Sunday, November 22, 2015

ಆಸ್ತಿಕತೆ, ನಾಸ್ತಿಕತೆ...

ಅದೊಂದು ದಿನ ಹೇರ್ ಕಟಿಂಗ್ ಮಾಡಿಸಲು ಹೋಗಿದ್ದೆ. ಕತ್ತರಿಯಾಡಿಸಲು ಶುರುಮಾಡಿದ ಕ್ಷೌರಿಕ ಜೊತೆಗೆ ಮಾತು ಶುರುಹಚ್ಚಿಕೊಂಡ. ನಾನು ಜಾಸ್ತಿ ಮಾತಾಡಲಿಲ್ಲ. ಮೊದಲೇ ಆದಿಮಾನವನ ಲುಕ್ ಇದೆ. ಜಾಸ್ತಿ ಮಾತಾಡುತ್ತ ಮಾತಾಡುತ್ತ ಎಲ್ಲಿಯಾದರೂ ಈ ಪುಣ್ಯಾತ್ಮ ಮಂಗ್ಯಾ ಕಂಡಂಗೆ ಕಾಣುವ ಹಾಗೆ ಕಟಿಂಗ್ ಮಾಡಿಬಿಟ್ಟಾನು ಅಂತ ಆತಂಕ. ಅದಕ್ಕೇ ಸುಮ್ಮನೆ ಅವನ ಮಾತುಗಳನ್ನು ಕೇಳುತ್ತ ತಲೆ ತಗ್ಗಿಸಿ ಕೂತಿದ್ದೆ. ಯಾವದೇ ಭೇದವಿಲ್ಲದೆ ಎಲ್ಲರೂ ತಲೆ ತಗ್ಗಿಸುವದು ಕ್ಷೌರಿಕನ ಮುಂದೆಯೇ ತಾನೇ?

ಕ್ಷೌರಿಕನ ಮಾತು ದೇವರು ದಿಂಡರ ಬಗ್ಗೆ ಹೊರಳಿತು. 'ದೇವರೂ ಇಲ್ಲ. ದಿಂಡರೂ ಇಲ್ಲ. ಎಲ್ಲ ಬೊಗಳೆ!' ಅಂದುಬಿಟ್ಟ. ನಾನೇನಾದರೂ ಹೇಳಬಹುದೇನೋ ಅಂತ ನೋಡಿದ. ಹೇಳಲಿಕ್ಕೆ ಬಹಳವಿತ್ತು. ಆದರೆ ಈ ಪುಣ್ಯಾತ್ಮ ಮೊದಲು ಕೆಲಸ ಮುಗಿಸಲಿ ಅಂತ ಸುಮ್ಮನೆ ಕೂತೆ. ಅವನಿಗೆ ಸ್ವಲ್ಪ ನಿರಾಶೆಯಾಗಿರಬೇಕು. ಅದರೂ ತನ್ನ ನಾಸ್ತಿಕವಾದದ ಇನ್ನಿತರ ವಿಷಯಗಳ ಬಗ್ಗೆ ಕೊರೆಯುತ್ತಲೇ ಇದ್ದ.

ಕಟಿಂಗ್ ಮುಗಿಯಿತು. ಎದ್ದು, ರೊಕ್ಕ ಕೊಟ್ಟು ಹೊರಗೆ ಬಂದೆ. ರಸ್ತೆಗೆ ಬಂದು ನಿಂತೆ. ಆಚೀಚೆ ನೋಡಿದೆ. ಏನೋ ಹೊಳೆಯಿತು. ಮತ್ತೆ ಕ್ಷೌರಿಕನ ಅಂಗಡಿ ಹೊಕ್ಕಿಬಿಟ್ಟೆ.

'ಏನು ಸಾರ್? ವಾಪಸ್ ಬಂದ್ರೀ?' ಅಂದ ಕ್ಷೌರಿಕ.

'ನಿನ್ನ ಅಂಗಡಿಯಲ್ಲಿ ಕ್ಷೌರಿಕರೇ ಇಲ್ಲ! ನಿನ್ನ ಅಂಗಡಿ ಒಂದೇ ಏನು, ಇಡೀ ಜಗತ್ತಿನಲ್ಲೇ ಕ್ಷೌರಿಕರು ಇಲ್ಲವೇ ಇಲ್ಲ!' ಅಂದುಬಿಟ್ಟೆ.

'ಏನಂತ ಮಾತಾಡ್ತೀರಿ? ಈಗ ತಾನೇ ನಿಮಗೇ ಕಟಿಂಗ್ ಮಾಡಿದ್ದೇನಲ್ಲ ಸ್ವಾಮೀ!? ನಾನು ಕ್ಷೌರಿಕನಲ್ಲವೇ?' ಅಂತ ಆಕ್ಷೇಪಿಸಿದ.

'ಇರಬಹುದು. ಆದರೂ ಯಾಕೋ ಸಂಶಯ,' ಅಂದೆ.

'ಹ್ಯಾಂ!?' ಅನ್ನುವಂತೆ ನೋಡಿದ ಕ್ಷೌರಿಕ. ಫುಲ್ ಪ್ರಶ್ನಾರ್ಥಕ ಚಿನ್ಹೆ.

'ಸ್ವಲ್ಪ ಹೊರಗೆ ಬನ್ನಿ. ಒಂದು ನಿಮಿಷ,' ಅಂದೆ.

ಕೆತ್ತುತ್ತಿದ್ದ ಬೋಳನ್ನು ಅರ್ಧಕ್ಕೇ ಬಿಟ್ಟು ಬಂದ. ಬರುತ್ತಿರಲಿಲ್ಲವೇನೋ ಆದರೆ ನಾನು ಚಾಲೆಂಜ್ ಹಾಕಿಬಿಟ್ಟಿದ್ದೇನಲ್ಲ. ಇಡೀ ಜಗತ್ತಿನಲ್ಲಿ ಕ್ಷೌರಿಕರೇ ಇಲ್ಲ ಅಂತ. ಹಾಗಾಗಿ ಗಿರಾಕಿಯನ್ನು ಬಿಟ್ಟು, ಎರಡು ಹೆಜ್ಜೆ ಹಾಕಿ, ಹೊರಗೆ ಬಂದ.

'ಅಲ್ಲಿ ನೋಡು. ಓ, ಇಲ್ಲಿಯೂ ನೋಡು. ಎಲ್ಲಿ ನೋಡಿದರೂ ಉದ್ದುದ್ದವಾಗಿ, ಅಸಡಾ ಬಸಡಾ ಕೂದಲು ಬಿಟ್ಟುಕೊಂಡು ಓಡಾಡುತ್ತಿರುವ ಹಿಪ್ಪಿ ತರಹದ ಜನರೇ ಎಲ್ಲ ಕಡೆ ಕಾಣುತ್ತಿದ್ದಾರೆ. ಯಾರಿಗೂ ಕಳೆದ ಕೆಲವು ತಿಂಗಳಲ್ಲಿ ಕ್ಷೌರವಾದ ಲಕ್ಷಣಗಳಿಲ್ಲ. ನಿಮ್ಮ ಕ್ಷೌರದ ಅಂಗಡಿಯಿರುವ ಬೀದಿಯಲ್ಲಿಯೇ ಇಷ್ಟೊಂದು ಕ್ಷೌರವಿಲ್ಲದ ಜನ ಓಡಾಡಿಕೊಂಡಿದ್ದಾರೆ ಅಂದ ಮೇಲೆ ನಿಮ್ಮ ಅಂಗಡಿಯಲ್ಲಿ ಕ್ಷೌರಿಕ ಇಲ್ಲ ಅಂತಲೇ ಅರ್ಥ. ಅಲ್ಲವೇ?' ಅಂತ ಕೇಳಿದೆ.

ಹಿಪ್ಪಿ (ಸಾಂದರ್ಭಿಕ ಚಿತ್ರ)

ಕ್ಷೌರಿಕ ನನ್ನನ್ನು ಮೇಲಿಂದ ಕೆಳವರೆಗೆ ನೋಡಿದ. ಯಾರೋ ಅಂಡೆ ಪಿರ್ಕಿ ಪಾರ್ಟಿ ಅಂದುಕೊಂಡಿರಬೇಕು. ಆ ಲುಕ್ ಕೊಟ್ಟ.

'ರೀ, ಸ್ವಾಮೀ! ನಮ್ಮ ಅಂಗಡಿಯೊಳಗೆ ಬಂದು, ನನ್ನ ಮುಂದೆ ತಲೆ ತಗ್ಗಿಸಿ ಕೂತರೆ, ಕ್ಷೌರ ಮಾಡಬಲ್ಲೆ. ಅದು ಬಿಟ್ಟು ನಮ್ಮ ಅಂಗಡಿ ಒಳಗೆ ಬರದೇ ರಸ್ತೆಯಲ್ಲಿ ಓಡಾಡಿಕೊಂಡಿದ್ದರೆ ನಾವೇನು ಮಾಡೋಣ? ಹಾಗಂತ ಕ್ಷೌರಿಕರೇ ಇಲ್ಲ ಅಂತ ಅರ್ಥವೇ?' ಅಂತ ಸಣ್ಣಗೆ ಅಬ್ಬರಿಸಿದ.

'ದೇವರು ಇಲ್ಲ ಅಂದೆ ನೋಡು ಅದಕ್ಕೆ ಹೇಳಿದೆ. ದೇವರೂ ಹಾಗೆಯೇ. ಆತನಲ್ಲಿ ಹೋಗಿ, ತಲೆ ಬಗ್ಗಿಸಿ, ಪ್ರಾರ್ಥಿಸಿದರೆ ಮಾತ್ರ ಕೃಪೆ ತೋರಬಲ್ಲ. ಹಾಗೆ ಮಾಡುವದರ ಬದಲಾಗಿ ಹೊರಗೆ ಓಡಾಡಿಕೊಂಡಿದ್ದರೆ ದೇವರಾದರೂ ಏನು ಮಾಡಿಯಾನು? ಅಷ್ಟೇ ವಿನಹ ದೇವರು ಇಲ್ಲ ಎಂದಲ್ಲ,' ಅಂದೆ. ಆತನ ಮರುಮಾತಿಗೆ ಕಾಯಲಿಲ್ಲ. ಹೊರಟುಬಂದೆ.

ತಿರುಗಿ ಮುಖ ನೋಡಿದೆ. ಗರಬಡಿದವನಂತೆ ನಿಂತಿದ್ದ. ದೇವರ ದರ್ಶನವಾಯಿತೋ ದೆವ್ವದ ದರ್ಶನವಾಯಿತೋ ಗೊತ್ತಿಲ್ಲ. ಆತನಿಗೆ ತನ್ನ ನಾಸ್ತಿಕವಾದದ ಬಗ್ಗೆ ಒಂದು ತರಹದ ಸಂಶಯ ಮೂಡಿದ್ದು ಮಾತ್ರ ನಿಜ.

***

Personal Excellence Through The Bhagavad Gita by Swami Sukhabodhananda - ಪುಸ್ತಕದಲ್ಲಿ ಸಿಕ್ಕಿದ್ದು.

of course, ಈ ಕಥೆ ತುಂಬಾ ಬಾಲಿಶ (childish) ಅನ್ನಿಸಬಹುದು ಬಿಡಿ. ಆದರೂ ಇಷ್ಟವಾಯಿತು. ಒಂದು ಕಾಲದಲ್ಲಿ ನಾವೂ ಹೀಗೆಯೇ ಯಬಡರ ಹಾಗೆ (ವಿ)ವಾದ ಮಾಡುತ್ತಿದ್ದೆವು ನೋಡಿ. ಆ ಕಾರಣಕ್ಕೆ ಇಷ್ಟವಾಗಿರಬಹುದು.

ತಲೆ ತಗ್ಗಿಸಿ ಮುಂದೆ ಕೂತು ಪ್ರಾರ್ಥಿಸಿದವರನ್ನು ಮಾತ್ರ ಆ ಭಗವಂತ ಸಲಹುತ್ತಾನೆ. ಇದನ್ನು ನಂಬಲೇಬೇಕು ಅಂತೇನೂ ಇಲ್ಲ. ಆದರೆ ಹಾಗೆ ಪ್ರಾರ್ಥಿಸುವಾಗ ನಂಬಿಕೆ, ಶ್ರದ್ಧೆ ಅನ್ನುವ ಎರಡು elements ಬಹಳ ಮುಖ್ಯ. ಅವುಗಳ ಶಕ್ತಿ ಅದೆಷ್ಟಿರುತ್ತದೆ ಅಂದರೆ ಆಶಿಸಿದ್ದು, ಕೇಳಿದ್ದು ಸಿಕ್ಕೇ ಸಿಗುತ್ತದೆ. ಅದನ್ನು ದೇವರ ಅನುಗ್ರಹ ಅಂತ ನೀವು ಭಾವಿಸುತ್ತೀರಿ. ನಿಮ್ಮದೇ ಶ್ರದ್ಧೆ, ನಿಮ್ಮದೇ ನಂಬಿಕೆ ನಿಮ್ಮಲ್ಲಿ ಚೈತನ್ಯವನ್ನು ಉಕ್ಕಿಸಿ ಸಾಧನೆಯಾಗಿರುತ್ತದೆ. ಅಥವಾ ಕಷ್ಟ ಪರಿಹಾರವಾಗಿರುತ್ತದೆ. underlying principle ಅಂದರೆ ಅದೇ ಶ್ರದ್ಧೆ. ಅಂತಹದೊಂದು ಅಚಲ ಶ್ರದ್ಧೆ (unshakable faith) ಯಾವದರಲ್ಲಿ ಇದ್ದರೂ ಸರಿ. ಕೆಲವರಿಗೆ ದೇವರ ಮೇಲೆ ನಂಬಿಕೆ, ಶ್ರದ್ಧೆ ಇರಲಿಕ್ಕಿಲ್ಲ. ಅಂದರೆ ದೇವರು ಎಂಬ concept ಮೇಲೆ ನಂಬಿಕೆ ಇರಲಿಕ್ಕಿಲ್ಲ. ಆದರೆ ತಮ್ಮ ಮೇಲೆಯೇ ಫುಲ್ ವಿಶ್ವಾಸ, ಶ್ರದ್ಧೆ, ನಂಬಿಕೆ ಎಲ್ಲ ಇರುತ್ತದೆ. ಅವರೂ ಸಾಕಷ್ಟು ಸಾಧನೆ ಮಾಡುತ್ತಾರೆ. ಕರ್ಮಾನುಸಾರ. ಇನ್ನು ಕೆಲವರು ರಾಜಕೀಯ ನಾಯಕರನ್ನು ದೇವರು ಅಂತ ನಂಬುತ್ತಾರೆ. ದೇವರಿಗಿಂತ ಹೆಚ್ಚಾಗಿ ಆರಾಧಿಸುತ್ತಾರೆ. ಆ ನಂಬಿಕೆ, ಶ್ರದ್ಧೆಗಳೂ ಫಲ ಕೊಡುತ್ತವೆ.

ಶ್ರದ್ಧೆ ಇಲ್ಲವಾದರೆ ಏನೂ ಕೈಹಿಡಿಯುವದಿಲ್ಲ. ಅದು ಮಾತ್ರ ನಿಜ. ಆಸಕ್ತಿಯಿಲ್ಲದ ವಿಷಯಗಳಲ್ಲಿ ಶ್ರದ್ಧೆ ಮೂಡಿಸಿಕೊಳ್ಳುವದೂ ಕಷ್ಟ. ಒಂದೋ ಗುರುಹಿರಿಯರು ಹೇಳಿದ್ದನ್ನು ಕೇಳಿ, ನಂಬಿ, ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವದು. ಅದು ಬಿಟ್ಟರೆ ಯಾವದರಲ್ಲಿ ಆಸಕ್ತಿಯಿರುತ್ತದೋ ಅದನ್ನೇ ಶ್ರದ್ಧೆಯಿಂದ ಮಾಡುವದು. ಮೊದಲನೇಯದು ಸುರಕ್ಷಿತ. ಯಾಕೆಂದರೆ ಗುರುಹಿರಿಯರು ಹೇಳಿದ್ದು ಒಮ್ಮೆಲೇ ಪಥ್ಯವಾಗದಿದ್ದರೂ ಅವುಗಳ ಮಹತ್ವ ನಂತರ ತಿಳಿಯುತ್ತದೆ. ಯಾಕೆಂದರೆ ಅವರು ತಮಗೆ ಹೊಳೆದಿದ್ದನ್ನು ಹೇಳಿರುವದಿಲ್ಲ. ಅದಕ್ಕೊಂದು ಧರ್ಮದ ತಳಹದಿ ಇರುತ್ತದೆ. ಆಸಕ್ತಿಯಿರುವದನ್ನೇ ಶ್ರದ್ಧೆಯಿಂದ ಮಾಡುತ್ತೇವೆ ಅಂದರೆ careful ಆಗಿರಿ ಅಂತ ಹೇಳಬೇಕಾಗುತ್ತದೆ. ಆಸಕ್ತಿಯಿರುವದೆಲ್ಲ ಒಳ್ಳೆಯದೇ ಆಗಿರಬೇಕೆಂದೇನೂ ಇಲ್ಲವಲ್ಲ. ಹಾಗಾಗಿ ಶ್ರದ್ಧೆಯನ್ನು ಎಲ್ಲಿಡುತ್ತೀರಿ ಅನ್ನುವದರ ಬಗ್ಗೆ ಸ್ವಲ್ಪ ಖಬರು ಇರಲಿ.

ಏನೇ ಇರಲಿ. ಏನೇ ಮಾಡಲಿ. ಶ್ರದ್ಧೆ ಮಾತ್ರ ಕುಂದದಿರಲಿ.

Thursday, November 19, 2015

Build your networks slowly and steadily...just the way nature does everything

Your network creates your net worth. - Sam Crowley

May be. Just know one thing - Net worth is not same as the self worth.

Build, enhance, nurture your networks. Fine. But like everything else in nature, let it happen naturally. Stop posturing to build fake relationships / networks, whether it is personal or professional.

As part of annoying corporate posturing, please stop inviting me to a quick coffee or even more ridiculous quick bite. That is what I call insufferable posturing. If our professional relationship is meant to develop into a fabulous win-win proposition, it will happen at its own time, at its own pace as long as you are fair to me. Be loyal. Be friendly. Deliver on your commitments. Be trustworthy. Be punctual and most importantly not a corporate a*$hole. I offer all this. That's why I expect and demand them in return.

Coffee people, quick bite people who forget their commitments or show up late to appointments because they were doing coffee or whatever else with others, forget it. You are just not going to jell with me. Coffee time, lunch time are my zen times. At those times, I rather enjoy my solitude than your company however nice you may be. And I don't drink my coffee quickly. And food, I eat leisurely and not quickly BITE! You do all that and that's why you carry Tums or whatever similar antacid shit wherever you go! Result of poor eating habits. What else you expect if you keep on doing quickie after quickie!?

Invite me to a meeting, working session, brainstorming session. That's fine. I will even show up 5 minutes ahead of time. Let's get some work done in a focused and disciplined manner. Let's repeat that. The feeling of accomplishment / achievement that follows will build the relationship slowly but steadily. No number of quickies, be it coffee or bite, going to get us there. Got it?

All my longstanding relationships, whether at work or elsewhere, have taken long time and a lot of time. They are all slow cooked to perfection. Somebody connecting with me on LinkedIn or Facebook and then expecting such a connection to leapfrog into a longstanding, solid relationship in one or ten stupid Starbucks visits (which I hate) is simply deluded. Move on.

PS: Not directed towards anybody in particular. Just my thoughts on what goes on at corporate workplaces. I do not have any such annoying people at work or elsewhere for which I am very grateful.

* Copied from my Facebook status

Be good. Do good. And don't forget to share and inspire.

Share your good deeds on Facebook. You don't know who is going to be inspired by you and your good deeds and do similar good deeds. An example - I have been a supporter of micro-credit financing organization KIVA for last 10+ years. I have made several loans. Every time a loan is repaid, I send it back to the system in the form of another loan. Yesterday, I saw that my account had enough repayments to make another loan. I logged into KIVA, selected the first open loan and made the loan. At the end, I was offered with an option to share my latest loan and loan details, business details for which the loan has been made, etc. on the Facebook. I just hit 'share' and forgot about it.

Apparently, a college friend of mine saw it little later on FB. It seems he is passionate about the underlying technology / business for which I had made the loan. I had not even checked what I was making the loan for. That's not important for me. Later I came to know from my friend that it was for some solar products & related business. He is very passionate about solar technology and everything related to it. So he jumped on it and made his loan also to the same business.

I came to know all this only when he messaged me on FB later and asked some details. He was thankful that I shared my loan details on FB and it helped him to find something that he was passionate about and looking for an opportunity to make a difference.

While growing up, many of us have been taught not to share much news or talk much about our small little good deeds. I still think twice while sharing my donations, KIVA loans etc. on FB because of that deeply ingrained training 'You should never 'brag' about your donations, charities etc. in public' But now I am convinced that there is nothing wrong in sharing the facts objectively without having to brag about it. You don't know when you may inspire someone else do something similar or even better on much much larger scale.

If somebody misconstrues it as 'bragging', it is their problem. In all probability, such people just talk, do time pass and do no good. NADA. Who cares!?

Be good. Do good. And don't forget to share and inspire.

If you want to make small loans that make big difference, go to www.kiva.org.

* Copied from Facebook status.

Tuesday, November 17, 2015

Perils of attachment - a little story

A man was on his deathbed. Then a monk came and said, 'Be ready to leave. I will take you to the heaven.' The man was not yet ready to die. He said, 'Bless me with some more time on this earth, please.' The monk was surprised. 'Here I am showing him the path to the heaven and the liberation from this painful 'Samsara' and this man wants to prolong painful life on the earth,' he thought. But, as wished by the man, he gave him some more time and left.

After some months the monk returned. He was surprised to find that the man had in fact died but had chosen to be reborn as a cow. He asked why he had chosen to be born as a cow. The man said, 'My sons became parents. A lot of grand kids in the house. They all need milk badly. I could not see them going without adequate supply of milk. So, I became a cow.' The monk shook his head in disbelief and went away. He had come to take the man to heaven but instead had to grant the cow some more time so that it could get the satisfaction of feeding all the kids. 'Attachment! Attachment! This is one hard attachment to give up,' so saying the monk left.

The monk showed up once again after sometime. This time the man, who had become a cow, had died but had chosen to be born as a dog. 'What happened this time? Why have you become a dog?' the monk asked in surprise. The man said,'There is so much crime everywhere. I am concerned about the safety of my children, grand children, their property etc. Somebody needs to guard them and protect them. So, I became a dog this time. I know my time has come to die and go to heaven. But, I want to live some more time as a dog to complete my guard duty.' Once again monk left shaking his head muttering 'Attachment! Attachment! This is one hard attachment to give up.'

The monk returned for the third time to enable the man to reach the heaven. To his big surprise the man who was a dog last time had chosen to be born as a snake this time. The snake had chosen a corner to live and was guarding something zealously. 'What's up this time my man? Why one more rebirth rather than taking up the best offer of going to heaven and being liberated from this endless cycle of rebirths? Why one more rebirth? That too as a snake?' The man, now in the form of a snake, answered, 'I earned so much of money in my lifetime. I am not sure if my children and grandchildren can manage it properly. So I chose to be reborn as a snake. Who can guard the money better than a snake? I know. I know. I know it's time for me to go heaven and become one with the Lord. But, I want some more time on this earth as a snake. I just can't let all this money get squandered. Hard earned money. You know?'

The monk shook his head in utter disgust. 'Here is a man who, because of his good deeds, has the good fortune of making into heaven and be with the Lord. But, look at him and his attachment to his worldly life. He has extended his life three times now. That too choosing to be born as lower and more lower creatures. He needs some strong medication and that too a heavy dose,' so thinking, he came up with a idea.

He screamed at the top of his voice, 'Snake! Snake! I just saw a big snake here!' Everyone came out and started looking for the snake. They were all scared that there was a snake in the vicinity and had to find it and get rid of it for their own safety and peace of mind.

The snake hid itself. But they searched everywhere and found it. They thrashed it mercilessly. They did not know that it was their father, grand father which had donned the forms of a cow, a dog and now a snake. They did not know nor did they care that the snake was guarding their vast fortune. They just wanted to kill the snake. Somehow the snake managed to escape. It had been thrashed black and blue. It hid somewhere. The children were super happy when they found the treasure the snake was guarding. As soon as they found so much money hidden they forgot about the snake and everything else and got busy with making plans about how to spend all that money.

The injured snake saw all this and it finally realized, 'How stupid I was being so much attached to my family and to this worldly life. It was fair and expected out of me that I had to take care of my family and provide for them in my life. But when the time came to die and go to the Lord, it was time to shed all those attachments and move on. I wasted that opportunity not once but three times. I was so mired in all these worldly attachments that I did not even mind being reborn not once but three times as lower and still lower creatures. And what did I get for all this trouble? Almost got killed by own folks. It is time go,' so thinking the man prayed for the monk. The monk appeared smiling and no words were necessary this time. The man was finally ready to join him to be lead to the heaven. The snake shed its body finally. Since the man's ignorance (Ajnana) had been finally cured, he did not choose to or have to be reborn again. He joyfully left with monk and became one with the Lord.

==

Swami Sukhabodhananda told this story in his book - Adi Shankaracharya's Bhaja Govindam by Swami Sukhabodhananda. I was so impressed by it that I had to write it up in my own words and in the way I understood. Excellent little book. Highly recommended.

==

Copied from my Facebook status.

Saturday, November 14, 2015

PARIS attacks - a wake up call for all countries

If you don't take the battle to their doorstep, they will surely bring it to yours.

After the Paris attacks, many countries may be still sitting complacently and thinking, 'Oh well! We are safe. Such attacks don't happen in our countries. As long ISIS or whatever does not bother us, why worry about them? Why attack them proactively?' This is the biggest mistake all those countries, especially the western countries that terrorists despise so much, can make. If you don't go after them, they will come after you. As simple as that.

Israel which has been tormented by terrorism ever since its inception has a very simple but powerful counter-terrorism formula. That is to relentlessly go after the terrorist leaders who sit in the comforts of some supporting country and plan this kind of operations. Make their lives really miserable. Kill them by any means. Once people start fearing for their lives and start watching their backs constantly, they can't plan this kind of attacks so easily. They are always worried when the covert operators from some country may target them.

This is exactly what Israel started doing after its athletes were first kidnapped and then killed during Munich Olympics (1972). It went after the PLO terrorist leaders and killed them one after another in spectacular operations all over the world. Last one to perish was Atef Beisiso in 1992. For 20 years Israelis were going after the terrorists responsible for 1972 Olympics massacre planning.

Once Israelis found the effectiveness of this counter-terrorism formula, they kept on improvising it and today their Kidon unit of Mossad has become such a powerful killing machine that it can carry out covert operations anywhere in the world with lethal stealth and precision. That has instilled the fear of GOD in every terrorist, regardless of his affiliation, who sits planning the next operation against Israel. An attack from Israelis is always at the front of his mind and significant portion of his energy and time is spent warding off such attacks. That stunts his ability to attack Israel.

In recent history Israelis killed Imad Mugniyeh, a Hezbollah big-shot, in the heart of Damascus, Syria. Blew up his vehicle. Killed the top weapons procurer of Hamas in Dubai. And many many more operations about which we will never come to know.

So, if anything has to be learned from PARIS attacks is you have to take the fight to them and not wait for it to come to you. Offense is the best defense. And random bombings of ISIS bases won't help much. That will only annihilate their cannon fodder (i.e. cheap worker bees). They can get many more idiots dime a dozen. Surgical covert operations aimed at eliminating the terrorist leadership are needed. Like the one that 'evaporated' Jihadi John of ISIS yesterday.

Look at Israel. No such attacks have happened and my prediction is will never happen there. Not on this scale. During 1990s many suicide bombings happened in Israel but not on this scale of mayhem.

All countries have a lot to learn from Israelis when it comes to counter-terrorism.

(Copied from my Facebook status)

Friday, November 13, 2015

ಡಾಕ್ಟರ್ ಕೊಟ್ಟ ಇಂಜೆಕ್ಷನ್, ಸಿಹಿ ಸಿರಪ್ - ಅವೇ ಅಂದಿನ ದೀಪಾವಳಿಯ ವಿಶೇಷ

೧೯೭೮ ರ ದೀಪಾವಳಿ. ಅಂದರೆ ಮೂವತ್ತೇಳು ವರ್ಷಗಳ ಹಿಂದೆ. ಆ ದೀಪಾವಳಿ ಮಾತ್ರ ಪ್ರತಿವರ್ಷ ಮುದ್ದಾಂ ನೆನಪಾಗುತ್ತದೆ. ಅದು ಸ್ಪೆಷಲ್ ದೀಪಾವಳಿ.

ಏನು ಸ್ಪೆಷಲ್ ಆ ದೀಪಾವಳಿಯದು? ಅಯ್ಯೋ! ಆ ಒಂದು ವಾರ ಫುಲ್ ಜ್ವರ ಬಂದು ಬಕ್ಕಾ ಬೋರಲಾಗಿ ಮಲಗಿಸಿಬಿಟ್ಟಿತ್ತು. ದೀಪಾವಳಿಯ ಎಲ್ಲ ಪ್ಲಾನುಗಳು ಫುಲ್ ಚೌಪಟ್. ಎಷ್ಟೊಂದು ಪಟಾಕಿ ತಂದಿಟ್ಟುಕೊಂಡಿದ್ದೆ. ಸಿರ್ಸಿ ಕಡೆಯಿಂದ ಬಂದಿದ್ದ ನೆಂಟರೂ ಮತ್ತೊಂದಿಷ್ಟು ರೊಕ್ಕ, ಪಟಾಕಿ ಕೊಟ್ಟು ಹೋಗಿದ್ದರು. ಅದು ಬೋನಸ್. ಮತ್ತೆ ಖಾದ್ಯಗಳಂತೂ ಬಿಡಿ. ಅವು ಇದ್ದದ್ದೇ. ದೀಪಾವಳಿ ಫರಾಳ ಮುಕ್ಕುವದು ಇದ್ದೇ ಇರುತ್ತದೆ. ಮನೆ ಫರಾಳ, ಮಂದಿ ಮನೆ ಫರಾಳ ಎಲ್ಲ ಕೂಡಿಯೇ ಮುಕ್ಕುವದು.

ಹೀಗೆ ಏನೇನೋ ಪ್ಲಾನ್ ಮಾಡಿಕೊಂಡರೆ ಭರ್ಜರಿ ಜ್ವರ ಬಂದು ಅಮರಿಕೊಂಡುಬಿಡಬೇಕೇ!? ಎಲ್ಲ ಫುಲ್ ಶಿವಾಯ ನಮಃ! ಫುಲ್ ಬೆಡ್ ರೆಸ್ಟ್.

ಆ ದೀಪಾವಳಿಗೆ ಸಿಹಿ ಅಂತೇನಾದರೂ ಸೇವಿಸಿದ್ದರೆ ಅದು ಡಾಕ್ಟರ್ ಕೊಟ್ಟ ಸಿಹಿ mixture ಮಾತ್ರ. ಆ ಕಾಲದಲ್ಲಿ ಮಕ್ಕಳಿಗೆ ಡಾಕ್ಟರ್ ಮಂದಿಯೇ ನಾಲ್ಕಾರು ಔಷಧಿ ಮಿಕ್ಸ್ ಮಾಡಿ ಒಂದು ತರಹದ ಸಿರಪ್ ಮಾಡಿಕೊಡುತ್ತಿದ್ದರು. ಥಂಡಿ, ಕೆಮ್ಮು, ಜ್ವರ ಬಂತು ಅಂದರೆ ಒಂದಿಷ್ಟು ಬಿಳಿ ಮಾತ್ರೆ ಮತ್ತು ಸಿರಪ್ mixture. ಅದೇ ಖಾಯಂ. ಜ್ವರ ಜಾಸ್ತಿಯಾದರೆ ಒಂದೋ ಎರಡೋ ಇಂಜೆಕ್ಷನ್. ಅಂಗಡಿಯಿಂದ ಮೆಡಿಸಿನ್ ತರಬೇಕು ಅನ್ನುವ ಪರಿಸ್ಥಿತಿ ಕಮ್ಮಿ. ಹಾಗಿತ್ತು ಆಗಿನ ಕಾಲ.

ಈ ಸಿರಪ್ ಕೆಲವು ಡಾಕ್ಟರ್ ಜನ ಸ್ವಲ್ಪ ಸಿಹಿಯಾಗಿ ಮಾಡಿಕೊಡುತ್ತಿದ್ದರು. ಹಾಕುವ ಬೇಸ್ ಸಿಹಿ ಇರುತ್ತಿತ್ತು. ಆ mixture ನ್ನು ಸಿಹಿಯಾಗಿ ಮಾಡಲೂ ಬರುತ್ತದೆ ಅಂತ ಗೊತ್ತಾಗಿದ್ದೇ ಆ ೧೯೭೮ ರ ದೀಪಾವಳಿಗೆ ಜಡ್ಡು ಬಿದ್ದಾಗ. ಅದಕ್ಕೆ ಕಾರಣವೂ ಇತ್ತು. ನಮ್ಮ ರೆಗ್ಯುಲರ್ ಫ್ಯಾಮಿಲಿ ಡಾಕ್ಟರ್ ಆಗಿದ್ದ ಡಾ. ಜೀ.ಟಿ. ಪಾಟೀಲರು ಎಲ್ಲೋ ರಜೆ ಮೇಲೆ ಹೋಗಿಬಿಟ್ಟಿದ್ದರು ಅಂತ ಕಾಣುತ್ತದೆ. ಅವರಿದ್ದಿದ್ದರೆ ಕೆಟ್ಟ ಕಹಿಯಾಗಿರುತ್ತಿದ್ದ mixture ಮಾಡಿಕೊಟ್ಟುಬಿಡುತ್ತಿದ್ದರು. ಅದು ಅವರ ಟ್ರೇಡ್ಮಾರ್ಕ್ mixture. ಅದರ ಕೆಟ್ಟ ಕಹಿ ರುಚಿಗೇ ಅರ್ಧ ಆರಾಮ್ ಆಗಿಬಿಡುತ್ತಿತ್ತು. ಯಾಕೆಂದರೆ ಅದನ್ನು ಕುಡಿಯಲು ಅಷ್ಟು ಕಷ್ಟ ಪಡಬೇಕಾಗುತ್ತಿತ್ತು. ಮಾತ್ರೆಗಳನ್ನೇ ಕುಟ್ಟಿ ಪುಡಿಮಾಡಿ, ನೀರು ಬೆರೆಸಿ ಕೊಟ್ಟುಬಿಡುತ್ತಿದ್ದರು ಡಾಕ್ಟರ್ ಜೀ.ಟಿ.ಪಾಟೀಲ. ನಮ್ಮದೇ ಬಾಟಲಿಯಲ್ಲಿ ತುಂಬಿಸಿಕೊಂಡು ಬಂದು, ಕುಡಿದು, ನಮ್ಮ ಜ್ವರ ನಾವು ಬಿಡಿಸಿಕೊಳ್ಳಬೇಕು. ಜ್ವರ ಒಂದೇ ಏನು ಆ ಕಹಿ ಸಿರಪ್ ರುಚಿಗೆ ಮೈಯಲ್ಲಿ ದೆವ್ವವಿದ್ದರೂ ಓಡಿಹೋಗಬೇಕು. ಹಾಗಿರುತ್ತಿತ್ತು ಡಾ. ಜೀ.ಟಿ.ಪಾಟೀಲರ ಔಷಧ.

ಅದು ಏನೋ ಆಗಿ ಆ ಹೊತ್ತಿನಲ್ಲಿ ಜೀ.ಟಿ.ಪಾಟೀಲರು ಇರಲಿಲ್ಲ. ಅವರಿಲ್ಲ ಅಂದರೆ ನಂತರದ alternative ಡಾಕ್ಟರ್ ಅಂದರೆ ಕಮಲಾಪುರ ಡಾಕ್ಟರ್ ಬಾಯಿ (ಮೇಡಂ). ಧಾರವಾಡದ ಕಮಲಾಪುರ ಮನೆತನವೇ ದೊಡ್ಡ ಡಾಕ್ಟರ್ ಮನೆತನ. ಪ್ರಸೂತಿ ತಜ್ಞರು ಮತ್ತು ಹೆರಿಗೆ ಆಸ್ಪತ್ರೆ ಮಾಲೀಕರು. ನಾನು ಹುಟ್ಟಿದ್ದೇ ಅಲ್ಲಿ. ಅಂತಹ ಕಮಲಾಪುರ ಹಿರಿಯ ಡಾಕ್ಟರರ ಸೊಸೆ ಈ ಕಮಲಾಪುರ ಡಾಕ್ಟರಣಿ ಬಾಯಿ. ಚಿಕ್ಕಮಕ್ಕಳ ತಜ್ಞರು (pediatrician) ಆಗಿದ್ದರು ಅಂತ ನೆನಪು. ಆದರೆ ಜನರಲ್ ಪ್ರಾಕ್ಟೀಸ್ ಸಹಿತ ಮಾಡಿಕೊಂಡಿದ್ದರು.

ಆಗಿನ ಕಾಲದಲ್ಲಿ ಡಾಕ್ಟರ್ ಜನ ಮನೆಗೇ ಬಂದು ನೋಡಿ ಹೋಗುವ ಹೌಸ್ ವಿಸಿಟ್ ಪದ್ಧತಿ ಇತ್ತು. ದೊಡ್ಡ ಮನಸ್ಸಿನ ಡಾಕ್ಟರ ಮಂದಿ. ಬೆಳಿಗ್ಗೆ ಒಂದು ಸುತ್ತು ತಮ್ಮ ಕ್ಲಿನಿಕ್ ನಲ್ಲಿ ಪೇಷಂಟುಗಳನ್ನು ನೋಡಿ, ಸುಮಾರು ಮಧ್ಯಾನ ಹನ್ನೆರೆಡು ಘಂಟೆ ಹೊತ್ತಿಗೆ ಹೌಸ್ ವಿಸಿಟ್ ಗಳಿಗೆ ಹೊರಡುತ್ತಿದ್ದರು. ಮೊದಲೇ ಹೋಗಿ ಹೇಳಿಬರಬೇಕಾಗುತ್ತಿತ್ತು. ಮತ್ತೆ ಅದಕ್ಕಂತ ಜಾಸ್ತಿ ಚಾರ್ಜ್ ಮಾಡಿದ್ದು ನೆನಪಿಲ್ಲ. ರೆಗ್ಯುಲರ್ ಫೀ. ಮತ್ತೆ ಎಲ್ಲರೂ ಪರಿಚಯದವರೇ. ಮನೆಗೆ ಬಂದು, ಪೇಷಂಟ್ ನೋಡಿ, ಮನೆ ಮಂದಿ ಜೊತೆ ಒಂದು ನಾಲ್ಕು ಮಾತಾಡಿ, ಚಹಾ ಪಹಾ ಕುಡಿದು ಹೋಗುತ್ತಿದ್ದರು ಡಾಕ್ಟರ್ ಮಂದಿ. ನಂತರ ಯಾರಾದರೂ ಹೋಗಿ ಔಷಧಿ, ಗುಳಿಗೆ ತಂದರೆ ಆಯಿತು. ಅದನ್ನೂ ಪೇಷಂಟ್ ಮನೆಯಲ್ಲೇ ಮಾಡಿಕೊಡುವ ಅವಿಷ್ಕಾರ ಆಗಿರಲಿಲ್ಲ. ಈಗ ಬಿಡಿ. ಮನೆ ವಿಸಿಟ್ ಯಾವ ಡಾಕ್ಟರ್ ಕೂಡ ಮಾಡಲಿಕ್ಕಿಲ್ಲ. 'ಸೀದಾ ಆಸ್ಪತ್ರೆಗೆ ಅಡ್ಮಿಟ್ ಮಾಡಿಬಿಡಿ. ಅಲ್ಲೇ ಬಂದು ನೋಡುತ್ತೇವೆ,' ಅನ್ನುತ್ತಾರೇನೋ ಈಗ. ಆದರೆ ಯೂರೋಪಿನ ಕೆಲವೊಂದು ದೇಶಗಳಲ್ಲಿ ಮನೆ ವಿಸಿಟ್ ಪದ್ಧತಿ ಇನ್ನೂ ಇದೆ ಅಂತ ಓದಿದ ನೆನಪು. ಅದೂ ಸರ್ಕಾರಿ ಖರ್ಚಿನಲ್ಲಿ. ಪುಣ್ಯವಂತರು ಬಿಡಿ ಅಲ್ಲಿಯವರು.

ಸರಿ. ನಾನು ಜ್ವರ ಬಂದು, ನರಳುತ್ತ ಮಲಗಿಬಿಟ್ಟಿದ್ದೆ. ಎದ್ದು ಡಾಕ್ಟರ ಕ್ಲಿನಿಕ್ಕಿಗೆ ಹೋಗುವಷ್ಟೂ ಕಸುವು ಇರಲಿಲ್ಲ. ಫುಲ್ ಫ್ಲಾಟ್ ಆಗಿಬಿಟ್ಟಿದ್ದೆ. ಹೋಗಿ ಹೇಳಿಬಂದರು ಕಮಲಾಪುರ ಡಾಕ್ಟರ್ ಬಾಯಿಗೆ. ಅವರ ಹತ್ತಿರ ಟ್ರೀಟ್ಮೆಂಟ್ ತೆಗೆದುಕೊಂಡಿದ್ದು ಅದೇ ಮೊದಲಿರಬೇಕು. ಮಾಳಮಡ್ಡಿಯ ಮೇನ್ ರೋಡ್ ಮೇಲಿದ್ದ ಅವರ ಮನೆ, ಕ್ಲಿನಿಕ್  ಮುಂದೆ ಸಾವಿರ ಸರ ಓಡಾಡಿದರೂ ಅವರ ಬೋರ್ಡ್ ನೋಡಿ ಹೋಗುತ್ತಿದ್ದೆನೇ ಹೊರತೂ ಒಳಗೆ ಹೋಗಿರಲಿಲ್ಲ. ಈಗ ಮೈಯಲ್ಲಿ ಸ್ವಲ್ಪ ಕಸುವಿದ್ದರೆ ಹೋಗುತ್ತಿದ್ದೆನೋ ಏನೋ. ಇರಲಿಲ್ಲ. ಹಾಗಾಗಿ ಹೋಗಲಿಲ್ಲ. ಡಾಕ್ಟರ್ ಬಾಯಿಯೇ ಮನೆಗೆ ಬಂದರು. ತಂದೆಯವರೋ, ಅಣ್ಣನೋ ಹೋಗಿ ಪಾಳಿ ಹಚ್ಚಿ ಬಂದಿದ್ದರು ಅಂತ ಕಾಣುತ್ತದೆ. ಸುಮಾರು ಹನ್ನೆರೆಡು ಘಂಟೆ ಹೊತ್ತಿಗೆ ಮನೆಗೆ ಬಂದರು. ಅಲ್ಲೇ ಒಂದೆರೆಡು ಫರ್ಲಾಂಗ್ ದೂರದಲ್ಲಿ, ರಾಯರಮಠದ ರೋಡಿನಲ್ಲೇ ನಮ್ಮ ಮನೆ. ಪರಿಚಯ ಕೂಡ ಇತ್ತು. ಹಾಗಾಗಿ ತಮ್ಮ ಡಾಕ್ಟರ್ ಕಿಟ್ ಬ್ಯಾಗಿನೊಂದಿಗೆ ಡಾಕ್ಟರ್ ಮೇಡಂ ಹಾಜರ್.

ಸುಮಾರು ಮೂವತ್ತು, ಮೂವತ್ತೈದು ವರ್ಷದ ಮೇಡಂ. ಅವರನ್ನು ನೋಡಿದ್ದು ಅದೇ ಮೊದಲು. ನೋಡಿದರೆ ಅಂಜಿಕೆ ಬರುವಂತಹ ಡಾಕ್ಟರ್ ಆಗಿರಲಿಲ್ಲ. ಅದು ಬಹಳ ಮುಖ್ಯ. Very decent lady doctor.

ಎಲ್ಲ ತಪಾಸಣೆ ಮಾಡಿ, ಒಂದು ಇಂಜೆಕ್ಷನ್ ಕೊಡುತ್ತೇನೆ ಅಂದರು. ಯಪ್ಪಾ! ಇಂಜೆಕ್ಷನ್ ಅಂದ ಕೂಡಲೇ ಹೃದಯ ಕಿತ್ತಿ ಎಲ್ಲೆಲ್ಲೋ ಬಂತು. ಡಾ. ಜೀ.ಟಿ.ಪಾಟೀಲ ಅವರ ಭಯಾನಕ ಇಂಜೆಕ್ಷನ್ ನೆನಪಾಯಿತು. ಅದು ಯಾವ ತರಹದ ಇಂಜೆಕ್ಷನ್ ಕೊಡುತ್ತಿದ್ದರೋ ಏನೋ. ಸಹಿಸಲು ಅಸಾಧ್ಯವಾದ ಯಮನೋವಾಗುತ್ತಿತ್ತು. ಆ ನೋವಿನಲ್ಲಿ ಮೊದಲಿನ ಜಡ್ಡು ಎಲ್ಲ ಮರೆತು ಹೋಗುತ್ತಿತ್ತು. ಅವರ ಒಂದು ಇಂಜೆಕ್ಷನ್ ತೆಗೆದುಕೊಂಡ ನಂತರ ಆ ಇಂಜೆಕ್ಷನ್ ನೋವಿನ ಆರೈಕೆ ಮಾಡುವದೇ ದೊಡ್ಡ ಕೆಲಸವಾಗಿ ಹೋಗುತ್ತಿತ್ತು. ಅದಕ್ಕೇನು ಬಿಸಿ ಶಾಖ ಕೊಡುವದು! ಅದಕ್ಕೇನು ಐಯೋಡೆಕ್ಸ್ ಹಚ್ಚಿ ನೀವಿಕೊಳ್ಳುವದು! ರಾಮಾ ರಾಮಾ! ಮೊದಲಿನ ಜ್ವರ ಅದು ಇದು ಎಲ್ಲ ಮರೆತೇ ಹೋಗುತ್ತಿತ್ತು. ಈಗ ಕಮಲಾಪುರ ಡಾಕ್ಟರಿಣಿ ಬಾಯಿ ಇಂಜೆಕ್ಷನ್ ಕೊಡುತ್ತೇನೆ ಅಂದಾಗ ಅದೇ ನೆನಪಾಯಿತು. ಸ್ವಲ್ಪವಾದರೂ ತ್ರಾಣವಿದ್ದಿದ್ದರೆ ತಪ್ಪಿಸಿಕೊಳ್ಳಲು ಎದ್ದು ಓಡುತ್ತಿದ್ದ. ಇಂಜೆಕ್ಷನ್ ಬೇಡ ಅಂತ ಹಟ ಮಾಡುತ್ತಿದ್ದೆ. ಆದರೆ ಅವತ್ತು ಫುಲ್ ಫ್ಲಾಟಾಗಿ ಶಿವಾಯ ನಮಃ ಆಗಿಬಿಟ್ಟಿದ್ದೆ. ಮತ್ತೇನು ಮಾಡುವದು? ಒಂದು ಭಯಂಕರ ಯಮನೋವಿನ ಅನುಭವಕ್ಕೆ ಎಲ್ಲ ತೆರೆದುಕೊಂಡು ಮಲಗಿಬಿಟ್ಟೆ. ಎಲ್ಲ ತೆರೆಯದೇ, ಕೆಳಗೆ ಇಳಿಸಬೇಕಾಗಿದ್ದನ್ನು ಕೆಳಗೆ ಇಳಿಸದೇ ಇದ್ದರೆ ಇಂಜೆಕ್ಷನ್ ಹೇಗೆ ಕೊಟ್ಟಾರು?

ಮೊದಲೇ ಮೈಯಲ್ಲಿ ಮಾಂಸವಿಲ್ಲದ ಕೊಳಕೇಶಿ (ತೆಳ್ಳಗಿರುವವ) ನಾನು. ಅಂತವನಿಗೂ ಡಾ.ಜೀ.ಟಿ.ಪಾಟೀಲ ಡಾಕ್ಟರರು ಕೈ ರಟ್ಟೆ ಮೇಲೆಯೇ ಇಂಜೆಕ್ಷನ್ ಚುಚ್ಚಿ ಕಳಿಸಿಬಿಡುತ್ತಿದ್ದರು. ಮೊದಲೇ ತೆಳ್ಳಗಿನ ರಟ್ಟೆ. ಸೀದಾ ಎಲುಬಿಗೇ ಹೋಗಿ ಚುಚ್ಚಿದಷ್ಟು ನೋವಾಗುತ್ತಿತ್ತು. ಹಾಗಾಗಿ ಕಮಲಾಪುರ ಡಾಕ್ಟರ್ ಮೇಡಂ 'ರಟ್ಟೆಗೆ ಬೇಡ. ಕೆಳಗೆ ಬೆಟರ್' ಅಂದಾಗ ಎಲ್ಲಾ ಬಿಚ್ಚಾಮಿ ಆಗಿ ಫುಲ್ ರೆಡಿ!

ಇಂಜೆಕ್ಷನ್ ಅನುಭವದ ಭೀಕರತೆ ಕಡಿಮೆ ಮಾಡಿಕೊಳ್ಳಲು ನಮ್ಮದೇ ಆದ ಕೆಲವು ತಂತ್ರಗಳಿದ್ದವು. ಕಣ್ಣು ಮುಚ್ಚಿಬಿಡುವದು. ಮತ್ತೆ ಆದರೆ ಮೂಗನ್ನು ಕೂಡ ಮುಚ್ಚಿಬಿಡುವದು. ಡಾಕ್ಟರ್ ಮಂದಿ ಇಂಜೆಕ್ಷನ್ ಕೊಡಲು ತಯಾರಿ ಮಾಡಿಕೊಳ್ಳುವದನ್ನು ನೋಡಿದರೆ ಸಾಕು ಸಿಕ್ಕಾಪಟ್ಟೆ tension ಆಗಿಬಿಡುತ್ತದೆ. ಇಂಜೆಕ್ಷನ್ ಮಾಡುವ ಮೊದಲು ಹಚ್ಚುವ ಸ್ಪಿರಿಟ್ ವಾಸನೆ ಬಂದರೆ tension ಮತ್ತೂ ಹೆಚ್ಚು. ಕಣ್ಣು, ಮೂಗು ಮುಚ್ಚಿ ಮಲಗಿಬಿಟ್ಟರೆ ಇದ್ದುದರಲ್ಲಿಯೇ ಎಷ್ಟೋ ಆತಂಕ ಕಮ್ಮಿ.

ಅವತ್ತೂ ಹಾಗೆ ಮಾಡಿ ಮಲಗಿಬಿಟ್ಟೆ. 'Alright! Good boy! ಮುಗೀತು' ಅಂತ ಡಾಕ್ಟರ್ ಬಾಯಿಯ ಧ್ವನಿ ಕೇಳಿಬಂದಾಗಲೇ ಗೊತ್ತಾಗಿದ್ದು ಇಂಜೆಕ್ಷನ್ ಚಿತ್ರಹಿಂಸೆ ಮುಗಿಯಿತು ಅಂತ. ಏನೂ ಜಾಸ್ತಿ ನೋವಾದ ಅನುಭವವೇ ಆಗಲಿಲ್ಲ. ಅರೇ ಇಸ್ಕಿ! ಇಷ್ಟು ನಾಜೂಕಾಗಿಯೂ ಇಂಜೆಕ್ಷನ್ ಮಾಡಲು ಬರುತ್ತದೆಯೇ!? ಹಾಗಾದರೆ ಡಾ.ಜೀ.ಟಿ.ಪಾಟೀಲ ಡಾಕ್ಟರ್ ಇಂಜೆಕ್ಷನ್ ಕೊಡುವಾಗೇಕೆ ಅಷ್ಟು ನೋವಾಗುತ್ತದೆ? What's the secret?

ತಪಾಸಣೆ ಮಾಡಿ, ಇಂಜೆಕ್ಷನ್ ಕೊಟ್ಟು, ಚಹಾ ಪಹಾ ಕುಡಿದು, ನಾಲ್ಕು ಮಾತಾಡಿ ಹೊರಟರು ಡಾಕ್ಟರ್ ಬಾಯಿ. ನಂತರ ಬಂದು ಔಷಧ, ಮಾತ್ರೆ ತೆಗೆದುಕೊಂಡು ಹೋಗಲು ಹೇಳಿದರು. ಮನೆಯಲ್ಲಿ ಯಾರಾದರೂ ಹೋಗಿ ತರುತ್ತಾರೆ.

ಡಾಕ್ಟರ್ ಹೋದ ಮೇಲೆ ತಂದೆಯವರನ್ನು ಕೇಳಿದೆ. 'ಜೀ.ಟಿ.ಪಾಟೀಲ ಡಾಕ್ಟರರು ಇಂಜೆಕ್ಷನ್ ಕೊಡುವಾಗ ಆ ಪರಿ ಭಯಂಕರ ನೋವಾಗುತ್ತದೆ. ಈ ಡಾಕ್ಟರಿಣಿ ಬಾಯಿ ಇಂಜೆಕ್ಷನ್ ಕೊಟ್ಟಾಗ ಜಾಸ್ತಿ ಏನೂ ನೋವಾಗಲೇ ಇಲ್ಲ. ಎಲ್ಲಿ ಒಂದು ಗುಂಗಾಡು (ಸೊಳ್ಳೆ) ಕಡಿದಂಗಾಯಿತು ಅಷ್ಟೇ. ಹ್ಯಾಂ?' ಮುಖದ ಮೇಲೆ ದೊಡ್ಡ ಪ್ರಶ್ನಾರ್ಥಕ ಕೊಕ್ಕೆ ಚಿನ್ಹೆ.

ತಂದೆಯವರು ನಕ್ಕು ಹೇಳಿದರು. ತಾತ್ಪರ್ಯ ಇಷ್ಟು. ನೀವೂ ಸಹ ನಮ್ಮ ಜಮಾನಾದವರಾಗಿದ್ದರೆ ನಿಮಗೆ ನೆನಪಿರಬಹುದು. ಇಂಜೆಕ್ಷನ್ ಔಷಧಿ ಬಾಟಲಿಗೆ ಒಂದು ರಬ್ಬರ್ ಬಿರಡೆ ಇರುತ್ತಿತ್ತು. ಸ್ಪಿರಿಟ್ ನಿಂದ ಅದನ್ನು ಒರೆಸಿ, disinfect ಮಾಡಿಕೊಂಡು, ಇಂಜೆಕ್ಷನ್ ಸೂಜಿಯನ್ನು ಅದರೊಳಗೆ ನುಗ್ಗಿಸಿ, ಬೇಕಾಗುವಷ್ಟು ಔಷಧವನ್ನು ಎಳೆದುಕೊಳ್ಳುತ್ತಿದ್ದರು. ನಂತರ ಚುಚ್ಚುತ್ತಿದ್ದರು. ಆದರೆ ಮಧ್ಯ ಒಂದು ಮುಖ್ಯ ಸ್ಟೆಪ್ ಇತ್ತು. ರಬ್ಬರ್ ಬಿರಡೆಗೆ ಚುಚ್ಚಿ ಔಷದಿ ಎಳೆಯುವ ಸೂಜಿಯೇ ಬೇರೆ ಮತ್ತು ನಂತರ ರೋಗಿಗೆ ಚುಚ್ಚುವಾಗ ಉಪಯೋಗಿಸುವ ಸೂಜಿಯೇ ಬೇರೆ. ರಬ್ಬರ್ ಬಿರಡೆಗೆ ಚುಚ್ಚಿ ಔಷಧಿ ಎಳೆಯುವ ಸೂಜಿ ದಪ್ಪಗಿರುತ್ತದೆ. ಸಹಜ. ರಬ್ಬರ್ ಎಮ್ಮೆ ಚರ್ಮದ ತರಹದ ಇರುತ್ತದೆ ನೋಡಿ. ಹಾಗಾಗಿ ದಪ್ಪನೆಯ ಸೂಜಿ. ನಂತರ ಮನುಷ್ಯರಿಗೆ ಚುಚ್ಚುವ ಸೂಜಿ ತುಂಬ ತೆಳ್ಳಗೆ ಸಪೂರಕ್ಕೆ ಇರುತ್ತದೆ. ಅಂತಹ ಸಪೂರನೇ ಸೂಜಿಯಲ್ಲಿ ಚುಚ್ಚಿದರೆ ಜಾಸ್ತಿ ನೋವಾಗುವದಿಲ್ಲ. ಈಗ ಗೊತ್ತಾಗಿರಬೇಕಲ್ಲ ಡಾ. ಜೀ.ಟಿ.ಪಾಟೀಲ ಡಾಕ್ಟರರ ಇಂಜೆಕ್ಷನ್ ಯಾಕಷ್ಟು ನೋವಾಗುತ್ತಿತ್ತು ಅಂತ? ಪುಣ್ಯಾತ್ಮರದು ಎರಡಕ್ಕೂ ಒಂದೇ ಸೂಜಿ. ದಪ್ಪನೆಯ ಸೂಜಿಯಲ್ಲಿಯೇ ಔಷಧ ಎಳೆದು, ಅದರಲ್ಲಿಯೇ ಚುಚ್ಚಿಬಿಡುತ್ತಿದ್ದರು. ಶಿವಾಯ ನಮಃ! ಅದಕ್ಕೇ ಆ ತರಹದ ಯಮನೋವು!

ಓಹೋ! ವಿಷಯ ಹೀಗಿದೆ ಅಂತ ಜ್ಞಾನೋದಯವಾಯಿತು. 'ಏ, ಇಷ್ಟೇ ಅಲ್ಲ ಮಾರಾಯಾ. ಸೈನ್ಯದ ವೈದ್ಯರು ಯುದ್ಧಭೂಮಿಯಲ್ಲಿ ಕೊಡುವ ಇಂಜೆಕ್ಷನ್ ಇನ್ನೂ ಖರಾಬಾಗಿರುತ್ತವೆ. ಅಲ್ಲಿ ಸಾಕಷ್ಟು ಜನ ಯೋಧರು ಗಾಯಾಳುಗಳಾಗಿ ಬಿದ್ದಿರುತ್ತಾರೆ. ತ್ವರಿತ ಗತಿಯಲ್ಲಿ ಜಾಸ್ತಿ ಜನರಿಗೆ ಇಂಜೆಕ್ಷನ್ ಚುಚ್ಚಬೇಕಾಗಿರುತ್ತದೆ. ನಡುನಡುವೆ ಸೂಜಿ ಬದಲಾಯಿಸುತ್ತ ಕೂತರೆ ಸಮಯ ವ್ಯರ್ಥವಾಗುತ್ತದೆ. ಸೂಜಿ ಬದಲಾಯಿಸದೇ ಒಬ್ಬರಿಂದ ಒಬ್ಬರಿಗೆ ಒಂದೇ ಸೂಜಿಯಲ್ಲಿ ಚುಚ್ಚಿದರೆ ಸೋಂಕು ತಗಲಿ ಲಫಡಾ ಆಗುತ್ತದೆ. ಅದಕ್ಕೆ ಸೈನ್ಯದ ವೈದ್ಯರು ಕಂಡುಕೊಂಡ ಉಪಾಯವೆಂದರೆ ಒಂದು ಸ್ಪಿರಿಟ್ ದೀಪವನ್ನು ಸೆಟಪ್ ಮಾಡಿಕೊಳ್ಳುವದು. ಅದರ ಜ್ವಾಲೆಯಲ್ಲಿ ಇಂಜೆಕ್ಷನ್ ಸೂಜಿ ಹಿಡಿದುಬಿಡುವದು. ಕಾದು ಗರಮ್ ಆದ ಸೂಜಿ ಏಕ್ದಂ ಫುಲ್ sterile ಆಗಿಬಿಡುತ್ತದೆ. ನಂತರ ಚುಚ್ಚುವದು. ಮತ್ತೆ ಸೂಜಿಯನ್ನು ಬಿಸಿ ಮಾಡುವದು, ಮತ್ತೆ ಚುಚ್ಚುವದು,' ಅಂತ ಯುದ್ಧಭೂಮಿಯಲ್ಲಿ ಆ ಕಾಲದಲ್ಲಿ ಇಂಜೆಕ್ಷನ್ ಕೊಡುವ ಪದ್ಧತಿ ವಿವರಿಸಿದರು. ಯಪ್ಪಾ! ಮೊದಲೇ ದಬ್ಬಣದಂತಹ ಸೂಜಿ. ಮೇಲಿಂದ ಬೆಂಕಿಯಲ್ಲಿ ಕಾಯಿಸಿ ಚುಚ್ಚುತ್ತಾರೆ! ಟೋಟಲ್ ಶಿವಾಯ ನಮಃ! ಪುಣ್ಯಕ್ಕೆ ಡಾ. ಜೀ. ಟಿ. ಪಾಟೀಲರು ಇನ್ನೂ ಆ ಮಟ್ಟಕ್ಕೆ ಹೋಗಿರಲಿಲ್ಲ. ಸೂಜಿ ಬದಲಾಯಿಸುತ್ತಿದ್ದರು. ಅಷ್ಟೇ ಒಂದು ರೋಗಿಗೆ ಒಂದೇ ಸಲ. ಔಷದ ಹೀರಲು ಒಂದು ದೊಡ್ಡ ಸೂಜಿ, ಮತ್ತೆ ಚುಚ್ಚಲು ಮತ್ತೊಂದು ಅಂತ ಬದಲಾಯಿಸುತ್ತ ಕೂಡುತ್ತಿರಲಿಲ್ಲ ಅಷ್ಟೇ. ಎಲ್ಲಿ ಡಾ. ಜೀ.ಟಿ ಪಾಟೀಲರು ಸೈನ್ಯದಲ್ಲಿ ಕೆಲಸ ಮಾಡಿ ಬಂದಿದ್ದರೋ ಹೇಗೆ? ಗೊತ್ತಿಲ್ಲ. ಆದರೆ ಅವರ rough & tough ಬಾಹ್ಯ ವ್ಯಕ್ತಿತ್ವ ನೋಡಿದರೆ ಮಿಲಿಟರಿ ಜನರಂತೆಯೇ ಇದ್ದರು. ದೊಡ್ಡ ಪರ್ಸನಾಲಿಟಿ. ಗರ್ಜನೆಯಂತಹ ಮಾತು. ಖಡಕ್ ಡಾಕ್ಟರ್.

ಕಮಲಾಪುರ ಡಾಕ್ಟರ್ ಮೇಡಂ ಹೊರಟುಹೋದ ಹೊತ್ತಿಗೆ ಮಧ್ಯಾನದ ಊಟದ ಸಮಯ. ದೀಪಾವಳಿಯ ಮುಖ್ಯ ದಿನ ಅಂತ ಬಡಾ ಖಾನಾ. ಒಂದು ನಾಲ್ಕು ಜನ ನೆಂಟರೂ ಬಂದಿದ್ದರು.

'ಅಯ್ಯೋ! ದೀಪಾವಳಿಗೇ ಸರಿಯಾಗಿ ಜಡ್ಡು ಬಂದು ಮಲಗಿಬಿಟ್ಟಿಯಲ್ಲೋ! ಒಂದು ತಿನ್ನೋ ನಸೀಬಿಲ್ಲ. ಒಂದು ಉಣ್ಣೋ ನಸೀಬಿಲ್ಲ,' ಅಂತ ಪರಿತಪಿಸುತ್ತ ಅಮ್ಮ ಊಟದ ತಯಾರಿಗೆ ಹೋದಳು. ಬಕಾಸುರನಂತಹ ನನಗೆ ಅವಳು ಮಾಡಿದ ತರಹತರಹದ ತಿಂಡಿ ತಿನಿಸನ್ನು ತಿನ್ನುವ ಅದೃಷ್ಟವಿಲ್ಲವಲ್ಲ ಅಂತ ಅವಳ ಸಂಕಟ. ಏನು ಮಾಡಲಿಕ್ಕೆ ಬರುತ್ತದೆ? ಮುಂದೆ ಎರಡು ಮೂರು ದಿವಸಗಳಲ್ಲಿ ಆರಾಮಾದರೂ ಕಟ್ಟುನಿಟ್ಟಾದ ಪಥ್ಯ ಇನ್ನೂ ಎರಡು ವಾರ ನಡೆಯುತ್ತದೆ. ಅದು ನಮ್ಮ ಪಾಲಕರ ಕಾಳಜಿ ವಹಿಸುವ ಪದ್ಧತಿ. ಆರಾಮಾಯಿತು ಅಂತ ಒಮ್ಮೆಲೇ ಮೊದಲಿನ ಜೀವನಶೈಲಿಗೆ ಬಂದು, ಮೊದಲಿನ ರೂಟೀನ್ ಆಹಾರ, ವಿಹಾರ ಶುರುಮಾಡಿಕೊಂಡರೆ ಅನಾರೋಗ್ಯ ಮತ್ತೆ ಮರುಕಳಿಸುತ್ತದೆ. ಅದು ಅವರ ತತ್ವ. ಹಾಗಾಗಿ ಪಥ್ಯ ಮುಂದುವರೆಯಬೇಕು. ಪಥ್ಯ ಮುಗಿಯುವ ಹೊತ್ತಿಗೆ ದೀಪಾವಳಿಯ ಫಳಾರ ಎಲ್ಲ ಹರೋಹರವಾಗಿಬಿಟ್ಟಿರುತ್ತದೆ. ಪ್ರಾರಬ್ಧ!

ಸಂಜೆ ಹೋಗಿ ಯಾರೋ ಕಮಲಾಪುರ ಡಾಕ್ಟರ್ ಬಾಯಿ ಕೊಟ್ಟ ಸಿರಪ್, ಗುಳಿಗೆ ತಂದುಕೊಟ್ಟರು. ಸಿರಪ್ ಮಸ್ತ ಸಿಹಿಸಿಹಿಯಾಗಿತ್ತು. ಡಾ. ಜೀ.ಟಿ.ಪಾಟೀಲರ mixture ಹಾಗೆ ಕೆಟ್ಟ ಕಹಿಯಾಗಿರಲಿಲ್ಲ. ಗುಳಿಗೆಗಳೂ ಸಣ್ಣವಿದ್ದವು. ದೊಡ್ಡ ಹೊನಗ್ಯಾ ಸೈಜಿನಲ್ಲಿ ಇರಲಿಲ್ಲ. ದೊಡ್ಡ ಸೈಜಿನ ಗುಳಿಗೆಗಳ ತೊಂದರೆ ಅಂದರೆ ಅವನ್ನು ನುಂಗಲೇ ಆಗುತ್ತಿರಲಿಲ್ಲ. ಮನೆಯವರು ಮತ್ತೆ ಪುಡಿ ಮಾಡಿ ನೀರಲ್ಲಿ ಕದಡಿ ಕೊಡುತ್ತಿದ್ದರು. ಮತ್ತೆ ಕೆಟ್ಟ ಕಹಿ ನೀರು. ಮೊದಲೇ ಕಹಿ ಸಿರಪ್ ಪ್ರಾರಬ್ಧ. ಜೊತೆಗೆ ಮತ್ತೊಂದು. ಆದರೆ ಕಮಲಾಪುರ ಡಾಕ್ಟರ್ ಬಾಯಿ ಕೊಟ್ಟ ಸಿರಪ್ ಸಿಹಿಯಾಗಿತ್ತು. ಅದೇ ದೊಡ್ಡ ಮಾತು.

ಆ ದೀಪಾವಳಿಗೆ ಸಿಹಿ ಅಂತ ಏನಾದರೂ ಸೇವಿಸಿದ್ದರೆ ಅದು ಆ ಸಿಹಿ ಸಿರಪ್ ಮಾತ್ರ. ಬಾಕಿ ಎಲ್ಲ ವರ್ಜ್ಯ. ಪಥ್ಯದ ಊಟ.

ನಂತರ ಮತ್ತೊಮ್ಮೆ ಕಮಲಾಪುರ ಡಾಕ್ಟರ್ ಬಾಯಿಯವರ ಹತ್ತಿರ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಸಂದರ್ಭ ಬಂದ ನೆನಪಿಲ್ಲ. ಮುಂದಿನ ವರ್ಷ ಜಾಸ್ತಿ ಸಲ ಜ್ವರ ಬಂದು ಮಲಗಿದ ನೆನಪೂ ಇಲ್ಲ. ಯಾಕೆಂದರೆ ಮುಂದಿನ ವರ್ಷ ಎರಡನೇ ಕ್ಲಾಸ್. ಅಷ್ಟೊತ್ತಿಗೆ ಕನ್ನಡವನ್ನು ಬರೋಬ್ಬರಿ ಓದಲು ಕಲಿತಿದ್ದೆ. ಮನೆಯಲ್ಲಿದ್ದ ಸಾವಿರಾರು ಮಕ್ಕಳ ಪುಸ್ತಕಗಳ ವಿಶಿಷ್ಟ ಪ್ರಪಂಚ ತೆರೆದುಕೊಳ್ಳುತ್ತಿತ್ತು. ಓದುವದರಲ್ಲಿ ಕಳೆದುಹೋದೆ. ಬಿಸಿಲಲ್ಲಿ ಮಾಳಮಡ್ಡಿಯ ಹಾದಿ ಬೀದಿ ಅಲೆಯುತ್ತ, ಮಾವಿನ ಕಾಯಿ, ಹುಂಚಿ ಕಾಯಿ, ಪ್ಯಾರಲ ಕಾಯಿ ತಿಂದು, ನೀರು ಕುಡಿದು, ನಂತರ ಬಾಕಿ ದಾಂಡಿಗ ಹುಡುಗರಂತೆ ದಾರಿಸಿಕೊಳ್ಳಲಾಗದೇ ಜಡ್ಡು ಬೀಳುತ್ತಿದ್ದ ಪರಂಪರೆಗೆ ಒಂದು ಬ್ರೇಕ್ ಬಿತ್ತು.

ನಂತರ ಮುಂದಿನ ವರ್ಷ ನಾವೇ ಆ ಏರಿಯಾ ಬಿಟ್ಟು ಕರ್ನಾಟಕ ಯೂನಿವರ್ಸಿಟಿ ಕೆಳಗಿನ ನಿರ್ಮಲ ನಗರದ ಸ್ವಂತ ಮನೆಗೆ ಶಿಫ್ಟಾದ ಮೇಲೆ ಮಾಳಮಡ್ಡಿ ಡಾಕ್ಟರ್ ಮಂದಿ ದೂರವಾಗಿಬಿಟ್ಟರು. ಹೊಸ ಏರಿಯಾದ ಮೂರ್ನಾಲ್ಕು ಜನ ಡಾಕ್ಟರ್ ಮಂದಿಯನ್ನು ಟ್ರೈ ಮಾಡಿ ನೋಡಿದ ಮೇಲೆ ಬರೋಬ್ಬರಿ ಫಿಟ್ ಆದವರು ಡಾ.ಧಡೂತಿ ಅನ್ನುವ ಡಾಕ್ಟರ್. ಈಗ ತೀರಿಹೋಗಿದ್ದಾರೆ. ಹೆಸರಲ್ಲಿ ಮಾತ್ರ ಧಡೂತಿ. ಸಣ್ಣ ಪರ್ಸನಾಲಿಟಿ. ಭಾಳ ಮೃದು ಸ್ವಭಾವದ ಸೂಕ್ಷ್ಮ ಡಾಕ್ಟರ್. ಅವರು ಕೊಡುತಿದ್ದ mixture ಕೂಡ ತುಂಬಾ ಸಿಹಿಯಾಗಿರುತ್ತಿತ್ತು. ಇಂಜೆಕ್ಷನ್ ಸಹಿತ ಬಹಳ ನಾಜೂಕಾಗಿ ಕೊಡುತ್ತಿದ್ದರು. ಹಾಗಾಗಿ ಒಂದೇ ಸಲ ಎರಡು ಇಂಜೆಕ್ಷನ್ ಕೊಟ್ಟರೂ ಏನೂ ಅನ್ನಿಸುತ್ತಿರಲಿಲ್ಲ. ಡಾ. ಧಡೂತಿ ಒಮ್ಮೆ ನನಗೆ ಒಂದು ವಾರದಲ್ಲಿ ಕಮ್ಮಿ ಕಮ್ಮಿಯಂದರೂ ಒಂದು ಇಪ್ಪತ್ತು ಇಂಜೆಕ್ಷನ್ ಚುಚ್ಚಿಬಿಟ್ಟಿದ್ದರು. ಆಪರಿ ಜಡ್ಡು ಬಿದ್ದುಬಿಟ್ಟಿದ್ದೆ. ಅದರ ಬಗ್ಗೆ ಮತ್ತೊಮ್ಮೆ ಬರೆಯೋಣ ಬಿಡಿ.

ನಾವೆಲ್ಲಾ ಡಾ. ಧಡೂತಿಯವರಿಗೆ ಬೇಗನೆ ಅಡ್ಜಸ್ಟ್ ಆಗಿಬಿಟ್ಟೆವು. ಅಡ್ಜಸ್ಟ್ ಆಗದೇ ಇದ್ದವರು ಅಂದರೆ ತಂದೆಯವರೇ. ಅವರು ಹೇಳಿ ಕೇಳಿ ಡಾ. ಜೀ.ಟಿ. ಪಾಟೀಲರ ತುಂಬಾ ಹಳೆಯ ಪೇಷಂಟ್. ಮೇಲಿಂದ ಇಬ್ಬರೂ ಅತ್ಯುತ್ತಮ ಸ್ನೇಹಿತರು ಬೇರೆ. ಹಾಗಾಗಿ ಹೊಸ ಮನೆಗೆ ಬಂದ ಹೊಸತರಲ್ಲಿ ಮತ್ತೆ ಡಾ. ಜೀ.ಟಿ.ಪಾಟೀಲರೇ ಬೇಕಾಯಿತು. ಒಮ್ಮೆ ತಂದೆಯವರು ಸಿಕ್ಕಾಪಟ್ಟೆ ಜಡ್ಡು ಬಿದ್ದರು. ಹೊಸ ಡಾಕ್ಟರ್ ಮಂದಿ ಕೊಟ್ಟ ಚಿಕಿತ್ಸೆ ಏನೂ ಫಲಕಾರಿಯಾಗಲಿಲ್ಲ. ಮತ್ತೆ ಡಾ. ಜೀ.ಟಿ.ಪಾಟೀಲರನ್ನೇ ಹೌಸ್ ವಿಸಿಟ್ ಗೆ ಕರೆದು ಬರಬೇಕಾಯಿತು. ಅವರ ಮನೆ ದೂರದ ಬಾಗಲಕೋಟೆ ಪೆಟ್ರೋಲ್ ಬ್ಯಾಂಕ್ ಹತ್ತಿರವೆಲ್ಲೋ ಇತ್ತು. ಅಷ್ಟು ದೂರದಿಂದ ತಮ್ಮ ಸ್ಕೂಟರ್ ಮೇಲೆ ಮನೆಗೆ ಬಂದರು. ಮೊದಲಿನ ಹೌಸ್ ವಿಸಿಟ್ ತರಹವೇ. ಬಂದು, ತಪಾಸಣೆ ಮಾಡಿ, ಏನು ಒಂದು ತಮ್ಮ ಟ್ರೇಡ್ಮಾರ್ಕ್ ದಬ್ಬಣದ ಇಂಜೆಕ್ಷನ್ ಹೆಟ್ಟಿದರು ನೋಡಿ. ಅಷ್ಟೇ. ಆ ಇಂಜೆಕ್ಷನ್ ಯಮನೋವಿಗೆ 'ಕುಂಯ್ಕ್!' ಅಂತ ಒಂದು ದೊಡ್ಡ ಸೌಂಡ್ ಮಾಡಿದ ತಂದೆಯವರು ನಂತರ ಮುಸುಕು ಹಾಕಿ ಮಲಗಿ ಒಂದು ನಾಲ್ಕು ತಾಸು ಜಬರ್ದಸ್ತ್ ನಿದ್ದೆ ಮಾಡಿ ಎದ್ದುಬಿಟ್ಟರು. ಜ್ವರ, ಅದು, ಇದು ಎಲ್ಲ ಫುಲ್ ಬಿಟ್ಟು ಓಡಿಹೋಗಿತ್ತು. ಅದು ಡಾ. ಜೀ.ಟಿ. ಪಾಟೀಲರ ಇಂಜೆಕ್ಷನ್ ಕಮಾಲ್. ಮೂವತ್ತೈದು ವರ್ಷಗಳ ನಂತರವೂ ಅದು ನಮ್ಮ ಮನೆಯ ದೊಡ್ಡ ಜೋಕ್. ನಂತರ ಜೀಟಿ ಪಾಟೀಲರ ಸಂಪರ್ಕ ಕಮ್ಮಿಯಾಗುತ್ತ ಬಂತು. ಈಗ ಸ್ವಲ್ಪ ವರ್ಷಗಳ ಹಿಂದೆ ತೀರಿಯೂ ಹೋದರು ಅಂತ ಕೇಳಿದೆ. ಪುಣ್ಯಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ.

ಡಾಕ್ಟರ್ ಜೀ.ಟಿ. ಪಾಟೀಲರು, ಅವರ ಇಂಜೆಕ್ಷನ್ ಕೊಡುವ ಪದ್ಧತಿ, ಅವರ ಕೆಟ್ಟ ಕಹಿ ಔಷಧಗಳು, ಅವರ rough & tough exterior ಬಗ್ಗೆ ತಮಾಷೆ ಮಾಡಿರಬಹುದು. ಆದರೆ ಅವರು ಒಬ್ಬ ಅತ್ಯುತ್ತಮ ವೈದ್ಯರಾಗಿದ್ದರು. ಸುಖಾ ಸುಮ್ಮನೆ ಔಷಧಿ, ಚಿಕಿತ್ಸೆ ಕೊಡಲೇಬಾರದು ಅಂತ ಅವರ ಧೃಡ ನಂಬಿಕೆ. ಬರೋಬ್ಬರಿ ನೆನಪಿದೆ. ಹತ್ತು ಬಾರಿ ಹೋದರೆ ಐದು ಬಾರಿ ಏನೂ ಔಷಧಿ, ಚಿಕಿತ್ಸೆ ಕೊಡದೇ ಕಳಿಸಿಬಿಡುತ್ತಿದ್ದರು. ಆರೋಗ್ಯದ ತಪಾಸಣೆ ಮಾಡುತ್ತಿದರು. 'ಏನಾಗಿಲ್ಲ ತೊಗೋ. ಏನೂ ಬ್ಯಾಡ. ಮುಂದ ಹೆಚ್ಚಾದ್ರ ನೋಡೋಣಂತ. ನಡಿ ಈಗ ಮನಿಗೆ,' ಅಂತ ಹೇಳಿ ವಾಪಸ್ ಕಳಿಸಿಬಿಡುತ್ತಿದ್ದರು. ತಪಾಸಣೆ ಫ್ರೀ. ನಮ್ಮ ಮನೆಯಲ್ಲೋ ವಿಪರೀತ ಕಾಳಜಿಯ ಪಾಲಕರು. ಸ್ವಲ ಮೈ ಬಿಸಿಯಾದರೂ, 'ಒಮ್ಮೆ ಜೀ.ಟಿ.ಪಾಟೀಲ ಡಾಕ್ಟರ್ ಕಡೆ ಹೋಗಿ ಬಂದು ಬಿಡೋಣ. ನಡಿಯೋ,' ಅಂತ ಎತ್ತಾಕಿಕೊಂಡು ಹೊರಟೇಬಿಡುತ್ತಿದ್ದರು. ಜೀ.ಟಿ.ಪಾಟೀಲರ ಹತ್ತಿರ ಹೋಗೋಣ ಅಂದ ಮರುಕ್ಷಣ ಎಲ್ಲ ಆರಾಮ್ ಆಗಿಬಿಡುತ್ತಿತ್ತು ಅಂತ ನಮ್ಮ ಜೋಕ್. ಅವರ ದವಾಖಾನೆ ಮುಟ್ಟುವಷ್ಟರಲ್ಲಿ ಅವರ ಇಂಜೆಕ್ಷನ್ ಹೆದರಿಕೆಯಿಂದಲೇ ಫುಲ್ ಆರಾಮ್. ಹಾಗಾಗಿ ಚಿಕಿತ್ಸೆ ಕ್ಯಾನ್ಸಲ್. ಅವರೇ ಕೊನೆಯ ಡಾಕ್ಟರ್ ಅಷ್ಟು selective ಆಗಿ ಅತಿ ಕಮ್ಮಿ ಚಿಕಿತ್ಸೆ ಕೊಟ್ಟವರು. ಉಳಿದವರೆಲ್ಲ, ಅದೂ ಈ ಅಮೇರಿಕಾದಲ್ಲಿ, ಬೇಕಾಗಲಿ ಬೇಡವಾಗಲಿ over treatment ಕೊಟ್ಟಿದ್ದೇ ಜಾಸ್ತಿ. ಅಮೇರಿಕಾದ over treatment ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅದರ ಮೇಲೆಯೇ ನಿಂತಿದೆ ಔಷಧ ಕಂಪನಿಗಳ ಲಾಭ ನಷ್ಟ. Excessive / unnecessary medication is a sad reality.

ಇರಲಿ. ೧೯೭೮ ರ ದೀಪಾವಳಿ ಹಾಗೆ ಕಳೆದುಹೋಯಿತು. ಯಾವದೇ ತರಹದ celebration ಇಲ್ಲ. ಎಲ್ಲ ಒಣ ಒಣ. ತಂದಿಟ್ಟುಕೊಂಡಿದ್ದ ಹೊಸ ಬಟ್ಟೆ, ಪಟಾಕಿ ಸಹಿತ ಎಲ್ಲ ಪಥ್ಯದ ಕಾಟದಿಂದ ನೇಪಥ್ಯಕ್ಕೆ ಸರಿಯಿತು.

ಈ ವರ್ಷದ ದೀಪಾವಳಿಯೂ ಇಲ್ಲ. ಇಡೀ ಮನೆತನಕ್ಕೆ ಸೂತಕ ಬಂದುಹೋಗಿದೆ. ಅತ್ಯಂತ ಹಿರಿಯ ಕಸಿನ್ ಒಬ್ಬವ ತೀರಿಹೋದ. ೬೮ ವರ್ಷ ವಯಸ್ಸಾಗಿತ್ತು. ಸ್ವಲ ದಿವಸಗಳ ಹಿಂದೆ ಜಡ್ಡು ಬಿದ್ದು, ಆಸ್ಪತ್ರೆ ಸೇರಿದ್ದ. ಮೊನ್ನೆ ನಿಧನನಾದ. ಜಾಸ್ತಿ ತೊಂದರೆ ಪಡಲಿಲ್ಲ. ಅದು ಪುಣ್ಯ. ಮನೆ ಕಡೆ ಮಕ್ಕಳೆಲ್ಲ ಸೆಟಲ್ ಆಗಿ ಆರಾಮ್ ಇದ್ದಾರೆ. ಹಾಗಾಗಿ ಅದೂ ಓಕೆ. ಆದರೂ ಕುಟುಂಬದ ಒಬ್ಬ ಸದಸ್ಯ ಮೇಲೆ ಹೋದ. ಸೂತಕ ಬಂತು. ಇಲ್ಲವಾದರೆ ಏನೋ ಒಂದು ಒಳ್ಳೆ ಊಟ ಮಾಡುತ್ತಿದ್ದೆನೋ ಏನೋ. ಅದನ್ನು ಒಂದು ಹತ್ತು ದಿನಕ್ಕೆ ಮುಂದೂಡಿದೆ. ಅಷ್ಟೇ ಫರಕ್. ಜಾಸ್ತಿ ಏನಿಲ್ಲ.

'ಎಕ್ಕುಟ್ಟಿ ಹೋದ ದೀಪಾವಳಿ' ಅಂದಾಗ ನೆನಪಾಗುವದು ಹಳೆಯ ಸಿನೆಮಾ 'ನಝರಾನಾ'ದ ಹಾಡು. ಮುಕೇಶನ ಆರ್ದ್ರ ಧ್ವನಿಯಲ್ಲಿ. ಅದ್ಭುತವಾದ ಗೀತಸಾಹಿತ್ಯವಿದೆ. ಮೊದಲೆಲ್ಲ ಈ ಹಾಡನ್ನು ಕೇಳುತ್ತಿದ್ದೆ. melodious ಅನ್ನಿಸುತ್ತಿತ್ತು. ಈಗ youtube ಮೇಲೆ ನೋಡುವದೇ ಜಾಸ್ತಿ. ನೋಡುವಾಗ 'ಅಯ್ಯೋ!ಪಾಪ,' ಅನ್ನಿಸುತ್ತದೆ. ರಾಜ ಕಪೂರನ ನಝರಾನಾ (೧೯೬೧) ಒಂದು ದೊಡ್ಡ ಟ್ರಾಜಿಡಿ ಫಿಲಂ. ಮುಕೇಶನ ಹಾಡುಗಳನ್ನು ಕೇಳುವದೇ ಸಂತೋಷ. ನೋಡಿಬಿಟ್ಟರೆ 'ಅಯ್ಯೋ ಪಾಪ!' ಫೀಲಿಂಗ್.

ನಿಮಗೆ ದೀಪಾವಳಿ ಶುಭಾಶಯಗಳು. ಗಡದ್ದಾಗಿ ಆಚರಿಸಿ.



ಯಾರ ದೀಪಾವಳಿಯೂ ನಝರಾನಾ ಫಿಲ್ಮಿನ ರಾಜ ಕಪೂರನ ದೀಪಾವಳಿಯಷ್ಟು ಖರಾಬ್ ಆಗದೇ ಇರಲಿ. ಬೇಕಾದರೆ ಕೆಳಗಿನ ಟ್ರಾಜಿಡಿ ಹಾಡಿನ ವೀಡಿಯೊ ದೀಪಾವಳಿಯ ಸಂಭ್ರಮಗಳೆಲ್ಲ ಮುಗಿದ ಮೇಲೆ ನೋಡಿ!



Ek vo bhi deewaali thi, ek ye bhi deewaali hai
Ujada hua gulashan hai, rota hua maali hai
Ek vo bhi deewaali thi, ek ye bhi deewaali hai
Ujada hua gulashan hai, rota hua maali hai

Baahar to ujaala hai magar dil men andhera
Samajho na ise raat, ye hai gham ka savera
Baahar to ujaala hai magar dil men andhera
Samajho na ise raat, ye hai gham ka savera
Kya deep jalaayen ham ,taqadeer hi kaali hai
Ujada hua gulashan hai, rota hua maali hai

Aise na kabhi deep kisi dil ka bujha ho
Main to vo musaafir hun, jo raste men luta ho
Aise na kabhi deep kisi dil ka bujha ho
Main to vo musaafir hun, jo raste men luta ho
Ai maut tu hi aa ja, dil tera sawaali hai
Ujada hua gulashan hai, rota hua maali hai

Ek vo bhi deewaali thi, ek ye bhi deewaali hai
Ujada hua gulashan hai, rota hua maali hai
Ek vo bhi deewaali thi, ek ye bhi deewaali hai
Ujada hua gulashan hai, rota hua maali hai.

ನನ್ನ ಹರಕುಮುರಕು ಭಾಷಾಂತರ. ನಮಗೆ ಕವಿತೆ ಗಿವಿತೆ ಬರೋದಿಲ್ಲ. ಒಳ್ಳೆ lyrics ಇಷ್ಟವಾಗುತ್ತವೆ. ಅದೂ ಹಳೆಯ ಹಿಂದಿ ಹಾಡುಗಳ lyrics ಎಷ್ಟು meaningful ಮತ್ತು ಮನೋಜ್ಞವಾಗಿರುತ್ತಿದ್ದವು. ಅಲ್ಲವೇ?

ಅವತ್ತೂ ಒಂದು ದೀಪಾವಳಿ ಇತ್ತು, ಇವತ್ತೂ ಒಂದು ದೀಪಾವಳಿ ಇದೆ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ
ಅವತ್ತೂ ಒಂದು ದೀಪಾವಳಿ ಇತ್ತು, ಇವತ್ತೂ ಒಂದು ದೀಪಾವಳಿ ಇದೆ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ

ಹೊರಗೆಲ್ಲ ಬೆಳಕಿದೆ ಆದರೆ ಹೃದಯದಲ್ಲಿ ಮಾತ್ರ ಕತ್ತಲೆ
ಇದನ್ನು ರಾತ್ರಿಯೆಂದು ತಿಳಿಯದಿರು, ಇದು ದುಃಖದ ಹಗಲು
ಹೊರಗೆಲ್ಲ ಬೆಳಕಿದೆ ಆದರೆ ಹೃದಯದಲ್ಲಿ ಮಾತ್ರ ಕತ್ತಲೆ
ಇದನ್ನು ರಾತ್ರಿಯೆಂದು ತಿಳಿಯದಿರು, ಇದು ದುಃಖದ ಹಗಲು
ಯಾವ ದೀಪ ಹಚ್ಚಲಿ, ಅದೃಷ್ಟವೇ ಖಾಲಿಯಾಗಿದೆ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ

ಹೀಗೆ ಎಂದೂ ಯಾರ ಹೃದಯದ ದೀಪವನ್ನೂ ಆರಿಸಬೇಡ
ನಾನೊಬ್ಬ ಪಯಣಿಗ, ರಸ್ತೆಯಲ್ಲೇ ದರೋಡೆಗೊಳಗಾದೆ
ಹೀಗೆ ಎಂದೂ ಯಾರ ಹೃದಯದ ದೀಪವನ್ನೂ ಆರಿಸಬೇಡ
ನಾನೊಬ್ಬ ಪಯಣಿಗ, ರಸ್ತೆಯಲ್ಲೇ ದರೋಡೆಗೊಳಗಾದೆ
ಏ ಸಾವೇ ಬಂದು ಬಿಡು, ಈ ಹೃದಯ ನಿನ್ನದೇ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ

ಆವತ್ತೂ ಒಂದು ದೀಪಾವಳಿ ಇತ್ತು, ಇವತ್ತೂ ಒಂದು ದೀಪಾವಳಿ ಇದೆ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ
ಅವತ್ತೂ ಒಂದು ದೀಪಾವಳಿ ಇತ್ತು, ಇವತ್ತೂ ಒಂದು ದೀಪಾವಳಿ ಇದೆ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ

Sunday, November 08, 2015

He had forgotten to bring an 'important' item!

'Sir, We are already late. We must take off right away,' hurried the airplane captain.

'Wait yaar!' admonished the usual 2% politician and minister. He was seriously in trouble. He had realized that he had forgotten to bring a very very important thing before his maiden foreign trip. He immediately packed off some of his supporters and asked them to go and get it.Till that 'stuff' was found in Delhi markets in the middle of the night and brought back on board, the plane on which he was to travel could not take off. All were left in a huff and puff.

What was that important stuff that the minister had forgotten to bring along with him?

Medicines??? Important diplomatic documents?? Good try.  No. That's not the right answer.

GUTKA  (Tobacco, Areca nut, Lime etc. mixture. Chewed widely in India).

And the minister was?

Drum roll.................

Sharad Yadav, then the civil aviation minister.

This incident happened in 1999. Sharad Yadav was the civil aviation minister in Atal Bihari Vajpayee' cabinet. Then IC-814 airplane hijacking happened. After stopping in Amritsar, Lahore etc. the plane finally landed at Dubai. Some passengers, mainly seniors, women and children, were freed.

The freed passengers would have returned on their own, with or without government help. But, such situations are tailor-made for politicians to get mileage. Who was better positioned than the then civil aviation minister Sharad Yadav to get such mileage? He relentlessly pestered Vajpayee and got his approval to go on the special plane which was being sent to Dubai to bring home the freed passengers. Vajpayee was dealing with one of the worst crisis of his entire political career and he had to get rid of this pestering creature. So, he said, 'aap jaake leke aao! You go and get our people,' and focused on the negotiations to free the remaining hostages.

Time was of essence. Freed passengers wanted to get back home immediately. Understandable. But, the delay from government of India.

First, Sharad Yadav did not have a passport at all. Go figure! He did not even realize, till he was about board the plane, that one was needed before he could go to Dubai or anywhere. What to do? The whole government machinery was tasked with preparing a passport for this man on war footing. Excellent use of taxpayers' money! People ran like crazy. Multiple sorties were made between Delhi and Bihar to get the necessary documents and somehow a passport was made for the minister. Still it took close to 24 hours and that was the first delay. Freed passengers were being roasted in Dubai heat. As such UAE did not want to get involved at all. Only reason they even allowed the plane to land was USA put pressure after India asked USA intervene when diplomatic exchange between India and UAE did not yield results favorable to India.

After all this 'tamasha', when Sharad Yadav ji had boarded the plane and plane was ready to take off, he remembered that he had run out of his favorite GUTKA. One can do without food or drinks but GUTKA? No chance. So, the plane was stopped, some of his men took off to Delhi markets, found his brand of Gutka in the middle of the night and brought it on board. Only then the plane could take off. And the people who had gone through the nightmare of hijacking were waiting and waiting in Dubai without much help from anyone. This delay had added to their nightmare.

Sharad Yadav's buffoonery did not end here. When he landed at Duabi, papers were not in order. Dubai authorities were not ready to hand over passengers or the dead body of one killed passenger. Despite being a cabinet minister, he could not do anything and was treated like any other commoner, rightfully so. What difference it makes if you don't have commonsense to come prepared? Once again Vajpayee, US government had to weigh in on UAE government to make some concessions and let the passengers and this minister take off.

What a joke! What an inept politician! GUTKA GUTKA.....

Now that the Grand alliance has won the election in Bihar and the same Sharad Yadav, as the president of JD(U), is in full media focus. In full form. Getting a lot of exposure and mileage. Saw his picture appear so many times on my news feed, news etc. That's when I remembered this epic GUTKA episode.

Bihar has not hit the rock bottom yet. Only then there will be any change.

Source: IC-814 Hijacked! by Anil K. Jaggia and Saurabh Shukla

Copied from my Facebook status.

Monday, November 02, 2015

ಕನ್ನಡ ಹೋರಾಟಗಾರರು ಮನೆ ಮುಂದೆ ಆಂದೋಲನ ಮಾಡುತ್ತೇವೆ ಅಂದಾಗ.....


ನಿನ್ನೆ ನವೆಂಬರ್ ೧. ಕನ್ನಡ ರಾಜ್ಯೋತ್ಸವ. ಹಳೆಯ ತಮಾಷೆಯ ಘಟನೆಯೊಂದು ಮತ್ತೊಮ್ಮೆ ನೆನಪಾಯಿತು.

೧೯೮೦ - ೮೨ ರ ಸಮಯ. 'ಗೋಕಾಕ ವರದಿ ಜಾರಿಗೆ ಬರಲಿ,' ಅಂತ ಚಳುವಳಿ ರಾಜ್ಯಾದಂತ ಜೋರಾಗಿ ನಡೆಯುತ್ತಿತ್ತು. ನಮ್ಮ ಧಾರವಾಡದಲ್ಲೂ ಚಳುವಳಿಯ ಕಾವು ಸಾಕಷ್ಟು ಜೋರಾಗಿತ್ತು. ಮತ್ತೆ ಗೋಕಾಕರು ಧಾರವಾಡದಲ್ಲಿ ಬಹಳ ವರ್ಷಗಳ ಕಾಲ ಮಾಸ್ತರಿಕೆ ಮಾಡಿದ್ದರು. ಹಾಗಾಗಿ ಗೋಕಾಕರು ಮತ್ತು ಅವರು ತಯಾರಿಸಿದ ವರದಿ ಅಂದರೆ ಧಾರವಾಡ ಮಂದಿಗೆ ಏನೋ ಒಂದು ತರಹದ ಆತ್ಮೀಯತೆ, ಅಕ್ಕರೆ. ಮತ್ತೆ ಆ ಕಾಲದಲ್ಲಿ ಧಾರವಾಡದಲ್ಲಿ ನಿಜವಾದ passionate ಚಳುವಳಿಗಾರರೂ ಇದ್ದರು.

ಎಲ್ಲದೂ ಕನ್ನಡಮಯವಾಗಬೇಕು ಅಂತ ಆಶಯ. ಒಳ್ಳೆಯದೇ. ಎಲ್ಲ ನಾಮಫಲಕಗಳು ಕನ್ನಡದಲ್ಲಿ ಇರಬೇಕು ಅಂತ ಫತ್ವಾ ಜಾರಿಯಾಯಿತು. ಅದು ಹೆಚ್ಚಾಗಿ ಅಂಗಡಿ, ಬಿಸಿನೆಸ್ಸು, ಹೋಟೆಲ್ಲು ಅಂತಹವುಗಳ ನಾಮಫಲಕಗಳಿಗೆ ಅನ್ವಯವಾಗುತ್ತದೆ ಅಂತ ಎಲ್ಲರೂ ತಿಳಿದರು. ಫತ್ವಾ ಹೊರಡಿಸಿದವರ ಮೂಲ ಉದ್ದೇಶವೂ ಅದೇ ಇತ್ತು ಅಂತ ಕಾಣುತ್ತದೆ. ಅದರ ಪ್ರಕಾರ ಅಂಗಡಿ ಜನ ಎಲ್ಲ ಕನ್ನಡದಲ್ಲಿ ಬೋರ್ಡುಗಳನ್ನು ಬರೆಯಿಸಿ ಹಾಕಿಕೊಂಡರು. ಯಾರು ಕನ್ನಡಕ್ಕೆ ಶಿಫ್ಟ್ ಆಗಲಿಲ್ಲವೋ ಅಂತವರ ಅಂಗಡಿ ಮುಂದೆ ಪ್ರತಿಭಟನೆ, ಇಂಗ್ಲೀಷ್ ಬೋರ್ಡುಗಳಿಗೆ ಡಾಂಬರ್ ಬಳಿಯುವದು ಇತ್ಯಾದಿ ಆಯಿತು ಅಂತ ಪತ್ರಿಕೆಗಳಲ್ಲಿ ಬಂದಿತ್ತು. ಡಾಂಬರ್ ಡಬ್ಬಿ, ಪೇಂಟ್ ಬ್ರಷ್ ಹಿಡಿದು ನಿಂತಿದ್ದ ವೀರಕೇಸರಿ ಡಾಂಬರ್ ಏಜೆಂಟುಗಳ ಚಿತ್ರ ಮರುದಿನ ಪೇಪರಿನಲ್ಲಿ ಬಂತು.

ನಮ್ಮ ಏರಿಯಾದಲ್ಲೂ ಕೆಲವು ಜನ ಕನ್ನಡ ಹೋರಾಟಗಾರರು ಇದ್ದರು. ಅವರಿಗೆ ಅದು ಏನು ಹುಳ ಕಡಿಯಿತೋ ಗೊತ್ತಿಲ್ಲ. ಒಂದು ವಿಚಿತ್ರ ಕೆಲಸ ಮಾಡಲಿಕ್ಕೆ ಹೊರಟುಬಿಟ್ಟರು. 'ಅಂಗಡಿಗಳ ನಾಮಫಲಕಗಳು ಮಾತ್ರ ಕನ್ನಡಕ್ಕೆ ಬದಲಾದರೆ ಸಾಲದು. ಜನರು ತಮ್ಮ ತಮ್ಮ ಮನೆ ಮುಂದೆ, ಮನೆ ಬಾಗಿಲಿಗೆ ಹಾಕಿಕೊಂಡಿರುವ ನಾಮಫಲಕಗಳನ್ನೂ ಕನ್ನಡಕ್ಕೆ ಬದಲಾಯಿಸಬೇಕು!' ಹಾಗಂತ ಒಂದು ಪತ್ರಿಕಾ ಪ್ರಕಟಣೆ ಕೂಡ ಕೊಟ್ಟುಬಿಟ್ಟರು. ಅದು 'ಸಂಯುಕ್ತ ಕರ್ನಾಟಕ'ದಲ್ಲಿ ಬಂದೂ ಬಿಟ್ಟಿತು. 'ಎಲ್ಲರೂ ತಮ್ಮ ತಮ್ಮ ಮನೆ ಮುಂದಿರುವ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಯಿಸಬೇಕು. ಒಂದು ತಿಂಗಳು ಕಾಲಾವಕಾಶವಿರುತ್ತದೆ. ಆ ಅವಧಿಯ ನಂತರವೂ ಯಾರ ಮನೆಯ ಮುಂದಾದರೂ ಬೇರೆ ಭಾಷೆಯಲ್ಲಿ ನಾಮಫಲಕ ಕಂಡುಬಂದರೆ ಅಂತವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವದು,' ಅಂತ ಸುದ್ದಿ. ಜೊತೆಗೆ ಪ್ರಕಟಣೆ ಕೊಟ್ಟ ಹೋರಾಟಗಾರರ ಹೆಸರುಗಳು, ಅವರ ಹುದ್ದೆಗಳು, ಅವರುಗಳು ಕನ್ನಡಕ್ಕೆ ಕೊಟ್ಟ ಕೊಡುಗೆಗಳು, ಮಾಡಿದ ಸಾಧನೆಗಳು ಎಲ್ಲ ಇದ್ದವು. ಫ್ರೀ ಪಬ್ಲಿಸಿಟಿ.

ಆಗ ನಾನು ಇನ್ನೂ ಮೂರನೇ ಅಥವಾ ನಾಲ್ಕನೇ ಕ್ಲಾಸಿನಲ್ಲಿದ್ದೆ. ಕನ್ನಡ ಓದುವದನ್ನು ಬರೋಬ್ಬರಿ ಕಲಿತಿದ್ದೆ. ಓದುವ ಹುಚ್ಚು ಸುಮಾರು ಹತ್ತಿತ್ತು. ಬರೆಯುವ ಹುಚ್ಚು ಸಣ್ಣ ಪ್ರಮಾಣದಲ್ಲಿ ಹತ್ತಿತ್ತು. ಶಾಲೆಯಲ್ಲಿ ನಾಲ್ಕನೇ ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದ ಈಗ ದಿವಂಗತರಾಗಿರುವ ಶ್ರೀ ಕಲ್ಲಿನಾಥ ಕಾತ್ರಾಳೆ ಸರ್ ಸಣ್ಣ ಪ್ರಮಾಣದ ಸಾಹಿತಿಗಳಾಗಿದ್ದರು. ಬರೆಯಲು ಅವರೇ ಸ್ಫೂರ್ತಿ. ಮತ್ತೆ ಮನೆಯಲ್ಲಿ ಎಲ್ಲರೂ ಸಿಕ್ಕಾಪಟ್ಟೆ ಓದುವವರೇ. ಹಾಗಾಗಿ ನಾನೂ bookworm ಆಗಿದ್ದು ದೊಡ್ಡ ಮಾತಲ್ಲ.

'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯನ್ನು ಮೇಲಿಂದ ಕೆಳಗಿನ ತನಕ ಫುಲ್ ಓದುತ್ತಿದ್ದೆ. ಯಾವದನ್ನೂ ಬಿಡುತ್ತಿರಲಿಲ್ಲ. 'ಎಮ್ಮೆ ಕಳೆದಿದೆ', 'ಕೋಣ ಸಿಕ್ಕಿದೆ', ಅದು, ಇದು ಎಲ್ಲ ಫುಲ್ ಸ್ಕ್ಯಾನಿಂಗ್ ಮತ್ತು ಫುಲ್ ರೀಡಿಂಗ್. ಆವಾಗಲೇ ಈ ಕನ್ನಡ ಹೋರಾಟಗಾರರು ಕೊಟ್ಟಿದ್ದ ಪ್ರಕಟಣೆ ಕಣ್ಣಿಗೆ ಬಿತ್ತು.

ಬೆಳಿಗ್ಗೆ ಸುಮಾರು ಒಂಬತ್ತರ ಸಮಯ. ಅಮ್ಮ ಮುಂಜಾನೆಯ ತಿಂಡಿ ಪಂಡಿ ಮಾಡಿ, ಕೊಟ್ಟು, ಮುಗಿಸಿ, ಮಧ್ಯಾನದ ಅಡುಗೆ ತಯಾರಿ, ಇತ್ಯಾದಿ ಕೆಲಸ ಮಾಡುತ್ತಿದ್ದಳು. ತಂದೆಯವರು ಕೆಲಸಕ್ಕೆ ಹೋಗುವ ಮುನ್ನದ ಸ್ನಾನ, ಪೂಜೆ, ಅದರಲ್ಲಿ, ಇದರಲ್ಲಿ ತೊಡಗಿದ್ದರು ಅಂತ ಕಾಣುತ್ತದೆ.

ನಾನು ಮನೆ ಜನರಿಗೆ announcement ಮಾಡಿದೆ. 'ಏ, ಎಲ್ಲಾರೂ ಕೇಳ್ರಿ ಇಲ್ಲಿ. ಪೇಪರಿನ್ಯಾಗ ಸುದ್ದಿ ಬಂದದ ನೋಡ್ರಿ. ಎಲ್ಲಾರೂ ಅವರವರ ಮನಿ ಮುಂದಿನ ನಾಮಫಲಕ ಅಂದ್ರ ನೇಮ್ ಪ್ಲೇಟ್ ಕನ್ನಡದಾಗೇ ಬರೆಸಬೇಕಂತ. ಒಂದು ತಿಂಗಳು ಟೈಮ್ ಕೊಟ್ಟಾರ. ಕನ್ನಡದಾಗ ಬರೆಸಲಿಲ್ಲ ಅಂದ್ರ ಅಂತವರ ಮನಿ ಮುಂದ ಸ್ಟ್ರೈಕ್ ಮಾಡ್ತಾರಂತ,' ಅಂತ ಒದರಿ ಹೇಳಿದೆ. ನಮ್ಮ ಮನೆ ಮುಂದಿನ ಬಾಗಿಲ ಪಕ್ಕದಲ್ಲಿ ಕೂಡ ಒಂದು ನೇಮ್ ಪ್ಲೇಟ್ ಇತ್ತು. ಆದರ ಮೇಲೆ ತಂದೆಯವರ ಹೆಸರು ಇತ್ತು. ಅಷ್ಟೇ. ಅದು ಬಿಟ್ಟರೆ ನಮ್ಮ ಮನೆಗೆ ಹೆಸರಾಗಲಿ ಅಥವಾ ಮತ್ಯಾವದೇ ತರಹದ ನಾಮಫಲಕ ಇತ್ಯಾದಿ ಇರಲಿಲ್ಲ. ಇದ್ದ ಆ ಒಂದು ಸಣ್ಣ ನಾಮಫಲಕ ಇಂಗ್ಲೀಷಿನಲ್ಲೇ ಇತ್ತು. ಅದು ಸುಮಾರು ಇಪ್ಪತ್ತು ವರ್ಷ ಹಿಂದಿನದು ಅಂದರೆ ೧೯೬೦ ರ ಕಾಲದ್ದು. ತಂದೆಯವರು ನೌಕರಿ ಶುರುಮಾಡಿ, ಮನೆ ಅಂತ ಮಾಡಿಕೊಂಡಾಗ ಮಾಡಿಸಿದ್ದು ಅಂತ ಕಾಣುತ್ತದೆ. ಮೊದಲು ಮಾಳಮಡ್ಡಿಯ ಭಾಡಿಗೆ ಮನೆ ಬಾಗಿಲಲ್ಲಿ ಇತ್ತು. ಹೊಸದಾಗಿ ಮನೆ ಕಟ್ಟಿಕೊಂಡು ಕವಿವಿ ಕೆಳಗೆ ಇರುವ ನಿರ್ಮಲ ನಗರಕ್ಕೆ ಬಂದಾಗ ಅದೂ ಜೊತೆಗೆ ಬಂದು, ಹೊಸ ಮನೆ ಗೋಡೆ ಮೇಲೆ ಮುಂಬಾಗಿಲಿನ ಪಕ್ಕ ಸ್ಥಾಪಿತವಾಗಿತ್ತು.

'ಅಲ್ಲಿ ಕೂತು ಏನು ಒದರ್ತಿಯೋ??' ಅಂತ ಆಕಡೆಯಿಂದ ತಾಯಿಯವರು ಒದರಿದರು. ನಾನು ಸಹಜ ಮಾತಾಡಿದ್ದೇ ಇಲ್ಲ. ಒದರಾಡುವದು, ಚೀರಾಡುವದು, ಬೈದಾಡುವದು ನಮ್ಮ ಮಾತಿನ ಸಹಜ ಶೈಲಿ.

ಅವರಿಗೆ ಸರಿ ಕೇಳಿಸಲಿಲ್ಲ ಅಂತ ತಿಳಿಯಿತು. ಆಕಡೆ ಹೋಗಿ ಮತ್ತೆ ಹೇಳಿದೆ. ಅದೇ ಸುದ್ದಿ.

'ಹಾಂಗೇನು? ಯಾರು ಹಾಂಗಂತ ಸ್ಟೇಟ್ಮೆಂಟ್ ಕೊಟ್ಟಾರ?' ಅಂತ ಕೊಂಚ ಅಸಹನೆ ಮಿಶ್ರಿತ ಆಕ್ರೋಶಭರಿತ ಧ್ವನಿಯಲ್ಲಿ ಅಮ್ಮ ಕೇಳಿದರು. ಅವರಿಗೆ ಅಂತದ್ದೆಲ್ಲ ನೌಟಂಕಿ ಸ್ಟ್ರೈಕ್ ಅಂದರೆ ಒಟ್ಟೇ ಇಷ್ಟವಾಗುವದಿಲ್ಲ. ಸ್ಟ್ರೈಕ್ ಮಾಡಲಿಕ್ಕೂ ಕಾರಣವಿರಬೇಕು. ಅದಕ್ಕೊಂದು ನೈತಿಕ ಸತ್ವ ಇರಬೇಕು ಅಂತ ಅವರ ನಿಲುವು.

ಪತ್ರಿಕೆಯಲ್ಲಿ ಬಂದಿದ್ದ ಕೆಲವು ಜನರ ಹೆಸರು ಹೇಳಿದೆ. ಮೊದಲೇ ಹೇಳಿದಂತೆ ಎಲ್ಲ ನಮ್ಮ ಏರಿಯಾದ ಪ್ರಭೃತಿಗಳೇ. ನಮ್ಮ ಏರಿಯಾದ so called ದೊಡ್ಡ ಹೋರಾಟಗಾರರೇ, ಬುದ್ಧಿಜೀವಿಗಳೇ. ಕೆಲವರು ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿದ್ದರು. ಹೆಚ್ಚಿನವರು ಟೈಮ್ ಪಾಸ್ ಹೋರಾಟಗಾರರು. ಹೆಚ್ಚಿನವರು ಮಾಸ್ತರ್ ಮಂದಿ. ಮೊದಲೇ ಕೆಲಸ ಕಮ್ಮಿ. ಅದನ್ನೂ ಸರಿಯಾಗಿ ಮಾಡದೇ, ಬರೀ ಇಂತಹದೇ ಎಡಬಿಡಂಗಿ ಕೆಲಸ ಮಾಡುತ್ತ, ಸಂಜೆಯಾದೊಡನೆ ರಸ್ತೆ ಕೂಟುಗಳಲ್ಲಿ ಹಾಳು ಹರಟೆ ಹೊಡೆಯುತ್ತ, ಊರ ಸುದ್ದಿ ಮಾತಾಡುತ್ತ, ರಾತ್ರಿ ಮನೆ ಕಡೆ ಹೋಗಿ, ಊಟ ಗೀಟ ಮಾಡಿ, ಮುಚ್ಚಾಕಿಕೊಂಡು ಮಲಕೊಂಡುಬಿಡುವ ದೊಡ್ಡ ಮಂದಿ. ಎಲ್ಲರ ಪರಿಚಯವಿತ್ತು. ಹೆಚ್ಚಿನವರೊಂದಿಗೆ ಸಾಕಷ್ಟು ಆತ್ಮೀಯತೆ ಕೂಡ ಇತ್ತು. ಹಾಗಂತ ಅವರು ಮಾಡಿದ್ದೆಲ್ಲ ಸರಿ ಅಂತ ಒಪ್ಪಿಕೊಳ್ಳಬೇಕು ಅಂತೇನೂ ಇಲ್ಲವಲ್ಲ. ನಮ್ಮ ಎಲ್ಲ ಸಂಬಂಧಗಳೂ ಹಾಗೆಯೇ. It's OK to disagree without being disagreeable.

'ಬರೇ ಇದs ಆತು ಈ ದೊಡ್ಡ ಮಂದಿದು! ಕನ್ನಡ ಭಾಷಾದ ಮೇಲೆ ಪ್ರೀತಿ, ಪ್ರೇಮ ತೋರಿಸಲಿಕ್ಕೆ ಬ್ಯಾರೆ ಏನೂ ಹೊಳಿಲಿಲ್ಲ ಏನು ಇವರಿಗೆ? 'ಮನಿ ಮುಂದಿನ ನೇಮ್ ಪ್ಲೇಟ್ ಬದಲು ಮಾಡ್ರೀ. ಕನ್ನಡದಾಗ ಬರೆಸಿರಿ,' ಅಂತ ಅನ್ಕೋತ್ತ. ಬರೇ ಹುಚ್ಚಾಟ,' ಅಂತ ಅಮ್ಮ ಯಥಾ ಪ್ರಕಾರ ಅವರದ್ದೇ ಶೈಲಿಯಲ್ಲಿ brush off ಮಾಡಿದರು.

ಆದರೆ ನಾನು ಬಿಡಬೇಕಲ್ಲ. ಹೆಚ್ಚಿನ build up ಕೊಟ್ಟೆ. 'ಏ, ಏನಂತ ತಿಳ್ಕೊಂಡೀ? ನೇಮ್ ಪ್ಲೇಟ್ ಕನ್ನಡದಾಗ ಬರೆಸಲಿಲ್ಲ ಅಂದ್ರ ಮನಿ ಮುಂದ ಬಂದು ಸ್ಟ್ರೈಕ್ ಮಾಡ್ತಾರಂತ. ನಮ್ಮನಿ ಮುಂದಿನ ನೇಮ್ ಪ್ಲೇಟ್ ಇಂಗ್ಲೀಷ್ ಒಳಗದ. ಏನು ಮಾಡೋಣ? ಅವರು ಬಂದು ಸ್ಟ್ರೈಕ್ ಮಾಡಿಬಿಟ್ಟರೇ?!' ಅಂತ ಕೇಳಿದೆ. ನನಗೆ ನನ್ನದೇ ಟೆನ್ಶನ್, ಆತಂಕ. ಯಾರಿಗೆ ಅರ್ಥವಾಗಬೇಕು?

ಇದನ್ನು ಕೇಳಿದ ತಂದೆಯವರು ನಕ್ಕರು. 'ಅದಕ್ಯಾಕ ಚಿಂತಿ ಮಾಡ್ತಿಯೋ? ಇನ್ನೊಂದು ನೇಮ್ ಪ್ಲೇಟ್ ಮಾಡಿಸೋಣ ತೊಗೋ. ಶುದ್ದ ಕನ್ನಡದಾಗ!' ಅಂತ ಹೇಳಿದರು. ಅವರದ್ದು 'take it easy' ಅನ್ನುವ ನಿಯಮ. ಎಲ್ಲದಕ್ಕೂ ತಲೆ ಬಿಸಿ ಮಾಡಿಕೊಳ್ಳಬಾರದು. ತಲೆ ಬಿಸಿ ಮಾಡಿಕೊಳ್ಳಬೇಕಾದ ವಿಷಯಗಳು ಬಹಳ ಕಮ್ಮಿಯಿರುತ್ತವೆ. ಸಣ್ಣ ಸಣ್ಣ ವಿಷಯಗಳಿಗೆ ತಲೆ ಕೆಡಿಸಿಕೊಂಡರೆ ಅದು ವ್ಯರ್ಥ. ಇದು ಅವರ ಫಿಲಾಸಫಿ. very practical ಮನೋಭಾವ ಬಿಡ್ರಿ ಅದು. ನಮಗೋ ಎಲ್ಲದಕ್ಕೂ ಚಿಂತೆ, ಟೆನ್ಶನ್.

ತಂದೆಯವರ ಮಾತು ಕೇಳಿದ ಅಮ್ಮ ರೈಸ್ ಆದರು. 'ಏ, ಏನು ಕನ್ನಡದಾಗ ಹೊಸ ನೇಮ್ ಪ್ಲೇಟ್ ಮಾಡಿಸಲಿಕ್ಕೆ ಹೊಂಟೀರಿ? ಸುಮ್ಮನಿರ್ರಿ. ನಾನೂ ನೋಡ್ತೇನಿ ಯಾರು ಬಂದು ಏನು ಸ್ಟ್ರೈಕ್ ಮತ್ತೊಂದು ಮಾಡ್ತಾರ ಅಂತ. ಏನು ಆಟಾ ಹಚ್ಚ್ಯಾರ ಏನು?' ಅಂತ ಅಬ್ಬರಿಸಿದವರು ಅಮ್ಮ. ಮೊದಲೇ ಹೇಳಿದೆನಲ್ಲ ಅವರಿಗೆ ಇಂತಹ ಹುಚ್ಚಾಟಗಳು, ನೌಟಂಕಿಗಳು ಒಟ್ಟೇ ಸೇರುವದಿಲ್ಲ ಅಂತ.

'ಇರಲಿ ತೊಗೋ. ಎಲ್ಲಾ ಕಡೆ ಅಂಗಡಿ ಬೋರ್ಡ್ ಬದಲಾವಣೆ ಆಂದೋಲನ ನಡೆದದ. ನಮ್ಮ ಏರಿಯಾ ಒಳಗ ಅಂಗಡಿ ಜಾಸ್ತಿ ಇಲ್ಲ. ಹಾಂಗಾಗಿ ಮನಿ ನೇಮ್ ಪ್ಲೇಟ್ ಚೇಂಜ್ ಮಾಡಿಸಲಿಕ್ಕೆ ಹೊಂಟಿರಬೇಕು. ಇನ್ನೊಂದು ನೇಮ್ ಪ್ಲೇಟ್ ಮಾಡಿಸೋಣ ತೊಗೋ. ಕನ್ನಡದಾಗ ಚಂದಾಗಿ ಬರೆಸೋಣ. ಏನು ಒಂದು ಇಪ್ಪತ್ತು ಮೂವತ್ತು ರೂಪಾಯಿ ಆಗಬಹುದು,' ಅಂದರು ತಂದೆಯವರು. cool as cucumber ಟೈಪಿನ ಕೂಲ್ ಮಂದಿ ಅವರು.

'ಏ, ನೀವು ಸುಮ್ಮನ ಇರ್ರಿ. ರೊಕ್ಕದ ವಿಷಯ ಅಲ್ಲ. ನೇಮ್ ಪ್ಲೇಟ್ ಗೀಮ್ ಪ್ಲೇಟ್ ಏನೂ ಹೊಸಾದು ಮಾಡಿಸೋ ಜರೂರತ್ತಿಲ್ಲ. ಈ ಕನ್ನಡ ಮಂದಿದು ಇದ್ದಿದ್ದೇ. ಬರೇ ಮಂಗ್ಯಾನಾಟ. ಶುದ್ಧ ನೌಟಂಕಿ,' ಅಂದರು ಅಮ್ಮ. ಆಟದಿಂದ ಹುಚ್ಚಾಟ, ಹುಚ್ಚಾಟದಿಂದ ಮಂಗ್ಯಾನಾಟವಾಯಿತು ಅಂದರೆ ಅವರಿಗೆ ಕೆಟ್ಟ ಸಿಟ್ಟು, ಆಕ್ರೋಶ ಬರುತ್ತಿದೆ ಅಂತ ಅರ್ಥ. ನಾನೋ ಮೊದಲೇ ಪ್ರಳಯಾಂತಕ. ಅವರಿಗೆ ಏನೂ ಸಿಟ್ಟು ಬರದಿದ್ದಾಗಲೇ ಕೆತ್ತೆಬಜೆ ಕಿತಬಿ ಮಾಡಿ ಅಮ್ಮನ ಬೀಪಿ ಹೆಚ್ಚಿಸುತ್ತಿದ್ದೆ. ಈಗಂತೂ ಅಮ್ಮನಿಗೆ ಸಿಕ್ಕಾಪಟ್ಟೆ irritate ಆಗಿಬಿಟ್ಟಿದೆ. ಹಾಂಗೆ ಬಿಟ್ಟರೆ ಹ್ಯಾಂಗೆ? ಹಾಗೆಂದುಕೊಂಡು ನನ್ನ ಕೆತ್ತೆಬಜೆ ಕಾರ್ಬಾರದ notch ಒಂದು ಸುತ್ತು ಏರಿಸಿದೆ.

'ಅವರು ಬಂದು ಮನಿ ಮುಂದ ಸ್ಟ್ರೈಕ್ ಮಾಡಿದರೆ? ಆವಾಗ ಏನು ಮಾಡೋದು? ಕನ್ನಡ ಹೋರಾಟಗಾರರು ಮನಿ ಮುಂದ ಬಂದು ಒದರಾಟ, ಚೀರಾಟ ಎಲ್ಲ ಮಾಡಿ, ಸ್ಟ್ರೈಕ್ ಮಾಡಿದರೆ? ಆವಾಗ???' ಅಂತ ಫಿಟ್ಟಿಂಗ್ ಇಟ್ಟೆ. ಅಷ್ಟು ಸಾಕಾಯಿತು ಅಮ್ಮನ ಜ್ವಾಲಾಮುಖಿ ಸ್ಪೋಟವಾಗಲಿಕ್ಕೆ.

'ಬರಲಿ ನೋಡೋಣ. ಒಬ್ಬೊಬ್ಬರದ್ದೂ ಕೈ ಹೀಂಗ ತೊಗೋತ್ತೀನಿ ಅಂದ್ರ ನೀವೆಲ್ಲಾ ನೋಡೀರಂತ. ಹಾಕ್ಕೊಂಡು ಥಡಾಯಿಸ್ತಿನಿ. ಏನು ಆಟಾ ಹಚ್ಚ್ಯಾರ ಏನು?' ಅಂತ ಶುದ್ಧ ಮಾಳಮಡ್ಡಿ ವೈಷ್ಣವ ಆಚಾರ್ರ ಭಾಷೆಯಲ್ಲಿ ಹೂಂಕರಿಸಿತು ಅಮ್ಮ. ಅಮ್ಮನಿಗೆ ಸಿಟ್ಟು ಬಂದಾಗ ಹವ್ಯಕ ಭಾಷೆ ಗೋವಿಂದವಾಗಿ ಏಕ್ದಂ ಆ ಖಡಕ್ ಭಾಷೆ ಬಂದುಬಿಡುತ್ತದೆ. ಯಾಕೆಂದರೆ ಅಮ್ಮ ತಮ್ಮ ಹತ್ತನೇ ವಯಸ್ಸಿನಲ್ಲೇ, ನಾಲ್ಕನೇ ಕ್ಲಾಸಿಗೇ, ಸಿರ್ಸಿಯಿಂದ ಧಾರವಾಡಕ್ಕೆ ಬಂದು, ಅದೂ hardcore ಬ್ರಾಹ್ಮಣರ ಅಗ್ರಹಾರದಂತಿದ್ದ ಮಾಳಮಡ್ಡಿಗೆ ಬಂದು ನೆಲೆಗೊಂಡವರು. ಅಲ್ಲಿನ ಮೂಲನಿವಾಸಿಗಳಿಗಿಂತ ಸ್ವಲ್ಪ ಜಾಸ್ತಿಯೇ hardcore ಅನ್ನುವ ಹಾಗಿದ್ದಾರೆ. ಅಖಂಡ ಮೂವತ್ತು ವರ್ಷ ಅಂತಹ ಮಾಳಮಡ್ಡಿಯಲ್ಲಿಯೇ ಕಳೆದುಬಿಟ್ಟಿದ್ದಾರೆ. ಹಾಗಾಗಿ ಸಹವಾಸ ದೋಷ! ದೋಷದ ಫಲ!

'ಏನು ಮಾಡಾಕಿ ನೀನು? ಹಾಂ? ಏನು ಮಾಡಾಕಿ ಅಂತ? ಬಂದು ಮನಿ ಮುಂದ ಸ್ಟ್ರೈಕ್ ಮಾಡವರಿಗೆ ಏನು ಮಾಡಾಕಿ? ದೊಡ್ಡ ಡೌಲು ಬಡಿತಿಯಲ್ಲಾ?' ಅಂತ ನನ್ನ ಮುಂದುವರೆದ ಕಿತಾಪತಿ. ಶಾಲೆಗೆ ಹೋಗಲು ಇನ್ನೂ ಸಾಕಷ್ಟು ಟೈಮ್ ಇದೆ. ಅಲ್ಲಿಯವರೆಗೆ ಟೈಮ್ ಪಾಸ್ ಕೆತ್ತೆಬಜೆ.

'ಇನ್ನೊಮ್ಮೆ ಹೇಳು. ಆವಾಗ ಕೆಲವು ಮಂದಿ ಹೆಸರು ಹೇಳಿದ್ಯಲ್ಲಾ? ಪ್ರಕಟಣೆ ಕೊಟ್ಟಾರ ಅಂತ. ಅವರ ಹೆಸರು ಹೇಳು ನೋಡೋಣ!' ಅಂತ ಕೋಪದಿಂದ ಕೇಳಿದರು ಅಮ್ಮ. ಮತ್ತೊಮ್ಮೆ ಆ ಹೋರಾಟಗಾರರ ಹೆಸರುಗಳನ್ನು ಹೇಳಿದೆ.

'ಬರಲಿ, ಬರಲಿ. ಸ್ಟ್ರೈಕ್ ಮಾಡಲಿಕ್ಕೆ ಬರಲಿ. ನೋಡೋಣ. ಒಬ್ಬೊಬ್ಬರನ್ನೇ ಹಿಡಿದು ಹಿಡಿದು ಕೇಳತೇನಿ. ಒಬ್ಬಬ್ಬರದ್ದೂ ಆವಾಜ್ ಗಪ್ (ಬಂದ್) ಮಾಡಿಸೇ ಕಳಸ್ತೇನಿ. ಬಿಡಂಗಿಲ್ಲ,' ಅಂದು ಸೀರೆ ಮಡಿಕೆ ಎತ್ತಿ ಸ್ವಲ್ಪ ಮೇಲೆ ಸೊಂಟಕ್ಕೆ ಸಿಗಿಸಿಕೊಂಡರು. ಎಲ್ಲಿ ಅಮ್ಮ  ಈಗಲೇ ಬೆಳವಡಿ ಮಲ್ಲಮ್ಮನಂತೆ ವೀರಗಚ್ಚೆ ಹಾಕಿ ಕನ್ನಡ ಹೋರಾಟಗಾರರ ಮೇಲೆ ಮೇಲೆ ಯುದ್ಧಕ್ಕೆ ಹೊರಟುಬಿಟ್ಟರೇನೋ ಅಂತ ಸಂಶಯ ಬಂತು. ನೋಡಿದರೆ ವೀರಗಚ್ಚೆ ಹಾಕಿ ಆಕಡೆ ತೆಂಗಿನಕಾಯಿ ಸುಲಿಯಲಿಕ್ಕೆ ಹೋದರು. ಅಡುಗೆಗೆ ಬೇಕಲ್ಲ ದಿನಕ್ಕೊಂದು ತೆಂಗಿನಕಾಯಿ. ಇಲ್ಲದಿದ್ದರೆ ನಮ್ಮ ಹವ್ಯಕ ಮಂದಿಯ ಅಡುಗೆ ಆಗುವದಿಲ್ಲ. 'ಅಕಿ ಬೆಳವಡಿ ಮಲ್ಲಮ್ಮ. ನೀ ಹೆಗಡೆ ಮಳ್ಳಮ್ಮ' ಅಂತ ಅಮ್ಮನನ್ನು ಆ ದಿನಗಲ್ಲಿ ಸುಮ್ಮನೇ ಚೇಷ್ಟೆ ಮಾಡುತ್ತಿದ್ದೆ. ಬೆಳವಡಿ ಮಲ್ಲಮ್ಮನ ಪಾಠ ಬೇರೆ ಇತ್ತಲ್ಲ ನಾಲ್ಕನೇ ಕ್ಲಾಸಿನಲ್ಲಿ. ಮಂದಿಗೆ ಚಿತ್ರವಿಚಿತ್ರ ಹೆಸರಿಡುವದರಲ್ಲಿ ಎತ್ತಿದ ಕೈ ನಾವೆಲ್ಲ. All in good jest.

'ಏನು ಮಾಡಾಕಿ? ಬರೇ ಬಾಯಿ ಮಾಡಿದರೆ ನಡೆಯಂಗಿಲ್ಲ. ಅವರು ಬಂದು ಸ್ಟ್ರೈಕ್ ಮಾಡ್ತಾರ. ನೇಮ್ ಪ್ಲೇಟ್ ಯಾಕ ಕನ್ನಡದಾಗ ಬರೆಸಿಲ್ಲ ಅಂತ ಕೇಳಿ ಜೋರ್ ಮಾಡ್ತಾರ. ಬೈತಾರ. ಒದರ್ತಾರ. ಏನು ಮಾಡಾಕಿ?' ಅಂತ ಮತ್ತೂ ಬತ್ತಿ ಇಟ್ಟೆ.

ಹೀಗೆ ಚಾಲೆಂಜ್ ಒಗೆದರೆ ಅಮ್ಮ ಬಿಟ್ಟಾರೆಯೇ?  ಅವರ ವಂಶದ ಸ್ತ್ರೀಯರೆಲ್ಲ ಗಟ್ಟಿಗಿತ್ತಿಯರು. ಹೆದರಿಕೆ, ಪದರಿಕೆ ಏನೂ ಇಲ್ಲ. ಏನೇ ಇದ್ದರೂ ಆರಾಮ್ ನಿಭಾಯಿಸಿಕೊಂಡು ಬರೋ ಮಂದಿ.

'ನಾನೂ ಅವರನ್ನು ಕೇಳ್ತೇನಿ, 'ಅಲ್ಲರೀಪಾ ದೊಡ್ಡ ಮನುಷ್ಯಾರ, ದೊಡ್ಡ ಕನ್ನಡ ಅದೂ ಇದೂ ಅಂತ ಹೇಳಿಕೋತ್ತ ಸ್ಟ್ರೈಕ್ ಮಾಡಲಿಕ್ಕೆ ಬಂದುಬಿಟ್ಟಿರಿ. ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡ್ರಿ. ನಿಮ್ಮೊಳಗ ಎಷ್ಟು ಮಂದಿ ನಿಮ್ಮ ನಿಮ್ಮ ಮಕ್ಕಳನ್ನು ಕನ್ನಡ ಮೀಡಿಯಂ ಶಾಲೆಗೆ ಹಾಕೀರಿ? ಹೇಳ್ರೀ. ಹೇಳ್ರೀ? ಯಾರ್ಯಾರು ನಿಮ್ಮ ನಿಮ್ಮ ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕೀರಿ. ಹೇಳ್ರೀ?' ಅಂತ ಬರೋಬ್ಬರಿ ಸವಾಲ್ ಒಗಿತೇನಿ ನೋಡು. ನೋಡೋಣ ಏನು ಹೇಳ್ತಾರ ಅಂತ. ನನಗ ಗೊತ್ತಿಲ್ಲೇನು? ಇಷ್ಟು ಮಂದಿಯಾಗ ಒಬ್ಬರ ಮಕ್ಕಳೂ ಕನ್ನಡ ಮೀಡಿಯಂ ಸಾಲಿಗೆ ಹೋಗೋದಿಲ್ಲ. ನೋಡಿದರೆ ಕೆಲವು ಮಂದಿಯಂತೂ ಕನ್ನಡ ಮಾಸ್ತರುಗಳು ಬ್ಯಾರೆ. ಅಂತವರೂ ತಮ್ಮ ತಮ್ಮ ಮಕ್ಕಳನ್ನ ಬಾಲವಾಡಿಯಿಂದಲೇ ಇಂಗ್ಲೀಷ್ ಮೀಡಿಯಂ ಸಾಲಿಗೆ ಹಾಕ್ಯಾರ. ಕನ್ನಡ ಮೀಡಿಯಂ ಸಾಲಿಗೆ ಹಾಕಲಿಕ್ಕೆ ಏನು ಧಾಡಿಯಾಗಿತ್ತು? ಮಾಡಬೇಕಾಗಿದ್ದು ಒಂದೂ ಮಾಡಂಗಿಲ್ಲ. ಮ್ಯಾಲಿಂದ ಹೀಂಗ ಉದ್ಯೋಗಿಲ್ಲದ ಯಬಡ ಕೆಲಸ ಮಾಡ್ತಾವ ನೋಡು ಈ ಯಡಬಿಡಂಗಿ ಮಂದಿ. ಬಂದರೆ ಬರಲಿ. ಬರೋಬ್ಬರಿ ಗಜ್ಜು ಅದ ಅವರಿಗೆಲ್ಲ,' ಅಂತ ಸಣ್ಣಗೆ ಆರ್ಭಟಿಸುತ್ತ ಇನ್ನೂ ಸಿಪ್ಪೆಯಿದ್ದ ತೆಂಗಿನಕಾಯಿಯನ್ನು ಕಾಯಿ ಸುಲಿಯುವ ಶೂಲ ಅಂದರೆ ನೆಲಕ್ಕೆ ಹುಗಿದು ನಿಲ್ಲಿಸಿದ್ದ ಪಿಕಾಸಿಗೆ ಹಾಕ್ಕೊಂಡು ಚುಚ್ಚಿಬಿಟ್ಟರು. ಬಂದ ಸಿಟ್ಟಷ್ಟೂ ಆದರ ಮೇಲೆಯೇ ಹೋಯಿತೋ ಏನೋ. ತೆಂಗಿನಕಾಯಿ ಎಲ್ಲ ಊರಕಡೆಯಿಂದ ಬರುತ್ತಿತ್ತು. ಹೆಚ್ಚಾಗಿ ಸಿಪ್ಪೆ ತೆಗೆದು ಕಳಿಸುತ್ತಿದ್ದರು. ಒಮ್ಮೊಮ್ಮೆ ಹಾಗೆಯೇ ಕಳಿಸುತ್ತಿದ್ದರು. ತೆಂಗಿನಕಾಯಿ ಸಿಪ್ಪೆ ಗಿಪ್ಪೆ ತೆಗೆಯುವದು ನಮ್ಮ ಜನಕ್ಕೆ ಬರುತ್ತದೆ ಬಿಡಿ. ಅದೂ ಬರದಿದ್ದರೆ ಹವ್ಯಕರಾಗಿ ಏನುಪಯೋಗ?

ಅಮ್ಮನ ಆರ್ಭಟ ನಿಂತಿರಲಿಲ್ಲ. 'ಸ್ಟ್ರೈಕ್ ಅಂತ ಸ್ಟ್ರೈಕ್. ಮನಿ ಮುಂದ ಬಂದರೆ ಬರಲಿ ಹೇಳತೇನಿ. 'ನೋಡ್ರಿ, ನಮ್ಮ ಇಬ್ಬರೂ ಮಕ್ಕಳನ್ನ ಕನ್ನಡ ಮೀಡಿಯಂ ಶಾಲೆಗೆ ಹಾಕೇವಿ. ಹಾಂಗಂತ ನಾವೇನೂ ಅಶಿಕ್ಷಿತ ಮಂದಿಯಲ್ಲ. ಹೆಂಗಸಾಗಿ ನಾನೇ BA ಡಿಗ್ರಿ ಹೋಲ್ಡರ್ ಇದ್ದೇನಿ. ಹಿಸ್ಟರಿ ಮೇಜರ್. ಸೈಕಾಲಜಿ, ಇಂಗ್ಲೀಷ್ ಮೈನರ್. ೧೯೬೭ ರಲ್ಲೇ BA ಮುಗಿಸೇನಿ. ನಾವೂ ಸಹಿತ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೇ ಹಾಕಬಹುದಿತ್ತು. ಆದರೆ ಹಾಕಲಿಲ್ಲ. ನಾವು ಕನ್ನಡದವರು ಅಂದ ಮ್ಯಾಲೆ ನಮ್ಮ ಮಕ್ಕಳು ಕನ್ನಡದಾಗೇ ಕಲಿಯಬೇಕು. ಅದಕ್ಕೇ ಕನ್ನಡ ಮೀಡಿಯಂ ಸಾಲಿಗೆ ಹಾಕೇವಿ. ನಮ್ಮಿನಿಯಾಗ ಕನ್ನಡ ಸೇವಾ ಎಲ್ಲ ಛಲೋತ್ನಾಗೇ ನಡಸೇವಿ. ಸಾಕಷ್ಟು ಕನ್ನಡ ಪುಸ್ತಕ, ಪತ್ರಿಕೆ ಎಲ್ಲ ರೊಕ್ಕ ಕೊಟ್ಟು ತರ್ತೇವಿ. ಎಲ್ಲಾರೂ ಓದ್ತೇವಿ. ಮಂದಿಗೂ ಓದಸ್ತೇವಿ. ಕನ್ನಡ ಸೇವಾ ಅಂದರೆ ಬರೇ ನೇಮ್ ಪ್ಲೇಟ್ ಚೇಂಜ್ ಮಾಡಿಸೋದು ಅಲ್ಲ. ಹೋಗಿ ನಾವು ಮಾಡಿದ್ದನ್ನು ಮೊದಲು ಮಾಡಿ ಬರ್ರಿ. ನಿಮ್ಮ ನಿಮ್ಮ ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕಿ ಬರ್ರಿ. ನಂತರ ನೇಮ್ ಪ್ಲೇಟ್ ಬದಲಾಯಿಸೋಣ. ಕನ್ನಡದಾಗ ಬರೆಸೋಣ. ತಿಳೀತಾss?' ಅಂತ ಹಾಕ್ಕೊಂಡು ಝಾಡಿಸಿಬಿಡತೇನಿ ನೋಡು. ತಿರುವ್ಯಾಡಿ ಒಗಿತೇನಿ,' ಅನ್ನುತ್ತ ಮುಕ್ಕಾಲು ಸಿಪ್ಪೆ ಸುಲಿದಿದ್ದ ತೆಂಗಿನಕಾಯಿಯನ್ನು ಕೊನೆಯ ಬಾರಿಗೆ ರೋಷದಿಂದ ಶೂಲಕ್ಕೆ ಚುಚ್ಚಿ, ಉಳಿದ ಸಿಪ್ಪೆ ತೆಗೆದು ಒಗೆದರು.

'ಏ, ತೆಂಗಿನಕಾಯಿ ತೊಗೊಂಡು ಬಾರ. ದೇವರಿಗೆ ಒಡೆದು ಕೊಡ್ತೇನಿ,' ಅಂತ ಒಳಗಿಂದ ದೇವರ ಮುಂದೆ ಕೂತ ತಂದೆಯವರು ಬೋಂಗಾ ಹೊಡೆದರು. ದಿನಕ್ಕೊಂದು ತೆಂಗಿನಕಾಯಿಯನ್ನಂತೂ ಒಡೆಯಲೇಬೇಕು. ಹಾಗಾಗಿ ಮೊದಲು ದೇವರಿಗೇ ಒಡೆದು ನಂತರ ಅಡುಗೆಯಲ್ಲಿ ಸ್ವಾಹಾ ಮಾಡುವದು ಪದ್ದತಿ.

'ಏ, ಬಂದೆ ಇರ್ರಿ. ಏನು ಗಡಿಬಿಡಿ ಮಾಡ್ತೀರಿ? ಇಲ್ಲೆ ಇವಾ 'ನಿಮ್ಮ' ಅಡ್ನಾಡಿ ಮಗ ಸ್ಟ್ರೈಕ್ ಅದು ಇದು ಅಂತ ಹೇಳಿ ನನ್ನ ತಲಿ ತಿನ್ನಲಿಕತ್ತಾನ. ನೀವು ಬ್ಯಾರೆ. ಅಅಅss,' ಅಂತ ಅನ್ನುತ್ತ ಸುಲಿದ ತೆಂಗಿನಕಾಯಿ ಕೊಡಲು ಒಳಗೆ ಹೋದರು. ಅಡ್ನಾಡಿ, ಗಿಡ್ನಾಡಿ ಅಂತೆಲ್ಲ ನನ್ನನ್ನು ಬೈಯಬೇಕಾದರೆ 'ನಿಮ್ಮ' ಮಗ. ಇರಲಿ ಎಲ್ಲ ಅಮ್ಮಂದಿರ ಸ್ಟ್ಯಾಂಡರ್ಡ್ ಡೈಲಾಗ್ ಅದು. ನಮಗೋ ಇನ್ನೂ ತಿಮಿರು. ಹ್ಯಾಂಗೂ ಅಮ್ಮ ರೈಸ್ ಆಗಿದ್ದಾಳೆ. ನೋಡೋಣ ನನ್ನ ಕಿತಾಪತಿ ಸಹಿಸಿಕೊಳ್ಳೋ ಸಹನೆ ಯಾವಾಗ ಖಾಲಿಯಾಗುತ್ತದೆ ಅಂತ ವಿಚಾರ ಮಾಡಿದೆ. ಅದು ಎಂದಿನ modus operandi.

'ಸ್ಟ್ರೈಕ್ ಮಾಡಲಿಕ್ಕೆ ಬಂದರೆ ನೀ ಖರೆ ಅಂದರೂ ಅವರಿಗೆ ಹೀಂಗೇ ಬೈದು ಕಳಸಾಕಿ? ಖರೇ?' ಅಂತ ಮತ್ತೂ ಕಡ್ಡಿಯಿಟ್ಟೆ. ಅಮ್ಮ ನನ್ನೊಂದಿಗೆ ಸಿಕ್ಕಾಪಟ್ಟೆ ಜೋರ್ದಾರ, ಜಬರ್ದಸ್ತ್, ಖಡಕ್ ಮಾತಾಡಿದರೂ ಬೇರೆ ಎಲ್ಲರ ಜೊತೆ smooth operator. ಸಿಕ್ಕಾಪಟ್ಟೆ diplomatic. ಹಾಗೆಲ್ಲ ಉಲ್ಟಾ ಸೀದಾ ಮಾತಾಡಿ, ಜಗಳಾಡಿದ್ದು ಇಲ್ಲವೇ ಇಲ್ಲ. ನನಗೆ ಸೀದಾ ಮಾತಿನಲ್ಲಿ ಹೇಳಿದ್ದು ಒಂದೂ ತಿಳಿಯುತ್ತಿರಲಿಲ್ಲ ಅಂತ ಸ್ವಲ್ಪ ಜೋರು ಮಾತು ಅಷ್ಟೇ.

'ಮತ್ತs ಸುಮ್ಮನೆ ಬಿಡತೇನಿ ಏನು? ಈಗ ನೀ ನನ್ನ ಭಾಳ ಕಾಡಬ್ಯಾಡ. ಈ ಸುದ್ದಿ ಕೇಳಿ ಭಾಳ ಸಿಟ್ಟು ಬಂದದ ನನಗ. ಇನ್ನೂ ಸಿಟ್ಟು ಬಂತು ಅಂದ್ರ ಅವರು ನಮ್ಮನಿಗೆ ಸ್ಟ್ರೈಕ್ ಮಾಡಲಿಕ್ಕೆ ಬರೋಕಿಂತ ಮೊದಲು ನಾನೇ ಅವರ ಮನಿಗೆ ಹೋಗಿ ಸ್ಟ್ರೈಕ್ ಮಾಡಿಬರ್ತೇನಿ. ತಿಳಿತೇನು?' ಅಂದುಬಿಟ್ಟರು ಅಮ್ಮ.

ಹ್ಯಾಂ!? ಇದೇನು? ಗೇಮ್ ಫುಲ್ ಚೇಂಜ್ ಆಗಿಬಿಟ್ಟಿತಲ್ಲ? ಸ್ಟ್ರೈಕ್ ಮಾಡುತ್ತೇವೆ ಅಂತ ಹೇಳಿದವರು ಅವರು. ಅದೂ ಒಂದು ವೇಳೆ ನಾಮಫಲಕ ಕನ್ನಡಕ್ಕೆ ಬದಲಾಯಿಸದಿದ್ದರೆ ಮಾತ್ರ. ಇಲ್ಲಿ ನೋಡಿದರೆ ಅವರ ಮಂಗಾಟಗಳಿಂದ ಸಿಟ್ಟಿಗೆದ್ದಿರುವ ಅಮ್ಮ ತಾನೇ ಅವರುಗಳ ಮನೆಗೆ ಹೋಗಿ ಜಬರಿಸಿ, ಝಾಡಿಸಿ ಬರುತ್ತೇನೆ ಅನ್ನುತ್ತಿದ್ದಾಳೆ. ಗಝಬ್ ಹುಯಿ ಗವಾ ರೇ!

'ಏನಬೇ, ಏನು ಹಾಂಗದ್ರ? ಹಾಂ?' ಅಂತ ವಿವರಣೆ ಕೇಳಿದೆ. ನಂಬಲು ಅಸಾಧ್ಯವಾದದ್ದನ್ನು ಹೇಳಿದರೆ ಅದರ ಬಗ್ಗೆ ವಿವರಣೆ ಕೇಳುವಾಗ ಮಾತಿನಲ್ಲಿ 'ಬೇ' ಕೂಡ ಬಂದು ಬಿಡುತ್ತದೆ. ಆವಾಗ ಆ ಬೇ. ಈಗ bay area. San Francisco bay area.

'ಏ, ಮತ್ತೇನೋ? ಅವರವರ ಮನಿಗೇ ಹೋಗಿ ಅವರಿಗೆಲ್ಲ ಸರೀತ್ನಾಗಿ ದಬಾಯಿಸಿ ಹೇಳತೇನಿ. 'ಅಲ್ಲರೀಪಾ ದೊಡ್ಡ ಮನುಷ್ಯಾರ, ಸ್ಟ್ರೈಕ್ ಮಾಡ್ತೇವಿ ಅಂತ ದೊಡ್ಡದಾಗಿ ಪೇಪರಿನ್ಯಾಗ ಕೊಟ್ಟೀರಲ್ಲಾ. ನೀವೆಲ್ಲಾ ಇಷ್ಟು ದೊಡ್ಡ ಕನ್ನಡದ ಹೋರಾಟಗಾರರಾಗಿ ನಿಮ್ಮ ನಿಮ್ಮ ಮಕ್ಕಳನ್ನು ಯಾಕ ಕನ್ನಡ ಮೀಡಿಯಂ ಶಾಲೆಗೆ ಹಾಕಲಿಲ್ಲ? ಅದನ್ನು ಮೊದಲು ಹೇಳ್ರೀ. ಅದನ್ನು ಪ್ರತಿಭಟಿಸಲಿಕ್ಕೆ ನಾ ಬಂದೇನಿ. ನೀವೇನು ನಮ್ಮ ಮನಿ ಮುಂದ ಬಂದು ಸ್ಟ್ರೈಕ್ ಮಾಡ್ತೀರಿ? ನಾನೇ ಮೊದಲು ಸ್ಟ್ರೈಕ್ ಮಾಡಾಕಿ. ನಮ್ಮಂತವರು ಭಾಳ ಮಂದಿ ಇದ್ದೇವಿ. ನಮ್ಮ ಪಾಡಿಗೆ ನಾವು ನಮಗ ತಿಳಿದಂಗ ಕನ್ನಡದ ಸೇವಾ ಮಾಡಿಕೊಂಡು, ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕಿಕೊಂಡು, ಕನ್ನಡ ಪುಸ್ತಕ ರೊಕ್ಕ ಕೊಟ್ಟು ತೊಗೊಂಡು, ಓದಿ, ಮಂದಿಗೂ ಓದಿಸಿಕೊಂಡು ಇದ್ದೇವಿ. ನೀವು ಅದನ್ನೆಲ್ಲಾ ನೋಡೋದೇ ಇಲ್ಲ.  ಬರೇ ನೇಮ್ ಪ್ಲೇಟ್ ಬದಲಾಯಿಸಲಿಕ್ಕೆ ಕರೆ ಕೊಟ್ಟೆ. ಬೋರ್ಡ್ ಮ್ಯಾಲೆ ಡಾಂಬರ್ ಹಚ್ಚಿ ಬಂದೆ ಮಾಡ್ತೀರಿ. ಇದೆಲ್ಲ ಹುಚ್ಚಾಟ ಮಾಡಿದ ಮಹಾನುಭಾವರು ಏನು ಮಾಡ್ಯಾರ ಅಂತ ನೋಡಿದರೆ ನಿಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಸಾಲಿಗೆ ಕಳಿಸಿ, ಟಸ್ ಪುಸ್ ಅಂತ ಮನಿಯೊಳಗೂ ಅಸಡ್ಡಾಳ ಇಂಗ್ಲೀಷ್ ಮಾತಾಡಿಸಿ ಖುಷಿ ಪಡ್ತೀರಿ ನೋಡ್ರಿ. ಅಲ್ಲಾ? ಇದೇ ಏನ್ರೀ ನಿಮ್ಮ ಕನ್ನಡ ಪ್ರೀತಿ? ಹಾಂ?' ಅಂತ ಬರೋಬ್ಬರಿ ಆವಾಜ್ ಹಾಕಿ ಬರ್ತೇನಿ. ಬಿಡಂಗಿಲ್ಲ. ಏನಂತ ತಿಳ್ಕೊಂಡಾರ?' ಅನ್ನುತ್ತ ಭುಸುಗುಡುತ್ತಲೇ ಒಳಗೆ ಕೆಲಸ ನೋಡಲು ಹೋದರು.

ಈ ಲಫಡಾ ಉತ್ತುಂಗಕ್ಕೆ ಹೋದಾಗ ಆಗಲಿರುವ ಒಂದು ಐತಿಹಾಸಿಕ ಮುಖಾಮುಖಿಗೆ ಕಾಯುತ್ತಿದ್ದೆ. ಆದರೆ ಅದು ಆಗಲೇ ಇಲ್ಲ. ಯಾರೂ ಸ್ಟ್ರೈಕ್ ಗೀಕ್ ಏನೂ ಮಾಡಲಿಲ್ಲ. ನಮಗೆ ಗೊತ್ತಿದ್ದ ಮಟ್ಟಿಗೆ ನಮ್ಮ ಏರಿಯಾದ ಯಾವದೇ ಜನ ನೇಮ್ ಪ್ಲೇಟ್ ಗೀಮ್ ಪ್ಲೇಟ್ ಬದಲು ಮಾಡಲಿಲ್ಲ. ಮನೆ ಮೇಲೆ ಇಂಗ್ಲೀಷಿನಲ್ಲಿ ಹೆಸರು ಬರೆಸಿದ್ದವರೂ ಏನೂ ಚೇಂಜ್ ಮಾಡಿಸಲಿಲ್ಲ. ಹೆಚ್ಚಿನವರು ಪತ್ರಿಕೆಯಲ್ಲಿ ಬಂದ ಆ ಪ್ರಕಟಣೆ ಓದಿರಲಿಕ್ಕೂ ಇಲ್ಲ. ಅಲ್ಲಿಗೆ ಆ ನಾಮಫಲಕ ಚಳುವಳಿಗೇ 'ನಾಮ' ಬಿದ್ದಿರಬೇಕು ಅಂದುಕೊಂಡೆ. ಅನೇಕ ಯಡವಟ್ಟು ಚಳುವಳಿಗಳ ಹಣೆಬರಹವೇ ಅಷ್ಟು.

ನನಗೆ ಇವತ್ತಿಗೂ ಒಂದು ಸಂಶಯವಿದೆ. ಎಲ್ಲಿ ಅಮ್ಮನ ಖಡಕ್ ಧಮಕಿ ಆ ಹೋರಾಟಗಾರರ ಕಿವಿಗೆ ಬಿದ್ದು ಸ್ಟ್ರೈಕ್ ಇತ್ಯಾದಿ ಮಾಡುವ ಯಬಡ ಯೋಚನೆಯನ್ನು ಕೈಬಿಟ್ಟರೋ ಹೇಗೆ? ಅಮ್ಮನಿಗಂತೂ ಆವತ್ತು ಸಾಕಷ್ಟು ರೋಷ ಬಂದಿತ್ತು. ಅದು ಸಾತ್ವಿಕ ರೋಷ. ಮತ್ತೆ ಹೋರಾಟಗಾರರ ಬಣ್ಣ ಕೂಡ ಬಯಲಾಗಿತ್ತು. ಅಮ್ಮ ಕೂಡ ಆ ಕುರಿತು ನೆರೆಹೊರೆಯಲ್ಲಿ ಟಾಮ್ ಟಾಮ್ ಹೊಡೆದಿದ್ದರೋ ಏನೋ. ಎಲ್ಲಿ ಅಮ್ಮ ತಮ್ಮ ಆಕ್ರೋಶ ಅಲ್ಲಿ ಇಲ್ಲಿ ವ್ಯಕ್ತಪಡಿಸಿದ್ದು ಹೋರಾಟಗಾರರ ಕಿವಿಗೂ ಹೋಗಿ ಮುಟ್ಟಿ, 'ಏ, ಹೆಗಡೆ ಬಾಯಾರು ಭಾಳ ಜೋರ್ ಅದಾರು. ಮತ್ತ ನಮ್ಮ ಭಾಂಡಾ ಎಲ್ಲ ಬರೋಬ್ಬರಿ ತಿಳಕೊಂಡುಬಿಟ್ಟಾರು. ಸ್ಟ್ರೈಕ್ ಮಾಡಾಕ ಹೋದ್ರ ನಮ್ಮ ಮಾರ್ಯಾದಿನs ಹೋಕ್ಕೈತಿ. ಎಲ್ಲರೆ ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕ್ರಿ ಅಂತ ಜಗಳಾ ತೆಗೆದು ಕುಂತರು ಅಂದ್ರ ಮುಗೀತು ಕಥಿ. ಯಾಕ ಸುಮ್ಮನs?' ಅಂತ ಅಂದುಕೊಂಡು ಸ್ಟ್ರೈಕ್ ಮಾಡುವ ಆಲೋಚನೆ ಬಿಟ್ಟು, ಮುಂದಿನ ಚಳುವಳಿ ನೋಡಿಕೊಂಡು ಹೋದರೋ ಏನೋ? ಮಾಡಲಿಕ್ಕೆ ಬೇರೆ ಉದ್ಯೋಗಿಲ್ಲ ಅಂದವರಿಗೆ ಮಾಡಲಿಕ್ಕೆ ಚಳುವಳಿಗೇನು ಕಮ್ಮಿಯೇ?

ನಮ್ಮ ಮನೆಯಲ್ಲಿನ ಕನ್ನಡ ಪ್ರೇಮ ಹೀಗಿತ್ತು. ಎಲ್ಲರೂ ಕನ್ನಡ ಮೀಡಿಯಂನಲ್ಲೇ ಓದಿದದವರು. ಅಣ್ಣ, ನಾನು ಎಂಟನೇ ಕ್ಲಾಸಿನಿಂದ ಇಂಗ್ಲೀಷ್ ಮೀಡಿಯಂ. ಅದೂ ನಮ್ಮ KEBHS ಶಾಲೆಯಲ್ಲಿಯೇ ಇಂಗ್ಲಿಷ್ ಮೀಡಿಯಂ ಇತ್ತು ಮತ್ತು ಅಲ್ಲಿನ ಮಾಸ್ತರುಗಳೇ ಪ್ರೋತ್ಸಾಹಿಸಿದರು ಅನ್ನುವ ಕಾರಣಕ್ಕೆ. ಆಕಸ್ಮಾತ ಅವರು ಪ್ರೋತ್ಸಾಹಿಸದಿದ್ದರೆ ಅಥವಾ ನಾವೇ, 'ಬೇಡ. ಕನ್ನಡ ಮೀಡಿಯಂನಲ್ಲೇ SSLC ತನಕವೂ ಓದುತ್ತೇವೆ,' ಅಂದಿದ್ದರೆ ಅದರ ಬಗ್ಗೆ ಪಾಲಕರು ಏನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮತ್ತೆ ನಮ್ಮ ಎಲ್ಲ cousins ಹೆಚ್ಚಾಗಿ ಕನ್ನಡ ಮೀಡಿಯಂನಲ್ಲೇ ಓದಿದವರು. ಒಬ್ಬರಕಿಂತ ಒಬ್ಬರು ಮುಂದೆ ಚೆನ್ನಾಗಿ ಮಾಡಿಕೊಂಡಿದ್ದರು. 'ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವಾಗಬೇಕು. ಅದೇ ಅತ್ಯುತ್ತಮ,' ಅಂತ ನಮ್ಮ ಪಾಲಕರ ದೃಢ ನಂಬಿಕೆ. ಹಾಂಗಾಗಿ ನಾನು, 'ಇಂಗ್ಲೀಶ್ ಮೀಡಿಯಂ ಶಾಲೆಗೇ ಹೋಗುತ್ತೇನೆ. ಕನ್ನಡ ಮೀಡಿಯಂ ಬೇಡ,' ಅಂತ ಬಾಲ್ಯದಲ್ಲಿ ರಚ್ಚೆ ಹಿಡಿದಾಗಲೂ ಕ್ಯಾರೇ ಮಾಡದೇ ಕನ್ನಡ ಶಾಲೆಗೇ (ಬಡಿದು) ಅಟ್ಟಿದ್ದರು. ಇಂಗ್ಲೀಷ್ ಶಾಲೆ ದೂರದಲ್ಲಿತ್ತು. ಅಲ್ಲಿ ಸೇರಿಕೊಂಡಿದ್ದರೆ ಮೊದಲು ಆಟೋ ರಿಕ್ಷಾ, ನಂತರ ಬಸ್ಸು ಇತ್ಯಾದಿಗಲ್ಲಿ ಸ್ಟೈಲ್ ಆಗಿ ಹೋಗಬಹುದಿತ್ತು. ಮತ್ತೆ ಅವರ ಯುನಿಫಾರ್ಮ್, ಬೂಟು, ಹ್ಯಾಟು ಎಲ್ಲ ಸ್ವಲ್ಪ ಚಮಕಾಯಿಸುತ್ತಿದ್ದವು. ಹಾಗಾಗಿ ಅಲ್ಲಿ ಸೇರಿಬಿಡಬೇಕು ಅಂತ ನಮ್ಮ ಆಸೆ. ಶಾಲೆಗೆ ಹೋಗುವದು ಅಂದರೆ ಪರಮ ಬೋರು. ಇನ್ನು ಹೋಗಲೇಬೇಕು ಅಂತ ದರಿದ್ರ ಕರ್ಮವಿದ್ದರೆ ಎಲ್ಲಿಯಾದರೂ ಸ್ವಲ್ಪ ಸ್ಟೈಲ್ ಹೊಡೆಯಲು ಅನುಕೂಲವಿದ್ದ ಶಾಲೆಗೇ ಹೋಗೋಣ ಅಂತ ನಮ್ಮ ಅಂದಿನ ಚಿಣ್ಣ ಆಸೆ. ಸೇರಿದ ಕನ್ನಡ ಮೀಡಿಯಂ ಶಾಲೆ ಎಲ್ಲ ದೃಷ್ಟಿಯಿಂದಲೂ simple living, high thinking ಮಾದರಿಯ ಶಾಲೆ. ಎಲ್ಲ ಸರಳ. ಮತ್ತೆ ಮನೆ ಹತ್ತಿರಕ್ಕೇ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಮ್ಮನ ಕಡೆಯ ಎಲ್ಲರೂ ಓದಿದ್ದು ಅಲ್ಲಿಯೇ. ಹಾಗಾಗಿ ಮಕ್ಕಳಾದ ನಮ್ಮನ್ನು ಬೇರೆ ಶಾಲೆಗೆ ಹಾಕುವ ಪ್ರಶ್ನೆಯೇ ಬರುತ್ತಿದ್ದಿಲ್ಲ. ಅದನ್ನು ಅಮ್ಮ consideration ಗೇ ತಂದುಕೊಂಡಿರಲೇ ಇಲ್ಲ. It was out of question.

ಮನೆಯಲ್ಲಿ ಕನ್ನಡ ದಿನಪತ್ರಿಕೆ ಬರುತ್ತಿತ್ತು. ನಮ್ಮ ಸಂಯುಕ್ತ ಕರ್ನಾಟಕ. ಇಂಗ್ಲೀಶ್ ಪತ್ರಿಕೆಗಳೂ ಬರುತ್ತಿದ್ದವು. ಕನ್ನಡದ ಚಂದಮಾಮ, ಬಾಲಮಿತ್ರ, ಇಂದ್ರಜಾಲ ಕಾಮಿಕ್ಸ್ ಎಲ್ಲ ನನ್ನ ಫೇವರಿಟ್. ಲೆಕ್ಕವಿಲ್ಲದಷ್ಟು ಅಮರ ಚಿತ್ರ ಕಥೆ, ಭಾರತ ಭಾರತಿ ಪುಸ್ತಕಗಳು ಇದ್ದವು. ಅವನ್ನೆಲ್ಲ ಮತ್ತೆ ಮತ್ತೆ ಓದಿದ್ದೇ ಓದಿದ್ದು. ಕಸ್ತೂರಿ, ಕರ್ಮವೀರ ಅಮ್ಮನ ಫೇವರಿಟ್. ಅವುಗಳನ್ನು ಈಗ ಸುಮಾರು ಅರವತ್ತು ವರ್ಷಗಳಿಂದ ನಿರಂತರವಾಗಿ ಓದಿಕೊಂಡು ಬಂದಿದ್ದಾರೆ. ಅವು ನಡುವೆ ನಿಂತುಹೋದ ಸಮಯಗಳಲ್ಲಿ ಒಂದು ಬಿಟ್ಟು ಸದಾ ಓದಿದ್ದಾರೆ. ಸರ್ಕಾರಿ ಲೈಬ್ರರಿ, ಕವಿವಿ ಲೈಬ್ರರಿಗಳ ಫುಲ್ ಉಪಯೋಗ. ಓದದ ಕನ್ನಡದ ಒಳ್ಳೆ ಕಾದಂಬರಿಗಳಿಲ್ಲ. ಅಮ್ಮನಂತೂ ಫುಲ್ ಕನ್ನಡ ಪ್ರೇಮಿ. ಅವರು ಓದುವದೆಲ್ಲ ಕನ್ನಡವೇ. ಮೊದಲು ನಾನೂ ಅವಳ ಪುಸ್ತಕಗಳನ್ನೆಲ್ಲ ಓದಿಬಿಡುತ್ತಿದ್ದೆ. ತಿಳಿಯಲಿ ಬಿಡಲಿ ಒಟ್ಟಿನಲ್ಲಿ ಓದುವದು. ನನ್ನ ಕನ್ನಡ ಓದಿನ ಚಟ ಒಂದು ಕಾಲದಲ್ಲಿ ಪಾಲಕರನ್ನು ಚಿಂತೆಗೂ ದೂಡಿತ್ತು. ೧೯೮೩ ರಲ್ಲಿ ಒಬ್ಬ ಮಿತ್ರ ಮತ್ತು ಅವನ ಅಣ್ಣ ನನಗೆ ಪತ್ತೇದಾರಿ ಕಾದಂಬರಿ ಓದುವ ಹುಚ್ಚು ಹಚ್ಚಿಬಿಟ್ಟರು. ಅಲ್ಲಿಗೆ ಫುಲ್ ಶಿವಾಯ ನಮಃ! ಆಗ ಕೇವಲ ಹನ್ನೊಂದು ವರ್ಷ ಅಷ್ಟೇ. ಆ ವಯಸ್ಸಿನಲ್ಲಿ ಪತ್ತೇದಾರಿ, ರೋಚಕ ಕಾದಂಬರಿಗಳನ್ನು ಓದುವದು ಎಷ್ಟು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಅವು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದವು. 'ಏ, ಭಾಳ ಮಿಸ್ಟರಿ ನಾವೆಲ್ ಓದಿದರೆ ಮುಂದ ಮೇಸ್ತ್ರಿ ಆಗ್ತಿ ನೋಡು,' ಅಂತ ಮನೆಯವರು ಮೆತ್ತಗೆ ಎಚ್ಚರಿಕೆ ಕೊಟ್ಟಿದ್ದರು. ನಾನು ಕೇಳಲಿಲ್ಲ. 'ಹೋಗಲಿ, ಓದುತ್ತಾನೆಯೇ ಹೊರತೂ ಮತ್ತೇನೂ ಭಾನಗಡಿ ಮಾಡುವದಿಲ್ಲ. ಅಷ್ಟು ಸಾಕು,' ಅಂತ ಹೆಚ್ಚಿಗೆ ಏನೂ ಹೇಳದೇ ಸುಮ್ಮನಿದ್ದರು. ಮತ್ತೆ ಅವನ್ನೇನೂ ಖರೀದಿ ಮಾಡುತ್ತಿದ್ದಿಲ್ಲ. ಎಲ್ಲ ಲೈಬ್ರರಿ ಮಾಲು. ಮುಂದೆ ತಂತಾನೇ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ  ಹರಿಯಿತು. ಧಾರವಾಡದ ಎಲ್ಲ ಲೈಬ್ರರಿಗಳಲ್ಲಿ, ಕವಿವಿ ಲೈಬ್ರರಿಯಲ್ಲಿ ಇದ್ದ ಕನ್ನಡದ ಎಲ್ಲ ಪತ್ತೇದಾರಿ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಮತ್ತೆ ಆಗ ಪತ್ತೇದಾರಿ ಕಾದಂಬರಿಗಳ ಜಮಾನಾ ಮುಗಿದಿತ್ತು. ಯಾರೂ ಜಾಸ್ತಿ ಬರೆಯುತ್ತಿದ್ದಿಲ್ಲ. ಹಾಗಾಗಿ ೧೯೮೫ ರ ಹೊತ್ತಿಗೆ ಆ ಹುಚ್ಚು ಬಿಟ್ಟು ಹೋಯಿತು. ಮನೆಯವರು ಮೇಲೆ ನೋಡಿ ಕೈಮುಗಿದಿರಬೇಕು. ನಂತರ fiction ಓದಿದ್ದೇ ಭಾಳ ಕಮ್ಮಿ. non-fiction ಓದಿದ್ದೇ ಜಾಸ್ತಿ. ಅದೂ ಇಂಗ್ಲೀಷಿನಲ್ಲಿ. ಯಾಕೆಂದರೆ ಕನ್ನಡದಲ್ಲಿ ಅಂತಹ ಪುಸ್ತಕಗಳು ಕಮ್ಮಿ. ಆದರೂ ಕನ್ನಡದ ಕಾದಂಬರಿಗಳನ್ನು ದಿನಗಟ್ಟಲೇ, ಪಟ್ಟು ಬಿಡದೇ, ಒಂದೇ ಗುಕ್ಕಿನಲ್ಲಿ ಓದಿದ ಸವಿನೆನಪುಗಳು ಬೇಕಾದಷ್ಟಿವೆ. ಮುಂದೊಮ್ಮೆ ರಿಟೈರ್ ಆದ ಮೇಲೆ ಫುಲ್ ಟೈಮ್ ರೀಡರ್ ಆದ ಕೂಡಲೇ ಅವನ್ನೆಲ್ಲ ಮತ್ತೊಮ್ಮೆ ಓದಬೇಕು. ಈಗ ಇರುವ ಲಿಮಿಟೆಡ್ ಟೈಮಿನಲ್ಲಿ ಓದಬೇಕಾದ ಹಲವಾರು ಪುಸ್ತಕಗಳನ್ನು prioritize ಮಾಡಿ ಓದಬೇಕಾಗಿದೆ. ಹಾಗಾಗಿ ಕನ್ನಡದ ಅನೇಕ ಕಾದಂಬರಿಗಳು ಬ್ಯಾಕ್ ಸೀಟಿಗೆ ಹೋಗಿವೆ.

ತಂದೆಯವರದ್ದು ಕನ್ನಡದ ಓದು ಕಮ್ಮಿ. ಯಾಕೆಂದರೆ ಅವರು ಇಂದಿಗೂ ಸಿಕ್ಕಾಪಟ್ಟೆ ಇಷ್ಟಪಟ್ಟು ಓದುವ popular science, international events, spirituality, self help, ಮುಂತಾದ ವಿಷಯಗಳ ಮೇಲೆ ಕನ್ನಡದಲ್ಲಿ ಆಗ ಪತ್ರಿಕೆಗಳು, ಪುಸ್ತಕಗಳು ಇರಲಿಲ್ಲ. ಈಗಲೂ ಜಾಸ್ತಿಯಿಲ್ಲ. ಹಾಗಾಗಿ ಅವರು ಖಾಯಂ ಓದಿದ್ದು ಇಂಗ್ಲೀಷಿನ Reader's Digest. ಸುಮಾರು ೬೫ ವರ್ಷದಿಂದ ಬಿಟ್ಟೂ ಬಿಡದೇ ಓದಿದ್ದಾರೆ. ಮೊದಲಿಂದಲೂ ಪರಮ ದುಬಾರಿ ಪತ್ರಿಕೆ ಅದು. ಆದರೂ ನಾವು ಅದರ ಅಷ್ಟು ಹಳೆಯ ಚಂದಾದಾರರು. ಎಷ್ಟೋ ವರ್ಷಗಳ ಹಳೆಯ ಪತ್ರಿಕೆಗಳು ಇನ್ನೂ ಇವೆ. ಮತ್ತೆ Reader's Digest ಅಂದರೆ ಅದೊಂದು ಚಟ. ಅದರಲ್ಲಿ ಒಂದು ಆರ್ಟಿಕಲ್ ಓದಿದರೆ ಅಂತ್ಯದಲ್ಲಿ ಅದರ ಬಗ್ಗೆ ಹತ್ತು ಪುಸ್ತಕಗಳ ರೆಫರೆನ್ಸ್ ಕೊಟ್ಟಿರುತ್ತಾರೆ. ಅವನ್ನು ಕೊಂಡು ಓದಬೇಕು. ಓದದಿದ್ದರೆ ಸಮಾಧಾನವಿಲ್ಲ. ವಿದೇಶದಲ್ಲಿ ನೆಲೆಸಿದ್ದ ತಂದೆಯವರ ದೋಸ್ತರು, 'ಏನು ತಂದುಕೊಡಲಿ?' ಅಂತ ಕೇಳಿದಾಗ ಬಾಕಿ ಜನ ಹಾಳುವರಿ ಇಲೆಕ್ಟ್ರಾನಿಕ್ ಅದು ಇದು ತರಿಸಿಕೊಂಡರೆ ಪುಸ್ತಕ ತರಿಸಿಕೊಂಡು ಓದಿದವರು ನಮ್ಮ ತಂದೆಯವರು. ಯಾಕೆಂದರೆ ಆಗ ಅವೆಲ್ಲ ಪುಸ್ತಕಗಳು ಇಂಡಿಯಾದಲ್ಲಿ ಕಾಸು ಕೊಟ್ಟರೂ ಸಿಗುತ್ತಿರಲಿಲ್ಲ. ಹೀಗೆ ಪುಸ್ತಕ ಪ್ರೇಮ ನಿರಂತರ. ಬೇರೆ ವಸ್ತುಗಳ ಮೇಲೆ ರೊಕ್ಕ ಖರ್ಚು ಮಾಡುವಾಗ ದೂಸರಾ ಯೋಚನೆ ಮಾಡಿದರೂ ಮಾಡಿಯೇವು. ಆದರೆ ಪುಸ್ತಕದ ವಿಷಯಕ್ಕೆ ಬಂದಾಗ ನಮ್ಮದು ಬಿಂದಾಸ್ ಖರ್ಚು. ಈಗೂ ಅಷ್ಟೇ. ಮೊದಲೆಲ್ಲ ಎಷ್ಟೆಷ್ಟೋ ಪುಸ್ತಕಗಳನ್ನು ಮನೆಯವರ ಹತ್ತಿರ ಅಷ್ಟಷ್ಟು ದುಡ್ಡು ತೆತ್ತಿಸಿ ಕೊಡಿಸಿಕೊಂಡರೂ ಪೂರ್ತಿ ಓದಿ ಮುಗಿಸುತ್ತಿದ್ದಿಲ್ಲ. ಈಗ ಹಾಗಲ್ಲ. ಗುದ್ದಾಡಿಯಾದರೂ ಓದಿ ಮುಗಿಸುತ್ತೇನೆ. ಅದೇನೋ ಅಂತಾರಲ್ಲ....ಅಪ್ಪನ ರೊಕ್ಕ ಉಡಾಯಿಸುವಾಗ ಇಲ್ಲದ ಪ್ರಜ್ಞೆ ಸ್ವಂತ ರೊಕ್ಕ ಉಡಾಯಿಸುವಾಗ ಏಕ್ದಂ ಬಂದುಬಿಡುತ್ತದೆಯಂತೆ!

ಮಕ್ಕಳನ್ನು ಮುದ್ದಾಂ ಕನ್ನಡ ಮೀಡಿಯಂ ಶಾಲೆಗೆ ಹಾಕುವದು. ಸಾಧ್ಯವಾದಷ್ಟು ಎಲ್ಲ ಕಡೆ ಕನ್ನಡ ಮಾತಾಡುವದು. maximum ಕನ್ನಡ ಓದುವದು ಮತ್ತು ಓದಿಸುವದು. ಇವೆಲ್ಲ ನಮ್ಮ ಕುಟುಂಬದಲ್ಲಿನ ಕನ್ನಡ ಪ್ರೇಮದ ಪರಿ. ಯಾರೂ ಅಷ್ಟೆಲ್ಲ ಚಲನಚಿತ್ರ ಪ್ರಿಯರಲ್ಲ. ಹಾಗಾಗಿ ಕನ್ನಡ ಸಿನೆಮಾಗಳನ್ನು ಅಷ್ಟೆಲ್ಲ ನೋಡಿಲ್ಲ. ಆದರೆ ಒಳ್ಳೆಯ ಸಿನೆಮಾ ಬಂದರೆ ಮುದ್ದಾಂ ನೋಡಿದ್ದೇವೆ. ಅದು ಬಿಟ್ಟರೆ ಒಳ್ಳೆ ಹಿಂದಿ ಸಿನೆಮಾಗಳತ್ತ ಆಸಕ್ತಿ ಜಾಸ್ತಿ. ಯಾಕೆಂದರೆ ಧಾರವಾಡ ಕಡೆ ಮೊದಲೆಲ್ಲ ಅವೇ ಜಾಸ್ತಿ ಪಾಪ್ಯುಲರ್. ಹೇಳಿಕೇಳಿ ಮುಂಬೈ ಕರ್ನಾಟಕ.

ನಿನ್ನೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ. ಇದೆಲ್ಲ ನೆನಪಾಯಿತು. ಕನ್ನಡದ ಸೇವೆ, ಪ್ರೇಮ, ಕನ್ನಡಕ್ಕಾಗಿ ಬಲಿದಾನ ಎಲ್ಲ ದೊಡ್ಡ ಮಾತುಗಳು. ಅವೆಲ್ಲ ನಮ್ಮಂತವರಿಗೆ ಅಲ್ಲ ಬಿಡಿ. ಮತ್ತೆ ಎಲ್ಲರೂ ಒಂದೇ ರೀತಿಯಲ್ಲಿ ಕನ್ನಡವನ್ನು ಇಷ್ಟಪಡಬೇಕು, ಪ್ರೀತಿಸಬೇಕು, ಸಪೋರ್ಟ್ ಮಾಡಬೇಕು ಅಂತೇನೂ ಇಲ್ಲ. ನಾವು, ನಮ್ಮ ಪಾಲಕರು ಮಾಡಿದ್ದೊಂದೇ ಸರಿ, ಬೇರೆಯವರು ಮಾಡಿದ್ದು ತಪ್ಪು ಅಂತಲೂ ಅಲ್ಲ. ಅಷ್ಟೇ ನಾಮ್ಕೇವಾಸ್ತೆ ಮನೆ ಮುಂದೆ ನೇಮ್ ಪ್ಲೇಟ್ ಒಂದನ್ನು ಮಾತ್ರ ಕನ್ನಡದಲ್ಲಿ ಹಾಕಿಕೊಂಡು, ತಾವು ಖುದ್ದು ಕನ್ನಡದ ಮಾಸ್ತರಿಕೆ ಮಾಡಿಕೊಂಡು, ಮಕ್ಕಳನ್ನು ಮಾತ್ರ ಇಂಗ್ಲೀಶ್ ಮೀಡಿಯಂ ಶಾಲೆಗೆ ಹಾಕಿ, ಮತ್ತೊಬ್ಬರು ಬೇರೆಯಲ್ಲ ವಿಷಯಗಳಲ್ಲಿ ಕನ್ನಡವನ್ನು ಸಿಕ್ಕಾಪಟ್ಟೆ ಬಳಸಿ, ಪ್ರೀತಿಸುತ್ತಿರುವಾಗ ಮನೆ ಮುಂದಿನ ನಾಮಫಲಕ ಇಂಗ್ಲೀಷಿನಲ್ಲಿದೆ ಅನ್ನುವ ಚಿಲ್ಲರೆ ಕಾರಣಕ್ಕೆ ಸ್ಟ್ರೈಕ್ ಮಾಡುತ್ತೇವೆ ಅಂತೆಲ್ಲ ಪ್ರಕಟಣೆ ಕೊಡುವದು ತಪ್ಪಲ್ಲದಿದ್ದರೂ ಬಾಲಿಶ , ಸ್ಟುಪಿಡ್ ಅಂತ ಅನಿಸಿದ್ದು ಮಾತ್ರ ನಿಜ.

ಕಿರಿಕ್ ಕೀರ್ತಿ ಎಂಬ anchor ನ ಕೆಳಗಿನ ವೀಡಿಯೊ ನೋಡಿಬಿಡಿ. ಅದರಲ್ಲಿನ ಸಂದೇಶದೊಂದಿಗೆ ನನ್ನ ಪೂರ್ತಿ ಸಹಮತವಿದೆ.




ಅವಕಾಶ ಸಿಕ್ಕಲ್ಲಿ ಕನ್ನಡ ಓದಿ, ಬರೆದು, ಎಲ್ಲಕ್ಕಿಂತ ಮುಖ್ಯವಾಗಿ ಇತರೆ ಕನ್ನಡಿಗರೊಂದಿಗೆ ಅವಕಾಶ ಸಿಕ್ಕಾಗೆಲ್ಲ ಕನ್ನಡದಲ್ಲೇ ಮಾತಾಡಿಬಿಟ್ಟರೆ ಕನ್ನಡದ ಬಳಕೆ, ಉಳಿಕೆ ಬೇಕಾದಷ್ಟು ಆಗಿಬಿಡುತ್ತದೆ. ಜೊತೆಗೆ ಕನ್ನಡದ ಒಳ್ಳೆ ಪುಸ್ತಕ, ಸಿನೆಮಾಗಳನ್ನು ರೊಕ್ಕ ಕೊಟ್ಟು ಕೊಂಡು, ಓದಿ, ನೋಡಿ ಪ್ರೋತ್ಸಾಹಿಸಿಬಿಟ್ಟರೆ ಬೇಕಾದಷ್ಟಾಯಿತು. ಕನ್ನಡ ಪುಸ್ತಕಗಳ ಪ್ರಕಾಶಕರೂ ಕೂಡ ಪುಸ್ತಕಗಳನ್ನು e-books ಮಾಡುವತ್ತ ಗಮನಹರಿಸಬೇಕು. ಯಾಕೆಂದರೆ ನಮ್ಮಂತವರು ನಮ್ಮದೇ ಕಾರಣಗಳಿಗಾಗಿ ಹೆಚ್ಚಾಗಿ e-books ಗಳನ್ನೇ ಓದುತ್ತೇವೆ ಮತ್ತು prefer ಮಾಡುತ್ತೇವೆ. ಮತ್ತೆ ಕನ್ನಡ ಸಿನೆಮಾಗಳು. ಎಲ್ಲೋ ಒಂದು ೫% ಚೆನ್ನಾಗಿರುತ್ತವೆ. ಡಿಫರೆಂಟ್ ಆಗಿರುತ್ತವೆ. ಬಾಕಿಯೆಲ್ಲ ಶುದ್ಧ ಡಬ್ಬಾ. ಕೇವಲ ನಮ್ಮ ಕನ್ನಡ ಭಾಷೆಯ ಸಿನೆಮಾ ಅಂತ ನೋಡುತ್ತ ಕೂಡಲಾಗುವದಿಲ್ಲ. ಅದನ್ನು ಚಿತ್ರ ಮಾಡುವವರು ಗಮನಿಸಿದರೆ ಸಾಕು. ಮತ್ತೆ ನಾವು ಡಬ್ಬಾ ಅನ್ನುವಂತಹ ಚಿತ್ರಗಳಿಂದಲೇ ಅವರಿಗೆ ಲಾಭವಾಗುತ್ತಿದೆ ಅಂತಾದರೆ ಸರಿ ಬಿಡಿ. ಅವರ audience ಬೇರೆಯೇ ಇದ್ದಾರೆ ಅಂತಾಯಿತು. That's perfectly fine. ಮತ್ತೆ ಕನ್ನಡ ಸಿನೆಮಾಗಳನ್ನು ದಯಮಾಡಿ online ಬಿಡುಗಡೆ ಮಾಡಿ. ರೊಕ್ಕ ಕೇಳಿದರೂ ಕೊಟ್ಟು online ನೋಡುತ್ತೇವೆ. ನೀವು ಹಾಗೆ ಮಾಡದೇ ಇದ್ದರೆ ಯಾರೋ pirated ಕಾಪಿ ತೇಲಿಬಿಡುತ್ತಾರೆ. ಇಳಿಸಿಕೊಂಡು ನೋಡುತ್ತೇವೆ. ಮತ್ತೇನು ಮಾಡೋಣ? online ನೋಡಲು ಅನುಕೂಲ ಮಾಡಿಕೊಡುವದು ಸುಲಭ ಈಗಿನ ಕಾಲದಲ್ಲಿ. ಮಾಡಿಕೊಡಿ ಅಂತ ಕೋರಿಕೆ

ಕನ್ನಡ ಸೇವೆ ಗೀವೆ, ಬಲಿದಾನ ಅಂತ ದೊಡ್ಡ ಮಾತೆಲ್ಲ ನಾವು ಪುಂಗೋದಿಲ್ಲ. ಬಳಕೆ ಅನ್ನುತ್ತೇವೆ. ಮಾಡಿಕೊಂಡೇ ಬಂದಿದ್ದೇವೆ. ಸಾಧ್ಯವಾದಷ್ಟು ಜಾಸ್ತಿ ಮಾಡುತ್ತೇವೆ. ಆದರೆ one size fits all ಅನ್ನುವ ಹುಂಬಗುದಕಿತನ ಯಾವ ವಿಷಯದಲ್ಲೂ ನಮಗೆ ಸರಿ ಕಾಣುವದಿಲ್ಲ. ಕನ್ನಡ ಸೇವೆ ವಿಷಯದಲ್ಲೂ ಅಷ್ಟೇ.

Friday, October 30, 2015

ಅಮೇರಿಕನ್ ದೆವ್ವ! (A Halloween ghost thriller)

ಸಾರಾಂಶ: ಇಂದು ಇಲ್ಲಿ ಅಮೇರಿಕಾದಲ್ಲಿ ಹ್ಯಾಲೋವೀನ್. ದೆವ್ವಗಳ ಹಬ್ಬ. ಬರೋಬ್ಬರಿ ಹದಿನೆಂಟು ವರ್ಷಗಳ ಹಿಂದಿನ ಹ್ಯಾಲೋವೀನ್ ನನ್ನ ಮೊತ್ತ ಮೊದಲ ಹ್ಯಾಲೋವೀನ್. ಆಗ ಮಾತ್ರ ಅಮೇರಿಕಾಗೆ ಬಂದಿದ್ದೆ. ಹ್ಯಾಲೋವೀನ್ ಅಂದರೆ ದೆವ್ವಗಳ ಹಬ್ಬ ಅಂತ ಕೇಳಿದ್ದೆ. ಅಂದೇ ದೆವ್ವದ ದರ್ಶನವೂ ಆಗೇಬಿಟ್ಟಿತು. ಅದನ್ನು ನೆನಪಿಸಿಕೊಂಡರೆ ಇವತ್ತೂ ಮೈ ಝುಮ್ ಅನ್ನುತ್ತದೆ. ಬೆನ್ನು ಹುರಿಯಲ್ಲೊಂದು ಭಯ ಸಳಕ್ ಅಂತ ನುಗ್ಗಿ ಬರುತ್ತದೆ.

ಆವತ್ತು ಮನೆಗೆ ಬಂದವಳು ಒಬ್ಬ ಸಹೋದ್ಯೋಗಿ. ಒಂದು ಕಪ್ ಚಹಾ ಮಾಡಿ ತರೋಣ ಅಂತ ಅಡುಗೆಮನೆ ಹೊಕ್ಕೆ. ಚಹಾ ಮಾಡಿಕೊಂಡು ಬರುವಷ್ಟರಲ್ಲಿ ಆಕೆ ಆಕೆಯಾಗಿ ಉಳಿದಿರಲಿಲ್ಲ. ಒಂದು ಭಯಾನಕ ದೆವ್ವವಾಗಿ ಬದಲಾಗಿಹೋಗಿದ್ದಳು! ಮುಂದೆ ಎರಡು ತಾಸು ಮಾತ್ರ ಫುಲ್ ಭೂತ ದರ್ಶನ, ಪ್ರೇತ ಬಾಧೆ! ಸತ್ತು ಸತ್ತು ಬದುಕಿ ಬಂದೆ.

***

ಅಂದಿನ ತಾರೀಕು ಬರೋಬ್ಬರಿ ನೆನಪಿದೆ. ೩೧ ಅಕ್ಟೋಬರ್ ೧೯೯೭. ಬರೋಬ್ಬರಿ ಹದಿನೆಂಟು ವರ್ಷಗಳ ಹಿಂದೆ. ಅಂದು ಶುಕ್ರವಾರ. ಶುಕ್ರವಾರ ಎಂದರೆ ಏನೋ ಉತ್ಸಾಹ. ಮಧ್ಯಾನ ನಾಲ್ಕು ಘಂಟೆ ಹೊತ್ತಿಗೆ ಆಫೀಸಿನಿಂದ ಫೇರಿ ಕಿತ್ತೇಬಿಡುವದು. ವೀಕೆಂಡ್ ಶುರು ಮಾಡಬೇಕಲ್ಲ ಮಾರಾಯರೇ!?

ಅಮೇರಿಕಾಗೆ ಬಂದು ಇನ್ನೂ ಕೇವಲ ನಾಲ್ಕು ಚಿಲ್ಲರೆ ತಿಂಗಳು ಮಾತ್ರ ಆಗಿತ್ತು. ಇನ್ನೂ ಪೂರ್ತಿ ಸೆಟಲ್ ಆಗಿರಲಿಲ್ಲ. ಬಾಸ್ಟನ್ ನಗರದ ಆಸುಪಾಸಿನ ಊರಿನ ಕಂಪನಿಯೊಂದರಲ್ಲಿ ಕಂಪ್ಯೂಟರ್ ಕೂಲಿ ಕೆಲಸ. ಕೆಲಸವೂ ಜಾಸ್ತಿ ಇರಲಿಲ್ಲ. ಏನೋ ಒಂದು ತರಹದಲ್ಲಿ ಕಂಪ್ಯೂಟರ್ ಕೂಲಿ ನಾಲಿ ಮಾಡಿಕೊಂಡಿದ್ದೆ.

ಮನೆ ಅಂತ ಒಂದು ಅಪಾರ್ಟ್ಮೆಂಟ್ (ಫ್ಲಾಟ್) ಭಾಡಿಗೆಗೆ ಹಿಡಿದಾಗಿತ್ತು. ಮೊದಲು ಒಂದು ತಿಂಗಳು ಒಬ್ಬ ರೂಮ್ಮೇಟ್ ಇದ್ದ. ನಂತರ ಅವನೂ ಕಳಚಿಕೊಂಡ. ಒಬ್ಬನೇ ಈಗ. ಅದೇ ಬೇಕಾಗಿತ್ತು ಅನ್ನಿ. ಹೇಳಿಕೇಳಿ ಸರ್ಟಿಫೈಡ್ ಒಂಟಿ ಸಲಗ ನಾನು. ಕೆಲವು ಕುಹಕಿಗಳು ಒಂಟಿ ಗೂಬೆ ಅಂತ ಕೂಡ ಅನ್ನುತ್ತಾರೆ. ಅದೆಲ್ಲ ಅವರವರ ಭಾವಕ್ಕೆ ಭಕುತಿಗೆ ಬಿಟ್ಟಿದ್ದು.

ಇನ್ನೂ ಕಾರು ಖರೀದಿ ಮಾಡಿರಲಿಲ್ಲ. ಅಮೇರಿಕಾದಲ್ಲಿ ಕಾರಿಲ್ಲ ಅಂದರೆ ಕಾಲೇ ಇಲ್ಲ. ಹಾಗಾಗಿ ಓಡಾಟ ಮನೆ ಮತ್ತು ಆಫೀಸಿಗೆ ಅಷ್ಟೇ ಸೀಮಿತ. ಬೆಳಿಗ್ಗೆ ಮತ್ತು ಸಂಜೆ ಟ್ಯಾಕ್ಸಿಯಲ್ಲಿ ಹೋಗಿ ಬಂದು ಮಾಡುವದು. ಆಫೀಸ್ ಒಂದು ಮೂರು ಮೈಲು ದೂರದಲ್ಲಿ ಇತ್ತು. ಹೋಗಲಿಕ್ಕೆ ಒಂದು ಹತ್ತು ಡಾಲರ್ ಮತ್ತು ವಾಪಸ್ ಬರಲಿಕ್ಕೆ ಮತ್ತೊಂದು ಹತ್ತು ಡಾಲರ್. ಅಲ್ಲಿಗೆ ದಿನಕ್ಕೆ ಇಪ್ಪತ್ತು ಡಾಲರ್ ಶಿವಾಯ ನಮಃ! ಏನು ಮಾಡುವದು? ಯಾರೂ ಪರಿಚಯದವರೂ ಇರಲಿಲ್ಲ. ಆಫೀಸಿನಲ್ಲಿ ಕಂಡ ದೇಸಿ ಮುಂಡೆಮಕ್ಕಳಲ್ಲಿ ಮುಖ ತಿರುಗಿಸಿಕೊಂಡು ಹೋದವರೇ ಹೆಚ್ಚು. ಸಹಾಯ ಮಾಡುವದು ದೂರದ ಮಾತು. ನಾವೂ ಅಷ್ಟೇ. ಮೊದಲೇ ಅಂತರ್ಮುಖಿ. ಹಾಗಾಗಿ ಜನರ ಗುರ್ತು ಪರಿಚಯ ಮಾಡಿಕೊಳ್ಳುವದೂ ಇಲ್ಲ. ಬೇಕಾಗಿಯೂ ಇಲ್ಲ. 'ಅಹಂ ಬ್ರಹ್ಮಾಸ್ಮಿ' ಟೈಪಿನ ಜನ ನಾವು.

ಅಪಾರ್ಟ್ಮೆಂಟ್ ಭಾಡಿಗೆ, ಡೆಪಾಸಿಟ್ ಅಡ್ವಾನ್ಸ್ ಕೊಡಲಿಕ್ಕೆ, ಮನೆಗೆ ಬೇಕಾದ ಒಂದೆರೆಡು ಸಾಮಾನು ತೆಗೆದುಕೊಳ್ಳುವಷ್ಟರಲ್ಲಿ ಭಾರತದಿಂದ ತಂದಿದ್ದ ರೊಕ್ಕವೆಲ್ಲ ಖರ್ಚಾಗಿ ಹೋಯಿತು. ಮಗ ದೂರದ ಅಮೇರಿಕೆಗೆ ಹೊರಟಿದ್ದಾನೆ ಅಂತ ಏನೋ ಒಂದಿಷ್ಟು ಸಾವಿರ ರೂಪಾಯಿಗಳನ್ನು ಡಾಲರಿಗೆ ಬದಲಾಯಿಸಿ ಕೊಟ್ಟುಕಳಿಸಿದ್ದರು ಮನೆಯವರು. ಅದು ಅಷ್ಟಕ್ಕೆ ಸರಿ ಹೋಯಿತು. ಈಗ ಏನಾದರೂ ರೊಕ್ಕ ಕಾಣಬೇಕು ಅಂದರೆ ಪಗಾರ್ ಬರುವ ತನಕ ಕಾಯಬೇಕು. ಎರಡು ವಾರಕ್ಕೆ ಒಂದು ಬಾರಿ ಪಗಾರ್ ಬರುತ್ತದೆ. ಅದು ಒಳ್ಳೆಯದೇ.

ಬಂದ ಪಗಾರಿನಲ್ಲಿ ಉಳಿಯುತ್ತಿದ್ದ ಅಲ್ಪ ಸ್ವಲ್ಪ ರೊಕ್ಕದಲ್ಲಿ ಮೊದಲ ತಿಂಗಳು ಒಂದು ಟೀವಿ ತಂದೆ. ಕೇಬಲ್ ಹಾಕಿಸಿದೆ. ಏನೋ ಒಂದು ತರಹದ ಟೈಮ್ ಪಾಸ್. ಭಾರತದಿಂದ ತಂದಿದ್ದ ಒಂದು ಅರ್ಧ ಡಜನ್ ಪುಸ್ತಕ, ಒಂದು ಡಜನ್ ಮ್ಯೂಸಿಕ್ ಕ್ಯಾಸೆಟ್ಟುಗಳು ಇದ್ದವು. ಟೀವಿ ನೋಡಿ, ಓದಿದ ಪುಸ್ತಕ ಮತ್ತೆ ಮತ್ತೆ ಓದಿ, ಕೇಳಿದ ಸಂಗೀತವನ್ನೇ ಮತ್ತೆ ಮತ್ತೆ ಕೇಳಿ ಟೈಮ್ ಪಾಸ್ ಮಾಡುತ್ತಿದ್ದೆ. ಲೈಫ್ ಒಂದು ತರಹದ ಬೋರೇ ಅನ್ನಿ. ಓಂ ಶ್ರೀ ಬೋರಲಿಂಗಾಯ ನಮಃ!

ಎರಡನೇ ತಿಂಗಳು ಉಳಿಸಿದ ರೊಕ್ಕದಿಂದ ಒಂದು VCR ತಂದೆ. ಈಗ ಮತ್ತೂ ಮಜಾ ಬಂತು. ಯಾವಾಗಲಾದರೂ ನಮ್ಮ ಭಾರತದ ಸಾಮಾನುಗಳನ್ನು ಮಾರುವ ದೇಸಿ ಅಂಗಡಿಗಳಿಗೆ ಹೋದಾಗ ಅಲ್ಲಿ ಸಿಗುವ ಹಿಂದಿ ಸಿನೆಮಾದ ವೀಡಿಯೊಗಳನ್ನು ತಂದು ನೋಡಬಹುದು. ಅದು ಪರಮಾನಂದ. ೧೯೭೦, ೧೯೮೦ ರ ದಶಕದ ಎಷ್ಟೆಷ್ಟೋ ಒಳ್ಳೊಳ್ಳೆ ಮೂವಿಗಳನ್ನು ನೋಡಿಯೇ ಇರಲಿಲ್ಲ. ಈಗ ಅವನ್ನೆಲ್ಲ ಪಟ್ಟಾಗಿ ಕುಳಿತು ನೋಡುವ ಸೌಭಾಗ್ಯ. ಆದರೆ ದೇಸಿ ಅಂಗಡಿಗೆ ಹೋಗಲೂ ಕಾರು ಬೇಕು. ನಮ್ಮ ಕಡೆ ಇನ್ನೂ ಕಾರು ಬಂದಿಲ್ಲ. ಮತ್ತೆ ಟ್ಯಾಕ್ಸಿ.

ಇನ್ನೊಂದು ತಿಂಗಳು ಹೋದರೆ at least ಒಂದು ಒಳ್ಳೆ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳಲು ಬೇಕಾಗುವಷ್ಟು ಡಿಪಾಸಿಟ್ ಕಾಸು ಉಳಿತಾಯ ಆಗಿರುತ್ತದೆ. ಉಳಿದ ಮೊತ್ತ ಫೈನಾನ್ಸ್ ಮಾಡಿಸುವದು. ಅದೂ ಸುಲಭವಾಗಿ ಸಿಗುವದಿಲ್ಲ ಅಂತ ಗೊತ್ತೇ ಇದೆ. ಯಾಕೆಂದರೆ ನಾವು ಈ ದೇಶದಲ್ಲಿ ಇನ್ನೂ ಹೊಸ ಅಬ್ಬೇಪಾರಿ. ಕ್ರೆಡಿಟ್ ಹಿಸ್ಟರಿ ಇಲ್ಲ. ಆತ್ಮೀಯ ದೋಸ್ತನೊಬ್ಬ ಕಾರಿನ ಸಾಲಕ್ಕೆ ಗ್ಯಾರಂಟಿ, surety ಹಾಕುತ್ತೇನೆ ಅಂದಿದ್ದಾನೆ. ಅದೆಲ್ಲ ಸರಿಯಾಗಿ ವರ್ಕ್ ಔಟ್ ಆಗಿ, ಮುಂದಿನ ತಿಂಗಳು ಒಂದು ಕಾರು ತೆಗೆದುಕೊಂಡುಬಿಟ್ಟರೆ ಒಂದು ಮಟ್ಟದಲ್ಲಿ ಅಮೇರಿಕಾದಲ್ಲಿ ಸೆಟಲ್ ಆದಂತೆಯೇ. ಒಮ್ಮೆ ಕಾರು ಬಂದು, ಲೈಬ್ರರಿ, ಸಿನಿಮಾ, ಅಲ್ಲಿ, ಇಲ್ಲಿ ಹೋಗಲಿಕ್ಕೆ ಸಾಧ್ಯವಾಗಿಬಿಟ್ಟರೆ ನಮಗೆ ಬೇರೆ ಏನೂ ಚಿಂತೆ ಇಲ್ಲ ಮಾರಾಯರೇ. ಈಗ ಓದಲಿಕ್ಕೆ ಪುಸ್ತಕ ಇಲ್ಲ. ಓಡಾಡಲಿಕ್ಕೆ ಕಾಲು ಇಲ್ಲ ಅಂದರೆ ಕಾರು ಇಲ್ಲ ಅನ್ನೋದೇ ದೊಡ್ಡ ಬೇಸರ.

ಹೀಗೆಲ್ಲ ವಿಚಾರ ಮಾಡುತ್ತ ಆ ದಿನದ ಲಾಸ್ಟ್ ಕಾಫಿ ಕುಡಿದು ಮುಗಿಸಿದೆ. ಟೈಮ್ ನೋಡಿದರೆ ನಾಲ್ಕೂ ಕಾಲು. ಚಳಿಗಾಲ ಒಂದು ಮಟ್ಟದಲ್ಲಿ ಶುರುವಾಗೇ ಹೋಗಿದೆ. ನಾಲ್ಕು ಘಂಟೆಗೇ ಸುಮಾರು ಕತ್ತಲಾಗಿಬಿಡುತ್ತದೆ. ಮೇಲಿಂದ ಚಳಿ ಬೇರೆ.

ಟ್ಯಾಕ್ಸಿಗೆ ಫೋನ್ ಮಾಡಿದೆ. ಪಕ್ಕದಲ್ಲೇ ಇದೆ ಟ್ಯಾಕ್ಸಿ ಸ್ಟಾಂಡ್. ಐದು ನಿಮಿಷದಲ್ಲಿ ಬಂದಿರುತ್ತದೆ. ಕಂಪ್ಯೂಟರ್ ಆಫ್ ಮಾಡಿ, ಕಾಫಿ ಕಪ್ ತೊಳೆದಿಟ್ಟು, ಕೆಳಗೆ ಹೋಗುವ ತನಕ ಟೈಮಿಂಗ್ ಸರಿಯಾಗುತ್ತದೆ.

ಅದಿಷ್ಟು ಮಾಡಿ ಕೆಳಗೆ ಬಂದು ನೋಡಿದರೆ ಟ್ಯಾಕ್ಸಿ ಬಂದು ನಿಂತಿತ್ತು. ಸದಾ ಬರುವ ಟ್ಯಾಕ್ಸಿ ಡ್ರೈವರ್ ಜಿಮ್ ಅನ್ನುವವನೇ ಬಂದಿದ್ದ. ನನ್ನನ್ನು ನೋಡಿ ದೊಡ್ಡ ನಗೆ ನಕ್ಕ. ಈಗ ನಾಲ್ಕು ತಿಂಗಳಿಂದ ಅವನ ಖಾಯಂ ಗಿರಾಕಿಯಾಗಿದ್ದೇನೆ ನೋಡಿ. ಹಾಗಾಗಿ ಏನೋ ಒಂದು ತರಹದ ಆತ್ಮೀಯತೆ, ದೋಸ್ತಿ ಬಂದಿದೆ. ಏನೇನೋ ಪ್ರಶ್ನೆಗಳನ್ನು ಕೇಳುತ್ತಾನೆ. ನಾನು ಅವನ ಪ್ರಶ್ನೆಗಳಿಗೆ ಹೇಳುವ ಉತ್ತರ, ನನ್ನ accent ಎಲ್ಲ ಅವನಿಗೆ ಮಜಾ ಅನ್ನಿಸುತ್ತದೆ. ಪೆಕಪೆಕಾ ಅಂತ ನಗುತ್ತಲೇ ಡ್ರೈವ್ ಮಾಡುತ್ತಾನೆ. ಒಳ್ಳೆಯವನು ಜಿಮ್.

'ಎಲ್ಲಿಗೆ? ಸೀದಾ ಮನೆಗೇನು?' ಅಂತ ಕೇಳಿದ ಜಿಮ್.

'ಮನೆ ಪಕ್ಕದ ಸೂಪರ್ ಮಾರ್ಕೆಟ್ಟಿಗೆ ಬಿಟ್ಟುಬಿಡು. ಒಂದಿಷ್ಟು ದಿನಸಿ, ಅದು ಇದು ಸಾಮಾನು ಖರೀದಿ ಮಾಡಬೇಕು. ಅಲ್ಲಿಂದ ಮನೆ ಕಾಲು ಮೈಲು ಅಷ್ಟೇ. ನಂತರ ಮನೆಗೆ ನಡೆದು ಹೋಗುತ್ತೇನೆ,' ಅಂದೆ.

'ಸರಿ,' ಎಂದ ಜಿಮ್ ಗಾಡಿ ಬಿಟ್ಟ. ಮುಂದಿನ ಹತ್ತು ನಿಮಿಷದಲ್ಲಿ ಸೂಪರ್ ಮಾರ್ಕೆಟ್ ಎದುರಿಗೆ ಗಾಡಿ. ಎಂದಿನಂತೆ ಟ್ಯಾಕ್ಸಿ ಮೀಟರ್ ಒಂಬತ್ತು ಡಾಲರ್ ತೋರಿಸಿತು. ಹತ್ತರ ಒಂದು ನೋಟು ಕೊಟ್ಟು ಇಳಿದೆ. ಅದು ಸ್ಟ್ಯಾಂಡರ್ಡ್. ಒಂದು ಡಾಲರ್ ಟಿಪ್. ಆದರೆ ಜಿಮ್ ಒಳ್ಳೆಯವನು. ಈಗಿತ್ತಲಾಗೆ ಟಿಪ್ ಬೇಡ ಅನ್ನುತ್ತಾನೆ. ಒಂದು ಡಾಲರ್ ಹಿಂತಿರುತಿಗಿಸಿ ಬಿಡುತ್ತಾನೆ. ನಮ್ಮಂತಹ ಬಡಪಾಯಿ ಅಬ್ಬೇಪಾರಿ ದೇಸಿ ಆದ್ಮಿ ದಿನವೂ ಟ್ಯಾಕ್ಸಿಗೆ ಅಂತಲೇ ಇಪ್ಪತ್ತು ಡಾಲರುಗಳನ್ನು ತೆತ್ತುವದನ್ನು ಅವನಿಂದಲೂ ನೋಡಲಾಗುತ್ತಿಲ್ಲ ಅಂತ ಕಾಣುತ್ತದೆ. ದೇವರು ಅವನನ್ನು ಚೆನ್ನಾಗಿ ಇಟ್ಟಿರಲಿ. ಮೊದಲೇ ನಾವು ಕಂಪ್ಯೂಟರ್ ಕೂಲಿ ನಾಲಿ ಕೆಲಸ ಮಾಡಿಕೊಂಡಿದ್ದೇವೆ. ರೊಕ್ಕಕ್ಕೆ ಕಡ್ಕಿ. ಅದರಲ್ಲೂ ಪೈ ಪೈ ಜೋಡಿಸಬೇಕಾಗಿದೆ. ರೊಕ್ಕ ಕೂಡಿಸಿ ಕಾರ್ ತೊಗೋಬೇಕ್ರೀ! ಹಾಗಾಗಿ ಟಿಪ್ ರೊಕ್ಕ ಜಿಮ್ ವಾಪಸ್ ಕೊಟ್ಟರೆ ದೂಸರಾ ಮಾತಿಲ್ಲದೆ ಕಿಸೆಯೊಳಗೆ ಇಳಿಸಿದೆ. ಹನಿ ಹನಿ ಕೂಡಿದರೆ ಹಳ್ಳ. ಕೂಡಲಿಲ್ಲ ಅಂದರೆ ಹಳ್ಳ ಹಿಡಿಯುತ್ತದೆ ನಮ್ಮ ಆರ್ಥಿಕ ಪರಿಸ್ಥಿತಿ.

ಸೂಪರ್ ಮಾರ್ಕೆಟ್ ಒಳ ಹೊಕ್ಕೆ. ಆಹಾ! ಒಳ್ಳೆ ಇಂದ್ರನ ಅರಮನೆ. ಬೀದಿ ಮೂಲೆಯಲ್ಲಿನ ಶೆಟ್ಟರ ಕಿರಾಣಿ ಅಂಗಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲೋ, ರದ್ದಿ ಹಾಳೆಯ ಪುಡಿಕೆಯಲ್ಲೋ ದಿನಸಿ, ಕಿರಾಣಿ ಸಾಮಾನು ತಂದವರು ನಾವು. ಜಾಸ್ತಿ ತಂದಿರಲೂ ಇಲ್ಲ ಬಿಡಿ. ಅದೆಲ್ಲ ಮನೆ ಹೆಂಗಸರ ಕೆಲಸ. ಮನೆಯಲ್ಲಿದ್ದಾಗ ಹಾಗಾಯಿತು. ಹಾಸ್ಟೇಲಿನಲ್ಲಿ ಇದ್ದಾಗ ಅಂತೂ ಯಾವದೇ ತಲೆಬಿಸಿಯಿರಲಿಲ್ಲ. ಹಾಗಾಗಿ ಅಮೇರಿಕಾಗೆ ಬಂದ ಮೇಲೆ ಸೂಪರ್ ಮಾರ್ಕೆಟ್ ಹೊಕ್ಕುಬಿಟ್ಟರೆ ಅದೇ ಒಂದು ದೊಡ್ಡ ಮಾತು. ಒಂದಿಷ್ಟು ಹಾಲು, ಬ್ರೆಡ್, ಒಂದಿಷ್ಟು ತರಕಾರಿ ಅದು ಇದು ಮಾತ್ರ ಬೇಕು. ಇಲ್ಲಿ ನೋಡಿದರೆ ಅಬಬಬಬಾ! ಏನು ಕೇಳ್ತೀರಿ!? ಚಿತ್ರ ವಿಚಿತ್ರ ಸಾಮಾನುಗಳ ದುನಿಯಾ.

ಹೊಸದಾಗಿ ಅಮೇರಿಕಾಗೆ ಬಂದಿದ್ದು. ಇನ್ನೂ ಎಲ್ಲದರ ರುಚಿ ಕೂಡ ನೋಡಿಲ್ಲ. ಬ್ರೆಡ್ ಅಂದರೆ ಒಂದು ಐವತ್ತು ಟೈಪಿನ ಬ್ರೆಡ್. ಮತ್ತೊಂದು ಇಪ್ಪತ್ತು ಮಾದರಿಯ ಬನ್ಸ್. ಸಾವಿರ ರೀತಿಯ ಜಾಮ್. ಆಯ್ಕೆಗಳೋ ಆಯ್ಕೆಗಳು. ತಲೆ ಕೆಟ್ಟು ಹೋಗಬೇಕು. ಮೇಲಿಂದ ಮಂಗ್ಯಾನ ಮನಸ್ಸಿಗೆ ಕಂಡಿದ್ದೆಲ್ಲ ಬೇಕು. ಅಯ್ಯೋ! ಎಲ್ಲದರ ರುಚಿ ನೋಡೋದು ಬೇಡವೇ!? ಅಡುಗೆ ಮಾಡಲಿಕ್ಕೆ ಬರದಿದ್ದರೂ ಏನೇನೋ ಹುಚ್ಚ ಅಡುಗೆ ಐಡಿಯಾ ತಲೆಗೆ ಬರುತ್ತವೆ. ಸಾವಿರ ರೀತಿಯ ಚಿತ್ರವಿಚಿತ್ರ ವ್ಯಂಜನಗಳು ಕಾಣುತ್ತವೆ. ಒಂದೊಂದೇ ತೆಗೆದು ಶಾಪಿಂಗ್ ಕಾರ್ಟಿಗೆ ಹಾಕುತ್ತಾ ಬಂದೆ. ಕಾರ್ಟ್ ತುಂಬುತ್ತಾ ಬಂತು. ಹಣ್ಣು ಹಂಪಲು ಕೂಡ ತೆಗೆದುಕೊಳ್ಳಬೇಕು. ಹಾಂ! ಜೇನುತುಪ್ಪ ಬೇಕು. ಮೇಲಿಂದ ಒಂದಿಷ್ಟು ಬಾದಾಮಿ, ಒಣ ದ್ರಾಕ್ಷೆ ಎಲ್ಲ ಬೇಕು. ಮೊಟ್ಟೆ ಮರೆತೇಬಿಟ್ಟೆ. ನಾಳೆ ಶನಿವಾರ. ಬೆಳಿಗ್ಗೆ ಗಡಿಬಿಡಿಯಿಲ್ಲ. ಮಸಾಲೆ ಆಮ್ಲೆಟ್ ಮಾಡೋಣ.

ಹೀಗೆಲ್ಲ ವಿಚಾರ ಮಾಡುತ್ತ, ಇಡೀ ಸೂಪರ್ ಮಾರ್ಕೆಟ್ ಓಡಾಡಿ, ಬೇಕಾಗಿದ್ದು ಬೇಡಾಗಿದ್ದು ಎಲ್ಲವನ್ನೂ ಶಾಪಿಂಗ್ ಕಾರ್ಟಿಗೆ ತುಂಬುವ ತನಕ ಸಾಕಷ್ಟು ಸಾಮಾನಾಗಿಬಿಟ್ಟಿತು. ಚೆಕ್ಔಟ್ ಕೌಂಟರಿಗೆ ಬಂದು ಸಾಮಾನುಗಳನ್ನು ಸುರುವಿದೆ. ಚೆಕ್ಔಟ್ ಕೌಂಟರಿನಲ್ಲಿದ್ದ ಹುಡುಗಿ ನಗುನಗುತ್ತ ಎಲ್ಲ ಸಾಮಾನುಗಳನ್ನು ಸ್ಕ್ಯಾನ್ ಮಾಡಿ ಮಾಡಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಯೇ ತುಂಬಿದಳು. ಎಂಟತ್ತು ಚೀಲಗಳಾಗಿ ಹೋಯಿತು. ಎಲ್ಲ ಪ್ಲಾಸ್ಟಿಕ್ ಚೀಲಗಳನ್ನು ಮತ್ತೆ ಶಾಪಿಂಗ್ ಕಾರ್ಟಿನಲ್ಲಿ ಇಟ್ಟುಕೊಂಡು, ಕಾಸು ಕೊಟ್ಟು, ಕಾರ್ಟ್ ದೂಡಿಕೊಂಡು ಹೊರಬಿದ್ದಾಗಲೇ ತಲೆಗೆ ಹೊಳೆದಿದ್ದು. ಆಗ ವಿಚಾರ ಬಂತು. ಶಿವನೇ  ಶಂಭುಲಿಂಗ! ಎಂಟತ್ತು ಪ್ಲಾಸ್ಟಿಕ್ ಚೀಲಗಳಾಗಿ ಬಿಟ್ಟಿವೆ. ಮನೆ ಕಮ್ಮಿ ಕಮ್ಮಿಯಂದರೂ ಕಾಲು ಮೈಲು ದೂರವಿದೆ. ಇಷ್ಟೆಲ್ಲಾ ಸಾಮಾನು ಒಮ್ಮೆಲೇ ಕೈಯಲ್ಲಿ ಎತ್ತಿಕೊಂಡು, ಹಿಡಿದುಕೊಂಡು ನಡೆದು ಹೋಗಲು ಸಾಧ್ಯವೇ ಇಲ್ಲ. ಏನೋ ಒಂದು ಹತ್ತು ಹೆಜ್ಜೆ ಅಂದರೆ ಮ್ಯಾನೇಜ್ ಮಾಡಬಹುದಿತ್ತೇನೋ. ಕಮ್ಮಿ ಕಮ್ಮಿ ಅಂದರೂ ಎರಡು ಫರ್ಲಾಂಗ್ ದೂರವಿದೆ ಮನೆ. ಈಗ ಏನು ಮಾಡಲಿ? ಮತ್ತೆ ಫೋನ್ ಮಾಡಿ ಟ್ಯಾಕ್ಸಿ ಕರೆಯಲೇ? ಇದೊಂದು ದೊಡ್ಡ ತಲೆಬಿಸಿಯಾಯಿತು ಮಾರಾಯರೇ. ಹೆಚ್ಚಿನ ಸಾಮಾನು ಇಲ್ಲೇ ಇಟ್ಟು, ಆದಷ್ಟೇ ಸಾಮಾನುಗಳನ್ನು ಮನೆಗೆ ತೆಗೆದುಕೊಂಡು ಹೋಗಿ,  ಮನೆಯಲ್ಲಿಟ್ಟು, ವಾಪಸ್ ಬರಲೇ? ಇಲ್ಲಿ ಎಲ್ಲಿಟ್ಟು ಹೋಗಲಿ? ಇಟ್ಟು ಹೋದರೆ ಬರುವ ತನಕ ಸಾಮಾನು ಇಲ್ಲೇ ಇರಬೇಕಲ್ಲ? ಯಾರಾದರೂ ನೋಡಿ ಅನಾಥ ಸಾಮಾನೆಂದು ಕಸದ ಬುಟ್ಟಿಗೆ ಎಸೆದಿರುತ್ತಾರೆ. ಇಷ್ಟೆಲ್ಲ ಖರೀದಿ ಮಾಡಿದ್ದು ಶಿವಾಯ ನಮಃ ಆಗಿಬಿಡುತ್ತದೆ. ಇಂತಹ ಪರಿಸ್ಥಿತಿ ಮೊದಲೆಂದೂ ಬಂದಿರಲಿಲ್ಲ. ಇವತ್ತು ಅದ್ಯಾವದೋ ಹುರುಪಿನಲ್ಲಿ ಸಿಕ್ಕಾಪಟ್ಟೆ ಸಾಮಾನುಗಳನ್ನು ಖರೀದಿ ಮಾಡಿ ಮಂಗ್ಯಾ ಆಗಿಬಿಟ್ಟಿದ್ದೇನೆ. ಹೀಗೆ ವಿಚಾರ ಮಾಡಿ ಮಳ್ಳು ಮುಖ ಮಾಡಿಕೊಂಡು ನಿಂತಿದ್ದೆ. ಹೊರಗೆ ಕತ್ತಲು ಜೋರಾಗಿ ಕವಿಯುತ್ತಿತ್ತು. ಸೂಪರ್ ಮಾರ್ಕೆಟ್ಟಿನ ಬಾಗಿಲು ತೆಗೆದಾಗೊಮ್ಮೆ ತಣ್ಣನೆಯ ಕುರ್ಗಾಳಿ ನುಗ್ಗಿ ಬರುತ್ತಿತ್ತು. ಮತ್ತೂ ಟೆನ್ಶನ್ ಹೆಚ್ಚಾಗುತ್ತಿತ್ತು. ಆವಾಗ ನನ್ನ ಪಾಲಿನ ಭಾಗ್ಯದೇವತೆ ಪ್ರತ್ಯಕ್ಷಳಾದಳು.

'ಹಾಯ್ ಮಹೇಶ್!' ಅಂತ ಶುದ್ಧ ಅಮೇರಿಕನ್ ಶೈಲಿಯಲ್ಲಿ ಉಲಿಯುತ್ತ, ದೊಡ್ಡ ಗಲಗಲ ನಗೆ ನಗುತ್ತ ಬಂದಾಕೆ ಜೆನ್ನಿಫರ್. ನಮ್ಮ ಆಫೀಸಿನಲ್ಲೇ ಕೆಲಸ ಮಾಡುತ್ತಾಳೆ. Human Resources ವಿಭಾಗದಲ್ಲಿ ಮ್ಯಾನೇಜರ್. ಕಂಪನಿಗೆ ಹೊಸದಾಗಿ ಸೇರಿಕೊಂಡ ಭಾರತೀಯರನ್ನು ಸೆಟಲ್ ಮಾಡಿಸುವ ಪ್ರಾಥಮಿಕ ಕೆಲಸಗಳನ್ನೆಲ್ಲ ಆಕೆಯೇ ಮಾಡಿಸಿಕೊಡುತ್ತಾಳೆ. ನಾನು ಕೆಲಸಕ್ಕೆ ಸೇರಿ ಮಾತ್ರ ಕೆಲವೇ ತಿಂಗಳಾಗಿತ್ತು. ವಾರಕ್ಕೆ ಒಮ್ಮೆಯಾದರೂ ಆಕೆಯ ಹತ್ತಿರ ನನ್ನದು ಏನಾದರೂ ಕೆಲಸ ಇದ್ದೇ ಇರುತ್ತಿತ್ತು. ಮತ್ತೆ ಆಕೆ ತುಂಬಾ ಸ್ನೇಹಜೀವಿ. ಎಲ್ಲರ ಜೊತೆ ತಮಾಷೆ ಮಾಡಿಕೊಂಡು, ಜೋಕ್ ಹೊಡೆದುಕೊಂಡು ಇರುತ್ತಿದ್ದಳು. ಅದೂ ದೇಶ ಬಿಟ್ಟು ಬಂದು, ಪರದೇಶದಲ್ಲಿ ಅಬ್ಬೇಪಾರಿಯಾಗಿ, ಇನ್ನೂ ಲೈಫ್ ಕಟ್ಟಿಕೊಳ್ಳುತ್ತಿರುವ ನಮ್ಮಂತವರನ್ನು ಕಂಡರೆ ಆಕೆಗೆ ಏನೋ ಹೆಚ್ಚಿನ ಅನುಕಂಪ, ಪ್ರೀತಿ, ಮಮತೆ, ಆತ್ಮೀಯತೆ. ಎಷ್ಟೋ ಸಲ ಅವಳೇ ಮನೆ ತನಕ ತನ್ನ ಕಾರಿನಲ್ಲೇ ಡ್ರಾಪ್ ಕೂಡ ಕೊಟ್ಟಿದ್ದಾಳೆ. ಒಂದು ಬಾರಿ ಅವಳ ಮನೆಗೂ ಕರೆದಿದ್ದಳು. ಆಕೆಯ ಗಂಡ ಮೈಕ್ ಕೂಡ ಸ್ನೇಹಜೀವಿ. ವಾರಾಂತ್ಯದಲ್ಲಿ ಬೇಸ್ಬಾಲ್ ಆಡಲು, ಅದಕ್ಕೆ ಇದಕ್ಕೆ ಕರೆದಿದ್ದ. ನಾನೇ ಹೋಗಿರಲಿಲ್ಲ.

ಫುಲ್ ತುಂಬಿದ ನನ್ನ ಶಾಪಿಂಗ್ ಕಾರ್ಟ್, ನನ್ನ ಮಂಗ್ಯಾನ ಮುಖ ಎಲ್ಲ ನೋಡಿದ ಕೂಡಲೇ ಅವಳಿಗೆ ಗೊತ್ತಾಗಿಯೇ ಹೋಯಿತು. ನಾನು ಮಾಡಿಕೊಂಡು ಕೂತಿದ್ದ ಯಬಡತನ, ಯಡವಟ್ಟನ್ನು ನಾನು ಬಾಯಿ ಬಿಟ್ಟು ಹೇಳಬೇಕಾಗಿ ಬರಲಿಲ್ಲ.

'ಏನು? ಸಕತ್ ಗ್ರೋಸರಿ ಶಾಪಿಂಗ್ ಆದ ಹಾಗಿದೆ. ಒಂದು ನಿಮಿಷ ಇರು. ನನಗೆ ಐದೇ ನಿಮಿಷದ ಕೆಲಸವಿದೆ. ಬಂದೇಬಿಟ್ಟೆ. ನಂತರ ನಿನಗೆ ನಿನ್ನ ಮನೆ ತನಕ ಡ್ರಾಪ್ ಕೊಡ್ತೀನಿ. ಓಕೆ?' ಅಂದವಳೇ ನನ್ನ ಉತ್ತರಕ್ಕೂ ಕಾಯದೇ ಒಳಗೆ ಹೋದಳು. ನಾನು ಅಲ್ಲೇ ನಿಂತಿದ್ದೆ.

ಹೇಳಿ ಹೋದಂತೆ ಐದು ನಿಮಿಷದ ಒಳಗೇ ಹಾಜರಾದಳು. ಶಾಪಿಂಗ್ ಕಾರ್ಟ್ ದೂಡಿಕೊಂಡು ಹೊರಗೆ ಬಂದೆ. ಮುಂದೆ ನಡೆಯುತ್ತಿದ್ದ ಜೆನ್ನಿಫರಳನ್ನು ಹಿಂಬಾಲಿಸಿದೆ. ಆಕೆಯ ಕಾರಿನ ಹಿಂದಿನ ಡಿಕ್ಕಿ ತೆಗೆದಳು. ದೊಡ್ಡ ಅಮೇರಿಕನ್ ಕಾರಿನ ಮಹಾ ದೊಡ್ಡ ಡಿಕ್ಕಿ.  ಸಾಮಾನು ತುಂಬಿದ್ದ ಪ್ಲಾಸ್ಟಿಕ್ ಚೀಲಗಳನ್ನು ಎತ್ತೆತ್ತಿ ಒಳಗೆ ಇಟ್ಟೆ. ಆಕೆಯೂ ಸಹಾಯ ಮಾಡಿದಳು. ಮುಂದೆ ಹೋಗಿ ಕೂತಳು. ನನಗಾಗಿ ಕಾರಿನ ಡೋರ್ ತೆಗೆದಳು. ಹೋಗಿ ಕೂತು ಸೀಟ್ ಬೆಲ್ಟ್ ಹಾಕಿಕೊಂಡೆ. ಅವಳ ಕಾರಿನಲ್ಲಿ ಸಾಕಷ್ಟು ಸಲ ಕೂತಿದ್ದೇನೆ. ಯಾವದೂ ಹೊಸದಲ್ಲ.

ಕಾರ್ ಸ್ಟಾರ್ಟ್ ಮಾಡಿದ ನಂತರ ಕಾರ್ ರೇಡಿಯೋದಲ್ಲಿ ಏನೋ ಸುದ್ದಿ ತೇಲಿ ಬಂತು. ರೇಡಿಯೋ ಆಫ್ ಮಾಡಿದಳು. ನನ್ನ ಮನೆ ಕಡೆ ಗಾಡಿ ಬಿಟ್ಟಳು. ಒಂದು ಐದು ನಿಮಿಷದ ಹಾದಿ. ನಿಧಾನಕ್ಕೆ ಬಂದು ಮುಟ್ಟಲು ಒಂದು ಹತ್ತು ನಿಮಿಷವೇ ಆಯಿತು.

'ನೀನು ಹೋಗು ಜೆನ್ನಿಫರ್. ಥ್ಯಾಂಕ್ ಯು ವೆರಿ ಮಚ್,' ಅಂದು ಇಳಿದೆ. ಹಿಂದೆ ಬಂದು ಡಿಕ್ಕಿಯಿಂದ ಸಾಮಾನುಗಳನ್ನು ಇಳಿಸಲು ಮುಂದಾದೆ. ಗಾಡಿ ಆಫ್ ಮಾಡಿದ ಆಕೆಯೂ ಇಳಿದು ಬಂದಳು. 'ಇರ್ಲಿ ಬಿಡಪ್ಪಾ. ಇಷ್ಟೆಲ್ಲಾ ಸಾಮಾನುಗಳಿವೆ. ನಿನ್ನ ಅಪಾರ್ಟ್ಮೆಂಟ್ ಬೇರೆ ಐದನೇ ಮಹಡಿಯಲ್ಲಿದೆ. ಮತ್ತೆ ಮತ್ತೆ ಮೇಲೆ ಕೆಳಗೆ ಏನು ಟ್ರಿಪ್ ಹೊಡೆಯುತ್ತೀಯೇ? ನಾಲ್ಕು ಚೀಲ ನೀನು ತೊಗೋ. ಉಳಿದಿದ್ದು ನಾನು ತರ್ತೀನಿ. ನಡಿ. ಲೆಟ್ಸ್ ಗೋ!' ಅಂದುಬಿಟ್ಟಳು. 'ಎಷ್ಟು ಒಳ್ಳೆಯವಳು ಈ ಜೆನ್ನಿಫರ್. ಥೇಟ್ ಅಕ್ಕನ ಹಾಗೆ. ಅದೆಷ್ಟು ಆತ್ಮೀಯತೆ, empathy ಎಲ್ಲ ಇದೆ ಈಕೆಗೆ,' ಅಂತ ಅನ್ನಿಸಿತು. ಮತ್ತೆ ಮತ್ತೆ ಥ್ಯಾಂಕ್ಸ್ ಹೇಳುತ್ತ ಸಾಮಾನು ತೆಗೆದುಕೊಂಡೆ. ಜೆನ್ನಿಫರ್ ಕೂಡ ಸಾಮಾನು ತೆಗೆದುಕೊಂಡಳು. ಮೇಲೆ ಹೋಗಲು ಇದ್ದ ಲಿಫ್ಟಿನತ್ತ ಹೊರಟೆವು.

ಮೇಲೆ ಬಂದು ಮುಟ್ಟಿದೆವು. ಬೀಗ ತೆಗೆದು ಒಳಗೆ ಹೋದೆ. ನನ್ನ ಹಿಂದೆಯೇ ಜೆನ್ನಿಫರ್ ಬಂದಳು. ಸೀದಾ ಅಡುಗೆ ಮನೆಗೇ ನುಗ್ಗಿದೆ. ಫ್ರಿಜ್ ಇರುವದು ಅಲ್ಲೇ ತಾನೇ? ನನ್ನ ಹಿಂದೆಯೇ ಜೆನ್ನಿಫರ್ ಬಂದಳು. ಸಾಮಾನುಗಳನ್ನು ಇಟ್ಟಳು. ಮತ್ತೆ ಥ್ಯಾಂಕ್ಸ್ ಅಂದೆ. 'ನಾನು ಹೊರಡುತ್ತೇನೆ, ಮಹೇಶ್. ಬಾಯ್! ಟೇಕ್ ಕೇರ್!' ಅಂದಳು ಜೆನ್ನಿಫರ್.

'ಜೆನ್ನಿಫರ್, ಇಲ್ಲೇ ಊಟ ಮಾಡಿ ಹೋಗಬಹುದಲ್ಲ? ಅಡಿಗೆ ಎಲ್ಲ ರೆಡಿ ಇದೆ. ಬಿಸಿ ಮಾಡಿಬಿಟ್ಟರೆ ಆಯಿತು,' ಅಂತ ಸುಮ್ಮನೇ ಪೇಡಿದೆ. ಆಕೆ ನನ್ನ ಅಪಾರ್ಟ್ಮೆಂಟಿಗೆ ಸಾಕಷ್ಟು ಸಲ ಬಂದು ಹೋಗಿದ್ದಾಳೆ ಬಿಡಿ. ಅಪಾರ್ಟ್ಮೆಂಟ್ ಕೊಡಿಸಿದವಳೇ ಅವಳು. ಹೊಸದಾಗಿ ಬಂದಾಗ ಒಂದು ವಾರ ಹಾಟೆಲ್ಲಿನಲ್ಲಿ ಇದ್ದೆ. ಹೊಸದಾಗಿ ಬಂದವರ ಫುಲ್ ದೇಖರೇಖಿ ಜೆನ್ನಿಫರಳದ್ದೇ. ಹಾಗಾಗಿ ನನ್ನನ್ನು ಸೆಟಲ್ ಮಾಡುವ ಪೂರ್ತಿ ಜವಾಬ್ದಾರಿ ಆಕೆಯೇ ವಹಿಸಿಕೊಂಡಿದ್ದಳು. ನಾನು ಅಂತ ಅಲ್ಲ. ಹೊಸದಾಗಿ ಯಾರೇ ಬಂದರೂ ಅವಳೇ ಮಾಡಿಕೊಡುತ್ತಾಳೆ. ಸುತ್ತುಮುತ್ತಲಿದ್ದ ನಾಲ್ಕಾರು ಅಪಾರ್ಟ್ಮೆಂಟುಗಳಿಗೆ ಕರೆದುಕೊಂಡು ಹೋಗಿ, ತೋರಿಸಿ, ಅಲ್ಲಿನ ಫಾರ್ಮು ಇತ್ಯಾದಿಗಳನ್ನು ಹೇಗೆ ತುಂಬುವದು ಅಂತ ತೋರಿಸಿ, ಬ್ಯಾಂಕ್ ಅಕೌಂಟ್ ಇತ್ಯಾದಿ ಮಾಡಿಸಿಕೊಟ್ಟು, ಅಪಾರ್ಟಮೆಂಟ್ ಅವಳೇ ಕೊಡಿಸಿದ್ದಳು. ಹಾಟೆಲ್ಲಿಂದ ಸಾಮಾನುಗಳನ್ನು ಅವಳ ಕಾರಿನಲ್ಲೇ ತಂದು ಕೊಟ್ಟಿದ್ದಳು. ನಂತರ ಟೀವಿ ಕೊಂಡಾಗ, VCR ಕೊಳ್ಳುವಾಗ ಎಲ್ಲ ಅವಳೇ ಬಂದಿದ್ದಳು. ಖರೀದಿ ಮಾಡಿಸಿ, ಅವಳದ್ದೇ ಕಾರಲ್ಲಿ ಮನೆ ತನಕ ಡೆಲಿವರಿ ಕೊಟ್ಟು ಹೋಗಿದ್ದಳು. ಆವಾಗಲೂ ಊಟ ಮಾಡಿ ಹೋಗು, ಚಹಾ ಕುಡಿದು ಹೋಗು ಅಂತೆಲ್ಲ ಹೇಳಿದ್ದೆ. ನಾಲ್ಕು ಸಲ ಬಂದರೆ ಒಂದು ಸಲ ಚಹಾ ಕುಡಿದು ಹೋಗಿದ್ದಳು ಅಷ್ಟೇ. ಅದು ಬಿಟ್ಟರೆ, 'ಮತ್ತೊಮ್ಮೆ ಬರ್ತೀನಿ. ಥ್ಯಾಂಕ್ಸ್ ಮಹೇಶ್!' ಅಂತ ಹೇಳಿ ಉದ್ದುದ್ದ ಕಾಲು ಹಾಕುತ್ತ ಓಡಿಯೇಬಿಡುತ್ತಾಳೆ ಜೆನ್ನಿಫರ್. ಸುಮಾರು ನಲವತ್ತೈದು, ಐವತ್ತು ವರ್ಷದ ಬಿಳಿಯ ಮಹಿಳೆ ಜೆನ್ನಿಫರ್.

'ನಿನ್ನ ಮನೆಗೆ ಊಟಕ್ಕೆ ಮತ್ತೊಮ್ಮೆ ಬರೋಣ ಮಾರಾಯಾ. ನೋಡೋಣ ಏನೇನು ಅಡಿಗೆ ಮಾಡಿ ಹಾಕುತ್ತೀಯಾ ಅಂತ. ನನ್ನ ಗಂಡ ಮೈಕನನ್ನೂ ಕರೆದುಕೊಂಡು ಬರ್ತೀನಿ. ನಿಮ್ಮ ಇಂಡಿಯನ್ ಫುಡ್ ನಮಗಿಬ್ಬರಿಗೂ ತುಂಬಾ ಇಷ್ಟ. ಇವತ್ತು ಬೇಡ. ನಾ ಬರಲೇ?' ಅಂತ ಮತ್ತೆ ಹೊರಡಲು ಸಿದ್ಧಳಾದಳು ಜೆನ್ನಿಫರ್.

'At least ಒಂದು ಕಪ್ ಚಹಾ ಅಥವಾ ಕಾಫಿ ಜೆನ್ನಿಫರ್. ನನಗೂ ಸಂಜೆಯ ಚಹಾ ಮಾಡಿಕೊಳ್ಳಬೇಕು. ನಿನಗೆ ಚಹಾನೋ ಅಥವಾ ಕಾಫಿನೋ? ಎರಡೂ ಇದೆ,' ಅಂತ ಹೇಳಿದೆ.

'ಚಹಾನೇ ಮಾಡು. ನಿನ್ನ ಮಸಾಲಾ ಚಾಯ್ ಸೊಗಸಾಗಿರುತ್ತದೆ,' ಅಂದಳು ಜೆನ್ನಿಫರ್. ಇಷ್ಟೆಲ್ಲಾ ಸಹಾಯ ಮಾಡಿದ ಜೆನ್ನಿಫರ್ ಚಹಾಕ್ಕೆ ನಿಂತಳು ಅಂತ ಖುಷಿಯಾಯಿತು.

'ಮಾಡೇಬಿಟ್ಟೆ. ಐದೇ ನಿಮಿಷ. ಕೂತಿರು. ಟೀವಿ ನೋಡು. ಒಂದೆರೆಡು ಮ್ಯಾಗಜಿನ್ ಇವೆ. ನ್ಯೂಸ್ ಪೇಪರ್ ಮಾತ್ರ ಇಲ್ಲ. ಎಲ್ಲ online ಓದಿಬಿಡ್ತೀನಿ,' ಅಂದು, 'ಹೇ, ಹೇ'  ಅಂತ ನಕ್ಕೆ.

'ಗೊತ್ತು ಮಾರಾಯಾ. ನೀವೆಲ್ಲ ದೇಸಿ ಜನ ಸಂಜೆ ನಾಲ್ಕರ ನಂತರ ನಿಮ್ಮ ಇಂಡಿಯಾ ನ್ಯೂಸ್ ಪೇಪರ್ ವೆಬ್ ಸೈಟ್ ತೆಗೆದು, ಓದುತ್ತ ಕೂಡ್ತೀರಾ. ಸರಿ, ನಾನು ಲಿವಿಂಗ್ ರೂಮಲ್ಲಿ ಕೂತಿರ್ತೀನಿ,' ಅಂತ ಹೇಳುತ್ತಾ ಜೆನ್ನಿಫರ್ ಆಕಡೆ ಹೋದಳು.

ನಮ್ಮದು ದೇಸಿ ಚಹಾ ಮಾಡುವ ಪದ್ಧತಿ. ಹಾಲು, ನೀರು ಕೂಡಿಸಿ ಒಲೆ ಮೇಲೆ ಇಟ್ಟೆ. ಸಕ್ಕರೆ ಹಾಕಬಾರದು. ಯಾಕೆಂದರೆ ಆ ಜೆನ್ನಿಫರ್ ಪುಣ್ಯಾತ್ಗಿತ್ತಿ ಸಕ್ಕರೆ ಇಲ್ಲದ ಚಹಾ, ಕಾಫಿ ಕುಡಿಯುವಾಕೆ. ನಾನು ಮೇಲಿಂದ ಹಾಕಿಕೊಂಡರಾಯಿತು. ಮಸಾಲೆ ಚಹಾಕ್ಕೆ ಮಸಾಲೆ ಅರೆಯುವ ಕೆಲಸವಿಲ್ಲ. ರೆಡಿಮೇಡ್ ಮಸಾಲೆ ಸಿಗುತ್ತದೆ. ಇನ್ನು ಜೊತೆಗೆ ಹಳದಿರಾಮ ಚೂಡಾ ಅಂತೂ ಇದೆ. ಚಹಾದ ಜೋಡಿ ಚೂಡಾ. ಜೊತೆಗೆ ಚೂಡಾ ಇಲ್ಲ ಅಂದರೆ ಅದು ಚಹಾ ಅಲ್ಲವೇ ಅಲ್ಲ.

ಆಕಡೆ ಏನೋ ಟೀವಿ ಶಬ್ದ ಕೇಳಿತು. ಜೆನ್ನಿಫರ್ ಟೀವಿ ಆನ್ ಮಾಡಿಕೊಂಡು ಕೂತಿರಬೇಕು. ಅಡುಗೆಮನೆಯಿಂದಲೇ ಹಣಿಕಿ ನೋಡಿದೆ. ಹೌದು. ಟೀವಿ ಮೇಲೆ ಯಾವದೋ ಬಾಸ್ಕೆಟ್ ಬಾಲ್ ಪಂದ್ಯ ಬರುತ್ತಿದೆ. ಆಕೆಗೆ ಅದು ಬಹಳ ಇಷ್ಟ.

ಹಳದಿರಾಮ ಚೂಡಾ ಪ್ಯಾಕಿನಿಂದ ಒಂದಿಷ್ಟು ಚೂಡಾ ತೆಗೆದು ಕಾಗದದ ಪ್ಲೇಟ್ ಒಂದಕ್ಕೆ ಹಾಕಿದೆ. ಎರಡು ಸ್ಪೂನ್ ಇಟ್ಟೆ. ಅಷ್ಟರಲ್ಲಿ ಹಾಲು-ನೀರಿನ ಮಿಶ್ರಣ ಉಕ್ಕಿ ಬಂತು. ಅದೇ ಹೊತ್ತಿಗೆ ಒಮ್ಮೆಲೇ ಟೀವಿ ಶಬ್ದ ನಿಂತುಬಿಟ್ಟಿತು. ಲಿವಿಂಗ್ ರೂಮಿನಲ್ಲಿದ್ದ ದೀಪ ಕೂಡ ಸಡನ್ನಾಗಿ ಆರಿಹೋಯಿತು. 'ಅರೇ ಇದೇನಾಯಿತು!' ಅಂದುಕೊಂಡೆ. 'ಹೋಗಿ ನೋಡಿಬರಲೇ?' ಅಂದುಕೊಳ್ಳುವಷ್ಟರಲ್ಲಿ  ಒಲೆ ಮೇಲೆ ಕುದಿಯುತ್ತಿದ್ದ ಹಾಲು-ನೀರು ಉಕ್ಕಿ ಮೇಲೆ ಬಂದುಬಿಡ್ತು. ಕ್ರಿಟಿಕಲ್ ಮೊಮೆಂಟ್. ಈಗ ಬರೋಬ್ಬರಿ ಚಹಾ ಪುಡಿ, ಚಹಾ ಮಸಾಲೆ ಹಾಕಬೇಕು. ನಂತರ ಅದು ಉಕ್ಕಿ ಇನ್ನೇನು ಒಲೆ ಮೇಲೆಲ್ಲ ಚೆಲ್ಲಿಬಿಡುತ್ತದೆ ಅಂತಂದಾಗ ಅದನ್ನು ಇಕ್ಕಳದಿಂದ ಎತ್ತಿ, ಪಕ್ಕಕ್ಕೆ ಇಡಬೇಕು. ಮೇಲೊಂದು ಪ್ಲೇಟ್ ಮುಚ್ಚಿ, ಸ್ವಲ್ಪ ಸಮಯ ಕಾಯಬೇಕು. ಅದು ಚಹಾ ಮಾಡುವ ದೇಸಿ ಪದ್ಧತಿ. ಅಲ್ಲವೇ?

ಮುಕ್ಕಾಲು ನಿಮಿಷ ಅದರ ಮೇಲೊಂದು ಪ್ಲೇಟ್ ಮುಚ್ಚಿಟ್ಟೆ. ಚಹಾ, ಚೂಡಾ ತೆಗೆದುಕೊಂಡು ಹೋಗಬೇಕು. ನಮ್ಮ ಹತ್ತಿರ tray ಇಲ್ಲ. ಒಂದು ಊಟದ ಸ್ಟೀಲ್ ತಟ್ಟೆಯನ್ನೇ ತೆಗೆದೆ. ಧೂಳು ಕೂತಿತ್ತು. ಊಟಕ್ಕೆ, ತಿಂಡಿಗೆ ಎಲ್ಲ disposable ಪೇಪರ್ ತಟ್ಟೆ ಉಪಯೋಗಿಸುವದರಿಂದ ಸ್ಟೀಲ್ ಪ್ಲೇಟಿನ ಉಪಯೋಗವೇ ಇಲ್ಲ. ಪಾತ್ರೆ ತೊಳೆಯೋದು ಮಹಾ ದೊಡ್ಡ ಕರ್ಮ. ಅದೇನು ಡಿಶ್ ವಾಷರ್ ಇದ್ದರೂ ಅದು ಮಹಾ ಬೋರಿಂಗ್ ಕೆಲಸ. ಹಾಗಾಗಿ ನಮ್ಮದು ಎಲ್ಲ use and throw ಪೇಪರ್ ತಾಟು, ಪೇಪರ್ ಕಪ್ಪು. ಸರ್ವಂ ಪೇಪರ್ ಮಯಂ!

ತಯಾರಾದ ಚಹಾವನ್ನು ಎರಡು ಕಪ್ಪಿಗೆ ಸೋಸಿ ಸುರಿದೆ. ಸ್ವಲ್ಪೇ ಸ್ವಲ್ಪ ಹಾಲು ಬಿಟ್ಟೆ. ಏಕ್ದಂ ಕೆಂಪು ಬಣ್ಣದ ಸುಡು ಸುಡು ಚಹಾ ರೆಡಿ. ಅವಳಿಗಂತೂ ಸಕ್ಕರೆ ಬೇಡ. ನಾನೂ ಇವತ್ತು ಅದೇ ಟ್ರೈ ಮಾಡುತ್ತೇನೆ. ಎರಡು ಕಪ್ಪುಗಳನ್ನು ಮತ್ತು ಚೂಡಾದ ಪ್ಲೇಟನ್ನು ಇಟ್ಟುಕೊಂಡು, ಟ್ರೇ ಎತ್ತಿ ಹಿಡಿದುಕೊಂಡೆ. ಅದೇಕೋ ಗೊತ್ತಿಲ್ಲ. ಚಹಾದ ಟ್ರೇ ಹಿಡಿದುಕೊಂಡು ಕೂಡಲೇ ಸ್ವಲ್ಪ ಸೊಂಟ ಬಳುಕಿಸಿ, ನಕ್ಕು ಮಂಗ್ಯಾತನ ಮಾಡಬೇಕು. ಧಾರವಾಡದ ಮನೆಯಲ್ಲಿದ್ದರೆ ಅಮ್ಮ ಬಯ್ಯುತ್ತಿದ್ದಳು, 'ಹೋಗಿ, ಚಹಾ ಕೊಟ್ಟು ಬಾರೋ. ಅದೇನು ಟ್ರೇ ಹಿಡಕೊಂಡು ಕುಣೀತಿ?' ಅಂತ. ಇಲ್ಲಿ ಬಯ್ಯುವವರು ಇಲ್ಲ. ನಗು ಮಾತ್ರ ಬಂತು.

ಅಡುಗೆಮನೆಗೆ ತಾಕಿಕೊಂಡೇ ಇದೆ ಲಿವಿಂಗ್ ರೂಂ. ನಡು ಒಂದು ಸಣ್ಣ ಗೋಡೆ ಇರುವದರಿಂದ ಪೂರ್ತಿ ಕಾಣುವದಿಲ್ಲ. ಸುತ್ತಿ ನಾಲ್ಕು ಹೆಜ್ಜೆ ಹಾಕಿದೆ. ಲಿವಿಂಗ್ ರೂಂ ಎಂಟರ್ ಆದೆ. ಅಲ್ಲಿನ ಮಾಹೋಲ್ ಏನೋ ಒಂದು ತರಹ ವಿಚಿತ್ರವಾಗಿತ್ತು.

ರೂಮಿನಲ್ಲಿ ಕತ್ತಲೆ. ಬಂದಾಗ ಲೈಟ್ ಹಾಕಿದ್ದೆ. ಈಗ ಇಲ್ಲ. ಬಲ್ಬ್ ಸುಟ್ಟು ಹೋಗಿರಬೇಕು. ಲಿವಿಂಗ್ ರೂಮಿನ ಕಿಡಕಿಗೆ ಹಾಕಿದ ಪರದೆಯ ಮೂಲಕ ಒಂದು ತರಹದ ಬೆಳಕು ಇತ್ತು. ಸಂಜೆ ಐದರ ಸಮಯ. ಬೆಳಕು ಭಾಳ ಕಮ್ಮಿ.

ಲಿವಿಂಗ್ ರೂಂ ಮೂಲೆಯಲ್ಲಿದ್ದ ಟೀವಿ ಮೇಲೆ ಕೇವಲ ಗೆರೆ ಗೆರೆ ಚಿತ್ರ. transmission ಇಲ್ಲದಾಗ ಟೀವಿ ಹಚ್ಚಿದರೆ ಬರುತ್ತದೆ ನೋಡಿ, ಆ ತರಹ ಇತ್ತು. ಜೊತೆಗೆ ಗಸ್ ಗಸ್ ಅನ್ನುವ ಟಿಪಿಕಲ್ ಟೀವಿ ಶಬ್ದ. ಅರೇ ಇಸ್ಕಿ! ಈಗ ಒಂದೆರೆಡು ನಿಮಿಷದ ಹಿಂದೆ ಮಾತ್ರ ಅಷ್ಟು ಜೋರಾಗಿ ಬಾಸ್ಕೆಟ್ ಬಾಲ್ ಪಂದ್ಯ ಬರುತ್ತಿತ್ತು. ಈಗ ನೋಡಿದರೆ ಇಲ್ಲ. ಮತ್ತೂ ವಿಚಿತ್ರವೆನಿಸಿತು.

ಟೀವಿ ನೋಡಲು ಅನುಕೂಲವಾಗುವ ಹಾಗೆ ಟೀವಿ ಎದುರಿಗೆ ಇದೆ ನನ್ನ ರಾಕಿಂಗ್ ಚೇರ್ (rocking chair). ಆರಾಮ್ ಖುರ್ಚಿ. ಅದನ್ನು ಹಿಂದೆ ಮುಂದೆ ರಾಕಿಂಗ್ ಕೂಡ ಮಾಡಿಕೊಳ್ಳಬಹುದು. ಜೆನ್ನಿಫರ್ ಅದರ ಮೇಲೆ ಕೂತಿದ್ದಾಳೆ. ಖುರ್ಚಿ ಹಿಂದೆ  ಮುಂದೆ ರಾಕಿಂಗ್ ಆಗುತ್ತಿದೆ. ಆಕೆ ಸ್ವಲ್ಪ ದೊಡ್ಡ ಸೈಜಿನ ಮಹಿಳೆ ಬೇರೆ. ಆಕೆ ಹಿಂದೆ ಮುಂದೆ ರಾಕಿಂಗ್ ಮಾಡುತ್ತಿದ್ದರೆ ಆ ಖುರ್ಚಿ ಕಿರ್ರ್ ಕಿರ್ರ್ ಅಂತ ಅವಾಜ್ ಮಾಡುತ್ತಿದೆ.

ಥೋ! ಬಲ್ಬೇ ಹೋಗಿದ್ದರೆ ಬೇರೆ ಬಲ್ಬು ಇಲ್ಲ. ಕಿಡಕಿಗೆ ಇಳಿಬಿಟ್ಟ ಪರದೆಯನ್ನೇ ಸರಿಸಿ, ಮುಸ್ಸಂಜೆಯ ಸ್ವಲ್ಪೇ ಸ್ವಲ್ಪ ಉಳಿದಿರುವ ಬೆಳಕನ್ನು ಒಳಗೆ ಬರಮಾಡಿಕೊಳ್ಳಬೇಕು. ಇಲ್ಲವಾದರೆ ಜೆನ್ನಿಫರಳನ್ನು ಒಳಗೆ ಕರೆಯಬೇಕು. ಅಡುಗೆಮನೆಯಲ್ಲಿಯೇ ಚಹಾ, ಚೂಡಾ ಮುಗಿಸಬೇಕು.

'ಜೆನ್ನಿಫರ್, ಜೆನ್ನಿಫರ್, ಚಹಾ ರೆಡಿ. ಏನಿದು ಕತ್ತಲಲ್ಲಿ ಕೂತಿದ್ದೀಯೇ? ಬಲ್ಬ್ ಸುಟ್ಟು ಹೋಯಿತೇ? ಟೀವಿಗೇನಾಯಿತು? ಮ್ಯಾಚ್ ಮುಗಿಯಿತೇ? ಬೇರೆ ಚಾನಲ್ ಹಾಕಲಿಲ್ಲವೇ?' ಅಂದೆ.

ಫುಲ್ ಸೈಲೆನ್ಸ್. ಜೆನ್ನಿಫರ್ ಕಡೆಯಿಂದ ಉತ್ತರವಿಲ್ಲ. ಕೂತಲ್ಲಿ ಕೂತೇ ಇದ್ದಾಳೆ. ನನ್ನ ಕಡೆ ಬೆನ್ನು ಹಾಕಿದ್ದಾಳೆ. ದೊಡ್ಡ ಸೈಜಿನ ರಾಕಿಂಗ್ ಚೇರ್ ಅದು. ಹಾಗಾಗಿ ಏನೂ ಕಾಣುತ್ತಿಲ್ಲ.

ಉತ್ತರ ಬರಲಿಲ್ಲ. ಆದರೆ ಜೆನ್ನಿಫರ್ ಕೂತಿದ್ದ ರಾಕಿಂಗ್ ಚೇರಿನ ಕುಲುಕಾಟ, ಅಲುಗಾಟ ಮಾತ್ರ ಜೋರಾಯಿತು. ಅರೇ ಇಸ್ಕಿ! ಇದೇನು ನಾಗರ ಪಂಚಮಿ ಜೋಕಾಲಿ ಅಂತ ತಿಳಿದಳೋ ಏನು? ಒಳ್ಳೆ ಜೋಕಾಲಿ ತರಹ ಜೀಕುತ್ತಿದ್ದಾಳೆ? ಆ ಖುರ್ಚಿ ಮತ್ತೂ ಜೋರಾಗಿ ಕಿರ್ರ್ ಕಿರ್ರ್ ಅನ್ನುತ್ತಿದೆ. ಗೋಡೆ ಮೇಲೆ ನೆರಳು ವಿಚಿತ್ರವಾಗಿ ಕದಲುತ್ತಿದೆ. ಮಾತಿಲ್ಲ ಕತೆಯಿಲ್ಲ. ಟೀವಿಯ ಗೊರ ಗೊರ ಶಬ್ದ. ನಡುನಡುವೆ ಸಳಕ್ ಸಳಕ್ ಅಂತ ಮಿಂಚಿನಂತೆ ಮೂಡುವ ಬೆಳ್ಳಿ ಗೆರೆಗಳು. ಎಲ್ಲ ಒಂದು ತರಹದ ವಿಚಿತ್ರ.

'ಜೆನ್ನಿಫರ್, ಜೆನ್ನಿಫರ್!' ಅಂದೆ. ನನಗೆ ಏನೋ ಒಂದು ತರಹದ ಫೀಲಿಂಗ್. ಹೆದರಿಕೆ, ಆತಂಕ, uncertainty ಗಳ ಮಿಶ್ರಣ.

ಈಗಲೂ ಉತ್ತರವಿಲ್ಲ. ರಾಕಿಂಗ್ ಖುರ್ಚಿಯ ಜೀಕುವಿಕೆ ಮಾತ್ರ ಮೊದಲಿನ ಹಾಗೆಯೇ ನಡೆದಿದೆ. ಕಿರ್ರ್ ಕಿರ್ರ್.

ಅರೇ ಇಸ್ಕಿ! ಏನಾಯಿತು ಜೆನ್ನಿಫರಳಿಗೆ? ಮನೆಗೆ ಬಂದಳು. ಟೀವಿ ನೋಡುತ್ತಾ ಕೂತಳು. ಈಗ ನೋಡಿದರೆ ಮಾತೇ ಇಲ್ಲ. ಒಂದು ತರಹದ ಮಂದಗತ್ತಲೆ ಬೇರೆ. ರಾಕಿಂಗ್ ಖುರ್ಚಿ ಮೇಲೆ ಕೂತು ಜೀಕುತ್ತಿದ್ದಾಳೆ. ಎಲ್ಲಿಯಾದರೂ ಕೂತಲ್ಲೇ ಸತ್ತೇಹೋದಳೋ ಹೇಗೆ? ಸಾವು ಹೇಳಿ ಕೇಳಿ ಬರುವದಿಲ್ಲ ನೋಡಿ. ಛೇ! ಖುರ್ಚಿ ಆ ಪರಿ ಹಿಂದೆ ಮುಂದೆ ಆಗುತ್ತಿದೆ. ಸತ್ತು ಹೋಗಿರಲು ಹೇಗೆ ಸಾಧ್ಯ? ಪ್ರಾಣ ಹೋಗುವಾಗ ದೇಹ ಭಾಳ ಜರ್ಕ್ ಹೊಡೆಯುತ್ತದೆಯಂತೆ. ಜೀವಕ್ಕೆ ದೇಹವನ್ನು ಬಿಟ್ಟು ಹೋಗುವ ಮನಸ್ಸೇ ಇರುವದಿಲ್ಲವಂತೆ. ಆದರೆ ಯಮದೂತರು ಎಳೆದುಕೊಂಡು ಹೋಗುವಾಗ ಸಿಕ್ಕಾಪಟ್ಟೆ ರಂಪ ಮಾಡುತ್ತದೆಯಂತೆ. ಆವಾಗ ಇಡೀ ದೇಹ violent ಆಗಿ ಜರ್ಕ್ ಹೊಡೆಯುತ್ತದೆಯಂತೆ. ಹಾಗೇನಾದರೂ ಆಗಿಹೋಗಿದೆಯೇ? ಖುರ್ಚಿ ಮೇಲೆ ಕೂತ ಜೆನ್ನಿಫರಳ ಜೀವ ಹೋಗುತ್ತಿದೆಯೇ?

ಏನು ಮಾಡಲಿ? ಮೊದಲು ಸ್ವಲ್ಪ ಬೆಳಕು ಮಾಡಿಕೊಳ್ಳಬೇಕು. ಚಹಾ, ಚೂಡಾ ಇದ್ದ ತಟ್ಟೆಯನ್ನು ಅಲ್ಲೇ ಕಿಚನ್ ಕೌಂಟರ್ ಮೇಲೆ ಇಟ್ಟೆ.

ಲಿವಿಂಗ್ ರೂಮಿನ ಒಂದು ಕೊನೆಯಲ್ಲಿತ್ತು ದೊಡ್ಡ ಕಿಟಕಿ. ಪೂರ್ತಿ ಗೋಡೆಯನ್ನು ಆವರಿಸಿಕೊಂಡಿತ್ತು. ಅದರ ಮೇಲೆ ಮುಚ್ಚಿದೆ ಕ್ಯಾನ್ವಾಸ್ ಬಟ್ಟೆಯ ಪರದೆ. ಪರದೆಯನ್ನು ಸರಿಸಬೇಕು ಅಂತ ಹೊರಟೆ. ಮಧ್ಯದಲ್ಲೇ ರಾಕಿಂಗ್ ಚೇರ್ ಇದೆ. ಅದರ ಮೇಲೆ ಕುಳಿತಿದ್ದಾಳೆ ಜೆನ್ನಿಫರ್.

ಆ ಕಡೆ ಹೆಜ್ಜೆ ಹಾಕಿದೆ. ಜೆನ್ನಿಫರ್ ಕುಳಿತಿದ್ದ ಖುರ್ಚಿ ಮುಂದೆ ಬಂದಾಗ ಮಾತ್ರ ಎದೆ ಧಸಕ್ ಅನ್ನುವ ದೃಶ್ಯ ನೋಡಿ ಅಲ್ಲೇ ನಿಂತುಬಿಟ್ಟೆ. freeze ಆಗಿಬಿಟ್ಟೆ. ಅಲ್ಲಿ ತನಕ ಕೂತಿದ್ದ ಜೆನ್ನಿಫರ್ ಧಡಕ್ಕನೆ ಒಮ್ಮೆಲೇ ಎದ್ದು ನಿಂತು ಬಿಟ್ಟಳು. ಖುರ್ಚಿ ಮಾತ್ರ ಹಿಂದೆ ಮುಂದೆ ಆಗುತ್ತಿತ್ತು. ಕರ್ರ್! ಕರ್ರ್! ಅನ್ನುವ ಕರ್ಕಶ ಆವಾಜ್ ಬೇರೆ.

ರಾಕಿಂಗ್ ಚೇರ್ ಮೇಲೆ ಕೂತಿದ್ದ ದೆವ್ವ

ಎದ್ದು ನಿಂತವಳು ಜೆನ್ನಿಫರ್ ಆಗಿರಲೇ ಇಲ್ಲ. ಅದೊಂದು ಅಕರಾಳ ವಿಕರಾಳ ಆಕೃತಿ. ನನಗೇ ಗೊತ್ತಿಲ್ಲದಂತೆ ಭೀಕರ ಚೀತ್ಕಾರವೊಂದು ಎದೆಯಾಳದಲ್ಲಿ ಹುಟ್ಟಿತು. ಬಾಯಿಗೆ ಬರುವಷ್ಟರಲ್ಲಿ ಮಟಾಶ್ ಆಗಿಹೋಯಿತು. ನನ್ನ ಧ್ವನಿ ಫುಲ್ ಖಲಾಸ್.

ಜೆನ್ನಿಫರ್ ಜಾಗದಲ್ಲಿ ಕಂಡ ಭೀಕರ ಆಕೃತಿಯ ವೇಷ ಭೂಷಣ ಕೂಡ ಎಲ್ಲ ಬದಲಾಗಿ ಬಿಟ್ಟಿತ್ತು. ಬರುವಾಗ ಎಂದಿನಂತೆ ಜೀನ್ಸ್ ಪ್ಯಾಂಟ್, ಮೇಲೊಂದು ಟಾಪ್, ಅದರ ಮೇಲೊಂದು ಜಾಕೆಟ್ ಹಾಕಿಕೊಂಡಿದ್ದಳು. ಈಗ ನೋಡಿದರೆ ಒಂದು ವಿಚಿತ್ರ ನಿಲುವಂಗಿ. ಮುಖವಂತೂ ಸಿಕ್ಕಾಪಟ್ಟೆ ಖರಾಬಾಗಿದೆ. ಕಣ್ಣಲ್ಲಿ ಕೆಂಪು ದೀಪದಂತಹದು ಗರಗರ ಸುತ್ತುತ್ತಿದೆ. ಕೂದಲು ಅಕರಾಳ ವಿಕರಾಳವಾಗಿ ಮುಖದ ಮೇಲೆಲ್ಲಾ ಹರಡಿದೆ. ನಾಲಿಗೆ ಇಷ್ಟುದ್ದ ಹೊರಚಾಚಿದೆ. ಕಣ್ಣಿನಿಂದ ಹೊರಹೊಮ್ಮುತ್ತಿರುವ ಪಿಕಿ ಪಿಕಿ ಕೆಂಪು ಬೆಳಕಿನಲ್ಲಿ ನಾಲಿಗೆ ಸಿಕ್ಕಾಪಟ್ಟೆ ಖರಾಬಾಗಿ ಕಾಣುತ್ತಿದೆ. ಮುಖದ ಚರ್ಮ ಸುಕ್ಕು ಸುಕ್ಕಾಗಿ ಪದರು ಪದರಾಗಿ ಜೋತು ಬಿದ್ದಿದೆ. ಮೂಗು ವಾಕಡಾ ಆಗಿದೆ. ಇದೆಲ್ಲ ನೋಡುತ್ತ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರೆ ಅಷ್ಟರಲ್ಲಿ ಆ ಆಕೃತಿಯ ಕೈಗಳು ಮುಂದೆ ಬಂದವು.

ರಕ್ತಸಿಕ್ತ ಗೌನ್ ಹಾಕಿತ್ತು ದೆವ್ವ

ಅಬ್ಬಾ! ಇಷ್ಟಿಷ್ಟು ಉದ್ದನೆಯ ಉಗುರುಗಳು. ಚೂಪಾದ ಚಾಕುವಿನಂತಿವೆ. ಚುಚ್ಚಿದರೆ ಅಷ್ಟೇ ಮತ್ತೆ. ಅಂತಹ ಕೈಗಳನ್ನು ಆ ಆಕೃತಿ ನನ್ನ ಕುತ್ತಿಗೆಯ ಹತ್ತಿರ ತಂದುಬಿಟ್ಟಿತು. ಅಯ್ಯೋ ಸಿವನೇ! ಏನು ಮಾಡಲಿ ಈಗ? ಬಾಗಿಲು ಆಕಡೆ ಇದೆ. ಈ ದೆವ್ವ ಆಟಕಾಯಿಸಿಕೊಂಡು ನಿಂತುಬಿಟ್ಟಿದೆ. ಮತ್ತೊಂದು ಕಡೆ ಬಾಲ್ಕನಿ ಏನೋ ಇದೆ ನಿಜ. ಆಕಸ್ಮಾತ ಆಕಡೆ ಓಡಿ, ಬಾಲ್ಕನಿಯ ಸ್ಲೈಡಿಂಗ್ ಬಾಗಿಲನ್ನು ತೆಗೆದೆ ಅಂತಲೇ ಇಟ್ಟುಕೊಳ್ಳೋಣ. ಮುಂದೆ? ಇರುವದು ಐದನೇ ಮಹಡಿಯಲ್ಲಿ. ಕೆಳಗೆ ಜಿಗಿದರೆ ಫುಲ್ ಫ್ಲಾಟ್ ಆಗಿ ಚಪಾತಿಯಾಗುವದರಲ್ಲಿ ಸಂಶಯವಿಲ್ಲ. ಯಾವ ಸಾವು ಹಿತ? ಈ ದೆವ್ವದ ಕೈಯಲ್ಲಿ ಸಾಯುವದೋ ಅಥವಾ ರಿಸ್ಕ್ ತೆಗೆದುಕೊಂಡು ಆಕಡೆ ಓಡಿ, ಬಾಲ್ಕನಿಯಿಂದ ಜಿಗಿದು ಸಾಯುವದೋ?

ಇಷ್ಟೆಲ್ಲ ವಿಚಾರ ಬಂದಿದ್ದು ಒಂದು ಕ್ಷಣದಲ್ಲಿ. fraction of a second. ಅಷ್ಟರಲ್ಲಿ ವಿಚಿತ್ರವಾಗಿ ಕೀರಲು ಧ್ವನಿ ಮಾಡುತ್ತ, ವಿಕಾರವಾಗಿ ಮುಖ ತಿರಿಚುತ್ತ, ಆ ದೆವ್ವ ಕೈ ಮತ್ತೂ ಮುಂದೆ ಚಾಚಿತು. ಅದರ ಉದ್ದನೆಯ ಚೂಪಾದ ಉಗುರುಗಳು ನನ್ನ ಕುತ್ತಿಗೆಗೆ ತಾಕಿದವು. ಕಚಗುಳಿ ಇಟ್ಟಂತಾಯಿತು. ಏನು ಇದು ರಕ್ತ ಕುಡಿಯುವ ದೆವ್ವವೇ? ಕುತ್ತಿಗೆಯ ರಕ್ತನಾಳಗಳಿಗೆ ಚೂಪಾದ ಉಗುರುಗಳನ್ನು ನುಗ್ಗಿಸಿ ರಕ್ತ ಕುಡಿಯುವ ವ್ಯಾಂಪೈರ್ ದೆವ್ವವೇ ಇದು? ಇವಳು ಜೆನ್ನಿಫರಳೋ ಅಥವಾ ಬೇರೆ ಯಾರೋ?

'ಧಡ್! ಧಡ್!' ಬಾಗಿಲು ತಟ್ಟುವ ಶಬ್ದ.

ಅಷ್ಟರಲ್ಲಿ ಯಾರೋ ಬಾಗಿಲು ಬಡಿದರು. ಯಾರೂ ಹಾಗೆಲ್ಲ ಬಾಗಿಲು ಬಡಿಯುವದೇ ಇಲ್ಲ. ಕೆಳಗೆ ಮೇನ್ ಡೋರಿಗೆ ಡಬಲ್ ಎಂಟ್ರಿ ಲಾಕ್ ಸಿಸ್ಟಮ್ ಇದೆ. ಅಪರಿಚಿತರು ಯಾರಾದರು ಮೇಲೆ ಬರಬೇಕು ಅಂತಿದ್ದರೆ ಮೊದಲು ಅಲ್ಲಿರುವ ಇಂಟರ್ನಲ್ ಟೆಲಿಫೋನಿಂದ ಮನೆಗೆ ಫೋನ್ ಮಾಡುತ್ತಾರೆ. ಬರಲಿಕ್ಕೆ ಅಡ್ಡಿಯಿಲ್ಲ ಅಂತಾದರೆ ಒಂದು ಬಟನ್ ಇಲ್ಲಿ ಒತ್ತುತ್ತೇವೆ. ಆಗ ಕೆಳಗಿನ ಬಾಗಿಲು ತೆಗೆಯುತ್ತದೆ. ನಂತರ ಅವರು ಮೇಲೆ ಬರುತ್ತಾರೆ. ಈಗ ಯಾರಿಗೂ ಬರಲು ಅವಕಾಶ ಮಾಡಿಕೊಟ್ಟಿಲ್ಲ. ಹಾಗಿದ್ದಾಗ ಇದ್ಯಾರು ನನ್ನ ಮನೆ ಬಾಗಿಲು ತಟ್ಟುತ್ತಿರುವವರು? ಬೇರೆ ಯಾರದೋ ಮನೆಗೆ ಬಂದವರು by mistake ನನ್ನ ಮನೆ ಬಾಗಿಲು ತಟ್ಟುತ್ತಿದ್ದಾರೋ ಹೇಗೆ?

ಬಾಗಿಲು ತಟ್ಟುತ್ತಿರುವವರು ಮತ್ತೆ ಮತ್ತೆ ತಟ್ಟಿದರು. ಕುಟ್ಟಿ ಕುಟ್ಟಿ ತಟ್ಟಿದರು. ಏನೋ ಕೂಗಿದರು. ಅರ್ಥವಾಗಲಿಲ್ಲ. ಮಕ್ಕಳ ಕೂಗು. ಯಾವ ಮಕ್ಕಳು ಬಂದಿದ್ದಾರೆ? ಮನೆಯಲ್ಲಿ ಇರುವವನು ನಾನೊಬ್ಬನೇ. ಹಾಗಾಗಿ ಆ ಮಕ್ಕಳ ದೋಸ್ತರಾರೂ ಇಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಹಾಗಿದ್ದಾಗ ಇದ್ಯಾವ ಮಕ್ಕಳು? ಯಾಕೆ ಬಾಗಿಲು ತಟ್ಟುತ್ತಿದ್ದಾರೆ? ಮತ್ತೆ ಏನು ಕೂಗುತ್ತಿದಾರೆ? ಯಾಕೆ ಕೂಗುತ್ತಿದ್ದಾರೆ? ತಲೆ ಫುಲ್ ಮೊಸರು ಗಡಿಗೆ. ಒಂದು ಕಡೆ ದೆವ್ವ. ಮತ್ತೊಂದು ಕಡೆ ಬಾಗಿಲು ತಟ್ಟುತ್ತ, ಏನೋ ಕೂಗುತ್ತಿರುವ ಮಕ್ಕಳು. ಶಿವನೇ ಶಂಭುಲಿಂಗ!

ಎದುರಿಗೆ ನಿಂತಿದ್ದ ದೆವ್ವ ಗಹಗಹಿಸಿ ವಿಕೃತವಾಗಿ ನಕ್ಕಿತು. ನಿಲುವಂಗಿಯ ಅಡಿಯಲ್ಲಿದ್ದ ಕೈಗಳನ್ನು ಆಚೀಚೆ ಅಲ್ಲಾಡಿಸಿತು. ಬಾವಲಿ ರೆಕ್ಕೆಗಳನ್ನು ರಪ್ ರಪ್ ಅಂತ ಝಾಡಿಸಿದಂತೆ ತೋರಿಬಂತು. ದೆವ್ವ ಒಂದೆರೆಡು ಹೆಜ್ಜೆ ಹಿಂದೆ ಸರಿಯಿತು.

'ಏ! ಖಬರ್ದಾರ್! ಅಲ್ಲೇ ಇರು. ನಿನ್ನನ್ನು ನಂತರ ವಿಚಾರಿಸಿಕೊಳ್ಳುತ್ತೀನಿ. ಬಾಗಿಲಲ್ಲಿ ಮಕ್ಕಳು ಬಂದ ಹಾಗಿದೆ. ಒಳ್ಳೆದೇ ಆಯಿತು. ಅವರನ್ನೂ ಆಹುತಿ ತೆಗೆದುಕೊಂಡು ಬಿಡ್ತೀನಿ. ಬೋನಸ್ ಬಲಿ ನನಗೆ ಇವತ್ತು,' ಅಂತ ಅಬ್ಬರಿಸಿತು ಆ ಆಕೃತಿ. ಧ್ವನಿ ಮಾತ್ರ ಜೆನ್ನಿಫರಳದ್ದೇ ಅನ್ನಿಸಿತು. ಸ್ವಲ್ಪ ಗೊಗ್ಗರು ಗೊಗ್ಗರಾಗಿತ್ತು. ಅದು ಬಿಟ್ಟರೆ ಅವಳದ್ದೇ ಧ್ವನಿ. ಹಾಗಿದ್ದರೆ ಜೆನ್ನಿಫರ್ ಮೈಯಲ್ಲಿ ದೆವ್ವ ಹೊಕ್ಕಿದೆಯೇ? ದೆವ್ವ ಹೊಕ್ಕಿದ್ದರೆ ವೇಷ ಭೂಷಣ ಎಲ್ಲ ಹೇಗೆ ಬೇರೆಯಾಯಿತು? ಮುಖವಂತೂ ಆಕೆಯದ್ದು ಅಲ್ಲವೇ ಅಲ್ಲ. ಏನಿದು ವಿಚಿತ್ರ?

ನನ್ನ ಮೇಲೆ ಒಂದು ಕಣ್ಣಿಟ್ಟೇ ಆಕಡೆ ಸರಿಯಿತು ಆ ಜೆನ್ನಿಫರ್ ದೆವ್ವ. ಒಂದೆರೆಡು ಹೆಜ್ಜೆ  ಅಷ್ಟೇ. ಈಗ ಅದು ಬಾಗಿಲನ ಹಿಂದೆ ನಿಂತಿತ್ತು. ಅಲ್ಲೇ ಅವಳ ಬ್ಯಾಗ್ ಸಹಿತ ಇತ್ತು. ಹೆಂಗಸರ ವ್ಯಾನಿಟಿ ಬ್ಯಾಗ್. ಆ ಬ್ಯಾಗ್ ತೆಗೆದು ಕೈಯಲ್ಲಿ ಹಿಡಿದುಕೊಂಡಿತು. ಆಕಡೆಯಿಂದ ಮಕ್ಕಳು ಬಾಗಿಲು ಬಡಿಯುತ್ತಲೇ ಇದ್ದರು. ಏನೋ ಕೂಗುತ್ತಲೇ ಇದ್ದರು.

ಜೆನ್ನಿಫರ್ ದೆವ್ವ ಬಾಗಿಲು ತೆಗೆಯಿತು. 'ಘೌ! ಘೌ!' ಅಂತ ಒದರಿ ಮಕ್ಕಳನ್ನು ಹೆದರಿಸಿತು. ಹೊರಗೆ ನೋಡಿದರೆ ಎರಡು ಮಕ್ಕಳು. ಹೊರಗಿನ ಕಾರಿಡಾರಿನಲ್ಲಿ ಬೇಕಾದಷ್ಟು ಬೆಳಕಿತ್ತು. ಮಕ್ಕಳು ಸರಿಯಾಗಿ ಕಂಡರು. ಒಂದು ಹುಡುಗ, ಒಂದು ಹುಡುಗಿ. ಇಬ್ಬರೂ ಏನೋ ವಿಚಿತ್ರ ದೆವ್ವಗಳ ವೇಷಭೂಷಣ ಧರಿಸಿದ್ದರು. ಏನಪ್ಪಾ ಇದು ಇವತ್ತು ದೆವ್ವಗಳ ದಿವಸವೇ ಹೇಗೆ? ಇಲ್ಲಿ ನೋಡಿದರೆ ಇವಳು ದೆವ್ವವಾಗಿ ಬದಲಾಗಿ ಬಿಟ್ಟಿದ್ದಾಳೆ. ಹೊರಗೆ ಯಾರೋ ಬಾಗಿಲು ಬಡಿಯುತ್ತಾರೆ. ತೆಗೆದು ನೋಡಿದರೆ ಎರಡು ಚಿಕ್ಕ ದೆವ್ವಗಳು. ದೆವ್ವಗಳ ಮೆಹಫಿಲ್ ಜಮಾ ಆಗಿಬಿಟ್ಟಿದೆ! ಹೊಸದಾಗಿ ಮನೆಗೆ ಬಂದ ಮೇಲೆ ಒಂದು ಶಾಂತಿಯನ್ನಾದರೂ ಮಾಡಿಸಬೇಕಿತ್ತು. ಎಲ್ಲಿಯ ಶಾಂತಿ? ಕ್ಯಾಬರೆ ಡಾನ್ಸ್ ಹೊಡೆಯುತ್ತಿದ್ದ ಡಿಸ್ಕೋ ಶಾಂತಿಯ ಐಟಂ ನಂಬರುಗಳನ್ನು ನೋಡುತ್ತ ಎಲ್ಲ ಮರೆತುಬಿಟ್ಟಿದ್ದೆ.

ವಿಚಿತ್ರ ನೋಡಿ! ಆ ಮಕ್ಕಳು ದೆವ್ವದ ರೂಪದ ಜೆನ್ನಿಫರಳನ್ನು ನೋಡಿ ಬೆಚ್ಚಿ ಬೀಳಲಿಲ್ಲ. ಬದಲಿಗೆ ಚಪ್ಪಾಳೆ ತಟ್ಟಿ ತಟ್ಟಿ, ಕೇಕೆ ಹಾಕಿ ಹಾಕಿ ಸಂಭ್ರಮಿಸಿದವು. ಎಲ್ಲ ಒಂದೇ ದೆವ್ವದ ಬಿರಾದರಿಯವರು ಅನ್ನಿಸುತ್ತದೆ. ಜೆನ್ನಿಫರ್ ದೆವ್ವ ಕೂಡ ಆ ಸಂತಸದಲ್ಲಿ ಭಾಗಿಯಾಯಿತು. ಮುಂದೆ ಆಗಿದ್ದು ಮಾತ್ರ ಫುಲ್ ವಿಚಿತ್ರ.

ಆ ಮರಿ ದೆವ್ವಗಳು ವಿಚಿತ್ರವಾಗಿ ಏನೋ ಕೂಗಿದವು. ಜೆನ್ನಿಫರ್ ಕೈಯಲ್ಲಿ ಏನೋ ಒಂದು ಪ್ಯಾಕೆಟ್. ಅದರಿಂದ ಏನೋ ತೆಗೆದು ಅವರಿಗೆ ಕೊಟ್ಟಳು. ಥ್ಯಾಂಕ್ಸ್ ಹೇಳಿದ ಮರಿ ದೆವ್ವಗಳು ಅಲ್ಲಿಂದ ಹೊರಟವು. ಅಲ್ಲಿ ಏನಾಗುತ್ತಿದೆ? ಆ ಮರಿ ದೆವ್ವಗಳು ಎಲ್ಲಿ ಹೋಗಲಿವೆ? ಹೋಗುವ ಮುಂಚೆ ಆ ಮರಿ ದೆವ್ವಗಳಿಗೆ ಮಬ್ಬು ಕತ್ತಲಲ್ಲಿ, ಲಿವಿಂಗ್ ರೂಮಿನ ಮಧ್ಯೆ ಗಡಗಡ ನಡುಗುತ್ತ ನಿಂತ ನಾನು ಕಂಡಿರಬೇಕು. ಒಳಗೆ ಹಣಿಕಿ ಹಾಕಿದವು. ಒಳಗೆ ಬಂದುಬಿಟ್ಟರೆ ಕಷ್ಟ. ಮೊದಲೇ ಒಂದು ದೆವ್ವವಿದೆ. ಇವೂ ಎರಡು ಬಂದುಬಿಟ್ಟರೆ ಏನು ಮಾಡುತ್ತವೋ!? ಭಗವಂತಾ! ಅಮೇರಿಕಾಗೆ ಬಂದು ಕೇವಲ ನಾಲ್ಕೇ ತಿಂಗಳಾಗಿದೆ. ಆಗಲೇ ಮೇಲೆ ಹೋಗುವ ಟಿಕೆಟ್ ಕೊಟ್ಟೇಬಿಟ್ಟೆಯೇ ತಂದೆ? ಹಾಂ? ಅದೂ ದೆವ್ವದ ಕೈಯಲ್ಲಿ ಭಯಂಕರ ಸಾವು. ಏನು ಮಾಡಲಿ ಈಗ? ಏನೂ ತೋಚುತ್ತಿಲ್ಲ

ಮನೆಯ ಲ್ಯಾಂಡ್ ಲೈನ್ ಫೋನ್ ಪಕ್ಕದಲ್ಲಿ ಕಂಡಿತು. ಒಂದು ಐಡಿಯಾ ಬಂತು. ೯೧೧ ಎಮರ್ಜೆನ್ಸಿ ಸಹಾಯವಾಣಿ ನಂಬರ್ ಒತ್ತಿಬಿಟ್ಟರೆ ಆಯಿತು. ಮಾತಾಡುವ ಜರೂರತ್ತೂ ಇಲ್ಲ. ಕಾಲರ್ ಐಡಿ ನೋಡಿ, ನನ್ನ ಮನೆಯ ಅಡ್ರೆಸ್ ಟ್ರ್ಯಾಕ್ ಮಾಡಿ, ಪೋಲೀಸರನ್ನು ಕಳಿಸಿಯೇ ಬಿಡುತ್ತಾರೆ. ಆ ಮಟ್ಟದ ಸಿಸ್ಟಮ್ ಅಮೇರಿಕಾದಲ್ಲಿ ಇದೆ. ಅದೇ ಒಂದು ಉಳಿದ ಮಾರ್ಗ. ಜೆನ್ನಿಫರ್ ದೆವ್ವ ಇನ್ನೂ ಬಾಗಿಲಲ್ಲೇ ಇದೆ. ಚಿಕ್ಕ ದೆವ್ವಗಳನ್ನು ಕಳಿಸಿ ಕಾರಿಡಾರಿನಲ್ಲಿ ಬಗ್ಗಿ ಬಗ್ಗಿ ನೋಡುತ್ತಿದೆ. ಇನ್ನು ಒಂದೆರಡೇ ಕ್ಷಣಗಳಲ್ಲಿ ಬಾಗಿಲು ಹಾಕಿಕೊಂಡು ವಾಪಸ್ ಬರಲಿದೆ. ನಂತರ ನನ್ನ ರಕ್ತ ಹೀರಲಿದೆ. ಅಷ್ಟರಲ್ಲಿ ೯೧೧ ಒತ್ತೇ ಬಿಡಬೇಕು. ಒತ್ತಿದ ನಂತರವೂ ಬಚಾವಾಗುವದರ ಬಗ್ಗೆ ಖಾತ್ರಿಯಿಲ್ಲ. ಆದರೆ ಪೊಲೀಸರು ಸಮಯಕ್ಕೆ ಸರಿಯಾಗಿ ಬಂದರೆ ದೆವ್ವಕ್ಕೆ ಬರೋಬ್ಬರಿ ಬತ್ತಿ ಇಟ್ಟರೂ ಇಟ್ಟಾರು. ದೆವ್ವ ಪೊಲೀಸರಿಗೆ ಹೆದರುತ್ತದೆಯೇ? ಅಥವಾ ಮೊದಲಿನ ವೇಷ ಧರಿಸಿ ಮಾಯವಾಗಿಬಿಡುತ್ತದೆಯೋ? ಅಥವಾ ಮತ್ತೇನೋ ತಂತ್ರ ಮಾಡುತ್ತದೆಯೋ? ದೇವರಿಗೇ ಗೊತ್ತು. ದೆವ್ವಕ್ಕೇ ಗೊತ್ತು.

ಬೇಗ ಆಕ್ಷನ್ ತೆಗೆದುಕೊಳ್ಳಬೇಕು. ಒಂದು ಹೆಜ್ಜೆ ಪಕ್ಕಕ್ಕೆ ಸರಿದೆ. ಕಾಲ ಕೆಳಗಿದ್ದ ಪ್ಲೈವುಡ್ ನೆಲ ಕಿರ್ರ ಅಂತು. ಜೆನ್ನಿಫರ್ ದೆವ್ವ ಸಟಾಕ್ ಅಂತ ತಿರುಗಿ ನೋಡಿತು. ಅದಕ್ಕೆ ಏನೋ ಸೂಟು ಹೊಡೆದಿರಬೇಕು. ಸಂಶಯ ಬಂದಿರಬೇಕು. ಧಡಾಕ್! ಅಂತ ಬಾಗಿಲು ಮುಚ್ಚಿತು. ವಿಕಾರವಾಗಿ ನಕ್ಕಿತು. ಇಷ್ಟುದ್ದದ ನಾಲಿಗೆ ವಿಕಾರವಾಗಿ ಹೊರಗೆ ಚಾಚಿಕೊಂಡಿತು. ಕಣ್ಣಲ್ಲಿ ಮತ್ತೆ ಕೆಂಪು ದೀಪ. ಪಕ್ ಪಕ್ ಕೆಂಪು ದೀಪದಡಿಯಲ್ಲಿ ಭೀಕರ ಆಕೃತಿ. ಬಾವಲಿಯ ರೆಕ್ಕೆಗಳಂತೆ ಕೈಗಳನ್ನು ಅಲ್ಲಾಡಿಸುತ್ತ, ಉದ್ದ ಉದ್ದ ಹೆಜ್ಜೆ ಹಾಕುತ್ತ, ಕೈಗಳನ್ನು ಮುಂದೆ ಮುಂದೆ ತರುತ್ತ, ಹೂಂಕರಿಸುತ್ತ ಮತ್ತೆ ನನ್ನ ಕಡೆ ನಿಧಾನವಾಗಿ ಬರತೊಡಗಿತು. ಈಗ ನನಗೆ 'ಮಾಡು ಇಲ್ಲವೇ ಮಡಿ' ಕ್ಷಣ. ಇನ್ನು ಕ್ಷಣಾರ್ಧದಲ್ಲಿ ಅದರ ಕೈಗಳು ನನ್ನ ಕುತ್ತಿಗೆಯ ಮೇಲಿರುತ್ತವೆ. ಉದ್ದನೆಯ ಚೂಪಾದ ಉಗುರುಗಳು ರಕ್ತನಾಳಗಳನ್ನು ಛೇದಿಸಿ ರಕ್ತದ ಪೈಪ್ ತೆರೆದುಬಿಡುತ್ತವೆ. ರಕ್ತ ಕಾರಂಜಿಯಂತೆ ಚಿಮ್ಮುತ್ತದೆ. ನನ್ನ ಹಲಾಲ್ ಆಗಿಯೇಬಿಡುತ್ತದೆ. ೯೧೧ ಒತ್ತಲೇಬೇಕು. ಸಾವು ಕಣ್ಣ ಮುಂದೇ ಇದೇ. ಆದರೆ ಅಬ್ಬೇಪಾರಿಯಂತೆ ಸಾಯಬಾರದು.

'ಜೈ ಬಜರಂಗ ಬಲಿ! ಅಂತ ಅಬ್ಬರಿಸಿಯೇ ಡೈವ್ ಹೊಡೆಯೋಣ ಅಂತ ಮಾಡಿದೆ. ಧ್ವನಿ ಸತ್ತು ಹೋಗಿದೆ. ದೆವ್ವವನ್ನು ನೋಡಿದಾಗಿಂದ ಧ್ವನಿಯೇ ಇಲ್ಲ. ಫುಲ್ ಪೋಯಾಚ್ಚ.

ದೆವ್ವ ನನ್ನಿಂದ ನಾಲ್ಕು ಹೆಜ್ಜೆ ದೂರವಿದೆ ಅಂದಾಗ ಫೋನ್ ಕಡೆ ಡೈವ್ ಹೊಡೆದೆ. ಉಟ್ಟಿದ್ದ ಲುಂಗಿಯ ಪುಂಗಿ ಬಾರಿಸಿಹೋಯಿತು. ಪುಣ್ಯಕ್ಕೆ ಒಳಗೆ ಇರಬೇಕಾಗಿದ್ದಿದ್ದು ಇತ್ತು. ಹಾಗಾಗಿ ಕೇವಲ ಕ್ವಾರ್ಟರ್ (೧/೪) ಗೋಮಟೇಶ್ವರ ಆಗಿಹೋದೆ. 'ಇದೊಂದು ಸಲ ಕಾಪಾಡಿಬಿಡು ತಂದೆ. ಮುಂದೆ ಎಂದೂ ಲುಂಗಿ ಉಡುವದಿಲ್ಲ. ಚೊಣ್ಣಕ್ಕೆ ಶಿಫ್ಟ್ ಆಗಿಬಿಡುತ್ತೇನೆ. ಸದಾ ಚೊಣ್ಣವನ್ನೇ ಧರಿಸುವ ಚೊಣ್ಣಾ ಹಜಾರೆ ಆಗಿಬಿಡುತ್ತೇನೆ. ಕಾಪಾಡು ತಂದೆ!' ಅಂತ ಹರಕೆ ಹೇಳಿಕೊಳ್ಳುವ ಮಾದರಿಯಲ್ಲಿ ದೇವರನ್ನು ನೆನೆಯುತ್ತ ಫೋನಿನತ್ತ ಡೈವ್ ಹೊಡೆದೆ.

ಇದನ್ನು ಜೆನ್ನಿಫರ್ ದೆವ್ವ ನಿರೀಕ್ಷೆ ಮಾಡಿರಲಿಲ್ಲ. ಅದಕ್ಕೆ ಒಂದು ತರಹದ ಗೊಂದಲವಾಯಿತು. ನನ್ನ ಕಡೆ ಧಾವಿಸುತ್ತಿದ್ದ ದೆವ್ವ ಅಲ್ಲೇ ನಿಂತಿತು. ನನಗೆ ಒಳ್ಳೆಯದೇ ಆಯಿತು. ದೆವ್ವ ಕೂಡ ಪೈಪೋಟಿ ಮೇಲೆ ಡೈವ್ ಹೊಡೆದು ಫೋನ್ ಕಿತ್ತುಕೊಳ್ಳುತ್ತದೆ ಅಥವಾ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತದೆ ಅಂದುಕೊಂಡಿದ್ದೆ. ಆದರೆ ದೆವ್ವ ಏನೂ ಮಾಡಲಿಲ್ಲ. ನಿಂತಲ್ಲೇ ನಿಂತು ಬಿಟ್ಟಿತು. ಪ್ರತಿಯೊಂದು ದೆವ್ವಕ್ಕೂ ಒಂದೊಂದು ವಸ್ತುಗಳ ಭಯಂಕರ ಭಯವಿರುತ್ತದೆ ಅಂತ ಕೇಳಿದ್ದೆ. ಕೆಲವು ದೆವ್ವಗಳು ತ್ರಿಶೂಲಕ್ಕೆ ಹೆದರುತ್ತವೆ. ಕೆಲವು ಕ್ರೈಸ್ತರ ಕ್ರಾಸ್ ನೋಡಿದರೆ ಎದ್ದು ಬಿದ್ದು ಓಡುತ್ತವೆ. 'ಎಲ್ಲಿ ಈ ಜೆನ್ನಿಫರ್ ದೆವ್ವಕ್ಕೆ ಟೆಲಿಫೋನ್ ಅಂದರೆ ಭಯವೋ ಹೇಗೆ?' ಅಂತ ವಿಚಾರ ಫ್ಲಾಶ್ ಆಯಿತು. ಆದರೆ ಮಾಡಬೇಕಾದ ಕೆಲಸ ಇನ್ನೂ ಬಾಕಿಯಿತ್ತು.

ಫೋನ್ ಹ್ಯಾಂಡ್ಸೆಟ್ ಕೈಗೆ ಸಿಕ್ಕಿದ ಕ್ಷಣವೇ ೯೧೧ ಒತ್ತಿಬಿಟ್ಟೆ. ನಂತರ Talk ಬಟನ್ ಅದುಮಿಬಿಟ್ಟೆ. Done. ಗಡಿಬಿಡಿಯಲ್ಲಿ ಸ್ಪೀಕರ್ ಬಟನ್ ಕೂಡ ಒತ್ತಿಬಿಟ್ಟಿದ್ದು ನನಗೇ ಗೊತ್ತಿರಲಿಲ್ಲ. ಆಕಡೆಯಿಂದ ೯೧೧ ಆಪರೇಟರ್ ಧ್ವನಿ ಸ್ಪೀಕರ್ ಮೂಲಕ ಕೇಳಿ ಬಂದಾಗಲೇ ಈ ಲೋಕಕ್ಕೆ ಬಂದೆ. ನಾನು ಇನ್ನೂ ಜೀವಂತವಾಗಿದ್ದೆ. ದೆವ್ವ ದಾಳಿ ಮಾಡಿರಲಿಲ್ಲ. ಅದು ಅಲ್ಲೇ ನಿಂತಿತ್ತು. ಅದರ ವಿಚಿತ್ರ ತರಹದ ಕೂಗಾಟ ನಿಂತಿತ್ತು. ಕೈಗಳು ಉದ್ದಕ್ಕೆ ಚಾಚಿಕೊಂಡೇ ಇದ್ದವು. ಕಣ್ಣುಗಳಲ್ಲಿ ಕೆಂಪು ದೀಪ ನೆತ್ತರನ್ನು ಕಾರುತ್ತಲೇ ಇತ್ತು.

'What's your emergency?' ಅಂತ ೯೧೧ ಆಪರೇಟರ್ ಹೆಂಗಸಿನ ಧ್ವನಿ ಸ್ಪೀಕರ್ ಮೂಲಕ ಕೇಳಿಬಂತು. ಧ್ವನಿಯಲ್ಲಿ ಏರಿಲ್ಲ, ಇಳಿತವಿಲ್ಲ. ಶುದ್ದ ವೃತ್ತಿಪರರ ನಿರ್ಭಾವುಕ ಧ್ವನಿ.

ಏನು ಹೇಳಲಿ? ಬಾಯಿ ಎಲ್ಲ ಫುಲ್ ಬಂದ್!

ಮತ್ತೆ ಅದೇ ಪ್ರಶ್ನೆ. ಈಗ ಒಂದು ಎಕ್ಸಟ್ರಾ ಫಿಟ್ಟಿಂಗ್ ಬೇರೆ!

'What's your emergency? Are you able to speak? Hegade household. Correct?' ಅಂತ ಕೇಳಿದಳು ೯೧೧ ಆಪರೇಟರ್.

ಗುಡ್. ವೆರಿ ಗುಡ್. ಏನು ಸಿಸ್ಟಮ್ ಮಡಗಿದ್ದಾರೆ ಈ ಮಂದಿ! ಶಬಾಶ್! ನನ್ನ ಫೋನ್ ನಂಬರ್ ನೋಡಿ ನನ್ನ ಹೆಸರು, ವಿಳಾಸ ಎಲ್ಲ ಪತ್ತೆ ಮಾಡಿದ್ದಾರೆ. ಗುಡ್! ಗುಡ್!

ಈಗಲೂ ಮಾತು ಹೊರಡಲಿಲ್ಲ. ನಾನು ಜೆನ್ನಿಫರ್ ದೆವ್ವವನ್ನೇ ನೋಡುತ್ತ ನಿಂತಿದ್ದೆ. ಅತಿ ವಿಚಿತ್ರ ಎಂಬಂತೆ ಆ ದೆವ್ವ ಅಲ್ಲೇ ನಿಂತಿತ್ತು. ಕಾಡಿಸಿ ಪೀಡಿಸಿ ಕೊಲ್ಲುವ ದೆವ್ವವೇ ಇದು? sadistic ದೆವ್ವ!?

'Help is on the way. You can hang up now. Be safe as much you can,' ಅಂದಿತು ೯೧೧ ಆಪರೇಟರ್ ಧ್ವನಿ. ಅದು ಅವರ ಸ್ಟ್ಯಾಂಡರ್ಡ್ ಪದ್ಧತಿ. ೯೧೧ ಗೆ ಫೋನ್ ಮಾಡುವದು ದೊಡ್ಡ ಸಂಕಷ್ಟದಲ್ಲಿದ್ದಾಗ. ಅಂತಹ ಸಂದರ್ಭದಲ್ಲಿ ಫೋನ್ ಮಾಡಿದರೂ ಒಮ್ಮೊಮ್ಮೆ ಮಾತಾಡಲು ಅವಕಾಶವಿರುವದಿಲ್ಲ. ಪ್ರಾಣಾಪಾಯವಿರುತ್ತದೆ. ಹಾಗಾಗಿ ಮಾತಿಲ್ಲದ ಸೈಲೆಂಟ್ ಫೋನ್ ಕರೆಗಳು ಅವರಿಗೆ ಏನೂ ಹೊಸದಲ್ಲ. ೯೧೧ ಎಮರ್ಜೆನ್ಸಿಗೆ ಫೋನ್ ಮಾಡಿ ಮಾತಾಡಲಿಲ್ಲ ಅಂದರೆ ಅಪಾಯ ಹೆಚ್ಚೇ ಇದೆ ಅಂತ ಅವರ ಲೆಕ್ಕಾಚಾರ. ಆಗಿಂದಾಗಲೇ ಪೋಲೀಸ್ ಕಾರನ್ನು ಕಳಿಸಿಯೇ ಬಿಡುತ್ತಾರೆ. ಇದನ್ನೆಲ್ಲ ಕೇಳಿದ್ದೆ. ಈಗ ನನ್ನ ಮುಂದೆಯೇ ಎಲ್ಲ ತೆರೆದುಕೊಳ್ಳುತ್ತಿದೆ. ಆದರೆ ಅದೆಲ್ಲ ಉಪಯೋಗವಾಗುತ್ತದೆಯೋ ಇಲ್ಲವೋ? Will it all be too little too late?

ಜೆನ್ನಿಫರ್ ದೆವ್ವ ಈಗ ಗಹಗಹಿಸಿ ನಕ್ಕಿತು. ಅರೇ ಇಸ್ಕಿ! ಇಲ್ಲಿ ತನಕ ವಿಚಿತ್ರವಾಗಿ ಹೂಂಕರಿಸುತ್ತಿದ್ದ ದೆವ್ವ ಈಗ ನಗುತ್ತಿದೆ. ಒಂದು ವಿಷಯವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ಈಗ ಜೆನ್ನಿಫರಳ ಸಹಜ ಧ್ವನಿಯಲ್ಲೇ ನಗುತ್ತಿದೆ. ಅದು ಅವಳ unmistakable ನಗೆ. ಆ ನಗೆಯಲ್ಲಿಯೇ ಅನುಕಂಪ, ಸ್ನೇಹ, ಮಮತೆ, ಆತ್ಮೀಯತೆ ಎಲ್ಲ ಇದೆ. ಇದು ಹೇಗೆ ಸಾಧ್ಯ? ದೆವ್ವ ಜೆನ್ನಿಫರಳ ದೇಹವನ್ನು ಬಿಟ್ಟು ತೊಲಗುತ್ತಿದೆಯೋ ಹೇಗೆ? ದೇವರೇ ಇದೇನು ಆಗುತ್ತಿದೆ?

ಜೆನ್ನಿಫರ್ ದೆವ್ವ ಎರಡು ಹೆಜ್ಜೆ ಹಾಕಿತು. ನನ್ನ ಕಡೆಯಲ್ಲ. ಸೈಡಿಗೆ ಎರಡು ಹೆಜ್ಜೆ ಹಾಕಿತು. ಅಲ್ಲಿ ದೀಪವಿತ್ತು. ಅದೇ ಬಲ್ಬ್ ಸುಟ್ಟುಹೋದ ದೀಪ. ಅದರ ಕೆಳಗೆ ಕೈಹಾಕಿ ಸ್ವಿಚ್ಚನ್ನು ಕಳಕ್ ಅಂತ ಆನ್ ಮಾಡಿತು. ದೀಪ ಒಮ್ಮೆಲೇ ಹೊತ್ತಿ ಉರಿಯಿತು. ಅಂದರೆ ಬಲ್ಬ್ ಸುಟ್ಟಿರಲಿಲ್ಲವೇ? ಅಥವಾ ದೆವ್ವದ ಹತ್ತಿರ ಅತೀಂದ್ರಿಯ ಶಕ್ತಿಗಳು ಏನಾದರೂ ಇವೆಯೋ? ಅವುಗಳ ಮೂಲಕ ಸುಟ್ಟ ಬಲ್ಬಿನ ಮುಖಾಂತರವೂ ದೀಪ ಹೊತ್ತಿಸಿತೆ ದೆವ್ವ?

ಈಗ ಲಿವಿಂಗ್ ರೂಂ ತುಂಬಾ ಫುಲ್ ಬೆಳಕು. ಫುಲ್ ಬೆಳಕಿನಲ್ಲಿ ದೆವ್ವ ಮತ್ತೂ ಖರಾಬಾಗಿ ಕಂಡಿತು. ಉದ್ದವಾಗಿ ಚಾಚಿಕೊಂಡ ಕಪ್ಪು ಬಣ್ಣದ ನಾಲಿಗೆ ಮೇಲೆ ಹೆಪ್ಪು ಗಟ್ಟಿದ ರಕ್ತ. ಓಹ್! ಮೈ ಗಾಡ್! ಕತ್ತಲಲ್ಲಿ ಸರಿಯಾಗಿ ಕಂಡಿರಲಿಲ್ಲ. ಹಾಕಿಕೊಂಡಿದ್ದ ನಿಲುವಂಗಿ ಮೇಲೂ ರಕ್ತ. ರಾಮಾ ರಕ್ತ. ದೆವ್ವ ಕೈ ಮುಂದೆ ಚಾಚಿ ಗಹಗಹಿಸಿ ನಕ್ಕಿತು. ಉಗುರಿನ ಸಂದಿಗಳಲ್ಲೂ ರಕ್ತ, ರಾಮಾ ರಕ್ತ. ದೆವ್ವ ಮುಂದೆ ಹೆಜ್ಜೆ ಹಾಕಿತು.

ಈಗ ದೆವ್ವ ನನ್ನ ಕಡೆ ಬಂತು. ಮಧ್ಯೆ ಅಂತರ ಒಂದು ಅಡಿ ಇದ್ದಾಗ ನಿಂತಿತು. 'ಘೌ!ಘೌ!' ಅಂತ ಹೂಂಕರಿಸಿತು. ಏನು ಮಾಡಲಿ? ಎಲ್ಲಿ ಓಡಲಿ? ಸಾವು ಕಣ್ಣ ಮುಂದೆ ಬಂದು ನಿಂತಿದೆ. ಸಾವನ್ನು ನೋಡುವದು ಕಷ್ಟ. ನನ್ನ ಕಣ್ಣುಗಳು ಮುಚ್ಚಿಹೋದವು. ಕೈಯಲ್ಲಿ ಫೋನ್ ಹ್ಯಾಂಡ್ಸೆಟ್ ಹಿಡಿದುಕೊಂಡು ನಿಂತೇ ಇದ್ದೆ. ದೆವ್ವದ ಚೂಪಾದ ಉಗುರುಗಳು ಯಾವಾಗ ಕುತ್ತಿಗೆಯ ರಕ್ತನಾಳಗಳನ್ನು ಛಿದ್ರ ಮಾಡಲಿವೆಯೋ!? ಶಿವಾಯ ನಮಃ! ಆ ಕ್ಷಣ ಬಂದೇಬಿಟ್ಟಿತು. ದೇವರನ್ನು ಸ್ಮರಿಸಿಕೊಂಡೆ. ದೆವ್ವದ ಕೈಯಲ್ಲಿ ಸಾಯಲು ಸಿದ್ಧನಾದೆ.

ಆದರೆ ಹಾಗೇನೂ ಆಗಲಿಲ್ಲ. ಒಂದು ಕ್ಷಣದ ನಂತರ ಕಣ್ಣು ಬಿಟ್ಟು ನೋಡಿದೆ. ಭಯಂಕರ ಆಶ್ಚರ್ಯ. ಜೆನ್ನಿಫರ್ ದೆವ್ವ ಹೋಗಿ ಮತ್ತೆ ರಾಕಿಂಗ್ ಚೇರ್ ಮೇಲೆ ಕೂತುಬಿಟ್ಟಿದೆ. ಜೋಕಾಲಿಯಂತೆ ಜೀಕುತ್ತಿದೆ. ಮತ್ತದೇ ಕರ್ರ್! ಕರ್ರ್! ಏನೋ ಗುಣುಗುಣು ಅನ್ನುತ್ತಿದೆ ದೆವ್ವ. ಧ್ವನಿ ಮಾತ್ರ ಜೆನ್ನಿಫರಳದ್ದೇ. ದೆವ್ವದ ರೂಪ, ವೇಷ ಮಾತ್ರ ಹಾಗೇ ಇದೆ. ದೆವ್ವದ ಕೈಯಲ್ಲಿ ಟೀವಿ ರಿಮೋಟ್ ಕಂಟ್ರೋಲ್. ಟೀವಿ ಮೇಲೆ ಮಾತ್ರ ಮತ್ತೆ ಅವೇ transmission ಇಲ್ಲದಾಗ ಮೂಡಿ ಬರುವ ಬೆಳ್ಳಿ ಗೆರೆಗಳು. ಕೊಲ್ಲುವ ಮೊದಲು ಟೀವಿ ನೋಡಬೇಕೇ ದೆವ್ವಕ್ಕೆ!?

ದೆವ್ವ ಟೀವಿ ರಿಮೋಟ್ ಅದುಮಿತು. ಟೀವಿ ಚಾನೆಲ್ ಬದಲು ಮಾಡುತ್ತದೆಯೋ ಅಂದುಕೊಂಡರೆ ದೆವ್ವ ಟೀವಿ ಆಫ್ ಮಾಡಿಬಿಟ್ಟಿತು. ದೆವ್ವಕ್ಕೆ ಪೂರ್ತಿ ಸೈಲೆನ್ಸ್ ಇಷ್ಟ ಅಂತ ಕಾಣುತ್ತದೆ. ಪೂರ್ತಿ ಶಾಂತಿಯಲ್ಲಿ ನನ್ನ ಕೊಲ್ಲಲಿದೆಯೇ ದೆವ್ವ!?

'ಮಹೇಶ್!' ಅಂತ ಕರೆಯಿತು ದೆವ್ವ. ಸಹಜವಾಗಿ ಹೇಳಿತು. ಧ್ವನಿ ಜೆನ್ನಿಫರಳದ್ದೇ. ೯೧೧ ಸಹಾಯವಾಣಿಗೆ ಫೋನ್ ಮಾಡಿದ್ದೇ ಮಾಡಿದ್ದು ದೆವ್ವದ ಬೇರೇನೂ ಬದಲಾಗದಿದ್ದರೂ ಮೊದಲಿನ ಧ್ವನಿ ಮಾತ್ರ ಮರಳಿ ಬಂದಿದೆ. ಅಷ್ಟರಮಟ್ಟಿಗೆ ದೆವ್ವ ಜೆನ್ನಿಫರಳನ್ನು ಬಿಟ್ಟು ಹೋಗಿದೆ.

ಅವಳು ಕರೆದಿದ್ದು ಕೇಳಿತು. 'ಏನು ಜೆನ್ನಿಫರ್?' ಅಂತ ಕೇಳಲು ಧ್ವನಿ ಹೊರಡಲಿಲ್ಲ.

'ಮತ್ತೊಮ್ಮೆ ೯೧೧ ಗೆ ಫೋನ್ ಮಾಡು ಮಹೇಶ್! immediately! ಈಗೇ ಮಾಡು!' ಅಂತ ಜೆನ್ನಿಫರ್ ದೆವ್ವ ಗಡಿಬಿಡಿ ಆಜ್ಞೆ ಮಾಡಿತು.

ಇದ್ಯಾಕೆ ಮತ್ತೆ ೯೧೧ ಗೆ ಫೋನ್ ಮಾಡು ಅನ್ನುತ್ತಿದ್ದಾಳೆ? ಯಾಕೆ?

ಸುಮ್ಮನೆ ನಿಂತಿದ್ದೆ. ರಾಕಿಂಗ್ ಖುರ್ಚಿ ಮೇಲೆ ಕುಳಿತಿದ್ದ ದೆವ್ವ ಮತ್ತೂ ಜೋರಾಗಿ ಜೀಕಿತು. 'ಅದು ರಾಕಿಂಗ್ ಚೇರ್. ಜೋಕಾಲಿಯಲ್ಲ,' ಅಂತ ಹೇಳಬೇಕು ಅಂತ ವಿಚಾರ ಬಂತು. ಮಾತು ಬರಲಿಲ್ಲ.

ನಾನು ಅದರ ಆಜ್ಞೆ ಪಾಲಿಸಲಿಲ್ಲ ಅಂತ ದೆವ್ವಕ್ಕೆ ಸಿಟ್ಟು ಬಂತೋ ಏನೋ. ರಾಕಿಂಗ್ ಚೇರ್ ಮೇಲೆ ಕೂತು ಜೀಕುತ್ತಿದ್ದ ದೆವ್ವ ಒಮ್ಮೆಲೇ ಛಲಾಂಗ್ ಹೊಡೆಯಿತು. ಮುಂದಿನ ಕ್ಷಣ ನನ್ನ ಎದುರಲ್ಲಿ. ಮುಖದ ಮುಂದೆಯೇ. ಮುಗೀತು ಕಥೆ! ಇದೇ ಫೈನಲ್ ಮೊಮೆಂಟ್ ಇರಬೇಕು. ಅಂತಿಮ ಕ್ಷಣ! ಅಲ್ವಿದಾ! ಖುದಾ ಹಾಫಿಜ್ ! ಸೈತಾನ್ ಹಾಫಿಜ್! ಗುಡ್ ಬೈ! ಹೋಗುತ್ತೇನೆ. ಮುಂದೆ? ಮುಂದೆ ಏನ್ರೀ? ದೆವ್ವದ ಕೈಯಲ್ಲಿ ಸತ್ತವರು ಮತ್ತೇನಾಗುತ್ತಾರೆ? ದೆವ್ವವೇ ಆಗುತ್ತಾರೆ. ಶಿವಾ! ಮುಂದಿನ ಜನ್ಮ ದೆವ್ವದ ಲೈಫ್ ನನಗೆ!

ಆದರೆ ಹಾಗೇನೂ ಆಗಲಿಲ್ಲ. ಎದುರಿಗೆ ನಿಂತ ಜೆನ್ನಿಫರ್ ದೆವ್ವ ನಕ್ಕಿತು. ಬಿದ್ದು ಬಿದ್ದು ನಕ್ಕಿತು. ನಗುತ್ತ ನಗುತ್ತ, ಬಗ್ಗಿ ಬಗ್ಗಿ, ಕೈಗಳನ್ನು ಮೇಲೆ ಕೆಳಗೆ ಝಾಡಿಸಿತು. ಹಾಕಿದ್ದ ರಕ್ತಸಿಕ್ತ ನಿಲುವಂಗಿ ಕೆಳಗೆ ಬಿದ್ದು ಬಿಟ್ಟಿತು.

ಪರಮಾಶ್ಚರ್ಯ! ಈಗ ನೋಡಿದರೆ ಮೊದಲಿನ ಜೆನ್ನಿಫರ್! ಅದೇ ಜೀನ್ಸ್ ಪ್ಯಾಂಟ್, ಅದೇ ಕೆಂಪು ಟಾಪ್, ಅದೇ ಜಾಕೆಟ್. ಅರೇ ಇಸ್ಕಿ!? ಏನಾಗುತ್ತಿದೆ? ಇದೆಂತಹ ಭ್ರಮೆ ಗುರುವೇ!?

ಜೆನ್ನಿಫರ್ ದೆವ್ವ ಮಾತ್ರ ನಗುತ್ತಲೇ ಇದ್ದಳು. ಮುಖ ಮಾತ್ರ ಭೀಕರವಾಗಿಯೇ ಇತ್ತು. ಬಿಚ್ಚಿ ಎಸೆದ ನಿಲುವಂಗಿ ಜೊತೆಗೆ ಆ ಉಗುರುಗಳು ಹೋಗಿಬಿಟ್ಟಿವೆ. ಅಂದರೆ ಆ ಚೂಪನೆಯ ಉಗುರುಗಳು......???

ಜೆನ್ನಿಫರ್ ದೆವ್ವ ತಿರುಗಿದಳು. ನನ್ನ ಕಡೆ ಬೆನ್ನು ಹಾಕಿ ನಿಂತಳು. ಶಿವನೇ, ಈ ದೆವ್ವ ರಿವರ್ಸ್ ಗೇರ್ ಗಿರಾಕಿಯೇ? ಕೊಲ್ಲುವಾಗ ತನ್ನ ಬಲಿಯನ್ನು ನೋಡುವದಿಲ್ಲವೇ?

ಜೆನ್ನಿಫರ್ ದೆವ್ವ ಕೈಗಳನ್ನು ಹಿಂದೆ ತಂದಳು. ನನ್ನ ಕುತ್ತಿಗೆಗೆ ತರಲಿಲ್ಲ. ತನ್ನ ಕುತ್ತಿಗೆಗೆ ತೆಗೆದುಕೊಂಡು ಹೋದಳು. ಕುತ್ತಿಗೆಯ ಹಿಂದೆ ಏನೋ ಮಾಡಿದಳು. ಸರಿಯಾಗಿ ಗೊತ್ತಾಗಲಿಲ್ಲ. ಏನೋ ಎತ್ತಿದಳು. ಎಲ್ಲೋ ಜಿಪ್ಪರ್ ಒಂದನ್ನು 'ಪರ್' ಅಂತ ಎಳೆದ ಶಬ್ದವಾಯಿತು. ಒಂದೇ smooth movement ನಲ್ಲಿ ಆ ಕೈಗಳು ಹಾಕಿದ ಮುಖವಾಡವನ್ನು ಎತ್ತಿಬಿಟ್ಟವು. ಸರಾಕ್! ಅಂತ ಹಿಮ್ಮಡದ ಮೇಲೆ ನನ್ನ ಕಡೆ ತಿರುಗಿದ ದೆವ್ವವನ್ನು ನೋಡಿ ನಾ ಬೆಚ್ಚಿದೆ! ಆ ಮುಖ ನೋಡಿ ನಾ ಬಿಚ್ಚಿ ಬಿದ್ದು ನೆಲಕ್ಕೆ ಕುಸಿದೆ. ತಣ್ಣನೆಯ ನೆಲ ತಾಗಬಾರದ ಜಾಗಕ್ಕೆ ತಾಗಿ ತಂಪುತಂಪಾಗಿ ಫೀಲ್ ಆಯಿತು. ಡೈವ್ ಹೊಡೆದಾಗ ಲುಂಗಿ ಕಳಚಿ ಬಿದ್ದುಹೋಗಿದ್ದು ಆವಾಗ ನೆನಪಾಯಿತು.

ಈಗ ನನ್ನ ಮುಂದೆ ನಿಂತಿದ್ದು ದೆವ್ವವಾಗಿರಲಿಲ್ಲ. ಒರಿಜಿನಲ್ ಜೆನ್ನಿಫರ್! ಕೈಯಲ್ಲಿ ದೆವ್ವದ ಮುಖವಾಡ! ಮುಖದ ಮೇಲೆ ದೊಡ್ಡ ನಗೆ!

'ಜೆನ್ನಿಫರ್.....ಜೆನ್ನಿಫರ್.....ನೀನು.....? ಏನು....? ಇದೆಲ್ಲಾ.... ???' ಅಂತ ತೊದಲಿದೆ. ಅವಳ ಪರಿಚಿತ, ಸ್ನೇಹಮಯಿ ಮುಖವನ್ನು ನೋಡಿದಾಗ ಸತ್ತಿದ್ದ ನನ್ನ ಧ್ವನಿ ಮತ್ತೆ ಹುಟ್ಟಿ ಬಂತು.

ಜೆನ್ನಿಫರ್ ಬಿದ್ದು ಬಿದ್ದು ನಕ್ಕಳು.

'ಮಹೇಶ್, ಎಲ್ಲ ಹೇಳೋಣ, ಮಾತಾಡೋಣ. ಅರ್ಜೆಂಟ್ ಆಗಿ ಎರಡು ಕೆಲಸ  ಮಾಡು. ನಿನ್ನ ಲುಂಗಿ 'ಬುದ್ಧಂ ಶರಣಂ ಬಿಚ್ಚಾಮಿ' ಆಗಿದೆ. ತಾವು ಮೊದಲು ಲುಂಗಿ ಉಟ್ಟುಕೊಳ್ಳಿ. ನಂತರ ಎರಡನೇ ಕೆಲಸ ಹೇಳುತ್ತೇನೆ,' ಅಂತ ಹೇಳಿದಳು ಜೆನ್ನಿಫರ್. ಆಕೆಯ ಕೀಟಲೆ ಮಾಡುವಂತಹ ನಗು ಮಾತ್ರ ನಿರಂತರ.

ಗಡಬಡಾಯಿಸಿ ಲುಂಗಿ ಸುತ್ತಿಕೊಂಡೆ. ಸರಿಯಾಗಿ ಉಟ್ಟುಕೊಳ್ಳಲು ಇನ್ನೂ ನಡುಕ ನಿಂತಿರಲಿಲ್ಲ. ದೆವ್ವದ ರೂಪದ ಧರಿಸಿದಾಕೆ ಈಗ ಮಾತ್ರ ಸರಿಯಾಗಿದ್ದಾಳೆ. ಮತ್ತೆ ಮುಂದಿನ ರೂಪ ಯಾವುದೋ? ಪಿಶಾಚಿ ರೂಪವೋ? ಬ್ರಹ್ಮರಾಕ್ಷಸಿಯ ರೂಪವೋ? ದೇವರೇ ಬಲ್ಲ.

'೯೧೧ ಗೆ ಮತ್ತೊಮ್ಮೆ ಫೋನ್ ಮಾಡು ಮಾರಾಯಾ. ಅವರಿಗೆ ಹೇಳು, 'ಏನೂ ತೊಂದರೆಯಿಲ್ಲ. ಯಾವದೇ ಅಪಾಯವೂ ಇಲ್ಲ. by mistake ಫೋನ್ ಮಾಡಿಬಿಟ್ಟೆ,' ಅಂತ. ಇಲ್ಲವಾದರೆ ಒಂದಿಷ್ಟು ಪೊಲೀಸರು, ಫೈರ್ ಇಂಜಿನ್, ಆಂಬುಲೆನ್ಸ್ ಎಲ್ಲ ಬಂದೇಬಿಡುತ್ತವೆ. ಆಗಲೇ ಹೊರಟುಬಿಟ್ಟಿವೆಯೋ ಏನೋ!?' ಅಂದಳು. ಮತ್ತೆ ಅದೇ ಕಿಲಾಡಿ ನಗು. ಖತರ್ನಾಕ್ ಇದ್ದಾಳೆ. ಜೆನ್ನಿಫರ್ ಆದರೂ ಸರಿ ದೆವ್ವವಾದರೂ ಸರಿ, ಮಹಾ ಕಿಲಾಡಿ.

ಅರೇ ಇಸ್ಕಿ! ಇದೇನು ದೆವ್ವದ ಹೊಸಾ ಸ್ಕೀಮೇ? ೯೧೧ ಕರೆ ಮಾಡಿದ್ದಕ್ಕೆ ಸಹಾಯ ಬರಲಿದೆ ಅಂತ ದೆವ್ವಕ್ಕೆ ಗೊತ್ತಾಗಿದೆ. ಒಮ್ಮೆ ಸಹಾಯಕ್ಕೆ ಪೊಲೀಸರು ಬಂದರೆ ಈ ದೆವ್ವದ ಕಾರ್ನಾಮೆಗಳಿಗೆ ತೊಂದರೆಯಾಗುತ್ತದೆ ಅಂತ ತಿಳಿದು ನನಗೆ ಮತ್ತೊಮ್ಮೆ ೯೧೧ ಗೆ ಫೋನ್ ಮಾಡಿ, 'ಎಲ್ಲ ಸರಿಯಿದೆ. ಏನೂ ತೊಂದರೆಯಿಲ್ಲ. ಸಹಾಯದ ಜರೂರತ್ತಿಲ್ಲ,' ಅಂತ ಹೇಳು ಅಂತ ನನ್ನನ್ನು ಪುಸಲಾಯಿಸುತ್ತಿದೆಯೇ ದೆವ್ವ? ಈ ದೆವ್ವದ ಮಾತು ನಂಬಿ, ನಾ ಮಂಗ್ಯಾ ಆಗಿ, ೯೧೧ ಗೆ ಮತ್ತೆ ಫೋನ್ ಮಾಡಿ, ಅವರನ್ನೂ ಮಂಗ್ಯಾ ಮಾಡಿಬಿಟ್ಟರೆ ಮತ್ತೆ ದೆವ್ವದ ರೂಪಕ್ಕೆ ಬದಲಾವಣೆಗೊಂಡು ರಾತ್ರಿಯಿಡೀ ನನ್ನನ್ನು ಸಣ್ಣಗೆ ಕೀಮಾ ಮಾಡಿಕೊಂಡು ಆಹುತಿ ತೆಗೆದುಕೊಳ್ಳುವ ಖತರ್ನಾಕ್ ಸಂಚು ಮಾಡಿದೆಯೇ ಈ ದೆವ್ವ? ಕೆಲವು ದೆವ್ವಗಳು ಇಚ್ಛಾಧಾರಿ ಇರುತ್ತವೆ ಅಂತ ಕೇಳಿದ್ದೆ. ಬೇಕಾದಾಗ ಬೇಕಾದ ರೂಪ ಧರಿಸುತ್ತವೆ. ಇದೂ ಕೂಡ ಇಚ್ಛಾಧಾರಿ ದೆವ್ವವೇ? ಈ ಇಚ್ಛಾಧಾರಿ ದೆವ್ವದ ಮನೆ ಹಾಳಾಗ. ಈ ಇಚ್ಛಾಧಾರಿ ದೆವ್ವ ಈ ಕಚ್ಛಾಧಾರಿ ಮನುಷ್ಯನನ್ನೇಕೆ ಕಾಡುತ್ತಿದೆ? ಈಗ ಮೈಮೇಲೆ ಲುಂಗಿ ಬಂತು ಬಿಡಿ. ಆಗೊಂದಿಷ್ಟು ಹೊತ್ತು ಲುಂಗಿ ಉದುರಿಸಿಕೊಂಡು ಫುಲ್ ಕಚ್ಛಾಧಾರಿ ಪೈಲ್ವಾನ್ ಆಗಿ ನಿಂತಿದ್ದೆನಲ್ಲ. ಎಲ್ಲ ಈ ದೆವ್ವದ ಕೃಪೆ.

ಅಷ್ಟರಲ್ಲಿ ಯಾರೋ ಮನೆಯ ಬಾಗಿಲನ್ನು ಅದ್ಯಾವ ರೀತಿಯಲ್ಲಿ ಗುದ್ದಿದರು ಅಂದರೆ ಬಾಗಿಲು ಮುರಿದು ಬೀಳದಿದ್ದದ್ದು ದೊಡ್ಡ ಮಾತು. ಹಿಂದಿನಿಂದಲೇ ಕೇಳಿಬಂತು ದೊಡ್ಡ ಆವಾಜ್!

'ಪೋಲೀಸ್! ಬಾಗಿಲು ತೆಗೆಯಿರಿ. ಇಲ್ಲವಾದರೆ ಬಾಗಿಲು ಮುರಿದುಕೊಂಡು ಒಳಗೆ ಬರಬೇಕಾಗುತ್ತದೆ! ಪೋಲೀಸ್!' ಅಂತ ಹೊರಗಿನಿಂದ ಆವಾಜ್ ಹಾಕಿದರು.

ನಗುವದನ್ನು ನಿಲ್ಲಿಸಿದ ಜೆನ್ನಿಫರ್ ತಾನೇ ಹೋಗಿ ಬಾಗಿಲು ತೆಗೆದಳು. ಎದುರಿಗೆ ಗನ್ ಹಿರಿದು ನಿಂತಿದ್ದ ನಾಲ್ಕು ದೈತ್ಯಾಕಾರದ ಅಮೇರಿಕನ್ ಪೊಲೀಸರು.

ನಾನು ಮಾತ್ರ 'ಹ್ಯಾಂ!' ಅಂತ ನೋಡುತ್ತಲೇ ಇದ್ದೆ.

ಆ ಪೋಲೀಸರ ತಂಡದ ನಾಯಕನಿಗೆ ಜೆನ್ನಿಫರಳ ಪರಿಚಯ ಇತ್ತು ಅಂತ ಕಾಣುತ್ತದೆ. ಸಣ್ಣ ಊರು. ಲೋಕಲ್ ಪೋಲೀಸ್. ಹಾಗಾಗಿ ಪರಿಚಯ ಇದ್ದರೂ ಇರಬಹುದು.

'ಹಾಯ್ ಜೆನ್ನಿಫರ್! ನೀನು ಇಲ್ಲಿ? ಅದು ಹೇಗೆ? ಏನಾಯಿತು? ಇಲ್ಲಿಂದಲೇ ೯೧೧ ಗೆ ಕರೆ ಬಂತು. ಮಾಡಿದವರು ಏನೂ ಮಾತಾಡಲಿಲ್ಲ. 'ಹಿನ್ನೆಲೆಯಲ್ಲಿ ಏನೋ ವಿಚಿತ್ರ ಶಬ್ದ ಕೇಳಿಬಂತು. ಯಾರೋ ವಿಕೃತವಾಗಿ ನಕ್ಕ ಹಾಗಿತ್ತು,' ಅಂತ ೯೧೧ ಆಪರೇಟರ್ ಹೇಳಿದ. ತಕ್ಷಣ ಓಡಿ ಬಂದೆವು. ಕೆಳಗಿನ ಬಾಗಿಲಿನ ಮಾಸ್ಟರ್ ಕೋಡ್ ಇರುತ್ತದೆ ನಮ್ಮ ಹತ್ತಿರ. ಹಾಗಾಗಿ ಮೇಲೆ ಬರಲು ಏನೂ ತೊಂದರೆಯಾಗಲಿಲ್ಲ. Is anything wrong here? ಇಲ್ಲಿ ಮಿಸ್ಟರ್ ಹೆಗೇಡ್ ಯಾರು?' ಅಂತ ಕೇಳಿದ ಆ ಪೋಲೀಸ್. ಕೈಯಲ್ಲಿನ ಗನ್ ಕವಚದ ಒಳಗೆ ಸೇರಿತ್ತು.

ಹಾಂ!? ಜೆನ್ನಿಫರ್ ದೆವ್ವ ಈ ಪೋಲೀಸಪ್ಪನನ್ನೂ ಮಂಗ್ಯಾ ಮಾಡಿಬಿಟ್ಟಿತೇ? ಹಾಗಿದ್ದರೆ ಇಲ್ಲಿಗೆ ಫುಲ್ ಶಿವಾಯ ನಮಃ! ಈ ದೆವ್ವಕ್ಕೆ ಸ್ಪೆಷಲ್ ವಶೀಕರಣ ಶಕ್ತಿ ಇರಬೇಕು. ಹಾಗಾಗಿ ಪೊಲೀಸರೂ ಮಂಗ್ಯಾ ಆಗಿಹೋಗುತ್ತಾರೆ. ಏನು ಮಾಡಲಿ ಈಗ? 'ಯೋ ಪೋಲಿಸ್! ಇದು ದೆವ್ವ ಕಣಪ್ಪಾ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು. ಇಲ್ಲವಾದರೆ ನೀನು ಹೋದ ಮರುಕ್ಷಣ ಮತ್ತೆ ದೆವ್ವದ ಆಕಾರ ತಾಳಿ ನನ್ನನ್ನು ಕೊಲ್ಲಲಿದೆ ಈ ಜೆನ್ನಿಫರ್ ದೆವ್ವ!' ಅಂತ ಪೊಲೀಸರಿಗೆ ಹೇಳಲೇ? ಮಾತು ಹೊರಡಲಿಲ್ಲ.

'ಏ, ಬಾಬ್! ನಿನಗೆ ಎಲ್ಲ ಹೇಳುತ್ತೇನೆ ಬಾಬ್! ಬಾಬ್!' ಅಂತ ಕಷ್ಟಪಟ್ಟು ಹೇಳಿದಳು ಜೆನ್ನಿಫರ್. ಅವಳಿಗೆ ಮಾತಾಡಲೂ ಆಗುತ್ತಿಲ್ಲ. ಅಷ್ಟು ನಗೆ ಬರುತ್ತಿದೆ. ಹೊಟ್ಟೆ ಒತ್ತಿಕೊಂಡು ಬಿದ್ದು ಬಿದ್ದು ನಗುತ್ತಿದ್ದಾಳೆ.

'ಜೆನ್ನಿಫರ್, ಏನಾಯಿತು? ಯಾಕಿಷ್ಟು ನಗು? ಈ ಮನೆಯಲ್ಲಿ ಏನೋ ದೊಡ್ಡ ಲಫಡಾ ಆಗಿದೆ ಅಂತ ಬಂದರೆ ಇಲ್ಲಿ ನೀನು. ಅದು ದೊಡ್ಡ ಆಶ್ಚರ್ಯ. ಮತ್ತೆ ಏನೂ ಆಗಿಲ್ಲ ಅಂದೆ. ಎಲ್ಲ ಸರಿಯಿದೆ ಅಂದೆ. ಏನಿದೆಲ್ಲಾ ಜೆನ್ನಿಫರ್!?' ಅಂತ ಕೇಳಿದ ಬಾಬ್ ಅನ್ನುವ ಆ ಪೋಲೀಸ್.

'ಬಾಬ್, ಇವತ್ತು ಹ್ಯಾಲೋವೀನ್ (Halloween) ತಾನೇ? ಕೆಲಸ ಮುಗಿಸಿ ಮನೆಗೆ ಹೊರಟಿದ್ದೆ. ಇಲ್ಲಿ ನಿಂತಿರುವ ಮಿಸ್ಟರ್ ಹೆಗೇಡ್ ಅಲ್ಲಲ್ಲ ಮಿಸ್ಟರ್ ಹೆಗಡೆ ನನ್ನ ಸಹೋದ್ಯೋಗಿ ಅಲ್ಲಿ ಸುಪರ್ ಮಾರ್ಕೆಟ್ಟಿನಲ್ಲಿ ಸಿಕ್ಕ. ಮನೆ ತನಕ ಡ್ರಾಪ್ ಕೊಟ್ಟೆ. ಹೋಗುವ ಮುಂಚೆ ಪಾಪದ ಹುಡುಗನ ಕಾಲೆಳೆದು, ಸ್ವಲ್ಪ ತಮಾಷೆ ಮಾಡಿ ಹೋಗೋಣ ಅಂದುಕೊಂಡೆ. ಅದೇ ಈ ಲಫಡಾಕ್ಕೆ ಕಾರಣ,' ಅಂತ ಹೇಳಿದ ಜೆನ್ನಿಫರ್ ಮತ್ತೆ ಮತ್ತೆ ನಕ್ಕಳು. ಉಳ್ಳಾಡಿ ಉಳ್ಳಾಡಿ ನಗಬೇಕು ಅಂತ ಬಹಳ ಅನ್ನಿಸುತ್ತಿರಬೇಕು ಆಕೆಗೆ. ಅಷ್ಟೇ ಉಳ್ಳಾಡಿ ನಗಲಿಲ್ಲ.

ಇದೆಲ್ಲ ತಮಾಷೆಯೇ? ಹ್ಯಾಂ? ಅಥವಾ ತಮಾಷೆ ಅಂತ ಹೇಳುವದೂ ಸಹ ದೆವ್ವದ ಒಂದು ಸ್ಕೀಮೇ? ಯಾರಿಗೆ ಗೊತ್ತು ದೆವ್ವ ಏನೇನು ಸ್ಕೀಮ್ ಹಾಕಿದೆಯೋ!?

'ಹ್ಯಾಲೋವೀನ್ ಸಂಜೆ ದೆವ್ವದ ವೇಷ ಹಾಕುವದು ಪದ್ಧತಿ. ಅದು ನಿನಗೂ ಗೊತ್ತು ಬಾಬ್. ಸಂಜೆ ಮನೆಗೆ ಹೋಗಿ ದೆವ್ವದ ವೇಷ ಹಾಕೋಣ ಅಂತ ಕಾಸ್ಟ್ಯೂಮ್ ಖರೀದಿ ಮಾಡಿದ್ದೆ. ಜಾಸ್ತಿ ಏನಿಲ್ಲ. ಒಂದು ನಿಲುವಂಗಿ ಮತ್ತು ಒಂದು ಮುಖವಾಡ. ಇಲ್ಲಿ ಕೂತಿದ್ದೆ. ಟೀ ಮಾಡಲು ಇವನು ಆಕಡೆ ಹೋಗಿದ್ದ. ಆವಾಗ ಸುಮ್ಮನೆ ಹಾಕಿಕೊಂಡೆ. ಭೀಕರ ರೂಪಕ್ಕೆ ಬದಲಾದೆ. ಈ ನಮ್ಮ ದೋಸ್ತ ಬೇಗನೆ ಕಂಡುಹಿಡಿಯಬಹದು ಅಂದುಕೊಂಡರೆ ತುಂಬಾ ಹೆದರಿಕೊಂಡುಬಿಟ್ಟ. ಹ್ಯಾಲೋವೀನ್ ಸಂಜೆ ಮನೆ ಮನೆ ಸುತ್ತಿ, ಚಾಕಲೇಟ್, ಮಿಠಾಯಿ ಸಂಗ್ರಹಿಸುವ ಚಿಕ್ಕ ಮಕ್ಕಳು ಕೂಡ ಆವಾಗಲೇ ಬಂದು ಬಾಗಿಲು ತಟ್ಟಿದರು. ಅವಕ್ಕೆ ಚಾಕಲೇಟ್, ಕ್ಯಾಂಡೀಸ್ ಕೊಟ್ಟು ಕಳಿಸಿದೆ. As usual ಅವೂ ದೆವ್ವದ ವೇಷ ಹಾಕಿಕೊಂಡು ಬಂದಿದ್ದವು. ಅದನ್ನು ನೋಡಿದ ಮೇಲಂತೂ ಇವನು ಫುಲ್ ಘಾಬರಿಯಾಗಿಬಿಟ್ಟ. ದೊಡ್ಡ ಸಂಕಷ್ಟದಲ್ಲಿದ್ದೇನೆ ಅಂತ ತಿಳಿದುಕೊಂಡು ೯೧೧ ಒತ್ತಿಬಿಟ್ಟ. ಈಗ ಮಾತ್ರ ಹೇಳುತ್ತಿದ್ದೆ, '೯೧೧ ಗೆ ಮತ್ತೊಮ್ಮೆ ಫೋನ್ ಮಾಡಿ ಹೇಳಪ್ಪಾ,' ಅಂತ. ಅಷ್ಟರಲ್ಲಿ ನೀನು ಬಂದೆ ಬಾಬ್. ಇಷ್ಟೇ ಆಗಿದ್ದು!' ಅಂತ ಫುಲ್ ವಿವರಣೆ ಕೊಟ್ಟ ಜೆನ್ನಿಫರ್ ಬಿದ್ದು ಬಿದ್ದು ನಕ್ಕಳು.

ಪೋಲೀಸ್ ನಾಯಕ ಬಾಬ್ ದೇಶಾವರಿ ನಗೆ ನಕ್ಕ. ಅವನ sense of humor ಬೇರೆನೇ ಇರಬೇಕು. ಮತ್ತೆ ಡ್ಯೂಟಿ ಮೇಲೆ ಇದ್ದ. ವಾಪಸ್ ಹೊರಟ. ಆದರೆ ಇಲ್ಲಿನ ಪೋಲೀಸರಂತೆ ಇವನೂ ಶುದ್ಧ ವೃತ್ತಿಪರ.

'ಮಿಸ್ಟರ್ ಹೆಗೇಡ್!' ಅಂತ ಗೌರವದಿಂದ ಮಾತಾಡಿಸಿದ.

ಅಯ್ಯೋ! ಅದು ಹೆಗಡೆ ಅಂತ ಮಾರಾಯ. ಕುಮಟಾ ತಾಲೂಕಿನ ಒಂದು ಹಳ್ಳಿ. ನಮ್ಮ ಮೂಲ ವಂಶಜರು ಅಲ್ಲಿಯವರು ಅಂತ ನಮಗೆಲ್ಲ ಹೆಗಡೆ ಅಂತ ಹೆಸರು. ಅದು ಬಿಟ್ಟು ಅದೇನು ಹೆಗೇಡ್ ಹೆಗೇಡ್ ಅಂತಿಯೋ!? ಅಂತ ಹೇಳೋಣ ಅನ್ನಿಸಿತು. ಪಾಪ ಅವನಾದರೂ ಏನು ಮಾಡಿಯಾನು? ನಮ್ಮ ಅಡ್ಡೆಸರಿನ ಸ್ಪೆಲ್ಲಿಂಗ್ Hegade. ಅದು ಇದ್ದಂತೆ ಹೇಳಿದ್ದಾನೆ.

ನಾನು ಮಾತಾಡಲಿಲ್ಲ. ದಂಗು ಬಡಿದಿತ್ತು. ಇನ್ನೂ ದೆವ್ವ ದರ್ಶನದ ಅಘಾತದಿಂದ ಹೊರಗೆ ಬಂದಿರಲಿಲ್ಲ. ಒಂದು ತರಹದ trans ಸ್ಥಿತಿಯಲ್ಲಿದ್ದೆ.

ಈಗ ಪೋಲೀಸಪ್ಪ ನಡೆದು ನನ್ನ ಕಡೆ ಬಂದ. ಮುಖದ ಮುಂದೆಯೇ ನಿಂತ. ಮುಖದ ಮುಂದೆ ಚಿಟಿಕೆ ಹೊಡೆದು 'ಹಲೋ!' ಅನ್ನಲಿಲ್ಲ ಅಷ್ಟೇ. ಮತ್ತೊಮ್ಮೆ  'ಮಿಸ್ಟರ್ ಹೆಗೇಡ್!' ಅಂದ.

'ಯಸ್ ಸರ್!' ಅಂತ ತೊದಲಿದೆ. ನಾವು ಕೇವಲ ಭಾರತದ ಯಮಕಿಂಕರರಂತಹ ಪೋಲೀಸರನ್ನು ಮಾತ್ರ ನೋಡಿದವರು. ಬರೇ ನೋಡಿದ್ದು ಅಷ್ಟೇ. ಅವರೊಂದಿಗೆ ಡೀಲ್ ಮಾಡಿಲ್ಲ. ಯಾವಾಗಲೋ ಒಮ್ಮೆ ತಡೆದು ನಿಲ್ಲಿಸಿದಾಗ ಲೈಸೆನ್ಸ್ ತೋರಿಸಿ, ಅದಕ್ಕಿಂತ ಹೆಚ್ಚು ಗೌರವ ತೋರಿಸಿ, ವಾಪಸ್ ಅವರ ಅಸಡ್ಡೆಯನ್ನು ಸ್ವೀಕರಿಸಿ ಬಂದಿದ್ದು ನೆನಪಾಯಿತು. ಇಲ್ಲಿಯ ಪೊಲೀಸರು ಹೇಗೋ ಏನೋ. ಅದಕ್ಕೇ 'ಸರ್!' ಅಂದುಬಿಟ್ಟೆ. ಬಾಬ್ ಎಂಬ ಅಮೇರಿಕನ್ ಪೋಲೀಸಪ್ಪ ನಕ್ಕ. ಇಲ್ಲೆಲ್ಲಾ ತದ್ವಿರುದ್ಧ. ಪೊಲೀಸರು ಜನರಿಗೆ ವಿಪರೀತ ಗೌರವ ಕೊಡುತ್ತಾರೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜನ ಪೋಲೀಸರನ್ನು ಬೆಂಡೆತ್ತುತ್ತಾರೆ. ಕೇಸ್ ಜಡಿಯುತ್ತಾರೆ. ವಿಚಿತ್ರ ದೇಶ.

'ಸರ್! ಜೆನ್ನಿಫರ್ ಮೇಡಂ ಎಲ್ಲ ಹೇಳಿದರು. ಅವರು ಏನೋ ತಮಾಷೆ ಮಾಡಿದರಂತೆ. ಅದು ನಿಮಗೆ ಅರ್ಥವಾಗಿಲ್ಲ. ಇವತ್ತು ಹ್ಯಾಲೋವೀನ್. ದೆವ್ವಗಳ ವೇಷ ಹಾಕಿಕೊಂಡು ಸಂಭ್ರಮಿಸುವ ಹಬ್ಬ. ಹೊರದೇಶದವರಾದ ನಿಮಗೆ ಗೊತ್ತಿರಲಿಕ್ಕಿಲ್ಲ. ಅದಕ್ಕೇ ಗಾಬರಿಯಾಗಿದ್ದೀರಿ. ಈಗ ನಿಮಗೆ ಎಲ್ಲ ಅರ್ಥವಾಗಿರಬಹುದು ಅಂತ ಭಾವಿಸುತ್ತೇನೆ. ೯೧೧ ಗೆ ಫೋನ್ ಬಂದಿದ್ದು ನಿಮ್ಮ ಇದೇ ಮನೆಯಿಂದ. ನಿಮ್ಮ ಹೆಸರಲ್ಲೇ ಫೋನ್ ಇದೆ. ಮನೆಯಲ್ಲಿ ಇರುವವರು ನೀವೊಬ್ಬರೇ ಅಂತ ಕೂಡ ದಾಖಲೆ ಇದೆ. ಹಾಗಾಗಿ ನೀವು ಎಲ್ಲ ಸರಿಯಿದೆ ಅಂತ ಹೇಳಿದರೆ ನಾವು ಕೇಸ್ ಕ್ಲೋಸ್ ಮಾಡಿಕೊಂಡು ಹೋಗಬಹುದು. ಇಲ್ಲಿ ಒಂದು ಸಹಿ ಮಾಡಿ. ಏನಾದರೂ ಶಂಕೆ, ಸಂಶಯ ಇದ್ದರೆ ಹೇಳಿ ಸರ್. ನಿಮಗೆ ಫುಲ್ ಸುರಕ್ಷೆ, ಸಮಾಧಾನ ಸಿಗಬೇಕು. ಅದೇ ನಮ್ಮ ಪೋಲೀಸ್ ತಂಡದ ಗುರಿ!' ಅಂದುಬಿಟ್ಟ ಬಾಬ್.

ಸಹಿ ಹಾಕಿಬಿಡಲೇ? ಜೆನ್ನಿಫರ್ ಏನೋ ವಿವರಣೆ ಕೊಟ್ಟಿದ್ದಾಳೆ. ಹ್ಯಾಲೋವೀನ್ ಬಗ್ಗೆ ಏನೋ ಅಲ್ಲಿಲ್ಲಿ ಅಷ್ಟಿಷ್ಟು ಓದಿದ್ದೆ. ವಿಚಿತ್ರ ಹಬ್ಬ ಅನ್ನಿಸಿತ್ತು. ಇದು ಮೊದಲನೇ ಸಲ ನೋಡಿದ್ದು. ಬಂದಿದ್ದೇ ಈಗ ನಾಲ್ಕು ತಿಂಗಳ ಹಿಂದೆ ಅಷ್ಟೇ. ಸಹಿ ಹಾಕಿಕೊಟ್ಟೆ ಅಂದರೆ ಮುಗಿಯಿತು. ಕೇಸ್ ಮುಚ್ಚಿ ಹೊರಡುತ್ತಾನೆ ಪೋಲೀಸ್. ಅವರು ಹೋದ ನಂತರ ಜೆನ್ನಿಫರ್ ಮತ್ತೆ ದೆವ್ವವಾಗಿಬಿಟ್ಟರೇ!? Then what to do? ಏನು ಮಾಡಲಿ ಈಗ? ಸಹಿ ಹಾಕಲೋ ಬೇಡವೋ? ದೊಡ್ಡ ಗೊಂದಲ.

ಜೆನ್ನಿಫರಳಿಗೆ ನನ್ನ ಗೊಂದಲ ಅರ್ಥವಾಯಿತು ಅಂತ ಕಾಣುತ್ತದೆ. ನಮ್ಮಂತಹ ಅದೆಷ್ಟು ಮಂದಿ ಹೊಸದಾಗಿ ಬಂದ fresh of the boat ಯಬಡರೊಂದಿಗೆ ಆಕೆ ಹೆಣಗಾಡಿದ್ದಾಳೋ ಏನೋ? ಎಷ್ಟು ಮಂದಿಯನ್ನು ಹೀಗೆಯೇ ಮಂಗ್ಯಾ ಮಾಡಿದ್ದಾಳೋ ಏನೋ!?

'ಯೋ, ಮಹೇಶ್! ನಾ ಜೆನ್ನಿಫರ್ ಮಾರಾಯಾ. ದೆವ್ವ ಅಲ್ಲ. ಇಲ್ಲಿ ನೋಡು.... ಇಲ್ಲಿ ನೋಡು.... ' ಅನ್ನುತ್ತ ಏನೋ ಕಾಗದ ತೆಗೆದು ತಂದಳು. 'ನೋಡು, ನೋಡು, ಈಗ ಸ್ವಲ್ಪ ಸಮಯದ ಹಿಂದೆ ಅದೇ ಸೂಪರ್ ಮಾರ್ಕೆಟ್ಟಿನಲ್ಲಿ ಈ ದೆವ್ವದ ಕಾಸ್ಟ್ಯೂಮ್, ಮುಖವಾಡ ಎಲ್ಲ ಖರೀದಿ ಮಾಡಿದ ರಸೀದಿ. ಸಂಜೆ ಮನೆಯಲ್ಲಿ ಹಾಕಲು ಬೇಕು ಅಂತ ಖರೀದಿ ಮಾಡಿದೆ. ಅಲ್ಲಿ ನೀನು ಕಂಡೆ. ನಿನ್ನ ಮನೆಗೆ ಬಂದೆವು. ಈಗ ಮಾತ್ರ ಹೊಸದಾಗಿ ನಮ್ಮ ದೇಶಕ್ಕೆ ಬಂದಿರುವೆ. ನಿನಗೆ ಹ್ಯಾಲೋವೀನ್ ಬಗ್ಗೆ ಪರಿಚಯ ಮಾಡಿಕೊಡೋಣ ಅಂತ ವಿಚಾರ ಬಂತು. ಅದಕ್ಕೇ ಒಂದು ಸಣ್ಣ ಟ್ರಿಕ್ ಮಾಡಿದೆ ಮಾರಾಯಾ,' ಅಂದವಳೇ ಬಿದ್ದೂ ಬಿದ್ದೂ ನಕ್ಕಳು. ಪೋಲಿಸ್ ಆಫೀಸರ್ ಬಾಬ್ ಕೂಡ ನಕ್ಕ. ಸುಮಾರು ಆರೂವರೆ ಅಡಿ ಎತ್ತರ, ನೂರೈವತ್ತು ಕೇಜಿಯ ಧಡಿಯ ಪೋಲೀಸ್. ನೆಲ ಅಲುಗಾಡಿತು.

ಜೆನ್ನಿಫರ್ ತೋರಿಸಿದ ರಸೀದಿ ಪಸೀದಿ ಎಲ್ಲ ನೋಡಿದ ಮೇಲೆ ಅನುಮಾನ ದೂರವಾಯಿತು. ಆದರೂ ಎಲ್ಲೋ ಒಂದು ಚೂರು ಅಳುಕು ಇತ್ತು. ಜೀವನ ಪೂರ್ತಿ ದೆವ್ವದ ಕಥೆ ಓದಿದರೆ ಮತ್ತೇನಾಗಬೇಕು?

'ಸರಿ. ಎಲ್ಲ ಓಕೆ,' ಅಂತ ಸಹಿ ಮಾಡಿಕೊಟ್ಟೆ. ಥ್ಯಾಂಕ್ಸ್ ಹೇಳಿದ ಪೋಲೀಸಪ್ಪ ಅವನ ತಂಡ ಕರೆದುಕೊಂಡು ಹೊರಟ. ಅವರ ಸಂಪ್ರದಾಯದಂತೆ ಜೆನ್ನಿಫರಳನ್ನು ಅಪ್ಪಿ, ಕೆನ್ನೆ ಮೇಲೊಂದು ಸೈಡ್ ಕಿಸ್ ಹೊಡೆದು, ಎಲ್ಲರಿಗೂ 'Have a great evening. Happy Halloween!' ಅಂದು ತನ್ನ ತಂಡದೊಂದಿಗೆ ವಾಪಸ್ ಹೋದ.

ಪೋಲಿಸ್ ಹೋದ ತಕ್ಷಣ ತಾಪಡ್ತೋಪ್ ಬಾಗಿಲು ಹಾಕಿಬಿಟ್ಟಳು ಜೆನ್ನಿಫರ್. ನಾನು ಘಾಬರಿಯಾದೆ. ಮುಚ್ಚಿದ ಬಾಗಿಲಿಗೆ ಬೆನ್ನು ಹಾಕಿ ನಿಂತ ಜೆನ್ನಿಫರ್ ಮಾತಾಡಲಿಲ್ಲ. ಮುಖ ಫುಲ್ ನಿರ್ಭಾವುಕ. ಜೆನ್ನಿಫರ್ ಮತ್ತೆ ದೆವ್ವವಾಗಿ ಬದಲಾಗುವವಳಿದ್ದಾಳೆಯೇ!? ಮತ್ತೆ ೯೧೧ ಒತ್ತಲೇ? ಎಲ್ಲಿಂದ ಒತ್ತಲಿ? 'ಸಹಿ ಮಾಡು,' ಅಂತ ಪೋಲಿಸ್ ಅಂದಾಗ ಫೋನ್ ಎಸೆದೆ. ಅದು ಹೋಗಿ ರಾಕಿಂಗ್ ಚೇರ್ ಮೇಲೆ ಕೂತಿದೆ. ಜೆನ್ನಿಫರ್ ಕಡೆ ನೋಡಿದೆ. ಹಾಗೇ ನಿಂತಿದ್ದಳು. ಮಾತಿಲ್ಲ, ಕತೆಯಿಲ್ಲ. ಮತ್ತೆ ದೆವ್ವವಾಗಲು ಎಷ್ಟೊತ್ತು ಬೇಕು ಈಕೆಗೆ?

ಘೊಳ್! ಅಂತ ನಕ್ಕಳು ಜೆನ್ನಿಫರ್. ಅವಳ ಸಹಜ, ತುಂಟ, ತುಂಬು ನಗೆ.

'ಥೋ ಮಾರಾಯಾ! ಟೆನ್ಶನ್ ತೊಗೋಬೇಡ. ನಿನ್ನ ತಲೆಯಲ್ಲಿ ಏನು ಓಡುತ್ತಿದೆ ಅಂತ ಊಹಿಸಬಲ್ಲೆ. 'ಮತ್ತೆ ಎಲ್ಲಿಯಾದರೂ ಈ ಜೆನ್ನಿಫರ್ ದೆವ್ವವಾಗಿಬಿಡುವಳೇ?!' ಅಂತ ತಾನೇ ನಿನ್ನ ಆತಂಕ? ಇಲ್ಲ ಮಾರಾಯಾ. ಮಜಾಕ್ ಎಲ್ಲ ಮುಗಿಯಿತು. ನಾ ಹೊರಟೆ ಇನ್ನು,' ಅಂತ ನಗುತ್ತ ಎದ್ದು ಬಂದಳು. ತನ್ನ ದೆವ್ವದ ಕಾಸ್ಟ್ಯೂಮ್ ಮುಖವಾಡ ಎಲ್ಲ ಜೋಡಿಸಿ ಚೀಲದಲ್ಲಿ ತುಂಬಿಕೊಂಡು ಹೊರಟಳು. ಆಗ ಒಂದು ವಿಷಯ ನೆನಪಾಯಿತು. ಚಹಾ ಮಾಡಿದ್ದೆ. ಆದರೆ ಚಹಾ ಕೊಡುವ ಮೊದಲೇ ದೆವ್ವದ ದರ್ಶನವಾಗಿ ಚಹಾ ಸಮಾರಾಧನೆ ನಿಂತುಹೋಗಿತ್ತು.

'ಜೆನ್ನಿಫರ್, ಚಹಾ? ಮತ್ತೊಮ್ಮೆ ಮಾಡಿಬಿಡುತ್ತೇನೆ. ಜಸ್ಟ್ ಎರಡು ನಿಮಿಷ ಸಾಕು. ಪ್ಲೀಸ್. ಕೂತ್ಗೋ,' ಅಂದೆ.

'ಥ್ಯಾಂಕ್ಸ್. ಚಹಾ ಬೇಡ. ಮತ್ತೊಮ್ಮೆ ಬರ್ತೀನಿ. ಆಗಲೇ ಲೇಟ್ ಆಗಿದೆ. ಮನೆಯಲ್ಲಿ ನನ್ನ ಗಂಡ ಮೈಕ್ ಬೇರೆ ಇಲ್ಲ. ಹ್ಯಾಲೋವೀನ್ ಹಬ್ಬದ ಅಂಗವಾಗಿ trick or treat ಅಂದರೆ ಚಾಕಲೇಟ್, ಕ್ಯಾಂಡಿ ಕೇಳಲು ಗಲ್ಲಿಯ ಚಿಕ್ಕ ಮಕ್ಕಳು ಬರುತ್ತವೆ. ಹಾಗಾಗಿ ನಾ ಹೊರಟೆ,' ಅಂದಳು.

ಅರೇ! ಅಂಗಡಿಯಿಂದ ಸಾಮಾನು ತಂದುಕೊಡಲು ಸಹಾಯ ಮಾಡಿದ್ದಾಳೆ. ಖತರ್ನಾಕ್ ಮಜಾಕ್ ಮಾಡಿ ಹ್ಯಾಲೋವೀನ್ ಹಬ್ಬದ ಪರಿಚಯ ಮಾಡಿಕೊಟ್ಟಿದ್ದಾಳೆ. ಅದೂ ಎಂತಹ ಪರಿಚಯ ಅಂತೀರಿ? ಜನ್ಮದಲ್ಲಿ ಮರೆಯಲಿಕ್ಕೆ ಸಾಧ್ಯವಿಲ್ಲ. ಅಂತವಳಿಗೆ ಒಂದು ಕಪ್ ಚಹಾ ಕೂಡ ಕೊಟ್ಟು ಕಳಿಸಲಿಲ್ಲ ಅಂದರೆ ಹೇಗೆ? ಅತಿಥಿ ದೆವ್ವೋ ಭವ! ಅತಿಥಿಯಾಗಿ ಬಂದು ದೆವ್ವವಾಗಿ ಈಗ ಮತ್ತೆ ದೇವತೆಯಾಗಿದ್ದಾಳೆ ಜೆನ್ನಿಫರ್.

'ಏ, ಒಂದು ಕಪ್ ಚಹಾ ಅಷ್ಟೇ, ಜೆನ್ನಿಫರ್. ಪ್ಲೀಸ್. ಎರಡೇ ನಿಮಿಷ,' ಅಂದು ಅವಳ ಉತ್ತರಕ್ಕೂ ಕಾಯದೇ ಅಡಿಗೆಮನೆ ಹೊಕ್ಕೆ. ಜೆನ್ನಿಫರ್ ಹೋಗಿ ಮತ್ತೆ ರಾಕಿಂಗ್ ಚೇರ್ ಮೇಲೆ ಕೂತಳು ಅಂತ ಕಾಣುತ್ತದೆ. ಟೀವಿ ಆನ್ ಅದ ಶಬ್ದ ಕೇಳಿತು.

ಎರಡೇ ನಿಮಿಷದಲ್ಲಿ ಫ್ರೆಶ್ ಮಸಾಲಾ ಚಹಾ ರೆಡಿ. ಹಳೆ ಚಹಾವನ್ನು ಸಿಂಕಲ್ಲಿ ಚೆಲ್ಲಿ, ಹೊಸ ಚಹಾ ತುಂಬಿಸಿಕೊಂಡು ಮತ್ತೆ ಬಂದೆ. ಹಳದಿರಾಮನ ಚೂಡಾ ಅಂತೂ ಇತ್ತು.

'ಜೆನ್ನಿಫರ್, ಚಹಾ ರೆಡಿ!' ಅನ್ನುತ್ತ ಟ್ರೇ ಹಿಡಿದುಕೊಂಡು ಜೆನ್ನಿಫರ್ ಕುಳಿತಿದ್ದ ರಾಕಿಂಗ್ ಚೇರ್ ಕಡೆ ಬಂದೆ. ಜೆನ್ನಿಫರ್ ತಲೆ ತಿರುಗಿಸಿದಳು. ಮತ್ತೊಮ್ಮೆ ಭೀಕರ ಚೀತ್ಕಾರ ಆಟೋಮ್ಯಾಟಿಕ್ ಆಗಿ ಹೊರಬಿತ್ತು. ಜೆನ್ನಿಫರ್ ಮತ್ತೊಮ್ಮೆ ದೆವ್ವವಾಗಿ ಬದಲಾಗಿಬಿಟ್ಟಿದ್ದಳು! ಈ ಸಲ ಬೇರೆಯೇ ಮುಖವಾಡ. ನಿಲುವಂಗಿ ಇರಲಿಲ್ಲ ಅಷ್ಟೇ. ಮೈ ಗಾಡ್! ಏನಾಗುತ್ತಿದೆ ಇಲ್ಲಿ?

ಮುಂದಿನ ಕ್ಷಣದಲ್ಲಿ ಆ ದೆವ್ವದ ಮುಖವಾಡ ಕಿತ್ತು ಬಂತು. ಹಿಂದೆಯೇ ಒರಿಜಿನಲ್ ಜೆನ್ನಿಫರಳ ಘೊಳ್ ಅನ್ನುವ ನಗೆ.

'ಏನಿದು ಜೆನ್ನಿಫರ್!? ನನಗೆ ಒಮ್ಮೆ ಹಾರ್ಟ್ ಅಟ್ಯಾಕ್ ಆಗಿಬಿಟ್ಟಿತ್ತು. ಸಿಕ್ಕಾಪಟ್ಟೆ ಖರಾಬಾಗಿದೆ!' ಅಂದೆ. ಪುಣ್ಯಕ್ಕೆ ಬೇಗನೆ ಮುಖವಾಡ ತೆಗೆದಿದ್ದಳು. ಇಲ್ಲವಾದರೆ ಚಹಾ ಕೆಳಗೆ ಬಿದ್ದು ಹರೋಹರವಾಗಿಬಿಡುತ್ತಿತ್ತು.

'ಎರಡು ದೆವ್ವದ ಮುಖವಾಡ ಕೊಂಡಿದ್ದೆ. ರಸೀದಿ ಕೊಟ್ಟಿದ್ದೆ. ನೋಡಲಿಲ್ಲವೇ ನೀನು? ನೀನು ನೋಡಿರಬಹುದು, ಹೇಗೂ ನಿನಗೆ ಗೊತ್ತಾಗಿರಬಹುದು, ಈ ಸಾರೆ ಹೆದರಲಿಕ್ಕಿಲ್ಲ ಅಂತ ಭಾವಿಸಿ ಮತ್ತೊಂದು ಮುಖವಾಡವನ್ನೂ ಟ್ರೈ ಮಾಡಿದೆ. ಮತ್ತೆ ಹೆದರಿಬಿಟ್ಟೆಯಲ್ಲ ಮಾರಾಯಾ? ಏನು ಸಿಕ್ಕಾಪಟ್ಟೆ ದೆವ್ವದ ಕಥೆ ಓದುತ್ತೀಯೋ ಹೇಗೆ? By the way, ಮಹೇಶ್, ಒಂದು ಮಾತು ಹೇಳು.... ' ಅಂದ ಜೆನ್ನಿಫರ್ ಚಹಾ ಹೀರಿದಳು. ಹಳದಿರಾಮನ ಚೂಡಾ ಪ್ಲೇಟ್ ಮುಂದೆ ಮಾಡಿದೆ. ಬೇಡವೆಂದಳು.

'ಏನು ಜೆನ್ನಿಫರ್?' ಅಂತ ಕೇಳಿದೆ.

'ಈ ಎರಡು ಮುಖವಾಡಗಳಲ್ಲಿ ಯಾವದು ಹೆಚ್ಚು ಭಯಾನಕವಾಗಿದೆ? ಯಾವದನ್ನು ಹಾಕಿಕೊಂಡರೆ ಜನರಿಗೆ ಹೆಚ್ಚು  ಭಯವಾಗಬಹುದು? ಹ್ಯಾಲೋವೀನ್ ದಿನ ಹೆಚ್ಚು ಭಯಾನಕವಾದಷ್ಟೂ ಜನರಿಗೆ ಖುಷಿ. ಗೊತ್ತೇ?' ಅಂದುಬಿಟ್ಟಳು.

ಶಿವನೇ ಶಂಭುಲಿಂಗ! ಹೆಚ್ಚು ಭಯಾನಕವಾದಷ್ಟೂ ಜನರಿಗೆ ಇಷ್ಟವಂತೆ. ಖುಷಿಯಂತೆ! ವಿಚಿತ್ರ ದೇಶ, ವಿಚಿತ್ರ ಜನ.

'ಜೆನ್ನಿಫರ್ ಒಂದು ಕೆಲಸ ಮಾಡು. ಒಂದು ಮುಖವಾಡ ಮುಂದೆ ಹಾಕಿಕೋ. ಮತ್ತೊಂದನ್ನ ಹಿಂದೆ ಹಾಕಿಕೋ. ಸಿಕ್ಕಾಪಟ್ಟೆ ಖರಾಬಾಗಿರುತ್ತದೆ. ದೆವ್ವದ ಕಥೆಗಳಲ್ಲಿ ಬರುತ್ತದೆ ನೋಡು. ದೆವ್ವಗಳ ಪಾದಗಳು ಉಲ್ಟಾ ಇರುತ್ತವೆ. ಮುಖ ಹಿಂದೆ ಮುಂದೆ ಆಗಿರುತ್ತದೆ ಅಂತೆಲ್ಲ. ಹಾಗೆ,' ಅಂತ ಏನೋ ಒಂದು ಉದ್ರಿ ಉಪದೇಶ ಮಾಡಿದೆ.

'ಎಕ್ಸಲೆಂಟ್ ಐಡಿಯಾ! ಟ್ರೈ ಮಾಡಿ ನೋಡಬಹುದು!' ಅನ್ನುತ್ತ ಜೆನ್ನಿಫರ್ ಎದ್ದಳು. ಚಹಾ ಮುಗಿದಿತ್ತು. ಕಪ್ ಇಸಿದುಕೊಂಡೆ.

'ಹೇ, ಮಹೇಶ್, ಮುಂದಿನ ಶನಿವಾರ ವಾರ ಫ್ರೀ ಇಟ್ಟುಕೋ. ನನ್ನ ಗಂಡ ಮೈಕನ ಬರ್ತ್ ಡೇ. ಸಂಜೆ ನಮ್ಮ ಮನೆಗೆ ಬಾ. ಇನ್ನೂ ನಾಲ್ಕಾರು ಜನರನ್ನು ಕರೆದಿದ್ದೇವೆ. ಪ್ಯೂರ್ ಇಂಡಿಯನ್ ಊಟ ತರಿಸುತ್ತೇವೆ. ಗೊತ್ತಲ್ಲ ನಿನಗೆ ನಮಗೆ ಇಂಡಿಯನ್ ಫುಡ್ ಅಂದರೆ ಎಷ್ಟು ಇಷ್ಟ ಅಂತ? ಒಂದೆರೆಡು ಬಾಲಿವುಡ್ ಸಿನೆಮಾ ಕೂಡ ಇರುತ್ತದೆ. It's gonna be an awesome Indian night. ಪ್ಲೀಸ್ ಬಾ,' ಅಂತ ಆಹ್ವಾನ ಕೊಟ್ಟ ಜೆನ್ನಿಫರ್ ಎದ್ದು ಹೊರಟಳು.

ಎಷ್ಟು ಒಳ್ಳೆಯವಳು ಈಕೆ! ಎಷ್ಟು ಒಳ್ಳೆಯವನು ಈಕೆಯ ಪತಿ ಮೈಕ್! ಎಲ್ಲಿಂದಲೋ ಬಂದು ಈ ವಿದೇಶದಲ್ಲಿ ಪಕ್ಕಾ ಪರದೇಶಿ ದರವೇಶಿಗಳಾಗಿರುವ ನಮ್ಮ ಮೇಲೆ ಅದೇನು ಮಮತೆ, ಪ್ರೀತಿ! ಎದೆ ತುಂಬಿ ಬಂತು. ಇವರೆಲ್ಲ ಯಾವ ಜನ್ಮದಲ್ಲಿ ಯಾವ ಬಂಧುಗಳಾಗಿದ್ದರೋ ಅಂತ ವಿಚಾರ ಮಾಡುತ್ತ ಹೃದಯ ತುಂಬಿ ಬಂತು.

'ಖಂಡಿತ ಜೆನ್ನಿಫರ್. ಬಂದೇ ಬರುತ್ತೇನೆ. Thank you very much!' ಅಂದೆ.

ಬಂಗಾರದ ಬಣ್ಣದ ತನ್ನ ಬಾಬ್ ಮಾಡಿದ ಕೂದಲನ್ನು ಸರಾಕ್ ಅಂತ ಸರಿಸಿದ ಜೆನ್ನಿಫರ್ ಹೊರಟಳು. ಗುಡ್ ಬೈ, ಗುಡ್ ನೈಟ್ ಎಲ್ಲ ಹೇಳಾಯಿತು. ಬಾಗಿಲು ಹಾಕಿಕೊಂಡು ಬಂದೆ.

'ಹುಸ್!' ಅಂತ ರಾಕಿಂಗ್ ಚೇರ್ ಮೇಲೆ ಕೂತೆ. ಎರಡು ಘಂಟೆಗಳಲ್ಲಿ ಏನೆಲ್ಲಾ ಆಗಿಹೋಯಿತು ಶಿವನೇ!

'ಧಡ್! ಧಡ್! ಧಡ್!' ಯಾರೋ ಬಾಗಿಲು ಬಡಿದರು.

ಎದ್ದು ಹೋಗಿ 'ಯಾರೂ?' ಅಂದೆ. ಬಾಗಿಲ ಕಿಂಡಿಯಲ್ಲಿ ಹಣಿಕಿ ನೋಡಿದೆ.

'trick or treat!' ಅಂತ ಮಕ್ಕಳ ಧ್ವನಿ ಕೇಳಿಸಿತು. ನೋಡಿದರೆ ಮತ್ತೆ ದೆವ್ವ ಸ್ವರೂಪಿ ಮಕ್ಕಳು. ಹ್ಯಾಲೋವೀನ್ ವೇಷ ಹಾಕಿಕೊಂಡು ಬಂದಿವೆ. ಪೀಡೆಗಳು!

ಬಾಗಿಲು ತೆಗೆದು ನಿಂತೆ. 'ಏನು?' ಅನ್ನುವಂತೆ ನೋಡಿದೆ.

'trick or treat???' ಅಂತ ಮತ್ತೆ ಉಲಿದವು. ಚಾಕಲೇಟ್, ಟಾಫಿ, ಕ್ಯಾಂಡಿ ಸಂಗ್ರಹಿಸಿದ್ದ ಬುಟ್ಟಿಯನ್ನು ಎದುರಿಗೆ ಹಿಡಿದವು. ಅದರಲ್ಲಿ ನಾನೂ ಕೂಡ ಕ್ಯಾಂಡಿ, ಚಾಕಲೇಟ್ ಹಾಕಬೇಕು ಅನ್ನುವ ಲುಕ್ ಕೊಟ್ಟವು.

ಅಯ್ಯೋ! ಎಲ್ಲಿಯ ಕ್ಯಾಂಡಿ ಹಾಕೋಣ? ಎಲ್ಲಿಯ ಚಾಕಲೇಟ್ ಹಾಕೋಣ? ನಮ್ಮ ಮನೆಯಲ್ಲಿ ಏನೂ ಇಲ್ಲ ಮಾರಾಯ. ಬೇಕಾದರೆ ಮಾಣಿಕ್ ಚಂದ ಗುಟ್ಕಾ ಚೀಟಿಯಿದೆ. ಬಾಬಾ ಜರ್ದಾ ಇದೆ. ಚಾಲಿ ಅಡಿಕೆಯಿದೆ. ಹಳದಿರಾಮನ ಚೂಡಾ ಇದೆ. ಅದ್ಯಾವದೂ ಈ ಮಕ್ಕಳಿಗೆ ಉಪಯೋಗವಿಲ್ಲ.

ಆ ಮಕ್ಕಳು ನಾನು ಏನು ಮಾಡಲಿದ್ದೇನೆ? ಯಾವ ಚಾಕಲೇಟ್, ಕ್ಯಾಂಡಿ ಕೊಡಲಿದ್ದೇನೆ? ಅಂತ ನೋಡುತ್ತಾ ನಿಂತಿದ್ದವು. ಆಗ ನಾನು ಅನಾಹುತ ಕೆಲಸವೊಂದನ್ನು ಮಾಡಿಬಿಟ್ಟೆ.

ದೆವ್ವದ ಮುಖವಾಡ, ವೇಷ ಇಲ್ಲದಿದ್ದರೇನಾಯಿತು? ದೆವ್ವಕ್ಕಿಂತ ಖರಾಬ್ ಕೆಲಸ ಮಾಡಿಬಿಟ್ಟೆ.

ಗಹಗಹಿಸಿ ನಕ್ಕೆ. ದೆವ್ವದ ಹಾಗೆ ನಕ್ಕೆ. ಇದು ಹ್ಯಾಲೋವೀನ್ ದೆವ್ವದ ನಗೆ ಅಂತ ಆ ಮಕ್ಕಳು ತಿಳಿದುಕೊಂಡು ತಾವೂ ನಕ್ಕರು. ಮುಂದಿನದ್ದನ್ನು ಮಾತ್ರ ಅವರು ಊಹಿಸಿಯೇ ಇರಲಿಲ್ಲ.

ಆ ಇಬ್ಬರು ಮಕ್ಕಳ ಚಾಕಲೇಟ್ ಬುಟ್ಟಿಗೇ ಕೈಹಾಕಿಬಿಟ್ಟೆ. ಆಗ ಮಕ್ಕಳು ಬೆದರಿದವು. ಇಬ್ಬರ ಬುಟ್ಟಿಯಿಂದಲೂ ಒಂದೊಂದು ಮುಷ್ಠಿ ಚಾಕಲೇಟ್, ಕ್ಯಾಂಡಿಗಳನ್ನು ಗೆಬರಿಕೊಂಡುಬಿಟ್ಟೆ. ಮತ್ತೆ ಅಟ್ಟಹಾಸ ಮಾಡಿದೆ.

ಈಗ ಮಕ್ಕಳು ನಿಜವಾಗಿ ಹೆದರಿದವು. 'ಇದ್ಯಾವದೋ ವಿಚಿತ್ರ ಪ್ರಾಣಿ. ನಮಗೆ ಚಾಕಲೇಟ್, ಕ್ಯಾಂಡಿ ಕೊಡುವ ಬದಲಾಗಿ ನಮ್ಮಿಂದಲೇ ಸುಲಿಗೆ ಮಾಡುತ್ತಿದೆ. ಇದೇ ನಿಜವಾದ ದೆವ್ವವಿರಬೇಕು!' ಅಂತ ವಿಚಾರ ಮಾಡಿರಬೇಕು. ಬೆಚ್ಚಿ ಬಿದ್ದಿರಬೇಕು.

'ಹೋ! ಹೋ! Run!!' ಅಂತ ಘಾಬರಿ ಬಿದ್ದು ಕೂಗುತ್ತ ಅಲ್ಲಿಂದ ಓಡಿದವು ಆ ಚಿಕ್ಕ ಪೀಡೆಗಳು. ಜೀವನ ಪೂರ್ತಿ ಈ ಹ್ಯಾಲೋವೀನ್ ಮರೆಯುವದಿಲ್ಲ ಅವು. ಅಂತಹ ಟ್ರೀಟ್ಮೆಂಟ್ ಕೊಟ್ಟು ಕಳಿಸಿದ್ದೆ. ಹ್ಯಾಲೋವೀನ್ ದಿನ ಮಕ್ಕಳ ಬುಟ್ಟಿಯಿಂದ ಕ್ಯಾಂಡಿ ಎಬ್ಬಿಸಿದರೆ ಮತ್ತೇನು? ದೆವ್ವದಾಟವೇ ಇರಬೇಕು ತಾನೇ?

ಬಾಗಿಲು ಹಾಕಿಕೊಂಡು ಬಂದು ಕೂತೆ. ರಾಕಿಂಗ್ ಚೇರ್ ಮೇಲೆ ಕೂತು ಹಾಯಾಗಿ ರಾಕಿಂಗ್ ಮಾಡುತ್ತ ಆಚೀಚೆ ಕೈಯಾಡಿಸಿದೆ. ಕೈಗೆ ಏನೋ ಸಿಕ್ಕಿತು. ಎತ್ತಿಕೊಂಡು ನೋಡಿದರೆ ಮತ್ತೊಂದು ದೆವ್ವದ ಮುಖವಾಡ! ಹಾಂ! ಈ ದೆವ್ವದ ಮುಖವಾಡ ಇಲ್ಲಿ ಹೇಗೆ ಬಂತು? ಮತ್ತೆ ಇದು ಬೇರೆಯೇ ಮುಖವಾಡ. ಜೆನ್ನಿಫರ್ ಹಾಕಿದ್ದ ಎರಡು ಮುಖವಾಡಗಳಿಗಿಂತ ಭಿನ್ನವಾಗಿದೆ. ಮತ್ತೂ ಖರಾಬಾಗಿದೆ! ಕೈಯಲ್ಲಿ ಹಾವು ಹಿಡಿದವನಂತೆ ಆಕಡೆ ಬಿಸಾಡಿದೆ. ಏನೋ ಒಂದು ಕಾಗದ ಕೆಳಗೆ ಬಿತ್ತು. ಆಶ್ಚರ್ಯವೆನಿಸಿತು.

ನೋಡಿದರೆ ಒಂದು ಗ್ರೀಟಿಂಗ್ ಕಾರ್ಡ್. ಹ್ಯಾಲೋವೀನ್ ಗ್ರೀಟಿಂಗ್ ಕಾರ್ಡ್. ಒಳಗಿನ ಬರವಣಿಗೆ ನೋಡಿ ಹೃದಯ ತುಂಬಿ ಬಂತು.

'ಡಿಯರ್ ಮಹೇಶ್,

ಹ್ಯಾಪಿ ಹ್ಯಾಲೋವೀನ್!

ಈ ಮುಖವಾಡ ನಿನಗೆ ಅಂತ ಕೊಂಡುಕೊಂಡೆ. ಇಷ್ಟವಾಯಿತೇ?

ಹಾಕಿಕೊಂಡು ಸಕತ್ ಎಂಜಾಯ್ ಮಾಡು.

ನಿನ್ನ ಪ್ರೀತಿಯ ಸ್ನೇಹಿತೆ,

-- ಜೆನ್ನಿಫರ್'

ಈ ಜೆನ್ನಿಫರ್ ಎಷ್ಟು ಒಳ್ಳೆಯವಳು! ತಾನು ಸೂಪರ್ ಮಾರ್ಕೆಟ್ಟಿನಲ್ಲಿ ಹ್ಯಾಲೋವೀನ್ ಮುಖವಾಡ, ಕಾಸ್ಟ್ಯೂಮ್ ಎಲ್ಲ ಕೊಂಡಾಗ ನನ್ನ ಸಲುವಾಗಿಯೂ ಒಂದು ಮುಖವಾಡ ಕೊಂಡಿದ್ದಾಳೆ. ಅಷ್ಟೇ ಅಲ್ಲ ಒಂದು ಹ್ಯಾಲೋವೀನ್ ಗ್ರೀಟಿಂಗ್ ಕಾರ್ಡ್ ಕೂಡ ಕೊಂಡಿದ್ದಾಳೆ. ಯಾವಾಗ ಅದರ ಮೇಲೆ ಅಷ್ಟು ಆತ್ಮೀಯವಾಗಿ ಬರೆದಳೋ ಗೊತ್ತಿಲ್ಲ. It is so nice of you, Jennifer. Thank you.

ಮುಖವಾಡ ಹಾಕಿಕೊಂಡು ಕನ್ನಡಿಯಲ್ಲಿ ನೋಡಿಕೊಂಡೆ. ಚೀತ್ಕಾರವೊಂದು ಹುಟ್ಟಿ ಅಲ್ಲೇ ಶಮನವಾಯಿತು. ಕಾಣುತ್ತಿರುವದು ನನ್ನದೇ ಮುಖ ಅಂತ ನೆನಪಾಯಿತು. ಇಲ್ಲವೆಂದರೆ ಆ ಮುಖವಾಡ ಅಷ್ಟು ಖರಾಬಾಗಿತ್ತು.

ಜೆನ್ನಿಫರ್ ನನಗೆಂದು ತಂದು ಕೊಟ್ಟಿದ್ದ ಹ್ಯಾಲೋವೀನ್ ಮುಖವಾಡ!


ಹ್ಯಾಲೋವೀನ್ ಹಬ್ಬಕ್ಕೆ ಮುಖವಾಡವೂ ಸಿಕ್ಕಿತು. ಇನ್ನು ಯಾರಾದರೂ ಚಿಳ್ಳೆ ಪಿಳ್ಳೆ ಬರಲಿ ನೋಡೋಣ. ಮುಖವಾಡ ಹಾಕಿ ಬರೋಬ್ಬರಿ ಹೆದರಿಸುತ್ತೇನೆ. ಕೊಡಲು ಚಾಕಲೇಟ್? ಅದು ಇಲ್ಲ. ನಾಸ್ತಿ.

'ಮುಖವಾಡ ಕೊಟ್ಟು ಹೋದ ಜೆನ್ನಿಫರ್ ಒಂದು ಚೀಲದಲ್ಲಿ ಒಂದಿಷ್ಟು ಚಾಕಲೇಟ್, ಕ್ಯಾಂಡಿ ಸಹಿತ ಕೊಟ್ಟು ಹೋಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?' ಅಂತ ಯೋಚಿಸಿತು ಮನಸ್ಸು. ಲೋಭಿ ಮನಸ್ಸು.

ಆಗ ಮತ್ತೆ ಯಾರೋ ಬಾಗಿಲು ಬಡಿದರು. ಮತ್ತೆ ಅದೇ ರಾಗ. Trick or treat?

ಮತ್ತೆ ಆ ಮಕ್ಕಳ ಬುಟ್ಟಿಯಿಂದಲೇ ಚಾಕಲೇಟ್ ಹಾರಿಸಲು ರೆಡಿಯಾದೆ. ಈ ಬಾರಿ ಸ್ಪೆಷಲ್ ಎಫೆಕ್ಟ್ ಗೆ ಜೆನ್ನಿಫರ್ ಕೊಟ್ಟ ಮುಖವಾಡ ಕೂಡ ಇತ್ತು.

***
 
ಸಲಹೆ ಸೂಚನೆಗಳಿಗೆ ಸದಾ ಸ್ವಾಗತ. ಕಥೆಯಲ್ಲಿನ horror element ನ್ನು ಹೇಗೆ ಹೆಚ್ಚಿಸಬಹುದು? ಐಡಿಯಾಗಳು ಇದ್ದರೆ ತಿಳಿಸಿ. ಅಡ್ವಾನ್ಸ್ ಧನ್ಯವಾದ

***

ಹಿಂದೆ ಬರೆದಿದ್ದ ದೆವ್ವದ ಕಥೆ 'ಲಿಂಗವ್ವನ ದೆವ್ವ' ಓದಿ ಮೆಚ್ಚಿದ್ದ ನಮ್ಮ ಅಣ್ಣಾಜಿ ಅವರು, 'ಹ್ಯಾಲೋವೀನ್ ಹಬ್ಬಕ್ಕೆ ಸರಿಯಾಗಿ ಮತ್ತೊಂದು ದೆವ್ವದ ಕಥೆ ಬರೆಯಬೇಕು ನೋಡು!' ಅಂದಿದ್ದರು. ಒಂದು ವಿಷಯ ಕೊಟ್ಟು, ಈ ತಾರೀಕಿಗೆ ಸರಿಯಾಗಿ ಒಂದು ಲೇಖನ ತಯಾರು ಮಾಡಬೇಕು ಅಂತ ಖಡಕ್ ಕಂಡೀಶನ್ ಬಿತ್ತು ಅಂತಾದರೆ ನಮ್ಮ ಪೆನ್ನು ಮುಂದೆ ಓಡುವದೇ ಇಲ್ಲ. ಯಾವ ದೈವದ ಅಥವಾ ದೆವ್ವದ ಅನುಗ್ರಹವಾಯಿತೋ ಗೊತ್ತಿಲ್ಲ. ವೇಳೆಗೆ ಸರಿಯಾಗಿ ಒಂದು ದೆವ್ವದ ಕಥೆ ಮನಸ್ಸಿನಲ್ಲಿ ಮೂಡಿಬಂತು. ಬರೆದೆ. :)

***

ವಿ. ಸೂ: ಇದೊಂದು ಕಾಲ್ಪನಿಕ ಕಥೆ. ಅಮೇರಿಕಾಗೆ ಹೋದ ಹೊಸತಿನಲ್ಲಿ ಆದ ನನ್ನ ಕೆಲವು ಸ್ವಂತ ಅನುಭವಗಳನ್ನು ಕಥೆಗೆ ಹೊಂದುವಂತೆ ಬಳಸಿದ್ದೇನೆ. ದೆವ್ವ, ಗಿವ್ವ ಎಲ್ಲ ಕಲ್ಪನೆ ಮಾತ್ರ.