Saturday, June 30, 2012

ಕೊಳಲು ಬಾರಿಸಹೋದ ಸಾಬರಿಗೆ ಅವರತ್ತಿ ಕಸಬರಿಗೆಯಿಂದೇಕೆ ಬಾರಿಸಿದಳು?

ನಮ್ಮ ಖಾಸ್ ದೋಸ್ತ ಕರೀಂ ಸಾಬರು ಹಾಸ್ಪಿಟಲ್ ನ್ಯಾಗ ಅಡ್ಮಿಟ್ ಆಗ್ಯಾರ್ ಅಂತ ಸುದ್ದಿ ಬಂದಿದ್ದ ತಡ, ಎದ್ದು ಬಿದ್ದು ಓಡಿದೆ.

ಸಾಬ್ರ ಹಾಲತ್ ಖರಾಬ್ ಇತ್ತ. ಮೈಕೈಗೆಲ್ಲಾ ಬ್ಯಾಂಡೇಜ್ ಸುತ್ತಿ ಒಳ್ಳೆ ಇಜಿಪ್ಟ್ ಮಮ್ಮಿ ಮಾಡಿದಾಂಗ ಮಾಡಿ, ಒಂದ ಕಾಲ್ಗೆ ಟ್ರಾಕ್ಶನ್ ಬ್ಯಾರೆ ಹಾಕಿ, ಸಾಬರು ವಿಶಾಲ ಕೋನದ ಶೇಪ್ ನ್ಯಾಗ ವಿಷ್ಣು ಗತೆ ಪೋಸ್ ಕೊಟ್ಟ ಮಲ್ಕೊಂಡಿದ್ರು.

ಸಾಬ್ರಾ....ಏನಾತ್ರಿ ? ಯಾಕೋ ಯಾರೋ ಮಸ್ತ ನಾದಿ ಬಿಟ್ಟಂಗ ಅದ? ಯಾರಿಗೆ ಏನ ಮಾಡಲಿಕ್ಕೆ ಹೋಗಿದ್ರಿ?....ಅಂದೆ.

ನಮ್ಮ ಅತ್ತಿ ಜಾನ್....ಅಂದು ನೋವಿನಿಂದ ಮುಲುಗಿದ ಕರೀಂ.

ಅತ್ತಿ ಅಂದ್ರ? ನಿಮ್ಮ ಹೆಂಡ್ತಿ ಅವ್ವ ಏನು? ಅವರ್ಯಾಕ್ ನಿಮಗ ಜಜ್ಜಿದ್ರು?....ಅಂತ ಕೇಳಿದೆ.

ನೀವು ಹೇಳಿದ ರಾಧಾ ಕೃಷ್ಣ ಸರಸ ಸಲ್ಲಾಪದ ಕಥಿ ಹೇಳಿದೆ ನೋಡ್ರಿ ಸಾಬ್.....ಹಾಕ್ಕೊಂಡ ಅಕಿ, ಅಕಿ ತಮ್ಮಾ ಕಲ್ಲೂ ಮಾಮಾ, ಕಲ್ಲೂ ಮಾಮಿ ಎಲ್ಲ ಕೂಡಿ....ಬೇಶರಂ ಕಹೀಂಕೆ....ಬೇರೆ  ಹೆಂಗಸು ಮಂದಿ ಜೊತೆ ಹಿಂಗೆ ಮಾತಾಡ್ತಿ ಅಂತ ಬೈದು, ಚೀರಿ......ಕೊಡಬಾರದ ಜಾಗದಲ್ಲಿ ಎಲ್ಲ, ಕೊಡಬಾರದ ರೀತಿಯಲ್ಲಿ ಕೊಟ್ಟು ಕೊಟ್ಟು, ನಮ್ಮ ಹಾಲತ್ ಹಿಂಗೆ ಆಗಿ ಹೋಯ್ತು ಸಾಬ್....ಅಂತ ಕಣ್ಣೀರ್ ಹಾಕಿದ ನಮ್ಮ ದೋಸ್ತ ಕರೀಂ ಭಾಯಿ.

ರಾಧಾ ಕೃಷ್ಣ ಸರಸ ಸಲ್ಲಾಪ...ನಾ ಹೇಳಿದ ಕಥಿ..ಅದನ್ನ ಇವ ಹೋಗಿ ಹೇಳ್ಯಾನ್...ಅದಕ್ಕ ಇವಂಗ ಈ ರೀತಿ ಯಾಕ್ ಬಾರ್ಸಿದರು.....ಭಾಳ ಏನೋ involved ಇದೆ ಅಂತ ಅನ್ನಿಸ್ತು.

ಫ್ಲಾಶ್ ಬ್ಯಾಕ್ ಗೆ ಹೋದೆ.

ಅವತ್ತ....ಸ್ವಲ್ಪ ದಿವಸದ ಹಿಂದೆ...ಕರೀಂ ಸಿಕ್ಕಾಗ....

ಸಾಬ್....ನಮ್ಮದು ಸರಗಂ ದು ಭಾಳ್ ಪ್ರಾಬ್ಲಮ್ ಆಗಿದೆ ಸಾಬ್....ಅಂದಿದ್ದು ನೆನಪಿಗೆ ಬಂತು.

ಯಾರು ಸರಗಮ್?...ಅಂತ ಕೇಳಿದೆ.

ಅವಳೇ ಸಾಬ್....ನಮ್ಮದು ಬೇಗಂ ಇಲ್ಲಾ....ಅಕಿದು ಛೋಟಿ ಬೆಹೆನ್....ನಮದೂಕಿ ಸಾಲಿ ಸಾಹಿಬಾ....ಅಂತ ಅವನ ನಾದಿನಿ ಬಗ್ಗೆ ಹೇಳಿದ.

ನಾದಿನಿ......ಸಾಬ್ರು ನಾದಿಸಿಕೊಳ್ಳುವದಕ್ಕೆ  ಕಾರಣೀಭೂತಳಾದಲೇ ....ಹೇಗೆ?...ಅಂತ ಡೌಟ್ ಬಂತು.

ಹಾಂ....ಅಕಿ....ಮೈತುಂಬಾ ಸೊಕ್ಕು ತುಂಬಿಕೊಂಡು ಸದಾ ತಾನು, ತನಗೆ, ತನ್ನದು ಅನ್ನೋ ರೀತಿ ಬಿಹೇವ್ ಮಾಡಿ ನಿಮ್ಮ ಮನಸ್ಸಿಗೆ ನೋವ ಮಾಡ್ತಾ ಇದ್ದಾಕಿ.....ಅಕಿ ಏನು ಮಾಡಿದಳು?.....ಅಂತ ಕೇಳಿದೆ.

ಸಾಬ್ರು ಸ್ವಲ್ಪ ದಿವಸದ ಹಿಂದೆ ಸಿಕ್ಕಾಗ್ ಎಲ್ಲ ಹೇಳಿದ್ರು.

ನೋಡ್ರಿ...ಸಾಬ್...ನಮ್ಮ ಸಾಲಿ ಇಲ್ಲಾ ಕ್ಯಾ....?ಭಾಳ್ ಬೇಶರಂ ಮತ್ತು ಬಕ್ತಮೀಜ್ ಅದೇ ಸಾಬ್....ಯಾವಾಗಲೂ ಹೇಳ್ತದೆ....ನೀವು ಓನ್ಲಿ ಅಕ್ಕಾ ಜಾನ್ ಗೆ attention ಕೊಡ್ತೀರಿ....ನಾವು ನಿಮ್ಮ ಸಾಲಿ....ನಮಗೆ ಏನೂ attention ಕೊಡುದೇ ಇಲ್ಲಾ....ಜೀಜಾಜಿ ನಾವು ಕ್ಯಾ ಚಂದಾ ಇಲ್ಲ ಕ್ಯಾ....? ಸಾಲಿ ಆಧಿ ಗರವಾಲಿ ಹೋತಿ ...ಅಂತಾ ತಪ್ಪು ತಪ್ಪು ಸಿಗ್ನಲ್ ಕೊಟ್ಟು ನಮಗೆ ಕನಫೂಸ್ ಮಾಡ್ತಿತ್ತು ಸಾಬ್......ಅಂತ ಮಾತ್ ನಿಲ್ಲಿಸಿದ ಕರೀಂ.

ನೋಡಿ ಸಾಬ್....ನಾವ್ ಸ್ವಲ್ಪ ನಿಮ್ದೂಕಿ ರಾಮಚಂದ್ರಾ ಇದ್ದಂಗೆ?..ಅಂದ ಕರೀಂ.

ಯಾವ್ ರಾಮಚಂದ್ರರಿ ಸಾಬರ....? ಕಾಯಿಪಲ್ಲೆ ಅಂಗಡಿ ಅವ ಏನು? ಅವ ಯಾಕ್ ಬಂದನರಿ ಇಲ್ಲೇ?....ಅಂತ ಅಡ್ಡ ಬಾಯಿ ಹಾಕಿದೆ.

ಕಾಯಿಪಲ್ಲೆ ಅಂಗಡಿ ಅಲ್ಲ ರಾಮಚಂದ್ರನೂ ಅಲ್ಲ....ಮುಟ್ಟನ್ ಅಂಗಡಿ ಮೆಹಬೂಬ್ ನೂ ಅಲ್ಲ....ಮುಚಗೊಂಡು ಪೂರ್ತಿ ಕೇಳ್ತೀರಿ ಕ್ಯಾ?...ಅಂತ ಮೈಲ್ಡ್ ಆಗಿ ಡೋಸ್ ಕೊಟ್ಟ.

ನೋಡಿ...ಸಾಬ್...ನಾವು ಶಾದಿ ಆಗಿದ್ದು ಬೇಗಂ ಜೊತಿ...ಸಾಲಿ ಜೊತಿ ನಮಗೆ ಏನು ಲೇನಾ ದೇನಾ ಸಾಬ್....? ಅಕ್ಕನ್ನ ಮದ್ವಿ ಆದ್ರೆ ತಂಗಿ ಫ್ರೀ ಅಂತ ಸ್ಕೀಮ್ ಐತೆ ಕ್ಯಾ? ಇದ್ದರೂ ಅದು ಗಲತ್ ನೋಡಿ...ಅಂತಾದ್ರಲ್ಲಿ ಈ selfish ಸಾಲಿ ಸಾಹಿಬಾ ನಮಗೆ ತ್ರಾಸ್ ಕೊಟ್ಟು ಕೊಟ್ಟು ಪರೆಷಾನ್ ಮಾಡ್ತಿತ್ತು ಸಾಬ್.....ಅಂದ ಕರೀಂ

ಏನಂತ ನಿಮ್ಮ ಹೆಂಡ್ತಿ ತಂಗಿ ಪ್ರಾಬ್ಲೆಮ್ ಸಾಬ್ರಾ?....ಯಾಕೋ ಇವ ಗಿರಕಿ ಹೊಡಿಲಿಕತ್ತಾನ್ ಅನ್ನಿಸ್ತು.

ನೋಡಿ ಸಾಬ್...ನಾನು ಏನೋ ಅಕಿಗೆ ವಟ್ಟೆ attention ಕೊಡೂದೇ ಇಲ್ಲ ಅಂತೆ...ಯಾವಾಗಲೂ ಅಕಿನ್ನ ignore ಮಾಡ್ತೀನಿ ಅಂತೆ....ಅಕೀದು ಕಂಪ್ಲೇಂಟ್ ಸಾಬ್....ಸಾಲೀಗೆ ಹೆಚ್ಚು  attention ಕೊಟ್ಟರೆ ಬೀವಿ ನಾರಾಜ್ ಆಗೋದಿಲ್ಲ ಕ್ಯಾ ಸಾಬ್?....ಅಂತ ಹೇಳಿಕೊಂಡ ಕರೀಂ.

ಓಹೋ....ಹಿಂಗ ಅದ ನಿಮ ಪ್ರಾಬ್ಲೆಮ್....? ಅಂತ ಟೈಮ್ ಪ್ಲೀಜ್ ತೊಗೊಂಡು ವಿಚಾರಕ್ಕೆ ನಿಂತೆ.

ಸಾಬ್ರಾ...ನಿಮ್ಮ ನಾದಿನಿ ಸರಗಂ selfish ಇದ್ದಾಳ ಅಂತೀರಿ...ಅಕಿಗೆ ನೀವು ನಮ್ಮ ಕೃಷ್ಣ ರಾಧಾಂಗಾ ಹೇಳಿದಂಗಾ ಯಾಕ್ ತಿಳಿಸಿ ಹೇಳಬಾರದು.....? ಅಂತ ಎಲ್ಲೊ ಓದಿದ ಒಂದು ಒಳ್ಳೆ ನೀತಿ ಕಥೆ  ಹೇಳೋಣ ಅಂತ ಮಾಡಿದೆ.

ಸಾಬ್....ಕೃಷ್ಣ ಅಂತೀರಿ....ನಿಮ್ಮ ಕೃಷ್ಣ ಅವರಿಗೆ 16,000 ಮಂದಿ ಬೇಗಂ....ನೀವು ನಮ್ಮ ಸಾಲೀನೂ ಶಾದಿ ಮಾಡ್ಕೋ ಅಂತ ಇಲ್ಲಾ ತಾನೇ?....ಅಂತ concern express ಮಾಡಿದ.

ಇಲ್ಲಪಾ....ಒಂದ ನೀತಿ ಕಥಿ...ಇದನ್ನ ಬೇಕಾದ್ರ ನೀ ನಿಮ್ಮ ಸಾಲಿ ಸರಗಂ ಗಾ ಹೇಳಿ ನೋಡು...ಆವಗಾ ಅಕಿಗೆ ತಿಳದೀತು ನೀ ಯಾಕ್ ಅಕಿನ್ನಾ ಇಗ್ನೋರ್ ಮಾಡ್ತಿ ಅಂತ.....ಹೇಳಲಿ ಏನು ಕಥಿ?....ಅಂತಾ ಆಫರ್ ಕೊಟ್ಟೆ.

ಹೇಳ್ರಿ ಸಾಬ್....ಕೃಷ್ಣ ಭಗವಾನ್ ಅಷ್ಟು ಬೇಗಂಗೆ  ಮಂದಿಗೆ ಮ್ಯಾನೆಜ್ ಮಾಡಿದಾರೆ...ಅವರ ಕಡೆ ಏನೋ ಟೆಕ್ನಿಕ್ ಇರ್ಬೇಕು.

ನೋಡ್ರೀ....ನಮ್ಮ ಕೃಷ್ಣ ಭಗವಾನ್ ಅವರಾ ರಾಧಾನೂ ಹಿಂಗ ನೋಡ್ರಿ...ಏನೋ ಸ್ವಲ್ಪ ಚಂದ ಇದ್ದಳಂತ...ಅಷ್ಟಕ್ಕ ಸೊಕ್ಕ ಹಾರಿಸೋದೇನು....? ಅಕಿಗೆ ನಮ್ಮ ಕೃಷ್ಣ ದೇವರ 100% attention ಬೇಕಾಗಿತ್ತಂತ....ಅಲ್ಲರೀ...ವಿಚಾರ ಮಾಡ್ರಿ....ಪಾಪ ಅವರಿಗೆ 16,000 ಮಂದಿ ಹೆಂಡ್ರು, ಡವ್ etc.....ಮ್ಯಾಲೆ ದೇವರು ಬ್ಯಾರೆ....ಹಂತಾದ್ರಾಗ ಇಕಿ ಹುಚ್ಚ್ ಖೋಡಿ ರಾಧಿಗೆ ಒಬ್ಬಾಕಿಗೆ ಹ್ಯಾಂಗ 100% ಗಮನಾ ಹ್ಯಾಂಗ  ಕೊಟ್ಟಾರು ಅವರು....? ಅದರ ಮ್ಯಾಲೆ....ಈ ರಾಧಿನಾ....ಮೈತುಂಬಾ ತಾನು, ತನಗೆ, ತಂದು (I, Me, Mine) ಅನ್ನೋ ಬಿಸಿ ಗಾಳಿ (ಹಾಟ್ ಏರ್) ತುಂಬಿಕೊಂಡು ಯಾವಗ್ ನೋಡಿದರೂ ಸಿಡಿ ಮಿಡಿ ಮಾಡ್ಕೋತ್ತ ಇದ್ದರ, ದೇವರಲ್ಲ ರಾಕ್ಷಸರೂ ಅಕಿಗೆ 100% ಗಮನ ಕೊಡತಿರಲಿಲ್ಲ ....ಅಂತ ಹೇಳಿ ಉಸರ್ ಎಳಕೊಂಡ ಮುಂದವರ್ಸೀದೆ.

ಒಮ್ಮೆ...ಕೃಷ್ಣ ಭಗವಾನ್ ಮಸ್ತ ಕೊಳಲ್  ಬಾರಿಸಿಕೋತ್ತ ನಿಂತಿದ್ರು ಅಂತ ಆತು...ಆಗ ರಾಧಾ ಬಂದು ಒಂದು ತರಹ ಹೊಟ್ಟಿಕಿಚ್ಚಿಲೆ ಅಂದಳಂತ.....

ಕ್ಯಾ ಸಾಬ್.....ಏನು ಅಂದ್ರು ರಾಧಾ ಬೇಗಂ ಕೃಷ್ಣ ಅವರಿಗೆ..ಅಂತ ಕೇಳಿದ ಕರೀಂ.

ನನ್ನ ಪ್ರೀತಿಯ ಕೃಷ್ಣ.....ನೀ ಬಾರಿಸೋ ಕೊಳಲು ಕಂಡ್ರೆ ನನಗೆ ಅಸೂಯೆ....ಒಂದು ತರಹ.....ಅಂದಳಂತೆ ರಾಧಾ.

ಯಾಕೆ ಪ್ರಿಯ ಸಖಿ?....ಅಂತ ಕೇಳಿದರಂತೆ ಕೃಷ್ಣ.

ಮತ್ತೇನು ಪ್ರಿಯನೇ? ಆ ಕೊಳಲಿನ ಭಾಗ್ಯ ನೋಡು? ನನಗಿಲ್ಲದ ಭಾಗ್ಯ ಆ ಮೂರ್ಕಾಸಿನ ಕೊಳಲಿಗೆ ಇದೆ....ಅಂತ ಹೇಳಿ ರಾಧಾ ನಿಟ್ಟುರಿಸಿನ ಸಂಗಡ ಬೇಕಾದಷ್ಟು J (ಜಲಸಿ) express ಮಾಡಿದಳಂತೆ.

ಏನು ಪ್ರಿಯೇ ...ಈ ಕೊಳಲಿನ ಭಾಗ್ಯ?....ಅಂತ ಮುಗ್ಧತೆಯಿಂದ ಕೇಳಿದರಂತೆ ಕೃಷ್ಣ.

ಮತ್ತೇನು....ನಿನ್ನ ಆ ಕೆಂದುಟಿಗಳು ಸದಾ ಆ ಕೊಳಲ ಮೇಲೆ  ಯಾವಾಗಲು ಇರುತ್ತವೆ....ಆ ಭಾಗ್ಯ ನನಗಿಲ್ಲವೇ...ಹಾಯ್....ಹಾಯ್....ಅಂತ ಫೀಲ್ ಮಾಡಿಕೊಂಡಳು ರಾಧಾ.

ಕೃಷ್ಣ ಅವರು ತಮ್ಮದೇ ಶೈಲಿಯಲ್ಲಿ ನಕ್ಕು ಕೇಳಿದರಂತೆ.

ಪ್ರಿಯೇ ...ಈ ಕೊಳಲ ನೋಡು....ಫುಲ್ ಖಾಲಿ ಖಾಲಿ ಆಗಿದೆ...ಇದರಲ್ಲಿ ಏನೂ ಇಲ್ಲ...ಖಾಲಿ ಇರುವದಿಂದಲೇ ನಾನು ಇದರ ಮೇಲೆ ನನ್ನ ತುಟಿಯಿಟ್ಟು, ಇದರಲ್ಲಿ ನನ್ನ ದಿವ್ಯ ಮಧುರ ಸಂಗೀತ ತುಂಬಬಲ್ಲೆ....ಆದರೆ ನೀನು....ಅಂತ ಮಾತು ನಿಲ್ಲಿಸಿದರು ಕೃಷ್ಣ ಭಗವಾನ್.

ತಲಿಯಲ್ಲೂ ರೂಪದಲ್ಲೂ ರಾಪಚಿಕ್  ಇದ್ದ ರಾಧೆಗೆ ಹೆಚ್ಚಿಗೆ ಹೇಳೂದು ಬೇಕಾಗಿರಲಿಲ್ಲ. ಆಕಿಗೆ ತಿಳೀತು. ಅಕಿಯಲ್ಲಿ ಕೇವಲ ತಾನು, ತನಗೆ, ತನ್ನದು ಎಂಬ ಮಾಯೆಯ ಬಿಸಿ ಗಾಳಿ (ಹಾಟ್ ಏರ್) ತುಂಬಿ ಬಿಟ್ಟಿದೆ...ಅದನ್ನ ಖಾಲಿ ಮಾಡೋ ತನಕ ಕೃಷ್ಣ ತನ್ನಲ್ಲಿ ದಿವ್ಯ ಮಧುರ ಸಂಗೀತ ತುಂಬಲಾರ ಅಂತ. ಅವತ್ತಿಂದ ಆಕೆ ಪೂರ್ತಿ  ಬದಲಾಗಿ ಕೃಷ್ಣನ ಪ್ರೀತಿಗೆ ಒಳಗಾದಳು.

ಸಾಬ್ರಾ....ತಿಳೀತು ಏನ್ರಿ ಕಥಿ? ಹ್ಯಾಂಗದ?....ಅಂದೆ.

ಏನು ಸುಪರ್ ಕಥಿ ಸಾಬ್? ನಾವು ನಮ್ಮನ್ನ ಖಾಲಿ ಖಾಲಿ ಮಾಡ್ಕೊಂಡ್ರೆ ಕೃಷ್ಣ ಅವರು ನಮ್ಮನ್ನ ಬಾರ್ಸಿ ಬಾರ್ಸಿ ಬಿಟ್ಟು ಬಿಡ್ತಾರೆ....ಕರೆಕ್ಟ್ ಸಾಬ್?....ಅಂತ ಕೇಳಿದ.

ಯಾಕೋ...ಸ್ವಲ್ಪ refine ಮಾಡಿ ಹೇಳಿದ್ರ ಚೊಲೋ ಇತ್ತು....ಅಲ್ಲೆ  ಕೃಷ್ಣ ಹೇಳಿದ್ದು ಕೊಳಲು ಬಾರ್ಸಿ ಅಂತ...ನೀವು ಸರಿಯಾಗಿ ಹೇಳದಿದ್ದರಾ, ಬಾರ್ಸೋದು ಬ್ಯಾರೆ ಮೀನಿಂಗ್ ಕೊಡ್ತದ ನೋಡ್ರೀ ಮತ್ತಾ...ಅಂತ ವಾರ್ನಿಂಗ್ ಕೊಟ್ಟಿದ್ದೆ.

ಈಗ ಸಾಬ್ರು  ಹಾಸ್ಪಿಟಲ್ ಬೆಡ್ಡಿನ ಮ್ಯಾಲೆ ಮಲಕೊಂಡು ಮುಲಗಿ ಹೇಳಿದ್ರು.

ಹಾಂ ಸಾಬ್ ಇದೇ  ಕಥಿ ಶಾರ್ಟ್ ಆಗಿ ನಮ್ಮ ಸಾಲಿ ಸಾಹಿಬಾ ಸರಗಂ ಗೆ  ಹೇಳೋಕೆ ಹೋಗಿ ಗಲತ್ ಫೈಮಿ ಆಗಿ ನನಗೆ ಗಜ್ಜು ಬಿದ್ದು ಈ ಹಾಲತ್ ಸಾಬ್....ಅಂತ ನಿಲ್ಲಿಸಿದ ಕರೀಂ.

ಸಾಬ್ರಾ.....ಏನ ಹೇಳಿದ್ರಿ ನಿಮ್ಮ ನಾದಿನಿಗೆ?....ಅಂತ ಕೇಳಿದೆ.

ಸಾಬ್....ನಿಮಗೆ ಗೊತ್ತು...ಅಕೀಗೆ ಪೇಷನ್ಸ್ ಇಲ್ಲ....ಇಷ್ಟು ಉದ್ದಾ ರಾಧಾ ಕೃಷ್ಣ ಸರಸ ಸಲ್ಲಾಪ ಕೇಳೋಕೆ ಅಕಿಗೆ ಆಗೋದಿಲ್ಲಾ....ಅದಕ್ಕೆ ಸೀದಾ ಮೇನ್ ಪಾಯಿಂಟ ಗೆ ಬಂದು ಹೇಳಿಬಿಟ್ಟೆ ಸಾಬ್....ಅಂತ ಮಾತ್ ನಿಲ್ಲಿಸಿದ ಕರೀಂ.

ಏನು ಹೇಳಿದ್ಯೋ ಪುಣ್ಯಾತ್ಮಾ?......ಅಂದೆ.

ಸಾಬ್....ನಾನು ಹೇಳಿದೆ....ಏ ಸಾಲೀ ಸರಗಂ....ಸುನ್...ತು ಅಭಿ ಅಭಿ ಖಾಲಿ ಹೋಜಾ...ಮೇ ತುಮಕೋ ಬಾಸೂರಿ ಕಿ ತರಾ ಬಜಾವೂಂಗಾ...ಸಮಜೀ ಕ್ಯಾ? ಬಹುತ್ ಭರೇಲಿ ರೆ ತು...ಐಸೆ ರಹೀ ತೋ ಕೈಸೆ ಬಜಾವೂ ತೆರೆ ಕೋ....ಅಂತ ಅಂದೇ ಸಾಬ್ ಅಂತ ಹೇಳಿ ಮಗ್ಗುಲಾ ಬದಲಾಯಿಸದ ಕರೀಂ.

ಸಾಬ್ರಾ...ಘಾತಾ ಮಾಡಿಕೊಂಡ್ರಿ ನೋಡ್ರಿ....ನಾ ನಿಮಗ ಮೊದಲೇ ಹೇಳಿದ್ದೆ...ಅಲ್ಲೇ ಬಾರ್ಸೋದು ಕೊಳಲಾ ಹೊರತು ಮತ್ತೇನೂ ಅಲ್ಲಾ ಅಂತ...ಹನ್ತಾದ್ರಾಗ ನೀವು ನಿಮ್ಮ ನಾದನಿಗೆ ನೀ ಖಾಲಿ ಆಗು, ನಾ ಬಾರಸ್ತೇನಿ  ಅಂದ್ರ ಅಕಿ ಲಬೋ ಲಬೋ ಹೊಯ್ಯಕೊಂಡು ಅಕಿ ಅವ್ವ ಅಂದ್ರಾ ನಿಮ್ಮ ಅತ್ತಿ, ಕಲ್ಲೂ ಮಾಮಾ, ಮಾಮಿ ಎಲ್ಲರನ್ನಾ ಕೂಡ್ಸಿ...ದೇಖೋ...ಜಿಜಾಜಿ ಬೋಲ್ಯಾ ಕಿ ವೊಹ್ ಮೆರೆಕೋ ಬಜಾನಾ ಬೋಲ್ತೆ....ಅಂತ ಹೇಳಿ ನಿಮ್ಮನ್ನ ವಿಲ್ಲನ್ ಅಂತ ಪೇಂಟ್ ಮಾಡಿ....ಮುಂದ ನಿಮ್ಮದು ಈ ಹಾಲತ್....

ಸಾಬ್ ಟೀಖ್ ಬೋಲಾ  ಸಾಬ...ಐಸಾ ಹೀ ಹುವಾ....ಅಂದಾ ಕರೀಂ.

ಹೋಗ್ಲಿ ಬಿಡ್ರಿ ಸಾಬರ....ಲೆಸನ್ ಕಲತ್ರಿ ....ಆರಾಮಾಗಿ ಬರ್ರಿ....ಭಾಗವತದಿಂದ ಇಂತಾ ಕಥಿ ಬೇಕಾದಷ್ಟು ಹೇಳ್ತೀನಿ.

ಸಾಕು....ಸಾಬ್....ಒಂದು ಕಥಿ ಕೇಳಿ ಇಷ್ಟು ಆಗಿದ್ದು ಸಾಕಾಗಿಲ್ಲಾ ಕ್ಯಾ? ದೋಸ್ತ ಯಾ ದುಶ್ಮನ್ ಸಾಬ್?....

ತೊಗೊಂಡ ಹೋಗಿದ್ದ ಹಣ್ಣು ಮತ್ತೊಂದು ಇಟ್ಟು , ಸಾಬ್ರಿಗೆ ಶುಭರಾತ್ರಿ ಕೋರಿ ಹೊರಗ ಬಂದ್ರ ಕೃಷ್ಣ ರುಕ್ಮಿಣಿ ಸರಸ ಸಲ್ಲಾಪ ನೆನೆಪ್ ಆತ. ಕೃಷ್ಣ ರಾಧಾ ಸರಸ ಸಲ್ಲಾಪ ಹೇಳಿ ತಪ್ಪು ಮಾಡಿದೆ ಏನು?

** http://maheshuh.blogspot.com/2010/12/emptiness.html



Lack of interest does not mean dislike, hate or disgust

If a snake enters your house, what do you do? 

If you are compassionate, you may have it safely caught, taken out and released back in the wild.

If the snake is very dangerous and posing serious threat to you and your family, you may kill it.

This is what everyone from an ordinary mortal to enlightened people will do.

Sometimes it easy to take the aphorism - everything is ONE. Everyone is ONE  little too far. That's nothing but a beginners' confusion or dilemma.

I am sure even a person like Dalai Lama, most saintly, most compassionate person will do the same if a snake gets into his room. Dalai Lama may be a liberated soul but snake is not. 

Just for the kicks, some saint may use his powers to subdue the snake and make it harmless.

There is a story that Swami Prabhavananda tells about his guru Swami Brahmananda. Once while walking on a road in some Indian city, a raging bull charged at them. There was not much time or opportunity for these 3 people to escape. Swami Prabhavananda and another disciple decided to shield their guru Brahmananda and sacrifice themselves if needed. Guru stopped them and boldly faced the charging bull. The bull which was ready to tear up anything on its way came charging with all its anger and might and stopped just inches away from the body of Swami Brahmananda and became docile and moved away. It looked like a miracle to everyone. But for the people who live on a different astral plane, it was not a big deal at all. For Swami Brahmananda, it was like correcting some anomaly in the universal consciousness which was same in the bull and the swamis. He just tuned it right and the bull became normal and went away.

Point is-  all though the consciousness in a saint and a snake is all same, they just can not live together because they are at different points in their evolution. 

Sometimes we mistakenly think that since everyone is ONE, we just have to like everyone and make them part of our lives. This is akin to keeping a snake in your room  and expect that since you and snake are ONE (as consciousness), it should not bother you. How silly is that?

If we can understand this, then why don't we understand similar thing with humans? If someone does  not like you, is it your problem? I do  not think so. I won't use hate or dislike or disgust. They are all extremely strong words and should not be used against fellow human beings. But, lack of interest is perfectly fine. Someone does not find you very useful to make you part of their inner circle, why should you care? Just respect their decision and move on. You may be a snake and he may be a saint or other way round. Just because you are a snake, you are not necessarily a bad creature even if you carry the deadliest venom and still have your fangs intact and can strike at anybody with all the viciousness. That's what makes you a snake. Saint is what he is. Respect the differences in the different manifestations of the same consciousness. Since as a snake, you can not discriminate, as a saint, he has to do it for you.

We all have people in our lives whom we like very much and there are others whom we do not care much about and there are others whom we avoid. That's all fine. Hate is what is not called for. Judgement is not what is called for. When you start hating and judging other people, you violate the aphorism - we are all ONE. But just recognizing the differences and then deciding how best to deal with each person or living creature is perfectly fine. Everybody can exercise that right.

All these thoughts came to my mind when read this quote

Everybody lives in my heart.
Only selected few live in my life.

Made perfect sense. Since we are all ONE, everyone and everything that has come from the same consciousness is one and is in our heart, the seat of consciousness in the body. If you are a sensitive person, from time to time you have felt bad about having to avoid some people or being avoided by others, take heart in this quote. As long as you do not hate, dislike, judge others, you are free to make them part of your life or wish them best and leave them outside of your life. They can do so too.

But, if we ever resort to hate or dislike or judge others because we are not part of their life or if we have made them not part of our life, then we are hating, disliking and judging ourselves.

Cheers!


Unlimited mind power...Free...Up for grabs

If you clear up the clutter in your room, you may then be able to walk out of your messy room to some other room in your own house.

This is an extreme case to imagine. I agree. But, if you make your, say, bedroom very messy-  things all strewn around and totally disorganized, how hard it will be to even get out of your own bed and walk to kitchen or living room. You stumble upon that book which should not have been lying around, dirty clothes cling to your foot and what not. If you do not clear the clutter, very soon, getting out of the bed in the morning becomes a chore. You will forget that there are other rooms in the house and you may as well use them. You will become a virtual prisoner in your own room. 

I know it is probably very exaggerated. But when it comes to our minds, this is not strong enough to describe the state of our minds. Our minds have become like our messy room. First of all, there is way to much clutter. Second, even the things that we need are not properly organized. With that, is it any wonder, we spend most of our time in our minds and go no where? And to make things worse, mind is not like your bedroom.  If you do not add more clutter, your bedroom does not become more messy. It just stays the way it is. But, with mind, it generates more clutter and deepens the ever increasing garbage dump it has created. Slowly things start decaying and what you end up having is a toxic mind. Toxicity keeps on increasing unless you do something about it.

There is more to it. Of course, you got to clean up your bedroom and your mind so that you can live there comfortably. There is one more advantage  too. Once your bedroom is cleared, you can walk out of it and go to other rooms and help yourself in the kitchen or watch a movie in the living room. If rest of the house is organized, you can slip into your comfortable slippers and walk over to your neighbors and  enjoy their house as well.

What's the big deal, you say? 

I agree when we talk like this in terms of house, it seem very childish. But take the analogy to our minds.

Can you imagine the amount of  mind power available to all of us through the universal mind? 

Just to give an example. Some of our favorite writers keep writing week after week, best seller after best seller and fans continue to like them more and more. Many times we feel that our favorite writer wrote exactly what we would have liked him or her to write. All the credit goes to the author. But, it is very much likely that such people are able to tap into the very large pool of universal mind by going out of their own very limited personal mind. Our own personal mind is like a small tank of water in our own house. But, there is a big river of collective mind flowing which is open to everyone to draw water from. It's free and available. You just have to get out of your own mind to let the better water from the universal mind flood your own mind.

This explains unceasing fountain of creativity in some people like novelists, movie actors, scinetists or people who have achieved amazing things in their respective fields. Many of them are not aware of of it all. They come specially endowed with such a simple and clear mind and continue to maintain it that way so that they can simply borrow your mind, your ideas to help themselves with.

You may ask how do you do it? Although Yoga system of Patanjali gives exact steps to acquire such powers, it may be very hard during our times and where we may be in our own evolution. But, you can at least do all the preparatory work so that you can let the river of universal mind flood yours when it is appropriate. Just clear the junk in your own mind, have an open mind, be willing walk over to other rooms in your own house, then neighbors, then many such neighbors and so on. 

Sometimes we are able to read other people's thoughts and we call it seredipity, synchronisity etc. It's like borrowing something from your neighbor. That's it.

I will provide reference to the book where this concept is so well illustrated once I 'remember' it. :)

Cheers to tapping into universal mind. Everyone's mileage varies. Hope you get a good mileage.



Friday, June 29, 2012

ಸಾವಿನೊಂದಿಗೆ ಸಂಭಾಷಣೆ

ಸಾವಿನ ಬಗ್ಗೆ ಮಾತಾಡೋದು ತಪ್ಪಾ?

ಸಾವು ಒಂದೇ ಜೀವನದ ಬಗ್ಗೆ ಸೀರಿಯಸ್ ಆಗಿ ವಿಚಾರ ಮಾಡೋಕೆ ಹಚ್ಚೋದು. ನಾವು ಯಾರು? ಯಾಕೆ ಇಲ್ಲಿ ಬಂದಿದ್ದೇವೆ? ಈ ಜೀವನ ಏಕೆ? ಇಂತಹ ಪ್ರಶ್ನೆಗಳನ್ನು ತಡವಾಗಿ ಆದರೂ ಕೇಳುವಂತೆ ಮಾಡೋ ಶಕ್ತಿ ಇರೋದು ಸಾವಿಗೆ.

ಬದುಕೋಕೆ ಸಾವಿರಾರು ವರ್ಷ ಇದ್ದಿದ್ದರೆ, ಇಂತಾ ಪ್ರಶ್ನೆ ಇಷ್ಟು ಲಗೂನೆ ಕೇಳೋ ಪ್ರಸಂಗ ಇರತಿರಲಿಲ್ಲ. ಆದ್ರೆ ಇರೊ  ಸ್ವಲ್ಪೇ ಟೈಮ್ ನಲ್ಲಿ ಇವನ್ನ ಕೇಳದೇ ಹೋದ್ರೆ, ತುಂಬಾ ಲೇಟ್ ಆಗಿ ಬಿಟ್ಟೀತು.

ಸಾವನ್ನು ಸಿರಿಯಸ್ ಆಗಿ ತೊಗೊಂಡಾಗ ಜೀವಿಸುವದರ ಬಗ್ಗೆ ಸಿರಿಯಸ್ ಆಗಲಿಕ್ಕೆ ಸಾಧ್ಯ. ಇಲ್ಲ ಅಂದ್ರೆ, ಹೆನ್ರಿ ಡೇವಿಡ್ ಥೊರೋ ಹೇಳಿದಾಂಗೆ - ಸಾಯೋ ಟೈಮ್ ನಲ್ಲಿ ಗೊತ್ತಾಯ್ತು, ನಾವು ಬದುಕಲೇ ಇಲ್ಲ ಅಂತ. ಆ ದೃಷ್ಟಿಯಿಂದ ನೋಡಿದ್ರೆ ಸಾವು ನಮ್ಮ ಗೆಳಯ. ಯಾವಾಗಲೂ ಯಾವದು ಸರಿ ಅನ್ನೋದರ ಬಗ್ಗೆ ನೆನಪ  ಮಾಡೋ ಗೆಳಯ.

ಇದು ನೆಗೆಟಿವ್ ಥಿಂಕಿಂಗ್ ಅಲ್ಲವೇ ಅಲ್ಲ. ಈ ತರಹ ವಿಚಾರ ಬಂತು ಅಂದರೆ ನಂತರದ ಪ್ರತಿ ಕ್ಷಣವೂ ಅಮೂಲ್ಯ. ಬದುಕಿಗೆ ಒಂದು ತರಹದ ಫೋಕಸ್ ತಂದು ಕೊಡಬಲ್ಲ ಥೀಮ್ ಅಂದ್ರೆ ಸಾವು. ಒಮ್ಮೆ ಜೀವಿಸುವದರ, ಸರಿಯಾಗಿ  ಜೀವಿಸುವದರ, ಮಹತ್ವ ತಿಳಿಯಿತು ಅಂದರೆ  ಚಿಲ್ಲರೆ ವಿಚಾರಗಳಿಗೆ ಟೈಮ್ ಇರೋದಿಲ್ಲ. ಸಿಟ್ಟು, ಖಿನ್ನತೆ, ಜಗಳ, ಇವಕ್ಕೆಲ್ಲಾ ಟೈಮ್ ಕೊಡಲು ಸಾಧ್ಯವೇ ಇಲ್ಲ. ಸರಿಯಾಗಿ ಜೀವಿಸಿ, ಮೇಲೆ ಕೇಳಿದ ಮೂರು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವದು ಎಲ್ಲಕಿಂತ ಮುಖ್ಯವಾಗುತ್ತದೆ. ಆ ಗುರಿಯೊಂದಿಗೆ ನಡೆಯುವವರು ತಮಗೂ, ತಮ್ಮ ಸುತ್ತ ಮುತ್ತ ಇರುವ ಜನರಿಗೂ ಯಾವಾಗಲೂ ಆನಂದ, ಪ್ರೀತಿ, ಸದಾಶಯ, ಜೀವನದ ಅರ್ಥವನ್ನು ಹಂಚುತ್ತಾರೆ.

ಜೈವಿಕವಾಗಿ ಸಾವಿನೊಂದಿಗೆ ನಮ್ಮ ಸಂಭಾಷಣೆ ತಾಯಿಯ ಗರ್ಭದಲ್ಲಿ ಇರುವಾಗಿಂದಲೇ ಶುರು. ಜೈವಿಕವಾಗಿ ಒಂದು ಘಟ್ಟ ಬರುತ್ತದೆ. ಕೆಲವರಿಗೆ 30 ಕ್ಕೆ, ಕೆಲವರಿಗೆ 40 ಕ್ಕೆ, ಕೆಲವರಿಗೆ 50 ಕ್ಕೆ. ಅಲ್ಲಿಂದ ಸೆಕೆಂಡ್ ಹಾಫ್ ಶುರು. ಸೆಕೆಂಡ್ ಹಾಫ್ ನಲ್ಲಿ ಜೈವಿಕವಾಗಿ ಸಾವು ನಮ್ಮ ಮೇಲೆ ಮೇಲಗೈ ಸಾಧಿಸಿದಂಗೆ ಕಂಡು, ಸಿಕ್ಕಾಪಟ್ಟೆ ಟೆನ್ಷನ್ ಆಗಿ ಜನ, ಇಂದು ಇದ್ದು, ನಾಳೆ ಬಿದ್ದು ಹೋಗುವ ದೇಹದ ಮೇಲೆ ಸಿಕ್ಕಾಪಟ್ಟೆ ಜತನ ತೋರುತ್ತಾರೆಯೇ ವಿನಹ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವದರಲ್ಲಿ ಅಲ್ಲ. ಅದು ಭಾಳ ನೋವಿನ ಸಂಗತಿ. ಕಾರಿನ ಇಂಜಿನ್ ಗೆ ಮೇಜರ್ ರಿಪೇರಿ ಬೇಕಾದ ಸಮಯದಲ್ಲಿ ಸೀಟ್ ಬೆಲ್ಟ್ ಗೆ ಕಸೂತಿ ಹಾಕ್ತಾ ಕೂತಂಗೆ.

ಬುದ್ಧಿವಂತರಿಗೆ ಈ ಸೆಕೆಂಡ್ ಹಾಫ್ ಅನ್ನೋದು ಒಂದು ಅತಿ ಮುಖ್ಯ ಘಟ್ಟ. ಫಸ್ಟ್ ಹಾಫ್ ನಲ್ಲಿ ದುಡ್ಡು, ಪ್ರತಿಷ್ಠೆ, ಸುಖ, ಪವರ್ ಇತ್ಯಾದಿ ಆಟಿಗೆಗಳ ಸಂಗಡ ಸಾಕಷ್ಟು ಆಟ ಆಡಿ, ಅವುಗಳ ಇತಿ ಮಿತಿ ಅರಿತಿದ್ದು ಆಯಿತು. ಮುಂದೆ ಏನು? ಅನ್ನೋ ಪ್ರಶ್ನೆ ಕೇಳಲು ಸೆಕೆಂಡ್ ಹಾಫ್ ಉತ್ತಮ ಸಮಯ. ಆಟಿಗೆಗಳೊಂದಿಗೆ ಆಟ ಇನ್ನು ಮುಗಿದಿಲ್ಲ ಅಂದ್ರೆ ಬೋರ್ ಹೊಡೆಯೋ ತನಕ ಆಡಿ. ಒಂದಲ್ಲ ಒಂದು ದಿನ ರಿಯಲ್ ಸೆಕೆಂಡ್ ಹಾಫ್ ಶುರು ಆಗೇ ಆಗುತ್ತೆ.

ಸೆಕೆಂಡ್ ಹಾಫ್ ಶುರು ಆದಾಗ 1) ನಾನು ಯಾರು? 2)ನಾನು ಇಲ್ಲೇಕೆ ಇರುವೆ? 3) ಈ ಜೀವನ ಏತಕ್ಕಾಗಿ? ಈ ಪ್ರಶ್ನೆಗಳಿಗೆ ಸೀರಿಯಸ್ ಆಗಿ ಉತ್ತರ ಹುಡುಕಲು ಹೋಗುವವರಿಗೆ ಸೆಕೆಂಡ್ ಹಾಫ್ ಒಂದು ಉಲ್ಲಾಸಕರ ಚಾಲೆಂಜ್. ಈ ಚಾಲೆಂಜ್  ಫೇಸ್ ಮಾಡದೇ, ಸೆಕೆಂಡ್ ಹಾಫ್ ನಲ್ಲೂ ಫಸ್ಟ್ ಹಾಫ್ ನಲ್ಲಿ ಆಡಿದ ಆಟಾನೇ ಆಡ್ತೀನಿ ಅಂತ ಹೊಂಟರೆ ದೇಹ, ಮನಸ್ಸು ಎರಡೂ ಸಾಥ್ ಕೊಡೋದಿಲ್ಲಾ. ಒಂದು ತರಹದ ವ್ಯಾಕುಲತೆ ಸದಾ ಆವರಿಸುತ್ತದೆ. ಅದು ಬೇಕಾ?

ಈ ಸೆಕಂಡ್ ಹಾಫ್ ನಲ್ಲಿ ನಮಗೆ ನಮ್ಮ ಜೀವನದ ಮಹತ್ತರ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಅವಕಾಶ ಇರುತ್ತದೆ. ಈ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಂಡರೆ, ನಮ್ಮಲ್ಲೇ ಇರುವ, ಸಾವನ್ನು ಮೀರಿದ, ಆತ್ಮದ ಜೊತೆ ಭೇಟಿ ಗ್ಯಾರಂಟೀ. ಸಾವಿನೊಂದಿಗೆ ಸರಿ ರೀತಿಯಲ್ಲಿ ಸಂಭಾಷಣೆ ನೆಡಸಿದರೆ, ಸಾವೇ ಸಾವನ್ನು ಗೆಲ್ಲುವ ಸಿಕ್ರೆಟ್ ಫಾರ್ಮುಲ ಹೇಳಿಕೊಡುವ ಮಿತ್ರ.

ಇಂತಹ ಪ್ರಶ್ನೆಗಳಿಂದ ಪರೇಶಾನ್ ಆಗಿ ಸೀದಾ ಯಮಧರ್ಮನ ಹತ್ತಿರ ಹೋಗಿ ಆ ಪ್ರಶ್ನೆಗಳನ್ನ ಸೀದಾ ಅವನಿಗೇ ಕೇಳಿ, ಯಮಧರ್ಮ ಕೊಟ್ಟ ಗಿಫ್ಟ್ ಎಲ್ಲ ತಿರಸ್ಕರಿಸಿ, ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡು  ಬಂದವನು ನಚಿಕೇತ. ಉಪನಿಷತ್ತುಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕಠೋಪನಿಷತ್ತಿನಲ್ಲಿ ನಚಿಕೇತನ ಕಥೆ ಬರುತ್ತದೆ. ಕಥೆ ಭಾಳ ಜನರಿಗೆ ಗೊತ್ತು. ಆದ್ರೆ ಸಾವನ್ನು ಗೆಲ್ಲುವ ಸೆಕ್ರೆಟ್ ಫಾರ್ಮುಲ ತಿಳಿಯಲು ಕಠೋಪನಿಷತ್ತನ್ನು ಓದಬೇಕು. ನಮ್ಮ ಸಾವಿನೊಂದಿನ ಸಂಭಾಷಣೆಗೆ ಕಠೋಪನಿಷತ್ತಕ್ಕಿಂತ ಒಳ್ಳೆ ಟೆಕ್ಸ್ಟ್ ಬುಕ್ ಸಿಗಲಾರದು.

ಸಾಯೋದ್ಕಿಂತ ಮೊದಲೇ ಸಾಯಿ - ಅಂತ ಯಾರೋ ಹೇಳಿದ್ದು ನೆನಪು. ಅಂದರೆ ಜೈವಿಕವಾಗಿ ದೇಹ ಸಾವನ್ನು ಹೊಂದುವಕಿಂತ ಮೊದಲೇ 'ನಾನು'  ಯಾರು ಅಂತ ತಿಳಿದುಕೊಂಡು, 'ನಾನು' ಅಲ್ಲದ್ದನ್ನ ಕೊಂದುಬಿಡು ಅಂತ. ಒಮ್ಮೆ ಆ ಬ್ರಹ್ಮಜ್ಞಾನವನ್ನು ಪಡೆದವನಿಗೆ ಜೈವಿಕ ಸಾವು ಒಂದು ಬಾಗಿಲು ಅಷ್ಟೇ. ರೈಟ್ ಟೈಮ್ ನಲ್ಲಿ ಆ ಬಾಗಿಲು ತೆಗೆಯತ್ತೆ, ಒಂದು ರೂಮಿನಿಂದ  ಇನ್ನೊಂದು ರೂಮಿಗೆ ಹೋದಷ್ಟು ಸರಳ, ಜೀವಂತ ಇರುವಾಗಲೇ ಸಾವಿನ ದೋಸ್ತಿ ಮಾಡಿ ಅದರಿಂದಲೇ ಸಾವನ್ನು ಗೆಲ್ಲೋ ವಿದ್ಯೆ ಕಲಿತವನಿಗೆ.

** ಶ್ರೀ ಏಕನಾಥ್ ಈಶ್ವರನ್ ಅವರು ಇಂಗ್ಲಿಷ್ ನಲ್ಲಿ ಬರೆದ - Dialogue With Death : A Journey Through Consciousness - ಎಂಬ ಪುಸ್ತಕದ ಮುನ್ನುಡಿಯ ಸಂಕ್ಷಿಪ್ತ ಭಾವಾನುವಾದ ಇದು. ಈ ಪುಸ್ತಕ  ಕಠೋಪನಿಷತ್ತಿನ ಸಾರವನ್ನು ಅತ್ತ್ಯಂತ ಸರಳವಾಗಿ ವಿವರಿಸಿದೆ. ತುಂಬಾ ಒಳ್ಳೆ ಪುಸ್ತಕ. ಈ ಚಿಕ್ಕ ಭಾವನುವಾದದಲ್ಲಿ ತಪ್ಪು ಇದ್ದರೆ ಅವೆಲ್ಲ ನಂದು. ಶ್ರೀ ಏಕನಾಥರ wisdom ಅವರು ಮಾತ್ರ ಹೇಳಲು ಸಾಧ್ಯ. ಆದರೂ ಶ್ರೀ ಏಕನಾಥ್ ಈಶ್ವರನ್ ಅವರನ್ನು ಮತ್ತು ಅವರ ಪುಸ್ತಕಗಳನ್ನು ಕನ್ನಡಿಗರಿಗೆ ಪರಿಚಯಿಸುವ ಚಿಕ್ಕ ಪ್ರಯತ್ನ.

ಸಾವಿನ ಬಗ್ಗೆ ಬರೆದ ಕೆಲ ಹಳೆ ಪೋಸ್ಟ್ ಗಳಿಗೆ ಲಿಂಕ್ಸ್ .

- http://maheshuh.blogspot.com/2009/09/death.html

- http://maheshuh.blogspot.com/2009/02/birth-death.html

Make yourself unupsettable

Unupsettable - this is not, yet, a word in the standard dictionary. But, if Buddha were to review any dictionary, he would have surely liked this word to be the most important word in the entire dictionary and in any language for that matter.

There is a very seldom quoted Buddha saying. Goes something like this - you get upset because you are upsettable. Nothing else can cause your getting upset.

How profound!

This goes so well with stimulus and response theory of human behavior. Our getting upset is our response to some stimuli. Most people say, if you never get upset, you must be dead. But, Buddha says, it is possible. He says if you choose a different response to the stimulus, it is possible.

Many of equate getting hurt (physically or emotionally) as getting upset. Hurt is a feeling. Being upset is a state. You can not avoid getting hurt.You can not stop from feeling whatever you feel. Senses will register the stimulus, whether we like or not. But, we can choose a different response. If you are hurt, fine. It feels bad for a while. But, if you continue to brood over it, you are slowly changing that from hurt to longer lasting state of upset. We should avoid that. 

Buddha used to simply brush off if anybody came saying that so and so upset him or her. He would bluntly say - you get upset because you are upsettable. 

Work on your mind. That's your engine. Something is out of tune there. Make the necessary correction and slowly and surely you will stop getting upset. You will enjoy all the emotions in adequate depth but you will not get upset. That's the ultimate goal. Even for beginner, you will surely be able shorten the length of time you remain upset. Earlier it may be months, slowly it becomes days, then minutes, then seconds and then just a flash and you are back to your normal self.

We spend so much time taking care of the body but mind is allowed to be on its own. This is like taking really good care of the car body but totally ignoring the engine. There is funny saying - embroidering the seat-belt when the engine needs a major overhaul.

Body should be cared for and must be kept in best possible condition. However, ignoring mind will be at our own peril. Else we will end up with an equivalent of a car with Ferrari body and a Ford engine. Sound mind in sound body is not necessarily true. Sound body is a prerequisite for sound mind. But, it does not guarantee it. But sound mind will help make the body sound regardless of whatever may be the condition of the body. If you read some impressive biographies like Viktor Frankl's 'Man's search for meaning' etc., you will see how poor was their physical health. It was the soundness of their mind that helped them live through those nightmarish years.

So, start making your mind unupsettable. Mindfulness is a good place to start. Mindfulness - fancy word for living in the moment. Not in the past  and not in the future.

Cheers!

Thursday, June 28, 2012

ಕಾಮಾಚಾರಿ ಸ್ವಾಮಿ ವಾಮಾಚಾರಾ ಮಾಡ್ತಾರಾ?

ಸಾಬ್....ಏನು ಇದು ಅಸಹ್ಯ!? ನಿಮ್ಮದು ಕೆ  ಸ್ವಾಮೀಜಿ ಇಂತಾ ಹೊಲಸ್ ಹೊಲಸ್ ಕೆಲಸ ಮಾಡಿ, ಅದರ ಸೀಡಿ (video CD) ಆಗಿ, ಅದು ಟಿವಿ ನಲ್ಲಿ ಬಂದ್ಬಿಟ್ಟಿ, ಯಾರ್ಯಾರೋ  ಔರತ್ ಮಂದಿ ಎಲ್ಲಾ ಟಿವಿ ಮ್ಯಾಲೆ ಬಂದು ಸ್ವಾಮೀಜಿ ನಮಗೆ ಹೀಗೆ ಮಾಡಿದ್ರು, ಹಾಗೆ ಮಾಡಿದ್ರು ಅಂತ ಬೊಂಬಡಾ ಬಜಾಯಿಸ್ತಾ ಇದ್ದಾರೆ ನೋಡಿ.....ಬಹುತ್ ಬೇಶರ್ಮೀ ಕಿ ಬಾತ್ ಸಾಬ್.....ಅಂತ ಹೇಳಿ ನನ್ನ ರಿಯಾಕ್ಷನ್ ಗೆ ಕಾದ ಕರೀಂ ಸಾಬ್.

ಸಾಬ್ರ ....ಯಾವ್ ಸ್ವಾಮಿಗೋಳು.....? ನಮ್ಮ ಎಲ್ಲಾ ಸ್ವಾಮಿಗಳು ಕಚ್ಚೆ ಇನ್ನೊಂದು ಎಲ್ಲ ಘಟ್ಟೆ ಕಟ್ಟಿಗೊಂಡ ಇರ್ತಾರ್ರಿ....ಯಾರ್ ಬಗ್ಗೆ ಹೇಳಲಿಕತ್ತೀರಿ?.....ಅಂದೆ.

ಅದೇ ಸಾಬ್ ನಿತ್ಯಾನಂದಾ ಅವರ ಬಗ್ಗೆ....ಅಂತ ಕರೀಂ ಹೇಳಿದ್ ಮ್ಯಾಲೆ ತಿಳೀತು.

2010 ರಲ್ಲಿ ನಿತ್ಯಾನಂದರು ಯಾವದೋ ಸಿನಿಮಾ ನಟಿ ಜೊತೆ ಅಸಭ್ಯ ರೀತಿ ಇರೋ ಸೀಡಿ ಬಹಿರಂಗವಾಗಿ, ಅವರೂ ಜೇಲ್ ಒಳಗೆ ಹೋಗಿ, ನಂತರ ಹೊರಗೆ ಬಂದು, ಎಲ್ಲ ಥಂಡಾ ಆಗಿತ್ತು. ಈಗ ಮತ್ತೆ ಹೊಸ ಹೊಸ ಗಂಡಸೂರು , ಹೆಂಗಸೂರು ಎಲ್ಲ ಬಂದು ಮತ್ತೆ ಅವರ ಮೇಲೆ ಆರೋಪ ಮಾಡಿ ಮತ್ತೆ ಸುದ್ದಿಯಲ್ಲಿ ಇದ್ದಾರೆ ಸ್ವಾಮಿ ನಿತ್ಯಾನಂದ ಅವರು.

ನೋಡ್ರೀ ಸಾಬರ...ಏನ ಕೇಳಿದರೂ, ಏನ ನೋಡಿದರೂ, ಎಲ್ಲದನ್ನು ಚಿಂತಿಸಿ ಪರಾಮರ್ಶೆ ಮಾಡಿ ಒಂದು ಅಭಿಪ್ರಾಯಕ್ಕ ಬರಬೇಕ ನೋಡ್ರೀಪ....ಅಂದೆ.

ಕರೀಮಾ....ನೋಡಪಾ....ನಿತ್ಯಾನಂದ ಸ್ವಾಮಿಗಳು ಏನರ ಅಂತದ್ದೆಲ್ಲ ಮಾಡಿದ್ರ, ಅದ್ರಾಗೇನು 100% ತಪ್ಪು ಅಂತ ಹೇಳಲಿಕ್ಕೆ ಬರೋದಿಲ್ಲ ನೋಡಪಾ...ಅಂದು ಕರೀಮನ ರಿಯಾಕ್ಷನ್ ಗೆ ಕಾದೆ.

ಸಾಬ್....ಏನು ಹೇಳ್ತೀರಿ ಸಾಬ್.....ಸ್ವಾಮೀ ಆದವರು ಹೆಂಗಸು ಮಂದಿ ಜೊತೆ ಅದೆಲ್ಲ ಖರಾಬ್ ಖರಾಬ್ ಕೆಲಸ ಮಾಡೋದು ಸರಿ  ಕ್ಯಾ? ನಿಮ್ಮದು ತಲಿ ಮೇಲೆ ನಮಗೆ ಡೌಟ್ ಬರ್ತದೆ.....ಅಂದ ಕರೀಂ. ಶಾಕ್ ಆಗಿತ್ತ ಅವಂಗ.

ಕರೀಂ....ನಾನು ಸ್ವಲ್ಪ ಓದಿ ತಿಳಕೊಂಡೇನಿ ನೋಡಪಾ....ನಮ್ಮ ಸ್ವಾಮಿ ಮಂದಿ ವಳಗ ತಾಂತ್ರಿಕ್ ಸಿಸ್ಟಮ್ ಫಾಲೋ ಮಾಡೋ ಕೆಲೊ ಮಂದಿ ಇರ್ತಾರ್ ನೋಡಪಾ....ಅದ್ರಾಗೂ ತಂತ್ರ ವಾಮಾಚಾರ ವರ್ಗಕ್ಕೆ ಸೇರಿದವರಿಗೆ ಇದೆಲ್ಲ ಓಕೆ....ಅಂತಾ ಶಾರ್ಟ್ ಆಗಿ ತಂತ್ರ, ವಾಮಾಚಾರದ ಬಗ್ಗೆ ಇಂಟ್ರೋ ಕೊಟ್ಟೆ.

ಕ್ಯಾ ಸಾಬ್.....? ತಂತ್ರ ಅಂದ್ರೆ? ನಮಗೆ ತಿಳಿಯೋದಿಲ್ಲ ಅಂತ ಸುಳ್ಳು ಸುಳ್ಳು ಚೋಡತೀರಿ  ಕ್ಯಾ.....?....ಅಂತ ನಾ ಹೇಳಿದ್ದ ಡಿಸ್ಮಿಸ್ಸ್ ಮಾಡಿದ.

ಹಾಂಗ ಅಲ್ಲಪ....ಅಂತ ಮುಂದು ವರಿಸಬೇಕು ಅನ್ನೋದ್ರಾಗ. ಅವನಾ ಮತ್ತ ಹೇಳಿದ.

ಚುಪ್ ಕರೋಜಿ....ಆ  ನಿತ್ಯಾ ಸ್ವಾಮಿ ಅಂತಾನೆ, ಅವನದು ಯಂತ್ರಾನೇ ಕೆಲಸಾ ಮಾಡೋದಿಲ್ಲ ಅಂತ....ಚೆಕ್ ಮಾಡಿದ್ದ ಡಾಕ್ಟರ್ ಮಂದಿ ಹೇಳ್ಯಾರೆ ಸ್ವಾಮಿ ಅವರದ್ದು ಸೆಕ್ಸ್ ಪವರ್ ಛೋಟಾ ಬಚ್ಚಾ ಲೋಗ್  ಮಾಫಿಕ್ ಅದೇ ಅಂತ....ಅಂತ ಬುರ್ನಾಸ್ ಯಂತ್ರಾ ಇಟ್ಟಗೊಂಡು ಔರತ್ ಮಂದಿಗೆ ಏನು ತಂತ್ರ ಮಾಡೋಕೆ ಸಾಧ್ಯಾ ಆ ಕೊರಮಾ ಸ್ವಾಮಿಗೆ? ಅಂತಾ ಬುರ್ನಾಸ್ ತಂತ್ರಾ ಮಾಡಿಸಿಕೊಳ್ಳೋಕೆ ಹೋಗೋ ಗರಂ ಗರಂ ಹೆಂಗಸು ಮಂದಿದೂ ಖೂನ್ ಎಲ್ಲ ಥಂಡಾ ಆಗಿದೆ ಅಂತಾ ಕ್ಯಾ....?................ಅಂತ ಹೇಳಿ ಫುಲ್ ಡಿಸ್ಮಿಸ್ಸ್ ಮಾಡಿಬಿಟ್ಟ.

ಕರೀಮಾ.....ನಾ ಹೇಳೋದ್ ಪೂರ ಕೇಳಿ ಅರ್ಥ ಮಾಡಿಕೊಂಡ ಮೇಲೆ ನಿನಗ ಹ್ಯಾಂಗ ಬೇಕು ಹಾಂಗ ಡಿಸೈಡ್ ಮಾಡೀ  ಅಂತ. ಓಕೆ ಏನಪಾ?....ಅಂತ ಆಫರ್ ಮಾಡಿದೆ.

ಓಕೆ...ಸಾಬ್....ಮೊದಲು ಒಂದು ಹೇಳಿ.. ಅಂದ ಕರೀಂ.

ಕೇಳೋ ನಮ್ಮಪ್ಪಾ...ಸಾಬಣ್ಣ.

ವಾಮಾಚಾರಿ ಅಂದ್ರೆ ಯಾವ ಮಠದ್ದು ಆಚಾರ್ರು ಸಾಬ್?.....ಸ್ಟುಪಿಡ್ ಇನ್ನೋಸೆಂಟ್ ಆಗಿ ಕೇಳಿದ.

ಹೋಗ್ಗೋ...ವಾಮಾಚಾರಿ ಅಂದ್ರ ಯಾವದ ಮಠದ ಆಚಾರ್ರು ಅಲ್ಲ. ಸದಾಚಾರಿ ಸ್ವಾಮಿಗಳು ಯಾವದನ್ನ ಮಾಡೋದಿಲ್ಲವೋ ಅವನ್ನೆಲ್ಲ ಸಿಕ್ಕಾಪಟ್ಟೆ ಮಾಡಿ, ಅವರ ತಾಂತ್ರಿಕ ಪಧ್ಧತಿ ಪ್ರಕಾರ್ ಮಾಡಿ, ಆ ಮೂಲಕವೇ ಆ ಆಸೆಗಳ, ಆ ದುರ್ಬಲತೆಗಳ ಮೇಲೆ ವಿಜಯ ಸಾಧಿಸಿ, ಸಮಾಧಿ, ಮೋಕ್ಷ ಪಡೆಯೋ ಪ್ರಯತ್ನ ಮಾಡೋ ಸ್ವಾಮಿಗಳಿಗೆ ವಾಮಾಚಾರಿಗಳು ಅಂತಾರೆ ನೋಡಪಾ....ಸದಾಚಾರಿ ಸ್ವಾಮಿಗಳು ನಾನ್-ವೆಜ್ ತಿನ್ನೋದಿಲ್ಲ, ಹೆಂಡ ಕುಡಿಯೋದಿಲ್ಲ, ಸೆಕ್ಸ್ ಇಂದಾ ದೂರ. ವಾಮಾಚಾರಿಗಳು ಇದೆಲ್ಲವನ್ನೂ excess ಮಾಡ್ತಾರ್ ನೋಡಪಾ.....ಅಂತ ಅಂದು  ಎಷ್ಟು ಅರ್ಥ ಆಗಿರಬೋದು ಅಂತ ಮಾರಿ ನೋಡಿದೆ ಕರೀಮಂದು.

ತಲಿ ಕೆರಕೊತ್ತ ಕೇಳಿದ ಕರೀಂ.

ಸಾಬ್....ಈ ವಾಮಚಾರಿ ಮಂದಿಗೆ ಮತ್ತೆ ರಾಮಾಚಾರಿಗೆ ಏನಾರಾ ರಿಷ್ತಾ ಐತೆ  ಕ್ಯಾ?...ಅಂದ ಕರೀಂ.

ಯಾವ್ ರಾಮಾಚಾರಿನೋ.....? ಅಂತ ಸ್ವಲ್ಪ irritate ಆಗಿ ಕೇಳಿದೆ.

ಅದೇ ಸಾಬ್....ರವಿಚಂದ್ರನ್ ಸಿನಿಮಾ ಸಾಬ್....ರಾಮಾಚಾರಿ ಅಂತ ಬಂದಿತ್ತು ಅಲ್ಲಾ ಸಾಬ್?....ಅಂದ.

ಏ .........ಮಂಗ್ಯಾನ್ ಕೆ.....ಬೇಕಂತ ಉಲ್ಟಾ ಪುಲ್ಟಾ ಕೇಳ್ತಿ ಏನ? ಸೊಕ್ಕೇನು ಮುಕ....ಅಲ್ಲ ಮೈಯ್ಯಾಗಾ?....ಅಂತ ಝಾಡಿಸಿದೆ ಮಂಗ್ಯಾನ್ ಕೇ ಗೆ.

ಗುಸ್ಸಾ ನಕೋ ಕರೋಜಿ....ಹೇಳಿ...ಹೇಳಿ....ತಂತ್ರಾದ ಬಗ್ಗೆ...ವಾಮಾಚಾರಿ ಬಗ್ಗೆ....ಆಗೇ ಬೋಲೋಜಿ .....ಅಂದ ಕರೀಂ.

ಕರೀಮಾ....ನೋಡಪಾ..ವಾಮಾಚಾರ ಶಬ್ದದ ಲಿಟರಲ್ ಮೀನಿಂಗ್ ಅಂದ್ರ 'ಎಡಗೈಯ್ಯಿಂದ ಮಾಡೋ ಕೆಲಸ' ಅಂತ....ಡೆಫಿನಿಶನ್ ಕೊಟ್ಟೆ.

ಎಲ್ಲಾರೂ  ಎಡಗೈಯ್ಯಿಂದ ಮಾಡೋ ಕೆಲಸ ಇದ್ದೇ ಇರ್ತದೇ  ಸಾಬ್....ಅವರೆಲ್ಲಾ ವಾಮಚಾರಿ ಆಗ್ತಾರೆ ಕ್ಯಾ?....ಅಂತ ಕುಹಕ ನಗಿ ನಕ್ಕೋತ್ತ ಅಧಿಕಪ್ರಸಂಗಿತನ ಮಾಡಿದಾ ಕರೀಂ.

ಸುಮ್ಮನಾ ಕೇಳಪಾ ....ಆ ಕೆಲಸಾ ಒಂದಾ ಬಲಗೈಯ್ಯಾಗ್ ಮಾಡಿ ಸದಾಚಾರಿ ಹಾಂಗ್ ಇರೋ ರೊಡ್ಡ ಮಂದಿ ಇರ್ತಾರ್...ಅಂತ ಕಟ್ ಮಾಡಿದೆ. ಅವನ ಮಾತ್ ಕೇಳಿ ನಗು ಮಾತ್ರ ಬಂದಿದ್ದ ಖರೆ.

ನೋಡಪಾ ಕರೀಂ....SSLC ವಳಗ magnetism ಕಲತಿದ್ದ ನೆನಪ ಅದ ಏನ? NT ಮಾಸ್ತರ್ ಹ್ಯಾಂಗ ಹೇಳಿದ್ರು? ನೆನಪ ಮಾಡಿಕೊಂಡು ಹೇಳಪಾ....ಅಂತ ಕೇಳಿದೆ.

ನೆನಪ ಅದೆ ಸಾಬ್.....NT ಮಾಸ್ತರ್ ಒಂದು ಮಾಗ್ನೆಟ್, ಒಂದು ಆರ್ಡಿನರಿ ಕಬ್ಬಣ ಪೀಸ್ ತಂದು, ಮಾಗ್ನೆಟ್ ನಿಂದ ಕಬ್ಬಿಣ ತಿಕ್ಕಿದ್ದ್ರು.....ಮ್ಯಾಲಿಂದ ಕೆಳವರೆಗೂ ತಿಕ್ಕಿದರು....ಜೋರಾಗಿ ಫೋರ್ಸ ಹಾಕಿ ಹಾಕಿ ತಿಕ್ಕಿದರು....ಆ ಮ್ಯಾಲೆ ಆ ಕಬ್ಬಿಣ ಪೀಸ್ ಸಹಿತ ಮಾಗ್ನೆಟ್ ಆಯಿತು....ಟೆಂಪೊರರಿ ಮಾಗ್ನೆಟ್ ಆಯಿತು.....ಅಂತ ಹೇಳಿ ಕರೀಂ ನನ್ನ impress ಮಾಡಿದ.

ಗುಡ್....ಸಾಬ್ರಾ.....ಮಸ್ತ ನೆನಪ ಇಟ್ಟ ಹೇಳಿದ್ರಿ ನೋಡ್ರಿ. ನಿತ್ಯಾನಂದ ಸ್ವಾಮಿಗಳೂ ಇದನ್ನ ಮಾಡಿರಬಹುದು. ಅವರು ಭಾಳ ಸಾಧನಾ ಮಾಡಿ ಮಾಗ್ನೆಟ್ ಆಗಿ ಬಿಟ್ಟಿರಬಹುದು. ಅದಕ್ಕ ಎಲ್ಲರೂ ಅವರಿಗೆ attract ಆಗ್ತಾರ್ ನೋಡಪಾ. ಅದರಾಗ ಸ್ವಾಮಿಗಳದ್ದು ಏನು ತಪ್ಪು? ತಂತ್ರ, ವಾಮಾಚಾರದಾಗ ಅದಕ್ಕ ಓಕೆ ಅದ. ಹೆಂಗಸೂರು, ಗಂಡಸೂರು ತಾವೂ ಮಾಗ್ನೆಟ್ ಆಗ್ಬೇಕ್ ಅಂತ ಅವರ ಕಡೆ ಬಂದು  ತಿಕ್ಕಿಸಿಕೊಂಡು, ಸ್ವಾಮಿಗಳಿಗೂ ತಿಕ್ಕಿ, ಅವರು ಕೊಟ್ಟ ಅವರ ಸ್ವಂತದ ಪಂಚಾಮ್ರತ ಕುಡದು, ತಾವೂ ಸ್ವಲ್ಪ ಮೋಕ್ಷದ ಫೀಲಿಂಗ್ ಅನುಭವಿಸಿದರ ಏನ ತಪ್ಪ ಅದನೋ?.....ಅಂತ ತಂತ್ರದ ಕ್ರಿಯಾ ಬಗ್ಗೆ ಹೇಳಿದೆ.

ಸಾಬರು ಗಹನ ವಿಚಾರದಲ್ಲಿ ಮುಳಗಿದರು.

ಹೌದು....ನೋಡಿ ಸಾಬ್...ಇದು ಸಾಧ್ಯ ಇದ್ದರೂ ಇರಬಹುದು....ಅಂತ ಹೇಳಿದ ಕರೀಂ.

ಆದ್ರೆ ಒಂದು ಡೌಟ್  ಸಾಬ್......ಒಬ್ಬ ವಾಮಾಚಾರಿ ಸ್ವಾಮಿ ಎಷ್ಟು ಮಂದಿಗೆ ಮಾಗ್ನೆಟ್ ಮಾಡಬಹದು ಸಾಬ್?....ಅಂತ ಕೇಳಿದ ಕರೀಂ.

ಅದೆಲ್ಲಾ ಮಾಗ್ನೆಟ್ ನಲ್ಲಿ ಎಷ್ಟು ಪವರ್ ಅದ ಅದರ ಮ್ಯಾಲೆ ಡಿಪೆಂಡ್ ನೋಡಪಾ....ಅಂದೆ.

ಸಾಬ್....ಈ ಸ್ವಾಮಿ ಮಂದಿ ಕಡೆ ಅಷ್ಟು ಪಾವರ್ ಎಲ್ಲಿಂದ ಬರ್ತದೆ ಸಾಬ್....? ನಮಗೆ ಒಂದು ಬೇಗಂ, 2-3 ಸ್ಟೆಪ್ನಿ ಡಾವ್ ಮೆಂಟೇನ್ ಮಾಡೋಕೆ ಆಗೋದಿಲ್ಲ....ಈ ನಿತ್ಯಾ ಸ್ವಾಮಿ ಅದೆಷ್ಟು ಮಂದಿ ಹೆಂಗಸೂರ್ಗೆ ಮಾಗ್ನೆಟ್ ಮಾಡ್ತಾರೆ ಸಾಬ್...ಅದೂ ತಿಕ್ಕಿ ತಿಕ್ಕಿ....ಅಂತ ಡೌಟ್ ತೋರ್ಸಿದಾ ಕರೀಮ್ .

ನೋಡಪಾ....ಕರೀಂ....ನಿನಗ ಒಂದ ಸಿಂಪಲ್ ಎಕ್ಸಾಂಪಲ್ ಕೊಟ್ಟ ಹೇಳಿಕೊಡ್ತೆನಿ ನೋಡಪಾ....ನಿಮ್ಮ ಮನಿವಳಗ ನೀರು ಎಲ್ಲಿಂದ ಬರ್ತದ?

ಸಾಬ್...ನೀರಸಾಗರ್ನಿಂದ ಸಾಬ್..ಅಲ್ಲಿಂದ 5th ಕ್ರಾಸ್ ನಲ್ಲಿ ಇರೋ, ನೆಲದಿಂದ ಭಾಳ ಎತ್ತರದಲ್ಲಿ ಕಟ್ಟಿರೋ  ದೊಡ್ಡ ಟ್ಯಾಂಕ್ ಗೆ  ನೀರ್ ಪಂಪ್ ಮಾಡಿರ್ತಾರೆ....ಅಷ್ಟು ಎತ್ತರದಲ್ಲಿ  ಇರೋದ್ರಿಂದ, ಅದು ಗ್ರಾವಿಟಿ ಉಪಯೋಗಿಸಿಕೊಂಡು, ಆ ಗ್ರಾವಿಟಿ ಫೋರ್ಸನಿಂದ ಇಡೀ ನಮ್ಮ ಏರಿಯಾಕ್ಕೆ ನೀರ್ supply ಆಗ್ತದೆ...ಸಾಬ್....ಅಂತ ಪರ್ಫೆಕ್ಟ್ ಉತ್ತರ ಕೊಟ್ಟ.

ಮಸ್ತ ಉತ್ತರ ಕರೀಂ....ಭಾಳ್ ಶಾಣ್ಯಾ ಇದ್ದಿ....ಇದ ಥೇರಿ ನೋಡಪಾ....ಸ್ವಾಮಿ ಮಂದಿನೂ ಹಾಂಗ ತಮ್ಮಲ್ಲಿ ಇರೋ ಬರೋ ಪವರ್ ಎಲ್ಲ ತಮ್ಮ ಯೋಗಶಕ್ತಿ, ವರ್ಷಗಟ್ಟಲೆ ಮಾಡಿದ ಸಾಧನೆ ಎಲ್ಲದರಿಂದ ಸೀದಾ ತೊಗೊಂಡು ಹೋಗಿ ನೆತ್ತಿ ಹತ್ತರ ಇಟ್ಟಿರ್ತಾರ್....ನಮ್ಮ ಎತ್ತರದಲ್ಲಿ ಇರೋ ದೊಡ್ಡ ವಾಟರ್ ಟ್ಯಾಂಕ್ ಕಾನ್ಸೆಪ್ಟ್....ಸೇಮ್ ಟು ಸೇಮ್....ಅವರದ್ದು ಎಲ್ಲಾ ಶಕ್ತಿ ನೆತ್ತಿ ವಳಗ ಇರೋದಕ್ಕ ಅವರೂ ಭಾಳ್ ಮಂದಿಗೆ  ಸರ್ವೀಸ್ ಮಾಡ್ಲಿಕ್ಕೆ ಸಾಧ್ಯ ಅದ ನೋಡಪಾ....ನಿನ್ನಂತ ಮಂದೀದು ಪವರ್ ಮೊದಲಾ ಕಮ್ಮಿ...ಅದೂ ನೆತ್ತಿ ಬಿಡು....ದಿಲ್ ಕೆ ಪಾಸ್ ಭಿ ಇರೋದಿಲ್ಲ....ಹಾಂಗಾಗಿ ನಿನಗ  ಒಂದು ಬೇಗಂ, 2-3 ಸ್ಟೆಪ್ನಿ ಸರ್ವೀಸ್ ಮಾಡೋದ್ರಾಗ ಹರೋಹರ ಆಗಿಬಿಡ್ತದ ನೋಡಪಾ....ಅಂತಾ ಅವನಿಗೆ ತಿಳಿಯೋ ಹಾಂಗ ಹ್ಯಾಂಗ ಕುಂಡಲಿನಿ energy ಸೀದಾ ನೆತ್ತಿಗೆ ಹೋಗಿ ಓಜಸ್ ಆಗೋದನ್ನ ವಿವರಿಸಿದೆ.

ಕರೀಂ....ಫುಲ್ impress ಆಗಿದ್ದ. ಮಾರಿ ಮ್ಯಾಲೆ ಭಾಳ್ ಪ್ರಶ್ನೆ ಇದ್ದಾಂಗ್ ಕಾಣಿಸ್ತು.

ಸಾಬ್....ನೆತ್ತಿಗೆ ಹ್ಯಾಂಗೆ ಪವರ್ ಕಳ್ಸೋದು...ಸಾಬ್....ಬೇಗಾ ಕಲಿಸಿಕೊಡಿ ಸಾಬ್....ನಮ್ಮದೂ ಪವರ್ ನೆತ್ತಿಗೆ ಹೋಗಿ ಒಮ್ಮೆ ಸೆಟಲ್ ಆಗ್ಲಿ ಸಾಬ್....ಆ ಮ್ಯಾಲೆ ನೋಡಿ ಸಾಬ್....ನಾವು ಅಕ್ಬರ್ ಬಾದಶಾ  ಆಗ್ತೇವಿ....ಅಂತ ಉತ್ಸುಕತೆ ತೋರಸಿದ.

ಏನ ಅಕ್ಬರ್ ಬಾದಶಾ??????....ಅಂತ ಕೇಳಿದೆ.

ಗೊತ್ತಿಲ್ಲ ಕ್ಯಾ ಸಾಬ್.......? ಅಕ್ಬರ್ ಬಾದಶಾ ಹಾರೆಮ್ ನಲ್ಲಿ ಸಾವಿರಾರು ಬೇಗಂ ಇದ್ದರಂತೆ....ಆದ್ರೂ ಅವರಿಗೆ ಹರ ಪೂನಂ ಕೆ ರಾತ್ ಬಾಜೂನಲ್ಲಿ ಒಂದು ಹೊಸ ಪ್ಯೂರ್ ಕನ್ಯಾ ಪಟಾಕಾ ಫಿಗರ್  ಬೇಕಾಗಿತ್ತಂತೆ....ಅಂತಾ ಲೆಜೆಂಡ್ ಹೇಳಿದ.

ಲೇ....ಮಂಗ್ಯಾನ್ ಕೆ...ಅಂತಾ ಹೊಲಸ್ ಹೊಲಸ್ ಉದ್ದೇಶ ಇಟ್ಟಗೊಂಡ ಸಾಧನಾ ಮಾಡ್ಲಿಕ್ಕೆ ಹೋದ್ರ ಯಾವದೂ ಸಿದ್ಧಿ ಆಗೋದಿಲ್ಲ....ಏನರ ಅಕಸ್ಮಾತ್ ಆದರೂ, ಆ ಸಿದ್ಧಿ ಎಲ್ಲಾ ಅವರೀಗೆ ಉಲ್ಟಾ ಹೊಡದ, ರಕ್ತಾ ಕಾರ್ಕೊಂಡ ಸತ್ತ ತಾಂತ್ರಿಕ್ ಮಂದಿ ಕಥಿ ಬೇಕಾದಷ್ಟ ಅವ....ಸಾಧನಾ ಮಾಡೋದಾ ಆದ್ರ  ಸದಾಚಾರಿ ಸ್ವಾಮೀ ಮಾಡೋಹಾಂಗ ಮಾಡಿದ್ರ ನಿನಗೂ ಚೊಲೋ...ಎಲ್ಲರಿಗೂ ಚೊಲೋ ನೋಡಪಾ....ಅಂತ ಅವನ ಗಲತ್ ವಿಚಾರ ಸರಣಿಗೆ ಬ್ರೇಕ್ ಹಾಕಿದೆ.

ತಿಳೀತು ಸಾಬ್....ನೀವು ಹೇಳೋದು ಸರಿ ಅದೆ...ನಾವು ಸ್ಪೆಷಲ್ ಪವರ್ ಗಲತ್ ಉಪಯೋಗ ಮಾಡಬಾರದು. ಮತ್ತೆ ನಿತ್ಯಾ ಸ್ವಾಮಿ ಮಾಡಿದ್ದು ....?....ಅಂತ ಪಾಯಿಂಟ ಹಾಕಿದ.

ನೋಡಪಾ....ನಿತ್ಯಾನಂದರು ತಿಕ್ಕಿದ್ದು, ಮುಕ್ಕಿದ್ದು, ಲಿಕ್ಕಿದ್ದು ಯಾತಕ್ಕ ಅಂತ ನಮಗ ಗೊತ್ತಿಲ್ಲ. ತಂತ್ರದಾಗ ಗುರುಗೆ ಶಿಷ್ಯರ ಜೊತಿ ಎಲ್ಲದನ್ನೂ ಮಾಡೋ ಪ್ರಿವಿಲೇಜ್ ಇರ್ತದ ಅಂತ ಕೇಳೇನಿ. ಶಿಷ್ಯರೂ ಸಹ ಅದನ್ನ ಅರ್ಥ ಮಾಡಿಕೊಂಡ ಮ್ಯಾಲೇ, ಅದು ತಮಗ ಬೇಕು ಅನ್ನಿಸಿದ ಮ್ಯಾಲೇನ ಗುರುವಿನ ಜೊತಿ ಅಂತಾ ತಾಂತ್ರಿಕ ಕ್ರಿಯೆಗಳಲ್ಲಿ ಭಾಗಿ ಆಗ್ತಾರ್ ಏನಪಾ. ಹೀಂಗ ಇದ್ದಾಗ...ನಿತ್ಯಾನಂದರು ಮಾಡಿದ್ದು ಬಿಲ್ಕುಲ್ ತಪ್ಪು ಅಂತ ಹೇಳಲಿಕ್ಕೆ ಬರೋದಿಲ್ಲ. ಆದ್ರ ಅವರ ಒಳಗಿನ ಉದ್ದೇಶ ಏನಿತ್ತು? ಅದು ಅವರಿಗೆ ಮಾತ್ರ ಗೊತ್ತು...ಶಿಷ್ಯಾರಿಗೆ ಮೋಕ್ಷಾ ಕೊಡೋದಿತ್ತೋ ಅಥವಾ ಸ್ವಂತಕ್ಕ ಆನಂದ ಪಡೋದಿತ್ತೋ ...ಅಥವಾ ಎರಡೂ ಇತ್ತೋ?.....ಏನಂತಿ?......ಅಂತ ಕೇಳಿದೆ.

ಹೌದು....ಹೌದು...ಸಾಬ್......ನಾವು ಓಪನ್ ಮೈಂಡ್ ಇಟ್ಟಗೋಬೇಕು....ಅಂದ ಕರೀಂ.

ಸಾಬ್.....ಒಂದು ಬಾತ್....ಅದು ನೆತ್ತಿಗೆ ಹೋಗಿ ಕೂಡೋ ಪವರ್ ಗೆ ಲೀನಾಕುಂಡಿ ಪವರ್ ಅಂತಾರೆ ಅಲ್ಲಾ....ಕ್ಯಾ? ....ಅಂತಾ ಅಂದು inevitable ಬಾಂಬ್ ಹಾಕೇ ಬಿಟ್ಟ.

ಲೇ.....ಮಂಗ್ಯಾನ್ ಕೆ....ಕತ್ತೀ ಕೆ.....ಅದು ಲೀನಾಕುಂಡಿನೂ ಅಲ್ಲಾ, ಯಕ್ಕುಂಡಿನೂ ಅಲ್ಲಾ, ಮುರಕುಂಡಿನೂ, ಬಳಗುಂಡಿನೂ  ಅಲ್ಲ....ಅವೆಲ್ಲಾ ಕುಂಡಿ ಅನಲಿಕ್ಕೆ ಅದೇನ್ ಯಾರದರ ಧಾರವಾಡ್ ಕಡೆ ಮಂದಿ  ಅಡ್ಡಹೆಸರು ಅಂತ ಮಾಡಿ ಏನ.....? ಮಳ್ಳ ಸೂಳಿ ಮಗನ....ಅಂತ ಪ್ರೀತಿಯಿಂದ ಬೈದೆ. ನಗು ಮಾತ್ರ ಭಾಳ ಬಂತು.


ಅಪ್ಪಾ....ಅದು ಕುಂಡಲಿನಿ ಶಕ್ತಿ....ಅಂತ ಮಾರಾಯ.....ಯಾರಿಗಾದ್ರೂ ಹೋಗಿ ಮತ್ತೇನರ ಹೇಳಿ ಹೊಡಿಸ್ಕೋ ಬ್ಯಾಡ....ಅಂದೆ

ಆದ್ರೆ ಸಾಬ್....ನಾವು ಹೇಳಿದ್ದರಲ್ಲಿ ಪಾಯಿಂಟ ಇದೆ ಸಾಬ್....ಫುಲ್ ಗಲತ್ ಇಲ್ಲಾ ಸಾಬ್....ಅಂತ ಡಿಫೆಂಡ್ ಮಾಡಿಕೊಂಡ.


ಏನ ಕರೆಕ್ಟ್ ಅದ....?....................ಅಂತ ಝಾಡಿಸಿದೆ.

ಅಲ್ಲಾ ಸಾಬ್...ನಮಗೆ ಗೊತ್ತಿಲ್ಲ ಕ್ಯಾ? ಅದು ಕುಂಡಿಲೀನಾ ಪವರ್ ಮೂಲ ಇರೋದು ಕುಂಡಿ ಸುತ್ತಾಮುತ್ತಾನೆ.... ನಮಗೇನು ಗೊತ್ತಿಲ್ಲಾ ಕ್ಯಾ ಸಾಬ್? ಅಲ್ಲಿ ಮೂಲ ಇರೋ ಪವರ್ ಅದು. ಜೊತಿಗೆ ಯಾರೋ ದೇವಿ ಚಿತ್ರಾ ಬ್ಯಾರೆ ಇತ್ತು. ಅದಕ್ಕೇ ಆ ದೇವಿ ಹೆಸರು ಲೀನಾ ಏನೋ ಅಂತ ಮಾಡಿ ಬಿಟ್ಟಿ ನಾನು ಲೀನಾಕುಂಡಿ ಅಂತ ಅಂದಿದ್ದು....ಸುಮ್ಮ ಸುಮ್ಮ ಬೈತೀರಿ ಅಲ್ಲಾ ನೀವು?....ಅಂತ ರಿವರ್ಸ್ ಶಾಟ್ ಕೊಟ್ಟ.

ಕುಂಡಿಲೀನಾ  ಅಲ್ಲೋ ಮಾರಾಯ.....ಕುಂಡಲಿನಿ......ಕುಂಡಲಿನಿ......ಕುಂಡಲಿನಿ.....

ಇರಲಿ....ಇನ್ನೊಂದಾ ಪಾಯಿಂಟ ಲಗೂನ ಹೇಳಿ ಮುಗಸ್ತೇನಿ....ಬ್ಯಾರೆ ಕೆಲಸ ಅದ ನನಗ.....

ಹೇಳಿ ಸಾಬ್....ಹೇಳಿ ಸಾಬ್...

ನೋಡಪಾ....ಕುಂಡಲಿನಿ ಶಕ್ತಿ ಅಲ್ಲೆ ಬುಡದ ಬುಡಕ್ಕ ಇರೋದನ್ನ, ಬೆನ್ನಹುರಿ ನಡು ಇರೋ ಪೈಪಿನ್ಯಾಗ ಸಾವಕಾಶ್ ಏರೀಸ್ಕೊತ್ತ ಹೋದ್ರ....ಭಾಳ ವರ್ಷ ಆದ ಮ್ಯಾಲೆ ನೆತ್ತಿ ಮುಟ್ಟತದ ನೋಡಪಾ....ಆದ್ರ ನೆನಪ ಇಟ್ಟಿರ....ನಡುವಿನ ಪೈಪಿನ್ಯಾಗ ಏರಿಸಬೇಕು ಮತ್ತ....ಲೆಫ್ಟ್, ರೈಟ್ ಪೈಪಿನ್ಯಾಗ ಅದು already ಕಂಟ್ರೋಲ್ ಇಲ್ಲದ ಹರಕೋತ್ತ ಇರ್ತದ....ಹಾಂಗ್ ಅಸಡಾ ಬಸಡಾ ಹರಕೋತ್ತ ಇರೋದಕ್ಕಾ ನಾವ್ ನಾವಿದ್ದಂಗಾ ಇದ್ದೇವಿ....ಸ್ವಾಮಿಗಳು ಸ್ವಾಮಿಗಳಾಂಗ ಇರ್ತಾರ್. ತಿಳಿತಾ?

ಸಾಬ್...ಆ ನಡುವಿನ ಪೈಪ್ ಇರ್ತದೋ ಅಥವಾ ಪ್ಲಂಬರ್ ಕರ್ಸಿ ಹಾಕಿಸ್ಕೋಬೇಕೋ .....? ಅಂತಾ ಕನಫೂಸ್ ಲುಕ್ ಕೊಟ್ಟ.

ಇನ್ನ ಇವಂಗ ಸುಶುಮ್ನ ನಾಡಿ ಬಗ್ಗೆ ಮತ್ತ ಯಾವಾಗರ ಹೇಳಿದ್ರಾತು ಅಂತ ಮಾಡಿ.....

ಸಾಬ್ರಾ......ಮುಂಜಾನಿನಿಂದ ಕೆಲಸ ಮಾಡಿಲ್ಲ....ನಿಮ್ಮ ಜೊತಿ ಹರಟಿ ಹೊಡಕೊತ್ತ ಕೂತೇನಿ....ನಮ್ಮ ಬಾಸನ ಕುಂಡಲಿನಿ ಎಲ್ಲಿ ಹೋಗಿ ಮುಟ್ಟ್ಯದೋ.....? ಖುದಾ ಹಾಫಿಜ್ ಸಾಬರ....ಸಿಗ್ತಾ ಇರ್ರಿ ಮತ್ತ....ಬರ್ಲಿ ಈಗ?

ಓಕೆ...ಸಾಬ್....ಹೋಗಿ ಬರ್ರಿ....ನೋಡಿಕೊಂಡ ನಿಮ್ಮದು ಕುಂಡಾಲೀನಾ ಪವರ್ ಏರ್ಸೀ ನೀವು ....ಆ ಮ್ಯಾಲೆ ನೀವೂ ಕಳ್ಳ ಸ್ವಾಮಿ ಆಗಿ ಬಿಟ್ಟೀರಿ ಮತ್ತೆ....ಅಂತ ಮೈಲ್ಡ್ ಆಗಿ ಕಿಚಾಯಿಸಿ ಬೀಳ್ಕೊಟ್ಟ ಕರೀಂ.

Wednesday, June 27, 2012

ಹೇಸರಗತ್ತೆ ಸಾಬರಿಗೆ ಹಲಸಿನಕತ್ತೆ ಎಂಬ ಬಿರುದಾ?


ಕರೀಂ ಸಾಬರು ಯಾಕೋ ಮ್ಲಾನವದನರಾಗಿ ಬರ್ಲಿಕತ್ತಿದ್ದರು.

ಸಾಬ್ರಾ....ಸಲಾಂರೀಪಾ.....ಯಾಕೋ ಡೌನ್ ಆದಂಗ ಇದ್ದೀರಲ್ಲಾ? ಯಾಕ? ಮೈಯಾಗ್ ಆರಾಮ್ ಇಲ್ಲೇನು?....ಅಂತ ಕೇಳಿದೆ.

ಇಲ್ಲಾ ಸಾಬ್....ಎಲ್ಲಾ ಆರಾಮ ಅದೆ. ಮನಸ್ಸಿಗೆ ಬೇಜಾರ್ ಆಗಿದೆ....ಅಂದ್ರು ಕರೀಂ ಸಾಬರು.

ಯಾಕಪಾ ದೋಸ್ತಾ......? ತಲಿಗೆ ಹಚ್ಚಿಗೊಂಡರೂ ಮನಸ್ಸಿಗೆ ಹಚ್ಚಿಗೊಬಾರದ್ರೀ.....ಚಿಯರ್ ಅಪ್ ಸರ್ರ...ಏನಾತು?

ಸಾಬ್....ಆ ಹಡಬಿಟ್ಟಿ ಬ್ಯಾಂಕನವರು ನನ್ನಾ ಸಾಲದ್ದು ಆಪ್ಲಿಕೇಶನ್ ರಿಜೆಕ್ಟ್ ಮಾಡಿದರು ಸಾಬ್....ಅಂದಾ ಕರೀಂ.

ಹೋಗ್ಗೋ...ಅದಕ್ಕ ಇಷ್ಟ ಬ್ಯಾಸರನಾ ? ಹೋಗ್ಲಿ ಬಿಡ್ರಿ ...ಆ ಬ್ಯಾಂಕ್ ಅಲ್ಲದಿದ್ದರಾ ಇನ್ನೊಂದು ಬ್ಯಾಂಕಿನ್ಯಾಗ ಸಾಲ ಸಿಗ್ತದ ತೊಗೊರೀ.....ಅಂತ ಸಾಬರನ್ನ ಚಿಯರ್ ಅಪ್ ಮಾಡೋ ಪ್ರಯತ್ನ ಮಾಡಿದೆ.

ಸಾಬ್....ಸಾಲಾ ರಿಜೆಕ್ಟ್ ಆಯಿತು ಅಂತಾ ಬೇಸರ ಇಲ್ಲಾ ಸಾಬ್....ಅಲ್ಲಿನ ಮ್ಯಾನೇಜರ್ ನನಗೆ "ಹಲಸಿನಕತ್ತೆ" ಅಂತ ಬೈದು ಹೊರಗೆ ಹಾಕ್ಸಿದಾ ಸಾಬ್....ಅದು ಭಾಳ್  ಬೇಸರ ಆಯಿತು.....ಅಂತ ಬೇಜಾರಿನಿಂದ ಮಾತ್ ನಿಲ್ಲಸಿದ ಕರೀಂ.

 "ಹಲಸಿನಕತ್ತೆ"!!!!!!!!!!!!!!!!!! "ಹಲಸಿನಕತ್ತೆ"...............ಏನಿದು? ಎಂದೂ ಕೇಳದ ಪದ.

ಸಾಬ್ರಾ......ಏನ್ರೀ ಇದು....."ಹಲಸಿನಕತ್ತೆ" ಅಂದ್ರಾ?.....ತಿಳಿವಲ್ಲತು. ಸ್ವಲ್ಪ ಬಿಚ್ಚಿ ಹೇಳ್ರಪಾ ...ಅಂತ ಅಂದೆ.

ಸಾಬ್....ನಾನು ನನ್ನ ಬಿಜಿನೆಸ್ಸ ಪ್ಲಾನ್ ತೊಗೊಂಡು  ಲೋನ್ ಗೆ ಅಪ್ಲೈ ಮಾಡಿದೆ. ನನ್ನ ಬಿಜಿನೆಸ್ಸ ಪ್ಲಾನ್ ನೋಡಿ ಅಂಡು ಬಡಕೊಂಡ ನಕ್ಕಾ ಆ ಮೇನೇಜರ್ ನಮಗೆ ಮೊದಲು "ಝಾಕಾಸ್" ಅಂತ ಅಂದ....ಸಾಬ್.....ಅಂತ ಮಾತ್ ನಿಲ್ಲಿಸಿದ ಕರೀಂ.

ಸಾಬ್ರಾ.... ಝಾಕಾಸ್ ಅಂದ್ರ ನಿಮ್ಮಾ ಭಾಷಾದಾಗ 'ಮಸ್ತ' , ರಾಪಚಿಕ್ ಅಂತ ಅಲ್ಲೇನು? ಬಿಯರ್ ಬಾರ್ ಭೂದೇವಿ, ಶ್ರೀದೇವಿ ಗಳಿಗೆ ನೀವು ಮತ್ತ ನಿಮ್ಮ ದೋಸ್ತರು ಝಾಕಾಸ್, ರಾಪಚಿಕ್, ಐಟಂ, ಬಾಂಬ್, ಮಾಲ್ ....ಅದು ಇದು ಅಂತ ಅನ್ನಕೋತ್ತ ಇರತಿದ್ದರಿ.....ಆ ಮಂಗ್ಯಾ ಮೇನೆಜರ್ಗೂ ನೀವು ಯಾರೋ ಬಿಯರ್ ಬಾರ್ ಸುಂದರಾಂಗ ಕಂಡಂಗಾ ಕಂಡಿರಬೇಕು. ಅದಕ್ಕ ನಿಮಗ ಝಾಕಾಸ್ ಅಂದಾನ್.....ಅಂತ ಎಕ್ಸಪಾಂಡ ಮಾಡಿದೆ.

ನಾನೂ ಹಾಂಗೆ ತಿಳ್ಕೊಂಡೆ ಸಾಬ್.....ಝಾಕಾಸ್ ಅಂತಾನೆ....ಅದಕ್ಕೆ ನಾನು ಶುಕ್ರಿಯಾ ಸಾಬ್ ಅಂದೆ ಅವನಿಗೆ....ಅವನಿಗೆ BP ಜಾಸ್ತಿ ಆಗಿ.....ನಿಮಗೆ ಝಾಕಾಸ್ ಅಂದ್ರೆ ಗೊತ್ತಿಲ್ಲ....?ತಡೀರಿ ನಿಮಗೆ ಕನ್ನಡಲ್ಲೇ ಬೈತೀನಿ ಅಂತಾ ತಲಿ ಕೆರಕೊಂಡು ಹುಡ್ಕಿ ಹುಡ್ಕಿ "ಹಲಸಿನಕತ್ತೆ" ಅಂತಾ ಶಬ್ದ ಆರ್ಸಿ ಬೈದು ಬಿಟ್ಟಾ ಸಾಬ್....ಅಂತ ಕರೀಂ ದುಃಖ ತೋಡಿಕೊಂಡ.

ಝಾಕಾಸ್  ಗೆ ಕನ್ನಡ ಶಬ್ದ ಹಲಸಿನಕತ್ತೆ.....ನನಗಂತೂ ತಿಳಿಲಿಲ್ಲ.

ಕರೀಂ ಸಾಬ್ರಾ.....ಏನಿತ್ತು ನಿಮ್ಮ ಬಿಜಿನೆಸ್ಸ್ ಪ್ಲಾನ್? ಸ್ವಲ್ಪ ಹೇಳ್ರಿ.....ಅಂದೆ.

ಸಾಬ್....ನಾವು ಹೇಸರಗತ್ತೆ ಬಿಜಿನೆಸ್ಸ್ ಮಾಡಬೇಕು ಅಂತ ಮಾಡಿದ್ವಿ ಸಾಬ್.....ಅಂತ ಹೊಸಾ ಬಾಂಬ್ ಹಾಕಿದ ಕರೀಂ.

ಹೇಸರಗತ್ತೆ ಬಿಜಿನೆಸ್ಸ್.....ಹಿಂದೆ ಯಾರೂ ಮಾಡಿರಲಿಕ್ಕೆ ಇಲ್ಲಾ....ಮುಂದೆ ಯಾರೂ ಮಾಡ್ಲಿಕ್ಕೆ ಇಲ್ಲ....ನಗು ಬಂತು.

ಕರೀಂ....ಏನು ಇದು  ಹೇಸರಗತ್ತೆ ಬಿಜಿನೆಸ್ಸ್?....ಸ್ವಲ್ಪ ವಿವರಿಸಿ ಹೇಳಪಾ.....ಅಂದೆ .

ಸಾಬ್....ನೋಡಿ....ನಾವು ಮೊನ್ನೆ ದುಬೈಗೆ ಹೋದಾಗ ಒಬ್ಬರು ಅಫ್ಘಾನಿ ಖಾನ್ ಸಾಬ್ ಸಿಕ್ಕಿದ್ರು ....ಅವರು ಈ ಐಡಿಯಾ ಕೊಟ್ಟರು....ಭಾಳ್  ಮುನಾಫಾ ಇರೋ ಬಿಜಿನೆಸ್ಸ್ ಸಾಬ್.

ಮುಂದ ಹೇಳ್ರೀಪಾ ....ಮಸ್ತಾ ಇಂಟರೆಸ್ಟಿಂಗ್ ಅದ.

ಸಾಬ್ ನೋಡಿ....ಅಫಾಘಾನಿಸ್ತಾನ್ ನಲ್ಲಿ ರೋಡ ಗೀಡ್ ಇರೋದಿಲ್ಲ.....ಎಲ್ಲಾ ಕಡೆ ಪಹಾಡೀ ರಾಸ್ತಾ. ಅಲ್ಲೇ  ಹೇಸರಗತ್ತೆನೇ  ಬೇಕು ಎಲ್ಲದಕ್ಕೆ. ಸಾಮಾನ್ ಸಾಗ್ಸೋಕ್ಕೆ....ಮಂದಿ ಸಾಗ್ಸೋಕ್ಕೆ....ಅದಕ್ಕೆ ಅಲ್ಲಿ ಅದಕ್ಕೆ ಅಷ್ಟು ಡಿಮಾಂಡ್. ಅಲ್ಲಿದು supply  ಸಾಕಾಗೋದಿಲ್ಲ. ಅದಕ್ಕೇ ಅವರು ಹೇಸರಗತ್ತೆ ಇಂಪೋರ್ಟ್ ಮಾಡಿಕೊತ್ತಾರೆ. ನಾವು ಆ ಬಿಜಿನೆಸ್ಸ್ ಮಾಡಿ ಮಾಲಾ ಮಾಲ್ ಆಗೋಣಾ ಅಂತಾ ಸಾಬ್.....ಅಂತ ಕರೀಂ ತನ್ನ ಬಿಜಿನೆಸ್ಸ್ ಪ್ಲಾನ್ ಶಾರ್ಟ್ ಆಗಿ ಹೇಳಿದ.

impressive ಬಿಜಿನೆಸ್ಸ್ ಪ್ಲಾನ್ ಅಂತಾ ಅನ್ನಿಸಿದ್ದು ಮಾತ್ರಾ ಖರೆ. ಆದರೂ ಇನ್ನು ಡೀಟೇಲ್ಸ ಬೇಕಿತ್ತು ಫುಲ್ ಪಿಕ್ಚರ್ ಸಲುವಾಗಿ.

ಅಲ್ಲರೀ ಸಾಬ್ರಾ..ಹ್ಯಾಂಗ ಹೇಸರಗತ್ತೆ ತಯಾರ್ ಮಾಡ್ತೀರಿ?....ಅಂದೆ.

ಒಳ್ಳೆ ಸವಾಲ್ ಸಾಬ್....ಆ ದುಬೈ ಖಾನ್ ಸಾಬ್ ನಮಗೆ ಎಲ್ಲ ಮಾಹಿತಿ ಕೊಟ್ಟಾರೆ. ನೋಡಿ ಹೇಸರಗತ್ತೆ ಮಾಡೋಕೆ ಬೇಕು - ಗಂಡು ಕತ್ತೆ ಮತ್ತು ಹೆಣ್ಣು ಕುದರೆ. ಅವು ಎರಡಕ್ಕೂ ಪ್ಯಾರ್ ಮಾಡೋಕೆ ಬಿಟ್ಟರೆ, ಅವರಾ ಸುಹಾಗ್ ರಾತ್ ಆದ್ರೆ, ಬರೋ ಬಚ್ಚಾನೆ ಹೇಸರಗತ್ತೆ ನೋಡಿ ಸಾಬ್. ಹೇಸರಗತ್ತೆ ಅಪ್ಪಾ ಅಬ್ಬಾಜಾನ್ ಕತ್ತೆ. ಅಮ್ಮಾ ಅಮ್ಮಿಜಾನ್ ಕುದರೆ.....ಅಂತ details ಕೊಟ್ಟ ಕರೀಂ.

ಓಹೋ....ಭಾರಿ ಅದ ಬಿಡ್ರಿ....ಆದ್ರ ನಿಮ್ಮ ಕಡೆ ವಯಸ್ಸಿಗೆ ಬಂದ ಗಂಡ ಕತ್ತಿ, ಹೆಣ್ಣ ಕುದರಿ ಎಲ್ಲ ಅವ ಏನು?....ಅಂದೆ.

ಐತೆ ಅಲ್ಲ ಸಾಬ್....ನೋಡಿಲ್ಲ ಕ್ಯಾ? ನಮ್ಮದು ಸವಣೂರ್ ನವಾಬರಾ ವಂಶ....ಅದರದ್ದು ಒಂದು ಹೆಣ್ಣು ಕುದರಿ ಅದೇ ನಮ್ಮ ಕೂಡ...ಆ ಮಾಳಮಡ್ಡಿ ಧೋಭಿ ಕತ್ತೆ ಸಾಲಕ್ಕೆ ನಮ್ಮ ಕಡೆ ರೊಕ್ಕ ತೊಗೊಂಡು, ತೀರಸಲಿಕ್ಕೆ ಆಗದೇ ಕತ್ತೇನಾ ನಮಗೆ ಕೊಟ್ಟಬಿಟ್ಟಿ ಓಡಿ  ಹೋದಾ....ಹಾಂಗಾಗಿ ಅದೂ ನಮ್ಮ  ಹತ್ರಾನೇ ಇದೆ....ಕುದ್ರಿ,ಕತ್ತಿ  ಬಾಜು ಬಾಜು ಇದ್ದು ಪ್ಯಾರ್ ಮೊಹಬ್ಬತ್ ಎಲ್ಲ ಆಗಿ ಬಿಟ್ಟಿದೆ. ಕೂಡೊಕೆ ಬಿಟ್ಟರೆ ಹೇಸರಗತ್ತೆ ರೆಡಿ ಸಾಬ್.....ಅಂತ ಎಕ್ಸೈಟ್ ಆಗಿ ಹೇಳಿದ ಕರೀಂ.

ಇದನೆಲ್ಲ details ಬಿಜಿನೆಸ್ಸ ಪ್ಲಾನ್ ನ್ಯಾಗ ಹಾಕಿದ್ರೋ ಇಲ್ಲೋ? ಇವೆಲ್ಲ  ಇಂಪಾರ್ಟಂಟ್ ....ಅಂತ ಕೇಳಿದೆ.

ಎಲ್ಲಾ ಹಾಕಿದ್ದೆ ಸಾಬ್....ಅವ ಮ್ಯಾನೇಜರ್ ಹೇಸರಗತ್ತೆ ಬಿಸಿನೆಸ್ಸ್ ಮಾಡೋಕೆ ನಿಮಗೆ ಸಾಲಾ ಕೊಟ್ಟರೆ ನೀವು ದಿವಾಳಾ ತೆಗೆದು ಬ್ಯಾಂಕ್ ಗೆ ನಾಮ ಹಾಕ್ತೀರಿ.....ನೀವು ಹೇಸರಗತ್ತೆ ಬಿಸಿನೆಸ್ಸ್ ಮಾಡೋರು ಒಳ್ಳೆ ಝಾಕಾಸ್ ನೋಡಿ ಅಂದ ಸಾರ್....

ನನಗೆ  ಝಾಕಾಸ್ ತಿಳಿಲಿಲ್ಲ ನೋಡಿ ಅದಕ್ಕೆ ಕನ್ನಡದಲ್ಲಿ ಹಲಸಿನಕತ್ತೆ ಅಂತಾ ಬೈದಾ ಸಾಬ್ ಆ ಹರಾಮಕೋರ್ ಮೇನೇಜರ್....ಅಂತ ಸಿಟ್ಟಿನಿಂದ ಹೇಳಿದ ಕರೀಂ.

ತಡೀರಿ ಸಾಬ್ರಾ ...ಪ್ರಾಬ್ಲೆಮ್ ಸಾಲ್ವ್ ಮಾಡೋಣು....ಸ್ಟೆಪ್ ಬೈ ಸ್ಟೆಪ್....ಅಂತ ಶುರು ಮಾಡಿದೆ.

ಹಲಸಿನಕತ್ತೆ.....ಹಲಸಿನ ಹಣ್ಣು ಅಂದ್ರ jack fruit. ಹಲಸಿನ ಕತ್ತೆ ಅಂದ್ರಾ......Jack Ass.....!!!!!

ಸಾಬ್ರ....ಹೇಸರಗತ್ತೆ ಬಿಸಿನೆಸ್ಸ್ ಮಾಡಲಿಕ್ಕೆ ಹೊಂಟ ನಿಮಗ ಅವ ಇಂಗ್ಲಿಷ್ ನ್ಯಾಗ ಕತ್ತಿ ಅಂತ ಬೈದ. ಹಾಪ್, ಬಡ್ದ ತಲಿ ಮಂದಿಗೆ ಇಂಗ್ಲಿಷ್ ನ್ಯಾಗಾ ಜ್ಯಾಕ್ಯಾಸ್  (Jackass ) ಅಂತ ಹೇಳೂದು ರೂಡಿ. ಅವ  ಮೇನೇಜರ್ ನಿಮಗಾ ಜ್ಯಾಕ್ಯಾಸ್  ಅಂದ್ರಾ ನೀವು ಝಾಕಾಸ್ ಅಂತ ತಿಳ್ಕೊಂಡು ನಕ್ಕೀರಿ. ಅವಂಗ ಉರದದ. ಅದಕ್ಕಾ ಹುಡುಕಿ ಹುಡುಕಿ ಟ್ರಾನಸ್ಲೆಟ್ ಮಾಡಿ ನಿಮಗ ಶುಧ್ಧ ಕನ್ನಡದಾಗ "ಹಲಸಿನಕತ್ತೆ" ಅಂತ ಬೈದು ಓಡಿಸಿದಾ.....ಅಂತ ಫುಲ್ ಎಕ್ಸಪ್ಲೇನೆಶನ್ ಕೊಟ್ಟೆ.

ಸಾಬ್ರ ಮುಖಾ ಮತ್ತೂ ಸಣ್ಣದಾತು.

ಕರೀಮಾ.....ಇರಲಿ ತೊಗೋಪಾ....ಆ ಮೇನೇಜರ್ ಅಂದಿದ್ದ ತಲಿಗೆ, ಮನಸ್ಸಿಗೆ, ಮತ್ತೊಂದಕಡೆ ಹಚ್ಚಿಗೊಬ್ಯಾಡಾ....ಬ್ಯಾರೆ ಏನರ ಬಿಸಿನೆಸ್ಸ್ ಮಾಡಿ ಅಂತಾ. ಅಲ್ಲಾ...ಒಂದ ಧೋಬಿ ಗಂಡ ಕತ್ತಿ, ಒಂದ ನಿಮ್ಮ ಸವಣೂರ್ ವಾಡೆ ಹೆಣ್ಣ ಕುದರಿ ಇಟ್ಟಗೊಂಡು, ಎಷ್ಟ ಹೇಸರ್ಗತ್ತಿ ಮಾಡಿ ಅಫಾಘಾನಿಸ್ತಾನಕ್ಕಾ export ಮಾಡ್ಲಿಕ್ಕೆ ಸಾಧ್ಯ? ರೊಕ್ಕಾ ಫುಲ್ ನುಕ್ಸಾನ್ ಮಾಡಿಕೋತ್ತಿದ್ದಿ. ಅವ ಮೇನೇಜರ್ ಇಂಥಾ ಭಾಳ್ ಬಿಸಿನೆಸ್ಸ್ ಪ್ಲಾನ್ ನೋಡಿರ್ತಾನ್. ಅದಕ್ಕಾ ತೆಲಿಕೆಟ್ಟ ನಿನಗ ಬೈದ ಓಡ್ಸಿದಾ. ಹಿಂದ ಯಾರೋ ಒಬ್ಬವ ಸೀಡಲೆಸ್ ಶೇಂಗಾ (!!!) ಬಿಸಿನೆಸ್ಸ್ ಪ್ಲಾನ್ ತೊಗೊಂಡ ಹೋಗಿದ್ದಾ ಅಂತಾ. ಅವಂಗೂ ಹೀಂಗಾ ಬೊಂಗಾ ಬಾರ್ಸಿ ಓಡಸಿದ್ದಾ ಅಂತ.....ಅಂತಾ ಸಮಾಧಾನ ಮಾಡಿದೆ.

ಸಾಬ್....ಎಂತಾ ಮಸ್ತ ಬಿಸಿನೆಸ್ಸ್ ಐಡಿಯಾ ಸಾಬ್....ಸೀಡಲೆಸ್ ಶೇಂಗಾ....ಸಾಬ್....ಥಾಂಕ್ ಯೂ ...ಸಾಬ್...ಈಗಾ ಹೋಗಿ ಈ ಬಿಸಿನೆಸ್ಸ್ ಪ್ಲಾನ್ ಮಾಡ್ತೆನಿ....ಅಂತಾ ಹುರುಪಿನಿಂದ ಹೊರಟಾ ಕರೀಂ.

ಸೀಡಲೆಸ್ ಶೇಂಗಾ ಬಿಸಿನೆಸ್ಸ್ !!!!!?????.....ಖರೇ ಜ್ಯಾಕ್ಯಾಸ್  ಇವ.....ಅಂತ ಕಂಫಾರ್ಮ್ ಆತ.

ಖುದಾ ಹಾಫಿಜ್ ಸಾಬ್ರಾ.....ಸೀಡ್ಲೆಸ್ ಶೇಂಗಾ ಬೆಳದ್ರಾ ಹ್ಯಾಂಗ ಆತ ಅಂತ ತಿಳಸ್ರೀಪಾ......ಅಂತಾ ನಕ್ಕೊತ್ತಾ ಹೊಂಟ ಬಂದೆ.

** ಹೇಸರಗತ್ತೆ ಅಂದರೆ mule. ಅಮೇರಿಕಾದ  ಮಾಜಿ ಬೇಹುಗಾರಿಕೆ ಅಧಿಕಾರಿ ಮಿಲ್ಟನ್ ಬೀರ್ಡನ್ ಅವರು ತಮ್ಮ ಪುಸ್ತಕದಲ್ಲಿ  ಹೇಸರಗತ್ತೆಗಳು 1978-1988 ರಲ್ಲಿ ನೆಡದ ಆಫ್ಘಾನ್-ಸೋವಿಯತ್ ಯುದ್ಧದಲ್ಲಿ ನಿರ್ವಹಿಸಿದ ಪ್ರಮುಖ ಪಾತ್ರವನ್ನು ಧಾಖಲಿಸಿದ್ದು, ಅಫ್ಘಾನಿ ಮಜಾಹಿದೀನರಿಗೆ ಸರಕು, ಶಸ್ತ್ರ, ಬ್ರಹ್ಮಾಸ್ತ್ರ (stinger missiles) ಮುಟ್ಟಿಸಿದ್ದು ಹೇಸರಗತ್ತಗಳೇ ಎಂದು ಅವುಗಳ ಸೇವೆಯನ್ನು ಮತ್ತು ಸೋವಿಯತ್  ಸೋಲಿನಲ್ಲಿ ಅವು ವಹಿಸಿದ ಪ್ರಮುಖ ಪಾತ್ರವನ್ನು ಸ್ಮರಿಸಿದ್ದಾರೆ. ನನಗೆ ಓದಿದ ನೆನಪಿರುವ ಹಾಗೆ ಆ ಸಮಯದ್ದಲ್ಲಿ mules were considered strategic assets as part of Afghan campaign.  Mules were very important part of the supply-chain.

ಬೋಲ್ಡಿ ಆಂಟಿ ಮತ್ತು ಬಾಲ್ಡಿ ಅಂಕಲ್ - 2

ಮೊನ್ನೆ ಮೊನ್ನೆ ಸಾಬರಿಗೆ ಅವರ ಬೋಲ್ಡಿ ಬೇಗಂ ಜತಿ ಹ್ಯಾಂಗ ಡೀಲ್ ಮಾಡ್ಬೇಕು ಅನ್ನೋದರ ಬಗ್ಗೆ ಟಿಪ್ಸ್ ಕೊಟ್ಟಿದ್ದೆ. ಅದರ ರಿಸಲ್ಟ್ ಬಗ್ಗೆ ಕ್ಯುರಿಯೋಸಿಟಿ ಇತ್ತು. ಇವತ್ತು ಸಾಬರು ಸಿಕ್ಕರ ಕೇಳ್ಬೋದು ಅಂತ ಅಲ್ಲೇ ಮಥುರಾ ಭವನ ಬಾಜೂಕ, ಭೀಮ್ಯಾನ ಚುಟ್ಟಾ ಅಂಗಡಿಯಾಗ, ಒಂದು 420 ಮಾವಾಕ್ಕ ಆರ್ಡರ್ ಮಾಡಿ, ಮಾವಾ  ತಯಾರ ಆಗೋದ ಕಾಯ್ಕೋತ್ತ ನಿಂತಿದ್ದೆ. ಅಷ್ಟರಾಗ ಕರೀಂ ಹತ್ತಿಕೊಳ್ಳದ ಕಡಿಂದ ಬಂದ.

ಸಲಾಂ.....ಸಾಬ್.....ಅಂತ ಅವರ ರೀತಿ ಒಳಗ ನಮಸ್ಕಾರ ಮಾಡಿದ.

ಸಲಾಂ.....ಏನಪಾ ಕರೀಂ....ಆರಾಮ ಏನಪಾ?.....ಅಂದೆ.

ಹಾಂ.....ಸಾಬ್....ಫುಲ್ ಆರಾಮ ಈಗ.....ಅಂತ ಹೇಳಿ ಕರೀಂ ನಿರಾಳ ಆದ.

ಅಷ್ಟರಾಗ ಭೀಮು ಮಾವಾ  ಮಾಡಿ, ಪುಡ್ಕಿ ಕಟ್ಟಿ ಕೊಟ್ಟಾ.

ಮಾವಾ ತೆಗೆದು ಬಾಯಿ ಒಳಗ ಜಡಕೊಂಡು, ಅದನ್ನ ದವಡಿ ಒಂದು strategic ಮೂಲಿ ಒಳಗ ಸ್ಥಾಪನಾ ಮಾಡಿ, ಕರೀಮ ಜೊತಿ ಮಾತುಕತಿ ಹಚ್ಚಿಕೊಂಡೆ.

ಮತ್ತೇನ ಸಾಬ್ರಾ .....? ನಿಮ್ಮಾ ಬೋಲ್ಡೀ ಬೇಗಂ ಸುಧಾರಿಸ್ದಾರಾ ಏನು?......ಅಂತ ಕೇಳಿದೆ.

ಹಾಂ ಸಾಬ್....ಒಂದ ರೀತಿನಲ್ಲಿ....ಆದ್ರೆ ನಾನೇ ಸುಧಾರಿಸ್ಬೇಕಾಯ್ತು.....ಅಂದ ಕರೀಂ.

ಅಂದ್ರ ಏನಪ?

ಇಲ್ಲ ಸಾಬ್....ಅವತ್ತು ನಿಮ್ಮ ಜೊತಿ ಮಾತುಕತಿ ಆದ ಮರ್ದೀನಾ ಭಾಳ ಸುಸ್ತಾಗಿ ಸಂಜಿ ಮನಿಗೆ ಹೋದೆ ಸಾಬ್....ಜೊತಿಗೆ ರಿಲ್ಯಾಕ್ಸ್ ಮಾಡೋಕೆ ಅಂತಾ ಮಸಾಲಾ ಶೇಂಗಾ ಮತ್ತೆ ಒಂದು 120 ml ಸ್ಕಾಚ ವಿಸ್ಕಿ .....ಮನಿಗೆ ಹೋಗಿ ತಂಪಾದ ಘಜಲ್ ಕೇಳ್ತಾ ಕೇಳ್ತಾ ರಿಲ್ಯಾಕ್ಸ್ ಮಾಡಿದೆ ಸಾಬ್.....ಭಾಳ ಹಾಯ್ ಅನ್ನಿಸ್ತು.....ಅಂತ ಒಂದು ಬ್ರೆಕ್ ತೊಗೊಂಡಾ ಕರೀಂ.

ನೋಡಿ ಸಾಬ್.....ಖಾನಾ ತಯಾರ ಇರಬೋದೇನೋ ಅಂತಾ ಕೇಳೋಣಾ ಅಂತಾ ಬೇಗಂ ರೂಮಿಗೆ ಹೋದೆ ಸಾಬ್..ಅಲ್ಲಿ ಅಕಿದು usual Facebook ಹುಚ್ಚು ಮುಂದುವರ್ದಿತ್ತು.....ಅದು ಕ್ಯಾಮೆರಾ ಹಾಕ್ಕೊಂಡಿ ಯಾವದೋ ಪುರಾನಾ ಆಶಿಕ್ ಜೊತಿ ಹಾಡಿನ ಬಂಡಿ ಜೋರ್ ನಡೆದಿತ್ತು ಸಾಬ್....ಅಂತ ಬೇಗಂ ಹುಚ್ಚು ಇನ್ನು ಬಿಟ್ಟಿಲ್ಲಾ ಅಂತ confirm ಮಾಡಿದ.

ಬೇಗಂ.....ಖಾನಾ ತಯಾರ್ ಐತೆ ಕ್ಯಾ? ಬಡಸ್ತಿ ಕ್ಯಾ? ಅಂತ ಕೇಳಿದೆ ಸಾಬ್. ಅದಕ್ಕೆ ಅಕಿ....ಎಲ್ಲಿದು ಖಾನಾ ಭಾಡ್ಕೋವ್....ಭಾಡ್ ಮೇ ಜಾ.....ಅಂತ ನನಗೆ ಬೈದು ಬಿಟ್ಟು....ತನ್ನ Facebook ಮಂಗ್ಯಾತನ ಮುಂದುವರ್ಸಿದಳು ಸಾಬ್.....ಅಂತ ನಿಟ್ಟುಸಿರು ಬಿಟ್ಟು ಇನ್ನೂ ಬಾಕಿ ಅದೇ ಅನ್ನೋ ಲುಕ್ ಕೊಟ್ಟ ಕರೀಂ.....ಮುಂದಿನ ಕ್ಲೈಮಾಕ್ಸ್ ಗೆ ಕಾದು ಕೂತೆ.

ಅಲ್ಲಾ ಸಾಬ್ ಯಾವ ಹಾಡು ಅಂತಾ ಪುರಾನಾ ಆಶಿಕ್ ಜತೆ ಹಾಡೋದು ನಮ್ಮಾ ಬೇಗಂ?....

ಯಾವ ಹಾಡು ಹಾಡಿದರು ಹಾಡಿನ ಬಂಡಿ ವಳಗ?

ನೋಡಿ ಸಾಬ್....ನಮ್ಮಾ ಬೇಗಂ DDLJ .....ಡೋಲಿ ಸಜಾಕೆ ರಖನಾ....ಮೆಹಂದಿ ಲಗಾಕೆ ರಖನಾ....ಹಾಡಿದರೆ ಆಕಿ ಹರಾಮಕೋರ್ ದೋಸ್ತ ಏನು ಹಾಡಬೇಕು ಆ ಕ್ಯಾಮೆರಾದಾಗೆ?......ಕೋಪ ಉಕ್ಕುತ್ತಿತ್ತು.

ಏನ ಹಾಡಿದ್ರಿನಪಾ ನಿಮ್ಮಾ ಬೇಗಂ ಮಾಜಿ ಡಾವ್ ?.....ಅಂತ ಕೇಳಿದೆ.

ಸಾಬ್....ಅವನು ರೂಲ್ಸ್ ಬಿಟ್ಟು.....ಲುಂಗಿ ಉಠಾಕೆ ರಖತಾ.....ಪುಂಗಿ ಸಜಾಕೆ  ರಖತಾ....ಅಂತಾ ಡಬಲ್ ಮೀನಿಂಗ್ ಸಾಂಗ್ ಹಾಡಿ ಬಿಟ್ಟ ಸಾಬ್....ಅದಕ್ಕೆ ನಮ್ಮ ಬೇಗಂ ಕ್ಯಾಕಿ ಹಾಕಿ, ತೊಡೆ ತಟ್ಟಿ ನಕ್ಕಳು ಸಾಬ್.....ಅಂತ ಕರೀಂ ಒಂದು ಉಸರು ಎಳೆದುಕೊಂಡ.

ಸಾಬ್....ಗೊತ್ತಿಲ್ಲ ಸಾಬ್....ಎಲ್ಲಿಂದ ಎಲ್ಲಿಂದ ಗುಸ್ಸಾ ಬಂತು ಅಂತ...ಅಕಿನ್ನಾ ದರ ದರ ಎಳ್ಕೊಂಡು ಬಂದು....ಬಗ್ಗಿಸಿ ಬೆನ್ನ ಮ್ಯಾಲೆ ದಬ ದಬ ಅಂತ ಸರೀತ್ನಾಗೆ ಗುದ್ದಿ ಬಿಟ್ಟೆ.....ಅದೂ ಮಳಕೈಯಿಂದ.... ಬೆನ್ನು ಸೀದಾ ಮಾಡೋಕೆ ಆಗದೆ ತಿರುಗಿದಳು ನೋಡಿ.....ಬ್ಯಾಕ್ ಸಾಯಿಡ್ ನೋಡ್ತಾ ನೋಡ್ತಾ ಇನ್ನೂ ಕೋಪಾ ಜಾಸ್ತಿ ಬಂದು, ಒಂದು ಒತ್ತಾ ಜಾಡ್ಸಿ ಒದ್ದೆ  ನೋಡಿ.....ಸೀದಾ ಹಾರಿ ಹೋಗಿ ಮೂಲೆ ಸೇರ್ಕೊಂಡು ಅಳೋಕೆ ಶುರು ಮಾಡಿದಳು......ಅಂದ ಕರೀಂ. ಮುಖದಲ್ಲಿ ಒಂದು ತರಹದ ಮಿಕ್ಸಡ್ ಫೀಲಿಂಗ್ ಇತ್ತು.

ಇದು ಭಾಳ್ ವಾಯೋಲೆಂಟ್ ಆತಲ್ಲರೀ ಸಾಬ್ರಾ?......ಎಲ್ಲರಾ ಸತ್ತ ಗಿತ್ತಾ ಹೋದಾರು ನಿಮ್ಮ 10 ಲಾಖ್ ರುಪಯ್ಯಾ ಮೆಹರವಾಲಿ ಬೇಗಂ.....ಅಂತ ಸಟಲ್ ಆಗಿ ವಾರನಿಂಗ್ ಕೊಟ್ಟೆ.

ಇಲ್ಲಾ ಸಾಬ್.....ಮ್ಯಾಲೆ ಏಳೋಕಾಗದೆ ಮೂಲೆನಲ್ಲಿ ಬಿದ್ದಿದ್ದರೂ, ಜಾಕೆಟ್ನಾಗಿಂದ ಮೊಬೈಲ್ ತೆಗೆದು ಆಕಿ ಅಮ್ಮಿಜಾನಿಗೆ ಫೋನ್ ಹಚ್ಚಿದಳು.....ಅವಳಾ ಅಮ್ಮೀ ತಾಪಡ್ತೋಪ್ ಬಂದಳು.....ಗಾಡಿನಾಗೆ......ಜೊತಿಗೆ ಆಕಿ ಕಲ್ಲೂ ಮಾಮದ್ ಮಾಮೂ ಮತ್ತು ಕಲ್ಲೂ ಮಾಮಿ.....ಎಲ್ಲರು ಕೂಡಿ ಅಕಿನ್ನ ಎತ್ತಿ ತವರು ಮನಿಗೆ ಕರ್ಕೊಂಡು ಹೋದರು.....ಹಕೀಮ್ ಸಾಬ್ ಇಲಾಜ್ ನೆಡ್ಸಿದಾರೆ ಅಂತೆ.....ಇನ್ನೂ ಒಂದು ತಿಂಗಳು ಬೇಕಂತೆ.....ಅಲ್ಲಿ ತನಕಾ ಆರಾಮ ಸಾಬ್.....ಬನ್ನಿ ಸಂಜಿಕ್ಕೆ  ಬರ್ರೀ ಸರ್ರಾ ಪಾರ್ಟಿ ಮಾಡೋವಾ....ಫುಲ್ ಕೇರಫ್ರೀ ಪಾರ್ಟಿ.....ಅಂತ ಮಸ್ತ ಖುಷಿಂದ ಬೇಗಮ್ಮನ ಬರಕಾಸ್ತ ಮಾಡಿದ ಸುದ್ದಿ ಎಲ್ಲ ಹೇಳಿ ನಿರಾಳ ಆದರು ನಮ್ಮ ಸಾಬರು.

ಆತ್ರೀ ಸಾಬ್ರ .....ಪಾರ್ಟಿ ಮಾಡೋಣಂತ ....ಸಂಜಿಕ್ಕ ಸಿಗತೇನಿ....ಈಗ ಖುದಾ ಹಾಫಿಜ್.

ಖುದಾ ಹಾಫಿಜ್....ಸಾಬ್.

ಸಾಬರ ಸಂಜಿ ಪಾರ್ಟಿಗೆ ತಯಾರಿ ಮಾಡ್ಲಿಕತ್ತಿದೆ.

** ಖರೇ ಅಂದ್ರಾ ಇದನ್ನ ಮುಂದಿನ ಆರ್ಟಿಕಲ್ ಗೆ ಇಂಟ್ರೋ ಅಂತ ಬರೆದೆ. ಇಂಟ್ರೋ ನಾ ಇಷ್ಟು ದೊಡ್ಡದಾಗಿ ಹೋತು. ಕಷ್ಟ(?) ಪಟ್ಟು ಬರೆದಿದ್ದು. ವೇಸ್ಟ್ ಹ್ಯಾಂಗ ಮಾಡಲಿ? ಅದಕ್ಕ ಸುಮ್ಮನಾ ಜಾಸ್ತಿ ಪಬ್ಲಿಸಿಟಿ ಕೊಡದ ಇಲ್ಲೇ ಹಾಕಿರ್ತೆನಿ. ಹಿಂದ ಮುಂದ ಇಲ್ಲದ ಹಾಪ್ ಆರ್ಟಿಕಲ್ ಅನ್ನಿಸಿದರ ಸಾರೀ.

Tuesday, June 26, 2012

ಸಾಬರ ದುಬೈ ಟ್ರಿಪ್ಪು


ಕರೀಂ ಸಾಬರು ಏಕದಂ ದಿಲದಾರ್ ಆಗಿ ಬರಲಿಕತ್ತಿದ್ದರು. ಏನು ಅವರ ಭಾರಿ ಸಿಲ್ಕಿನಾ ವೇಷ ಭೂಷಣ. ಕೊರಳಾಗ ನಾಯಿ ಸರಪಳಿ ಅಷ್ಟು ದಪ್ಪ ಬಂಗಾರದ ಚೈನ್. ಕೈನಲ್ಲಿ ದಪ್ಪ ದಪ್ಪ ಬಂಗಾರದ ಕಡಗ. ವಟ್ಟಿನಲ್ಲಿ ಸಾಬರು ಮಸ್ತ ಕಾಣಲಿಕ್ಕೆ ಹತ್ತಿದ್ದರು. ಲಕ ಲಕಾ. ಜಗ ಮಗ. ಮಸ್ತ ಮಿಂಚಿಂಗ್ ಸಾಬರು.

ಏನ ಸಾಬರ..... ಭಾರಿ ಮಸ್ತ ತಯಾರ್ ಆಗಿ ಬಂದೀರಿ? ಏನು ಮಸ್ತ ಖರೀದಿ ಆದಂಗಾ ಕಾಣಸ್ತದ.

ಹೌದು ಸಾಬ್.....ದುಬೈಗೆ ಹೋಗಿದ್ವಿ....ನಾನು ಬೇಗಂ ಒಂದು ವಾರ. ಮಸ್ತ ಏಷ್ ಮಾಡಿ, ಶಾಪ್ಪಿಂಗ್ ಮಾಡಿ ಬಂದ್ವಿ ಸಾಬ್. ಮಸ್ತ ಆಯಿತು ಟ್ರಿಪ್.

ಏನು ಸಡನ್ನಾಗಿ ದುಬೈಗೆ ಟ್ರಿಪ್ ಸಾಬ್ರಾ?

ಸಾಬ್....ಅದು ನಮ್ಮ ಮಾಮೂಜಾನ್ ಛೋಟಾ ವಕೀಲ್ ಇಲ್ಲ? ಅವರು ಬಾ ಅಂದ್ರು. ಅದಕ್ಕೆ ಹೋಗಿ ಬಂದ್ವಿ ಸಾಬ್.

ಏನು!!!! ಪರಮ ಕುಖ್ಯಾತ ಅಂಡರ್ವರ್ಲ್ಡ್ ಡಾನ್  ಛೋಟಾ ಶಕೀಲ್ ನಿಮ್ಮ ಮಾಮಾನಾ? ಸ್ವಾದ್ರಮಾವ ಏನು? ಅವರು ದುಬೈ ಬಿಟ್ಟು ಕರಾಚಿಗೆ ಶಿಫ್ಟ್ ಆಗಿ ಭಾಳ್ ವರ್ಷ ಆತು ಅಂತ ಕೇಳಿದ್ದೆ. ಮತ್ತ ವಾಪಸ್ ಬಂದಾರೇನು  ದುಬೈಗೆ?

ಛೆ...ಛೆ....ಇಲ್ಲಾ ಸಾಬ್...ಛೋಟಾ ಶಕೀಲ್ ಅಲ್ಲ ಸಾಬ್....ಅವರದ್ದು ಜೊತೆ ನಮ್ಮದು ಯಾವದೂ ತಾಲುಕ್ಕಾತ್ ಇಲ್ಲ ಸಾಬ್.....ಅವ್ರ ಜೊತೆ ನಮ್ಮದು ಹೆಸರು ಹಚ್ಚಿ ಬಿಟ್ಟರೆ ದುನಿಯಾ ಭರ್ಕೆ ಪೋಲಿಸ್ ನಮ್ಮದು ಹಿಂದೆ ಬಿದ್ದು ಬಿಡ್ತಾರೆ....ಅದು ಮಾತ್ರ ಬ್ಯಾಡ ಸಾಬ್. ಇವರು ಛೋಟಾ ವಕೀಲ್ ಅಂತಾ. ಒಳ್ಳೆ ಆದಮೀ.....ಅಂತ ಮಾಮಾಗೆ ಡಿಫೆಂಡ್ ಮಾಡಿಕೊಂಡ ಕರೀಂ.

ಮತ್ತಾ....ಛೋಟಾ ವಕೀಲ್ ಯಾರು?

ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮದು ಬಡಾ ಮಾಮೂಜಾನ್ ಬಾಂಬೆನಲ್ಲಿ ಭಾಳ ದೊಡ್ಡ ವಕೀಲ್. ಅವರಿಗೆ ಎಲ್ಲರೂ ಬಡಾ ವಕೀಲ್ ಅಂತಾರೆ. ಇವರು ಅವರ ತಮ್ಮ....ವಕೀಲ್ ಅಲ್ಲ...ಆದರೂ ಅಣ್ಣ ಪೇಮಸ್ ನೋಡಿ....ಅದಕ್ಕೆ ಛೋಟಾ ವಕೀಲ್ ಅಂತ ಇವರೂ ಪೇಮಸ್ ಆಗಿದಾರೆ.....ಇಂಡಿಯಾದಲ್ಲಿ ಲೈಫ್ ಇಲ್ಲ....ಅಣ್ಣಾದು ರೊಕ್ಕಾ ಅದೇ....ದುಬೈನಲ್ಲಿ ಇನ್ವೆಸ್ಟ್ ಮಾಡ್ಲಿ ಅಂತ ಛೋಟಾ ವಕೀಲ್ ಅವರನ್ನ ಬಡಾ ವಕೀಲ್ ದುಬೈನಲ್ಲಿ ಸೆಟ್ಟಲ್ ಮಾಡ್ಸಿದಾರೆ.....ಅಂತ ಛೋಟಾ ಮಾಮಾನ ಇಂಟ್ರೋ ಕೊಟ್ಟಾ.

ಓಹೋ....ಹಾಂಗ ಅನ್ನರಿ....ಮೊದಲು ಬಡಾ ರಾಜನ್.... ಈಗ ಛೋಟಾ ರಾಜನ್ ಇದ್ದಂಗೆ....ಅಲ್ಲೇನು?

ಸಾಬ್.....ನೋಡಿ..ನೋಡಿ...ಮತ್ತೆ ಅಂಡರ್ವರ್ಲ್ಡ್ ಹೆಸರು ತರ್ತೀರಿ.....ಎಲ್ಲಾ ಕಡೆ ಪೋಲಿಸ್ ಖಬರಿ ಮಂದಿ ಇರ್ತಾರೆ. ಇದೆಲ್ಲ ಕೇಳಿಕೊಂಡು ಹೋಗಿ ನನಗೇ  ನೀನು ಛೋಟಾ ಕರೀಂ, ಧಾರವಾಡ ಡಾನ್, ಅಂತಾ ಲೇಬಲ್ ಮಾಡಿ ಅಂದರ ಮಾಡಿ ಬ್ಯಾಕ್ನಲ್ಲಿ ಖಾರಪುಡಿ ಹಾಕಿ ಬ್ಲಾಸ್ಟ್ ಮಾಡಿದ್ರೆ ಹೋಗುದು ನಮ್ಮ ಬ್ಯಾಕ್.....ಸುಮ್ಮನೆ ಇರ್ರಿ ಸಾಬ್.

ಇಲ್ಲಪಾ....ಇನ್ನ ಮುಂದೆ  ಅಂಡರ್ವರ್ಲ್ಡ್ ಬಗ್ಗೆ ಒಟ್ಟಾ ಮಾತಾಡೋದಿಲ್ಲ.

ಚೊಲೋ ಆತ ಬಿಡ್ರೀ.....ದುಬೈಗೆ ಹೋಗಿ ಬಂದಿದ್ದು....ಏನೇನ್ ಶಾಪ್ಪಿಂಗ್ ಮಾಡಿದ್ರಿ?

ಸಾಬ್.....ಸೋನಾ, ಚಾಂದಿ, ಕಪಡಾ, ಬಚ್ಚೆ ಲೋಗೊಂಕೋ ಖಿಲೋನಾ ...ರಿಷ್ತೆದಾರ್ ಮಂದಿಗೆ ಸಣ್ಣ ಪುಟ್ಟ ತೋಫಾ.

ಅಂದ್ರಾ....ಮಕ್ಕಳನ್ನು ಕರಕೊಂಡ ಹೋಗಿರಲಿಲ್ಲ ಏನು?

ಎಲ್ಲಿದು....ಸಾಬ್?.ಮೂರು ಮದ್ವಿ ಎರಡು ತಲ್ಲಾಕನಿಂದ ಒಂಬತ್ತು ಮಂದಿ ಬಚ್ಚೆ ಅವೆ ....ಎಲ್ಲಿದೂ ಸಾಬ್?

ಅದು ಹೌದ ಬಿಡ್ರಿ .

ಮತ್ತೇನು ದುಬೈ ಕಡೆ ವಿಶೇಷ?

ಸಾಬ್ ಹೇಳೂದು ಮರ್ತೆ....ಇನ್ನೊಂದ ಖರೀದಿ ಬಗ್ಗೆ.

ಏನಪಾ  ಅದು....ಮತ್ತೇನ್ ಖರೀದಿ ಮಾಡಿ ತಂದಿ?

ಸಾಬ್..... ನಮ್ಮಾ ಮಾಮುಜಾನ್ ಹೇಳಿದ್ರು, ಇಲ್ಲಿ ದುಬೈನಲ್ಲಿ ಕಾಂಡೋಮ್ ಭಾಳ ಚೊಲೋ ಚೀಪ್ ಆಗಿ ಸಿಗ್ತದೆ ತೊಗೊಂಡು ಬಿಡು ಅಂತ.

ಸಾಬರಾ......ಏನು ಅಂತೀರಿ?.....ಅಂತ ಚೀರಿದೆ. ಆಗಿದ್ದು ಶಾಕೋ, ಝಾಟಕಾನೋ ತಿಳಿದೇ ಕರೆಂಟ  ಹೊಡೆದ ಕಾಗಿ ಆಗಿದ್ದೆ.

ಯಾಕೆ ಸಾಬ್? ದುಬೈನಲ್ಲಿ  ನಾನು ನಮ್ಮ ಬೇಗಂ ಎರಡು ಕಾಂಡೋಮ್ ಖರೀದಿ ಮಾಡೇವಿ ಅಂದ್ರೆ ನಿಮಗೆ ಯಾಕೆ ಎಲ್ಲೆಲ್ಲೋ ಖಾರ್ಪುಡಿ ಕುಟ್ಟಿದಾನ್ಗೆ ಆಗ್ತದೆ?

ನಾ ಅಂತೂ ನನ್ನ ಬಾಯಿಂದ ಆ ಹೊಲಸ ಶಬ್ದ ಹೇಳಂಗಿಲ್ಲ. ಆದರೂ ನೀ ದುಬೈಕ್ಕಾ ಹೋಗಿ ಅಲ್ಲೆ  ಅದನ್ನ ಖರೀದಿ ಮಾಡೀದಿ ಅಂದ್ರಾ ಕೆಟ್ಟ ಕುತೂಹಲ......ಅಂತ ಅಂದೆ.

ತಿಳಿಲಿಲ್ಲಾ ಸಾಬ್.

ಅಲ್ಲೋ.....ಇಲ್ಲೇ ಸಿಗತಿದ್ದಿಲ್ಲಾ ಏನು ನಿನಗ ಬೇಕಂದ್ರಾ?  ಮೆಡಿಕಲ್ ಸ್ಟೋರ್ ಗೆ ಹೋಗಿ, ಆಚಾರನ್ನ ಸನ್ನಿ ಮಾಡಿ ಬಾಜೂಕೆ ಕರದು  ಕಿವಿಯೊಳಗೆ ಗುಸು ಗುಸು ಅಂತ ಹೇಳಿದ್ರೆ, ಅವರು ಒಂದು ಹಳೆ ನ್ಯೂಸ್ ಪೇಪರ್ ನಲ್ಲಿ ಕಟ್ಟಿ ಕೊಡ್ತಾರ್ಪಾ. ಅದು ಬಿಟ್ಟು ದುಬೈಯಕ್ಕ ಹೋಗಿ ಆ ಹೊಲಸ್ ವಸ್ತು ತರೋ ಅಗತ್ಯಾ ಏನಿತ್ತು ಅಂತ?

ಕ್ಯಾ ಸಾಬ್? ನಾವು ದುಬೈನಲ್ಲಿ ಕಾಂಡೋಮ್ ತೊಗೊಂಡು ಬಿಟ್ಟಿವಿ ಅಂದ್ರೆ ಆಚಾರ್ರು ಹತ್ರಾ ತೊಗೊಬೇಕಿತ್ತು ಅಂತೀರಿ. ಆಚಾರ್ರು ಕಾಂಡೋಮ್ ಮಾರೋ ದಂಧಾ ಬ್ಯಾರೆ ಚಾಲೂ ಮಾಡ್ಯಾರೆ ಕ್ಯಾ?

ಶಾಂತಂ.....ಪಾಪಂ....ಅಂತಾ ಕಿವಿ ಮುಚ್ಚಿಗೊಂಡೆ. ಆಚಾರ್ರು ಕೇವಲ ಪ್ಹಾರ್ಮಾಸಿಸ್ಟ್ ಅನ್ನೋದಕ್ಕೆ ಮಾತ್ರಾ ಅದನ್ನು ಕಯ್ಯಿಂದ ಹಿಡಿತಿದ್ರೆ ವಿನಹಾ ಬ್ಯಾರೆ ಯಾವ ಕಾರಣಕ್ಕೂ ಅಲ್ಲ. ಇಲ್ಲಾ ಅಂದ್ರ ಅದೆಲ್ಲಾ ಅಮೇದ್ಯಕ್ಕ ಸಮಾನ ಆಚಾರ್ರಿಗೆ.

ಹ್ಞೂ....ಹೋಗ್ಲಿ ಬಿಡು.....ದುಬೈದಾಗಾ ಯಾಕ ತೊಗೊಂಡಿ?

ಸಾಬ್.....ನೋಡಿ....ನಮ್ಮದು ಫ್ಯಾಮಿಲಿ ಎಲ್ಲ ಭಾಳ ದೊಡ್ಡದು. ಹಾಂಗಾಗಿ ನಮ್ಮ ಫ್ಯಾಮಿಲಿ ಸೈಜ್ ಗೆ ಸರಿ ಆಗೋ ಸೈಜಿನದ್ದು ನೋಡಿ ನೋಡಿ ತಗೊಂಡ್ವಿ ಸಾಬ್.

ನಾ ಅಂತೂ ಫುಲ್ ಕನಫೂಸ್.

ಅಲ್ಲರೀ ಸಾಬ್ರಾ....ಫ್ಯಾಮಿಲಿ ಸೈಜ್ ದೊಡ್ಡದು ಆಗಬಾರದು ಅಂತ ಹೇಳಿ ಎಲ್ಲರೂ ಆ ವಸ್ತು ತೊಗೊಂಡು ಉಪಯೋಗ ಮಾಡ್ತಾರ್. ನೀವು ಏನೇನೋ ಅಂತೀರಲ್ಲಾ ?

ಅಲ್ಲ ನೀವು ತೊಗೊಂಡ್ರಿ,ಓಕೆ. ನಿಮ್ಮ ಹೆಂಡತಿಗೂ ಒಂದು ಕೊಡಸಿದಿರಿ ಅಂದ್ರಿ ನೋಡಿ,  ಅದು ಮಾತ್ರ ಭಾಳ್ ಆಶ್ಚರ್ಯ ಉಂಟು ಮಾಡ್ತು ನೋಡ್ರೀ.

ಯಾಕೆ ಸಾಬ್ ಝಾನಾನಾ ಲೋಗ್ ಕಾಂಡೋಮ್  ಖರೀದಿ ಮಾಡಬಾರದು ಕ್ಯಾ?

ಮಾಡಬಾರದು ಅಂತ ಏನೂ ಇಲ್ಲ....ಈಗ ಮೆಡಿಕಲ್ ಸೈನ್ಸ್ ಎಲ್ಲ ಮುಂದುವರೆದು ಅವರಿಗೇ ಬ್ಯಾರೆ ತರಹದ equivalent ವಸ್ತು ಬಂದದ  ಅಂತ...ಆ ತರಹದ್ದು ಏನರ ಖರೀದಿ ಮಾಡ್ಸಿ ಕೊಟ್ಟಿರಬೇಕು ನಿಮ್ಮ ಬೇಗಂಗೆ....ಅಲ್ಲ?

ಇಲ್ಲ....ಸಾಬ್...ಎರಡೂ ವಂದೇ ತರಹ ಕಾಂಡೋಮ್ ಇವೆ. ಎರಡೂ ಬಾಜೂ ಬಾಜೂ ಅವೇ. ಅವರ ಹೆಸರಲ್ಲಿ ಖರೀದಿ ಮಾಡಿದರೆ ಟ್ಯಾಕ್ಸ್ ಕಮ್ಮಿ. ಅದಕ್ಕೆ ಬೇಗಂ ಹೆಸರಲ್ಲಿ ತೊಗೊಂಡೆ ಸಾಬ್.

ಏನು?????!!!!! ದುಬೈ ನಲ್ಲಿ ಆ ವಸ್ತುವಿಗೂ ಸ್ಪೆಷಲ್ ಟ್ಯಾಕ್ಸ್ ಬೆನಿಫಿಟ್ ಅದ ಏನು?.....ಭಾರಿ ಆತ ಬಿಡ್ರಿ......ಅಂದೆ.

ಯಾಕೋ ಎಲ್ಲೋ ಏನೋ ಮಿಸ್ಟಿಕ್ ಅದ ಅಂತ ಅನ್ನಿಸಲಿಕ್ಕೆ ಹತ್ತಿತ್ತು. ಆದ್ರ ತಿಳಿವಲ್ಲದದು  ಆಗಿತ್ತು.

ಅಷ್ಟರಲ್ಲಿ ಕರೀಂ ಇನ್ನೊಂದು ಬಾಂಬ್ ಹಾಕಿದ. ಆ ಬಾಂಬ್ ಮಾತ್ರ ನನ್ನನು ಫುಲ್ ತಲಿಯಿಂದ ಬುಡದ ತನಕ ಹಿಡದು ಅಲುಗಾಡ್ಸಿ ನನಗ ತಲಿಗೆ ಚಕ್ರ ಬಂತು.

ಏಕದಂ ಆಲಮೋಸ್ಟ್ ಹೊಸಾದು ಸಾಬ್....ಒಬ್ಬನು ಗೋರಾ ಆದ್ಮಿ ಮೊದಲು ಅದನ್ನ ತೊಗೊಂಡಿ,  ಸ್ವಲ್ಪ ದಿವಸ ಯೂಸ್ ಮಾಡಿ ಮಾರಿ ಹೋದಾ ಸಾಬ್....ನಮಗೆ ಭಾಳ್  ಚೀಪ್ನಲ್ಲಿ ಸಿಕ್ಕತು.

ಶಾಂತಂ.....ಪಾಪಂ....ಸಾಬರ ಏನಂತ ಮಾತಾಡಲಿಕ್ಕೆ ಹತೀರಿ? ಇಂತಾ ಹೊಲಸ್ ಹೊಲಸ್ ವಸ್ತುವನ್ನ ಅದೂ  ಯೂಸ್ ಮಾಡಿ ಬಿಟ್ಟಾ ವಸ್ತು ಖರೀದಿ ಮಾಡಿ ಬಂದು ಏನು ಭಾಳ  ಹೆಮ್ಮೆಯಿಂದ ಹೇಳ್ತಿರಲ್ಲಾ.....? ನಿಮಗೆ ನಾಚಿಗಿ, ಮಾನಾ, ಮರ್ಯಾದಿ ಏನಾರಾ ಅದನೋ ಇಲ್ಲ?....ಅಂತ ಸಿಟ್ಟಿನಿಂದ ಭಾಳ ಅಸಹ್ಯ ಲುಕ್ ಕೊಟ್ಟಗೊತ್ತ ಹೇಳಿದೆ.

ಯಾಕೆ ಸಾಬ್ ಅಪ್ಸೆಟ್ ಆದ್ರಿ? ಅಲ್ಲ ದುಬೈನಲ್ಲಿ ಗೋರಾ ಆದ್ಮಿ ಕಮ್ಮಿ ದರದಾಗೆ ಕಾಂಡೋಮ್ ಮಾರ್ತಾ ಇದ್ದಾ....ಎರಡೇ ತಿಂಗಳು ಯೂಸ್ ಮಾಡಿದ್ದು....ಹೊಸಾದು ಇದ್ದಾಗೆ ಇದೆ. 50% ಗೆ ಕೊಡತೇನಿ ತಗೊಳ್ಳಿ ಅಂದ. ವಳ್ಳೆ ಇನ್ವೆಸ್ಟಮೆಂಟ್ ಅಂತ ಮಾಮುಜಾನ್ ಸಹಿತ ಹೇಳಿದ್ರು. ಅದಕ್ಕೆ ಎರಡು ಸೀ ಪೇಸಿಂಗ್ ಕಾಂಡೋಮ್ ತೊಗೊಂಡು ಬಿಟ್ಟಿವಿ ......ಕರೀಂ ತನ್ನ ಯೂಸುವಲ್ ಬೋಳೆತನದಿಂದ ಹೇಳಿ ಸರ್ಪ್ರೈಸ್ ಲುಕ್ ಕೊಟ್ಟಾ.

ಯಪ್ಪಾ....ಆ ವಸ್ತುಗಳನ್ನಾ  ಇನ್ವೆಸ್ಟಮೆಂಟ್ ಅಂತಾ ಮಂದಿ ಯಾವಾಗಿಂದ ತೊಗೊಳ್ಳೋಕೆ ಶುರು ಮಾಡಿದ್ರು!!!!? ಶಿವ....ಶಿವ....ಏನು ಕಾಲ ಬಂತಪಾ?

ಸಾಬ್....ನಾನು ಈಗ ಹೋಗಿ ಕೆಲೋ ಕಾಗದ ಪತ್ರಾ ತಯಾರಿ ಮಾಡ್ಬೇಕು. ಮಾಮೂಜಾನ್ ಗೆ ಪಾರ್ಸೆಲ್ ಮಾಡಿ ಅರ್ಜೆಂಟ್ ಆಗಿ ದುಬೈಗೆ ಕಳಿಸಬೇಕು. ಯಾಕೆ ಅಂದ್ರೆ ಅದು ಕಾಂಡೋಮ್ ನಮ್ಮ ಹೆಸರಿಗೆ ಇನ್ನೂ ರೆಜಿಸ್ಟರ್ ಆಗಿಲ್ಲ.

ಏನು ಅಂತ.....ಇಂತಹ ಸಣ್ಣ, ಹೊಲಸ್, ಯೂಸ್ ಮಾಡಿ ವಗಿಬೇಕಾಗಿದ್ದನ್ನ ಖರೀದಿ ಮಾಡಿದ್ದು ಅಲ್ಲದ ಅದನ್ನ ರೆಜಿಸ್ಟರ್ ಸಹ ಮಾಡ್ತಾನ್ ಅಂತ.....ಹೊಲಸ್ ಮಂಗ್ಯಾನ್ ಕೆ.

ಆದ್ರ ಈಗ ಫ್ಲಾಶ್ ಆತು ಏನೋ....ಇನ್ವೆಸ್ಟಮೆಂಟ್, ಬಾಜೂಕ ಬಾಜೂಕ್, ದುಬೈ, ಗೋರಾ ಮಂದಿ, 50% ರೇಟಿಗೆ....ಎಲ್ಲಾ ಸೇರಿ ಏನೋ ಒಂದು ಕಂಪ್ಲೀಟ್ ಪಿಕ್ಚರ್ ಬರಲಿಕ್ಕೆ ಹತ್ತಿತು.

ಸಾಬರ....ನೀವು ದುಬೈದಾಗಾ ಮನಿ ಅಂತೂ ಖರೀದಿ ಮಾಡಿಲ್ಲ ಅಲ್ಲಾ? ಅಥವಾ......?.....ಅಂತಾ ರಾಗಾ ಎಳದೆ.

ಯಾ ಅಲ್ಲಾ.....ಯಾ ಖುದಾ.....ನಾನು ಇಷ್ಟು ಹೊತ್ತು ಹೇಳಿದ್ದು ಏನು ಮತ್ತೆ? ಕಾಂಡೋಮ್ ಅಂದ್ರೆ ಏನು ಅಂತ ಮಾಡಿದ್ರಿ?

ಏನು ನೀನಾ ಹೇಳಪಾ ?

ಅದೇ ಸಾಬ್....ನಾವು ಇಲ್ಲಿ  ಫ್ಲಾಟ್, ಅಪಾರ್ಟಮೆಂಟ್  ಅನ್ನೋದಿಲ್ಲಾ ಕ್ಯಾ? ಅದನ್ನ ಅಲ್ಲೆ ದುಬೈನಲ್ಲಿ  ಪಾಶ್ ಆಗಿ ಕಾಂಡೋಮ್ ಅಂತಾರೆ ಸಾಬ್.....

ಹೋಗ್ಗೋ ಸಾಬರಾ....ಅದು ಕಾಂಡೋಮ್ ಅಲ್ಲರೀಪಾ.....ನಿಮ್ಮ ಕರ್ಮ....ಕಾಂಡೋಮಿನಿಯಂ (condominium) ಅಂತ ಇರಬೇಕು ನೋಡ್ರಿ.

ನೋಡಿ ಸಾಬ್....ಎಲ್ಲರೂ ಅದಕ್ಕೆ ಕಾಂಡೋಮ್ ಕಾಂಡೋಮ್ ಅಂತಾರೆ....ನಾವು ಅದನ್ನೇ ಹೇಳಿದ್ದು....ನಿಮ್ಮ ಕಿವಿ ಚೆಕ್ ಮಾಡ್ಸಿ.

ಆತರೀಪಾ ...ಮಾಡಿಸೋಣ ಚೆಕ್ ನಮ್ಮ ಕಿವಿದು ಮತ್ತ ನಿಮ್ಮ ತಲೀದು ....ಖುದಾ ಹಾಫಿಜ್ ಸಾಬರ.

ಆಯ್ತು ಸಾಬ್....ದುಬೈಗೆ ಹೋದ್ರ ನಮ್ಮ ಕೊಂಡೊದಲ್ಲೇ ಇರಬಹುದು ನೀವು....ಓಕೆ?

ಈಗ ತಿಳೀತು.....ದುಬೈನಲ್ಲಿ ರಿಯಲ್ ಇಸ್ಟೆಟ್ ಮಾರ್ಕೆಟ್ ಬಿದ್ದು, ಎಲ್ಲಾ ರೇಟ್ ಡ್ರಾಪ್ ಆಗಿ, ಮೊದಲು ಸಿಕ್ಕಾಪಟ್ಟೆ ರೊಕ್ಕಾ ಕೊಟ್ಟು ತಗೊಂಡ ಮಂದಿ ಎಲ್ಲ, ಸಿಕ್ಕ ಸಿಕ್ಕ ರೇಟಿಗೆ ಮಾರಿ ಮಾರಿ ಹೊಂಟಾರ. ಅಂತಾ ಮಂದಿ ಕಡೆ ನಮ್ಮ ಸಾಬರು ಎರಡು sea facing ಕಾಂಡೊ ತೊಗೊಂಡಾರ ಅಂತ.

ಅವರು  ಕಾಂಡೊ ಅಂತನಾ ಅಂದಿದ್ದು ನಮಗ ಕಾಂಡೋಮ್ ಅಂತ ಕೆಳಿಸ್ತೋ ಅಥವಾ ಸಾಬರು ಕಾಂಡೋಮ್ ಅಂತ ಅಂದ್ರೋ..............????.....ಇದು ಬಗಿಹರಿಲಾಗದ ಚಿದಂಬರ ರಹಸ್ಯ ಆಗಿ ಉಳಿತು.

ಈ ಇಂಗ್ಲೀಶ್ ಲಾಂಗ್ವೇಜ್ ಯಾಕಪ್ಪಾ ಇಷ್ಟ ಕನಫುಸಿಂಗ್, ಶಿವನೇ?

Monday, June 25, 2012

ಸಾಬರ ಗ್ಯಾಸೂ.....ಭಜಗೋವಿಂದಂ ಶ್ಲೋಕವೂ

ಕರೀಂ ಮತ್ತೆ ಸಿಕ್ಕಿದ್ದ.

ಬಾರೋ ದೋಸ್ತಾ......ಹಾಪ್ ಚಾ ಕುಡದ ಬರೋಣ್ ....ಬಾ 

ಇಲ್ಲ ಸಾಬ್.....ಚಾ ಕುಡಿಯೋ ಹಾಲತ್ ಇಲ್ಲಾ ಸಾಬ್.

ಯಾಕೋ ಏನಾತ್ ? ಎಂತಾ ಬ್ಯಾನಿ ಬಂದರೂ ಚಾ ಕುಡಿಬೋದು .....ಬಾರೋ..ಅದೂ ಹಾಪ್ ಚಾ.

ಜುಲ್ಮಿ ಮಾಡ ಬ್ಯಾಡ್ರಿ ಸಾಬ್.....ಭಾಳ್ ಗ್ಯಾಸ್ ಆಗಿ ಬಿಟ್ಟಿದೆ. ಕೂಡಲಿಕ್ಕೆ, ಒಂದು ನಿಮಿಷ, ಒಂದು ಕಡೆ ಕೂಡಲಿಕ್ಕೆ ಆಗದಷ್ಟು ಪ್ರಾಬ್ಲೆಮ್ ಆಗಿದೆ ಸಾಬ್.

ಚಿಂತಿ ಮಾಡ ಬ್ಯಾಡ್....ಯಾರಿಗೆ ಗ್ಯಾಸ್ ಆಗೋದಿಲ್ಲಪಾ? ಎಲ್ಲರಿಗೂ ಅವರ ಅವರ ಪ್ರಕೃತಿ ಗೆ ಅನುಗುಣವಾಗಿ ಆಗ್ತದಪಾ. ಆಗೋದು ಆಗ್ತದ. ಅದು ನಮ್ಮ ಕೈಯಾಗ್ ಇಲ್ಲ. ನೋಡ್ಕೊಂಡು ಬಿಟ್ಟರ ಆತಪಾ. ಚಾ ಬ್ಯಾಡ್ ಅಂದ್ರ ಒಂದು ಸೋಡಾ ವಿಥ್ ಇನೋ ಕುಡಸಲಿ ಏನು? ಏಕ್ದಂ ಆರಾಮ್ ಸಿಗ್ತದ ನೋಡು.....ಟ್ರೈ ಮಾಡೋ .

ಅವನ ಖತರ್ನಾಕ್  ಗ್ಯಾಸ್ ಗೆ ಸಿಕ್ಕಿ ಎಲ್ಲೇ ನಾನ ಭೋಪಾಲ್ ಗ್ಯಾಸ್ ಟ್ರಾಜೆಡಿ ವಿಕ್ಟಿಮ್ ಆಗೋ ಭಯ ಹುಟ್ಟಿ ಇವನ್ಗ ಲಗೂನ ಇನೋ ಕುಡಸಲಿಕ್ಕೇ ಬೇಕು ಅಂತ ಭಟ್ಟನ ಅಂಗಡಿ ಹತ್ತರ ಕರ್ಕೊಂಡ ಹೊಂಟೆ.

ಸಾಬ್ ಅದಕ್ಕಿಂತ ದೊಡ್ಡ ಪ್ರಾಬ್ಲೆಮ್ ಆಗಿದೆ....ಅಂದ ಕರೀಂ.

ಏನಪಾ?

ನಮ್ಮ ಬೇಗಂ ರಾತ್ರಿ ಬಿಸ್ತರ್ನಿಂದ ಹಾರಿ ಹಾರಿ ಹೋಗ್ತಾರೆ ಸಾಬ್.

ಏನೋ ಹಾಂಗ ಅಂದ್ರ? ಬೇಗಂ ಬಿಸ್ತರನಿಂದ ಹಾರಲಿಕ್ಕೆ ಅವರ ಮೈಯಾಗ ಏನು ದೆವ್ವ ಬಂದದ ಏನು?

ಇಲ್ಲ ಸಾಬ್ ಅಕಿನೂ ಸಂಸ್ಕೃತ ತೊಗೊಂಡಿದ್ದಳು ಹೈಸ್ಕೂಲ್ ನ್ಯಾಗೆ.

ಮಂಗ್ಯಾನ್ ಕೆ....ಕರೀಂ...ತಲಿ ತಿನ್ ಬ್ಯಾಡ....ಸೀದಾ ಸೀದಾ ಹೇಳು....ಅಕಿ ಸಂಸ್ಕೃತ ತೊಗೊಂಡಿದ್ದಕ್ಕು, ನಿನ್ನ ಗ್ಯಾಸ್ ಗೂ, ಮತ್ತ ಆಕಿ ರಾತ್ರಿ ಹಾರಿ ಹಾರಿ ಹೋಗುದಕ್ಕು ಏನ ಲಿಂಕ್ ಅಂತ.

ಇದು ಏನೋ ಭಯಂಕರ ಕೇಸ್ ಅನ್ನಿಸ್ತು.

ನೋಡಿ ಸಾಬ್ ಆ ಹೆಗಡೆ ಮಾಸ್ತರ್ ಇಲ್ಲ...?.ಅವರು  ನಮಗೂ ನಿಮಗೂ  ಸಂಸ್ಕೃತ ಕಲಿಸಿದಾರೆ..... ನಮ್ಮ ಬೇಗಂಗೂ ಕಲಿಸಿದಾರೆ. ನಮ್ಮ ಬೇಗಂ ಸಂಸ್ಕೃತದಲ್ಲಿ ವೀಕ್ ಅಂತ ಟೂಶನ್ ಗೆ ಹೋಗ್ತಾ ಬ್ಯಾರೆ ಇದ್ದಳು. ನಿಮಗೆ ಹೆಗಡೆ ಮಾಸ್ತರ್ ಗೊತ್ತಲ್ಲ? ಟೂಶನ್ ಭಾಳ ಮಸ್ತ ಕೊಡ್ತಾ ಇದ್ದರು ಅಂತ...ಹಾಗೆ ಟೂಶನ್ ಗೆ ಹೋದಾಗ ಟೆಕ್ಸ್ಟ್ ಬುಕ್ ನಲ್ಲಿ ಇಲ್ಲದೆ ಇರೋ ಹಾಳು  ಮೂಳು ಶ್ಲೋಕ ಎಲ್ಲ ನಮ್ಮ ಬೇಗಂ ಗೆ ಹೇಳಿ ಬಿಟ್ಟಿ ಆಕಿ ಹಾಪ್ ಆಗಿ ಬಿಟ್ಟಿದಾಳೆ.

ಹೆಗಡೆ ಮಾಸ್ತರ್.... ಮುಂಜಾನೆ ನೆನಪ್ ಮಾಡ್ಕೊಳ್ಳೋ ಅಂತಹ ದೇವತಾ ಮನುಷ್ಯಾ....ಅವರು ಕರೀಮ್ನ ಹೆಂಡತಿಗೆ ಅದೆಂತ ಸಂಸ್ಕೃತ ಶ್ಲೋಕ ಹೇಳಿ ಕೊಟ್ಟಿರಬೇಕು?...ಅದೂ ಅಕಿ ನಮ್ಮ ಕರೀಮನ್ನ ಹಾಸಿಗೆಯಿಂದ ಬಿಟ್ಟು ಓಡೋ ತರಹದ ಶ್ಲೋಕ.

ಯಾವ್ ಶ್ಲೋಕಾನೋ ಕರೀಂ ಭಾಯಿ ?

ಸಾಬ್ ನಿಮಗೆ ಗೊತ್ತು ನಮ್ಮ ಸಂಸ್ಕೃತ ವೀಕ್ ಅಂತ....ಗಲತ್ ಗಲತ್ ಹೇಳತೇನಿ.

ಇರ್ಲಿ ತೊಗೋ....ನಿನಗ ಹ್ಯಾಂಗ ನೆನಪ ಅದ ಹಾಂಗ ಹೇಳು.

ಸಾಬ್ ಅದೇನೋ ಅದೇ ನೋಡಿ ಅಂತ ಕರೀಂ ಶುರು ಮಾಡಿಕೊಂಡ.

ಜಾತಾ ವಾಯು ದೇಹಾಸೆ 
ಬೀವಿ ಭಾಗ್ತಿ ಐಸೆ ಬದನ್ ಸೆ ||

ಸಾಬರ...ಇದು ಯಾವ್ ಭಾಷಾ? ಸಂಸ್ಕೃತ ಅಂತೂ ಅಲ್ಲ.

ನೋಡಿ ಸಾಬ್....ನಾನು ಹೇಳಿದೆ ನಿಮಗೆ. ನಮ್ಮದು ಸಂಸ್ಕೃತ ಭಾಳ ತುಟ್ಟಿ ಅಂತಾ....ನಮಗೆ ಎಷ್ಟು ನೆನಪ ಅದೇ ಅಷ್ಟು ಹೇಳಿದೆ ಸಾಬ್.

ಏನು...ಇದು...?ಈ ಶ್ಲೋಕಾ ಕೇಳಿ ಸಾಬರ ಹೆಂಡ್ರು ರಾತ್ರಿ ಇವರು ಗಾಸ್ ಬಿಟ್ಟಾಗೊಮ್ಮೆ ಇವರಿಂದ ದೂರ ದೂರ ಹಾರ್ತಾರ್ ಅಂದ್ರ ಇದರಲ್ಲಿ ಏನೋ ನಿಗೂಢ ರಹಸ್ಯ ಇರಬೇಕು ಅಂತ ಅನ್ನಿಸ್ತು.

ಇದೆಲ್ಲ ಇವನ ಕಡೆ ಬಗೆಹರೆಯೂದ ಅಲ್ಲ...ಸೀದಾ ಪೂಜ್ಯ ಹೆಗಡೆ ಮಾಸ್ತರ್ ಕಡೆ ಹೋಗಿ ಕೇಳಬೇಕು ಅಂತ.

ಹೋದ್ವಿ ಹೆಗಡೆ ಮಾಸ್ತರ್ ಕಡೆ.

ಹೋಯ್ .....ಹೆಗಡೆ ಮಾಸ್ತರ್ರು...ನಮಸ್ಕಾರ....ನಿಮ್ಮ ಶ್ಲೋಕದ ಪ್ರಭಾವ ನೋಡಿ. ನಮ್ಮ ಕರೀಮ್ನ ಹೆಂಡತಿ ಅವನ್ನ  ಬಿಟ್ಟಿಕ್ಕೆ ಹೋಪ ತಯಾರಿ ಮಾಡ್ತಾ ಇದ್ದು. ಎಂತ ಹೇಳಿ ಅವನ ಹೆಂಡ್ತಿ ತಲೆ ಕೆಡಸಿದ್ರಿ ನೀವು?...........ಅಂತ ಸೀದಾ ಹವ್ಯಕ ಭಾಷೆಯಲ್ಲಿ ಆವಾಜ್ ಹಾಕಿದೆ. ನಾನೂ ಹವ್ಯಕ ಬ್ರಾಹ್ಮಣ ನೋಡ್ರಿ.

ಎಂತದಾ ಮಾಣಿ ....? ಅಪರರೂಪಕ್ಕೆ 25 ವರ್ಷ ಮ್ಯಾಲೆ ಸಿಕ್ಕವ ನೀನು. ಅದೂ ಆ ಮಳ್ಳ ಕರೀಮನ ಕರ್ಕಂಡು ಬಂಜೆ. ಎಂತದಾ ಮಾರಾಯ ನಿನ್ನ ಪ್ರಾಬ್ಲೆಮ್? 25 ವರ್ಷದ ಮ್ಯಾಲೂ ನಿನ್ನ ತಲೆ ಬಿಸಿ ಹೋಜಿಲ್ಲೆ ಮಾರಾಯ....ಅಂತ ಹೆಗಡೆ ಮಾಸ್ತರ  ಶುದ್ದ ಹವ್ಯಕ ಭಾಷೆಯಲ್ಲಿ ಅಲವತ್ತುಕೊಂಡರು.

ಕರೀಮ್ಗ ಕನ್ನಡಾನ ಸರಿ ಬರೋದಿಲ್ಲ. ಇನ್ನು ನಮ್ಮ ಹವ್ಯಕ ಕನ್ನಡ ದೂರ ಉಳೀತ್. ಮಿಕಿ ಮಿಕಿ ನೋಡ್ಕೊತ್ತ  ನಿಂತಿದ್ದ.

ಮಾಸ್ತರೇ...ಅದೆಂತೋ ಗ್ಯಾಸ್ ಬಿಟ್ಟ ಕೂಡಲೇ ಗಂಡನಿಂದ ದೂರ ಹಾರವು ಹೇಳ ಶ್ಲೋಕ ನಮ್ಮ ಕರೀಂನ ಹೆಂಡತಿಗೆ ಹೇಳಿ ಕೊಟ್ಟಿದ್ದ್ರಳ ನೀವು. ಅದೂ ಟೆಕ್ಸ್ಟ್ ಬುಕ್ ನಲ್ಲಿ ಇಲ್ಲದೆ ಇಪ್ಪದು. ಆ ಮಳ್ಳ ಸಾಬರ ಕೂಸು ನಿಂಗವು ಎಂತ ಹೇಳಿ ಕೊಟ್ಟರ, ಅದು ಎಂತ ಅರ್ಥ ಮಾಡಿಕೆನ್ಡ್ತಾ, ಒಟ್ಟಿನಲ್ಲಿ ಕರೀಂ ಗ್ಯಾಸ್ ಬಿಟ್ಟ ಕೂಡಲೇ ಅವನ ಬದಿಯಿಂದ ಚಂಗನೆ ಗುಪ್ಪ ಹಾಕಿ ಹಾರ್ತಡ ನೋಡಿ....ಇದಕ್ಕೆಲ್ಲ ನಿಮ್ಮ ಶ್ಲೋಕನೆ ಕಾರಣ ಹೇಳಿ.....ಸರಿ ಆವಾಜ್ ಹಾಕಿದೆ ಮಾಸ್ತರ್ ಗೆ.

ಹೆಗಡೆ ಮಾಸ್ತರ್ ಫುಲ್ ದಂಗು. ಫುಲ್ ಥಂಡ ಹೊಡೆದರು.

ನೋಡಾ ಮಾಣಿ....ಆನು ಭಜಗೋವಿಂದಮ್ ಬಿಟ್ಟರೆ ಬ್ಯಾರೆ ಯಾವದೂ ಶ್ಲೋಕ ಯಾರಿಗೋ ಹೇಳಿ ಕೊಟ್ಟಿದ್ದ್ನಿಲ್ಲೇ ಮಾರಾಯ...ಎನ್ನ ಮಾತ್ ನಂಬೋ....ಅಂತ ಹೆಗಡೆ ಮಾಸ್ತರ್ ಅಂಬೋ ಅಂದರು.

ಭಜಗೋವಿಂದಂ ಯನಗೂ ಗೊತ್ತಿದ್ದೂ....ಯನ್ನ ಅಪ್ಪ ಮನೆಯಲ್ಲಿ ದಿನ ಬೆಳಿಗ್ಗೆ ಅದನ್ನ ಬಜಾಯಿಸ್ತ...ಆದ್ರೆ ಅದರಲ್ಲಿ ಗಂಡ ಗ್ಯಾಸ್ ಬಿಟ್ಟರೆ ಹೆಂಡ್ತಿ ಎದ್ದು ಓಡಿ ಹೋಗವು ಹೇಳಿ ಎಲ್ಲಿ ಇದ್ದು ಹೇಳಿ? ಆ ಸಾಬರ ಕೂಸಿಗೆ ಎಂತ ಅರ್ಥ ಹೇಳಿದ್ರಿ ನೀವೂ? ಪಾಪ ಅವಕ್ಕೆ ಸಂಸ್ಕೃತ ಸರಿ ಬತ್ತಿಲ್ಲೆ ಹೇಳಿ ಹ್ಯಾಂಗ ಬೇಕಾದ್ರ್ ಹಾಂಗೆ ಹೇಳಿ ಅವರ ಮಜ ತಗತ್ತರನು ನೀವು? ಹಾಂಗ್ ಮಾಡಿದ್ರ ದೊಡ್ಡ ಪಂಚಾಯತಿ ಮಾಡ್ಸಿ ಬಿಡ್ತಿ ಆನು. ಆನು ಯಾರ್ ಮಗ ಹೇಳಿ ಗೊತ್ತಿದ್ದ ಇಲ್ಲ್ಯ ನಿಮಗೆ?.....ಹೇಳಿ ಕರೀಮನ ಮ್ಯಾಲ್ನ ಬಾಲ್ಯದ ಪ್ರೀತಿಯಿಂದ ಹೆಗಡೆ ಮಾಸ್ತರ್ ಗೆ ಸಿಕ್ಕಾಪಟ್ಟೆ ಅವಾಜ್ ಹಾಕಿಬಿಟ್ಟೆ.

ಕರೀಂ ಮಾತ್ರ ಭಾರಿ ಅಭಿಮಾನದಿಂದ ನೋಡಿಕೋತ್ತ  ನಿಂತಿದ್ದ.

ಹೊಯ್....ಮಾಣಿ...ಅಂದ್ರು ಹೆಗಡೆ ಮಾಸ್ತರ್ ಕರ್ಚೀಪ್ ನಿಂದ ಬೆವರ ವರ್ಸಿಕೊತ್ತ .

ಯಂತದು ಮಾಸ್ತರೇ? ನೆನಪ ಆತಾ? ನಿಮ್ಮ ಮನೆಹಾಳ್ ಶ್ಲೋಕಾ?

ನೋಡ ತಮ್ಮಾ ....ಆ ಭಜಗೋವಿಂದಂನಲ್ಲಿ ಎರಡು...ಎರಡೇ ಎರಡು ಸಾಲು ಇದ್ದಪ...ಆ ನಮ್ನಿ ಅರ್ಥ ಬಪ್ಪದು....ಹೆಸಿಟೇಟ್  ಮಾಡ್ತಾ ಮಾಡ್ತಾ ಅಂದ್ರು ಮಾಸ್ತರು.

ಹೇಳಿ ಅದನ್ನ....ನೋಡವ....ಕರೀಮನ್ನ ಮಳ್ಳ ಹೆಂಡ್ತಿ ಕೇಳಿದ್ದು ಅದೇ ಶ್ಲೋಕಾನೆ ಹೌದ ಹೇಳಿ....ಅಂತ ಮಾಸ್ತರ್ ಗೆ ಹೇಳೋಕೆ ಅನುಮತಿ ಕೊಟ್ಟೆ.

ಮಾಣಿ....ಆ ಭಜಗೋವಿಂದಂ ನಡೂ ಮಧ್ಯೆ....ಹೇಳಿ ಹೆಗಡೆ ಮಾಸ್ತರ್ ಶುರು ಮಾಡಿದ್ರು.

 ಗತವತಿ ವಾಯು ದೇಹಾ ಪಾಯೇ
 ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ  ||

ಸಾಬ್...ಸಾಬ್....ಇದೆ ಶ್ಲೋಕಾ ಸಾಬ್....ಇದೆ....ನಮ್ಮ ಬೇಗಂ ಇದನ್ನೇ ರೆಫರ್ ಮಾಡಿ ಮಾಡಿ ನಾನು ಗ್ಯಾಸ್ ಬಿಡೋಕೆ ತಡ ಇಲ್ಲ ಬಿಸ್ತರ್ನಿಂದ ಚಂಗ ಅಂತಾ ಹಾರ್ತಾಳೆ ಸಾಬ್.....ಕರೀಂ ಎಕ್ಸೈಟ್ ಆಗಿ ಹೇಳಿದ.

ಹೆಗಡೆ ಮಾಸ್ತರೇ....ಇದರ ಅರ್ಥ ಎಂತದು? ಟೂಶನ್ ಗೆ ಬಪ್ಪ ಕೂಸಗಕ್ಕೆ ಎಂತ ಹೇಳಿ ಅರ್ಥ ಹೇಳಿ ಕೊಟ್ಟಿದ್ರಿ?....ಹೇಳಿ....... ಸೀರಿಯಸ್ ಆಗಿ ಕೇಳಿದೆ ಕೇಳಿದೆ.

ಹೆಗಡೆ ಸರ್ ಸ್ವಲ್ಪ ರೆಲಾಕ್ಸ್ ಆದ ಲುಕ್ ಕೊಟ್ಟರು. ಪ್ರಾಬ್ಲೆಮ್ ಸಾಲ್ವ್ ಮಾಡಿದೆ ಈ ಮಳ್ಳ ಮಾಣಿ, ಈ ಮಳ್ಳ ಸಾಬಂದು ಹೇಳ ಲುಕ್ ಬಂತು ಸರ್ ಮುಖದಲ್ಲಿ.

ಮಾಣಿ....ನೋಡ....ಇದರ ಅರ್ಥ ರಾಶಿ ಡೀಪ್ ಇದ್ದು ಬಿಲ.....ಹೇಳಿ ಶುರು ಮಾಡಿದ್ರು ಹೆಗಡೆ ಸರ್.

ಹೇಳ್ರಾ ನೀವು...ಯನಗಂತೂ ಗೊತ್ತಾಗ್ತು...ಸಾಬಂಗೆ ಅವಂಗೆ ಗೊತ್ತಪ್ ರೀತಿನಲ್ಲಿ ಆನು ಕಡಿಗೆ ಹೇಳ್ತಿ ಅವಂಗೆ....ಅಂದೆ ನಾನು.

ಹೆಗಡೆ ಸರ್ ಮುಂದುವರ್ಸಿದ್ರು.

ಪರಮ ಪೂಜ್ಯ ಆದಿ ಶಂಕರರು ಹೇಳದು ಎಂತದು ಅಂದ್ರೆ......ಸಂಸ್ಕೃತ ಪಿರಿಯಡ್ ನಲ್ಲಿ ಹೇಳ ತರಾನೇ ಶುರು ಮಾಡಿದ್ರು ಸರ್.

ಗತವತಿ = ಹೋಗುತ್ತದೆಯೋ
ವಾಯು = ಪ್ರಾಣ ವಾಯು 
ದೇಹಾ ಪಾಯೇ = ದೇಹದಿಂದ 
ಭಾರ್ಯಾ = ಪತ್ನಿ 
ಬಿಭ್ಯತಿ  = ದೂರ ಹಾರಿ ಓಡುತ್ತಾಳೆ 
ತಸ್ಮಿನ್ ಕಾಯೇ = ಅಂತಹ ದೇಹದಿಂದ 

ಹೆಗಡೆ ಸರ್ ಮುಂದೆ ವರ್ಸಿದರು ....ಸ್ಟೈಲ್ ನಲ್ಲಿ  ಚೇಂಜ್  ಇಲ್ಲ...ಸೇಮ್ ಟು ಸೇಮ್ 25 ವರ್ಷದ ನಂತರವೂ.

ಅರ್ಥಾತ್.....ಆದಿ ಶಂಕರರು ಹೇಳ್ತಾರೆ....ಯಾವ ಪತ್ನಿ ನಿನ್ನ ದೇಹದಲ್ಲಿ ಜೀವ ಇರೋ ತನಕ ನಿನ್ನ ಪಕ್ಕದಲ್ಲಿ ಇರ್ತಾ ಇದ್ದಳೋ, ಅಂತಾ ಪತ್ನಿ, ಯಾವ ನಿಮಿಷದಲ್ಲಿ ನಿನ್ನ ದೇಹದಿಂದ ಅಮೂಲ್ಯ ಪ್ರಾಣ ವಾಯು ಹಾರಿ ಹೋಯಿತೋ, ಅದೇ ಘಳಿಗೆಯಲ್ಲಿ ಜೀವವಿಲ್ಲದ ಆ ದೇಹದಿಂದ ಪತ್ನಿಯೂ ಸಹ ಹೆದರಿ ಹಾರಿ ದೂರ ಜಿಗಿಯುತ್ತಾಳೆ.

ಅಂತಾ ಹೇಳಿ ಹೆಗಡೆ ಮಾಸ್ತರ್  ವಿವರಣೆ ಮುಗ್ಸಿ...ಪ್ರಶ್ನೆ ಇದ್ದರೆ ಕೇಳಿ ಅನ್ನೋ ಲುಕ್ ಕೊಟ್ಟರು.

ನಾ ಮಾತ್ರ ಕನ್ವಿನ್ಸ ಆಗಿರಲಿಲ್ಲ.

ಮಾಣಿ....ನನ್ನ ನಂಬು ಮಾರಾಯ....ನಾ ಎಲ್ಲರಿಗೂ ಹೇಳಿದ್ದು ಇದೇ ಅರ್ಥ ಮಾರಾಯ.....ಆ ಮಳ್ಳ ಸಾಬರ ಕೂಸು ತಪ್ಪ ಅರ್ಥ ಮಾಡಿಕೊಂಡು....ನಿನ್ನ ಈ ಸಾಬ್ ದೋಸ್ತ ಕರೀಮ ಗ್ಯಾಸ್ ಬಿಟ್ಟಾಗ್ ಒಂದ ಸರಿ ಹಾಸಿಗೆ ಬಿಟ್ಟ ಹಾರದ್ರಲ್ಲಿ ಎನ್ನ ತಪ್ಪು ಎಂತದೂ ಇಲ್ಲೇ ಮಾರಾಯ...ನನ್ನ ಬಿಟ್ಟು ಬಿಡು ಮಾರಾಯ.....ಬಡ ಮಾಸ್ತರ್ ನಾನು...ನಿನ್ನ ಅಪ್ಪನೂ ಮಾಸ್ತರ್. ನೋಡ್ಕ್ಯಾ ಮತ್ತೆ.

ಈಗ ನಗಬಾರದ ಜಾಗ ಎಲ್ಲದರಿಂದಲೂ ನಗಿ ಬಂದಿದ್ದು ನನಗೆ.

ಕರೀಂ ಮಾತ್ರ ಫುಲ್ ಕನಫೂಸ ಆಗಿ ನಿಂತಿದ್ದ.

ಸಾಬರ....ಬರ್ರಿ.....ಎಲ್ಲ ಹೇಳತೇನಿ....ಹೆಗಡೆ ಮಾಸ್ತರ್ ಹೇಳಿದ್ದ ನಿಮ್ಮ ಬೇಗಂ ತಪ್ಪ ಅರ್ಥ ಮಾಡಿಕೊಂಡಾರ.

ಹೆಗಡೆ ಮಾಸ್ತರ್ ಗೆ ಇಬ್ಬರೂ ಒಂದು ತರಹದ ಗಿಲ್ಟಿ ಫೀಲಿಂಗ್ ನಮಸ್ಕಾರ ಹಾಕಿ ಹೊರಟು  ಬಂದ್ವಿ.

ಕರೀಮ....ಮಾಸ್ತರ್ ಹೇಳಿದ್ದು ತಿಳಿತೇನೋ ?

ಇಲ್ಲ ಸಾಬ್.....ಅಂತ  ಕನಫೂಸ ಲುಕ್ ಕೊಟ್ಟ.

ನೋಡು...ಕರೀಂ...ಆ ಶ್ಲೋಕದಾಗ ಬರೋ ವಾಯು ಬ್ಯಾರೇದು. ನೀ ರಾತ್ರಿ ಹೆಂಡ್ತಿ ಬಾಜೂಕ ಮಲಕೊಂಡಾಗ್ ಬಿಟ್ಟು ಅಕಿನ್ನ ಹಾಸ್ಗಿಯಿಂದ ಹಾರ್ಸೋ ವಾಯು ಬ್ಯಾರೇದು....ಈ ವಾಯು ಸಲುವಾಗಿ ನಿಮ್ಮ ಬೇಗಂ ಹಾರೋ ಜರೂರತ್ ಇಲ್ಲ.

ಮತ್ತೆ ಸಾಬ್?

ನೋಡು.....ನೀ ಇನ್ನೂ ಮಸ್ತ ಲೈಫ್ ಎಂಜಾಯ್ ಮಾಡಿ...ಭಾಳ ವರ್ಷ ಆದ ಮ್ಯಾಲೆ...ಯಾವಾಗರ ಒಮ್ಮೆ ಸತ್ತು ಮ್ಯಾಲ್ ಹೋಗ್ತಿ ನೋಡು....ಆವಾಗ ನಿನ್ನ ದೇಹದಿಂದ ಹೋಗೋ ಗ್ಯಾಸ್ ಗೆ ಪ್ರಾಣ ವಾಯು ಅಂತಾರ್...ಆವಾಗ ನಿನ್ನ ಹೆಂಡ್ತಿ ನಿನ್ನ ವೇಸ್ಟ್ ಬಾಡಿಯಿಂದ ದೂರ ಹಾರ್ತ್ಲಾಳ  ನೋಡು...ಅದು ಓಕೆ....ಆರ್ಡಿನರಿ ದಿನಾ  ಬಿಡೋ ಗ್ಯಾಸ್ ಗೆ ಅಕಿ ಹಾಸಗಿ ಬಿಟ್ ಹಾರೋ ಜರೂರತ್ ಇಲ್ಲ.

ಕ್ಯಾ ಸಾಬ್...?.ಈ ಸಂಸ್ಕೃತ ತೊಗೊಂಡಿ ಲೈಫ್ ಬರ್ಬಾದ್.....ಗ್ಯಾಸ ವಳಗೂ ದಿನಾ ಬಿಡೋ ಗ್ಯಾಸು, ಸಾಯೋವಾಗ ಬಿಡೋ ಗ್ಯಾಸು ಅಂತ ಬೇರೆ ಬೇರೆ ಇರ್ತದೆ...ಕ್ಯಾ?

ಹೌದಪಾ ...ಹೌದು ...ಸಾಯೋ ಮುಂದ ಬಿಡೋ ಪ್ರಾಣ ಗ್ಯಾಸ್ ಬ್ರಹ್ಮರಂಧ್ರದಿಂದ ಹೊರಗೆ ಹೋಗ್ತದೆ ನೋಡಪಾ.

ಕ್ಯಾ ಬ್ರಹ್ಮಾದು ರಂಧ್ರಾ ಸಾಬ್? ಅದು ಕ್ಯಾ ಓನ್ಲಿ ಬ್ರಾಹ್ಮಣರಿಗೆ ಇರ್ತದೆ ಕ್ಯಾ? ನಾವೆಲ್ಲಾ ಮತ್ತೆ ಎಲ್ಲಿಂದ ಪ್ರಾಣ ಗ್ಯಾಸ್ ಬಿಡಬೇಕು ಸಾಬ್..ಅಂದ ಕರೀಂ.

ಹೋಗ್ಗೋ ನಿನ್ನ....ಬ್ರಹ್ಮರಂಧ್ರ ಬಗ್ಗೆ ಮತ್ತೆ ಯಾವಾಗರ ಹೇಳತೇನಿ..ಅದು ಎಲ್ಲರಿಗೂ ಇರ್ತದ. ಕೇವಲ ಬ್ರಾಹ್ಮಣರಿಗೆ ಮಾತ್ರ ಅಲ್ಲ.

ಚೊಲೋ ನೋಡಿ...ಸಾಬ್...ಇಲ್ಲ ಅಂದ್ರ...ಪ್ರಾಣ ಗ್ಯಾಸ್ ಎಲ್ಲಿಂದ ಬಿಡೋದು ಅಂತ ಚಿಂತಿ ನಮಗೆ.

ಸಾಬರ....ಎಲ್ಲ ಸುಸೂತ್ರ ಆತಲ್ಲ ಈಗ? ಸ್ವಲ್ಪ ರಾತ್ರಿ ಮಲಗೋ ಮುಂದೆ ಇನೋ, ಜೆಲುಸಿಲ್ ತೊಗುಂಡು ಯಾಲಕ್ಕಿ, ಲವಂಗ, ಜೇಷ್ಟಮದ್ದು ಮಿಕ್ಸ್ಚರ್ ತೊಗೊಂಡು ಮಲ್ಕೊಳ್ಳರಿ ಬೇಗಂ ಹಾರೋದು ದೂರ ಉಳಿತು....ಅಂತ ಮಾತ್ ನಿಲ್ಲಸಿದೆ.

ಹಾರೋದಿಲ್ಲ ಅಂದ್ರೆ ಹತ್ರಾ ಬರ್ತಾಳಾ ಕ್ಯಾ ಸಾಬ್? ....ಅಂತ ಭಾಳ ಆಸೆಯಿಂದ ಕೇಳಿದ.

ಬಂದರೂ ಬರಬಹುದು. ಹೋಗಿ ಬರ್ರಿ...ಶುಭವಾಗಲಿ.

ಅಂತ ಹೇಳಿ....ಸಾಬರಿಗೆ ಖುದಾ ಹಾಫಿಜ್ ಹೇಳಿ ಬಂದೆ.

ಮನಿಗೆ ಬಂದು ಭಜಗೋವಿಂದಂ ಡಿಟೇಲ್ ಆಗಿ ಸ್ಟಡಿ ಮಾಡಲು ಶುರು ಮಾಡಿದೆ.

Sunday, June 24, 2012

ಬೋಲ್ಡಿ ಆಂಟಿ ಮತ್ತು ಬಾಲ್ಡಿ ಅಂಕಲ್

ಸಾಬ್....ನಮ್ಮದು ಬೇಗಂ ಈಗಿತ್ತಲಾಗೆ ಬೋಡಿ ಆಗಿ ಬಿಟ್ಟಿದೆ.....ಅಂತ ನಿಟ್ಟುಸಿರು ಬಿಟ್ಟ ಕರೀಂ.

ನಿಟ್ಟುಸಿರು ಬಿಡುತ್ತ ಬಿಡುತ್ತ ತನ್ನ ಬಿಳಿ ಸಾಬರ ಟೊಪ್ಪಿ ತೆಗೆದು ಕರಚೀಪ್ ನಿಂದ ತನ್ನ ಬಕ್ಕ ತಲಿ ಮ್ಯಾಲಿನ ಬೆವರು ವರಸಿಕೊಂಡು ಒಂದು ಕ್ಷಣ ಹಾಯ್ ಅನ್ನೋ ಫೀಲಿಂಗ್ ಅನುಭವಿಸಿದ ಲುಕ್ ಕೊಟ್ಟ ಏಜಿಂಗ್ ಬಾಲ್ಡೀ ಅಂಕಲ್ ಕರೀಂ.

ಅವನ ಬಕ್ಕ ತಲಿ ನೋಡಿ.....ಬೋಡಾ ಇಲ್ಲ ಬೋಡ್ಯಾ ಅಂತ ಅಂದ್ರ ಇವನಿಗೆ ಅನ್ನಬೇಕು. ಆದ್ರ ಹೆಂಡ್ತಿ ಬೋಡಿ ಆಗ್ಯಾಳ್ ಅಂತಾನ ಅಲ್ಲ? ಏನು ಇದರ ಅರ್ಥ?

ಯಾಕ್ ಸಾಬರ ನಿಮ್ಮ ಬೇಗಂ ಬೋಡಿ ಆದರು? ತಲಿ ವಳಗ ಔಷಧದಿಂದ ತೆಗಿಲಿಕ್ಕೆ ಆಗದಷ್ಟು ಹೇನು, ಕೂರಿ, ತಗಣಿ ಇತ್ಯಾದಿ  ಆಗಿ ಬಿಟ್ಟಿದ್ದವು ಏನು? ಅದಕ್ಕ ಸೀದಾ ಬಂಡಾಯಕಾರಿ ನಿರ್ಣಯ ತೆಗೆದುಕೊಂಡು ಬೋಡಿ ಹೊಡ್ಸಿಬಿಟ್ಟರು ಏನು?....ಅಂದೆ.

ಏನು ಮಾತಾಡತೀರಿ ಸಾಬ್?....ಸ್ವಲ್ಪ ಗರಂ ಆದಂಗ ಇದ್ದಾ ಕರೀಂ.

ಮತ್ತೆ ನೀವ್ ಹೇಳಿದರಲ್ಲ ಸಾಬ್ರ?.....ನಿಮ್ಮ ಹೆಂಡ್ತಿ ಬೋಡಿ ಆಗ್ಯಾಳ್ ಅಂತ. ಬೋಡಿ ಅಂದರಾ ತಲಿ ಬೋಳಿಸ್ಕೊಂಡವರು ಅಂತ.

ಯಾ ಅಲ್ಲಾ.....ತೋಬಾ .....ತೋಬಾ.....ನಿಮ್ಮದು ತಲಿ ......ನಮ್ಮ ಬೇಗಂ ಬೋಳಿಸಕೊಂಡಾಕಿ  ಅನ್ನೋರ್ ಇಡೀ ಖಾಂದಾನ್ ಬೋಡಿ ಮಾಡ್ಲಿ ಆ ಖುದಾ......ಸಿಕ್ಕಾಪಟ್ಟೆ ಸಿಟ್ಟಿಗೆದ್ದು ನನಗೆ ಮತ್ತು ನಮ್ಮ ವಂಶಕ್ಕೆ ಶಾಪ ಹಾಕಿದ ಕರೀಂ.

ಸಿಟ್ಟ ಆಗ್ ಬ್ಯಾಡ್ರಿ ಸಾಬರ. ಬೋಡಿ ಆದಳು ಅಂದ್ರಿ. ಅದಕ್ಕ ಬೋಡಿ ಅನ್ನೋದರ ಅರ್ಥ ಹೇಳಿದ್ರ ನೀವು ತಪ್ಪ ತಿಳ್ಕೊಂಡು ಗರಂ ಆಗಿ ಬಿಟ್ಟಿರಿ. ಗುಸ್ಸಾ ಕ್ಯಾಕರ್ಸಿ ಥೂಕೋಜಿ.....ಅದು ವಳ್ಳೆದು ಅಲ್ಲ ಸೇಹತ್ ಗೆ......ಅಂದೆ.  ನನ್ನ ಭಾಷಾ ಸಹಿತ ಅವನ ತರಹ ಆಗಿದ್ದು ನೋಡಿ ಸಹವಾಸ ದೋಷ  ಅಂದುಕೊಂಡೆ.

ಹಾಗೇನು ಇಲ್ಲ ಸಾಬ್. ನಮ್ಮ ಬೇಗಂದು  ನಾಗಿನ್ ಬಾಲ್ ಹಾಂಗೆ ಅವೇ....ಕೊಬ್ಬರಿ ಎಣ್ಣಿ  ಹಚ್ಚಿ ಮಾಲಿಶ್ ಮಾಡಿ ಮಾಡಿ ಕರಿ ಕರಿ ಬಾಲ್ ಮಸ್ತ ಮಿಂಚಿ ಮಿಂಚಿ  ಕಾಣತಾವೆ.

ನಾಗಿನ್ ಬಾಲ್ ಅಂದ್ರ ಏನ್ರಿ? ನಿಮ್ಮ ಹೆಂಡ್ತಿ ತಲಿ ವಳಗ ಕೇವಲ ಹೇನು, ಕೂರಿ ಆಗ್ಯಾವ್ ಅಂತ ಮಾಡಿದ್ದೆ. ಏನು ಇದು? ಹಾವು, ಹೆಬ್ಬಾವು ಎಲ್ಲ ಸೇರಿಕೊಂಡಾವು ಅಂತ ಆತು.ಛೆ...ಛೆ.

ನಿಮ್ಮ ತಲಿ ಸಾಬ್....ಸುಬೆ ಸುಬೆ ಚಾಯ್ ಆಗಿಲ್ಲ ಕ್ಯಾ? ಅಲ್ಲಾ ......ನಮ್ಮ ಹೆಂಡ್ತಿ ತಲಿ ವಳಗೆ ಸಾಂಪ್, ಅಜಗರ್  ಯಾಕೆ ಬರಬೇಕು?........ಸಿಕ್ಕಾಪಟ್ಟೆ ಇರಿಟೇಟ್ ಆಗಿ ಹೇಳಿದ ಕರೀಂ. ಹೆಂಡ್ತಿ ತಲಿವಳಗ ಹಾವು, ಹೆಬ್ಬಾವು ಅಂದ್ರ......

ಮತ್ತೇನ್ರಿ ? ನಾಗಿನ್  ಬಾಲ್ ಅಂದ್ರಿ?....ದನಿ ಏರ್ಸಿ ಹೇಳಿದೆ. ನನಗೂ ಸ್ವಲ್ಪ ಉರದಿತ್ತು.

ಅಲ್ಲ ಸಾಬ್.....ಉದ್ದ ಚಂದ ಕರ್ರನೆ ಬಾಲ್  ಇರೋ ಲೇಡೀಸ್ ಗೆ ಸಂಸ್ಕ್ರತ್ ನಲ್ಲಿ ಏನೋ ನಗೀನಾ ವಾಣಿ ಅಂತಾರಲ್ಲ ಸಾಬ್.....ಹಾಗೆ ನಮ್ಮ ಬೇಗಂ ಬಾಲ್ ಅವೇ ಅಂತ.

ಹೋಗ್ಗೋ ಸಾಬರ.....ನಾಗವೇಣಿ ಅಂತ ಏನ್ರೀ ?

ಹಾಂ......ಅದೇ ನೋಡಿ ಸಾಬ್.....

ನಾಗವೇಣಿ ಅನ್ನಲಿಕ್ಕೆ ನಗೀನಾ ವಾಣಿ ಅಂತೀರಿ ಅಲ್ಲರಿ......ನಿಮ್ಮ ತಲಿ.

ಇನ್ನು ಕೃಷ್ಣವೇಣಿ ಅನ್ನಲಿಕ್ಕೆ ಕರೀನಾ ವಾಣಿ ಅನ್ನೋ ಪೈಕಿ ಇವ....ಮಂಗ್ಯಾನ್ ಕೆ. ಹೈಸ್ಕೂಲ್ ನಲ್ಲಿ ಸಂಸ್ಕ್ರತ ಬ್ಯಾರೆ ತೊಗೊಂಡಿದ್ದ.

ಸಾಬರ....ಟೈಮ್ ಭಾಳ್  ಆತು.....ಬೋಡಿ ಅಂದ್ರ ತಿಳಿಲಿಲ್ಲ.

ಅದೇ ಸಾಬ್.....ನಮ್ಮ ಬೇಗಂ ಸಿಕ್ಕಾಪಟ್ಟೆ ತಿರಸಟ್ಟ ಆಗಿ ಬಿಟ್ಟಾಳೆ ಸಾಬ್. ಎದರು ಎದರು ಉತ್ತರ ಕೊಡ್ತಾಳೆ ಸಾಬ್. ಮಸಡಿ ಮ್ಯಾಲೆ ಹೊಡದ ಹಾಗೆ ಮಾತು. ಒಂದು ನಯ ಇಲ್ಲ ವಿನಯ ಇಲ್ಲ. ಯಾವಾಗಲೂ ಬ್ಯಾಕ್ ಸೈಡ್ ನಲ್ಲಿ ಬ್ಲಾಸ್ಟ್ ಆದ ಮಂದಿ ಹ್ಯಾಂಗೆ ಚಿಟಿ ಚಿಟಿ  ಚೀರಿ ಚೀರಿ ಮಾತಾಡ್ತಾರೆ ನೋಡಿ...ಹಾಗೆ....ತುಂಬಾ ಬಕ್ತಮೀಜ್ ರೀತಿನಲ್ಲಿ ಮಾತಾಡ್ತಾಳೆ.

ಓಹೋ ಹಾಂಗ ಏನು?

ಆದ್ರ ಹಿಂಗೆಲ್ಲ ವರ್ತನೆ ಮಾಡೋದಕ್ಕೂ ಮತ್ತೆ ಬೋಡಿ ಆಗೋದಕ್ಕು ಏನು ಲಿಂಕ್ ಸಾಬರ?

ಅದೇ ಸಾಬ್....ಹೀಗೆ ತಿರಸಟ್ಟ ರೀತಿನಲ್ಲಿ ಮನಸ್ಸಿಗೆ ನೋವು ಆಗೋ ರೀತಿ ಮಾತಾಡೋದಕ್ಕೆ ಬೋಡಿ ಅಂತಾರಂತೆ ಸಾಬ್.

ಸಾಬರ....ಬೋಡಿ ಅಂತ ಅಲ್ಲ ಬೋಲ್ಡ್ ಇರಬೇಕು ನೋಡ್ರಿ.

ಹಾಂ ಅದೇ ಇರಬೇಕು ಸಾಬ್. ಮಾತಿಗೊಮ್ಮೆ ಬೋಲ್ಡ್ ಬೋಲ್ಡ್ ಅಂತಾಳೆ....ಕೇಳಿದ್ರೆ ಆಜ್ ಮೈ ಜವಾನ್ ಹೋಗಯೀ ಹೂನ್ .....ಗುಲ್ ಸೆ ಗುಲಸ್ತಾನ್ ಹೋಗಯೀ ಹೂನ್. ಬೋಡಿ ಸೆ ಬೋಲ್ಡೀ ಹೋ ಗಯೀ ಹೂನ್ ....ಎ ದಿನ ಎ ಸಾರಿ ಮಹೀನ ............ಅಂತ ಗಾನ ಹಾಡಿ ಹಾಡಿ ನಮಗೆ insult ಮಾಡ್ತದೆ ನಮ್ಮ ಬೇಗಂ....ಸಾಬ್.

ಹೌದ್ರಿ ಸಾಬರ....ಅದಕ್ಕ ಏನ ಮಾಡಲಿಕ್ಕೆ ಬರೋದಿಲ್ಲ.....1960 ರ ಟೈಮ್ ನಲ್ಲಿ ಕೆಲೋ ಮಂದಿ ಹೆಂಗಸೂರು ಹಾಕ್ಕೊಂಡ ವಸ್ತ್ರ ಎಲ್ಲ ಕಳೆದು ಅದಕ್ಕ ಬೆಂಕಿ ಹಚ್ಚಿ, ಬೆಂಕಿ ಸುತ್ತಾ  ನಂಗಾ ನಾಚ್ ಮಾಡಿ ತಾವು ಬೋಲ್ಡ್ ಆದ್ವಿ, ತಾವು ಲಿಬರೆಟೆಡ್ ಆದ್ವಿ ಅಂತ ಖುಷಿ ಪಟ್ಟಿದ್ದರಂತ. ಅಂತವರು ಮುಂದೆ ಹಿಪ್ಪಿ ಆಗಿ ಹರೋಹರ ಆಗಿದ್ದು ಗೊತ್ತದ. ವಿನಾಶ್ ಕಾಲೇ ವಿಪರೀತ್ ಬುದ್ದಿ ನೋಡ್ರಿ.

ಹೇಳ್ರಿ ನಿಮ್ಮ ಬೇಗಂ ಆ ಹಿಪ್ಪಿ ಮಂದಿ ಕಥಿ....ಆವಾಗರ ಬುದ್ಧಿ ಬಂದು ಸ್ವಲ್ಪ ನಯ ವಿನಯ ಕಲ್ತಾಳು.

ಟ್ರೈ ಮಾಡ್ತೇನಿ ಸಾಬ್.

ಖುದಾ ಹಾಫಿಜ್ ಸಾಬ್.

ಹೋಗಿ ಬರ್ರಿ ಸಾಬರ.....ದೇವರು ಒಳ್ಳೇದ್ ಮಾಡ್ಲಿ.

ಪಾಪ ಬೋಡ್ಯಾ ಕರೀಂ ಸಾಬರು....ಅವರ ಬೋಲ್ಡೀ ಬೇಗಂ.


Part 2 ಇಲ್ಲಿದೆ. http://maheshuh.blogspot.com/2012/06/2.html

Forgive yourself

Only you can forgive yourself. Nobody else can forgive you. Others can only acknowledge if you tell them that you have forgiven yourself. This acknowledgement that comes from others is what we call they have forgiven us. But, it's you and only YOU who can forgive yourself.

See, forgiveness has been made needlessly complicated between human beings. You want to seek forgiveness because you're so miserable. Reason for your misery is you do not know what it is to forgive yourself. The most important person that you have to forgive is yourself. Do that and do yourself and everyone a favor.

People lead  miserable lives because they do not know that it's only they who  can forgive themselves and nobody else. They are sad because the person from whom they seek forgiveness is not there anymore. Or the person may not reachable. Or there may be some other reason.

Why worry about all this? Your conscience is pricking you. Right? It's time to make peace with yourself. 

Just list down the wrongs you committed. Sincerely and seriously ponder over them and forgive yourself completely. It's possible. Just do it as part of your prayers or temple visit or something else. 

Once you have forgiven yourself, if it matters and if it is possible, let the other person know about the same. You can also ask for forgiveness from others but in reality what you are asking is mere acknowledgement of what you have already done. Sometimes it helps and sometimes it does not. 

When God has given every conceivable power to humans, do you think God has not given us the power to forgive ourselves? We just do not know it. First forgive yourself for anything and everything. You are way too precious to wait for someone else to do it for you because only you can forgive yourself.

Asking others for forgiveness is like asking them take a shower or even funnier asking them to give you one because you feel you need one. How crazy is that? What is needed is you take a shower of forgiveness to cleanse your soul.
All these complications arise because we are way too immature. We are on our way but got a long way to go before we can laugh at  the absurdity of all this. Same river of consciousness flows through all of us. And here one drop of water in the same whirlpool of life is asking the other drop to do something. You can not even say there are drops of water. Water in the river is so seamless and one.

But, till we see the unity and remove all the separateness, we will need all these rudimentary techniques so that we do not go crazy about this simple but most powerful soul cleansing technique - forgiveness.

If you think that you can forgive someone else or someone else has to forgive you, fine. You will move to next level of awareness when you are ready. But, let that not stop you from forgiving yourself. Continue to forgive others but first forgive yourself because as they say - put the oxygen mask on yourself first before trying to put it on your dependents. Without forgiving yourself, you will wither away because unclean conscience is highly toxic.

Just do not say - I forgive myself for not forgiving myself. 

Cheers!






Saturday, June 23, 2012

Is it so? - Zen way of being cool

Swami Tejomayananda told this story in one of the discourses during Vedanta-2012 camp.

There was a Zen monk. 

Perfect monk. Totally out of this world. On his own. Nothing doing with people or anything else.

One family got so impressed by this monk's wisdom that they became his disciples. They sent him food, water etc. from time to time. They also visited him in his forest retreat occasionally.

There was a girl in that family. She was not particularly religious or anything but with her parents, she also used to  visit the monk.

This girl had an affair with some person in the town. She got pregnant because of her affair. She was not married to that man. She panicked. She and her boyfriend came up with a ploy to  implicate this zen monk as the culprit. The girl ended up delivering a baby.

Family was very upset. They were angry. They asked the girl - who is responsible for this mess? Tell us. Otherwise, we will kill you. In order to save herself and her boyfriend, the girl said it was the zen monk who was responsible for the baby.

Family could not believe her story. But they were also deluded. When they went and accused the monk, he did not even try to defend himself.

He just asked - is it so?

Father of the girl was all upset. He lost his temper and flew off the handle. He beat the monk and manhandled him in all possible ways. It was only monk's extraordinary powers that saved him from being lynched by girl's family.

Despite all this, monk kept did not react at all.

Father of the girl yelled - this is your baby. You are it's father. Take care of it now. We do not want anything to do with this baby.

Monk was not at all perturbed.

With his zen calmness he said - is it so? OK. please leave the baby with me. I will raise the baby.

Monk had no training in raising babies. But he still started raising the baby as though it was his own. He was a good monk. Some other people helped him too. 

The point here is look at how he did not defend at all. We many times go on offensive even when no one has attacked us. Somebody says something, we take it personally and off we go to defend ourselves. Defend what? Even if the person is attacking you, is he or she not harming himself or herself? What to defend against?

Anyway, story continues.

Zen monk continued to raise the kid.

The girl had not expected it. She and her boyfriend had expected that her family would kill the monk. After that she would be able to keep the baby and problem would be gone for ever.

But, there is something called conscience. However much we try, it keeps sending unmistakable signals when something is not right. We fail to make peace with ourselves and when the situation becomes unbearable, we seek the solution.

Same thing happened with the girl. She got sick. Both mentally and physically. She could not carry on with the story which she and her boyfriend had made up any longer. It was driving her insane. Without her new born baby, she was on the verge of going insane. At that time she broke down and told everything to her family.

Family felt very bad for having mistreated the zen monk. They went back to him. He was as cool as cucumber and welcomed them without even an iota of ill will towards them.

The father explained everything and asked back the baby.

Zen monk again said - is it so? OK. Here is your baby. Take it back.

Is it so? - what a powerful disarming way to deal with any situation.

Next time try it. In any difficult situation or when confronting an attacker, instead defending yourself, just ask - is it so?

I am unable to make justice to the power of this story. But the way, Swamiji told this story in less than 5 minutes, I was simply blown away. Is it so? It is a really a very powerful technique to diffuse any stressful situation.

I tried it right away. Everywhere I simply asked myself - is it so?

Keep in mind that - is it so? -  is not a question to be answered. It is a powerful zen spiritual formula which has the power of thousands and thousands of masters. Just remembering to say it makes all the difference. It slows the mind so much so that right solution starts emerging.

Next time what are you going to ask? 

Is it so?

Ask this for anything. Even if someone says you are this or that or some other bad thing. Instead of defending, just ask - is it so. See how it calms you and also everyone involved.

This blog post is rubbish. 

Is it so? :)

Cheers!