಾಗದ ಕಬ್ಜಾ ಸಿಕ್ಕ ನಂತರ ಅದನ್ನು ಲೇಔಟ್ ಮಾಡಿ ಪರಭಾರೆ ಮಾಡುವಾಗ ಹನುಮಪ್ಪನಿಗೆ ಹೋಳಿಗೆ ನೈವೇದ್ಯ ಮಾಡಿ ಅವನನ್ನು ಅಲ್ಲಿಂದ ಒಕ್ಕಲೆಬ್ಬಿಸುತ್ತಾರೆ. ಮತ್ತೊಂದು ಜಾಗದ ಅತಿಕ್ರಮಣಕ್ಕೆ ಈ ಹನುಮಪ್ಪನ ವರ್ಗವಾಗುತ್ತದೆ. ಬ್ರಹ್ಮಚಾರಿ ಹನುಮಪ್ಪ ಹೀಗೆ ಸಂಸಾರಿಗಳ ಕಾರಸ್ಥಾನಕ್ಕೆ ಬಲಿಯಾಗುತ್ತಾನೆ.

ಈ ಸಪ್ತಾಪುರ ಹನುಮಪ್ಪ ನಮಗೆ ತುಂಬಾ ಹತ್ತಿರದವನು. ಮನೆ ಹತ್ತಿರಕ್ಕೇ ಇರುವ ಕಾರಣಕ್ಕೆ ಹತ್ತಿರದವನು. ಮನೆ ಹತ್ತಿರವೇ ಇರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಾವು ಓಡಾಡಿಕೊಂಡಿರುವದರಿಂದ ಸದಾ ಕಣ್ಣಿಗೆ ಬೀಳುತ್ತಾನೆ. ದೂರದಿಂದಲೇ ನಮಸ್ಕಾರ ಹಾಕುತ್ತೇವೆ. ಹನುಮಪ್ಪ ತುಂಬಾ informal ದೇವರು. ದೂರದಿಂದಲೇ casual ನಮಸ್ಕಾರ ಹಾಕಿದರೂ ಅನುಗ್ರಹಿಸುತ್ತಲೇ ಇರುತ್ತಾನೆ. ಒಳಗೆ ಹೋಗಿ ಬರೋಣ ಅಂದರೆ ಮುಂಜಾನೆ ವಾಕಿಂಗಿಗೆ ಹೋದಾಗಲೇ ಹನುಮಪ್ಪನ ದರ್ಶನವಾಗುವದು ಹೆಚ್ಚು. ಆಗ ಇನ್ನು ಸ್ನಾನ ಇತ್ಯಾದಿ ಆಗಿರುವದಿಲ್ಲ. ಮತ್ತೆ ಬೂಟು ಕಳಚಿಟ್ಟು ಒಳಗೆ ಹೋದರೆ ಬಂದಾಗ ಅವು ಅಲ್ಲೇ ಇರುತ್ತವೆಯೇ? ಖಾತ್ರಿಯಿಲ್ಲ. ಹೀಗಾಗಿ ಸಪ್ತಾಪುರದ ಹನುಮಪ್ಪನ ಗುಡಿಯ ಮುಂದೆ ದಿನಾ ಬೆಳಿಗ್ಗೆ ವಾಕಿಂಗ್ ಮಾಡಿದರೂ ಒಳಗೆ ಹೋಗಿದ್ದು ಯಾವ ಕಾಲದಲ್ಲೋ. ತುಂಬಾ ವರ್ಷಗಳಾಗಿಹೋಗಿವೆ.

ಸಪ್ತಾಪುರದ ಹನುಮಪ್ಪ ಎಂಬ ದೇವರ ಗುಡಿಯ ಹೆಸರು ಮನಸಲ್ಲಿ ನಿಂತ ಘಳಿಗೆ ಬರೋಬ್ಬರಿ ನೆನಪಿದೆ. ಸರಿಸುಮಾರು ನಲವತ್ತೂ ಚಿಲ್ಲರೆ ವರ್ಷಗಳ ಹಿಂದೆ. ಆಗಿನ್ನೂ ನಾಲ್ಕೈದು ವರ್ಷದ ಚಿಣ್ಣ ಬಾಲಕ ನಾನು. ಮನೆಯಿದ್ದದ್ದು ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ. ರಾಯರ ಮಠದ ಸಮೀಪ. ಯಾವದೋ ಕಾರಣಕ್ಕೆ ಆವತ್ತು ಅಮ್ಮನ ಜೊತೆ ರೈಲ್ವೆ ಸ್ಟೇಷನ್ ಆಕಡೆಯಿರುವ ಕಲ್ಯಾಣ ನಗರ ಬಡಾವಣೆಗೆ ಹೋಗಿದ್ದೆ. ಅಮ್ಮನ ಕೆಲವು ಆತ್ಮೀಯರು ಆರನೇ ಕ್ರಾಸಿನ ಆಸುಪಾಸಿನಲ್ಲಿ ಇದ್ದರಲ್ಲ. ಹಾಗಾಗಿ ಆಗಾಗ ಅಮ್ಮನ ಸವಾರಿ ಆಕಡೆ ಹೋಗುತ್ತಿತ್ತು. ಜೊತೆಗೆ ನಾನೂ ಹೋಗುತ್ತಿದ್ದೆ.

ಅಂದೂ ಹಾಗೇ ಆಯಿತು. ಅಮ್ಮನ ಗೆಳತಿಯರ ಮನೆಯಲ್ಲಿ ಹರಟೆ ಪರಟೆ ಮುಗಿಸಿ, ಚಹಾ ಪಹಾ ಕುಡಿದು, ಮನೆ ಕಡೆ ಹೊರಟೆವು. ಸಂಜೆ ಸುಮಾರು ಏಳು ಏಳೂವರೆ ಸಮಯ. ಆಗಲೇ ಕತ್ತಲಾವರಿಸತೊಡಗಿತ್ತು. ಆಗ ಕಲ್ಯಾಣ ನಗರ ಎಂಬ ಬಡಾವಣೆಯಲ್ಲಿ ಜನವಸತಿ ತುಂಬಾ ವಿರಳ. ಬಡಾವಣೆ ಕಮ್ಮಿ ಮಾವಿನತೋಪು ಜಾಸ್ತಿಯಾಗಿತ್ತು ಅಂದರೆ ಬರೋಬ್ಬರಿಯಾದೀತು. ಕತ್ತಲಾಯಿತೆಂದರೆ ಒಂದು ತರಹದ ರಾವ್ ರಾವ್ ಫೀಲಿಂಗ್. ಮತ್ತೆ ಪಕ್ಕದಲ್ಲೇ ಹರಿದು ಹೋಗಿದ್ದ ರೈಲ್ವೆ ಹಳಿಗಳ ಮೇಲೆ ಆಗಾಗ ಹೆಣಗಳು ಬೀಳುತ್ತಿದ್ದವು. ಆತ್ಮಹತ್ಯೆ ಕೇಸುಗಳು. ಕೊಲೆ ಮಾಡಿ ಎಸೆದು ಹೋದ ಕೇಸುಗಳೂ ಸಹ ಇರುತ್ತಿದ್ದವು ಅಂತ ಜನ ಮಾತಾಡಿಕೊಳ್ಳುತ್ತಿದ್ದರು.

ಕತ್ತಲಾಗುತ್ತಿದೆ ಬೇಗ ಮನೆ ಸೇರಿಕೊಳ್ಳೋಣ ಅಂತ ಮನೆ ಕಡೆ ಹೊರಟರೆ ಕಲ್ಯಾಣ ನಗರದ ಐದನೇಯ ಅಥವಾ ನಾಲ್ಕನೇಯ ಕ್ರಾಸಿನಲ್ಲಿ ಅಮ್ಮನನ್ನು ಯಾರೋ ಒಬ್ಬರು ಅಟಕಾಯಿಸಿಕೊಂಡರು. ನೋಡಲು ಸ್ವಲ್ಪ ಅಜ್ಜಿಯ ಹಾಗಿದ್ದರು. ಮೊದಲೆಲ್ಲೂ ನೋಡಿದ ನೆನಪಿರಲಿಲ್ಲ.

ಸ್ವಲ್ಪ ದೂರದಲ್ಲಿದ್ದರೂ, ಅಮ್ಮನನ್ನು ನೋಡಿದವರೇ, 'ಏ, ಲಲಿತಾ.......!!' ಎಂದು ವಿಚಿತ್ರವಾಗಿ ಕೂಗುತ್ತ ಓಡಿ ಬಂದು ಅಮ್ಮನ ಕೈಹಿಡಿದುಕೊಂಡರು. ನಾನು ಥಂಡಾ ಹೊಡೆದೆ ಒಂದು ಕ್ಷಣ. ಅಷ್ಟು ವಿಚಿತ್ರವಾಗಿತ್ತು ಆಕೆ ಕೂಗುತ್ತ ಓಡಿ ಬಂದಿದ್ದು.

'ನಿನ್ನ ಗೆಳತಿ ಹೋದಳಲ್ಲವಾ. ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳಲ್ಲವಾ..... ' ಎಂದವರೇ ಭೋರಿಟ್ಟು ಅಳಲು ಆರಂಭಿಸಿಬಿಟ್ಟರು. ಆ ಮಾತು ಕೇಳಿ ಈಗ ಅಮ್ಮ ಕೂಡಾ ಥಂಡಾ ಹೊಡೆದರು.

'ಏನಾತ್ರೀ? ಏನು ಹೇಳಲಿಕತ್ತೀರಿ? ಯಾರಿಗೆ ಏನಾತು?' ಎಂದು ಅಮ್ಮ ಆ ಅಜ್ಜಿಯಂತವರನ್ನು ಕೇಳಿದಳು.

'ನಿನ್ನ ಗೆಳತಿ ಜೀವಾ ತೆಕ್ಕೊಂಡಳು! ವಾರದ ಹಿಂದೆ ಸಪ್ತಾಪುರ ಹನುಮಪ್ಪನ ಗುಡಿ ಭಾವಿಯಾಗ ಜಿಗಿದು ಸತ್ತಳು!' ಅಂದವರೇ, 'ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳು. ನೋಡ. ಹೀಂಗ ಮಾಡೋದು!? ಅನ್ಯಾಯ. ನೋಡss....' ಅನ್ನುತ್ತ ಮತ್ತೂ ಭೋರಿಟ್ಟು ಅಳತೊಡಗಿದರು.

ಮುಸ್ಸಂಜೆ ಸಮಯ. ನಿರ್ಜನ ಬಡಾವಣೆ. ದೀಪವಿಲ್ಲದ ರಸ್ತೆಗಳು. ಮಾಹೋಲ್ ಖರಾಬಾಗಿದೆ. ಹಾಗಿರುವಾಗ ಬಿಳಿ ಮಂಡೆಯ ವೃದ್ಧೆಯೊಬ್ಬರು ಒಮ್ಮೆಲೇ ಪ್ರತ್ಯಕ್ಷರಾಗಿ ಅವರ ಮಗಳು, ಅಮ್ಮನ ಗೆಳತಿ, ವಾರದ ಹಿಂದೆಯಷ್ಟೇ ಸಪ್ತಾಪುರದ ಹನುಮಪ್ಪನ ಗುಡಿಯೊಳಗಿನ ಭಾವಿಯೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಅನ್ನುವ ಭಯಾನಕ ಸುದ್ದಿ ಹೇಳಿ ನಮ್ಮನ್ನು ಫುಲ್ ಥಂಡಾ ಹೊಡೆಸಿಬಿಟ್ಟಿದ್ದಾರೆ!

ನನಗೆ ಆಗ ಪೂರ್ತಿಯಾಗಿ ಅರ್ಥವೂ ಆಗಿರಲಿಲ್ಲ. ಆ ವೃದ್ಧೆಯ ಹರಕತ್ತನ್ನು ನೋಡಿ ಥಂಡಾ ಹೊಡೆದು ಅಮ್ಮನ ಹಿಂದೆ ಬಚ್ಚಿಟ್ಟುಕೊಂಡೆ. ಮೊದಲೇ ಸಂಕೋಚದ ಮುದ್ದೆ ನಾನು. ಪ್ರೀತಿಯಿಂದ ಮಾತಾಡಿಸಿದರೂ ಮುದುಡಿ ಹೋಗುತ್ತಿದ್ದೆ. ಇನ್ನು ರೋನಾ ಧೋನಾ ಮಾಡುತ್ತಿರುವ ಆ ಮುದುಕಿ ಬಂದು ನನಗೂ ಗುದುಮುರುಗಿ ಹಾಕಿದರೆ ಕಷ್ಟ. ಅಷ್ಟೇ ಮತ್ತೆ ಅಂತ ಅಮ್ಮನ ಹಿಂದೆ ಸೇರಿಕೊಂಡೆ.

'ಅಯ್ಯೋ! ಇದೇನಾತ್ರಿ? ಏನಾಗಿತ್ತು ಅಕಿಗೆ? ಅದೂ ಭಾವಿಯಾಗ ಜಿಗಿದು ಸಾಯೋವಂತಹದ್ದು?' ಎಂದು ಅಮ್ಮ ತನ್ನ ಗೆಳತಿಯ ಅಚಾನಕ್ ಸಾವಿನ ಸುದ್ದಿಯಿಂದಾದ ಆಘಾತದಿಂದ ಕೊಂಚ ಚೇತರಿಸಿಕೊಂಡು ಕೇಳಿದಳು.

ಅಮ್ಮ ಮತ್ತು ಆ ವೃದ್ಧೆ ಏನೇನೋ ಗುಸುಗುಸು ಮಾತಾಡಿಕೊಂಡರು. ಆಗ ಏನು ಅಂತ ತಿಳಿಯಲಿಲ್ಲ. ಎಷ್ಟೋ ವರ್ಷಗಳ ನಂತರ ಒಂದಕ್ಕೊಂದು ಮಾಹಿತಿ ಸೇರಿಸಿಕೊಂಡು, ಸ್ವಲ್ಪ ಮಟ್ಟಿಗೆ ಬೆಳೆದ ಬುದ್ಧಿಯನ್ನು ಉಪಯೋಗಿಸಿದಾಗ ತಿಳಿದ ವಿಷಯ ಇಷ್ಟು. ಆಕೆ ಅಮ್ಮನ  ಗೆಳತಿ. ಆಗ ಸುಮಾರು ಮೂವತ್ತು-ಮೂವತ್ತೆರೆಡು ವರ್ಷದ ಅವಿವಾಹಿತೆ. ಲವ್ ಕೇಸು. ಮೊದಲು ಲವ್ವಾಗಿದ್ದು ನಂತರ ಲವ್ ಫೇಲ್ಯೂರ್ ಆಗಿದೆ. ಸೀದಾ ಹೋಗಿ ಸಪ್ತಾಪುರದ ಹನುಮಪ್ಪನ ಗುಡಿಯ ಆವರಣದೊಳಗಿರುವ ಭಾವಿಯೊಳಗೆ ಡೈವ್ ಹೊಡೆದಿದ್ದಾಳೆ. ಶಿವಾಯ ನಮಃ!

ಪುತ್ರ / ಪುತ್ರಿ ಶೋಕಂ ನಿರಂತರಂ. ಮಗಳನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದ ಆ ವೃದ್ಧ ತಾಯಿಗೆ ಏನೋ ಒಂದು ತರಹದ ಸಮಾಧಾನವನ್ನು ಅಮ್ಮ ಹೇಳಿದಳು. ಸ್ವಂತ ಮಗಳೇನೋ ಎಂಬಂತೆ ಅವರ ಮೈ ಕೈ ಒತ್ತಿ, ಆತ್ಮೀಯತೆ ಮತ್ತು ಪ್ರೀತಿ ತೋರಿದಳು. ಆ ವೃದ್ಧೆ ಅದೆಷ್ಟೋ ನಿರಾಳರಾದಂತೆ ಕಂಡುಬಂತು. ಅವರನ್ನು ಬೀಳ್ಕೊಟ್ಟು ಮನೆ ಕಡೆ ಹೊರಟೆವು. ಆಗ ಆ ತಾಯಿ ಹೇಳಿದ ಒಂದು ಮಾತೇ ಕಾರಣ ಇವತ್ತಿಗೂ ಸಪ್ತಾಪುರದ ಹನುಮಪ್ಪ, ಅವನ ಗುಡಿ, ಅಲ್ಲಿರಬಹುದಾದ ಭಾವಿ ಎಲ್ಲ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ.

ಕಲ್ಯಾಣ ನಗರದ ಐದು ಅಥವಾ ನಾಲ್ಕನೇ ಕ್ರಾಸಿನಲ್ಲಿ ನಿಂತಿದ್ದ ಆ ವೃದ್ಧ ತಾಯಿ, ತಮ್ಮ ಬಲಗೈನ್ನು ಎತ್ತಿ ತೋರಿಸಿ ಒಂದು ಮಾತು ಹೇಳಿದರು. 'ಆ ದಿಕ್ಕಿನ್ಯಾಗ, ಸಪ್ತಾಪುರದ ಹನುಮಪ್ಪನ ಗುಡಿ ದಿಕ್ಕಿನ್ಯಾಗ ನೋಡಲಿಕ್ಕೆ ಆಗೋದಿಲ್ಲ ನೋಡವಾ. ಆ ದಿಕ್ಕಿನ್ಯಾಗ ತಲಿ ಎತ್ತಿದರೂ ನಿನ್ನ ಗೆಳತಿಯದೇ ನೆನಪಾಗಿ ಹೊಟ್ಯಾಗ ಇಂತಾ ಸಂಕಟಾ ಅಂದ್ರ ಅಂತಾ ಸಂಕಟ! ಯಾರಿಗೂ ಬ್ಯಾಡವಾ ಈ ಸಂಕಟ! ಯಾರಿಗೂ ಬ್ಯಾಡವಾ! ನಾ ನಂಬಿದ ದೇವರು ಹನುಮಪ್ಪ ಕೂಡ ಅಕಿನ್ನ ಬಚಾವ್ ಮಾಡಲಿಲ್ಲ. ಇಕಿನೂ ಅಷ್ಟೇ. ಹೋಗಿ ಹೋಗಿ ಹನುಮಪ್ಪನ ಗುಡಿ ಭಾವಿಯಾಗss ಜಿಗಿದು ಸಾಯಬೇಕಾ?..... ' ಅನ್ನುತ್ತ ಅಳುತ್ತಲೇ ಹೋಗಿಬಿಟ್ಟರು.

ಬಾಲ್ಯದಲ್ಲಾದ ಈ intense encounter ರೇ ಕಾರಣ ಸಪ್ತಾಪುರದ ಹನುಮಪ್ಪ ಮನಸ್ಸಿನಲ್ಲಿ ಉಳಿಯಲಿಕ್ಕೆ.

ನೋಡಿದರೆ ಹನುಮಪ್ಪ ಬ್ರಹ್ಮಚಾರಿ ದೇವರು. ಈ ಲವ್ ಫೇಲ್ಯೂರ್ ಗಿರಾಕಿಗಳು ಹೋಗಿ ಅವನ ಭಾವಿಗೆ ಬೀಳುವದ್ಯಾಕೆ? ಗೊತ್ತಿಲ್ಲ.

ಆಗಿನ ಕಾಲದಲ್ಲಿ ಧಾರವಾಡದಲ್ಲಿ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವದು ಸಾಮಾನ್ಯವಾಗಿತ್ತು. ಪ್ರತಿಯೊಂದು ಕಂಪೌಂಡಿನಲ್ಲೂ ದೊಡ್ಡ ದೊಡ್ಡ ಭಾವಿಗಳಿರುತ್ತಿದ್ದವು. ಅವುಗಳಲ್ಲಿ ಜಿಗಿದು ಸೀದಾ ಮೇಲೆ ಹೋದ ಮಂದಿಯ precedence ಇರುತ್ತಿತ್ತು. ಹಾಗಾಗಿ ಕೊಂಚ ಹೆಚ್ಚು ಕಮ್ಮಿಯಾಗಿ ತಲೆ ಕೆಟ್ಟರೆ ಮುಗಿಯಿತು. ಹಿಂದೆ ಮುಂದೆ ವಿಚಾರ ಮಾಡದೇ ಹೋಗಿ ಜಿಗಿದೇ ಬಿಡುತ್ತಿದ್ದರು. ಮತ್ತೊಂದು ಆತ್ಮಹತ್ಯೆ ಕೇಸ್ ರಿಜಿಸ್ಟರ್ ಆಗುತ್ತಿತ್ತು. ಆ ಭಾವಿಯ ಬಗ್ಗೆ ಒಂದು ತರಹದ ಹೆದರಿಕೆ, ನಿಗೂಢತೆ ಮೂಡುತ್ತಿತ್ತು. ಏನೇನೋ ದಂತಕಥೆಗಳು ಬೆಳೆಯುತ್ತಿದ್ದವು.

ಅಮ್ಮನ ಗೆಳತಿಯ ಆತ್ಮಹತ್ಯೆಯ ಹಿಂದಿನ ಪೂರ್ತಿ ಕಹಾನಿ ಗೊತ್ತಾಗಲಿಲ್ಲ. ಲವ್ ಫೇಲ್ಯೂರ್ ಕೇಸ್ ಅಂತ ಅಷ್ಟೇ ಗೊತ್ತಾಗಿದ್ದು. ಎಲ್ಲಿ ಆ ಪುಣ್ಯಾತ್ಗಿತ್ತಿ ಬಸುರಾಗಿಬಿಟ್ಟಿದ್ದಳೇ? ಆಗಿನ ಕಾಲದಲ್ಲಿ ಪ್ರೇಮಿಗಳಿಗೆ ಕಳ್ಳ ಬಸುರೇ ದೊಡ್ಡ ಪ್ರಾಬ್ಲಮ್. ಲವ್ ಹೇಗೋ ಆಗಿಬಿಡುತ್ತಿತ್ತು. ಎಲ್ಲೋ ಕತ್ತಲ ಜಾಗ ಹುಡುಕಿಕೊಂಡು ಮಿಲನಮಹೋತ್ಸವ ಕೂಡ ಆಚರಿಸಿಕೊಂಡು ಜಿಸ್ಮಿನ ಗರ್ಮಿ ಕೂಡ ಕಮ್ಮಿ ಮಾಡಿಕೊಳ್ಳುತ್ತಿದ್ದರು. ಆದರೆ ಆಗ ಈಗಿನಂತೆ ನಾಲ್ಕಾಣೆಗೆ ಮೂರು ನಿರೋಧ ಸಿಗುತ್ತಿರಲಿಲ್ಲ. ಮಾಲಾ-ಡಿ ಅಂದರೆ ಏನೂಂತ ಗೊತ್ತಿರಲಿಲ್ಲ. morning after pill ಮಾತ್ರೆಯ ಆವಿಷ್ಕಾರ ಕೂಡ ಆಗಿರಲಿಲ್ಲ. ಹಾಗಾಗಿ ಕಾಮದ ಕಾರ್ನಾಮೆಯ ನಂತರ ಸಹಜವಾಗಿ ಬಸಿರು ಕಟ್ಟುತ್ತಿತ್ತು. ಗಟ್ಟಿಗಿತ್ತಿಯರು ಏನೋ ಜುಗಾಡ್ ಮಾಡುತ್ತಿದ್ದರು. ಹೊಟ್ಟೆ ಮುಂದೆ ಬರಲು ಕಾರಣನಾದ ಭಾಡ್ಕೋ ಗಂಡಿನ ಜುಟ್ಟು ಹಿಡಿದು ಎಳೆದುಕೊಂಡು ಬಂದು ತಾಳಿ ಕಟ್ಟಿಸಿಕೊಳ್ಳುತ್ತಿದರು. ಮದುವೆಯಾದ ಆರೇಳು ತಿಂಗಳಲ್ಲೇ 'ಏಳರಾಗ ಹುಟ್ಟಿದ' ಸ್ಪೆಷಲ್ ಕೂಸುಗಳನ್ನು ಹಡೆದು ನಿಟ್ಟುಸಿರು ಬಿಡುತ್ತಿದ್ದರು. ಇಷ್ಟು ಮಾಡುವ ತಾಕತ್ತು, ಕಾಬೀಲೀಯತ್ತು ಇಲ್ಲದವರು ಕೆರೆ ಭಾವಿ ನೋಡಿಕೊಳ್ಳುತ್ತಿದ್ದರು. ಆದರೆ ಹೋಗಿ ಹೋಗಿ, ಸಂಸಾರಕ್ಕೆ ಸಂಬಂಧವೇ ಇಲ್ಲದ ಬ್ರಹ್ಮಚಾರಿ ಹನುಮಂತ ದೇವರ ಗುಡಿಯ ಭಾವಿಗೆ ಡೈವ್ ಹೊಡೆದ ಮೊದಲ ಗಿರಾಕಿ ಅಮ್ಮನ ಗೆಳತಿಯೇ ಇರಬೇಕು. ತಾನು ಬ್ರಹ್ಮಚಾರಿಯಾದರೂ ಸಂಸಾರಿಗಳ ಕಾಟ ತಪ್ಪದು ನೋಡಿ ಹನುಮಪ್ಪನಿಗೆ!

'ಆ ದಿಕ್ಕಿನ ಕಡೆ ನೋಡಲಿಕ್ಕೆ ಆಗೋದಿಲ್ಲ ನೋಡವಾ. ನೋಡಿದರೆ ಸಪ್ತಾಪುರದ ಹನುಮಪ್ಪನ ಗುಡಿಯ ಗೋಪುರ ಕಾಣಿಸ್ತದ. ಅದೇ ಗುಡಿಯ ಭಾವಿಯಾಗ ಜಿಗಿದು ನಿನ್ನ ಗೆಳತಿ ಸತ್ತಳು ನೋಡವಾ.....' ಅನ್ನುವ ಆ ಮಾತೆಯ ಪುತ್ರಿಶೋಕದ ಸಂಕಟದ ವೇದನೆ ಕಿವಿಯಲ್ಲಿ ಗುಂಯ್ಗುಡುತ್ತದೆ. ಹೀಗಾಗಿ ಸಪ್ತಾಪುರದ ಹನುಮಪ್ಪ ನೆನಪಾಗುತ್ತಲೇ ಇರುತ್ತಾನೆ. ನೆನಪಾದಾಗೊಮ್ಮೆ ಮನದಲ್ಲೇ ನೆನೆಯುತ್ತೇನೆ. ಇಲ್ಲಿಯವರೆಗೆ ಹನುಮಪ್ಪನ ಆಶೀರ್ವಾದ, ಕಾರುಣ್ಯ ಸಾಕಷ್ಟಿದೆ. ಮುಂದೂ ಇರಲಿ. ಎಲ್ಲರಿಗೂ ಸಪ್ತಾಪುರದ ಹನುಮಪ್ಪ ಒಳ್ಳೆಯದನ್ನೇ ಮಾಡಲಿ.

Saturday, October 07, 2017

ಜನಕನ ಸಂದೇಹ

ರಾತ್ರಿ ಮಲಗಿದ್ದಾಗ ಜನಕ ಮಹಾರಾಜನಿಗೆ ಕನಸೊಂದು ಬಿತ್ತು. ಕನಸಿನಲ್ಲಿ ಜನಕ ಮಹಾರಾಜ ಭಿಕ್ಷುಕನಾಗಿಬಿಟ್ಟಿದ್ದ! ಆ ದುಃಸ್ವಪ್ನ ಜನಕ ಮಹಾರಾಜನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ಬೆಚ್ಚಿಬಿದ್ದು ಎದ್ದು ನೋಡಿದರೆ ಕೇವಲ ಕನಸು. ಜನಕ ಮಹಾರಾಜ ಎಂದಿನಂತೆ ಮಹಾರಾಜನಾಗಿಯೇ ಇದ್ದ. ಭವ್ಯ ಅರಮನೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆಯೇ ಮಲಗಿದ್ದ. ಸೇವಕರು, ಪರಿಚಾರಕರು ಎಲ್ಲ ಇದ್ದರು. ರಾಜೋಪಚಾರವೆಲ್ಲ ಯಥಾವತ್ತಾಗಿ ನಡೆಯುತ್ತಲೇ ಇತ್ತು.

ಯಾರೋ ಬೇರೆಯವರಾಗಿದ್ದರೆ 'ಅಯ್ಯೋ! ಅದೊಂದು ಕನಸು ಅಷ್ಟೇ. ಕನಸಿನಲ್ಲಿ ಭಿಕ್ಷುಕನಾಗಿದ್ದೆ. ವಾಸ್ತವದಲ್ಲಿ ರಾಜನಾಗಿಯೇ ಇದ್ದೇನೆ. ಆಕಸ್ಮಾತ ಬಿದ್ದ ಕನಸಿನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ,' ಎಂದು ಸುಮ್ಮನಾಗುತ್ತಿದ್ದರೋ ಏನೋ.

ಆದರೆ ಅವನು ಜನಕ ಮಹಾರಾಜ. ದೊಡ್ಡ ಜಿಜ್ಞಾಸು. ಸಾಕಷ್ಟು ಅಧ್ಯಾತ್ಮ ಓದಿಕೊಂಡಿದ್ದ. ಸಾಧನೆ ಮಾಡಿದ್ದ. ರಾಜರ್ಷಿ ಅನ್ನಿಸಿಕೊಂಡಿದ್ದ. ಹಾಗಾಗಿ ಜನಕ ವಿಚಾರ ಮಾಡಿದ - 'ನಾನು ಯಾರು? ನಿಜವಾಗಿಯೂ ಮಹಾರಾಜನಾಗಿದ್ದವನು ಭಿಕ್ಷುಕನ ಕನಸನ್ನು ಕಂಡೆನೋ? ಅಥವಾ ನಿಜವಾಗಿಯೂ ಭಿಕ್ಷುಕನಾಗಿದ್ದವನು ಈಗ ಮಹಾರಾಜನ ಕನಸನ್ನು ಕಾಣುತ್ತಿದ್ದೆನೋ?'

ರಾಜನೋ ಅಥವಾ ಭಿಕ್ಷುಕನೋ ಎನ್ನುವ ಸಂದೇಹ ಬಗೆಹರಿಯಲೇ ಇಲ್ಲ. ಆಸ್ಥಾನದ ಪಂಡಿತರನ್ನು ಕೇಳಿದ. ಇತರೆ ಗುರುಹಿರಿಯರನ್ನು ಕೇಳಿದ. ಎಲ್ಲರೂ ಒಂದೇ ಮಾತು ಹೇಳಿದರು - 'ಮಹಾರಾಜಾ, ಸಂಶಯವೇ ಬೇಡ. ನೀವು ನಿಜವಾಗಿಯೂ ಮಹಾರಾಜರೇ. ಎಂದೋ ಬಿದ್ದ ಕನಸಿನಲ್ಲಿ ಭಿಕ್ಷುಕನಾಗಿ ಕಂಡ ಮಾತ್ರಕ್ಕೆ ಇಷ್ಟ್ಯಾಕೆ ಚಿಂತೆ ಮಾಡುತ್ತಿದ್ದೀರಿ ಎಂದು ನಮಗೆ ತಿಳಿಯದಾಗಿದೆ. ನಿಮ್ಮ ರಾಜ್ಯ, ನಿಮ್ಮ ಸಂಪತ್ತು, ನಿಮ್ಮ ವೈಭವ ಎಲ್ಲ ಇದ್ದಹಾಗೇ ಇರುವದು ತಮಗೇ ಕಾಣುತ್ತಿದೆಯಲ್ಲವೇ? ಯಾಕೆ ಚಿಂತೆ ಮಹಾಸ್ವಾಮಿ? ತಾವು ಜನಕ ಮಹಾರಾಜರೇ. ಚಿಂತೆ ಬಿಡಿ. ಮೊದಲಿನಂತೆ ರಾಜಕಾರ್ಯಗಳಲ್ಲಿ ತಲ್ಲೀನರಾಗಿ ರಾಜ್ಯಭಾರ ಮಾಡಿ,' ಎಂದರು.

ಆದರೂ ಜನಕನಿಗೆ ಸಮಾಧಾನವಾಗಲಿಲ್ಲ. ತುಂಬಾ ಓದಿಕೊಂಡ ಜ್ಞಾನಿಯಾಗಿದ್ದ ನೋಡಿ. ಸದಾ ಕೊರೆಯುತ್ತಿದ್ದುದು ಒಂದೇ ಪ್ರಶ್ನೆ. 'ನಾನು ಯಾರು? ರಾಜನೋ ಅಥವಾ ಭಿಕ್ಷುಕನೋ? ರಾಜನಾಗಿದ್ದುಕೊಂಡು ಭಿಕ್ಷುಕನ ಕನಸನನ್ನು ಕಂಡೆನೋ? ಅಥವಾ ನಿಜವಾಗಿ ಭಿಕ್ಷುಕನಾಗಿದ್ದುಕೊಂಡು ರಾಜನ ಕನಸನ್ನು ಕಾಣುತ್ತಿರುವೆನೋ? ನಾನು ಅಸಲಿನಲ್ಲಿ ಯಾರು??'

ಜನಕನ ಸಂದೇಹವನ್ನು ತುಂಬಾ ದಿನಗಳ ಬಳಿಕ ಅಷ್ಟಾವಕ್ರನೆಂಬ ಮಹಾಜ್ಞಾನಿಯೊಬ್ಬ ಪರಿಹರಿಸಿದ. ಅಷ್ಟಾವಕ್ರ ಕೊಟ್ಟ ಉತ್ತರ ಗುರಿಯನ್ನು ಸರಿಯಾಗಿ ಮುಟ್ಟಿದ ಬಾಣದಂತಿತ್ತು. ಜನಕನ ಸಂದೇಹದ ಮೂಲವನ್ನೇ ಕಿತ್ತೆಸೆಯಿತು. ಜನಕನಿಗೆ ತಾನು ಯಾರೆಂದು ತಿಳಿಯಿತು. ಸಂಶಯ ಶಾಶ್ವತವಾಗಿ ಪರಿಹಾರವಾಯಿತು.

ಅಷ್ಟಾವಕ್ರ ಜನಕನಿಗೆ ಹೇಳಿದ್ದು - 'ನೀನು ರಾಜನೂ ಅಲ್ಲ. ಭಿಕ್ಷುಕನೂ ಅಲ್ಲ. ನೀನು ಪರಮಾತ್ಮನೇ ಆದ ಜೀವಾತ್ಮ. ಇದರ ಬಗ್ಗೆ ಸಂದೇಹ ಬೇಡ!'

ಅಷ್ಟಾವಕ್ರಗೀತಾ ಎಂಬ ಆಧ್ಯಾತ್ಮಿಕ ಗ್ರಂಥದಲ್ಲಿ ಬರುವ ಕಥೆಯಿದು. ಅಷ್ಟಾವಕ್ರ ಎಂಬ ತರುಣ ಸನ್ಯಾಸಿ ಜನಕನ ಆಸ್ಥಾನಕ್ಕೆ ಬರುತ್ತಾನೆ. ದೇಹದ ಎಂಟು ಭಾಗಗಳಲ್ಲಿ ಸಿಕ್ಕಾಪಟ್ಟೆ ಯದ್ವಾತದ್ವಾ ವಕ್ರವಕ್ರವಾಗಿರುತ್ತಾನೆ. ವಾಕಡಾ ನಡೆಯುತ್ತಾ ಆಸ್ಥಾನ ಪ್ರವೇಶಿಸುವ ಅಷ್ಟಾವಕ್ರನನ್ನು ನೋಡಿ ಎಲ್ಲರಿಗೂ ನಗೆ ಬರುತ್ತದೆ. ಅಪಹಾಸ್ಯ ಮಾಡುತ್ತಾರೆ. ಅವರ ಅಪಹಾಸ್ಯಕ್ಕೆ ಒಂದು ಖಡಕ್ ಉತ್ತರ ಕೊಡುವದರೊಂದಿಗೆ ಅಷ್ಟಾವಕ್ರಗೀತಾ ಆರಂಭವಾಗುತ್ತದೆ. ಸ್ವತಃ ದೊಡ್ಡ ಜ್ಞಾನಿಯಾಗಿದ್ದ ಜನಕ ಮಹಾರಾಜ ಅಷ್ಟಾವಕ್ರನ ಪಾಂಡಿತ್ಯವನ್ನು ಬಹುಬೇಗ ಗ್ರಹಿಸುತ್ತಾನೆ. ತನ್ನ ಸಂದೇಹಗಳನ್ನು ಒಂದಾದಮೇಲೊಂದರಂತೆ ಬಗೆಹರಿಸಿಕೊಳ್ಳತೊಡಗುತ್ತಾನೆ.

ಅದ್ವೈತ ವೇದಾಂತದ ತತ್ವಗಳನ್ನು ಪ್ರಖರವಾಗಿ ಪ್ರತಿಪಾದಿಸುವ ಮಹಾನ್ ಗ್ರಂಥಗಳಲ್ಲಿ ಅಷ್ಟಾವಕ್ರಗೀತಾಕ್ಕೆ ದೊಡ್ಡ ಸ್ಥಾನವಿದೆ.

ಸ್ವಾಮಿ ಚಿನ್ಮಯಾನಂದರು, ಶ್ರೀ ಶ್ರೀ ರವಿ ಶಂಕರರು ಮತ್ತೂ ಅನೇಕರು ಈ ಅದ್ಭುತ ಗ್ರಂಥವನ್ನು ಇಂಗ್ಲೀಷು  ಮತ್ತಿತರ ಭಾಷೆಗಳಿಗೆ ತಂದಿದ್ದಾರೆ.

**

ರಾತ್ರಿ ಕಣ್ಣು ಮುಚ್ಚಿಕೊಂಡಾಗ ನೋಡುವದು ಕನಸು. ಹಗಲಿನಲ್ಲಿ ಕಣ್ಣು ಬಿಟ್ಟುಕೊಂಡು ನೋಡುವದು ಕೂಡ ಕನಸೇ. ಅಷ್ಟೇ ಅದಕ್ಕೆ ಜೀವನ, ಜಗತ್ತು ಅಂತೆಲ್ಲ ಲೇಬಲ್ ಅಂಟಿಸಿ ಇಲ್ಲದ ಮಹತ್ವ ಕೊಟ್ಟಿದ್ದೇವೆ. ವಿಶ್ಲೇಷಿಸಿ ನೋಡಿದರೆ ಸ್ವಪ್ನಾವಸ್ಥೆಗೂ, ಜಾಗ್ರತಾವಸ್ಥೆಗೂ ವ್ಯತ್ಯಾಸವಿಲ್ಲ. ರಾತ್ರಿಯ ಕನಸು ವೈಯಕ್ತಿಕ. ಹಗಲಿನ ಕನಸು ಸಾರ್ವತ್ರಿಕ ಅಷ್ಟೇ. ರಾತ್ರಿಯ ಕನಸು ನಮ್ಮ ಮನಸ್ಸಿನ ಸೃಷ್ಟಿ. ಜೀವನವೆಂಬ ಕನಸು ಕೂಡ ನಮ್ಮ ಸೃಷ್ಟಿಯೇ. ಈಶ್ವರ ಸೃಷ್ಟಿ. #ಮಾಯಾ

**

Tuesday, October 03, 2017

ಯೋಗದ ಪ್ರಭಾವ

ಒಬ್ಬರ ಮಗನಿಗೆ ಉಗುರು ಕಚ್ಚುವ ಕೆಟ್ಟ ಅಭ್ಯಾಸ. ಏನೇ ಚಿಕಿತ್ಸೆ, counseling ಮಾಡಿದರೂ ಉಪಯೋಗವಾಗಲಿಲ್ಲ. ಯಾರೋ ಪರಿಚಿತರು ಹೇಳಿದರು, 'ಯೋಗಾಭ್ಯಾಸ ಕಲಿಸಿ. ಅದರಿಂದ ಈ ಕೆಟ್ಟ ಅಭ್ಯಾಸ ಬಿಟ್ಟರೂ ಬಿಡಬಹುದು.'

ಅದೂ ಒಂದು ಆಗಿಹೋಗಲಿ ಅಂತ ಆ ಹುಡುಗನನ್ನು ಯೋಗದ ಕ್ಲಾಸಿಗೆ ಸೇರಿಸಿದರು.

ಕೆಲಕಾಲದ ಮೊದಲು ಸಿಕ್ಕಿದ್ದ ಪರಿಚಿತರು ಮತ್ತೆ ಭೇಟಿಯಾದರು.

'ನಿಮ್ಮ ಮಗನನ್ನು ಯೋಗಾಭ್ಯಾಸಕ್ಕೆ ಕ್ಲಾಸಿಗೆ ಹಾಕಿದಿರೇ?' ಎಂದು ಕೇಳಿದರು.

'ಹೌದು. ಈಗ ಚೆನ್ನಾಗಿ ಯೋಗಾಸನಗಳನ್ನು ಹಾಕುತ್ತಾನೆ,' ಎಂದರು ಹುಡುಗನ ಪಾಲಕರು.

'ತುಂಬಾ ಸಂತೋಷ. ಈಗ ಉಗುರು ಕಚ್ಚುವ ಅಭ್ಯಾಸ ಬಿಟ್ಟಿದ್ದಾನೆಯೇ?' ಎಂದು ಕೇಳಿದರು ಪರಿಚಿತರು.

'ಇಲ್ಲ.....' ಎಂದು ಹೇಳಿದರು ಪಾಲಕರು. ತಲೆ ಅಡ್ಡಡ್ಡ ಆಡಿಸಿದರು.

'ಮತ್ತೆ???!!!' ಆಶ್ಚರ್ಯಚಕಿತರಾಗಿ ಕೇಳಿದರು ಪರಿಚಿತರು.

'ಈಗ ಕಾಲ್ಬೆರಳುಗಳ ಉಗುರುಗಳನ್ನೂ ಕೂಡ ಕಚ್ಚುತ್ತಾನೆ!' ಎಂದು ನಿಟ್ಟುಸಿರು ಬಿಟ್ಟರು ಪಾಲಕರು.


ಮೂಲ: ಸ್ವಾಮಿ ಅನುಭವಾನಂದಜೀ

ಕೊಂಚ ಅಪ್ರಸ್ತುತವಾದರೂ ಯಾಕೋ ಈ ಗಾದೆ ಮಾತು ನೆನಪಾಯಿತು - Motivation is not always the answer. If you motivate an idiot, you get a motivated idiot!

Monday, October 02, 2017

Interesting course taught by S. Gurumurthy at IIT-Mumbai

As many of us know, S.Gurumurthy is a multifaceted personality. Trained as a chartered accountant, he has been an investigative journalist exposing black money trail of some major industrial houses back in 1990s, a public speaker, an advisor to governments and companies etc.

At the request of IIT-Mumbi, he conducted a course. 14 lectures of roughly 1 hour each. It also features guest speakers like Prof. R. Vaidyanathan of IIM-Bangalore and Mukul Kanitkar, a Swadesi movement leader.

Very enlightening course which covers economics, politics, history, sociology, demography, future of the world etc.

Very influencing and impressive. I have been watching several speeches by S.Gurumurthy, Prof. Vaidyanathan and Sree Iyer. They bring a very interesting perspective on current events. A very refreshing change from the run-of-the-mill coverage you find in news papers and magazines.

Really made me sit up and take notice about why certain things happen at macro level and what are the underlying causes.

Highly recommended. Takes about 16-18 hours to complete the entire series. Took a week for me at the rate of one lecture/day and a couple/day over the weekend. Great use of time. S.Gurumurthy is a walking encyclopedia and is a great interpreter of data.

Here is the link to the first video in the series. You will find links to others from there.

Wednesday, September 20, 2017

ಬಂಗಾರದ ಹೆಂಡತಿ & ಬೆಳ್ಳಿಯ ಹೆಂಡತಿ

ಶಿಷ್ಯ: ಸ್ವಾಮೀಜಿ, ನನಗೊಬ್ಬಳು ಹೆಂಡತಿ ಬೇಕಾಗಿದ್ದಾಳೆ.

ಸ್ವಾಮೀಜಿ: ನಿನಗೆ ಬಂಗಾರದ ಹೆಂಡತಿ ಬೇಕೋ? ಬೆಳ್ಳಿಯ ಹೆಂಡತಿ ಬೇಕೋ?

ಶಿಷ್ಯ: ಬಂಗಾರದ ಹೆಂಡತಿ, ಬೆಳ್ಳಿಯ ಹೆಂಡತಿ ಅಂದ್ರೇನು ಸ್ವಾಮೀಜಿ?

ಸ್ವಾಮೀಜಿ: ಬಂಗಾರದ ಹೆಂಡತಿ ನಿನ್ನನ್ನು ಇಂಗ್ಲೀಷಿನಲ್ಲಿ, 'ಏ, ಯು,' ಎಂದು ಕರೆಯುತ್ತಾಳೆ. ಬೆಳ್ಳಿಯ ಹೆಂಡತಿ ನಿನ್ನನ್ನು ಹಿಂದಿಯಲ್ಲಿ, 'ಏ, ಜೀ' ಎಂದು ಕರೆಯುತ್ತಾಳೆ.

ಶಿಷ್ಯ: ಬಂಗಾರದ ಹೆಂಡತಿಯ 'ಏ, ಯು,' ಅಂದರೆ 'hey you' ಎಂದು ತಿಳಿಯಿತು. ಬೆಳ್ಳಿಯ ಹೆಂಡತಿಯ 'ಏ, ಜೀ' ಅಂದರೆ ಏನು ಸ್ವಾಮೀಜಿ?

ಸ್ವಾಮೀಜಿ: 'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದರ್ಥ!

ಕೇಳಿ ಶಿಷ್ಯನ ತಲೆಗೆ ಚಕ್ಕರ್ ಬಂದಂತಾಯಿತು. ಆದರೂ ಒಂದು ಕುತೂಹಲವಿತ್ತು.

ಶಿಷ್ಯ: ನಿಮ್ಮ ಬಂಗಾರದ ಮತ್ತು ಬೆಳ್ಳಿ ಹೆಂಡತಿ ಸಿಕ್ಕಾಪಟ್ಟೆ ಖತರ್ನಾಕ್. ಕೊಂಚವೂ ಗೌರವ ಕೊಡದೇ 'ಏ, ಯು,' ಎಂದು ಕರೆಯುವವಳಿಗೆ ಬಂಗಾರದ ಹೆಂಡತಿಯೆಂದೂ ಮತ್ತು ಖರಾಬಾಗಿ  'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳಿಗೆ ಬೆಳ್ಳಿಯ ಹೆಂಡತಿಯೆಂದು ಏಕೆ ಕರೆಯುತ್ತೀರಿ? ಬಂಗಾರ, ಬೆಳ್ಳಿ ಎಂದರೆ ಉತ್ತಮ ಎಂದರ್ಥವಲ್ಲವೇ?

ಸ್ವಾಮೀಜಿ: ನಿನ್ನ ತಲೆ! ನಿನಗೆ ಬೇಸಿಕ್ ಕೆಮಿಸ್ಟ್ರಿ ಕೂಡ ಗೊತ್ತಿಲ್ಲ ಅನ್ನಿಸುತ್ತದೆ. 'ಏ, ಯು,' (AU) ಎಂದು ಕೂಗುವವಳು ಬಂಗಾರದ ಹೆಂಡತಿ ಏಕೆಂದರೆ ಬಂಗಾರದ ರಾಸಾಯನಿಕ ಚಿನ್ಹೆ AU. ಹಾಗೇ ಬೆಳ್ಳಿಯ ರಾಸಾಯನಿಕ ಚಿನ್ಹೆ AG. ಹಾಗಾಗಿ 'ಏ, ಜೀ' (AG) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳು ಬೆಳ್ಳಿಯ ಹೆಂಡತಿ.

ಕೇಳಿದ ಶಿಷ್ಯ ಢಮಾರ್!

**

ಶಿಷ್ಯ: ಪತಿಗೆ husband ಎಂದೇಕೆ ಹೇಳುತ್ತಾರೆ?

ಸ್ವಾಮೀಜಿ: husband ಅಂದರೆ ಜಿಸ್ಕಾ ಹಸ್ನಾ ಬಂದ್ ಹೋಗಯಾ ಹೈ ವೋ ಹಸಬಂದ್ ಹೈ! ಅರ್ಥಾತ್ ಯಾರ ನಗು ನಿಂತು ಹೋಗಿದೆಯೋ ಅವನೇ ಹಸ್ಬೆಂಡ್!

**

ಶಿಷ್ಯ: ಮದುವೆಯ ದಿನ ಹುಡುಗಿಯೇಕೆ ಅಳುತ್ತಾಳೆ?

ಸ್ವಾಮೀಜಿ: ಅವಳು ಮದುವೆಯ ದಿನವೊಂದೇ ಅಳುತ್ತಾಳೆ. ಹುಡುಗ ನಂತರ ಜೀವನಪರ್ಯಂತ ಅಳುತ್ತಾನೆ!

**

ಸಂಸಾರಿ ಅಂದರೇನು?

ಸಂಸಾರಿ (ಸ್ತ್ರೀಲಿಂಗ): ಅರ್ಜೆಂಟಿನಲ್ಲಿ ನೈಟಿ ಸಿಗದಿದ್ದಾಗ ಕೈಗೆ ಸಿಕ್ಕ (some) ಸೀರೆ (Saree)ಯನ್ನೇ ಸುತ್ತಿಕೊಂಡವಳು. Some Saree = ಸಂಸಾರಿ.

ಸಂಸಾರಿ (ಪುಲ್ಲಿಂಗ): ಅರ್ಜೆಂಟಿನಲ್ಲಿ ಲುಂಗಿ, ಪಂಚೆ, ಪ್ಯಾಂಟು, ಚೊಣ್ಣ ಏನೂ ಸಿಗದಿದ್ದಾಗ ಕೈಗೆ ಸಿಕ್ಕ (some) ಹೆಂಡತಿಯ ಸೀರೆ (Saree)ಯನ್ನೇ ಸುತ್ತಿಕೊಂಡವನು. Some Saree = ಸಂಸಾರಿ.

**

What is THE height of reverse gender discrimination?

Cow dung is holy. Bullshit is you-know-what :)

**

ಸ್ವಾಮಿ ಅನುಭವಾನಂದ ಸರಸ್ವತಿಗಳು ತಮ್ಮ ಪ್ರವಚನಗಳ ಮಧ್ಯೆ ಇಂತಹ ಅಮೋಘ ಜೋಕುಗಳನ್ನು ಹೊಡೆಯುತ್ತಿರುತ್ತಾರೆ. ಬಿಡಿಬಿಡಿಯಾಗಿ ಓದಿದಾಗ, 'ಏನಪ್ಪಾ ಇವರು ಕೇವಲ ಸಂಸಾರಿಗಳನ್ನು, ದಂಪತಿಗಳನ್ನು ವ್ಯಂಗ್ಯ ಮಾಡುತ್ತಾರೆ' ಎಂದೆನಿಸಬಹುದು. ಆದರೆ ಸ್ವಾಮೀಜಿಯವರ ಸ್ಪೆಷಾಲಿಟಿ ಅಂದರೆ ಜನ ನಗಲು ಬಾಯ್ತೆರೆದಾಗ ಜ್ಞಾನದ, ವಿವೇಕದ ಅಮೂಲ್ಯ ಗುಳಿಗೆಯೊಂದನ್ನು ಕೂಡ ನುಸುಳಿಸಿರುತ್ತಾರೆ. ಅದು ಭಾಳ ಮಸ್ತ!

ಈಗ ಒಂದು ವರ್ಷದಿಂದ ನಾನಂತೂ ಸ್ವಾಮಿಗಳ ಬಿಗ್ ಫ್ಯಾನ್. ಅವರೂ ಅಷ್ಟೇ. ಏಕ್ದಂ ಹೈಟೆಕ್ ಸ್ವಾಮೀಜಿ. ತಮ್ಮ ಪ್ರತಿಯೊಂದು ಪ್ರವಚನವನ್ನೂ ನೀಟಾಗಿ ವಿಡಿಯೋ ಮಾಡಿ YouTube ಮೇಲೆ ಹಾಕಿರುತ್ತಾರೆ.

ನೋಡಿ. ಮಜಾ ಮಾಡಿ. ಪ್ರಯೋಜನ ಪಡೆದುಕೊಳ್ಳಿ.

Friday, September 08, 2017

ಪ್ರತಿಯೊಂದರಲ್ಲೂ ಒಂದು ಅಮೂಲ್ಯ ವಜ್ರವಿತ್ತು...ಅನುಭವಾಮೃತ

ರಾಜಾ ವಿಕ್ರಮಾದಿತ್ಯನಿಗೆ ಒಬ್ಬ ಗುರುವಿದ್ದ. ಗುರು ಎಂದರೆ ರಾಜಗುರುವಲ್ಲ. ಒಂದು ತರಹದ ಫಕೀರ. ಸದಾ ಕಾಡುಮೇಡು ಅಲೆದುಕೊಂಡಿರುತ್ತಿದ್ದ. ಆದರೆ ತಪ್ಪದೆ ಪ್ರತಿದಿನವೂ ರಾಜನನ್ನು ಭೇಟಿ ಮಾಡುತ್ತಿದ್ದ. ತಾನು ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಸಂಗ್ರಹಿಸಿದ ಹಣ್ಣೊಂದನ್ನು ರಾಜನಿಗೆ ಪ್ರಸಾದದ ರೂಪದಲ್ಲಿ ಕೊಟ್ಟು ಹೋಗುತ್ತಿದ್ದ. ಗುರುವಿನ ಮೇಲಿನ ಗೌರವದಿಂದ ರಾಜ ಕೂಡ ಗುರು ಕೊಟ್ಟ ಹಣ್ಣನ್ನು ಭಕ್ತಿಯಿಂದ ಸ್ವೀಕರಿಸುತ್ತಿದ್ದ.

ಆ ಹಣ್ಣುಗಳೋ ಕಾಡು ಹಣ್ಣುಗಳು. ನೋಡಲು ವಕ್ರವಕ್ರವಾಗಿ ಇರುತ್ತಿದ್ದವು. ಕೆಲವೊಂದನ್ನು ಹಕ್ಕಿಗಳು ಅರ್ಧಂಬರ್ಧ ತಿಂದಿರುತ್ತಿದ್ದವು. ಕೆಲವು ನೆಲಕ್ಕೆ ಬಿದ್ದು ಘಾಸಿಗೊಂಡಿರುತ್ತಿದ್ದವು. ಯಾವ ರೀತಿಯಿಂದ ನೋಡಿದರೂ ನೋಡಿದಾಕ್ಷಣ, 'ಆಹಾ! ಹಣ್ಣುಗಳು ಎಷ್ಟು ಚೆನ್ನಾಗಿವೆ. ರಸಭರಿತವಾಗಿವೆ!' ಅಂತೇನೂ ಅನ್ನಿಸುತ್ತಿರಲಿಲ್ಲ.

ಮತ್ತೆ ರಾಜಾ ವಿಕ್ರಮಾದಿತ್ಯನಿಗೆ ತಿನ್ನಬೇಕು ಅಂದರೆ ಹಣ್ಣುಗಳ ಕೊರತೆಯೇ!? ಬೇಕಾದ ವಿಧದ ಒಳ್ಳೊಳ್ಳೆ ಹಣ್ಣುಗಳು ಸದಾ ತುಂಬಿರುತ್ತಿದ್ದವು. ಹೀಗಿರುವಾಗ ಫಕೀರನಂತಹ ಗುರು ಎಲ್ಲೋ ಕಾಡಿನಲ್ಲಿ ಸಿಕ್ಕ ಹಣ್ಣು ತಂದುಕೊಟ್ಟರೆ ರಾಜನೇಕೆ ತಿಂದಾನು? ಗುರುವಿಗೆ ಬೇಸರವಾಗದಿರಲಿ ಎಂದು ತೆಗೆದುಕೊಳ್ಳುತ್ತಿದ್ದ. ಗುರು ಆಚೆ ಹೋದಾಕ್ಷಣ ತಿರುಗಿ ಕೂಡ ನೋಡದೆ ಆ ಹಣ್ಣುಗಳನ್ನು ಎಸೆಯುತ್ತಿದ್ದ. ಅವು ಹೋಗಿ ಸಿಂಹಾಸನದ ಪಕ್ಕದಲ್ಲಿದ್ದ ನೆಲಮಾಳಿಗೆಯೊಂದರಲ್ಲಿ ಬೀಳುತ್ತಿದ್ದವು.

ತುಂಬಾ ದಿನ ಹೀಗೆಯೇ ನಡೆದಿತ್ತು. ಒಂದು ದಿನ ಎಂದಿನಂತೆ ರಾಜ ಗುರು ಕೊಟ್ಟ ಹಣ್ಣನ್ನು ಎಸೆಯುವದರಲ್ಲಿದ್ದ. ಆಗ ಅಲ್ಲಿಯೇ ಇದ್ದ ರಾಜ ಸಾಕಿದ್ದ ಮಂಗವೊಂದು ಹಣ್ಣನ್ನು ಬೇಡಿತು. ಸಾಕುಪ್ರಾಣಿಯ ಮೇಲಿನ ಪ್ರೀತಿಯಿಂದ ರಾಜ ಆ ಹಣ್ಣನ್ನು ಎಸೆಯುವದರ ಬದಲಾಗಿ ಮಂಗನಿಗೆ ಕೊಟ್ಟ.

ತಿನ್ನಲೆಂದು ಆ ಮಂಗ ಹಣ್ಣನ್ನು ಒಡೆಯಿತು. ಒಳಗೆ ನೋಡಿದರೆ ಒಂದು ವಜ್ರ! ಅಮೂಲ್ಯ ವಜ್ರ! ಫಳ ಫಳ ಹೊಳೆಯುತ್ತಿದೆ. ಆ ವಜ್ರದ ಪ್ರಕಾಶ ರಾಜನ ಅರಮನೆಯಲ್ಲವನ್ನೂ ಬೆಳಗಿತು.

ರಾಜನಿಗೆ ಏನೋ ಹೊಳೆಯಿತು. ಗಡಬಡಾಯಿಸಿ ನೆಲಮಾಳಿಗೆಯತ್ತ ಧಾವಿಸಿದ. ಅಲ್ಲಿ ಹಿಂದೆ ಎಸೆದಿದ್ದ ಗುರು ಪ್ರಸಾದ ರೂಪದಲ್ಲಿ ಕೊಟ್ಟಂತಹ ಹಣ್ಣುಗಳು ಬಿದ್ದಿದ್ದವು. ಒಂದನ್ನು ಎತ್ತಿಕೊಂಡ. ಒಡೆದು ನೋಡಿದ. ಅದರಲ್ಲೂ ಒಂದು ಅಮೂಲ್ಯ ವಜ್ರವಿತ್ತು. ಮತ್ತೊಂದು ಹಣ್ಣನ್ನು ಒಡೆದು ನೋಡಿದ. ಅದರಲ್ಲೂ ಒಂದು ವಜ್ರ. ಚೆನ್ನಾಗಿಲ್ಲ ಎಂದು ಎಸೆದಿದ್ದ ಪ್ರತಿಯೊಂದು ಕಾಡಿನ ಹಣ್ಣಿನಲ್ಲೂ ಒಂದೊಂದು ಅಮೂಲ್ಯ ವಜ್ರವಿತ್ತು.

ರಾಜಾ ವಿಕ್ರಮಾದಿತ್ಯನಿಗೆ ತನ್ನ ಮೇಲೆ ತನಗೇ ಬೇಸರವಾಯಿತು. ನಾಚಿಗೆಯಾಯಿತು. ಗುರುವು ಪ್ರತಿದಿನ ಅಷ್ಟೊಂದು ಪ್ರೀತಿಯಂದ ತಂದುಕೊಡುತ್ತಿದ್ದ ಹಣ್ಣುಗಳನ್ನು ಅವು ಕಾಡಿನ ಹಣ್ಣುಗಳು, ಏನೂ ಚೆನ್ನಾಗಿಲ್ಲ ಎಂದು ಭಾವಿಸಿ ಎಸೆದಿದ್ದರ ಬಗ್ಗೆ ಪಶ್ಚಾತ್ತಾಪವಾಯಿತು. ಗುರುವನ್ನು ಕಂಡು, ವಿಷಯವನ್ನು ನಿವೇದಿಸಿಕೊಂಡು, ಕ್ಷಮೆ ಕೇಳಿ ಬರೋಣ ಎಂದು ಕುದುರೆಯನ್ನೇರಿ ಕಾಡಿನತ್ತ ತೆರಳಿದ.

ಕಾಡಿನಲ್ಲಿ ಗುರುವನ್ನು ಭೇಟಿಯಾದ. ವಿಷಯವನ್ನು ಹೇಳಿದ. ತನ್ನ ವರ್ತನೆಗಾಗಿ ಕ್ಷಮೆ ಕೇಳಿದ.

ಪ್ರೀತಿಯಿಂದ ಆಶೀರ್ವದಿಸಿದ ಗುರು ಮುಗುಳ್ನಗುತ್ತ ಕೇಳಿದ, 'ಈ ಘಟನೆಯಿಂದ ಏನು ಪಾಠ ಕಲಿತೆ ರಾಜ?'

'ಕೇವಲ ಮೇಲ್ನೋಟಕ್ಕೆ ಚೆನ್ನಾಗಿಲ್ಲ. ನೋಡಲು ಆಕರ್ಷಕವಾಗಿಲ್ಲ ಎಂದು ಯಾವುದನ್ನೂ ತಿರಸ್ಕರಿಸಬಾರದು. ಈ ಪಾಠ ಕಲಿತೆ ಗುರುವರ್ಯ,' ಎಂದ ರಾಜ.

'ಅಷ್ಟೇನಾ? ಮತ್ತೇನನ್ನೂ ಕಲಿಯಲಿಲ್ಲವೇ?' ಎಂದು ಕೇಳಿದ ಗುರು.

ರಾಜನಿಗೆ ಮತ್ತೇನೂ ಹೊಳೆಯಲಿಲ್ಲ.

ಗುರುವೇ ಹೇಳಿದ. 'ಜೀವನದ ಅನೇಕ ಅನುಭವಗಳೂ ಹೀಗೇ ಇರುತ್ತವೆ. ಈ ಕಾಡಿನ ಹಣ್ಣುಗಳಂತೆ. ಹೊರಗಿನಿಂದ ನೋಡಲು ಚೆನ್ನಾಗಿರುವದಿಲ್ಲ. ಹಾಗಾಗಿ ಒಮ್ಮೆಲೇ ಇಷ್ಟವಾಗುವದಿಲ್ಲ. ಆದರೆ ತಾಳ್ಮೆಯಿಂದ, ವ್ಯವಧಾನದಿಂದ ಪರೀಕ್ಷಿಸಿ ನೋಡಿದರೆ ಪ್ರತಿಯೊಂದು ಅನುಭವದಲ್ಲೂ ಒಂದೊಂದು ಅಮೂಲ್ಯ ವಜ್ರವಿರುತ್ತದೆ. ಎಲ್ಲರಿಗೂ ಹಲವಾರು ಅನುಭವಗಳಾಗುತ್ತವೆ. ಅನೇಕ ಅನುಭವಗಳು ಇಷ್ಟವಾಗುವದಿಲ್ಲ. ಕೆಲವೊಂದರಿಂದ ತುಂಬಾ ದುಃಖವೂ ಆಗಬಹುದು. ನಾವು ಅನುಭವಗಳಲ್ಲಿ ಅಡಗಿರುವ ಅಮೂಲ್ಯ ವಜ್ರಗಳಂತಹ ಪಾಠವನ್ನು ಕಲಿಯಲು ಹೋಗುವದೇ ಇಲ್ಲ. ನೀನು ಕಾಡಿನ ಹಣ್ಣು ಎಂದು ನಿರ್ಲಕ್ಷಿಸಿ ಉಪೇಕ್ಷೆಯಿಂದ ಎಸೆದಂತೆ ನಾವು ಅನುಭವಗಳನ್ನೂ ಎಸೆದುಬಿಡುತ್ತೇವೆ. ಮುಂದೆ ಅವು ದುಃಖಗಳಾಗಿ ಕಾಡಬಹುದೇ ಹೊರತೂ ಮತ್ತೇನನ್ನೂ ಮಾಡುವದಿಲ್ಲ. ಬುದ್ಧಿವಂತನಾದವನು ಯಾವದೇ ಅನುಭವವನ್ನೂ ನಿರ್ಲಕ್ಷಿಸದೇ, ಸಮಚಿತ್ತದಿಂದ ಅವುಗಳ ಬಗ್ಗೆ ವಿಚಾರ ಮಾಡಿ, ಅವುಗಳನ್ನು ಕಲಿಯಬಹುದಾದ ಪಾಠಗಳನ್ನು ಕಲಿತು, ಸಾರವನ್ನು ಹೀರಿ ಮತ್ತೂ ಪ್ರಬುದ್ಧನಾಗುತ್ತಾನೆ. ಹಾಗಾಗಿಯೇ ಅನುಭವಾಮೃತ ಅನ್ನುವದು. ಕಲಿಯಬೇಕಾದ ಪಾಠ ಕಲಿತರೆ ಪತ್ರಿಯೊಂದು ಅನುಭವವೂ ಅಮೃತ ಸಮಾನ.'

ಗುರುವಿನ ಮಾತು ಕೇಳಿದ ರಾಜಾ ವಿಕ್ರಮಾದಿತ್ಯ ತಲೆದೂಗಿದ. ಆಗುವ ಅನುಭಗಳನ್ನು ನಿರ್ಲಕ್ಷಿಸದೇ ಸಮಚಿತ್ತದಿಂದ ಅವುಗಳನ್ನು ವಿಶ್ಲೇಷಿಸಿ ಅವುಗಳಲ್ಲಿ ಅಡಗಿರುವ ಅಮೂಲ್ಯ ಪಾಠಗಳನ್ನು ಕಲಿಯುವದಾಗಿ ಹೇಳಿ, ಗುರುವಿಗೆ ವಂದನೆಗಳನ್ನು ಅರ್ಪಿಸಿ ಮರಳಿದ.

ಸ್ವಾಮಿ ಸುಖಬೋಧಾನಂದರ Personal Excellence Through The Bhagavadgita ಅನ್ನುವ ಪುಸ್ತಕದಲ್ಲಿ ಓದಿದ ಕಥೆ ಇದು.

ಅನುಭವಗಳು ಒಳ್ಳೆಯವವೋ ಕೆಟ್ಟವೋ, ಇಷ್ಟವಾದವೋ ಕಷ್ಟವಾದವೋ....ಹೇಗೇ ಇರಲಿ, ಅವುಗಳಿಂದ ಪಾಠ ಕಲಿಯಬೇಕು. Every cloud has a silver lining ಅನ್ನುವ ಹಾಗೆ ಅದೆಂತಹ horrible ಅನುಭವವಾದರೂ ಅದರಲ್ಲೂ ಕೂಡ ಒಂದು ಅಮೂಲ್ಯ ವಜ್ರ, ಅನುಭವಾನುಮೃತ ಇದ್ದೇ ಇರುತ್ತದೆ. ಇದು ದೊಡ್ಡವರು ಹೇಳುವ ಮಾತು.

ಇದೆಲ್ಲ ಹೇಳಲು ಕೇಳಲು ಮಾತ್ರ ಚೆನ್ನಾಗಿರುತ್ತದೆ. ಆದರೆ ಪಾಲಿಸುವದು ಕಷ್ಟ ಎಂದು ಅನ್ನಿಸಿದರೆ ತಪ್ಪೇನಿಲ್ಲ. ಮತ್ತೆ ಕೆಲವು ಆಘಾತಕಾರಿ ಅನುಭವಗಳಿಂದ ಅದೆಂತಹ ನೀತಿ ಪಾಠ ಕಲಿಯಲು ಸಾಧ್ಯ? ಅವುಗಳನ್ನು ಮರೆತರೆ ಸಾಕಾಗಿರುತ್ತದೆ.

ಹೀಗೆ ಯೋಚಿಸುತ್ತ ಕುಳಿತಾಗ ಎಲ್ಲೋ ಓದಿದ ಒಂದು ಘಟನೆ ನೆನಪಾಯಿತು. ಅದರ ಸಾರಾಂಶ ಇಷ್ಟು.

ಅವರೊಬ್ಬ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್. ಇಸ್ಲಾಮ್ ಧರ್ಮದವರು. ಅವರಿಗೊಬ್ಬ ಏಳೆಂಟು ವರ್ಷದ ಮಗ. ಏನೋ ಅನಾರೋಗ್ಯವಾಗಿ ಒಮ್ಮೆಲೇ ಸತ್ತುಹೋದ. ಎಲ್ಲರಿಗೂ ತುಂಬಾ ದುಃಖವಾಯಿತು. ಅವರ ಆಪ್ತರು ಮನೆಗೆ ಹೋಗಿ ಸಂತಾಪ ಸೂಚಿಸಿದರೆ ಪ್ರೊಫೆಸರ್ ಹೇಳಿದ ಮಾತು -  'ನಾನು ನಂಬಿದ್ದ ಅಲ್ಲಾಹುವೇ ಮಗನ ರೂಪದಲ್ಲಿ ಬಂದಿದ್ದ. ಎಂಟು ವರ್ಷ ಇದ್ದ. ಅಲ್ಲಾಹು ನನ್ನ ಮಗನಾಗಿ ಎಂಟು ವರ್ಷ ನಮ್ಮೆಲ್ಲರ ಜೊತೆ ಇದ್ದ ಬಗ್ಗೆ ತುಂಬಾ ಸಂತಸವಿದೆ. ದೇವರು ಅಂದ ಮೇಲೆ ಒಂದೇ ಕಡೆ ಇರಲು ಸಾಧ್ಯವೇ? ಅದೆಷ್ಟು ಮಂದಿ ಭಕ್ತರ ಕೋರಿಕೆ ಇದೆಯೋ? ಅವನ್ನು ತೀರಿಸಲು ಮತ್ತೊಂದು ಮನೆಗೆ ಹೋದ ಅಂದುಕೊಂಡೆ ಅಷ್ಟೇ. ನಮಗೆ ಸಿಕ್ಕ ಸುಖ ಸಂತೋಷ ಅವರಿಗೂ ಸಿಗಲಿ!' ಎಂದು ಹೇಳಿ ಕಣ್ಣು ಒರೆಸಿಕೊಂಡರು.

'ಪುತ್ರಶೋಕಂ ನಿರಂತರಂ' ಅಂತ ಮಾತಿದೆ. ಯಾವುದೇ ಪಾಲಕರಿಗೆ ಮಕ್ಕಳನ್ನು ಕಳೆದುಕೊಳ್ಳುವದು most traumatic ಅನುಭವ. ಅಂತಹ ಅತ್ಯಂತ ಕೆಟ್ಟ ಅನುಭವದಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳುವದು ಹೇಗೆ ಅನ್ನುವದನ್ನು ಪ್ರೊಫೆಸರ್ ಸಾಹೇಬರು ತೋರಿಸಿಕೊಟ್ಟಿದ್ದರು.

ಮತ್ತೆ ಮತ್ತೊಂದು ಮಾತು. ಹಲವಾರು ಘಟನೆಗಳು ಆಗುತ್ತಿರುತ್ತವೆ. ಅವುಗಳನ್ನು ನಾವು 'ನಮ್ಮದು' ಅಂತ ಮಾಡಿಕೊಂಡಾಗ ಮಾತ್ರ ಅವು ನಮ್ಮ ಅನುಭವಗಳಾಗುತ್ತವೆ. ಅಲ್ಲಿ ಮತ್ತೆ 'ನಾನು, ನನ್ನದು, ನನ್ನಿಂದ' ಅನ್ನುವ ಅಹಂಕಾರ ಬರುತ್ತದೆ. ಹಾಗೆ ನಮ್ಮ ಅಹಂಕಾರದೊಂದಿಗೆ associate ಮಾಡದೇ ಇದ್ದರೆ ಅದೊಂದು ಘಟನೆ ಅಷ್ಟೇ. ಹಾಗಾಗಿ ಅನುಭವಗಳಿಂದ ಪಾಠ ಕಲಿಯುವದು ಉತ್ತಮ. ಅದಕ್ಕಿಂತ ಉತ್ತಮವಾದದ್ದು ಹಿಂದಾಗ ಮತ್ತು ಮುಂದಾಗಲಿರುವ ಘಟನೆಗಳನ್ನು ಘಟನೆಗಳನ್ನಾಗಿಯೇ ಬಿಟ್ಟುಬಿಡುವದು. ನಾನು, ನನ್ನದು, ನನ್ನಿಂದ ಅನ್ನುವ label ಹಚ್ಚಿ ನಮ್ಮ ಅನುಭವಗಳನ್ನಾಗಿ ಮಾಡಿಕೊಳ್ಳಲೇಬಾರದು. Every experiment has an outcome. But, we label the outcome either as success or failure. Similarly incidents happen. When we associate incidents with ourselves they become 'our' experiences.

ಅನುಭವಾಮೃತ ಮಾತ್ರ ಮಿಸ್ ಮಾಡಿಕೊಳ್ಳಬೇಡಿ.

Monday, September 04, 2017

ನಮ್ಮ ಟೀಚರ್ ಪೇಪರಿನ್ಯಾಗ ಬಂದಾರ...

ಸೆಪ್ಟೆಂಬರ್ ೫. ಶಿಕ್ಷಕರ ದಿನಾಚರಣೆ. ನೆನಪಿದೆ. ಆದರೆ ಯಾವದೇ ಟೀಚರ್ ಅಥವಾ ಮಾಸ್ತರ್ ಬಗ್ಗೆ ಬರೆದಿಲ್ಲ. 'ಅಯ್ಯೋ! ಬರೆಯಲೇ ಇಲ್ಲವಲ್ಲ,' ಎಂದು ಜಾಸ್ತಿ ಕೊರಗಬೇಕಾಗಿ ಬರಲಿಲ್ಲ. ಇವತ್ತಿನ ವಿಜಯವಾಣಿಯಲ್ಲಿ ಹಲವಾರು ಶಿಕ್ಷಕರ ಬಗ್ಗೆ ಅವರ ವಿದ್ಯಾರ್ಥಿಗಳಾಡಿದ ನಾಲ್ಕು ಮಾತುಗಳನ್ನು ಹಾಕಿದ್ದಾರೆ. ನಮಗೆ ಪಾಠ ಮಾಡಿದ್ದ 'ಭಾರತಿ ನಾಯಕ್ ಉಣಕಲ್' ಟೀಚರ್ ಬಗ್ಗೆನೂ ಅವರ ವಿದ್ಯಾರ್ಥಿಗಳು ಹೇಳಿದ ಮಾತುಗಳು ಬಂದಿವೆ. ನೋಡಿ ಸಂತೋಷವಾಯಿತು.



 

ನಮ್ಮ ಕಾಲದಲ್ಲಿ ಅವರು ನಮಗೆಲ್ಲ ಬಿ.ಆರ್.ನಾಯಕ್ ಟೀಚರ್ ಅಂತಲೇ ಪರಿಚಿತರು. ೧೯೮೩-೮೪ ರ ಸಮಯದಲ್ಲಿ, ಆರನೇ ಕ್ಲಾಸಿನಲ್ಲಿದ್ದಾಗ, ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದರು. ಆಗ ಮಾತ್ರ ನೌಕರಿಗೆ ಸೇರಿದ್ದರು ಅಂತ ನೆನಪು. ಸಿಕ್ಕಾಪಟ್ಟೆ ಜೋಷ್ ಇತ್ತು. ದಬಾಯಿಸಿ ಪಾಠ ಮಾಡುತ್ತಿದ್ದರು. ಉತ್ಸಾಹದ ಚಿಲುಮೆ ಅನ್ನುವ ಮಾತಿಗೆ ಉದಾಹರಣೆ ಬೇಕೆಂದರೆ ನಾಯಕ್ ಟೀಚರ್ ಅವರನ್ನು ತೋರಿಸಬಹುದಿತ್ತು. ಸಿಕ್ಕಾಪಟ್ಟೆ ಚಟುವಟಿಕೆಯ ಮಾಸ್ತರಿಣಿ. 

ಅವರು ಮೂಲತಃ ಅಂಕೋಲಾ ಕಡೆಯವರು ಅಂತ ನೆನಪು. ಧಾರವಾಡ ಭಾಷೆ ಮಾತಾಡುತ್ತಿದ್ದರೂ ಉತ್ತರಕನ್ನಡದ ನಾಡವರ ಭಾಷೆಯ ಛಾಪು ಬರೋಬ್ಬರಿ ಇರುತ್ತಿತ್ತು. ಒಮ್ಮೆ ಅವರು ಯಾವದೋ ವಿಷಯವನ್ನು ಹೇಳುತ್ತ 'ಕೆಲಶಿ' ಅನ್ನುವ ಪದ ಉಪಯೋಗಿಸಿದ್ದರು. ಎಷ್ಟೋ ಜನ 'ಕೆಲಶಿ' ಅಂದರೆ ಕೆಲಸ ಮಾಡುವವರು ಅಂದುಕೊಂಡು ಸುಮ್ಮನೆ ಕೂತಿದ್ದರು. ಸದಾ ಪ್ರಶ್ನೆ ಕೇಳುತ್ತಿದ್ದ ವಿದ್ಯಾರ್ಥಿಯೊಬ್ಬ ಎದ್ದು ನಿಂತು, 'ಟೀಚರ್, ಕೆಲಶಿ ಅಂದರೇನ್ರೀ??' ಎಂದು ಕೇಳಿದ್ದ. ನಾಯಕ್ ಟೀಚರ್ ಉತ್ತರಿಸಿದ್ದನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ನಗು ಬರುತ್ತದೆ. 'ಕೆಲಶಿ ಅಂದ್ರೆ ಗೊತ್ತಿಲ್ಲ ನಿನಗೆ? ತಲೆ ಕಟಿಂಗ್ ಮಾಡ್ತಾರಲ್ಲಾ? ಗೊತ್ತಾಯ್ತು? ತಲೆ ಕಟ್ ಮಾಡುವವರು. ಅವರೇ ಕೆಲಶಿ,' ಅಂದುಬಿಟ್ಟಿದ್ದರು. ತಲೆಕೂದಲನ್ನು ಕಟ್ ಮಾಡುವವ ಕೆಲಶಿ ಉರ್ಫ್ ನಾಪಿತ ಅಂತ ಹೇಳುವ ಭರಾಟೆಯಲ್ಲಿ ತಲೆ ಕಟ್ ಮಾಡುವವ ಅಂದುಬಿಟ್ಟಿದರು. ಅದನ್ನು ಕ್ಯಾಚ್ ಮಾಡಿದ ನಮ್ಮಂತವರು ತಟ್ಟಿಕೊಂಡು ಪೆಕಪೆಕಾ ನಕ್ಕರೆ ಟೀಚರಿಗೆ ಯಾಕೆ ನಗುತ್ತಿದ್ದಾರೆ ಅಂತ ತಿಳಿಯದೆ, 'ಅದೇನು ಹೆಗಡೆ ನಗೋದು? ಏನು ತಮಾಷೆ ಉಂಟು ಅದರಲ್ಲಿ!?' ಅಂದು ಬೈದಿದ್ದರು. ನೆನಪಾಗಿ ನಗು ಬಂತು. 

ನಮ್ಮ ಹವ್ಯಕ ಭಾಷೆಯಲ್ಲೂ ನಾಪಿತನಿಗೆ ಕೆಲಶಿ ಅಂತಲೇ ಹೇಳುತ್ತಾರೆ. ಹಾಗಾಗಿ ಅವರು ಮೊದಲನೇ ಬಾರಿಗೆ 'ಕೆಲಶಿ' ಅಂದಾಗಲೇ ನನಗೆ ಗೊತ್ತಾಗಿತ್ತು. 'ಟೀಚರ್, ಕೆಲಶಿ ಅಂದರೇನ್ರೀ??' ಅಂತ ಬೇರೊಬ್ಬ ವಿದ್ಯಾರ್ಥಿ ಕೇಳಿದಾಗ ತಾವೇ ಉತ್ತರ ಕೊಡುವ ಬದಲಿಗೆ, 'ಹೆಗಡೆ, ನೀ ಹೇಳು ನೋಡುವಾ. ನಿನಗೆ ಗೊತ್ತಿರಬೇಕಲ್ಲ ಕೆಲಶಿ ಅಂದರೆ ಏನು ಅಂತ. ನೀನೂ ಆಕಡೆಯವನೇ,' ಅಂತ ನನ್ನನ್ನು ಕೇಳಿದ್ದರೆ ಮುದ್ದಾಂ ಹೇಳುತ್ತಿದ್ದೆ with action ಬೇಕಾದ್ರೆ! 'ಉತ್ತರ ಹೇಳು ನೋಡೋಣ!' ಎಂದು ಸದಾ ನನ್ನನ್ನು ಎಬ್ಬಿಸುತ್ತಿದ್ದ ಟೀಚರ್ ಅಂದೇಕೋ ನನ್ನನ್ನು ಕೇಳಲಿಲ್ಲ. ತಾವೇ ಹೇಳಲು ಹೋಗಿ, ಅದು ಏನೋ ಆಗಿಹೋಗಿತ್ತು. ನೆನಸಿಕೊಂಡು ಇವತ್ತು ಸಿಕ್ಕಾಪಟ್ಟೆ ನಕ್ಕೆ. 

೨೦೧೨ ಡಿಸೆಂಬರಿನಲ್ಲಿ ನಮ್ಮ SSLC ಬ್ಯಾಚಿನ ೨೫ ನೇ ವರ್ಷದ ರಜತಮಹೋತ್ಸವಕ್ಕೆ ಹೋದಾಗ ನಾಯಕ್ ಟೀಚರ್ ಸಿಕ್ಕಿದ್ದರು. ಶಾಲೆಯಲ್ಲಿದ್ದಾಗ ಅವರದ್ದು ಮತ್ತು ನಂದು ಆರನೇ ಕ್ಲಾಸಿನಲ್ಲಿ ಒಂದು ತರಹದ ವಿಚಿತ್ರ ಸಂಬಂಧ. ತುಂಬಾ ಪ್ರೀತಿಸುತ್ತಿದ್ದರು. ಆದರೆ ಸಿಕ್ಕಾಪಟ್ಟೆ ಕಿತಾಪತಿ ಮಾಡುತ್ತಾನೆ, ಗದ್ದಲ ಹಾಕುತ್ತಾನೆ, ಕಿರಿಕಿರಿ ಮಾಡುತ್ತಾನೆ, ಗೆಳೆಯರ ಗುಂಪು ಕಟ್ಟಿಕೊಂಡು ಏನೇನೋ ಜೋಕ್ ಮಾಡುತ್ತಾನೆ ಅಂತ ಅವರಿಗೆ ಸಿಕ್ಕಾಪಟ್ಟೆ ಕೋಪ ಕೂಡ ಬರುತ್ತಿತ್ತು. ಆದರೂ ಪ್ರೀತಿ ಜಾಸ್ತಿಯಿತ್ತು. ಹಾಗಾಗಿ ಕೋಪ ಬಂದರೂ ಆ ಕ್ಷಣದಲ್ಲಿ ಒಂದೆರೆಡು ಮಾತು ಬೈದಿದ್ದು ಬಿಟ್ಟರೆ ಒಳ್ಳೆ ಮಾರ್ಕ್ಸ್ ತೆಗೆದಾಗ ಪ್ರೀತಿಯಿಂದ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದೇ ಜಾಸ್ತಿ. ೨೦೧೨ ರಲ್ಲಿ ಇಪ್ಪತ್ತೈದು ವರ್ಷಗಳ ನಂತರ ಸಿಕ್ಕ ನಾಯಕ್ ಟೀಚರ್ ಅದೆಷ್ಟು ಮಾತಾಡಿದರು, ಅದೆಷ್ಟು ಪ್ರೀತಿ ತೋರಿಸಿದರು ಅಂದರೆ ಅವರ ಮನೆಗೆ ಊಟಕ್ಕೆ ಬರಲೇಬೇಕು ಅಂತ ಕೂತಿದ್ದರು. 'ಟೀಚರ್, ನಿಮ್ಮ ಮನಿ ಊಟ ಇನ್ನೊಮ್ಮೆ ನೋಡೋಣಂತ್ರಿ. ಇವತ್ತಿನ ಊಟ ನಿಮ್ಮ ಜೋಡಿನೇ ಕೂತು ಮಾಡೋಣಂತ,' ಎಂದು ಹೇಳಿ ಅವರ ಜೊತೆಯೇ ಉಳಿದ ಕೆಲ ಮಿತ್ರರ ಜೊತೆ ಊಟ ಮಾಡಿದ್ದು ಇವತ್ತಿಗೆ ಸವಿನೆನಪು. 

ಟೀಚರ್ ಬಗ್ಗೆ ಒಳ್ಳೆ ಮಾತಾಡಿದ ನಂತರದ ತಲೆಮಾರಿನ ವಿದ್ಯಾರ್ಥಿಗಳಿಗೆ, ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು. 

ಬಿ. ಆರ್. ನಾಯಕ್ ಟೀಚರ್ ಅವರಿಗೆ ಶಿಕ್ಷಕರ ದಿನದ ಶುಭಾಶಯಗಳು. ನಮ್ಮಂತಹ ಮಂಗ್ಯಾಗಳನ್ನು ಸಹಿಸಿಕೊಂಡು ಪಾಠ ಮಾಡಿ ವಿದ್ಯೆ ಕಲಿಸಿದ್ದಕ್ಕೆ ಒಂದು ದೊಡ್ಡ ನಮೋ ನಮಃ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಟೀಚರ್!

OCI Experience...lessons learnt


OCI - Overseas Citizen of India. OCI is a privilege granted by government of India to people of Indian origin who have become foreign nationals. OCI brings foreign nationals of Indian origin on par with NRIs (Non Resident Indian). OCI allows the holder to travel freely to India, stay as long as one wants, take up private jobs, invest, buy property (except agricultural land) etc.

Earlier, once you gave up the Indian citizenship, you were treated purely like a foreigner without any consideration to your Indian origin. You had to get a tourist visa like any other foreigner to visit India. Length of the stay was limited and there were regulations like having to register with local police authorities if the stay exceeded certain number of days etc.

OCI is a good measure from the government of India for people who want to have flexibility about their visit to and stay in India. Earlier it started as PIO (Person of Indian Origin) scheme and now has become OCI. It is a lifelong visa to visit and stay in India. (Technically not lifelong as one has to renew it at least once after reaching 50 years of age. Other than that it is a permanent Indian visa.)

Probably all this is known to most of the people. There is plenty of information available on websites both in India and abroad. If you are interested to apply and get OCI for yourself, please visit them and follow the instructions accurately and you should get your OCI without any problem.

Here I want to let you know about a few points, which if ignored even if unintentionally, can cause some problems and thus delay the processing of your OCI card.

1) The passport size photographs that you need to attach to the OCI application have to be different than the one on your passport. This requirement is found only on CKGS's website, the company which verifies your documents before forwarding your application to the Indian government.

Glad I noticed this rule before finalizing my OCI application. Otherwise I would have sent the same photos that I had used to get my recent US passport as I had a few extras.

So, always get a new set of photos when you send your OCI application and make sure it is different than the one in your passport.

2) Variations in name. In India, it is common to write your full name as 'your name' 'father's name' 'surname'. In US, unless you have a real middle name, you simply write 'your name' and 'your surname'.

All my Indian documents have my father's name and US documents like naturalization certificate, US passport etc. don't have it.

So, they flagged my OCI application for inconsistency in name and put it on hold. Options given were 1) if you have changed your name, send the name change court order or 2) send an affidavit stating that both the names belong to one and the same person.

I am glad that they provided option #2. I also searched on the web and found that many people had similar problem. Some people had shared what they had done, type of affidavit they had used etc. Using such information, I also prepared a simple affidavit, got it notarized and sent it following the instructions given by CKGS, the outsourced company which handles all the paperwork. Once they reviewed and accepted the affidavit, everything went smoothly. OCI card was processed in India, sent to the Indian consulate here in San Francisco and after the local consular officer signed it, it was delivered to me. Total time taken was one month and ten days. If not for the glitch with the name, probably it would have been taken a month. Thankfully the delay was not really very long.

So if you are applying for OCI, make sure that your name is written exactly same in all the documents you are sending along with your application like your old passports, birth certificate, US naturalization certificate, US passport etc. If you have really changed your name, no worries. It is straight forward. Just attach the name change documentation. If you have NOT changed the name but your name is written DIFFERENTLY in different documents then you are better off sending a notarized affidavit clearly explaining different variations of your name, why they exist and how they are one and the same and most importantly belong to you only. There is no one affidavit format which may work for all situations. Just type up a simple but accurate document, take its printout, sign it before a notary and include it with the application right in the beginning. That way your application probably will not be put on hold and you can save pain and cost later.

If I had understood this sooner, I could have definitely saved a few dollars of having to rush the affidavit by overnight courier later and the stress involved in searching for information on the web, coming up with the right affidavit, going to a notary etc. because when they put the application on hold, you need to resolve the issue within seven days. Otherwise the application may be cancelled. That's not something you want as it takes a lot of time and effort in putting together the application.

For all other instructions, just accurately follow the procedure you find on the official website. Read the instructions multiple times. Before sending, check the documents multiple times for correctness. Exercise maximum care and due diligence. It should all be just fine and you should get your OCI without any problem.

If I can answer any related questions, feel free to e-mail me.

Good luck in getting your OCI!

Saturday, September 02, 2017

ಏ ಜೀ! ಏ ಜೀ! (A G) ಎಂದು ಗಂಡನನ್ನು ಕೂಗುವದರ ಹಿಂದಿನ ಕಥೆ

ಒಂದಾನೊಂದು ಕಾಲದಲ್ಲಿ ಪತ್ನಿಯೊಬ್ಬಳು ಗಂಡನಿಗೆ ನೂರು ಬೆಳ್ಳಿ ವರಹಗಳನ್ನು ಕೊಟ್ಟು, 'ರೀ, ಪೇಟೆಗೆ ಹೋಗಿ ಮೂರು ಕತ್ತೆಗಳನ್ನು ಕೊಂಡು ತನ್ನಿ,' ಎಂದು ಹೇಳಿದಳು.

'ಮೂರೇ ಕತ್ತೆ ಮತ್ತೆ. ಒಂದು ಹೆಚ್ಚು ಅಥವಾ ಒಂದು ಕಮ್ಮಿ ತರಬೇಡಿ,' ಎಂದು ಎಚ್ಚರಿಸಲು ಮರೆಯಲಿಲ್ಲ.

ಏಕೆ? ಏನು? ಕತ್ತೆಯೇ ಯಾಕೆ? ಕುದುರೆ ಏಕಾಗಬಾರದು? ಅಂತೆಲ್ಲ ತಲೆಹರಟೆ ಪ್ರಶ್ನೆ ಕೇಳಲು ಗಂಡ ಹೋಗಲಿಲ್ಲ. ಶಾಣ್ಯಾ ಮನುಷ್ಯ.

ಪೇಟೆಗೆ ಹೋದ. ಏನೇನೋ ಚೌಕಾಸಿ ವ್ಯವಹಾರ ಮಾಡಿ ನೂರು ವರಹಗಳಿಗೆ ಬರೋಬ್ಬರಿ ಮೂರು ಕತ್ತೆಗಳನ್ನು ಕೊಂಡ. ಅವುಗಳನ್ನು ಮನೆಯತ್ತ ಹೊಡೆದುಕೊಂಡು ಹೊರಟ.

ಮನೆ ಹತ್ತಿರ ಬಂದಾಗ ನೋಡಿದರೆ ಎರಡೇ ಕತ್ತೆಗಳಿದ್ದವು! ಒಂದು ಕತ್ತೆ ಗಾಯಬ್! ಅತ್ತಿತ್ತ ನೋಡಿದ. ಆದರೆ ಮೂರನೇ ಕತ್ತೆ ಎಲ್ಲೂ ಕಾಣಲಿಲ್ಲ. ಇನ್ನು ಮನೆಗೆ ಹೋದ ಮೇಲೆ ಹೆಂಡತಿ ಕೈಯಲ್ಲಿ ಬರೋಬ್ಬರಿ ಮಂಗಳಾರತಿ, ಪೂಜೆ ಎಲ್ಲ ಇದೆ ಎಂದು ತಿಳಿದು, ಮುಂದಾಗಲಿರುವ ಅನಾಹುತವನ್ನು ಎದುರಿಸಲು ತಯಾರಾದ.

ಮನೆಗೆ ಹೋದವನೇ, ಹೆಂಡತಿ ಏನು ಎತ್ತ ಎಂದು ಕೇಳುವ ಮೊದಲೇ ಎಲ್ಲ ಹೇಳಿಕೊಂಡುಬಿಟ್ಟ.

'ನೀನು ಮೂರು ಕತ್ತೆಗಳನ್ನು ಕೊಂಡು ತಾ ಅಂದಿದ್ದೆ. ಅದರ ಪ್ರಕಾರವೇ ಮೂರು ಕತ್ತೆಗಳನ್ನು ಕೊಂಡುಕೊಂಡೆ. ದಾರಿಯಲ್ಲಿ ಬರುವಾಗ ಒಂದು ಕತ್ತೆ ತಪ್ಪಿಸಿಕೊಂಡಿದೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ಪ್ಲೀಸ್ ಕ್ಷಮಿಸು!' ಎಂದವನೇ ಹೆಂಡತಿ ಕಾಲಿಗೆ ಡೈವ್ ಹೊಡೆಯಲು ಪೋಸ್ ರೆಡಿ ಮಾಡಿಕೊಂಡ.

ಹೆಂಡತಿ 'ಥಾಂಬಾ!' ಅಂದರೆ 'ಒಂದು ಕ್ಷಣ ನಿಲ್ಲು' ಅನ್ನುವಂತೆ ಕೈ ಮಾಡಿದಳು.

'ಏನು????' ಎನ್ನುವಂತೆ ನೋಡಿದ.

'ನನಗೆ ನಾಲ್ಕು ಕತ್ತೆಗಳು ಕಾಣುತ್ತಿವೆ!' ಅಂದಳು ಪತ್ನಿ.

'ನಾಲ್ಕೇ?? ಎಲ್ಲಿ?? ಹೇಗೆ??' ಎಂದು ಆಶ್ಚರ್ಯಚಕಿತನಾಗಿ ಕೇಳಿದ ಗಂಡ.

'ಎರಡು ಕತ್ತೆ ನಿನ್ನ ಮುಂದಿವೆ.... ' ಅಂದಳು ಪತ್ನಿ.

'ಸರಿ. ಮತ್ತೆರೆಡು ಎಲ್ಲಿವೆ??' ಎಂದು ಕೇಳಿದ ಪತಿ.

'ಮೂರನೆಯ ಕತ್ತೆಯ ಮೇಲೆ ಕೂತಿರುವ ನಾಲ್ಕನೇ ಕತ್ತೆ ನೀನೇ!' ಎಂದವಳೇ ಸಿಕ್ಕಾಪಟ್ಟೆ irritate ಆಗಿ ಒಂದು ಬಿಟ್ಟಳು.

ಅಂದಿನಿಂದ ಪತಿಯನ್ನು 'ಏ ಜೀ! ಏ ಜೀ!' ಎಂದು ಕರೆಯುವ ಪದ್ಧತಿ ಜಾರಿಯಲ್ಲಿ ಬಂತು.

ಏ ಜೀ = A G ಅಂದರೆ ಅಬೇ ಗಧೆ ಅಂದರೆ ಹೇ ಕತ್ತೆ!

ಮೂಲ: ಕತ್ತೆ ವ್ಯಾಪಾರದ ಕಥೆ ಮುಲ್ಲಾ ನಸ್ರುದ್ದೀನನ ಕಥೆ. ಸ್ವಾಮಿ ಸುಖಬೋಧಾನಂದರ 'Personal Excellence Through Bhagavadgita' ಪುಸ್ತಕದಲ್ಲಿ ಓದಿದ್ದು. A G = ಅಬೇ ಗಧೆ ಜೋಕ್ ಹೇಳಿದವರು ಸ್ವಾಮಿ ಅನುಭವಾನಂದ ಸರಸ್ವತಿ.

Tuesday, August 15, 2017

ಗಂಡಹೆಂಡತಿ ಖುಷಿಖುಷಿಯಾಗಿರೋದು ಅಂದರೆ...

'ಹ್ಯಾಂಗ ಇದ್ದೀರಿ ಗಂಡಹೆಂಡತಿ? ಹ್ಯಾಂಗ ನಡದದ ಸಂಸಾರ?' ಅಂತ ಮನಿಗೆ ಬಂದ ಪರಿಚಿತರು ಕೇಳಿದರು.

ಗಂಡ ಹೇಳಿದ, 'ಹೇ ಎಲ್ಲಾ ಮಸ್ತ. ಏಕ್ದಂ ಮಸ್ತ ನಡದದ. ಏನೂ ತೊಂದ್ರಿ ಇಲ್ಲ.'

'ಒಳ್ಳೇದು. ಗಂಡಹೆಂಡತಿ ಖುಷಿಖುಷಿಯಾಗಿ ಇದ್ದೀರಲ್ಲಾ?' ಅಂತ ಜಾಸ್ತಿ ಎನ್ಕ್ವೈರಿ.

'ಏಕ್ದಂ ಖುಷಿಖುಷಿಯಾಗಿ ಸಂತೋಷದಿಂದ ಇದ್ದೀವಿ,' ಅಂದ ಗಂಡ.

'ಏನೂ ತೊಂದ್ರಿ ಇಲ್ಲಲಾ??' ಅಂತ ಮತ್ತ ಕೇಳಿದ ಪರಿಚಿತ.

'ದೊಡ್ಡ ತೊಂದ್ರಿ ಏನೂ ಇಲ್ಲ. ಆದ್ರ ಸಿಟ್ಟು ಬಂದಾಗ ನನ್ನ ಹೆಂಡತಿ ಕೈಗೆ ಸಿಕ್ಕಿದ ಭಾಂಡೆ, ಪಾತ್ರೆ, ಕಪ್ಪು, ಬಸಿ ಹೀಂಗ ಏನು ಕೈಗೆ ಸಿಕ್ಕರೂ ತೊಗೊಂಡು ಮಾರಿ ಮಸಡಿ ನೋಡದೇ ರೊಂಯ್ ರೊಂಯ್ ಅಂತ ಒಗಿತಾಳ. ಅಷ್ಟು ಬಿಟ್ಟರೆ ಬ್ಯಾರೆ ಏನೂ ತೊಂದ್ರಿ ಇಲ್ಲ,' ಅಂತ ಹೆಚ್ಚಿನ ಮಾಹಿತಿ ಕೊಟ್ಟ ಗಂಡ.

'ಅವಯ್ಯಾ! ಹೀಂಗss? ಕೈಗೆ ಸಿಕ್ಕಿದ್ದನ್ನ ಮಾರಿ ಮಸಡಿಗೆ ಒಗಿತಾಳ ಅಂತಿ. ಮ್ಯಾಲಿಂದ ಇಬ್ಬರೂ ಖುಷಿಖುಷಿಯಾಗಿ ಸಹಿತ ಇದ್ದೀರಿ ಅಂತನೂ ಅಂತಿ. ಅದೆಂಗ ಸಾಧ್ಯ? How's it possible??' ಅಂದ ಪರಿಚಿತ. ಆಶ್ಚರ್ಯ ಆತು ಮನಿಗೆ ಬಂದವರಿಗೆ.

'ಅದು ನೋಡ್ರಿ... ಅಕಿ ಕೈಗೆ ಸಿಕ್ಕಿದ್ದು ಒಗೆದಾಗ ನಾ ಬಗ್ಗಿ, ಡೈವ್ ಹೊಡೆದು, ದೊಂಬರಾಟ ಮಾಡಿ ಮಿಸೈಲ್ ಗತೆ ಬರೋ ಭಾಂಡಿ, ಕಪ್ಪು ಬಸಿಂದ ತಪ್ಪಿಸಿಕೊಂಡೆ ಅಂದ್ರ ನಾ ಖುಷ್ ನೋಡ್ರಿ. ಎಲ್ಲರೆ ಅಕಿ ಒಗೆದ ಮಿಸೈಲ್ ಗುರಿ ತಪ್ಪದೆ ಬಂದು ನನಗ ಬಡಿ ಬಾರದ ಜಾಗಾದಾಗ ಬಡಿದು ಗುಮ್ಮಟಿ ಬಂತು ಅಂದ್ರ ಅಕಿ ಖುಷ್ ನೋಡ್ರಿ. ಒಟ್ಟಿನಾಗ ಒಮ್ಮೊಮ್ಮೆ ಅಕಿ ಖುಷ್. ಒಮ್ಮೊಮ್ಮೆ ನಾ ಖುಷ್. ಹೀಂಗ ಇಬ್ಬರೂ ಖುಷಿಖುಷಿಯಾಗಿ ಇದ್ದೀವಿ,' ಅಂತ ಖತರ್ನಾಕ್ ವಿವರಣೆ ಕೊಟ್ಟ ಗಂಡ.

ಅಷ್ಟರಾಗ ಏನೋ 'ರೊಂಯ್!!' ಅಂತ ಆವಾಜ್ ಬಂತು.

'ಅಯ್ಯೋ! ಲಗೂನೇ ಬಗ್ಗಿ ಕೂಡ್ರಿ! ಲಗೂ! ಅಡಿಗಿಮನಿ ಕಡೆಂದ ಮಿಸೈಲ್ ಬರ್ಲಿಕತ್ತದ,' ಎಂದು ಹೇಳಿದ ಗಂಡ ಸೊಂಯಕ್ ಅಂತ ಡೈವ್ ಹೊಡೆದು ಸೋಫಾ ಕೆಳಗ ಸೇರಿಕೊಂಡ.

ಮನಿಗೆ ಬಂದವರಿಗೆ ಏನು ಎತ್ತ ಅಂತೂ ತಿಳಿಲಿಲ್ಲ. ಅವರು ಯಬಡರ ಗತೆ 'ಏನು?? ಏನು?? ಏನಾತು??' ಅಂತ confuse ಆಗಿ ಅತ್ತಿತ್ತ ನೋಡೊದ್ರಾಗ ತಳಾ ಹಿಡಿದು ಖರ್ರ ಆದ ಹಿತ್ತಾಳೆ ಚರಿಗೆಯೊಂದು, ಅದೂ ಕಿಲುಬು ಹಿಡಿದಿದ್ದು, ಬಂದು ಅವರ ಬೋಡು ತಲೆಗೆ ಧೂಮಕೇತುವಿನಂತೆ ಅಪ್ಪಳಿಸಿಬಿಟ್ಟಿತು.

ಅವತ್ತು ಯಾರು ಖುಷ್ ಆದ್ರೋ ಗೊತ್ತಿಲ್ಲ.

ಮೂಲ: ಅನುಭವಾನಂದ ಸರಸ್ವತಿಯವರು ಹೇಳಿದ ಒಂದು ಚಿಕ್ಕ ಜೋಕ್.

Monday, August 14, 2017

ಸಿಟ್ಟನ್ನು ನಿಯಂತ್ರಿಸುವ ಒಂದು ವಿಧಾನ

ಗಂಡ: ನಾ ನಿನ್ನ ಮ್ಯಾಲೆ ಇಷ್ಟು ಒದರಾಡತೇನಿ. ಚೀರಾಡತೇನಿ. ಬೈತೀನಿ. ಸಿಡಿಮಿಡಿ ಮಾಡ್ತೇನಿ. ಜೀವಾ ತಿಂತೀನಿ. ಇಷ್ಟಾದ್ರೂ ನೀ ಹ್ಯಾಂಗ ನಿನ್ನ ಸಿಟ್ಟು ಕಂಟ್ರೋಲ್ ಮಾಡ್ಕೋತ್ತಿ ಡಾರ್ಲಿಂಗ್? ಹ್ಯಾಂಗ ಕಂಟ್ರೋಲ್ ಮಾಡ್ತೀ ನಿನ್ನ ಸಿಟ್ಟು?

ಹೆಂಡತಿ: ನಿಮ್ಮ ವರ್ತನೆ ನೋಡಿ ನಂಗೂ ಭಾಳ ಸಿಟ್ಟು ಬರ್ತದ. ಹ್ಯಾಂಗ ತಡ್ಕೋತ್ತೇನೋ ನನಗಷ್ಟೇ ಗೊತ್ತು.....

ಗಂಡ: ಹ್ಯಾಂಗ ಸಿಟ್ಟು ತಡಕೋತ್ತಿ ಹೇಳಲ್ಲಾ ಡಾರ್ಲಿಂಗ್?

ಹೆಂಡತಿ: ನಾ ಹೋಗಿ ತಿಕ್ಕಿ ತಿಕ್ಕಿ ಸಂಡಾಸ್ ತೊಳೆದು ಬರ್ತೇನಿ. ಸಂಡಾಸ್ ಫಳಾಫಳಾ ಸ್ವಚ್ಛ ಆಗೋವಷ್ಟರಾಗ ನಿಮ್ಮ ಮ್ಯಾಲಿನ ನನ್ನ ಸಿಟ್ಟು ಕಂಟ್ರೋಲಿಗೆ ಬಂದಿರ್ತದ.

ಗಂಡ: ಹ್ಯಾಂ!!?? ಸಿಟ್ಟು ಬಂದಾಗ ಹೋಗಿ ತಿಕ್ಕಿ ತಿಕ್ಕಿ ಸಂಡಾಸ್ ತೊಳೆದುಬಂದ್ರ ಸಿಟ್ಟು ಕಂಟ್ರೋಲಿಗೆ ಬರ್ತದ!? ಖರೇ!!??

ಹೆಂಡತಿ: ಖರೇಯಂದ್ರೂ ಖರೆ. ಶಂಬರ್ ಟಕಾ ಖರೆ.

ಗಂಡ: ಮುಂದಿನ ಸಲೆ ಸಿಟ್ಟು ಬಂದಾಗ ನಿನ್ನ ಮ್ಯಾಲೆ ಒದರಾಡೋದಿಲ್ಲ. ನಾನೂ ಹೋಗಿ ಸಂಡಾಸ್ ತಿಕ್ಕಿ ತಿಕ್ಕಿ ತೊಳೆದುಬರ್ತೇನಿ. ಓಕೆ?

ಹೆಂಡತಿ: ಒಂದು ಹೇಳೋದು ಮರ್ತಿದ್ದೆ.

ಗಂಡ: ಏನು??!!

ಹೆಂಡತಿ: ನಾ ನಿಮ್ಮ ಟೂತ್ ಬ್ರಷ್ ತೊಗೊಂಡು, ನಿಮಗ ಶಾಪಾ ಹೊಡ್ಕೋತ್ತ, ತಿಕ್ಕಿ ತಿಕ್ಕಿ ಸಂಡಾಸ್ ತೊಳೆದುಬರ್ತೇನಿ! ಆವಾಗ ಸಿಟ್ಟು ಇಳಿತದ.

ಗಂಡ: ಹ್ಯಾಂ!!!??

ಫುಲ್ ಬೇಹೋಶ್!!

ಅದೇ ಬ್ರಷ್ ನಲ್ಲಿ ಆಗಷ್ಟೇ ಹಲ್ಲು ತಿಕ್ಕಿ ಬಂದಿದ್ದ!

* ಎಲ್ಲೋ ಓದಿದ ಇಂಗ್ಲೀಷ್ ಜೋಕನ್ನು ಧಾರವಾಡ ಭಾಷೆಯಲ್ಲಿ ರೂಪಾಂತರಿಸಿದ್ದು.

Sunday, August 13, 2017

ವರ ಕೇಳುವ ಮುಂಚೆ ಎಚ್ಚರಿಕೆ!

ಮಾತಾ ಶೀತಲಾದೇವಿ

ಭಕ್ತನೊಬ್ಬ ಮಾತಾ ಶೀತಲಾದೇವಿಯನ್ನು ಕುರಿತು ಭಯಂಕರ ತಪಸ್ಸನ್ನು ಮಾಡಿದ. ಅವನ ಭಕ್ತಿಗೆ, ತಪಶ್ಚರ್ಯಕ್ಕೆ ಮೆಚ್ಚಿದ ಶೀತಲಾದೇವಿ ಪ್ರತ್ಯಕ್ಷಳಾದಳು.

ಶೀತಲಾದೇವಿ: ಭಕ್ತ, ಮೆಚ್ಚಿದೆ. ಏನು ವರ ಬೇಕೆಂದು ಕೇಳುವಂತವನಾಗು.

ಭಕ್ತ: ಅಡ್ಡಬಿದ್ದೆ ತಾಯಿ. ನನಗೆ ಒಂದೇ ಒಂದು ವರ ಬೇಕು ತಾಯಿ. ನನಗೊಂದು ಭರ್ಜರಿ ರೇಸ್ ಕುದುರೆಯನ್ನು ಕರುಣಿಸು. ಆ ಕುದುರೆ ಹೇಗಿರಬೇಕು ಅಂದರೆ ಕುದುರೆಜೂಜಿನ ಪ್ರತಿಯೊಂದು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆಲ್ಲುವಂತಹ ಕುದುರೆಯಾಗಿರಬೇಕು. ಅಂತಹ ಕುದುರೆಯನ್ನು ಕರುಣಿಸಿಬಿಡು ತಾಯೇ! ಮಹಾಮಾಯೇ! ಮತ್ತೇನೂ ಬೇಡ. ಕುದುರೆಬಾಲಕ್ಕೆ ರೊಕ್ಕ ಕಟ್ಟಿ ಕೊಂಚ ಹಣ ಮಾಡಿಕೊಳ್ಳಬೇಕಾಗಿದೆ ತಾಯಿ. ಮನೆ ಕಡೆ ತುಂಬಾ ಕಷ್ಟ.

ಹೀಗೆ ವರ ಕೇಳಿದ ಭಕ್ತ ಕೈಮುಗಿದು, ತಲೆ ತಗ್ಗಿಸಿ, ಕಣ್ಣು ಮುಚ್ಚಿದ. ದೇವಿ ವರ ಕೊಡುವದೊಂದೇ ಬಾಕಿ.

ದೇವಿ ಕೋಪದಿಂದ ಅಬ್ಬರಿಸಿದಳು, 'ಭಕ್ತ! ಕಣ್ಣು ತೆಗೆ!'

ಭಕ್ತ: ತಾಯೇ! ಇಷ್ಟು ಬೇಗ ವರವನ್ನು ಕರುಣಿಸಿಬಿಟ್ಟೆಯೇ! ನಿನ್ನ ಮಹಿಮೆ ಅಪಾರ ತಾಯಿ.

ದೇವಿ: ಅದಲ್ಲ. ಮುಖವನ್ನು ಎತ್ತಿ ಸ್ವಲ್ಪ ಈಕಡೆ ನೋಡು. ಹತ್ತಿರ ಬಾ.

ಭಯಭಕ್ತಿಯಿಂದ ದೇವಿಯ ಹತ್ತಿರ ಹೋದ ಭಕ್ತ ಆಸೆಯಿಂದ ತಲೆಯೆತ್ತಿ ನೋಡಿದ.

'ಛಟೀರ್!' ಅಂತ ಭಕ್ತನ ಕೆನ್ನೆಗೆ ಒಂದು ಬಿಟ್ಟಳು ಶೀತಲಾದೇವಿ.

ಏಟಿನ ಅಬ್ಬರಕ್ಕೆ ಭಕ್ತನ ಕಪಾಳಗೆಡ್ಡೆ ಚದುರಿಹೋಯಿತು. ನಂಬಿಕೆ ಬರದೇ ಮುಖ ಸವರಿಕೊಂಡ. ಇನ್ನೂ ಗರಮ್ಮಾಗಿ ಚುರುಚುರು ಅನ್ನುತ್ತಿತ್ತು.

ವರ ಕೇಳಿದರೆ ದೇವಿ ಕಪಾಳಕ್ಕೆ ಏಕೆ ಬಾರಿಸಿದಳು ಅಂತ ಬೆಚ್ಚಿಬಿದ್ದ ಭಕ್ತ ಸಖೇದಾಶ್ಚರ್ಯದಿಂದ, 'ಯಾಕೆ ತಾಯೀ? ಯಾಕೆ ಹೊಡೆದುಬಿಟ್ಟೆ?'

ದೇವಿ: ಹುಚ್ಚ ಮಂಗ್ಯಾನಮಗನೇ! ವರ ಕೇಳು ಅಂದರೆ ಏನಂತ ಕೇಳುವದು!? ನಿನಗೆ ಕುದುರೆಯನ್ನು ಕೊಡುವ ಶಕ್ತಿ ನನ್ನಲ್ಲಿದ್ದರೆ ನಾನು ಏಕೆ ಕತ್ತೆ ಮೇಲೆ ಸವಾರಿ ಮಾಡಿಕೊಂಡಿರುತ್ತಿದ್ದೆ ಮೂರ್ಖ! ಶತಮೂರ್ಖ!

ಅಂದವಳೇ ದೇವಿ ಭಕ್ತನ ಬುರುಡೆಗೆ ಮತ್ತೊಂದು 'ಫಟ್' ಅಂತ ಬಿಟ್ಟವಳೇ ತನ್ನ ವಾಹನವಾದ ಕತ್ತೆಗೂ ಒಂದು ಏಟು ಕೊಟ್ಟ ಅಬ್ಬರಕ್ಕೆ ಆಕೆಯ ಪ್ರೀತಿಯ ವಾಹನ ಕತ್ತೆ ಭೀಕರವಾಗಿ ಕೆನೆಯುತ್ತ, ಹಿಂಗಾಲನ್ನಷ್ಟೇ ಎತ್ತಿ ಭಕ್ತನತ್ತ ಕೆಕ್ಕರಿಸಿ ನೋಡಿತು. ದೇವಿ 'ಪ್ರಸಾದ' ಕೊಟ್ಟಾಯಿತು. ಈಗ ದೇವಿಯ ಕತ್ತೆ ತನ್ನ ಒದೆತದ ಪ್ರಸಾದ ಕೊಟ್ಟರೆ ಕಷ್ಟ ಅಂತ ಭಕ್ತ ಕೂಡ ಅಲ್ಲಿಂದ ಎಸ್ಕೇಪ್ ಆದ.

ನೀತಿ: ಲೌಕಿಕ ಸುಖಗಳಿಗಾಗಿ ದೇವರನ್ನು ಪ್ರಾರ್ಥಿಸುವದು ತಪ್ಪು. ಒಂದು ವೇಳೆ ಹಾಗೆ ಪ್ರಾರ್ಥಿಸಲೇಬೇಕು ಅಂತಾದರೆ ಸ್ವಲ್ಪ ಎಚ್ಚರ ಅಗತ್ಯ.

ಮುಂಬೈನ ಮಾಹಿಮ್ ಪ್ರದೇಶದಲ್ಲಿ ಮಾತಾ ಶೀತಲಾದೇವಿಯ ಮಂದಿರವಿದೆಯಂತೆ. ಹತ್ತಿರದಲ್ಲೇ ವಿಖ್ಯಾತ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ ಅಂತ ಕಾಣುತ್ತದೆ. ಹಾಗಾಗಿ ಕುದುರೆಜೂಜಿನ ಭಕ್ತ ಅಲ್ಲಿಗೆ ಹೋಗಿದ್ದಿರಬಹುದು! :)

****

ಶಕ್ತಿ & ಸಹನಶಕ್ತಿ

ಭಕ್ತ: ಸ್ವಾಮೀಜಿ, ಸ್ತ್ರೀಯನ್ನು ಶಕ್ತಿ ಅಂತ ಪೂಜಿಸುತ್ತಾರೆ. ಪುರುಷನನ್ನು ಏನಂತ ಪೂಜಿಸಬಹುದು.

ಸ್ವಾಮೀಜಿ: ಪುರುಷನನ್ನು ಏನಂತ ಪೂಜಿಸಬಹುದು ಅಂತ ಗೊತ್ತಿಲ್ಲ. ಆದರೆ ಒಂದು ಮಾತು....

ಭಕ್ತ: ಏನು??

ಸ್ವಾಮೀಜಿ: ವಿವಾಹವಾದ ಪುರುಷನನ್ನು ಮಾತ್ರ ಒಂದು ರೀತಿಯಲ್ಲಿ ಪೂಜಿಸಬಹುದು.

ಭಕ್ತ: ಏನದು?

ಸ್ವಾಮೀಜಿ: ಸಹನಶಕ್ತಿ! (patience, stamina, fortitude)


****

ಮೂಲ: ಸ್ವಾಮಿ ಅನುಭವಾನಂದಜೀ ಅವರ ಪ್ರವಚನಗಳು.

Sunday, July 30, 2017

ಕಾರಂತರ ಪಕ್ಕದಲ್ಲಿ ಇರುವವರು ಯಾರು? ಅವರ ಮಿಸೆಸ್ಸಾ?

೧೯೭೦, ೮೦ ರ ದಶಕದಲ್ಲಾದ ಘಟನೆ. ಖ್ಯಾತ ಸಾಹಿತಿ ಶಿವರಾಮ ಕಾರಂತರಿಗೆ ಎಲ್ಲೋ ಸನ್ಮಾನ ಸಮಾರಂಭ. ಸಂಜೆಯ ಸಮಯ. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಕುಳಿತುಕೊಳ್ಳಲು ಜಾಗವಿಲ್ಲದೆ ಜನ ನಿಂತಿದ್ದರೂ ಕೂಡ. ಹಾಗಿರುವಾಗ ಒಬ್ಬ ತಡವಾಗಿ ಬಂದ. ಸಮಾರಂಭ ಆಗಲೇ ಶುರುವಾಗಿತ್ತು. ಬಂದವನಿಗೆ ಸಮಾರಂಭದ ಬಗ್ಗೆ ಸರಿಯಾದ ಪ್ರಾಥಮಿಕ ಮಾಹಿತಿಯೂ ಇರಲಿಲ್ಲ. ಟೈಮ್ ಪಾಸ್ ಮಾಡಲು ಬಂದಿದ್ದ ಅಂತ ಕಾಣುತ್ತದೆ. ಪಕ್ಕದಲ್ಲಿದ್ದವನ ತಲೆತಿನ್ನತೊಡಗಿದ.

'ಇದು ಎಂತ ಸಮಾರಂಭ ಮಾರಾಯಾ?' ಅಂದ.

'ಗೊತ್ತಿಲ್ಲವಾ? ಕಾರಂತರರಿಗೆ ಸನ್ಮಾನ ಮಾಡುತ್ತಿದ್ದಾರೆ?' ಎಂದು ಉತ್ತರಿಸಿದ ಪಕ್ಕದಲ್ಲಿದ್ದವ.

ಒಹೋ! ವೇದಿಕೆ ಮೇಲಿದ್ದವರಲ್ಲಿ ಒಬ್ಬರು ಕಾರಂತರು ಅಂತ ಗೊತ್ತಾಯಿತು ಅವನಿಗೆ. ಹೆಸರು ಗೊತ್ತಾದ ಮೇಲೆ ದೂರದ ವೇದಿಕೆ ಮೇಲೆ ಅಸ್ಪಷ್ಟವಾಗಿ ಕಾಣುತ್ತಿದ್ದ ವ್ಯಕ್ತಿಗಳಲ್ಲಿ ಕಾರಂತರ ರೂಪರೇಷೆ ಕಂಡುಬಂತು. ಶುದ್ಧ ಬಿಳಿಯ ಬಟ್ಟೆ ತೊಟ್ಟು, ಬಿಳಿಯ ಉದ್ದನೆ ಕೂದಲು ಬಿಟ್ಟುಕೊಂಡಿದ್ದವರು ಕಾರಂತರಲ್ಲದೇ ಮತ್ತ್ಯಾರು ಆಗಿರಲು ಸಾಧ್ಯ?

ಕಾರಂತರ ಪಕ್ಕದಲ್ಲಿ ಯಾರೋ ಕೂತಿದ್ದರು. ಇವನಿಗೆ ಅವರ ಪರಿಚಯವನ್ನೂ ತಿಳಿಯುವ ಹುಕಿ. ಮತ್ತೆ ಜೊತೆಗೆ ತನ್ನ ಊಹೆ ಕಮ್ ಸಾಮಾನ್ಯಜ್ಞಾನವನ್ನೂ ಪ್ರದರ್ಶಿಸಿಸುವ ತಲುಬು.

ಕೇಳಿಯೇಬಿಟ್ಟ.

'ಕಾರಂತರ ಪಕ್ಕದಲ್ಲಿ ಇರುವವರು ಯಾರು? ಅವರ ಮಿಸೆಸ್ಸಾ?'

'ಅಲ್ಲ. ಅವರು ಹಾ.ಮಾ.ನಾಯಕರು!' ಅಂತ ಉತ್ತರ ಬರಬೇಕೆ!?

ಹಾ.ಮಾ.ನಾಯಕ್

ಪಕ್ಕದಲ್ಲಿದ್ದವರು ಕಾರಂತರ ಪತ್ನಿಯೇ ಎಂದು ಕೇಳಿದ್ದು ಅವನ ತಪ್ಪಲ್ಲ ಬಿಡಿ. ಹಾ.ಮಾ.ನಾಯಕರು ನೋಡಲು ಹಾಗೇ ಇದ್ದರು. ಅವರೂ ಬಿಳಿಯ ಕೂದಲನ್ನು ಭುಜದ ವರೆಗೆ ಉದ್ದವಾಗಿ ಬಿಟ್ಟವರೇ. ಅಂತವರು ಕಾರಂತರ ಪಕ್ಕ ಕೂತಿದ್ದಾರೆ. ದೂರದಿಂದ ಸರಿಯಾಗಿ ಕಂಡಿಲ್ಲ. ಸಮಾರಂಭದ ಬಗ್ಗೆ, ಅದರಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳ ಬಗ್ಗೆ ಇವನಿಗೆ ಗೊತ್ತಿಲ್ಲ. ಕಾರಂತರ ಪಕ್ಕದಲ್ಲಿರುವವರು ಕಾರಂತರ ಪತ್ನಿ ಇರಬಹುದು ಅಂತ ಖತರ್ನಾಕ್ ಊಹೆ ಮಾಡಿದ್ದಾನೆ.

ಹಾ.ಮಾ.ನಾಯಕರ ಬಗ್ಗೆ ಈಗಿನ ಮಂದಿಗೆ ಜಾಸ್ತಿ ಗೊತ್ತಿರಲಿಕ್ಕೆ ಇಲ್ಲ. ೧೯೮೦-೯೦ ರ ದಶಕದಲ್ಲಿ ಅವರು ಖ್ಯಾತ ಅಂಕಣಕಾರರು (columnist) ಅಂತ ಹೆಸರು ಮಾಡಿದ್ದರು. ಕನ್ನಡದಲ್ಲಿದ್ದ ೯೦% ಪತ್ರಿಕೆಗಳಲ್ಲಿ ಅವರ ಒಂದಲ್ಲ ಒಂದು ಅಂಕಣ / ಲೇಖನ ಇದ್ದೇ ಇರುತ್ತಿತ್ತು. ತರಂಗ, ಸುಧಾ, ಪ್ರಜಾಮತ, ಕರ್ಮವೀರ ಹೀಗೆ ಯಾವದೇ ವಾರಪತ್ರಿಕೆ ಎತ್ತಿಕೊಳ್ಳಿ. ಪ್ರತಿವಾರ ಹಾ.ಮಾ.ನಾಯಕರ ಅಂಕಣ ಇರಲೇಬೇಕು. ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ ದಿನಪತ್ರಿಕೆಯಲ್ಲೂ ವಾರಕ್ಕೆ ಒಂದೋ ಎರಡೋ ಅಂಕಣ ಇದ್ದೇ ಇರುತ್ತಿತ್ತು. ಜೊತೆಗೆ ಅವರ ಉದ್ದ ಕೂದಲಿನ ಹಸನ್ಮುಖ ಸ್ಟ್ಯಾಂಡರ್ಡ್ ಭಾವಚಿತ್ರ. ಒಟ್ಟಿನಲ್ಲಿ ಹಾ.ಮಾ.ನಾಯಕರು ಮತ್ತವರ ಅಂಕಣ ಗೋಡೆ ಮೇಲಿರುವ ಕ್ಯಾಲೆಂಡರಿನಲ್ಲಿ ಇರುವ ಗಣೇಶ ಇದ್ದಂತೆ. ತಿಂಗಳು, ವರ್ಷ ಬದಲಾದರೂ ಗಣೇಶನ ಚಿತ್ರ ಚಂದವಾಗಿದ್ದು, ಭಯಭಕ್ತಿ ತರಿಸುವಂತಿದ್ದರೆ ಬದಲಾಯಿಸುವದಿಲ್ಲ ನೋಡಿ. ಹಾಗೆ. ಗೋಡೆ ಗಣೇಶ ಈ ನಮ್ಮ ಗಣ(ಹಾ.ಮಾ)ನಾಯಕ.

ಇಂತಹ ಪ್ರಖ್ಯಾತ ಅಂಕಣಕಾರರನ್ನು ಲಂಕೇಶ್ 'ಅಂಕಣಕೋರ' ಅಂತ ಕಿಚಾಯಿಸಿದರು. ಲಂಕೇಶರೇ ಹಾಗೆ. ಒಮ್ಮೆಲೇ ಪ್ರವರ್ಧಮಾನಕ್ಕೆ ಬಂದು ಸಿಕ್ಕಾಪಟ್ಟೆ ಪ್ರೊಡಕ್ಷನ್ ಚಾಲೂ ಮಾಡಿದವರನ್ನು ಕಂಡರೆ ಅವರಿಗೆ ಆಗಿಬರುತ್ತಿರಲಿಲ್ಲ. ಸುಮಾರು ಅದೇ ಸಮಯದಲ್ಲಿ ಕವಿ ಲಕ್ಷ್ಮೀನಾರಾಯಣ ಭಟ್ಟರು ಸಿಕ್ಕಾಪಟ್ಟೆ ಫೇಮಸ್ ಆದರು. ಆಗ ಭಾವಗೀತೆಗಳು ಕ್ಯಾಸೆಟ್ ರೂಪದಲ್ಲಿ ಬಹಳ ಜನಪ್ರಿಯವಾಗಿದ್ದವು. ಸುಗಮಸಂಗೀತದ ಪರ್ವಕಾಲ. ಲಕ್ಷ್ಮೀನಾರಾಯಣ ಭಟ್ಟರು ಅಂತಹ ಕ್ಯಾಸೆಟ್ಟುಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಒದಗಿಸಿದ್ದರು. ಹಾಗಾಗಿ ಅವರೊಬ್ಬ 'ಕ್ಯಾ... ಕ್ಯಾ....ಕ್ಯಾಸೆಟ್ ಕವಿ' ಎಂದು ಝಾಡಿಸಿದ್ದರು ಲಂಕೇಶ್.

ಹಾ.ಮಾ.ನಾಯಕರ ಅಂಕಣ ಪ್ರತಿಯೊಂದು ಪತ್ರಿಕೆಯಲ್ಲಿ ಕಂಡರೂ ಓದಿದ ನೆನಪಿಲ್ಲ. ಅವರು ಬರೆಯುತ್ತಿದ್ದ ವಿಷಯಗಳು ನಮಗೆ ಏನೂ ಆಸಕ್ತಿ ತರಿಸುತ್ತಿರಲಿಲ್ಲ. ತಾವು ಓದಿದ ಹೊಸ ಪುಸ್ತಕಗಳ ಬಗ್ಗೆಯೋ, ನಿಧನರಾದ ಗಣ್ಯವ್ಯಕ್ತಿಗಳ ಬಗ್ಗೆಯೋ ಅಥವಾ ಮತ್ತ್ಯಾವದೋ ಸಮಕಾಲೀನ ವಿಷಯದ ಬಗ್ಗೆಯೋ ಬರೆದಿರುತ್ತಿದ್ದರು. ಆಗ ಇನ್ನೂ ೧೦-೧೨ ವರ್ಷ ವಯಸ್ಸಿನ ನಮಗೆ ಅವು ಯಾವವೂ ಇಂಟೆರೆಸ್ಟಿಂಗ್ ಇರಲಿಲ್ಲ.

'ಕಾರಂತರ ಪಕ್ಕದಲ್ಲಿ ಇರುವವರು ಯಾರು? ಅವರ ಮಿಸೆಸ್ಸಾ?' ಘಟನೆ ಬಗ್ಗೆ ಬರೆದವರು ಪತ್ರಕರ್ತ, 'ಹಾಯ್ ಬೆಂಗಳೂರ್' ಪತ್ರಿಕೆಯ ಸಂಪಾದಕ ರವಿ ಬೆಳಗೆರೆ. ಅವರು ಒಂದು ಕಾಲದಲ್ಲಿ 'ಕರ್ಮವೀರ' ಪತ್ರಿಕೆಯ ಸಂಪಾದಕರಾಗಿದ್ದರು. ಅದಕ್ಕೂ ಅಂಕಣ ಬರೆಯುತ್ತಿದ್ದರಂತೆ ಹಾ.ಮಾ. ನಾಯಕರು. ಖ್ಯಾತ ಅಂಕಣಕಾರ ಅಂದ ಮೇಲೆ ಬರೆಯದೇ ಹೇಗಿದ್ದಾರು? ಮತ್ತೆ ಪತ್ರಿಕೆಯೊಂದು ಖ್ಯಾತ ಅಂಕಣಕಾರ ನಾಯಕರ ಅಂಕಣವನ್ನು ಹೇಗೆ ಬಿಟ್ಟೀತು?

ಸಂಪಾದಕ ರವಿ ಬೆಳಗೆರೆ ಹಾ.ಮಾ.ನಾಯಕರ ಬರವಣಿಗೆಯ ಶಿಸ್ತಿನ ಬಗ್ಗೆ ಒಂದೆರೆಡು ಮಾತು ಬರೆದಿದ್ದರು. ಒಮ್ಮೆ ಒಪ್ಪಂದ ಮಾಡಿಕೊಂಡು, ಸಂಭಾವನೆ ಇಷ್ಟು ಅಂತ ತೀರ್ಮಾನವಾದ ಮೇಲೆ ಮುಗಿಯಿತು. ಹಾ.ಮಾ.ನಾಯಕರ ಬಗ್ಗೆ, ಅವರು ಸಮಯಕ್ಕೆ ಸರಿಯಾಗಿ ಅಂಕಣ ಕಳಿಸುತ್ತಾರೋ ಇಲ್ಲವೋ, ಅಂಕಣ ಸರಿಯಾಗಿ ಇರುತ್ತದೋ ಇಲ್ಲವೋ, ಇತ್ಯಾದಿಗಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇರುತ್ತಿದ್ದಿಲ್ಲ. ನಾಯಕರು ಒಮ್ಮೆ ಒಪ್ಪಿಕೊಂಡರು ಅಂದರೆ ಮುಗಿಯಿತು. ಸಮಯಕ್ಕೆ ಸರಿಯಾಗಿ, ಅಂಕಣದ ಅಳತೆಗೆ ತಕ್ಕಂತೆ, ಸೀದಾ ಕಂಪೋಸ್ ಮಾಡಬಹುದಾದಂತಹ ಲೇಖನ ನಾಯಕರ ಮುದ್ದಾದ ಕೈಬರಹದಲ್ಲಿ ಸಂಪಾದಕರ ಮೇಜಿನ ಮೇಲೆ ಬಂದು ಕೂತಿರುತ್ತಿತ್ತು. ಅಷ್ಟು ಶಿಸ್ತುಬದ್ಧವಾಗಿ, ಕರಾರುವಕ್ಕಾಗಿ ಬರೆದು ಬರೆದು ಒಗಾಯಿಸುತ್ತಿದ್ದರು ಆ ಖ್ಯಾತ ಅಂಕಣಕಾರರು.

ಆರೆಂಟು ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುವದು ಅಂದರೆ ಸುಲಭದ ಮಾತಲ್ಲ. ಪ್ರಥಮವಾಗಿ ವೇಳೆ. Time management. ನಂತರ ವಿಷಯಗಳ ಸಂಗ್ರಹ ಮತ್ತು ಸಂಶೋಧನೆ. ಆಮೇಲೆ ಒಂದು ಖಡಕ್ ಪ್ಲಾನಿಂಗ್. ಏಕೆಂದರೆ ಆಗೆಲ್ಲ ಎಲ್ಲ ಅಂಚೆಯಲ್ಲಿಯೇ ವಿಲೇವಾರಿ ಆಗುತ್ತಿದ್ದವು. ಬೆಂಗಳೂರಿನಲ್ಲೋ, ಹುಬ್ಬಳ್ಳಿಯಲ್ಲೋ ಪತ್ರಿಕೆಯ ಕಾರ್ಯಾಲಯವಿರುತ್ತಿತ್ತು. ಅಲ್ಲಿಗೆ ಹೋಗಿ ಮುಟ್ಟಲು ಸರಾಸರಿ ಎಷ್ಟು ದಿವಸ ಬೇಕಾಗುತ್ತದೆ, ಹೆಚ್ಚುಕಮ್ಮಿಯಾಗಬಹುದು ಅಂತ ಮೇಲಿಂದ ಒಂದೆರೆಡು ದಿನಗಳನ್ನು ಜಾಸ್ತಿ ಸೇರಿಕೊಂಡು, ಎಲ್ಲ ಲೆಕ್ಕಕ್ಕೆ ತೆಗೆದುಕೊಂಡು, ಇಂತಹ ದಿನ ಈ ಅಂಕಣ ಈ ಪತ್ರಿಕೆಗೆ ಹೋಗಿ ಮುಟ್ಟಬೇಕು ಅನ್ನುವ ಬರೋಬ್ಬರಿ ಪ್ಲಾನಿಂಗ್ ಮಾಡಿಕೊಂಡು ಬರೆಯಬೇಕು. ಬರೆದು ಮುಗಿಸಿ, ತಿದ್ದಿ, ಪಕ್ಕಾ ಪ್ರತಿ ತಯಾರು ಮಾಡಿ, ಲಕೋಟೆಗೆ ಹಾಕಿ, ಸರಿಯಾದ ಲೇಖನ ಸರಿಯಾದ ಪತ್ರಿಕೆಗೇ ಹೋಗುತ್ತಿದೆ ಅಂತ ಖಾತ್ರಿ ಮಾಡಿಕೊಂಡು, ಲಕೋಟೆ ಮೇಲೆ ತಪ್ಪಿಲ್ಲದಂತೆ ವಿಳಾಸ ಬರೆದು, ಪೋಸ್ಟಾಫೀಸಿಗೆ ಹೋಗಿ, ಸರಿಯಾದ ಬೆಲೆಯ ಅಂಚೆಚೀಟಿ ಖರೀದಿ ಮಾಡಿ, ಅಂಟಿಸಿ, ಸರಿಯಾದ ಸಮಯಕ್ಕೆ ಟಪಾಲಿಗೆ ಕಳಿಸಬೇಕು. ಈಗಿನ ಕಾಲದ ಹಾಗೆ ಕಂಪ್ಯೂಟರ್ ಮೇಲೆ ಬರೆದು ಇಮೇಲ್ ಮಾಡಿದ ಹಾಗಲ್ಲ. There were many possible points of failure. ಅವನ್ನೆಲ್ಲ ಸರಿಯಾಗಿ ನಿಭಾಯಿಸುತ್ತಿದ್ದ ನಾಯಕರು ಗ್ರೇಟ್. ಹೀಗೆ ಪಕ್ಕಾ ವೃತ್ತಿಪರರಂತೆ ಬರೆದು ಕೊಡುತ್ತಿದ್ದರು ಅನ್ನುವ ಕಾರಣಕ್ಕೇ ಹಾ.ಮಾ.ನಾಯಕರು ಸಂಪಾದಕರೆಲ್ಲರ ಡಾರ್ಲಿಂಗ್! ಕಣ್ಮಣಿ.

ಕೆಲಕಾಲ ಕರ್ಮವೀರದ ಸಂಪಾದಕರಾಗಿದ್ದ ರವಿ ಬೆಳಗೆರೆ ಹಾ.ಮಾ.ನಾಯಕರ 'ಅಂಕಣ ಕಾರ್ಖಾನೆ'ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಲೈಟಾಗಿ ಕಿಚಾಯಿಸುತ್ತಾರೆ ಕೂಡ. ಅವರ ಪ್ರಕಾರ ನಾಯಕರ ಅಂಕಣಗಳು ಪರಮ ಬೋರಿಂಗ್! ಶಿಸ್ತುಬದ್ಧ ಸರಿ. ಆದರೆ ಸೈನ್ಯ ಕವಾಯಿತು ಮಾಡಿದ ಹಾಗೆ ಬರೆದರೆ ಹೇಗೆ? ಓದದೇ ಸೀದಾ ಕಂಪೋಸಿಂಗಿಗೆ ಕಳಿಸುತ್ತಿದ್ದರಂತೆ. ಕಂಪೋಸಿಂಗ್ ಮಾಡಬೇಕಾದವರು ಅಂಕಣವನ್ನು ಓದಬೇಕಾಗುತ್ತಿತ್ತು. ನಾಯಕರ ಬೋರಿಂಗ್ ಅಂಕಣ ಓದುವದು ಕರ್ಮವೀರದಲ್ಲಿ ಕಂಪೋಸಿಂಗ್ ಮಾಡುವವರ 'ಕರ್ಮ'. ಹಾಗಂತ ಅವರ ಜೋಕ್. ಆದರೆ ನಾಯಕರ ಶಿಸ್ತಿನ ಬಗ್ಗೆ, ವೃತ್ತಿಪರತೆಯ ಬಗ್ಗೆ ದೂಸರಾ ಮಾತೇ ಇಲ್ಲ.

ತಮ್ಮ ಪತ್ರಿಕೆಯಲ್ಲಿ ಹಾ.ಮಾ.ನಾಯಕರನ್ನು ನೆನೆದಿದ್ದ ರವಿ ಮತ್ತೊಂದು ವಿಷಯ ಬರೆದಿದ್ದರು. ಹಾ.ಮಾ.ನಾಯಕರ ಬಗ್ಗೆ ಬಹಳ ಚಾಲ್ತಿಯಲ್ಲಿರುವ ಜೋಕ್ ಒಂದಿತ್ತಂತೆ. ಅವರ ಅಂಕಣಕ್ಕೆ ಸಂಬಂಧಪಟ್ಟಿದ್ದೇ. ಮಹಾರಾಷ್ಟ್ರದಲ್ಲಿ ದರೋಡೆ, ಡಕಾಯಿತಿ ಮಾಡಿಕೊಂಡೇ ಜೀವನ ಮಾಡುತ್ತಿದ್ದ ಹರಣಶಿಕಾರಿ ಜನಾಂಗಕ್ಕೆ ಸೇರಿದ ಮುಗ್ಧ, ಅಶಿಕ್ಷಿತ ವ್ಯಕ್ತಿಯೊಬ್ಬ ತನ್ನ ಜೀವನಚರಿತ್ರೆಯನ್ನು ತನ್ನದೇ ಆದ ಶೈಲಿಯಲ್ಲಿ ಮರಾಠಿಯಲ್ಲಿ ಬರೆದುಕೊಂಡಿದ್ದ. ಆ ಪುಸ್ತಕದ ಹೆಸರು 'ಉಚಲ್ಯಾ' ಅಂತ ನೆನಪು. ಆ ಹೊಸ ಪುಸ್ತಕ ತನ್ನದೇ ಕಾರಣಗಳಿಂದ ಸಂಚಲನ ಮೂಡಿಸಿತ್ತು. ಹಾ.ಮಾ.ನಾಯಕರ ಅಂಕಣಕ್ಕೆ ವಿಷಯ ಸಿಕ್ಕಿತು. ತಮ್ಮ ಮುಂದಿನ ಅಂಕಣದಲ್ಲಿ ಅದರ ಬಗ್ಗೆ ಬರೆದರು. ಕೊಟ್ಟ ಶೀರ್ಷಿಕೆ ಮಾತ್ರ ತುಂಬಾ ಮಜವಾಗಿತ್ತು. ನಾಯಕರು ಕೊಟ್ಟ ಶೀರ್ಷಿಕೆ - 'ಗಂಟುಕಳ್ಳರ ಆತ್ಮಕಥೆ'. ಶೀರ್ಷಿಕೆ ಮಜವಾಗಿದ್ದರೂ ತುಂಬಾ ಆಭಾಸವನ್ನು ಉಂಟುಮಾಡುವಂತಿತ್ತು ಅಂದರು ಮರಾಠಿ ಪುಸ್ತಕದ ಬಗ್ಗೆ ಸರಿಯಾಗಿ ತಿಳಿದುಕೊಂಡವರು. ದರೋಡೆ, ಕಳ್ಳತನ ಅವರ ಕುಲಕಸುಬಾಗಿದ್ದರೂ ಅಶಿಕ್ಷಿತ ಮುಗ್ಧನೊಬ್ಬ ಸಾಹಸಪಟ್ಟು ತನ್ನದೇ ಬಾಲಿಶ ಶೈಲಿಯಲ್ಲಿ ಕಷ್ಟಪಟ್ಟು ಬರೆದುಕೊಂಡ ಆತ್ಮಚರಿತೆಗೆ ಹೀಗೆ ತೀರ 'ಗಂಟುಕಳ್ಳರ ಆತ್ಮಕಥೆ' ಅಂದರೆ ಹೇಗೆ!? ಅಂತ ಕೆಲವರ ತಮಾಷೆಭರಿತ ತಕರಾರು. ಉಳಿದವರು ಶೀರ್ಷಿಕೆಯನ್ನು ನೆನಪಿಸಿಕೊಂಡು ಬಿದ್ದು ಬಿದ್ದು ನಕ್ಕರು.

'ಗಂಟುಕಳ್ಳರ ಆತ್ಮಕಥೆ' ಅಂಕಣ 'ತರಂಗ' ವಾರಪತ್ರಿಕೆಯಲ್ಲಿ ಬಂದಿತ್ತು ಅಂತ ನೆನಪು. ಪ್ರತಿ ವಾರ ಹಾ.ಮಾ.ನಾಯಕರ ಅಂಕಣದ ಮೇಲೆ ಕಣ್ಣಾಡಿಸುತ್ತಿದ್ದೆ. ಎರಡು ಲೈನ್ ಓದುವದರಲ್ಲಿ ಬೋರ್ ಹೊಡೆಸುತ್ತಿತ್ತು. ಮುಂದಿನ ಪುಟ ತಿರುವುತ್ತಿದ್ದೆ. ಆದರೆ ಆವತ್ತು ಹಾಗಾಗಲಿಲ್ಲ. ಅಂಕಣ ಓದಿಸಿಕೊಂಡು ಹೋಯಿತು. ನಿಜವಾಗಿಯೂ ಮನಮುಟ್ಟುವಂತೆ ಇತ್ತು. 'ಉಚಲ್ಯಾ' ಅಂತ ಆತ್ಮಕಥೆ ಬರೆದುಕೊಂಡ ಆ ಮನುಷ್ಯ ತನ್ನ ಬಾಲ್ಯದಲ್ಲಿ ಹೇಗೆ ತಿನ್ನಲು ಏನೂ ಇಲ್ಲದ ಕಾರಣ ಹಂದಿಗಳನ್ನು ಕೊಂದು, ಅವುಗಳ ಮಾಂಸ ಸುಟ್ಟುಕೊಂಡು ತಿನ್ನುತ್ತಿದ್ದೆವು ಅಂತ ಬರೆದುಕೊಂಡಿದ್ದನ್ನು ಓದಿದರೆ ಯಾರಿಗಾದರೂ ಒಂದು ತರಹದ ಹೃದಯ ಹಿಂಡುವ ದುಃಖದ ಭಾವನೆ ಬರುವಂತಿತ್ತು.

ರಾಷ್ಟ್ರೀಯ ಮಟ್ಟದಲ್ಲಿ ಖುಷ್ವಂತ್ ಸಿಂಗ್ ಇದ್ದರು. ದೊಡ್ಡ ಅಂಕಣಕಾರ ಅಂತ ಹೆಸರು ಮಾಡಿದ್ದರು. ಅವರೂ ಅಷ್ಟೇ. ಬಿಟ್ಟೂಬಿಡದೇ ಸುಮಾರು ಆರೆಂಟು ಪತ್ರಿಕೆಗಳಿಗೆ, ನಾಲ್ಕಾರು ದಿನಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ಅವರ ವ್ಯಾಪ್ತಿ ಬಹಳ ದೊಡ್ಡ ಮಟ್ಟದ್ದು. ಏಕೆಂದರೆ ಅವರ ಇಂಗ್ಲೀಷ್ ಅಂಕಣಗಳು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡು ಪ್ರಾದೇಶಿಕ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದ್ದವು. ಹಿಂದೊಮ್ಮೆ ಖುಷ್ವಂತ್ ಸಿಂಗ್ ಬಗ್ಗೆ ಬರೆದಿದ್ದೆ.

ಹಾ.ಮಾ. ನಾಯಕರ ಓತಪ್ರೋತ ಅಂಕಣ ಬರವಣಿಗೆ ನೋಡಿದರೆ ಅವರನ್ನು 'ಕನ್ನಡದ ಖುಷ್ವಂತ್ ಸಿಂಗ್' ಅನ್ನಬಹುದೇನೋ! ಈಗ ಇಬ್ಬರೂ ಇಲ್ಲ ಬಿಡಿ.

ನಮ್ಮ ಹವ್ಯಾಸಿ ಬರವಣಿಗೆಗೆ ಬರ ಬಂದು ಪ್ರೋತ್ಸಾಹ, ಸ್ಪೂರ್ತಿ ಬೇಕಾದಾಗ ಇಂತಹ prolific ಲೇಖಕರನ್ನು ನೆನಪು ಮಾಡಿಕೊಳ್ಳುತ್ತೇನೆ. ಇಂತಹ ಮಹನೀಯರನ್ನು ನೆನಪು ಮಾಡಿಕೊಂಡು ನಮ್ಮ ಹವ್ಯಾಸಿ ಬರವಣಿಗೆಗೆ ಕೊಂಚ ಬಿಸಿ ಕಮ್ ಚುರುಕು ಮುಟ್ಟಿಸಿಕೊಳ್ಳುವ ಪ್ರಯತ್ನ. ಓತಪ್ರೋತವಾಗಿ ಪ್ರವಾಹೋಪಾದಿಯಲ್ಲಿ ಬರೆಯುವ prolific ಲೇಖಕರ ಪಟ್ಟಿಯಲ್ಲಿ ಇನ್ನೂ ಹಲವು ಮಹನೀಯರಿದ್ದಾರೆ. ಮಾರ್ಕ್ ಟ್ವೈನ್, ಅರ್ನೆಸ್ಟ್ ಹೆಮಿಂಗ್ವೇ, ನಮ್ಮ ಭೈರಪ್ಪನವರು, ಆಂಗ್ಲ ರೋಚಕ ಕಾದಂಬರಿಗಳ ಕಾರ್ಖಾನೆ ಎಂದೇ  ಬಿರುದಾಂಕಿಂತ ಜಿಮ್ ಪ್ಯಾಟ್ಟೆರ್ಸನ್, ರವಿ ಬೆಳಗೆರೆ, ಮುಂತಾದವರು.

ಹೆಮಿಂಗ್ವೇ ಅಂತೂ, 'Write when drunk. Edit when sober! (ಕುಡಿದು ಚಿತ್ತಾದಾಗ ಬರೆಯಿರಿ. ನಶೆ ಇಳಿದ ಮೇಲೆ ತಿದ್ದಿರಿ!),' ಅಂದುಬಿಟ್ಟ. ಹಾಗಾಗಿ ಹೆಮಿಂಗ್ವೇ ಅಂತಹ ಲೇಖಕನನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವದಾದರೆ ಕೊಂಚ ಎಚ್ಚರ ಅವಶ್ಯ :)

Sunday, July 16, 2017

ಕೈಗುಣ Vs ಮೈಗುಣ

ರೋಗಿ: ಡಾಕ್ಟರ್, ನಿಮ್ಮ ಚಿಕಿತ್ಸೆಯಿಂದ ನನಗೆ ಗುಣವಾಯಿತು. ನಿಮ್ಮ ಕೈಗುಣ ತುಂಬಾ ಚೆನ್ನಾಗಿದೆ.

ಡಾಕ್ಟರ್: ಅಯ್ಯೋ! ಕೈಗುಣ ಮತ್ತೊಂದು ಏನೂ ಇಲ್ಲ. ಎಲ್ಲಾ ನಿಮ್ಮ ಮೈಗುಣ. ನಿಮ್ಮ ಮೈಗುಣ ಚೆನ್ನಾಗಿತ್ತು. ಹಾಗಾಗಿ ನಾವು ಕೊಟ್ಟ ಚಿಕಿತ್ಸೆ ಯಶಸ್ವಿಯಾಯಿತು ಅಷ್ಟೇ.

ರೋಗಿ: ಮೈಗುಣ?? ಹಾಗೆಂದರೇನು??!!

ಡಾಕ್ಟರ್: ಈಗ ನೋಡಿ. ನನ್ನ ಹೆಂಡತಿ ನನ್ನ ಮಗನ ತಲೆ ಮೇಲೂ ಕೈ ಇಡುತ್ತಾಳೆ. ನನ್ನ ತಲೆ ಮೇಲಂತೂ ಇಟ್ಟೇ ಇಡುತ್ತಾಳೆ. (ತಮ್ಮ ಟೇಬಲ್ ಮೇಲಿದ್ದ ಪ್ರೀತಿಯ ಮಗನ ಫೋಟೋ ತೋರಿಸುತ್ತ) ಇವನ ಕೂದಲು ನೋಡಿ. ಎಷ್ಟು ಸೊಗಸಾಗಿ ಬೆಳೆಯುತ್ತಿದೆ. (ತಮ್ಮ ಬೋಡು ತಲೆಯ ಮೇಲೆ ಕೈಯಾಡಿಸುತ್ತ) ಅದೇ ನನ್ನ ಬೋಡು ತಲೆ ನೋಡಿ. ಫುಲ್ ಬಾಂಡ್ಲಿ ಆಗಿಬಿಟ್ಟಿದೆ. ಎರಡೂ ತಲೆಗಳ ಮೇಲೆ ಕೈಯಿಟ್ಟವಳು ಒಬ್ಬಳೇ. ಆದರೆ ಪರಿಣಾಮ ಮಾತ್ರ ಬೇರೆ ಬೇರೆ. ಇದು ಮೈಗುಣವೋ? ಅಥವಾ ಕೈಗುಣವೋ!?

ರೋಗಿ ಮಾತಾಡಲಿಲ್ಲ. ತನ್ನ ತಲೆ ಮೇಲೆ ಕೈಯಾಡಿಸಿದ. ಗರಮ್ಮಾಗಿ ಕಾದಿತ್ತು ಬಾಂಡ್ಲಿ. ಅವನೂ ಅದೇ ಕೇಸೇ.

ಜೋಕ್ ಹೊಡೆದವರು: ಸ್ವಾಮಿ ಅನುಭವಾನಂದ ಸರಸ್ವತಿ.

Friday, July 14, 2017

ಪ್ರಸಾದಬುದ್ಧಿಯಿಂದ ಪ್ರಸನ್ನಭಾವ

ಪ್ರಸಾದಬುದ್ಧಿ. ಇಂತಹ ಶಬ್ದವೊಂದನ್ನು ಮೊದಲು ಕೇಳಿರಲಿಲ್ಲ. ಸುಬುದ್ಧಿ, ದುರ್ಬುದ್ದಿ, ವಿಪರೀತಬುದ್ಧಿಯಂತಹ ಬುದ್ಧಿಗಳನ್ನು ಕೇಳಿದ್ದೆ.

ಪ್ರಸಾದಬುದ್ಧಿ ಅಂದರೆ ದೇವರ ಪ್ರಸಾದ ತೆಗೆದುಕೊಳ್ಳುವಾಗ ಇರುವಂತಹ ಅಥವಾ ಇರಬೇಕಾದಂತಹ ಬುದ್ಧಿ ಅಥವಾ ಮನೋಭಾವ.

ದೇವರ ಪ್ರಸಾದ ಕೊಟ್ಟಾಗ ನಾವು:

೧) ದೂಸರಾ ಮಾತಿಲ್ಲದೆ ತೆಗೆದುಕೊಳ್ಳುತ್ತೇವೆ. ತೆಗೆದುಕೊಳ್ಳಬೇಕು.

೨) ಕೊಟ್ಟಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಜಾಸ್ತಿ ಕೇಳಬಾರದು. ಕೊಟ್ಟದ್ದನ್ನು ವೇಸ್ಟ್ ಮಾಡಬಾರದು.

೩) ಪ್ರಸಾದವು ಅತ್ಯಮೂಲ್ಯವಾದದ್ದು. ಈ ಪವಿತ್ರ ಭಾವನೆಯೊಂದಿಗೆ ತೆಗೆದುಕೊಳ್ಳಬೇಕು.

೪) ಪ್ರಸಾದವನ್ನು ಉತ್ತಮಗೊಳಿಸುವದರ ಬಗ್ಗೆ (improvise ಮಾಡುವದರ) ಬಗ್ಗೆ ಯೋಚಿಸಬಾರದು. ಉದಾ: ಸತ್ಯನಾರಾಯಣ ಪೂಜೆಯ ಪ್ರಸಾದ ಶಿರಾ ತುಂಬಾ ಒಣಒಣ ಆಗಿದೆ. ಜಾಸ್ತಿ ತುಪ್ಪ ಹಾಕಬಹುದಿತ್ತು. ಇಂತಹ ಭಾವನೆಗಳು ಪ್ರಸಾದದ ಬಗ್ಗೆ ಬರಕೂಡದು.

೫) ಪ್ರಸಾದದ ಜೊತೆಗೆ ಮತ್ತೇನನ್ನೂ ಕೇಳಬಾರದು. ಉದಾ: 'ಸತ್ನಾರಣ ಪ್ರಸಾದ ಭಾಳ ಸಿಹಿ ಆತು. ಚಹಾ ಭಾಳ ಸಪ್ಪ ಅನ್ನಸಲಿಕತ್ತದ. ಸ್ವಲ್ಪ ಖಾರದ ಚೂಡಾ ಕೊಡ್ರಿ!' ಎಂದೆಲ್ಲ ಕೇಳಬಾರದು!

ಈ ಐದು ಅಂಶಗಳನ್ನು ಹೊಂದಿದ್ದು ಪ್ರಸಾದಬುದ್ಧಿ. ಈ ಬುದ್ಧಿ induce ಮಾಡುವ ಮನೋಭಾವದಿಂದ ದೇವರ ಪ್ರಸಾದ ತೆಗೆದುಕೊಳ್ಳಬೇಕು.

ಈಗ ಗೇರ್ ಬದಲಾಯಿಸಿ. Change the perspective. ದೇವರು ಕೊಟ್ಟ ನಮ್ಮ ಈ ಜೀವನವೇ ಅತಿ ದೊಡ್ಡ ಪ್ರಸಾದ. ಜೀವನವೆಂಬ ಮಹಾಪ್ರಸಾದವನ್ನು ನಾವು ಪ್ರಸಾದಬುದ್ಧಿಯಿಂದ ಸ್ವೀಕರಿಸಿದರೆ ಪ್ರಸನ್ನಭಾವ ಗ್ಯಾರಂಟಿ. ಅದು ಬಿಟ್ಟು ಜೀವನವನ್ನು ದುರ್ದಾನ ತೆಗೆದುಕೊಂಡಂತೆ ತೆಗೆದುಕೊಂಡರೆ ಅಷ್ಟೇ ಮತ್ತೆ!

ಯೋಚಿಸಬೇಕಾದ ಸಂಗತಿ. ಅಲ್ಲವೇ?


***

ಒಬ್ಬ ಹುಡುಗಿ ಸ್ಟೇಜ್ ಮೇಲೆ ಬಹಳ ಡೌಲು ಬಡಿಯುತ್ತ ಓಡಾಡಿಕೊಂಡಿದ್ದಳು. ನಮ್ಮ ಧಾರವಾಡ ಕಡೆ ಡೌಲು ಬಡಿಯೋದು ಅಂದರೆ ಎಲ್ಲ ತಮ್ಮಿಂದಲೇ ಆಗುತ್ತಿದೆ ಅನ್ನುವ ಮನೋಭಾವದೊಂದಿಗೆ ವರ್ತಿಸಿ ಸ್ಕೋಪ್ ತೆಗೆದುಕೊಳ್ಳುವದು. ಅವಳನ್ನು ಕರೆದು ಕೇಳಿದೆ. 

'ನಿನ್ನ ಹೆಸರು ಏನವಾ?' ಎಂದು ಕೇಳಿದೆ.

'ಭಾವನಾ,' ಎಂದು ನುಲಿದಳು.

'ನಿನ್ನ ಹೆಸರಿನ ಅರ್ಥ ಗೊತ್ತದೇನು??'

'ಗೊತ್ತಿಲ್ಲ. ನೀವೇ ಹೇಳ್ರೀ.'

'ಭಾವ ಅಂದ್ರ ಬೆಲೆ. ನಾ ಅಂದ್ರ ಇಲ್ಲ.'

ಇದನ್ನು ಕೇಳಿದ ಮೇಲೆ 'ಭಾವ ನಾ' ಸ್ಟೇಜ್ ಮೇಲೆಲ್ಲೂ ಕಾಣಲಿಲ್ಲ.

***

ಮಾಸ್ತರ್: ಸತ್ಯವಾನ-ಸಾವಿತ್ರಿ ಕಥೆಯ ನೀತಿ ಏನು?

ತುಂಟ: ಯಮನಿಂದಾದರೂ ಬಚಾವಾಗಬಹದು. ಆದರೆ ಹೆಂಡತಿಯಿಂದ ಬಚಾವಾಗುವದು ಮಾತ್ರ ಅಸಾಧ್ಯ!

ಪತಿವ್ರತೆ ಪತ್ನಿ ಯಮನನ್ನೂ ಗೆಲ್ಲಬಲ್ಲಳು ಎನ್ನುವ ಉತ್ತರ ನಿರೀಕ್ಷಿಸಿದ್ದ ಮಾಸ್ತರ್ರು ಢಮಾರ್!

***

ಸ್ವಾಮಿ ಅನುಭವಾನಂದರ ಮಜೇದಾರ್ ಉಪದೇಶಗಳಿಂದ ಎತ್ತಿದ್ದು.

***

ಇಷ್ಟೆಲ್ಲಾ ತಿಳಿದ ಮೇಲೂ ಜೀವನವನ್ನು ಪ್ರಸಾದಬುದ್ಧಿಯಿಂದ ಸ್ವೀಕರಿಸಿಯೇನೇ ಹೊರತು ಪ್ರಸಾದವನ್ನಲ್ಲ.

ನನಗೆ ತಿನ್ನಲು ಕೊಡುವ ದೇವರ ಪ್ರಸಾದಗಳಲ್ಲಿ ಡ್ರೈಫ್ರೂಟ್ಸ್ ಒಂದು ಬಿಟ್ಟರೆ ಬಾಕಿ ಯಾವದೂ ಸೇರುವದಿಲ್ಲ. ಪಂಚಾಮೃತ, ಸತ್ಯನಾರಾಯಣ ಪ್ರಸಾದಗಳ ಬಗ್ಗೆಯಂತೂ ಹೇಳಲೇಬೇಡಿ. ಕೊಡಲಿಕ್ಕಂತೂ ಬರಲೇಬೇಡಿ. U-turn ನಾಮದವರ ದೇವಸ್ಥಾನಗಳಲ್ಲಿ ಕೊಡುವ ಪುಳಿಯೋಗರೆ, ಮೊಸರನ್ನವಂತೂ ವರ್ಜ್ಯ!

ಹೀಗಾಗಿ ನಾವು ಕಿವಿ ಮೇಲೆ ಇಟ್ಟುಕೊಳ್ಳಬಹುದಾದಂತಹ ಹೂವು ಮತ್ತು ಹಚ್ಚಿಕೊಳ್ಳಬಹುದಾದಂತಹ (ಹಣೆಗೆ ಮಾತ್ರ) ಪ್ರಸಾದಗಳಾದ ಕುಂಕುಮ, ವಿಭೂತಿ, ಅಂಗಾರ, ಭಂಡಾರಗಳನ್ನು ಮಾತ್ರ ಸ್ವೀಕರಿಸುತ್ತೇವೆ. ಪೂರ್ತಿ ಪ್ರಸಾದಬುದ್ಧಿಯಿಂದಲೇ ಸ್ವೀಕರಿಸುತ್ತೇವೆ. ಹೀಗಾಗಿ ಗುಡಿಯಿಂದ ಹೊರಬಂದಾಗ ನಾವು KMF (ಕಿವಿ ಮೇಲೆ ಫ್ಲವರ್). ದೊಡ್ಡ ದೇವಸ್ಥಾನದಿಂದ ದೊಡ್ಡ ಪ್ರಸಾದ ತೆಗೆದುಕೊಂಡು ಬರುವಾಗ ಕಿವಿ ಮೇಲೆ ಫುಲ್ ಲಾಲಬಾಗ್ ಗಾರ್ಡನ್ ಇರುತ್ತದೆ! :)