Thursday, February 26, 2015

ಕಟಿಂಗ್ ಕಾಳಿಂಗ, ಶೇವಿಂಗ್ ಶಂಭುಲಿಂಗ

ಚಳಿಗಾಲದಲ್ಲೇ 'ಸಮ್ಮರ್ ಕಟ್' (summer cut) ಹೊಡಿಸಿಕೊಂಡು ಬಂದುಬಿಟ್ಟಿದ್ದ ದ್ಯಾಮ್ಯಾ! 'ಏನಪಾ, ಇವಾ ಎಲ್ಲೆ 'ಏಳು ಕುಂಡಲವಾಡನ' ಸನ್ನಿಧಿ ಅಂದ್ರ ತಿರುಪತಿಗೆ ಹೋಗಿ, ಮುಡಿ ಗಿಡಿ ಕೊಟ್ಟ ಬಂದಾನೇನಪಾ?' ಅಂತ ಸಂಶಯ ಬಂತು. ತಲಿ ನೋಡಿದರೆ ಕಳೆ ಕಿತ್ತ ಸ್ವಚ್ಛ ಮೈದಾನ ಆಗಿತ್ತು. ಟಕಳಾ ತಬಲಾ ತಲಿ ಆಗಿಬಿಟ್ಟಿತ್ತು!

'ಏನಲೇ ದ್ಯಾಮ್ಯಾ ಈ ವೇಷಾ? ಏನು ಇದು? ಫುಲ್ ಗುಂಡ ಹೊಡೆಸಿಬಿಟ್ಟಿಯಲ್ಲಾ??? ಹಾಂ?' ಅಂತ ಕೇಳಿದೆ.

'ಹೌದಲೇ, ಕಟಿಂಗ್ ಮಾಡಿಸಲಿಕ್ಕೆ ಅಂತ ನಮ್ಮಪ್ಪ ಅವನ ಜೋಡಿನೇ  ಕರಕೊಂಡು ಹೋಗಿದ್ದ. ಅದಕ್ಕೆ ಏನೇನೋ ಆಗಿ ಹೀಂಗ ಆಗಿ ಹೋತು,' ಅಂತ ಹೇಳಿ, ದೊಡ್ಡದಾಗಿ ಹುಸ್ ಅಂದ ದ್ಯಾಮ್ಯಾ.

ದ್ಯಾಮ್ಯಾ ಉದ್ದ ಕಥಿ ಹೇಳಿದ. ಅದರ ಸಾರಾಂಶ ಇಷ್ಟು.

ದ್ಯಾಮ್ಯಾ ಅವರಪ್ಪ ಗೌಂಡಿ ಶಂಕರಪ್ಪನ ಜೋಡಿ ಕಟಿಂಗ್ ಮಾಡಿಸಲಿಕ್ಕೆ ಹೋಗ್ಯಾನ. ಅವರಪ್ಪ ಗೌಂಡಿ ಶಂಕರಪ್ಪ ಅಂದ್ರ ಭಾರಿ ಜಾಬಾದ್ ಮನುಷ್ಯ. ಭಾರಿ ತಲಿ ಇಟ್ಟಾನ.

ಅಪ್ಪ, ಮಗ ಇಬ್ಬರೂ ಹೋಗಿ ಕಟಿಂಗ್ ಅಂಗಡಿ ಉರ್ಫ್ ಹಜಾಮತಿ ಸಲೂನ್ ಒಳಗ ಕೂತಾರ. ಖಾಲಿ ಇತ್ತು ಅಂತ ಹೇಳಿ ಅಪ್ಪ, ಮಗ ಇಬ್ಬರನ್ನೂ ಬಾಜು ಬಾಜು ಕುರ್ಚಿ ಮ್ಯಾಲೆ ಕೂಡಿಸಿ, 'ಏನು ಮಾಡ್ಲಿರೀ? ನಿಮಗೇನು? ಈ ಹುಡುಗಗ  ಏನು? ಕಟಿಂಗ್? ಶೇವಿಂಗ್?'  ಅಂತ ಕೇಳ್ಯಾರ ಸಲೂನ್ ಮಂದಿ.

'ಕಟಿಂಗಿಗೆ ಎಷ್ಟರೀ ಅಣ್ಣಾರ?' ಅಂತ ಕೇಳ್ಯಾನ ದ್ಯಾಮ್ಯಾನ ಅಪ್ಪ ಗೌಂಡಿ ಶಂಕರಪ್ಪ.

ಕಟಿಂಗ್ ಅಂಗಡಿ ಮಂದಿ ಇರಿಟೇಟ್ ಆಗ್ಯಾರ. ಏನಿದು ಹೀಂಗ ಬಂದು ಕೂತ ಮ್ಯಾಲೆ ಹಾಪರ ಗತೆ ರೇಟ್ ಕೇಳ್ತಾರ ಅಂತ.

'ಕಟಿಂಗ್ ಎಂಟು ರೂಪಾಯಿ ನೋಡ್ರೀ ಸಾವಕಾರ್ರ!' ಅಂದಾನ ಕಟಿಂಗ್ ಕಾಳಿಂಗ. ಅದು ಹಜಾಮನ ಹೆಸರು. ಸಾವಕಾರ್ರೀ ಅಂತ ಒತ್ತಿ ಹೇಳ್ಯಾನ. ಕಿಂಡಲ್ ವ್ಯಂಗ್ಯ ಮಾಡೋ ಹಾಂಗ. ಗೌಂಡಿ ಶಂಕರಪ್ಪಗೂ ಅವನ ಮಾತಿನಾಗಿನ ವ್ಯಂಗ್ಯ ಗೊತ್ತಾಗೈತಿ ಬಿಡ್ರೀ. ಅವನೂ ಮನಸ್ಸಿನ್ಯಾಗೇ ಬತ್ತಿ ಇಡೋ ಸ್ಕೀಮ್ ಹಾಕ್ಯಾನ.

'ಶೇವಿಂಗ್ ಎಷ್ಟರೀ?????' ಅಂತ ಮತ್ತ ದೂಸರಾ ಪ್ರಶ್ನೆ ಒಗದಾನ ಗೌಂಡಿ ಶಂಕರಪ್ಪ.

'ಶೇವಿಂಗ್ ಆರು ರೂಪಾಯಿ,' ಅಂತ ಹೇಳಿದ ಕಟಿಂಗ್ ಕಾಳಿಂಗ, ಮತ್ತೂ ಇರಿಟೇಟ್ ಆಗಿ, 'ನಿಮಗ ಏನು ಮಾಡ್ಲೀ? ನಿಮ್ಮ ಬಾಜೂ ಕುಂತ ಹುಡುಗಗ  ಏನು ಮಾಡ್ಲೀ? ಲಗೂ ಹೇಳರಲ್ಲಾ???' ಅಂತ ಗಡಿಬಿಡಿ ಮಾಡ್ಯಾನ. ಇವರಿಗೆ ರೇಟ್ ಕಾರ್ಡ್ ಹೇಳೋ ಟೈಮ್ ಒಳಗ ನಾಕು ಮಂದಿ ತಲಿ ಬೋಳಿಸಿ ಆಗ್ತಿತ್ತು ಅವಂಗ. ನೋಡಿದರೆ ಇವರು ಹೀಂಗ.

ಕಟಿಂಗ್ ಮತ್ತು ಶೇವಿಂಗ್ ರೇಟ್ ಕೇಳಿದ ಗೌಂಡಿ ಶಂಕರಪ್ಪ ಡೀಪ್ ಥಿಂಕಿಂಗ್ ಮೋಡಿಗೆ ಹೋಗಿ ಬಿಟ್ಟ. ಭಾರಿ ಜಾಬಾದ್ ಮನುಷ್ಯಾ ಆವಾ. ಗೌಂಡಿ ಕೆಲಸ ಬ್ಯಾರೆ ಭಾಳ ಕಮ್ಮಿ ಆಗಿಬಿಟ್ಟೈತಿ. ರೊಕ್ಕ ಇಲ್ಲದ ಕಡಕಿ ದಿನಗಳು. ಹಾಂಗಂತ ಹೇಳಿ ಅವಂಗ ದಿನಕ್ಕೆ ಮೂರು ಬಾಟಲಿ ಕಂಟ್ರಿ ಶೆರೆ, ನಾಕು ಕಟ್ಟು ಗಣೇಶ ಬೀಡಿ ಇರಲಿಲ್ಲ ಅಂದ್ರ ನಡೆಯೋದಿಲ್ಲ. ಹಾಂಗಾಗಿ ಎಲ್ಲೆಲ್ಲೋ ರೊಕ್ಕ ಉಳಿಸಲಿಕ್ಕೆ ನೋಡ್ತಾನ.

'ಕಟಿಂಗಿಗೆ ಎಂಟು, ಶೇವಿಂಗಿಗೆ ಆರು ರೂಪಾಯಿ ಅಂದ್ರ್ಯಾ?' ಅಂತ ಕಟಿಂಗ್ ಕಾಳಿಂಗನ ಮುಖ ನೋಡಿದ ಶಂಕರಪ್ಪ. ಅವ ಹೇಳಿದ್ದು, ಇವ ಕೇಳಿದ್ದು ಎಲ್ಲ ಖಾತ್ರಿ ಮಾಡಿಕೊಳ್ಳವರಾಂಗ.

'ಹೌದ್ರೀ! ಬರೋಬ್ಬರಿ ಅದ. ಹೇಳ್ರೀ ಏನು ಮಾಡಲಿ? ನಿಮ್ಮ ಹುಡುಗಗ ಏನು ಮಾಡ್ಲೀ?' ಅಂತ ಆಖ್ರೀ ಸರೆ ಅನ್ನೋವಾಂಗ ಹೇಳ್ಯಾನ ಕಟಿಂಗ್ ಕಾಳಿಂಗ.

'ಒಂದು ಕೆಲಸಾ ಮಾಡ್ರೀ ಅಣ್ಣಾರ,' ಅಂತ ಹೇಳಿ ಮತ್ತ ಬ್ರೇಕ್ ತೊಗೊಂಡ ದ್ಯಾಮ್ಯಾನ ಅಪ್ಪ ಗೌಂಡಿ ಶಂಕರಪ್ಪ. ಕಟಿಂಗ್ ಕಾಳಿಂಗ ಫುಲ್ ಹೈರಾಣ ಆಗಿ, 'ಹೇಳ್ರೀ, ಲಗೂ ಹೇಳ್ರೀ,' ಅಂತ ಅಂಬೋ ಅಂದಾನ.

'ನನಗ ಕಟಿಂಗ್ ಮಾಡ್ರೀ. ಮತ್ತ ನಮ್ಮ ಹುಡುಗಗ ಶೇವಿಂಗ್ ಮಾಡಿ ಬಿಡ್ರೀ!' ಅಂತ ಹೇಳಿ ಕಣ್ಣು ಮುಚ್ಚಿಬಿಟ್ಟ ಗೌಂಡಿ ಶಂಕರಪ್ಪ. ನಮ್ಮ ಕಡೆ ಹಾಂಗೆ. ಕಟಿಂಗ್ ಮಾಡಿಸೋವಾಗ ಕಣ್ಣು ಮುಚ್ಚಿಬಿಡೋದು. tension ಕಮ್ಮಿ ಆಗ್ತದ. ಇಲ್ಲಂದ್ರ ಆ ಹಜಾಮರ ತರತರಹದ ಆಯುಧ ಅಂದ್ರ ಕತ್ರಿ, ಕತ್ತಿ, ಲಾನ್ ಮೂವರ್ ನಂತಹ ಮಶೀನ್ ನೋಡಿ ಭಾಳ tension ಆಗಿಬಿಡ್ತದ.

ಅದನ್ನು ಕೇಳಿದ ಕಟಿಂಗ್ ಕಾಳಿಂಗ ಫುಲ್ ಘಾಬರಿಯಾಗಿಬಿಟ್ಟ. 'ಏನ್ ಮನುಷ್ಯಾ ಅದಾನಪಾ ಇವಾ? ತನಗ ಕಟಿಂಗ್ ಮಾಡು, ಬಾಜೂ ಕುಂತ, ಇನ್ನೂ ಗಡ್ಡ ಸಹಿತ ಮೂಡದ ಸಣ್ಣ ಹುಡುಗಗ ಶೇವಿಂಗ್ ಮಾಡು ಅನ್ನಾಕತ್ತಾನ. ಏನಾಗೈತಿ ಇವಂಗ?' ಅಂತ ಹೇಳಿ ತಲಿ ಕೆಡಿಸಿಕೊಂಡು, ಫುಲ್ ಹೈರಾಣ ಆದ.

'ಸಾವಕಾರ್ರ, ಏನು ಹೇಳಾಕತ್ತೀರೀ? ನಿಮಗ ಕಟಿಂಗು!? ನಿಮ್ಮ ಹುಡುಗಗ ಶೇವಿಂಗಾ!? ಹ್ಯಾಂ?! ' ಅಂತ ದೊಡ್ಡ ಉದ್ಗಾರ ಮಾಡಿದ.

'ಹೌದ್ರೀ, ನನಗ ಕಟಿಂಗ್ ಮಾಡ್ರೀ ಅಣ್ಣಾರ. ನಮ್ಮ ಹುಡುಗಗ ಶೇವಿಂಗ್ ಅಂದ್ರ ಅವನ ತಲಿ ಶೇವಿಂಗ್ ಮಾಡಿ ಬಿಡ್ರೀ ಅಂತ. ಕಟಿಂಗ್ ಕಿಂತ ಎರಡು ರುಪಾಯಿ ಸೋವಿ (ಕಡಿಮೆ) ಆಕ್ಕೈತಿ ನೋಡ್ರೀ!' ಅಂತ ಹೇಳಿದ ಗೌಂಡಿ ಶಂಕರಪ್ಪ ಗಪ್ ಆಗಿಬಿಟ್ಟ.

'ರೀ! ಸಾವಕಾರ್ರ! ಏನ್ರೀ ನೀವು ಹೇಳೋದು!? ಶೇವಿಂಗ್ ಅಂದ್ರ ದಾಡಿ ಮಾಡೋದು ಅಂತ. ತಲಿ ಬೋಳಿಸೋದು ಅಲ್ಲರೀ,' ಅಂತ ಏನೋ ವಿವರಣೆ ಕೊಡಲಿಕ್ಕೆ ಹೋದ ಕಟಿಂಗ್ ಕಾಳಿಂಗ.

ಮುಚ್ಚಿದ್ದ ಕಣ್ಣು ಸಾವಕಾಶ ಬಿಟ್ಟ ಗೌಂಡಿ ಶಂಕರಪ್ಪ. ಶಿವ ಮೂರನೇ ಕಣ್ಣು ಬಿಟ್ಟಂಗ! ಹಿಂದಿನ ರಾತ್ರಿಯ ಎರಡು ಬಾಟಲಿ ಎಣ್ಣೆಯಿಂದ ಫುಲ್ ಕೆಂಪಗಾಗಿದ್ದವು ಕಣ್ಣು. ದಿಟ್ಟಿಸಿ ನೋಡಿದ ಅಬ್ಬರಕ್ಕೆ ಫುಲ್ ಥಂಡಾ ಹೊಡೆದ ಕಟಿಂಗ್ ಕಾಳಿಂಗ.

'ಶೇವಿಂಗ್ ಅಂದ್ರ ಬೋಳಿಸೋದು ಅಂತ ಅರ್ಥ. ನೀವು ಶೇವಿಂಗ್ ಅಂದ್ರ ಗಡ್ಡ ಮಾತ್ರ ಬೋಳಿಸೋದು, ತಲಿ ಅಲ್ಲ ಅಂತ ಮೊದಲೇ ಹೇಳಬೇಕಾಗಿತ್ತು. ನೀವು ಹೇಳಲೇ ಇಲ್ಲ. ಈಗ ನಮ್ಮ ಹುಡುಗನ ತಲಿ ಶೇವಿಂಗ್ ಮಾಡ್ರೀ ಅಂದ ಮ್ಯಾಲೆ ಹೊಸ ಹೊಸ ಕರಾರು ಹಾಕಲಿಕತ್ತೀರಿ. ಇದು ಸರಿ ಏನ್ರೀ? ನ್ಯಾಯ ಏನ್ರೀ? ಏ ಹೋಗ್ರೀ. ಸುಮ್ಮ ಜಾಸ್ತಿ ಮಾತಾಡದೇ ನನಗ ಕಟಿಂಗ್,  ನಮ್ಮ ಹುಡುಗಗ ತಲಿ ಶೇವಿಂಗ್ ಮಾಡಿ ಮುಗಿಸಿಬಿಡ್ರೀ. ನಮಗ ಬ್ಯಾರೆ ಕೆಲಸ ಅದಾವ. ನಿಮಗೂ ಅಷ್ಟೇ. ಎಷ್ಟು ಮಂದಿ ಗಿರಾಕಿ ಬಂದು ಕಾಯಾಕತ್ತಾರು ನೋಡ್ರೀ!' ಅಂತ ಹೇಳಿದ ಗೌಂಡಿ ಶಂಕರಪ್ಪ, ಮತ್ತ ಕಣ್ಣು ಮುಚ್ಚಿ ಕೂತು ಬಿಟ್ಟ.

ಬರೋಬ್ಬರಿ ಇಟ್ಟುಬಿಟ್ಟಿದ್ದ ಗೌಂಡಿ ಶಂಕರಪ್ಪ. ಭಾರಿ ಲಾಜಿಕಲ್ ಪಾಯಿಂಟ್ ಇಟ್ಟುಬಿಟ್ಟಿದ್ದ.

ಕಟಿಂಗ್ ಕಾಳಿಂಗ ಫುಲ್ ಹಾಪ್ ಆಗಿಬಿಟ್ಟ. ಸರ್ರ ಅಂತ ಸಿಟ್ಟೆನೋ ಬಂತು. ಆದ್ರ ಏನು ಮಾಡಲಿಕ್ಕೆ ಬರ್ತದ? ವ್ಯತ್ಯಾಸ ಅಂದ್ರ ಎರಡು ರೂಪಾಯಿ, ಕಟಿಂಗ್ ಮತ್ತ ಶೇವಿಂಗ್ ನಡುವೆ. ಆ ಎರಡು ರೂಪಾಯಿ ಸಲುವಾಗಿ ಎಲ್ಲಿ ಜಗಳ ಮಾಡಿಕೋತ್ತ ಕೂಡೋದು ಅಂತ ಹೇಳಿ ಸುಮ್ಮನಾದ.

ತಾನು ಗೌಂಡಿ ಶಂಕರಪ್ಪನ ಕಟಿಂಗ್ ಮಾಡಲಿಕ್ಕೆ ಕತ್ತರಿ ಕಚ್!ಕಚ್! ಅಂತ ಆಡಿಸಿ, ಶಸ್ತ್ರಾಭ್ಯಾಸಕ್ಕೆ ರೆಡಿ ಆದ.

ಬಾಜೂಕೇ ನಿಂತಿದ್ದ ಅವನ ಮಗ, ಇನ್ನೂ ಹಜಾಮತಿ ಟ್ರೇನಿಂಗ ಒಳಗ ಇದ್ದ, ಶೇವಿಂಗ್ ಶಂಭುಲಿಂಗನ ಕಡೆ ನೋಡಿ, ಸಣ್ಣ ಹುಡುಗ ದ್ಯಾಮ್ಯಾನ ಶೇವಿಂಗ್, ಅದೂ ತಲಿ ಶೇವಿಂಗ್, ಮಾಡಿ ಬಿಡು ಅಂತ ಹೇಳಿದ.

ಶೇವಿಂಗ್ ಶಂಭುಲಿಂಗ ಫುಲ್ confuse ಆಗಿ ಹ್ಯಾಂ????? ಅಂದ.

'ಬೋಳಿಸೋ ನಿಮ್ಮಾಪನಾ. ಆ ಹುಡುಗನ ತಲಿ ಸ್ವಚ್ಚ ಬೋಳಿಸಿಬಿಡು. ಮೊನ್ನೆ ವನವಾಸಿ ರಾಮದೇವರ ಗುಡಿಯಾಗ ಆದ ಸಾಮೂಹಿಕ ಮುಂಜುವಿಯೊಳಗ ಎಷ್ಟು ಮಂದಿ ವಟುಗಳ ತಲಿ ಬೋಳಿಸಿ ಬಂದವಗ ಇದೇನು ಬ್ಯಾರೆ ಹೇಳಬೇಕೇನು? ಹಾಂ?' ಅಂತ ಕಟಿಂಗ್ ಕಾಳಿಂಗ ಸಣ್ಣ ಆವಾಜ್ ಹಾಕಿದ.

ಜೂನಿಯರ್ ಬಾರ್ಬರ್ ಶೇವಿಂಗ್ ಶಂಭುಲಿಂಗಗ ಭಾಳ ಆಶ್ಚರ್ಯ ಆತು. confuse ಆತು. ಕೈಯ್ಯಾಗಿನ ಕತ್ತಿಯನ್ನು ತೂಗು ಹಾಕಿದ್ದ ಚರ್ಮದ ಪಟ್ಟಾ ಮ್ಯಾಲೆ ಪರಾ ಪರಾ ಅಂತ ಎಳೆದು ಮತ್ತ ಮತ್ತ ಚೂಪು ಮಾಡಿಕೊಳ್ಳೋದನ್ನ, ಬೋಳಿಸೋಕಿಂತ ಮೊದಲು ತಲಿಗೆ ನೀರು ಗೊಜ್ಜೋದನನ್ನ ಮರೆತು ಬಿಟ್ಟ. ಬಡ್ಡ ಕತ್ತಿನೇ ದ್ಯಾಮ್ಯಾನ ಒಣ ತಲಿಗೆ ಹಚ್ಚೇಬಿಟ್ಟ. ಕರ್ರss! ಅಂತ ಕ್ರಿಕೆಟ್ ಪಿಚ್ ತರಹದ ಒಂದು ಪಟ್ಟಿ ತಲಿ ಮ್ಯಾಲೆ ಎಳದೇಬಿಟ್ಟ. ಚುರ್ರ! ಅಂತ ನೋವಾತು ದ್ಯಾಮ್ಯಾಗ. ಅಲ್ಲಿ ತನಕ ಆಗುತ್ತಿದ್ದ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಟೀವಿ ಮ್ಯಾಲೆ ಬರುತ್ತಿದ್ದ 'ಮಹಾಭಾರತ' ಸೀರಿಯಲ್ ನೋಡುತ್ತ ಕೂತಿದ್ದ ದ್ಯಾಮ್ಯಾ ತಲಿ ಚುರ್ರ್ ಅಂದ ಕೂಡಲೇ, ನೋವಿಂದ ಪ್ಯಾಂ ಅಂದು, ಅತ್ಲಾಗ ಇತ್ಲಾಗ ತಲಿ ಶೇಕ್ ಮಾಡಿದರೆ, ಶೇವಿಂಗ್ ಶಂಭುಲಿಂಗ ಹುಂಬರ ಗತೆ ಸಣ್ಣ ಹುಡುಗನ ಕುತ್ತಿಗಿ ಒತ್ತಿ ಹಿಡದು, 'ಸುಮ್ಮ ಕುಂದ್ರಲೇ' ಅಂತ ಜಬರಿಸಿ, ತಲಿ ಶೇವಿಂಗ್ ಮುಂದುವರೆಸಿದ. ದ್ಯಾಮ್ಯಾಗ ಏನಾಗ್ಲಿಕತ್ತದ ಅಂತ ಅರ್ಥ ಆಗೋದ್ರಾಗ ಅರ್ಧ ತಲಿ ಬೋಳಂ ಆಗಿ, oppose ಮಾಡಲಿಕ್ಕೆ ಏನೂ ಉಳಿಯದೇ, 'ಬೋಳಂ ಶರಣಂ ಗಚ್ಚಾಮಿ, ತಲಿಗೆ ಟೊಪಿಗಿ ಹಾಕಾಮಿ,' ಅಂತ ಹೇಳಿ, ಕಣ್ಣ ಮ್ಯಾಲೆ ಬಂದು ಬಿದ್ದ ಬೋಳಿಸಿದ ಕೂದಲ ಕೊಡವಿಕೊಂಡು, 'ಸ್ವಾಮಿಯೇ ಶರಣಂ ಶೇವಿಂಗ್ ಶಂಭುಲಿಂಗಪ್ಪ', ಅಂತ ಕೂತುಬಿಟ್ಟ. When clean shaving is inevitable, enjoy it rather than resisting it!

ಪಾಪ ದ್ಯಾಮ್ಯಾ!

ಸ್ವಲ್ಪ ಹೊತ್ತಾದ ಮೇಲೆ ಗೌಂಡಿ ಶಂಕರಪ್ಪನ ಕಟಿಂಗು, ಮಗ ದ್ಯಾಮ್ಯಾನ ಶೇವಿಂಗ್ ಎರಡೂ ಮುಗಿತು. ಕಟಿಂಗಿಗೆ ಎಂಟು, ಶೇವಿಂಗಿಗೆ ಆರು ರೂಪಾಯಿ ಕೊಟ್ಟು ಎದ್ದು ಬಂದಾರಾತು ಅಂತ ತಯಾರಾದ ಗೌಂಡಿ ಶಂಕರಪ್ಪ. ಇಪ್ಪತ್ತು ರೂಪಾಯಿಯ ನೋಟು ಕೊಟ್ಟ ಶಂಕರಪ್ಪ. ಲಾಸ್ಟ್ ಒಂದು ಬಾರಿ ಟ್ರೈ ಮಾಡಿ ನೋಡೋಣ ಅಂತ ಕಟಿಂಗ್ ಕಾಳಿಂಗ ವಾಪಸ್ ಇಬ್ಬರಿಗೂ ಕಟಿಂಗ್ ರೇಟನ್ನೇ (Rs . ೮) ಚಾರ್ಜ್ ಮಾಡಿ ಬರೇ ನಾಲ್ಕೇ ರೂಪಾಯಿ ತಿರುಗಿ ಕೊಡಲಿಕ್ಕೆ ನೋಡಿದ. ಗೌಂಡಿ ಶಂಕರಪ್ಪ ಮತ್ತೊಮ್ಮೆ ದೊಡ್ಡ ಕೆಂಗಣ್ಣು ಬಿಟ್ಟ. ಕಟಿಂಗ್ ಕಾಳಿಂಗ ದೂಸರಾ ಮಾತಾಡದೇ ಮತ್ತೂ ಎರಡು ರೂಪಾಯಿ ಕೊಟ್ಟು ಕೈಮುಗಿದ. 'ಮತ್ತ ಬರ್ತೇವ್ರೀ ಅಣ್ಣಾರ,' ಅಂತ ಹೇಳಿದ ಗೌಂಡಿ ಶಂಕರಪ್ಪ, ಮಗನ ನುಣ್ಣನೆ ತಲೆ ಮ್ಯಾಲೆ ಕೈಯಾಡಿಸಿ, 'ಮಸ್ತ ಆಗೈತಲ್ಲಲೇ ದ್ಯಾಮಣ್ಣ. ಇನ್ನ ಆರು ತಿಂಗಳು ನಿನಗ ಕಟಿಂಗ್ ಬ್ಯಾಡ ನೋಡಲೇ,' ಅಂತ ಹೇಳಿದ. ಮನಸ್ಸಿನ್ಯಾಗೇ ಅಂದುಕೊಂಡ, 'ರೊಕ್ಕ ಉಳಿತು ತೊಗೋ,' ಅಂತ ಹೇಳಿ ಮಗನ್ನ ಕರಕೊಂಡು ಹೊಂಟ. ರೊಕ್ಕ ಉಳಿಸಿದ ಖುಷಿಯೊಳಗ ಬೀಡಿ ಬದಲಿ ಸಿಗರೇಟ್ ತೊಗೊಂಡ. ಅಪ್ಪನ ರೊಕ್ಕ ಉಳಿಸಲಿಕ್ಕೆ ತನ್ನ ಮುಡಿಯನ್ನೇ ಬಲಿ ಕೊಟ್ಟ ಮಗನಿಗೆ ಭಟ್ಟನ ಅಂಗಡಿಯಾಗ ಒಂದು 'ಕಂಬರಘಟ್ಟ' ಅನ್ನೋ ಖತರ್ನಾಕ ತಿಂಡಿ ಕೊಡಸಿದ. ದ್ಯಾಮ್ಯಾ ಎಂಜಾಯ್ ಮಾಡಿದ. ಕಂಬರಘಟ್ಟ ಎಂಜಾಯ್ ಮಾಡುತ್ತ, ರಫ್ ರಫ್ ಆದ ತಲಿ ಮ್ಯಾಲೆ ಕೈಯಾಡಿಸಿ, ಕಚಗುಳಿ ಇಟ್ಟ ಫೀಲಿಂಗ್ ಭಾಳ ಸೇರಿ, ಮನಿ ಮುಟ್ಟೋ ತನಕಾ ತಲಿ ಮ್ಯಾಲೆ ಕೈಯಾಡಿಸಿ ಕೈಯಾಡಿಸಿ ಕೈ ರಫ್ ಆಗಿಹೋತು. ನೀರಿಲ್ಲದೆ ಬಡ್ಡ ಕತ್ಯಾಗ ತಲಿ ಬೋಳಿಸಿದ ಅಂದ್ರ ಮತ್ತೇನು?

ಕಟಿಂಗ್ ಕಾಳಿಂಗ ಮಾತ್ರ ದೊಡ್ಡ ಪಾಠ ಕಲಿತುಬಿಟ್ಟ. ಮುಂದೆ ಅವ ಎಂದೂ ಜನರಲ್ ಆಗಿ, 'ಕಟಿಂಗ್ ಎಂಟು ರುಪಾಯಿ, ಶೇವಿಂಗ್ ಆರು ರೂಪಾಯಿ,' ಅಂತ ಹೇಳಲೇ ಇಲ್ಲ. ಪೂರ್ತಿಯಾಗಿ, 'ತಲಿ ಕೂದಲ ಕಟಿಂಗ್ ಎಂಟು ರೂಪಾಯಿ, ದಾಡಿ ಶೇವಿಂಗ್ ಆರು ರೂಪಾಯಿ' ಅಂತ ಹೇಳಲಿಕ್ಕೆ ಶುರು ಮಾಡಿದ.

ಮಾಳಮಡ್ಡಿ ಕಿಡಿಗೇಡಿ ಮಂದಿ ಮಾತ್ರ, 'ತಲಿ ಕೂದಲದ ಕಟಿಂಗ್ ಅಲ್ಲದೇ ಬ್ಯಾರೆ ಯಾವ್ಯಾವ ಕೂದಲದ ಕಟಿಂಗ್ ಮಾಡ್ತಾನಲೇ ಇವಾ? ದಾಡಿ ಬೋಳಿಸದೇ ಮತ್ತ ಎಲ್ಲೆಲ್ಲೆ ಬೋಳಿಸೋ ದಂಧಾ ಶುರು ಮಾಡ್ಯಾನ ಇವಾ?' ಅಂತ ಶುದ್ಧ ತಲೆ ಹರಟೆ ಮಾತಾಡಿಕೊಂಡರು.

* ಹಜಾಮತಿಗೆ ಸಂಬಂಧಿಸಿದ ಹಳೆ ಬ್ಲಾಗ್ ಪೋಸ್ಟಗಳು:

 - ಬಗಲೆತ್ತಿದ ಭಗವಂತ, ಬೆಚ್ಚಿಬಿದ್ದ ಬಾರ್ಬರಿಣಿ

- 'ಮುದಕ'ರಿ ನಾಯಕರು ಮಲ್ಲಿಕಾರ್ಜುನ unisex ಬ್ಯೂಟಿ ಪಾರ್ಲರ್ ಗೆ ಹೋದಾಗ!

- ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ!!

Tuesday, February 24, 2015

ಸೆಂಟಿ ಸಮಸ್ಯೆ

ಮಾಸ್ತರ್ : ಇದು ಒಂದು ಮೀಟರ್ ಕಟಿಗಿ. ಇದರ ಉದ್ದ ಫುಲ್ ಮೀಟರ್. ಸೆಂಟಿಮೀಟರ್ ಅಂದ್ರ ೧ / ೧೦೦ ಮೀಟರ್. ತಿಳೀತss??

ದ್ಯಾಮ್ಯಾ (ಸಣ್ಣ ದನಿಯೊಳಗ) : ಈ ಮಾಸ್ತರ್ ಫುಲ್ ಮೆಂಟಲ್. ಇವನ ಕಡೆ ಕಲಿತ ನಾವು ಸೆಂಟಿಮೆಂಟಲ್. ೧ / ೧೦೦ ಮೆಂಟಲ್! ಥತ್!

ಮಾಸ್ತರ್: ಏನಲೇ ಅದು ಗುಸುಗುಸು?

ದ್ಯಾಮ್ಯಾ: ಸರ್ರಾ, ನೀವು ಸೆಂಟಿಮೀಟರ್ ಅಂದ್ರ ನಮಗ ಸೆಂಟಿಮೆಂಟಲ್ ನೆನಪಾತ್ರೀ.

ಮಾಸ್ತರ್: ಈಡಿಯಟ್! ಈ centi ಬ್ಯಾರೆ ಆ senti ಬ್ಯಾರೆ.

ದ್ಯಾಮ್ಯಾ (ಸಣ್ಣ ದನಿಯೊಳಗ) : ಅವನೌನ್! ಏನ್ ಇಂಗ್ಲಿಷ್ ಭಾಷಾನೋ! ಏನ್ ಗಣಿತನೋ! ಲಗೂ ಘಂಟಿ ಹೊಡಸಪಾ ದೇವರಾ! ಸೂಟಿ ಬಿಟ್ಟರ ಸಾಕು!

ದ್ಯಾಮ್ಯಾಗ ಏಕದಂ ಒಂದು ಐಡಿಯಾ ಬಂತು. ಈ ಮಾಸ್ತರ್ ಭಾಳ ಬೋರ್ ಹೊಡೆಸಾಕತ್ಯಾನ, ಮಾಡೋಣ ತಡಿ ಅಂದ್ಕೊಂಡ.

ದ್ಯಾಮ್ಯಾ: ಸರ್ರಾ ಒಂದು ಡೌಟ್ ರೀ!

ಮಾಸ್ತರ್: ಏನು? ಕೇಳು.

ದ್ಯಾಮ್ಯಾ: ಒಂದ್ನೂರಾಂಶ ನರಿ ಅಂದ್ರ ೧ / ೧೦೦ ನರಿಗೆ ಏನಂತಾರ್ರೀ???????????????

ಮಾಸ್ತರ್ ಫುಲ್ ಥಂಡಾ. ಇಂತಾ ಖತರ್ನಾಕ್ ಪ್ರಶ್ನೆ ಅವರ ಸರ್ವೀಸ್ ಒಳಗ ಯಾರೂ ಕೇಳಿರಲಿಲ್ಲ.

ಮಾಸ್ತರ್: ಸ್ಟುಪಿಡ್! ನರಿ ನಾಯಿ ಅನ್ಕೋತ್ತ! ಹುಚ್ಚುಚ್ಚರೆ. ಏನು ಹಾಂಗಂದ್ರ?

ದ್ಯಾಮ್ಯಾ (ಕಿಡಿಗೇಡಿ ಗತೆ ನಕ್ಕೋತ್ತ): ನಾ ಹೇಳಲ್ರೀ ಸರ್??????

ಮಾಸ್ತರ್ (ಸಿಟ್ಟಿಂದ): ಗೊತ್ತಿದ್ದರೂ ಯಾಕ ಕೇಳಿದಿ? ಮುಕ......ಅಲ್ಲಲ್ಲ ಮೈಯ್ಯಾಗಿನ ಸೊಕ್ಕೆನ??? ಗೊತ್ತದ ಅಂದ ಮ್ಯಾಲೆ ಹೇಳಿ ಸಾಯಿ!

ದ್ಯಾಮ್ಯಾ: ಸೆಂಟಿನರಿ! (centenary) ಅಂದ್ರ ೧ / ೧೦೦ ನರಿ.

ಮಾಸ್ತರ್ ಬೆಚ್ಚಿ ಬಿದ್ದರು. ಆದರೂ ಸುಧಾರಿಸಿಕೊಂಡು ಹೇಳಿದರು.

ಮಾಸ್ತರ್: ಲೇ! ಹುಚ್ಚಾ! ಅದು centenary. cente ಅಂದ್ರ ೧೦೦. ನಿನ್ನ ಪ್ರಕಾರ ಒಂದು ನೂರು ನರಿಗೆ centenary ಅಂದ್ರ ಸರಿಯಾದೀತು. ಆದ್ರ ಅದು ತಪ್ಪು. centi ಅಂದ್ರ ೧ / ೧೦೦. cente ಅಂದ್ರ ೧೦೦. ಸರಿ ಮಾಡಿ ನೆನಪ ಇಡರೀ. ಇಲ್ಲಂದ್ರ cent percent (೧೦೦ %) ಮಾರ್ಕ್ಸ್ ಬರೋದರ ಬದಲು centi percent (೧%) ಮಾರ್ಕ್ಸ್ ಬರ್ತಾವು. ಫೇಲ್ ಆಗಿಹೋಗ್ತೀರಿ! ಹುಷಾರ್!

ಮಾಸ್ತರ್ ಅವತ್ತು ಹತ್ತು ನಿಮಿಷ ಕ್ಲಾಸ್ ಲಗೂನೆ ಬಿಟ್ಟು ಹೋಗಿಬಿಟ್ಟರು. ಸ್ಟಾಫ್ ರೂಮಿಗೆ ಹೋಗಿ, ಅಲ್ಲಿದ್ದ ನೀರಿನ ಮಡಕಿ ಮ್ಯಾಲೆ, 'ಕುಂಬರು ಮಾಡಿದ ಕೊಡನವ್ವಾ. ಚನ್ನಪ್ಪ ಚನ್ನಗೌಡಾ' ಅಂತ ಬಡಿದು ಸೆಂಟಿ (senti) ಒಳಗ ಹಾಡಾ ಹಾಡುತ್ತ, ಒಂದು ಗ್ಲಾಸ್ ತಣ್ಣನೆ ನೀರು ಕುಡಿದು, 'ಈ ದ್ಯಾಮ್ಯಾನಂತಹ ಶಿಷ್ಯ ರತ್ನಗಳು ಎಲ್ಲಿಂದ ತಯಾರಾಗಿ ಬರ್ತಾವ?? ಅದೂ ನನಗss ಗಂಟ ಬೀಳತಾವ' ಅಂತ ಇಲ್ಲದ ತಲಿ ಕೆಡಿಸಿಕೊಂಡರು.

ಮುಂದಿನ ಹತ್ತು ನಿಮಿಷ, ಮಧ್ಯಾನ ಸೂಟಿ ಘಂಟಿ ಢನ್ ಅನ್ನೋ ತನಕಾ ದ್ಯಾಮ್ಯಾ 'centi ಅಂದ್ರ ೧ / ೧೦೦. cente ಅಂದ್ರ ೧೦೦' ಅನ್ನೋದರ ಗುಂಗಿನ್ಯಾಗೇ ಇದ್ದ. ತಲ್ಯಾಗ ಅದೇ ಗುಂಗಿ ಹುಳ.

ಸೂಟಿಗೆ ಮನಿಗೆ ಹೊಂಟಿದ್ದ ದ್ಯಾಮ್ಯಾ, 'centi ಅಂದ್ರ ೧ / ೧೦೦. cente ಅಂದ್ರ ೧೦೦' ಮಸ್ತಿ ಮೂಡಿನ್ಯಾಗ ಇದ್ದ. ಮಾಸ್ತರ್ ಸ್ಟಾಫ್ ರೂಮಿನ ಮುಂದ ಬಂದಾಗ, ದೂರಿಂದ ಒದರಿದ, 'ಸರ್ರಾ, ನೂರು ನರಿಗಳ ಬುದ್ಧಿ ಒಂದೇ ಮನುಷ್ಯಾನಾಗ ಇದ್ದರ ಅವಂಗ ಏನಂತಾರ್ರೀ???'

ಮಾಸ್ತರಿಗೆ ಕೇಳಲಿಲ್ಲೋ, ಯಾರಿಗೆ ಬೇಕು ಈ ಮಂಗ್ಯಾನಮಕ್ಕಳ ಸಹವಾಸ ಅಂತ ಹಾಂಗೇ ಬಿಟ್ಟರೋ ಗೊತ್ತಿಲ್ಲ. ಸುಮ್ಮನೇ ಕೂತಿದ್ದರು.

ಯಾವದಕ್ಕೂ ಇರಲಿ, ಎಲ್ಲರ ಮಾಹಿತಿಗಾಗಿ, ಎಲ್ಲರ ಜ್ಞಾನಕ್ಕಾಗಿ ಅಂತ ದ್ಯಾಮ್ಯಾನೇ ಉತ್ತರ ಜೋರಾಗಿ ಒದರಿದ.

ಸೆಂಟಿನರಿಯನ್ (centenarian) !!

ಸೆಂಟಿನರಿಯನ್ (centenarian) = ನೂರು ನರಿಗಳ ಬುದ್ಧಿ ಇರೋ ಶಾಣ್ಯಾ(!) ಮನುಷ್ಯ!

ಕೆಲವು ಮಂದಿಗೆ ವಯಸ್ಸು ಐವತ್ತೂ ಆಗಿರೋದಿಲ್ಲ ಆದ್ರ ಬುದ್ಧಿ ಮಾತ್ರ ಸೆಂಟಿನರಿಯನ್, ಡಬಲ್ ಸೆಂಟಿನರಿಯನ್ ಆಗಿಬಿಟ್ಟಿರ್ತದ. ಅಂತವರಿಂದ ಜ್ವಾಕಿರಿಪಾ! ಸುಮಡಿಯೊಳಗ, ಸದ್ದಿಲ್ಲದೇ ಬ್ಯಾಕಿನಾಗ ಬತ್ತಿ ಇಟ್ಟು ಹೋಗಿಬಿಟ್ಟಾರು! ಜ್ವಾಕಿ!

ವಿ.ಸೂ: 'centenarian ಉಚ್ಚಾರ ಸೆಂಟಿನೇರಿಯನ್. ಅಲ್ಲೇನು? ಅದೆಂಗ ದ್ಯಾಮ್ಯಾ ಸೆಂಟಿನರಿಯನ್ ಅಂದಾ?' ಅಂತ ಕೇಳಬ್ಯಾಡ್ರೀ. ನಾವೆಲ್ಲಾ ಕನ್ನಡ ಮೀಡಿಯಂ ಮಂದಿ. ಬರೆದಂತೆ ಹೇಳು. ಹೇಳಿದಂತೆ ಬರೆ.

ಮಾಸ್ತರ ಹೇಳಿದ್ದು - centi ಅಂದ್ರ ೧ / ೧೦೦. ಇದು ಪೂರ್ತಿ ಖರೆ ಅಂತೂ ಅಲ್ಲ. ಶತಪದಿ = centipede! Exception case.

ದ್ಯಾಮ್ಯಾನ ಮ್ಯಾಲಿನ ಕಿತಾಪತಿ ಓದಿ ತಾವು ಕಲಿತದ್ದೆಲ್ಲವನ್ನೂ ಮರೆತವರಿಗೆ (ಮಾತ್ರ) ಕೆಳಗಿನ ವಿವರಣೆ.

centenarian = a person who is 100 years old or older

centenary = the 100th anniversary of something (such as an important event)

Friday, February 20, 2015

ಕುಡದಾಗ ನೀ ಭಾಳ ಚಂದ ಕಾಣ್ತೀ ನೋಡ.....

ಅವ : ಕುಡದಾಗ ನೀ ಭಾಳ ಚಂದ ಕಾಣ್ತೀ ನೋಡ
ಅಕಿ : ಖರೇ????????????????????????
ಅವ : ಹೌದು! ಖರೇ! ಶಂಬರ್ ಟಕಾ ಖರೆ!
ಅಕಿ : ಸೋ ನೈಸ್! ಸೋ ರೋಮ್ಯಾಂಟಿಕ್! ಸೋ ಕ್ಯೂಟ್!
ಅವ : ಹ್ಯಾಂ????????????????????????
ಅಕಿ : ಕುಡಿಲೀ? ಏನು ಕುಡಿಲೀ? ವೈನ್? ಬಿಯರ್? or you know ನಿಮ್ಮ ತೀರ್ಥ???? ;) ;)
ಅವ : ನಿಮ್ಮೌನ್! ಕರಪಿಟ್ಟಿ! ನಾ ಕುಡದಾಗ ನೀ ಭಾಳ ಚಂದ ಕಾಣ್ತೀ ಅಂತ. ನೀವು ಎಲ್ಲೆ ಕಾಳಿ ನದಿ ತೀರದವರು ಏನು? ಇನ್ನೊಂದು KF ಕೊಡು ಈಕಡೆ!

ಅಕಿ: ??????????????????????????????????????????????????

* KF = ಕಿಂಗ್ ಫಿಷರ್ ಬಿಯರ್

Wednesday, February 18, 2015

ಭಗವದ್ಗೀತೆಯಿಂದ ಬೆಳಕು

ಮೊನ್ನೆ ಅದ್ಯಾರೋ ದೊಡ್ಡ ಮನುಷ್ಯರು, 'ಭಗವದ್ಗೀತೆ ಸುಟ್ಟು ಬಿಡ್ರೀ' ಅಂತ ಕರೆ ಕೊಟ್ಟರಂತೆ. ಅದೇ ದೊಡ್ಡ ಸುದ್ದಿ.

ಅದರ ಬಗ್ಗೆ ಸ್ಥಳೀಯ 'ದೊಡ್ಡ ಮಂದಿ' ಪ್ರತಿಕ್ರಿಯೆ ತಿಳಿದು ಬರೋಣ ಅಂತ ನಮ್ಮ ಪರಿಚಯದ ಡಂಬಾಯ ಸಾಹಿತಿಗಳ ಮನಿಗೆ ಹೋದೆ. ಮೊದಲು ಬಂಡಾಯ ಸಾಹಿತಿ ಆಗಿದ್ದರಂತ. ಎಮರ್ಜೆನ್ಸಿ ಒಳಗ ಮನಗಂಡ ಬಡಿಸಿಕೊಂಡು ಹೊರಗ ಬಂದು, ಏನೇನೋ ಆಗಿ, ಈಗಿತ್ತಲಾಗ ಫುಲ್ ಡಂಬಾಯ ಸಾಹಿತಿ ಆಗಿ ಡಂ ಡಂ ಅಂತ ಡೋಲು, ಹಲಗಿ ಬಾರಿಸಿದ್ದೇ ಜಾಸ್ತಿ ಅಂತ ಅವರಿಗೆ ಆಗದವರ ಕುಹಕ. ಹೋಳಿ ಹುಣ್ಣಿವಿಯಾಗ ಕಾಮಣ್ಣನ ಪಟ್ಟಿ (ಚಂದಾ) ಕೂಡಿಸಲಿಕ್ಕೆ ಭಾಳ ಉಪಯೋಗ ಆಗ್ಲಿಕತ್ತದ ಅವರ ಹಲಗಿ ಬಾರಿಸೋ ಕಲೆ ಮತ್ತು ಕೌಶಲ್ಯ. ಮತ್ತ ಅವರ ಇಂಪಾದ ಕರ್ಕಶ ದನಿಯೊಳಗ 'ಚಂದಾ ರೇ! ಚಂದಾ ರೇ! ಲಗೂ ಲಗೂ ಚಂದಾ ಕೊಡ್ರೀ. ಬಾರಿಗೋಗಿ ಕುಂದ್ರೋದೈತಿ. ಗಿಚ್ಚಾಗಿ ಕುಡಿಯೋದೈತಿ. ಚಂದಾsss!!!!!!!!!!' ಅಂತ ಅವರ 'ಕ್ರಾಂತಿ ಗೀತೆ' ಕೇಳಿದ ಮಂದಿ, 'ಹಾಳಾಗಿ ಹೋಗ್ರೀ!' ಅಂತ ಪಾಕೇಟಿನ ಮೂಲ್ಯಾಗಿಂದ, ಪೋಲ್ಕಾದ ಸಂದ್ಯಾಗಿಂದ ಇದ್ದಿದ್ದು ಬಿದ್ದಿದ್ದು ರೊಕ್ಕಾ ತೆಗೆದು ಕೊಟ್ಟು ಕೈ ಮುಗಿತಾರ. ಅಷ್ಟು ಹವಾ ಮೈಂಟೈನ್ ಮಾಡ್ಯಾರ ನಮ್ಮ ಡಂ ಡಂ ಡಂಬಾಯಿ ಸರ್.

ನಾ ಏನೋ ಅವರೊಬ್ಬರನ್ನೇ ಭೆಟ್ಟಿ ಆಗಲಿಕ್ಕೆ ಅವರ ಮನಿಗೆ ಹೋದ್ರ ಅಲ್ಲೆ ಬುದ್ಧಿಜೀವಿಗಳ ದೊಡ್ಡ ಗುಂಪೇ ಕೂಡಿತ್ತು. ಟೈಮ್ ನೋಡಿದೆ. ಸಂಜಿ ಬರೋಬ್ಬರಿ ಏಳು ಢಣ್ ಅಂತ ಹೊಡೆದಿತ್ತೋ ಇಲ್ಲೋ. ಇವರ 'ಕೋಸಂಬರಿ', 'ಪಾನಕ' ಸೇವನೆ ಕಾರ್ಯಕ್ರಮ ಬರೋಬ್ಬರಿ ಶುರುವಾಗಿಬಿಟ್ಟಿತ್ತು. ದೊಡ್ಡ ಬರಹಗಾರ ಖುಶ್ವವಂತ್ ಸಿಂಗ್ ದಿನಾ ಸಂಜಿ ಆತು ಅಂದ್ರ ಎಣ್ಣಿ ಹೊಡಿಲಿಕ್ಕೆ ಶುರು ಮಾಡ್ತಿದ್ದರಂತ. ಅವರೇ ಇವರಿಗೆಲ್ಲ ಸ್ಪೂರ್ತಿ ಏನು? ಗೊತ್ತಿಲ್ಲ. ಆದ್ರ ಗಿಚ್ಚಾಗಿ ಎಣ್ಣಿ ಹೊಡೆಯೋ ಈ ಮಂದಿ ಏನು ಮರೆತುಬಿಡ್ತಾರ ಅಂದ್ರ ಸಿಂಗ್ ಸಾಹೇಬರು ರಾತ್ರಿ ಒಂಬತ್ತಕ್ಕ ಎಣ್ಣಿ ನಿಲ್ಲಿಸಿ, ಊಟ ಮಾಡಿ, ಹಾಟ್ ವಾಟರ್ ಬಾಟಲಿ ಅಪ್ಪಿಕೊಂಡು ಮಲ್ಕೊಂಡು ಬಿಡ್ತಿದ್ದರು. ಬೆಳಿಗ್ಗೆ ನಾಲ್ಕಕ್ಕೇ ಎದ್ದು ರಪಾ ರಪಾ ಅಂತ ಪುಟಗಟ್ಟಲೆ ಬರೆದು ಬರೆದು ಒಗಿತಿದ್ದರು. ಈ ನಮ್ಮ ಡಂಬಾಯ ಸಾಹಿತಿ ಮಂದಿದು ಪಾನಕ ಸೇವನೆ ಕಾರ್ಯಕ್ರಮ ಅಂದರೆ ಅದು ಚಿತ್ತಾಗಿ ಬೀಳೋ ತನಕ ನಡೆಯುವಂತಹದ್ದು. ನಿರಂತರ.

ಎಲ್ಲ ದೊಡ್ಡ ಮಂದಿ. ನಾವು ಅವರ ನಡು ಅಳ್ಳಿಗುಂಡಿ. ಮತ್ತ ವಯಸ್ಸಿನಾಗ ನಾ ಭಾಳ ಸಣ್ಣವ. ಅವರಿಗೆಲ್ಲ ಮೊದಲಿಂದ ಹಳೆ ಮಂಗ್ಯಾ ರಮ್ (Old Monk), ಶೇಂಗಾ, ಕೀಮಾ ಬಾಲ್ಸ್ ತಂದು ಕೊಟ್ಟ ಸಪ್ಲೈರ್ ನಾನು. ಈಗೂ ಹಾಂಗೆ. ಅಷ್ಟು ದೊಡ್ಡ ದೊಡ್ಡ ಬುದ್ಧಿಜೀವಿಗಳ ಸೇವೆ ಮಾಡಿದರ ನಮಗೂ ಸ್ವಲ್ಪ ಬುದ್ಧಿ ಬಂದೀತು ಅಂತ ಆಶಾ. ಅವಾಗ ನಮಗ ಗೊತ್ತಿರಲಿಲ್ಲ ನೋಡ್ರೀ ಈ ಬುದ್ಧಿಜೀವಿ ಅನ್ನೋದು ಒಂದು ದೊಡ್ಡ oxymoron ಅಂತ. ಮೈಸೂರ್ ಪಾಕ್ ಒಳಗ ಮೈಸೂರು, ಕಲ್ಲಸಕ್ಕರಿ ಒಳಗ ಕಲ್ಲು ಹ್ಯಾಂಗ ಇರೋದಿಲ್ಲೋ ಹಾಂಗೆ ಬುದ್ಧಿಜೀವಿಗಳಲ್ಲಿ ಬುದ್ಧಿ ಇರುವ ಜೀವಿಗಳು ಭಾಳ ಕಮ್ಮಿ ಅಂತ ಆಮೇಲೆ ತಿಳಿಯಿತು. ಭಾಳ late realization.

ಆವತ್ತು ರಾತ್ರಿ ಎಂಟರ ಹೊತ್ತಿಗೆ ದೊಡ್ಡ ಮಂದಿ ಎಣ್ಣಿ ಖತಂ ಆಗಿ ಬಿಡ್ತು. ಆವತ್ತು ಹರಟಿಗೆ ಒಂದು ನಾಲ್ಕು ಮಂದಿ ಜಾಸ್ತಿನೇ ಬಂದಿದ್ದರು. ಮತ್ತ ಕೆಲವು ಮಂದಿ ಭಾಳ ಲಗೂ ಲಗೂ ಕುಡಿದು ಕೂತುಬಿಟ್ಟರು. ಒಟ್ಟಿನ್ಯಾಗ ಲಗೂನೆ ಒಂದು ದೊಡ್ಡ ಬಾಟಲಿ ಹಳೆ ಮಂಗ್ಯಾ ರಮ್ ಖಾಲಿ ಆಗಿ ಬಿಡ್ತು.

'ಏ ಮರೀ, ಸ್ವಲ್ಪ ಅಲ್ಲೇ ಸಪ್ತಾಪುರ ಕೂಟಿಗೆ ಹೋಗಿ ಇನ್ನೂ ಒಂದಿಷ್ಟು ರಮ್, ಶೇಂಗಾ ತೊಗೊಂಡು, ಅಲ್ಲೇ ಸ್ವಲ್ಪ ಮುಂದ ಹೋಗಿ ಎರಡು ಚಿಲ್ಲಿ ಚಿಕನ್, ಮೂರು ಚಿಕನ್-೬೫ ತಂದು ಬಿಡಪಾ. ತೊಗೋ ರೊಕ್ಕಾ,' ಅಂತ ಹೇಳಿ ಒಂದಿಷ್ಟು ಗಾಂಧಿ ಅಜ್ಜನ ನೋಟುಗಳನ್ನು ಕೈಯಾಗ ಇಟ್ಟರು ನಮ್ಮ ಹಿರಿಯರು.

ಆಗಲೇ ಸುಮಾರು ನಶಾ ಏರಿದ್ದ ಬುದ್ಧಿಜೀವಿಯೊಬ್ಬರು ಏನೋ ಹೇಳಲಿಕ್ಕೆ, ತಮ್ಮದೂ ಇಡಲಿಕ್ಕೆ ಬಂದರು. 'ನಂದು ಎಲ್ಲೆ ಇಡ್ಲಿ?' ಟೈಪಿನ ಗಿರಾಕಿ.

'ಏ ಸುಮ್ಮನಿರ್ರಿ ಸಾಕು. ಅವಂಗ ಗೊತ್ತಿಲ್ಲೇನು? ಎಷ್ಟು ವರ್ಷದಿಂದ ಈ ಸೇವಾ ಮಾಡಾಕತ್ತೈತಿ ಆ ಹುಡಗ? ಹಾಂ?' ಅಂತ ಅವರಿಗೆ ಬೈದಂಗ ಹೇಳಿ, 'ನೀ ಹೋಗಿ ತೊಗೊಂಡು ಬಾರಪಾ ರಾಜಾ,' ಅಂತ ನನಗ ಹೇಳಿ, ತಮ್ಮ ಪಟಪಟಿ (ಮೋಟಾರ್ ಬೈಕ್) ಚಾವಿ ನನ್ನ ಕೈಯಾಗ ಇಟ್ಟರು ಸರ್. ತಾವು ತಮ್ಮ ಚಾರ್ಮಿನಾರ್ ಸಿಗರೇಟ್ ಹಚ್ಚಿ ಸ್ಟೈಲ್ ಒಳಗ ಬಿಟ್ಟರು. ಅಯ್ಯೋ ಹೊಗಿ ಬಿಟ್ಟರು ಅಂತ. ಅಷ್ಟೇ. ಬಾಕಿ ಎಲ್ಲಾ ಅಂದರ ನಾಚಿಗಿ, ಮಾನಾ, ಮರ್ಯಾದಿ, ಎಲ್ಲಾ ಬಿಡಲಿಕ್ಕೆ ಇನ್ನೂ ನಾಕ್ನಾಕು ಪತಿಯಾಲಾ ಪೆಗ್ ಒಳಗ ಹೋಗಬೇಕು. ಅಷ್ಟಾದ ಮ್ಯಾಲೇ ಒಳಸೇರಿದ ಪರಮಾತ್ಮ ಹೊರಗಿನ ಆಟ ಆಡಿಸಲಿಕ್ಕೆ ಶುರು ಮಾಡ್ತಾನ.

ಲಗೂನೆ ಹೋಗಿ ಅವರು ಹೇಳಿದ್ದು ಎಲ್ಲಾ ತಂದು ಕೊಟ್ಟೆ. ಈಗ ಬುದ್ಧಿಜೀವಿಗಳ ಚರ್ಚೆಗೆ ರಂಗು ಏರಲಿಕ್ಕೆ ಶುರು ಆತು. ಎಲ್ಲಾ ರಮ್ ಎಂಬ ದ್ರವದ ಪ್ರಭಾವ. ಈ ಬುದ್ಧಿಜೀವಿ ಮಂದಿ ರಂ ಇಲ್ಲ ಅಂದ್ರ 'ರಂ'ಗು, ರೌನಕ್ ಏನೂ ಇಲ್ಲದೇ ಬರೇ ಗೂಬಿ ಗತೆ ಗೂ! ಗೂ! ಅನಕೋತ್ತ ಕೂತುಬಿಡ್ತಾವ.

ನಾ ಕೇಳೋದೇ ಬ್ಯಾಡ. ಭಗವದ್ಗೀತೆ ವಿಷಯ ಅದಾಗೇ ಬಂತು.

'ಈ ಭಗವದ್ಗೀತೆ ಸುಟ್ಟು ಬಿಡಬೇಕು ನೋಡ್ರೀ!' ಅಂತ ಒಬ್ಬರು ಬುದ್ಧಿಜೀವಿ ಹೇಳಿದರು.

'ಯಾಕ್ರೀ ಸರ್ರಾ?' ಅಂತ ಇನ್ನೊಬ್ಬ ಕಿರಿಯ ಬುದ್ಧಿಜೀವಿ ಕೇಳಿದರು.

'ಏ ಅವಂಗ ಯಾವಾಗಲೂ 'ಹಿತ್ತಲದಾಗ ಹಾಳಿ ಸುಟ್ಟು' ರೂಢಿ. ಅದಕ್ಕೇ ಇರಬೇಕು. ಹೇ! ಹೇ!' ಅಂತ ಇನ್ನೊಬ್ಬರು ಅವರನ್ನು ಕಿಚಾಯಿಸಿದರು.

'ಏ ಭೋಸಡಿಕೆ, ನನ್ನ ಹಾಳಿ ಸುಡೋ ಚಟದ ಸುದ್ದಿ ತೆಗಿ ಬ್ಯಾಡ ನೀ. ನನ್ನ ಹೆಂಡತಿ ಬ್ಯಾರೆ ಒಬ್ಬ ಬುದ್ಧಿಜೀವಿ ಜೋಡಿ ಓಡಿ ಹೋಗ್ಯಾಳ. ಅದಕ್ಕೇ ತಾತ್ಕಾಲಿಕ ಜುಗಾಡ್ ಮಾಡಿಕೊಂಡರೆ ಏನೇನೋ ಅನ್ನೋದ?!' ಅಂದು ಬಿಟ್ಟರು. ಏನು ಭಾಷಾ! ಏನು ಸಂಸ್ಕೃತಿ! ಮಸ್ತ ಮಸ್ತ.

ಇವರ ಹೆಂಡತಿ ಓಡಿ ಹೋಗೋದಕ್ಕೂ, ಇವರು ಹಾಳಿ ಸುಡೋದಕ್ಕೂ ಏನು ಸಂಬಂಧವಯ್ಯಾ? ಅಂತ ನಮಗ ಅಂತೂ ತಿಳಿಲಿಲ್ಲ.

ಮತ್ತ ಮೂಲ ಪ್ರಶ್ನೆಗೆ ಬಂದರು. ಭಗವದ್ಗೀತಾ ಯಾಕ ಸುಡಬೇಕು?

ಕೋಣೆಯೊಳಗೆ ಭಾಳ ಪುಸ್ತಕ ಇದ್ದವು. ತಮ್ಮ ಬುಕ್ ಶೆಲ್ಫ್ ಒಳಗಿಂದ ಒಂದು ದೊಡ್ಡ ಬುಕ್ ತೆಗೆದುಕೊಂಡು ಬಂದರು ನಮ್ಮ ಡಂ ಡಂ ಡಂಬಾಯ ಸಾಹಿತಿ.

ಆ ದೊಡ್ಡ ಪುಸ್ತಕ ಭಗವದ್ಗೀತೆ ಆಗಿತ್ತು!

'ಇದಕ್ಕೆ ಸ್ವಿಚ್ ಇಲ್ಲೇ ಇಲ್ಲ ನೋಡಪಾ!' ಅಂದು ಬಿಟ್ಟರು ನಮ್ಮ ಡಂ ಡಂ ಡಂಬಾಯಿ.

'ಸರ್ರಾ! ಪುಸ್ತಕಕ್ಕೆ ಎಲ್ಲಿಂದ ಸ್ವಿಚ್ ಬರಬೇಕರೀ?' ಅಂತ ಕೇಳಿದೆ.

'ಏ, ಬೆಳಕು ಬರಬೇಕು ಅಂದ್ರ ಸ್ವಿಚ್ ಒತ್ತತಿಯೋ ಇಲ್ಲೋ? ಹಾಂ?' ಅಂದರು. ಭಾಳ ಕಾಂಪ್ಲಿಕೇಟೆಡ್ ಆತು ಇದು.

'ಅಲ್ಲಪಾ ಇವನ, 'ಭಗವದ್ಗೀತೆ ಅಂಧಕಾರವನ್ನು ದೂರ ಮಾಡಿ ಬೆಳಕು ಚೆಲ್ಲುತ್ತದೆ' ಅಂತ ಎಲ್ಲೋ ಓದಿದ್ದೆ. ಆ 'ಬೆಳಕಿನ' ಸಲುವಾಗಿ ಸ್ವಿಚ್ ಹುಡಕಲಿಕತ್ತೇನಿ ನೋಡಪಾ,' ಅಂದ್ರು ಡಂ ಡಂ.

ಹೋಗ್ಗೋ ಇವರ! ತಲಿಗೆ ಏರಿ ಬಿಟ್ಟದ ಎಣ್ಣಿ. ನೆತ್ತಿಗೆ ಏರಿದ ಎಣ್ಣಿ ಹಾಕ್ಕೊಂಡು ಮಿದುಳು ತಿರುವಲಿಕತ್ತದ.

'ಏ ಮಂಗ್ಯಾನಿಕೆ, ಆ ಭಗವದ್ಗೀತೆಯಿಂದ ಬೆಳಕು ಬರವಲ್ಲತು, ಸ್ವಿಚ್ ಸಹಿತ ಇಲ್ಲ ಅಂದ್ರ ಒಂದು ಕೆಲಸ ಮಾಡಬಹುದು ನೋಡಲೇ,' ಅಂತ ಇನ್ನೊಬ್ಬ ಬುದ್ಧಿಜೀವಿ ಐಡಿಯಾ ಕೊಟ್ಟರು. ಏಳಲಿಕ್ಕೆ ನೋಡಿದರು. ಜೋಲಿ ತಪ್ಪಿ ಮತ್ತ ಪೀಠ ಊರಿಬಿಟ್ಟರು. ಖುರ್ಚಿ ಕಿರ್ರ ಅಂತು.

'ಸುಟ್ಟು ಬಿಡ್ರೀ. ಆ ಪುಸ್ತಕಾ ಸುಟ್ಟುಬಿಡ್ರೀ. ಬೆಳಕೂ ಬರತೈತಿ ಮತ್ತ ಈ ಕೆಟ್ಟ ಥಂಡ್ಯಾಗ ಮೈ ಕಾಸಿಕೊಳ್ಳಾಕೂ ಬೇಷ ಆಕ್ಕೈತಿ,' ಅಂತ ಹೇಳಿ ಕ್ಯಾಕಿ ಹೊಡೆದವರೇ, ಬಾಯಾಗ ಬೆಟ್ಟ ಹೆಟ್ಟಿ, ಸೀಟಿ ಹೊಡೆದವರೇ ಮತ್ತೊಂದು ದೊಡ್ಡ ಪೆಗ್ ಹಾಕಿಕೊಂಡರು. ಇವರು ಮತ್ತೊಬ್ಬ ದೊಡ್ಡ ಬುದ್ಧಿಜೀವಿಗಳು. ಸೀಟಿ ಹೊಡಿಲಿಕ್ಕೆ ಬಾಯಾಗ ಬೆಟ್ಟ ಹೆಟ್ಟೋ ಮೊದಲು ಬೆಟ್ಟು ಎಲ್ಲೆ ಹೆಟ್ಟಿಗೊಂಡು ಕೂತಿದ್ದರು ಅಂತ ನಾ ಹೇಳಂಗಿಲ್ಲ.

'ಕರೆಕ್ಟ್ ಕರೆಕ್ಟ್! ಏಕದಂ ಬರೋಬ್ಬರ್! ಭಗವದ್ಗೀತೆಯಿಂದ ಬೆಳಕು ಬರಬೇಕು ಅಂದ್ರ ಅದನ್ನು ಸುಡಲೇಬೇಕು. ನಡೀರಿ. ಹಿತ್ತಲದಾಗ ಹೋಗಿ ಸುಡೋಣ,' ಅಂತ ಫರ್ಮಾನು ಹೊಡಿಸೇಬಿಟ್ಟರು.

ಅಷ್ಟೊತ್ತಿಗೆ ಸಿಕ್ಕಾಪಟ್ಟೆ ಚಿತ್ತಾಗಿದ್ದ ಡಂಬಾಯ ಬುದ್ಧಿಜೀವಿಗಳ ಗುಂಪು ಕೇಕೆ ಹೊಡೆಯುತ್ತ, ಎಣ್ಣೆ ಏಟಿನಿಂದ ಜೋಲಿ ಹೊಡೆಯುತ್ತ, ಭಗವದ್ಗೀತೆಗೆ ಅಣಕು ಶವಯಾತ್ರೆ ಮಾಡುತ್ತ, ರಮ್ ಕುಡಿದ ನಶೆಯಲ್ಲಿ, 'ರಮ್ ನಾಮ್ ಸತ್ಯ ಹೈ! ಹಾಯ್! ಹಾಯ್!' ಅಂತ ವಿಕಾರವಾಗಿ ಕೂಗುತ್ತ ಹಿತ್ತಲಿಗೆ ಬಂತು. ರಾತ್ರಿ ಸಾಕಷ್ಟಾಗಿತ್ತು.

ಭಗವದ್ಗೀತೆಯನ್ನು ನೆಲಕ್ಕೆ ಒಗೆದವರೇ ಅದರ ಮೇಲೆ ಉಳಿದ ಹಳೆ ಮಂಗ್ಯಾ ರಮ್ ದ್ರವ ಸುರಿದರು ಒಬ್ಬರು. ಮತ್ತೊಬ್ಬರು ಮೈಮೇಲೆ ದೆವ್ವ ಬಂದವರಂತೆ ಕೂಗುತ್ತ, ಎತ್ತರ ಪತ್ತರ ಕೈಕಾಲು ಆಡಿಸುತ್ತ, ಕಡ್ಡಿ ಕೊರದೇ ಬಿಟ್ಟರು. ಅದನ್ನು ಹೆಂಡದಿಂದ ನೆಂದಿದ್ದ ಪುಸ್ತಕದ ಮೇಲೆ ಒಗೆದರು. ಭಗ್! ಅಂತ ಬೆಂಕಿ ಹೊತ್ತಿಕೊಂಡಿತು. ಎಲ್ಲ ಕಡೆ ಬೆಳಕೋ ಬೆಳಕು! ದೊಡ್ಡ ಬೆಳಕು. ದಿವ್ಯ ಬೆಳಕು. ಭಗವದ್ಗೀತೆ ಪುಸ್ತಕ ಉರಿದು ಉರಿದು ಕೊಡುತ್ತಿರುವ 'ಜ್ಞಾನದ' ಬೆಳಕು. ದೊಡ್ಡ ಮಂದಿಯ ದೊಡ್ಡ ಜ್ಞಾನವನ್ನು ಬರೋಬ್ಬರಿ ತೋರಿಸುತ್ತಿದ್ದ ಬೆಳಕು.

'ಬಂತ ನೋಡ್ರೋ ನಿಮ್ಮೌರಾ! ಬಂತ ನೋಡ್ರೀ ಬೆಳಕು. ಪುಸ್ತಕ ಸುಟ್ಟ ಕೂಡಲೇ ಬೆಳಕು ಬಂತು. ಇದೇ ಬೆಳಕು ನೋಡ್ರೀ. ಭಗವದ್ಗೀತೆಯೊಳಗೆ ಇರೋ ಬೆಳಕು ಅಂದ್ರೆ ಇದೇ. ಮತ್ತೇನೂ ಇಲ್ಲ. ಜಾಸ್ತಿ ಹೊತ್ತು ಉರಿಯಲಿ ಅಂತನೇ ಅವನೌನ್ ಏಳನೂರು ಚಿಲ್ಲರೆ ಶ್ಲೋಕ ಬರೆದು ದೊಡ್ಡ ಪುಸ್ತಕ ಮಾಡ್ಯಾರ. ಕಮ್ಮಿ ಕಮ್ಮಿ ಅಂದರೂ ಒಂದು ಹದಿನೈದು ನಿಮಿಷ ಉರಿದು, ಬೆಳಕು, ಶಾಖ ಎಲ್ಲ ಕೊಡತೈತಿ. ಹೌದಿಲ್ಲೋ?' ಅಂತ ಕೇಳಿದರು ಬುದ್ಧಿಜೀವಿ ಸರ್. ಬೆಂಕಿಗೆ ಕೈಯೊಡ್ಡಿ ಕಾಸಿಕೊಂಡು, 'ಅಹಹಾ! ಮಸ್ತ ಐತಿ ಹೀಟ್' ಅಂತ ಮುಲುಗಿದರು. ಮತ್ತೊಂದು ಡ್ರಿಂಕ್ ಮಾಡಿಕೊಟ್ಟೆ.

'ಹೌದು ಹೌದು. ಬರೋಬ್ಬರಿ ಹೇಳಿದಿರಿ ಸರ್!' ಅಂತ ಎಲ್ಲರೂ ಕೋರಸ್ ಒಳಗ ಹೊಯ್ಕೊಂಡರು. ಎಲ್ಲರೂ ಬಕೆಟ್ ಕೀಪರುಗಳು.

'ಸರ್ರಾ, ನನಗ ಅನ್ನಿಸೋ ಹಾಂಗ ಈ ಬೆಳಕು ಚೆಲ್ಲತಾವ, ದಾರಿ ತೋರಸ್ತಾವ ಅನ್ನೋ ಪುಸ್ತಕಗಳ ಹಿಂದಿನ ಲಾಜಿಕ್ ಇದೇ ಇರಬೇಕು ನೋಡ್ರೀ. ಇದೇ ರೀತಿ ಬಾಕಿ ಎಲ್ಲ ಬೆಳಕು ಚೆಲ್ಲುವ ಪುಸ್ತಕ ಸಹಿತ ತಂದು, ಗುಡ್ಡೆ ಹಾಕಿ, ಬೆಂಕಿ ಹಚ್ಚಿ, ಸುಟ್ಟು, ಬೆಳಕು, ಶಾಖ ಮಾಡಿಕೊಳ್ಳೋಣ ಏನ್ರೀ ಸರ್ರಾ??' ಅಂತ ಕೇಳಿದ ಒಬ್ಬ ಕಿರಿಯ ಬುದ್ಧಿಜೀವಿ. ಗಡ್ಡ ಕೆರೆದ.

'ಒಳಗ ಹೋಗಿ ಎಲ್ಲಾ ಬುಕ್ ತೊಗೊಂಡು ಬಾರಲೇ ನಿನ್ನಾಪನಾ' ಅಂತ ಆಜ್ಞೆ ಮಾಡಿದ ಹಿರಿಯ ಬುದ್ಧಿಜೀವಿ, 'ಶೆರೆ ಎಲ್ಲೈತ್ರೋ? ನನಗ ಇನ್ನೂ ಬೇಕು. ಎಲ್ಲೈತಿ???' ಅಂತ ಚೀರಾಕ ಶುರು ಮಾಡಿದರು. ಇದ್ದ ಮತ್ತೊಂದು ಹಳೆ ಮಂಗ್ಯಾ ರಮ್ಮಿನ ಖಂಬಾ ಬಾಟಲಿ ತೆಗೆದು ಸುರುವಿದೆ. ಖುಷ್ ಆದರು.

ಅಷ್ಟೊತ್ತಿಗೆ ಒಳಗಿದ್ದ ಎಲ್ಲಾ ವೇದ, ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರ, ಪುರಾಣ, ಸ್ಮೃತಿ, ಭಾಷ್ಯ  ಇತ್ಯಾದಿ ಇತ್ಯಾದಿ 'ಬೆಳಕು ಚೆಲ್ಲುವ' ಗ್ರಂಥಗಳೆಲ್ಲ ಹೊರಗೆ ಬಂದು ಒಂದು ದೊಡ್ಡ ರಾಶಿಯಾಗಿತ್ತು.

'ಹಚ್ಚಿರಿ ಬೆಂಕಿ! ಹಚ್ಚಿರೋ ನಿಮ್ಮಾಪ್ರಾ! ಬೆಳಕು ಬರಲಿ! ಬೆಳಕು ಚೆಲ್ಲತಾವ ಅಂತ ಈ ಪುಸ್ತಕಗಳು. ದಾರಿ ತೋರಸ್ತಾವ ಅಂತ. ಹ್ಯಾ! my foot' ಅಂತ ಹೂಂಕರಿಸಿದರು ಡಂ  ಡಂ ಡಂಬಾಯಿ. ಫತ್ವಾ ಹೊರಬಿತ್ತು.

ಕಿರಿಯ ಬುದ್ಧಿಜೀವಿಗಳು ಕೇಕೆ ಹೊಡೆಯುತ್ತ ಕಡ್ಡಿ ಕೊರೆದವರೇ ಬೆಂಕಿ ಹಚ್ಚೇ ಬಿಟ್ಟರು. ಈ ಸಲ ಭಾಳ ದೊಡ್ಡ ಬೆಂಕಿ. ಎಲ್ಲಿ ಒಂದು ನಾಲ್ಕಾರು ಹೆಣ ಕೂಡಿಯೇ ಸುಡುತ್ತಿದ್ದಾರೋ ಅನ್ನುವ ರೀತಿಯಲ್ಲಿ ಬೆಂಕಿ ಜ್ವಾಲೆಗಳು ಮ್ಯಾಲೆ ಜಿಗಿದವು. ಕೆಲವು ಮಂದಿ ಕ್ಯಾಕಿ ಹೊಡಕೋತ್ತ ತಮ್ಮ ಕೈಯಾಗಿನ ಡ್ರಿಂಕ್ಸ್ ಬೆಂಕಿ ಮ್ಯಾಲೆ ಸುರುವಿದ್ದಕ್ಕೆ ಬೆಂಕಿ ಭಗ್!ಭಗ್! ಅಂತ ಎದ್ದೆದ್ದು ಉರಿತು.

ಸಿಕ್ಕಾಪಟ್ಟೆ ಎಣ್ಣೆ ಹೊಡೆದು ಚಿತ್ತಾಗಿದ್ದ ಕಿರಿಯ ಬುದ್ಧಿಜೀವಿಯೊಬ್ಬ ಪ್ಯಾಂಟಿನ ಜಿಪ್ಪು ಕೆಳಗೆ ಇಳಿಸಿಯೇ ಬಿಟ್ಟ. ಬೆಂಕಿ ಹತ್ತಿರ ಹೋಗಿ ರೌಂಡ್ ರೌಂಡ್ ಡಾನ್ಸ್ ಮಾಡಾಕತ್ತಿಬಿಟ್ಟ! ಎಲ್ಲರಿಗೂ ಘಾಬರಿ.

'ಏನ ಮಾಡಾಕತ್ತಿಯೋ???? ಏ! ಏ!' ಅಂತ ಯಾರೋ ಒಬ್ಬರು ಒದರಿದರು.

ಜಿಪ್ಪು ಬಿಚ್ಚಿದವನ ಮನದಿಂಗಿತ ಅರಿತ ಯಾರೋ ಹೇಳಿದರು, 'ಲೇ ಮಂಗ್ಯಾನಿಕೆ, ಇದು ಹೋಳಿ ಹುಣ್ಣಿವಿ ಅಲ್ಲಲೇ. ನಮಗ ಗೊತ್ತದ ನೀ ಏನು ಅಂದುಕೊಂಡಿ ಅಂತ. ಇದನ್ನೇನು ಸುಡುತ್ತಿರುವ ಕಾಮಣ್ಣನ ಮ್ಯಾಲೆ ಉಚ್ಚಿ ಹೊಯ್ದಾಂಗ ಅಂತ ಮಾಡಿ ಏನಲೇ? ಜಿಪ್ ಹಾಕ್ಕೋ!' ಅಂತ ಬೈದು, ಆ ಬುದ್ಧಿಜೀವಿಯ ಬುದ್ಧಿಮತ್ತೆ ಬಗ್ಗೆ ಪರೋಕ್ಷವಾಗಿ ಹೇಳಿದರು. ಆವಾಗ ಅವಂಗ ಎಚ್ಚರಾಗಿ, ಅದು ಕಾಮ ದಹನ ಅಲ್ಲ ಅಂತ ಅರಿವಾಗಿ, ಈಕಡೆ ಬಂದ. ಜಿಪ್ ಮ್ಯಾಲೆ ಎಳ್ಕೋಳೋದನ್ನ ಮಾತ್ರ ಮರೆತಿದ್ದ. ನಾಳೆ ಯಾರರ, 'ಸರ್ರಾ, ನಿಮ್ಮ ಅಂಗಡಿ ಓಪನ್ ಐತಿ ನೋಡ್ರೀ!' ಅಂತ ಹೇಳಿದಾಗಲೇ ಅವನಿಗೆ ಅರ್ಥ ಆಗೋದು. ಈ ಪುಣ್ಯಾತ್ಮ ಲೇಡೀಸ್ ಕಾಲೇಜ್ ಮಾಸ್ತರ್ ಬ್ಯಾರೆ. ಶಿವನೇ ಶಂಭುಲಿಂಗ.

ಬೆಂಕಿ ಹತ್ತಿ ಉರಿಯುತ್ತಿತ್ತು. ಎಣ್ಣೆ ಹೊಡೆದವರ ಮೂಡು ಸಿಕ್ಕಾಪಟ್ಟೆ ರಂಗೇರುತ್ತಿತ್ತು. ಯಾರೋ ಒಬ್ಬವ ಮೊಬೈಲಿನಲ್ಲೇ ಖತರ್ನಾಕ್ ಹಾಡು ಹಚ್ಚಿಬಿಟ್ಟ.

'ಕಾಡ ಕುದರಿ ಓಡಿ ಬಂದಿತ್ತ!! ಕಾಡ ಕುದರಿ ಓಡಿ ಬಂದಿತ್ತ!!'



ಒಳ್ಳೆ ಮಸ್ತ ಹಾಡು. ಮಾಹೋಲ್ ಮಸ್ತ ಇತ್ತು. ಎಣ್ಣಿ ಹೊಡೆದು ರಂಗೇರಿದ ಮಂದಿ. ಮಧ್ಯದಲ್ಲಿ 'ಬೆಳಕು ಚೆಲ್ಲುವ' ಪುಸ್ತಕಗಳನ್ನು ಸುಟ್ಟು ಮಾಡಿಕೊಂಡಿರೋ ದೊಡ್ಡ ಕ್ಯಾಂಪ್ ಫೈರ್ ಅಂತಹ ಬೆಂಕಿ. ಡಾನ್ಸ್ ಹೊಡಿಲಿಕ್ಕೆ ಪರ್ಫೆಕ್ಟ್! ಝಕ್ಕ ನಕ್ಕ! ಡಂಕ ನಕ್ಕ! 

ಆ ಹಾಡು ಶುರುವಾಗಿದ್ದೇ ಆಗಿದ್ದು. ಎಲ್ಲ ಬುದ್ಧಿಜೀವಿಗಳು ಬೆಂಕಿ ಸುತ್ತ ಕಾಡು ಮಂದಿ ಹಾಗೆ ಜಿಗದು ಜಿಗದು ಡಾನ್ಸ್ ಹೊಡಿಲಿಕ್ಕೆ ಶುರು ಮಾಡಿಬಿಟ್ಟರು. ನಮ್ಮ ಡಂ ಡಂ ಡಂಬಾಯಿ ಹಲಗಿ ಬಾರಿಸಲಿಕ್ಕೆ ಶುರು ಮಾಡಿಬಿಟ್ಟರು. ಜೊತೆಗೆ ಕೆಟ್ಟಾ ಕೊಳಕ ಹಾಡುಗಳು. ಅವರದ್ದೇ ರಚನೆಗಳು. ಎಷ್ಟು ಹೊಲಸಿದ್ದವು ಅಂದ್ರ ಅವು ಪ್ರಕಟ ಆಗೋದು ದೂರ ಉಳಿತು. ಕೇಳಿದವರ ಕಿವಿ ಸೀದು ಹೋಗಬೇಕು. ಹಾಂಗ ಇದ್ದವು.

ಹೀಂಗ ಏನೇನೋ ಮಾಡಿ, ಭಗವದ್ಗೀತೆ ಬೆಳಕು ಹೇಗೆ ಚೆಲ್ಲುತ್ತದೆ, ಅನ್ನುವದಕ್ಕೆ ಒಂದು ಹೊಸ ಅರ್ಥ ತಂದುಕೊಂಡಿದ್ದರು ಬುದ್ಧಿಜೀವಿಗಳು. ಓದಿ, ಅರ್ಥ ಮಾಡಿಕೊಳ್ಳಬೇಕು ಅನ್ನುವವರಿಗೆ ಜ್ಞಾನದ ಬೆಳಕು. ಬ್ಯಾಡ ಅಂದವರಿಗೆ ಈ ತರಹದ ಬೆಂಕಿ ಬೆಳಕು. ಸಂಗ್ತಿಗೆ ಬಿಸಿ ಬಿಸಿ ಶಾಖ ಫ್ರೀ. ಬೇಕಾರ ಅದರಾಗ ಗೋಂಜ್ವಾಳ ಸುಟ್ಟುಕೊಂಡು, ಮ್ಯಾಲಿಂದ ಉಪ್ಪಿನಕಾಯಿ ಹಚ್ಚಿ, ರುಚಿ ರುಚಿ ಮಾಡಿಕೊಂಡು ತಿನ್ನಬಹದು. ರಮ್ ಜೋಡಿ ಮಸ್ತ ಆಗ್ತದ.

ಹ್ಯಾಂಗ ಬೇಕು ಹಾಂಗ ನಡೀಲಿ. ಹೀಂಗೇ ಮಾಡ್ರೀ, ಹಾಂಗೇ ಮಾಡ್ರೀ ಅಂತ ಜುಲ್ಮಿ ಇಲ್ಲವೇ ಇಲ್ಲ. ಓದ್ಯಾರ ಓದ್ರೀ. ಸುಟ್ಟಾರ ಸುಡ್ರೀ. ಎಲ್ಲಾ ಓಕೆ. ಶಿವನೇ ಶಂಭುಲಿಂಗ!

ಕಿಸ್ಸಿಂಗ್ ಕಿಡಿಗೇಡಿ

ಕಿಸ್ಸಿಂಗ್ ಕಿಡಿಗೇಡಿ....ರಾಮ್ ಜೇಠ್ಮಲಾನಿ. ಹೆಸರು ರಾಮ. ಎತ್ತಿದ ಅವತಾರ, ಮಾಡುವ ಕಾರಬಾರ ಎಲ್ಲ ಕೃಷ್ಣ.

ಲೀನಾ ಚಂದಾವರಕರ ಮೂಲ ಧಾರವಾಡದವರು. ಎಲ್ಲೋ ಭೆಟ್ಟಿ ಆಗ್ಯಾರ.

'ಏನವಾ ಪೇಢೆ ತರಲಿಲ್ಲೇನು?' ಅಂತ ಕೇಳ್ಯಾರ ಜೇಠ್ಮಲಾನಿ ಸಾಹೇಬರು. ಧಾರವಾಡ ಪೇಢೆ ಅಂದ್ರ ಅವರೂ ಫಿದಾ.

'ಪೇಢೆ ರೀ??? ಇಲ್ಲರೀ ಸರ್. ಈಗಿತ್ತಲಾಗ ಧಾರವಾಡಕ್ಕೆ ಹೋಗೇ ಇಲ್ಲರೀ ಸರ್ರಾ' ಅಂದ್ರು ಲೀನಾ ಮೇಡಂ.

'ನೀ ಅಂತೂ ಪೇಢೆ ತರಲಿಲ್ಲ. ಕೊಡಲಿಲ್ಲ,' ಅಂದ ಜೇಠ್ಮಲಾನಿ, 'ನಾನss ನಿನಗ ಒಂದು ಕೊಡಲೀ????' ಅಂತ ಕೇಳ್ಯಾರ.

ಎಲ್ಲಾ ಕಡೆ 'ನಂದೆಲ್ಲಿ ಇಡ್ಲೀ????' ಮಾಡಿ ಈಗ ಎಲ್ಲೂ ಸಲ್ಲದ ವಕೀಲರು ಅಪರೂಪಕ್ಕ 'ಕೊಡ್ಲೀ????' ಅಂತ ಕೇಳಲಿಕತ್ತಾರ ಅಂತ ಭಾಳ ಆಶ್ಚರ್ಯಪಟ್ಟರಂತ ಲೀನಾ ಮೇಡಂ.

'ಏನ್ರೀ? ಏನು ಕೊಡ್ತಿರೀ?????' ಅಂತ ಕೇಳಿದರು.

'ಬೆಲ್ಲಾ!!!!!' ಅಂದವರೇ  ಜೇಠ್ಮಲಾನಿ ಮುಂದೆ ಮಾತಾಡಲಿಲ್ಲ. ಮಾತಾಡಲಿಕ್ಕೆ ಬಾಯಿ ಇತ್ತು. ಭಾಳ ಬ್ಯುಸಿ ಇತ್ತು.

ಕಲಿತ ಪಾಠ: ಪೇಢೆ ಕೊಡಲಿಲ್ಲ ಅಂದ್ರ ಬೆಲ್ಲ ಸಿಗೋ ಚಾನ್ಸ್ ಭಾಳ ಇರ್ತಾವ! (ಷರತ್ತುಗಳು ಅನ್ವಯಿಸುತ್ತವೆ)

ರಾಮ್ ಜೇಠ್ಮಲಾನಿ ಬಗ್ಗೆ ಬರೆದಿದ್ದ ಹಳೆಯ ಎರಡು ಬ್ಲಾಗ್ ಲೇಖನಗಳು :

ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ? 

ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

Tuesday, February 17, 2015

ಶಿವರಾತ್ರಿ ಮುಂಜಾನೆ 'ಕುರ್ಬಾನಿ'

ಶಿವರಾತ್ರಿ ಮುಂಜಾನೆ 'ಕುರ್ಬಾನಿ' ಹಾಡು ನೆನಪಾದಾಗ

ಶಿವರಾತ್ರಿ ಶಿವರಾತ್ರಿ ಶಿವರಾತ್ರಿ
ಶಿವಜೀ ಕೋ ಪ್ಯಾರಿ ಹೈ ಶಿವರಾತ್ರಿ
ರಾತ್ರಿ ಪೂರಾ ಜಾಗರಣಿ
ದಿನ್ ಪೂರಾ ಒಗ್ಗರಣಿ
ಇರ್ಲಿ ಬಿಡ್ರೀ, ವರ್ಷಕ್ಕೆ ಒಂದೇ ಸಾರಿ
ಶಿವರಾತ್ರಿ ಶಿವರಾತ್ರಿ ಶಿವರಾತ್ರಿ
ಶಿವಜೀ ಕೋ ಪ್ಯಾರಿ ಹೈ ಶಿವರಾತ್ರಿ

ಯಾವ ಧಾಟಿ ಒಳಗ ಹಾಡ ಬೇಕು ನೆನಪಾತಲ್ಲ??

ಕುರ್ಬಾನಿ ಕುರ್ಬಾನಿ ಕುರ್ಬಾನಿ
ಅಲ್ಲಾ ಕೋ ಪ್ಯಾರಿ ಹೈ ಕುರ್ಬಾನಿ

ಅಲ್ಲ ಮಾರಾಯಾ ಶಿವರಾತ್ರಿ ದಿನ ಮುಂಜಾನೆ ಮುಂಜಾನೆ ನಿನಗ ಕುರ್ಬಾನಿ ಹಾಡು ನೆನಪಾಗ್ತದ ಅಂದ್ರ ನೀನು ANF ಇರಬೇಕು ಬಿಡು!

ANF ಅಂದ್ರ???????????

ಅಬ್ದುಲ್ ನಾರಾಯಣ ಫರ್ನಾಂಡಿಸ್!

ಇರಬಹುದು! ಸರ್ವ ಧರ್ಮ ಸಮನ್ವಯ!

*ದಿನ್ ಪೂರಾ ಒಗ್ಗರಣಿ - ಅಯ್ಯೋ ಪದೇ ಪದೇ ಫಳಾರಕ್ಕ ಅಂತ ಮೊದಲು ಸಾಬುದಾಣಿ ಉಪ್ಪಿಟ್ಟ, ನಂತರ ಸಾದಾ ಉಪಿಟ್ಟ, ನಂತರ ಅವಲಕ್ಕಿ, ಅದು ಇದು ಅಂತ ಒಗ್ಗರಣಿ ನಡದೇ ಇರುತ್ತದೆ. ಉಪವಾಸ!

Monday, February 09, 2015

ಕೆಲವು ಗಂಡಸರ ಬೂಟು ದುಪ್ಪಟ್ಟು, ಮುಪ್ಪಟ್ಟು ವೇಗದಲ್ಲಿ ಸವೆಯುವದು ಏಕೆ?

ಮನ್ನೆ ನಮ್ಮ ದೋಸ್ತ ಚೀಪ್ಯಾ ಹೊಸ ಬೂಟ್ ತೊಗೊಂಡು, ಹಾಕಿಕೊಂಡು ಬಂದಿದ್ದ.

ನನಗ ಭಾಳ ಆಶ್ಚರ್ಯ ಆತು.

'ಅಲ್ಲ, ನಾವೆಲ್ಲ ಬೂಟು ಹಾಕಿಕೊಳ್ಳುತ್ತಿದ್ದ ಕಾಲದಾಗ, ಒಂದು ಜೋಡಿ ಬೂಟು ಕಮ್ಮಿ ಕಮ್ಮಿ ಅಂದರೂ ಮೂರು ವರ್ಷ ಬರ್ತಿತ್ತು. ಹಾಂಗಿದ್ದಾಗ ಇವಾ ಯಾಕ ಮೂರು ತಿಂಗಳಕ್ಕೆ ಒಮ್ಮೆ ಹೊಸ ಹೊಸ ಬೂಟು ತೊಗೊತ್ತಾನ?' ಅಂತ ತಿಳಿಲಿಲ್ಲ.

'ಏನಲೇ, ಹೊಸಾ ಬೂಟು ಏನಲೇ? ಹಳೆದೇನಾತು? ಎಲ್ಲೆ ರಾಯರ ಮಠಕ್ಕ ಹೋದಾಗ ಚಪ್ಲಿ ಕಳ್ಳರು ಹೊಡಕೊಂಡು ಹೋದರೇನು? ಬರೇ  ಬೂಟು ಮಾತ್ರ ಹೋತೋ ಅಥವಾ ಮಚ್ಚರದಾನಿ ತರಹದ ನಿನ್ನ ತೂತು ಬಿದ್ದ ಸಾಕ್ಸ್ ಸಹಿತ ಹೋಗಿಬಿಟ್ಟವೋ?' ಅಂತ ಕೇಳಿದೆ. 

'ಬೂಟು ಕಳಿಲಿಲ್ಲ ಮಾರಾಯಾ. ಹಾಕ್ಕೊಂಡು ಹಾಕ್ಕೊಂಡು ಸವೆದು ಹೋಗಿದ್ದವು. ಅವನ್ನ ಹಾಕ್ಕೊಂಡು ಅಡ್ಯಾಡೋದು ಒಂದೇ ಬರೆಗಾಲಿನಲ್ಲಿ ಅಡ್ಯಾಡೋದು ಒಂದೇ. ಅದಕ್ಕೇ ಹೊಸಾ ಬೂಟು ತೊಗೊಂಡೆ ನೋಡಪಾ. ಖರೆ ಹೇಳಬೇಕು ಅಂದ್ರ ನಮ್ಮ ಮನಿಯಾಕಿ, ಅಂದ್ರ ನಿಮ್ಮ ರೂಪಾ ವೈನಿನೇ ಜುಲ್ಮಿ ಮಾಡಿ ಕೊಡಿಸಿಬಿಟ್ಟಳು ನೋಡಪಾ,' ಅಂದಾ ಚೀಪ್ಯಾ. ಹೆಂಡತಿ ಕೊಡಸಿದ ಬೂಟು. ವ್ಯಾಲೆಂಟೈನ್ ಡೇ ಗಿಫ್ಟ್ ಇರಬಹುದು. ಕೇಳಲಿಲ್ಲ.

'ಅಲ್ಲಲೇ, ಅದೆಂಗ ಮೂರು ಮೂರು ತಿಂಗಳಿಗೇ ನಿನ್ನ ಬೂಟು ಢಂ ಅಂತಾವ? ಹಾಂ? ಬೂಟು ಹಾಕ್ಕೊಂಡು ಏನು ಮಾಡ್ತಿಲೇ? ಯುದ್ಧ ಮಾಡ್ತೀ ಏನು?' ಅಂತ ಕೇಳಿದೆ.

ನೋಡ್ರೀ, ನಮ್ಮ ಚೀಪ್ಯಾ ಕೆಲಸ ಮಾಡೋದು ಹುಬ್ಬಳ್ಳಿ ಒಳಗ. ಮೆಸರ್ಸ್ ಬಗ್ಗಿಶೆಟ್ಟರ್ & ಬ್ರದರ್ಸ್ ಅನ್ನೋ ಕಂಪನಿ ಒಳಗ ಕೆಲಸ. ರಾಯರ ಮಠದ ಹತ್ತಿರ ಮನಿ. ಸೈಕಲ್ ಮ್ಯಾಲೆ ಮನಿ ಬಿಟ್ಟಾ ಅಂದ್ರ ರೈಲ್ವೆ ಸ್ಟೇಷನ್ ಹೊರಗ ಸೈಕಲ್ ಹಚ್ಚಿ, ಲೋಕಲ್ ಟ್ರೈನ್ ಹಿಡಿದು ಹುಬ್ಬಳ್ಳಿ ಮುಟ್ಟತಾನ. ಅವನ ಆಫೀಸ್ ಅಲ್ಲೇ ರೈಲ್ವೆ ಸ್ಟೇಷನ್ ಬಾಜೂಕನೇ. ಇಡೀ ದಿನಕ್ಕ ಒಂದು ಸಾವಿರ ಹೆಜ್ಜೆ ನಡೆದ ಅಂದ್ರ ದೊಡ್ಡ ಮಾತು. ಮತ್ತ ಮಳೆಗಾಳದಲ್ಲಂತೂ ಲೆದರ್ ಬೂಟು ಕಟ್ಟಿ ಇಟ್ಟುಬಿಡ್ತಾನ. ಆವಾಗ ಗೌಂಡಿ ಬೂಟು ಹಾಕ್ಕೊತ್ತಾನ. ಅಯ್ಯೋ! ಗೌಂಡಿ ಬೂಟು ಅಂದ್ರ ಏನು ಅಂತ ಕೇಳಿದ್ರಾ? ಗೌಂಡಿ ಬೂಟು ಅಂದ್ರ ಮಳೆಗಾಲದಲ್ಲಿ ಹಾಕುವ ಪ್ಲಾಸ್ಟಿಕ್ ಬೂಟು. ಗೌಂಡಿ ಮಂದಿ ಅದನ್ನ ಎಲ್ಲ ಸೀಸನ್ ಒಳಗೂ ಹಾಕೋದಕ್ಕೆ ಅದಕ್ಕೆ ಗೌಂಡಿ ಬೂಟು ಅಂತ ಹೆಸರು. ಸಾಕ್ಸ್ ಇಲ್ಲದೇ ಯಾವ ಬೂಟು ಹಾಕಿಕೊಂಡರೂ ಅದು ಗೌಂಡಿ ಬೂಟೇ. ಇನ್ನು ಮಳೆಗಾಲದಲ್ಲಿ ಕೆಲೊ ಜನ ಉದ್ದನೆ ಗಮ್ ಬೂಟ್ ಸಹಿತ ಹಾಕ್ಕೊತ್ತಾರ. ಆದ್ರ ಗಮ್ ಬೂಟ್ ಹಾಕಿಕೊಂಡ ಮಂದಿಯನ್ನು ನೋಡಿದವರು ಎಲ್ಲೋ ರಸ್ತೇಕ್ಕ ಡಾಂಬರ್ ಹಾಕಲಿಕ್ಕೆ ಹೊಂಟಿರುವ ಡಾಂಬರ್ ಏಜೆಂಟ್ ಅಂತ ತಪ್ಪು ತಿಳಿಯೋ ಚಾನ್ಸ್ ಇರುವ ಕಾರಣ ಮತ್ತ ಧಾರವಾಡ ಮಳಿಗೆ ಅದು ಅಷ್ಟೇನೂ ಬೇಕಾಗಿಲ್ಲ ಅನ್ನೋ ಕಾರಣಕ್ಕೆ ಗಮ್ ಬೂಟು ಕಮ್ಮಿ.

ಇದೆಲ್ಲ ನೆನಪಾಗಿ ಚೀಪ್ಯಾನ ಚರ್ಮದ ಬೂಟು ಕಮ್ಮಿ ಕಮ್ಮಿ ಅಂದರೂ ಮೂರು ವರ್ಷ ಬರಲೇಬೇಕು ಅನ್ನಿಸ್ತು. ಆದರ ಇವನ್ನ ನೋಡಿದರೆ ವರ್ಷಕ್ಕೆ ಮೂರು ಬೂಟು ತೊಗೋತ್ತಾನ. ಯಾಕಿರಬಹುದು?

'ಯಾಕಲೇ ಮೂರು ಮೂರು ತಿಂಗಳಿಗೆ ಒಂದೊಂದು ಹೊಸಾ ಹೊಸಾ ಬೂಟ್ ತೊಗೊತ್ತಿ? ಯಾಕ?' ಅಂತ ಮತ್ತ ಕೇಳಿದೆ.

'ಅದು ಯಾಕಂದ್ರ ನನ್ನ ಬೂಟಿಂದು ಡಬಲ್ ಡ್ಯೂಟಿ ಆಗ್ತದ ನೋಡಪಾ. ಹೊರಗ ನಾ ಹಾಕ್ಕೊಂಡು ಅಡ್ಯಾಡ್ತೇನಿ. ಮನಿಯೊಳಗ ನನ್ನ ಹೆಂಡ್ತಿ ಹಾಕ್ಕೊಂಡು ಅಡ್ಯಾಡ್ತಾಳ. ಅದಕ್ಕೇ ಬೂಟು ಭಾಳ ಲಗೂ ಲಗೂ ಸವೆದು ಹೋಗ್ತಾವ!' ಅಂತ ಹೇಳಿ ಒಂದು ದೊಡ್ಡ ಬಾಂಬ್ ಹಾಕಿಬಿಟ್ಟ.

ಅಕಟಕಟಾ! ಒಂದೇ ಬೂಟು. ಹೊರಗೆ ಗಂಡ ಹಾಕಿದರೆ ಮನೆಯೊಳಗೆ ಹೆಂಡತಿ ಹಾಕುತ್ತಾಳಂತೆ. ಏನಿದು ಭಯಂಕರ ವಿಶೇಷ?

'ಏನಲೇ ಇದು ನಿನ್ನ ಹೆಂಡತಿ ವಿಚಿತ್ರ ಹುಚ್ಚು? ಬರೇ ನಿನ್ನ ಬೂಟ್ ಒಂದೇ ಹಾಕ್ಕೊತ್ತಾಳೋ ಅಥವಾ ನಿನ್ನ ಬನಿಯನ್, ಚಡ್ಡಿ, ಲುಂಗಿ, ಪ್ಯಾಂಟ್, ಅಂಗಿ, ಜಾಕೆಟ್, ಮಂಕಿ ಕ್ಯಾಪ್ ಇತ್ಯಾದಿ ಸಹಿತ ಹಾಕ್ಕೋತ್ತಾಳೋ???' ಅಂತ ಘಾಬರಿಯಿಂದ ಕೇಳಿದೆ.

'ಏ! ಸುಮ್ಮ ಕೂಡಲೇ. ಏನಂತ ಮಾತಾಡ್ತೀ??? ಬರೇ ಬೂಟ್ ಒಂದೇ ಹಾಕ್ಕೋತ್ತಾಳ,' ಅಂದು ಅವನ ಹೆಂಡತಿಗೆ ಕ್ರಾಸ್ ಡ್ರೆಸರ್ ತರಹದ ವಿಚಿತ್ರ ಹುಚ್ಚು ಇಲ್ಲ ಅಂತ ಖಾತ್ರಿ ಮಾಡಿದ ಚೀಪ್ಯಾ. ಕೆಲೊ ಮಂದಿಗೆ ಇರ್ತದಂತಪಾ ಅಂತಾ ಹುಚ್ಚು. ಬೇರೆ ಲಿಂಗದವರ ವಸ್ತ್ರ ಹಾಕ್ಕೊಂಡು ಮಂಗ್ಯಾನಾಟ ಮಾಡೋದು.

'ಲೇ ಚೀಪ್ಯಾ, ನಿನ್ನ ಹೆಂಡತಿ ಯಾಕ ನಿನ್ನ ಬೂಟು ಹಾಕ್ಕೊಂಡು ಅಡ್ಯಾಡ್ತಾಳ? ಅದೂ ಮನಿಯೊಳಗ???' ಅಂತ ಕೇಳಿದೆ. ನನಗ ಖರೆನೇ ಭಾಳ ಆಶ್ಚರ್ಯ ಆಗಿತ್ತು.

'ನನ್ನ ಹೆಂಡ್ತಿ ನನ್ನ ಬೂಟು ಕಾಲಿಗೆ ಹಾಕ್ಕೋಳೋದಿಲ್ಲ!' ಅಂತ ಮತ್ತೊಂದು ಬಾಂಬ್ ಒಗೆದ ಚೀಪ್ಯಾ.

'ಹಾಂ! ಬೂಟು ಕಾಲಿಗೆ ಹಾಕ್ಕೋಳೋದಿಲ್ಲ ಅಂದ್ರ ಎಲ್ಲೆ ತಲಿ ಮ್ಯಾಲೆ ಇಟ್ಟುಕೊಂಡು ಜೋಗವ್ವನ ಗತೆ ಡಾನ್ಸ್ ಮಾಡ್ತಾಳೇನು ನಿನ್ನ ಹೆಂಡತಿ? ಏನಲೇ ವಿಚಿತ್ರ ಇದು???' ಅಂತ ಅಚ್ಚರಿಯಿಂದ ಕೇಳಿದೆ.

'ಅಕಿ ನನ್ನ ಬೂಟು ಕೈಗೆ ಹಾಕ್ಕೋತ್ತಾಳ!' ಅಂದುಬಿಟ್ಟ ಚೀಪ್ಯಾ.

'ಹಾಂ! ಕೈಗೆ ನಿನ್ನ ಬೂಟು ಹಾಕ್ಕೋತ್ತಾಳಾ ನಿನ್ನ ಹೆಂಡತಿ ಉರ್ಫ್ ರೂಪಾ ವೈನಿ??? ಯಾಕ?' ಅಂತ ಕೇಳಿದೆ. ಕೈಗೆ ಗ್ಲವ್ಸ್ (gloves) ಹಾಕ್ಕೊಂಡ್ರ ಮಾತು ಬ್ಯಾರೆ. ಅದರ ಬದಲೀ ಕೈಗೆ ಬೂಟು ಹಾಕ್ಕೋಳ್ಳೋದು ಅಂದ್ರ ಏನ್ರೀ ವಿಚಿತ್ರ?

ಚೀಪ್ಯಾ ಮಾತಾಡಲಿಲ್ಲ. ತಲಿ ಬಗ್ಗಿಸಿ, ತಲಿ ಸ್ವಲ್ಪ ಮುಂದ ತಂದ. ನನಗೆ ಸರೀತ್ನಾಗಿ ಕಾಣಲಿ ಅಂತ. ನೋಡಿದರೆ ಅವನ ಬೋಳ ತಲಿ ಮ್ಯಾಲೆ ಎರಡು ಗುಮಟಿ ಬರೋಬ್ಬರಿ ಎದ್ದಿದ್ದವು. ಯಾರರೆ ತಲಿಗೆ ಹಾಕ್ಕೊಂಡು ಸರೀತ್ನಾಗಿ ಕಟದಾಗ ಏಳೋ ನಮೂನಿ ಗುಮಟಿ. ಚೀಪ್ಯಾ ಗುಮಟೇಶ್ವರ ಆಗಿದ್ದ. ನಮ್ಮ ಕರೀಂ ಹಿಂದೊಮ್ಮೆ ಬೇರೆನೇ ಕಾರಣಕ್ಕೆ ಗುಮಟೇಶ್ವರ ಆಗಿದ್ದ. ಈಗ ಚೀಪ್ಯಾನ ಸರದಿ ಅಂತ ಕಾಣಸ್ತದ.

ನನಗ ಅರ್ಥ ಆತು. ತಿಳಿದು ಹೋತು, ಯಾಕ ಬೂಟು ಅಷ್ಟು ಲಗೂ ಸವೆದು ಹೋಗ್ತಾವ, ಅಂತ. ಅದು ನೋಡ್ರೀ ತಲಿ ಬುರುಡಿ ಭಾಳ ಘಟ್ಟೆ ಇರ್ತದ. ಕೈಗೆ ಬೂಟು ಹಾಕ್ಕೊಂಡು ಆ ಪರಿ ಬುರುಡೆ ತಟ್ಟಿಬಿಟ್ಟರೆ ಎಂತಾ ಬೂಟಾದರೂ ಭಾಳ ಲಗೂನೆ ಸವೆದು ಹೋಗ್ತಾವ. ಅದರಾಗೂ ಚೀಪ್ಯಾನ ತಲಿ ಭಾಳ ಬೋಳಾಗಿ ಬಾಲ್ಡ್ ಆಗ್ಯದ. ಹಾಂಗಾಗಿ ಬೂಟು ಮತ್ತೆ ತಲೆ ಒಂದಕ್ಕೊಂದು ಢಿಕ್ಕಿ ಹೊಡೆದಾಗ ಘರ್ಷಣೆ ಭಾಳ ಆಗಿ, ಸಿಕ್ಕಾಪಟ್ಟೆ ಹೀಟ್ ಜನರೇಟ್ ಆಗಿ, ಬೂಟು ದುಪ್ಪಟ್ಟು, ಮುಪ್ಪಟ್ಟು ರೇಟ್ ನಲ್ಲಿ ಸವೆದು ಹೋಗುವದರಲ್ಲಿ ಯಾವದೇ ಆಶ್ಚರ್ಯ ಇಲ್ಲ. ತಲಿಗೆ ಎಣ್ಣಿ ಹಚ್ಚಿಕೊಂಡರೆ ಸ್ವಲ್ಪ ಲುಬ್ರಿಕೇಶನ್ ಸಿಕ್ಕು ಬೂಟು ಸವೆಯೋದು ಕಮ್ಮಿ ಆದರೂ ಆತು. ಅದಕ್ಕೇ ಇರಬೇಕು ಚೀಪ್ಯಾ ಬೋಳು ತಲಿಗೇ ಸಿಕ್ಕಾಪಟ್ಟೆ ಜಾಸ್ಮೀನ್ ಹೇರ್ ಆಯಿಲ್ ಹಚ್ಚಿಗೋತ್ತಾನ. ಬೋಳು ತಲಿ ಮಂದಿ ಸಹಿತ ತಲಿಗೆ ಎಣ್ಣಿ ಹಚ್ಚೋದರ ಹಿಂದಿರುವ ಮುಖ್ಯ ಕಾರಣ ಇದೇ ಇರಬೇಕು.

'ಬೂಟು ಅಷ್ಟು ಲಗೂ ಸವಿತಾವ ಅಂದ್ರ ಬೂಟಿಗೆ ಕಬ್ಬಿಣದ ಲಾಳಾ ಹೊಡಸಲೇ. ಕುದರಿ ಕಾಲಿಗೆ ಹೊಡೆಸ್ತಾರ ನೋಡು ಹಾಂಗ. ಟಕ್ ಟಕ್ ಅಂತ ಆವಾಜ್ ಬ್ಯಾರೆ ಮಾಡಿಕೊಂಡು ಅಡ್ಯಾಡಬಹುದು,' ಅಂತ ಹೇಳೋಣ ಅಂತ ಮಾಡಿದೆ. ಆದ್ರ ಬರೆ ಸಾದಾ ಬೂಟಿನಾಗ ಬಡಿಸಿಕೊಂಡಾಗಲೇ ನಮ್ಮ ದೋಸ್ತನ ತಲೆ ಬುರುಡೆ ಪರಿಸ್ಥಿತಿ ಹೀಂಗ ಅದ. ಇನ್ನು ಕಬ್ಬಿಣದ ಲಾಳಾ ಜಡಿಸಿಕೊಂಡ ಬೂಟಿನಿಂದ ತಲಿಗೆ ಕಟಿದು ಬಿಟ್ಟರೆ ಅಷ್ಟೇ ಮತ್ತ! ಶಿವನೇ ಶಂಭುಲಿಂಗ! ಬುರುಡೆ ಫುಲ್ ಸ್ಕ್ರಾಪ್ ಆಗಿಬಿಡ್ತದ. ಹಾಂಗ ಆಗೋದು ಬ್ಯಾಡ. ಪಾಪ ನಮ್ಮ ದೋಸ್ತ.

'ಲೇ ಚೀಪ್ಯಾ, ಬೂಟು ತೊಗೊಳ್ಳೋವಾಗ ಸ್ವಲ್ಪ ಮೃದು ಹೀಲ್ಸ್ ಇರೋ ಬೂಟನ್ನೇ ತೊಗೋ ಮಾರಾಯಾ. ಒಟ್ಟಿನ್ಯಾಗ ನಿನ್ನ ತಲಿ ಉಳಿಬೇಕು ನೋಡು,' ಅಂತ ಹೇಳಿ ಎದ್ದು ಬಂದೆ.

** ಚೀಪ್ಯಾ ಯಾಕ ಹೆಂಡತಿ ಕಡೆ ಬೂಟಿನ್ಯಾಗ ಕಡತಾ ತಿಂತಾನ? ಅಂತ ನಿಮಗ ಕುತೂಹಲ ಇದ್ದರೆ ಈ ಪೋಸ್ಟ್ ಓದ್ರೀ. ಹುಚ್ಚ ಮಂಗ್ಯಾನಿಕೆ ಬರೇ ಇಲ್ಲದ ಕಿತಬಿ ಮಾಡ್ತಾನ. ರೂಪಾ ವೈನಿ ಮೊದಲೇ ದೊಡ್ಡ ಹಾಪ್. ಹಾಕ್ಕೊಂಡು ಕಟಿತಾರ. 

Friday, February 06, 2015

ಹಟ್ರಪ್ಪ ಬಗ್ಗಿಸಿಕ್ಯಾರೋ

ಶುಕ್ರವಾರ ಮಧ್ಯಾನ ನಾಲ್ಕ ಘಂಟೆ ಹೊತ್ತಿಗೆ ಯಾರರ IT ಮಂದಿ ಹಿಡದು, 'ರೀ, ಬರ್ರಿ. ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ ಬಗ್ಗೆ ಮಾತಾಡೋಣ. ಚರ್ಚೆ ಮಾಡೋಣ,' ಅಂತ ಮಾತ್ರ ಕರಿಬ್ಯಾಡ್ರೀ.

ಅವರು ಭಗ ಭಗ ಅಂತ ಉರ್ಕೊಂಡು, 'ನಿನ್ನಾಪನಾ, ಇಲ್ಲೆ ನಮ್ಮ ಪರಿಸ್ಥಿತಿ ಭಾಳ ಖರಾಬ್ ಐತಿ. ಶುಕ್ರವಾರ ಸಂಜಿ ಆತ. ಆದರೂ ಇನ್ನೂ ಅದು ಇದು ಸುಡುಗಾಡು ಸುಂಟಿ ಅಂತ ನಮ್ಮ ಕೆಲಸ ಮುಗಿವಲ್ಲತು. ವೀಕೆಂಡ್ ಬ್ಯಾರೆ ಫುಲ್ ಕೆಲಸ ಇರೋ ಲಕ್ಷಣ ಐತಿ. ಅಂತಾದ್ರಾಗ ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ ಬಗ್ಗೆ ಮಾತಾಡೋಣ ಬಾ ಅಂತೀರಲ್ಲರೀ???? ಬುದ್ಧಿ ಗಿದ್ದಿ ಐತೋ ಇಲ್ಲೋ???'

'ಹಾಂಗೆನ್ರೀ???? ಅಂದ್ರ ನೀವು IT ಮಂದಿ ಬ್ಯಾರೆನೇ ಸಂಸ್ಕೃತಿ ಬಗ್ಗೆ ಮಾತಾಡ್ತಿರೀ ಬಿಡ್ರೀ. ನಿಮ್ಮ ಸಂಸ್ಕೃತಿ ಅದೇ. ಅದು ಬ್ಯಾರೆನೇ ಸಂಸ್ಕೃತಿ!'

'ಯಾವದಂತೀಪಾ ಶಾಣ್ಯಾ ನಮ್ಮ IT ಸಂಸ್ಕೃತಿ? ಹೇಳು? ಯಾವದು IT ಕಂಪನಿ ಸಂಸ್ಕೃತಿ?'

'ಹಟ್ರಪ್ಪ ಬಗ್ಗಿಸಿಕ್ಯಾರೋ' !!!

ಹರಪ್ಪ ಮೊಹೆಂಜೋದಾರೋ ಸಂಸ್ಕೃತಿ ಹ್ಯಾಂಗಿತ್ತೋ ಗೊತ್ತಿಲ್ಲ. ಆದ್ರ ಈ ನಮ್ಮ IT 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿ ಅಂದ್ರ ಅವನೌನ್ ಮೋಹಿನಿ ದೆವ್ವ ಇದ್ದಾಂಗ. ಗಾಣದಾಗ ಕಬ್ಬು ಹಾಕಿ, ಅರೆದು, ರಸ ಎಲ್ಲ ಹೀರಿ, ಸಿಪ್ಪಿ ಒಗದ ಫೀಲಿಂಗ್. ಅಷ್ಟು ಸುಸ್ತು ವೀಕೆಂಡ್ ಬಂತು ಅಂದ್ರ.

ಶಿವನೇ ಶಂಭುಲಿಂಗ!

IT ಬಗ್ಗೆ ಇಷ್ಟೆಲ್ಲ ಹೇಳಿದರೂ ನಮ್ಮ ಆಫೀಸ್ ಕಲೀಗ್ಸ್ ಗೆ ಎಲ್ಲಾ ಒಂದು ದೊಡ್ಡ ಥ್ಯಾಂಕ್ಸ್. ಅವರು ಇದ್ದಾರ, ಭಾಳ ಶ್ರಮ ಪಡ್ತಾರ, ಬಾಸ್ ಒಳ್ಳೆಯವ ಅದಾನ ಅಂತ ಹೇಳಿಯೇ ನಾವು ಬಚಾವು. ಇಲ್ಲಂದ್ರ ಈ IT 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿ ಕಾಲದಾಗ ಎಂದೋ ಮಟಾಶ್! ಫಿನಿಶ್!

ಇನ್ನೂ ಒಂದೆರೆಡು ಕಾಲ್, ಮೀಟಿಂಗ್ ಅದಾವು. ಹೋಗಿ ಅವನ್ನೂ ಬಗ್ಗಿಸಿಕ್ಯಾರ ಅಲ್ಲಲ್ಲ ಮುಗಿಸಿಕ್ಯಾರ, ಹಡಪದ ಪೆಟ್ಟಿಗೆ ಕಟ್ಟಿ, ಮನಿ ಹಾದಿ ಹಿಡಿತೇನಿ. ವರ್ಕಿಂಗ್ ಫ್ರಾಂ ಹೋಂ ಇರೋ ಕಾರಣ ಮನಿ ಹಾದಿ ಹಿಡಿಯೋದು ಅಂದ್ರ ಕಂಪ್ಯೂಟರ್ ಡಬ್ಬಿ ಮುಚ್ಚಳ ಮುಚ್ಚಿ, ಚೀಲದಾಗ ಇಡೋದು ಅಷ್ಟೇ! :)

ವಾರಾಂತ್ಯ ಎಲ್ಲರಿಗೂ ಸ್ವಲ್ಪ ಒಳ್ಳೆ ರೆಸ್ಟ್ ಸಿಗಲಿ. ವಿಶ್ರಾಂತಿ ಆಗಲಿ. ಶುಭ ವಾರಾಂತ್ಯ. ಮತ್ತ ಸೋಮವಾರ ಮುಂಜಾನೆಯಿಂದ ಮಂಡೆ ಬಿಸಿ ಶುರು. IT 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿಯ ಪ್ರೇತ ನೃತ್ಯ ಝಕ್ಕ ನಕ್ಕ ರಿಟರ್ನ್ಸ್!

ನಮಸ್ಕಾರ!

Thursday, February 05, 2015

ಪ್ಯಾಂಟ್ ಹಾಕ್ಕೊಂಡುಬಿಟ್ಟರೆ ಸಾಮಾನು ನೋಡೋದು ಹ್ಯಾಂಗೆ??

'ಏ ಇಕಿನ, ನಾ ಪ್ಯಾಟಿಗೆ ಹೋಗಿ ಬರ್ತೇನಿ!' ಅಂದ ಗಂಡ. ಅವಂದು ಗುಟ್ಕಾ ಮುಗಿದಿತ್ತು. ತಲಬು ಎದ್ದಿತ್ತು. ಎದ್ದ ತಲಬು, ಹಿಡಿದ ಕಿಲುಬು ಭಾಳ ಡೇಂಜರ್. ನಿರ್ಲಕ್ಷ ಮಾಡಲೇಬಾರದು.

'ಏ, ಸ್ವಲ್ಪ ತಡೀರಿ. ನಾ ನನ್ನ ಕಿರಾಣಾ ಲಿಸ್ಟ್ ತಯಾರ್ ಮಾಡಿ ಕೊಡತೇನಿ. ಎಲ್ಲ ತೊಗೊಂಡು ಬಂದೀರಂತ,' ಅಂದಳು ಹೆಂಡತಿ. ಅಕಿ ಹೋಂ ಮಿನಿಸ್ಟರ್. ದೊಡ್ಡ ಜವಾಬ್ದಾರಿ.

'ಸರಿ, ಸರಿ. ಲಗೂ ಲಗೂ ಕೊಡು,' ಅನ್ಕೋತ್ತ ಗಂಡ ಡ್ರೆಸ್ ಚೇಂಜ್ ಮಾಡಲಿಕ್ಕೆ ಹೋದ.

ಭರಕ್ಕನೆ ಲುಂಗಿ ಕಳದು ಪ್ಯಾಂಟ್ ಹಾಕ್ಕೊಂಡು, ಮ್ಯಾಲಿಂದ ಒಂದು ಬುಶ್ ಶರ್ಟ್ ಹಾಕ್ಕೊಂಡು ಬಂದುಬಿಟ್ಟ. ಅದಕ್ಕ ಎಷ್ಟೊತ್ತ ಬೇಕ? ಹೆಚ್ಚ ಅಂದ್ರ ಒಂದು ೯೦ ಸೆಕೆಂಡ್. ೯೦ ml ಎಣ್ಣಿ ಹಾಕಲಿಕ್ಕೆ ಜಾಸ್ತಿ ಟೈಮ್ ಬೇಕಾದೀತು. ಆದ್ರ ಪ್ಯಾಂಟು, ಅಂಗಿ ಹಾಕಿಕೊಳ್ಳಲಿಕ್ಕೆ ಅಷ್ಟೆಲ್ಲ ಹೊತ್ತ ಬ್ಯಾಡ.

'ಏ ಇಕಿನ. ಆತೇನು? ಕಿರಣಾ ಲಿಸ್ಟ್ ಮಾಡಿ ಆತೇನು? ನಾ ಪ್ಯಾಟಿಗೆ ಹೋಗಲಿಕ್ಕೆ ರೆಡಿ,' ಅಂದ ಗಂಡ.

ಪಾಪ ಅಕಿ ತನ್ನ ಒಂದೊಂದೇ ಡಬ್ಬಿ ತೆಗೆದು ತೆಗೆದು, ನೋಡಿ ನೋಡಿ, ಏನೇನು ತರಸಬೇಕು, ಎಷ್ಟೆಷ್ಟು ತರಸಬೇಕು ಅಂತ ದೊಡ್ಡ ಮಟ್ಟದ ಪಟ್ಟಿ ತಯಾರ್ ಮಾಡ್ಲಿಕತ್ತಿದ್ದಳು.

ಗಂಡಗ ಗಡಿಬಿಡಿ. ಸೀದಾ ಅಡಿಗಿಮನಿಗೆ ಹೋಗಿಬಿಟ್ಟ. ಹೋದವನೇ 'ಟಂಟಟಾಮ್, ನಾ ರೆಡಿ!' ಅಂದು ಬಿಟ್ಟ.

ಹೆಂಡತಿ ಬಾಯಿ ಮ್ಯಾಲೆ ಕೈ ಇಟ್ಟುಕೊಂಡು, ಇಷ್ಟಗಲ ಕಣ್ಣು ಮಾಡಿ, ಮ್ಯಾಲಿಂದ ಕೆಳವರೆಗೂ ನೋಡಿದಳು.

'ಅಯ್ಯ! ಇಷ್ಟು ಲಗೂ ಪ್ಯಾಂಟ್ ಹಾಕ್ಕೊಂಡು ಬಿಟ್ಟರೀ?????? ನನಗ ಸಾಮಾನೇ ನೋಡಿಕೊಂಡು ಆಗಿರಲಿಲ್ಲ! ಸ್ವಲ್ಪ ತಡೀರಿ ಎಲ್ಲ ಸಾಮಾನು ಸರೀತ್ನಾಗಿ ನೋಡಿಕೊಂಡು ಬಿಡ್ತೇನಿ. ಒಂದು ಗಳಿಗಿ ಆಗಿಲ್ಲ. ಪ್ಯಾಂಟ್ ಹಾಕ್ಕೊಂಡು, ಟಂಟಟಾಮ್ ಅಂತ ಅನ್ಕೋತ್ತ ಬಂದುಬಿಟ್ಟರು. ನೀವು ಇಷ್ಟ ಲಗೂ ಪ್ಯಾಂಟ್ ಹಾಕ್ಕೊಂಡ್ರ ನಾ ಸಾಮಾನ್ ಹ್ಯಾಂಗ ನೋಡಲೀ??????????????????? ' ಅಂತ ಅಂದ ಹೆಂಡತಿ ಕಿರಾಣಾ ಸಾಮಾನು ನೋಡೋದನ್ನ ಮುಂದುವರಿಸಿದಳು.

ಅಕಟಕಟಾ!

ಸಾಮಾನು. ಕಿರಾಣಾ ಸಾಮಾನು! ಅದರ ಪಟ್ಟಿ. ನೋಡೋದ್ರೊಳಗೇ ಪ್ಯಾಂಟ್ ಏರಿಸಿಬಿಟ್ಟಿದ್ದ ಗಂಡ. ದುರ್ಲಭ ದರ್ಶನ!

(ಮೂಲ: ಬಾಲಚಂದ್ರ ಹೆಗಡೆ)

 * ಇಂತದ್ದನ್ನೆಲ್ಲ ಓದಿ ಮಸ್ತಿ ಮಾಡುವವರಾದರೆ ಇಲ್ಲಿ ಹೋಗಿ ಫುಲ್ ಚಿಂದಿ ಉಡಾಯಿಸಿ. ತುಂಟರಿಗೆ ಮಾತ್ರ - http://motugode.blogspot.com/

Wednesday, February 04, 2015

ಫೆಬ್ರವರಿ ಹದಿನಾಲ್ಕಕ್ಕೆ ಹನುಮಾನ್ ಜಯಂತಿ?????

(F)art of living ಸ್ವಾಮೀಜಿ ಅಂತಲೇ ಖ್ಯಾತರಾದ ಭಂ ಭಂ ಭೋಲೆನಾಥ ಸ್ವಾಮೀಜಿ ಆಶ್ರಮದಲ್ಲಿ ಆರಾಮವಾಗಿ ಮಲಗಿದಂತೆ ಕುಳಿತಿದ್ದರು. ಅಥವಾ ಕುಳಿತಂತೆ ಮಲಗಿದ್ದರು.  ಸುತ್ತ ಮುತ್ತ ಶಿಷ್ಯ ಶಿಷ್ಯೆಯರು ತುಂಬಿದ್ದರು. ಶಿಷ್ಯೆಯರೇ ಹೆಚ್ಚಿದ್ದಂತೆ ಕಂಡು ಬಂತು.

'ಸ್ವಾಮಿಗಳೇ, ಬರೋ ಫೆಬ್ರವರಿ ಹದಿನಾಲ್ಕಕ್ಕ ಅದೇನೋ ಹಬ್ಬ ಐತಂತಲ್ಲರೀ. ಏನ್ರೀ ಅದು? ಏನು ಮಾಡ್ಬೇಕ್ರೀ?' ಅಂತ ಕೇಳಿದ ಭಕ್ತ. ನೋಡಲಿಕ್ಕೆ ಒಳ್ಳೆ ದೇವರಿಗೆ ಬಿಟ್ಟ ಗೂಳಿ ಹಾಗೆ ಇದ್ದ.

'ನಿನಗ ಹೆಂಡತಿ ಅದಾಳು?' ಅಂತ ಕೇಳಿದರು ಸ್ವಾಮೀಜಿ.

'ಇಲ್ಲರೀ, ಸ್ವಾಮಿಗಳ,' ಅಂದ ಭಕ್ತ.

'ಗರ್ಲ್ ಫ್ರೆಂಡ್ ಅದಾಳು?' ಅಂತ ಕೇಳಿದರು ಭಂ ಭಂ.

'ಅದಾಳ್ರೀ!'  ಅಂದುಬಿಟ್ಟ ಭಕ್ತ.

ಸ್ವಾಮಿಗಳು ಘಾಬರಿ ಬಿದ್ದು ಕೇಳಿದರು, 'ಅಲೀ ಇವನೌನ್! ಯಾವಾಗ ಮಾಲ್ ಅಂದರ್ ಮಾಡಿಕೊಂಡಿಲೇ? ನಮಗ ತೋರ್ಸೋದು ದೂರ ಉಳೀತು. ಹೇಳಲೂ ಇಲ್ಲ. ಹಾಂ!?'

'ಮಂಗ್ಯಾನಮಗನ್ನ ತಂದು. ಎಲ್ಲಾರೂ ಎಲ್ಲದನ್ನೂ ಮೊದಲು ಸ್ವಾಮಿಗಳಿಗೆ ಅರ್ಪಣೆ ಮಾಡಿ ನಂತರ ಪ್ರಸಾದ ಅಂತ ತೊಗೊಂಡ್ರೆ ಇವನ್ನ ನೋಡು, ಎಲ್ಲಾ ಮರೆತು ಈಗ ಹೇಳಾಕತ್ತಾನ. ತಡೀ ಇವಂಗ, ಇವನ ಗರ್ಲ್ ಫ್ರೆಂಡ್ ಇಬ್ಬರಿಗೂ ಬಡಿತೇನಿ, ಬಗಣಿ ಗೂಟಾ,' ಅಂತ ಮನಸ್ಸಿನಲ್ಲಿಯೇ ಸಿಟ್ಟಿಗೆದ್ದರು ಸ್ವಾಮೀಜಿ.

'ಯಾರಲೇ ಅಕಿ ನಿನ್ನ ಗರ್ಲ್ ಫ್ರೆಂಡ್?????' ಅಂತ ಹೂಂಕರಿಸಿದರು ಭಂಭಂಭೋಸ್ವಾ.

'ಸ್ವಾಮಿಗಳ, ಅಕಿ ನಮ್ಮ ಜೋಡಿ ಬಾಲವಾಡಿ ಒಳಗ ಇದ್ದಳ್ರೀ. ಈಗ ಮನ್ನೆ ಮನ್ನೆ ಫೇಸ್ಬುಕ್ ಮ್ಯಾಲೆ ಸಿಕ್ಕಾಳರೀ!' ಅಂದ ಭಕ್ತ.

'ಥತ್ ನಿನ್ನ. ಗರ್ಲ್ ಫ್ರೆಂಡ್ ಅಂದ್ರ ಫ್ರೆಂಡ್ ಗರ್ಲ್ ಅಲ್ಲಲೇ. ಬಾಲವಾಡಿ ಒಳಗಿನ ಸಣ್ಣ ಹುಡುಗಿ ಫ್ರೆಂಡ್ ಅಲ್ಲ. ಇರಲಿ ಬಿಡು. ನಿನಗ ಅವೆಲ್ಲ ತಿಳಿಯಂಗಿಲ್ಲ,' ಅಂದ ಸ್ವಾಮಿಜಿ ಪ್ರಶ್ನೆ ಮುಂದುವರೆಸಿದರು.

'ಸ್ಟೆಪ್ನೀ ಐತಿ?' ಅಂದು ಕೇಳಿದ ಸ್ವಾಮೀಜಿ, 'ಹೆಂಡತಿನೇ ಇಲ್ಲ ಅಂತಿ. ಅಂದ ಮ್ಯಾಲೆ ಸ್ಟೆಪ್ನೀ ಎಲ್ಲಿಂದ ಬರಬೇಕು?' ಅಂತ ಆವರೇ ಹೇಳಿದರು.

ಭಕ್ತ ಮತ್ತೊಮ್ಮೆ ಇಟ್ಟುಬಿಟ್ಟ. ಇಟ್ಟೇಬಿಟ್ಟ.

'ಏ! ಸ್ವಾಮಿಗಳೇ, ಸ್ಟೆಪ್ನೀ ಐತ್ರೀ. ಅದೂ ಫುಲ್ ಹವಾ ತುಂಬಿಕೊಂಡು ಮಜಬೂತ್ ಐತ್ರೀ. ಯಾಕ್ರೀ ನಿಮ್ಮ ಫಟಫಟಿ (ಮೋಟಾರ್ ಬೈಕ್) ಪಂಚರ್ ಆಗೈತಿ ಏನ್ರೀ?? ಹೇಳ್ರೀ ಸರ್ರಾ! 'ನಿಮ್ಮವ್ವನ ಗುದ್ದು, ಪಂಚರ್ ತಿದ್ದು,' ಅನ್ನೋ ತೊಂದ್ರಿನೇ ಬ್ಯಾಡರೀಪಾ. ನನ್ನ ಸ್ಟೆಪ್ನೀ ತೆಗೆದ ನಿಮ್ಮ ಗಾಡಿಗೆ ಹಾಕೇ ಬಿಡ್ಲಿ ಏನ್ರೀ????? ನಾ ಆಮೇಲೆ ಪಂಚರ್ ಶಾಪಿನಲ್ಲಿ, ಪಂಚರ ಶಾಪದಿಂದ ಪಂಚರಾದ ನಿಮ್ಮ ಟೈರ್ ರಿಪೇರ್ ಮಾಡಿಸಿಕೊಂಡು ಬರ್ತೇನಿ. ಚಿಂತಿ ಬ್ಯಾಡ್ರೀ ಸ್ವಾಮಿಗಳ,' ಅಂತ ಹೇಳಿಬಿಟ್ಟ ಭಕ್ತ. ಭಾಳ ಮುಗ್ಧ ಭಕ್ತ.

'ಹುಚ್ಚ ಸೂಳಿ ಮಗನ! ನಾ ಕೇಳಿದ್ದು ಸ್ಕೂಟರ್, ಫಟಫಟಿ, ಕಾರ್ ಸ್ಟೆಪ್ನೀ ಅಲ್ಲಲೇ. ಇರ್ಲಿ ಬಿಡು. ನಿನಗ ಅವೆಲ್ಲ ತಿಳಿಯಂಗಿಲ್ಲ. ನಿನಗ ಸ್ಟೆಪ್ನೀ ಇಲ್ಲ ತೊಗೋ,' ಅಂದ್ರು ಸ್ವಾಮೀಜಿ.

ಅಷ್ಟರಾಗ ಸ್ವಾಮೀಜಿ ಅವರ ಅನಧೀಕೃತ ಹೆಂಡತಿ, ಗರ್ಲ್ ಫ್ರೆಂಡ್, ಸ್ಟೆಪ್ನೀ, ಡವ್ವ, ಸಖಿ ಎಲ್ಲದೂ all-in-one ಆದ ಮಾಲೊಂದು ಬಂದು, ಸ್ವಾಮಿಗಳಿಗೆ ಬಗ್ಗಿ ಬಗ್ಗಿ ನಮಸ್ಕಾರ ಮಾಡಿ, ಆವ್! ಆವ್! ಅನ್ನೋ ಮಾದರಿಯಲ್ಲಿ ಮ್ಯಾವ್! ಮ್ಯಾವ್! ಅಂದಳು.

'ಲೇ ಇವನ ಭಕ್ತಾ! ನಿನಗ ಹೆಂಡ್ತೀ ಇಲ್ಲ. ಗರ್ಲ್ ಫ್ರೆಂಡೂ ಇಲ್ಲ. ಸ್ಟೆಪ್ನೀ ಅಂತೂ ಇಲ್ಲೇ ಇಲ್ಲ. ಅಂದ ಮ್ಯಾಲೆ ನೀ ಒಂದು ಕೆಲಸ ಮಾಡಲೇ,' ಅಂತ ಸ್ವಾಮೀಜಿ ಎದ್ದರು.

'ಏನು ಮಾಡಲ್ರೀ ಸ್ವಾಮಿಗಳ?????' ಅಂತ ಕೇಳಿದ ಭಕ್ತ.

'ನೀ ಫೆಬ್ರುವರಿ ಹದಿನಾಲ್ಕರಂದು 'ಹನುಮಾನ್ ಜಯಂತಿ' ಮಾಡಿ ಬಿಡು. ಒಳ್ಳೆದಾಗಲಿ,' ಅಂತ ಹೇಳಿ ಸ್ವಾಮಿಗಳು ಹೊರಟರು.

'ಆದ್ರ ಸ್ವಾಮಿಗಳ ಹನುಮಾನ್ ಜಯಂತಿ ಬರೋದು ಏಪ್ರಿಲ್ ಒಳಗ. ಅಲ್ಲರೀ?' ಅಂತ ಕೇಳಿದ ಭಕ್ತ.

'ನೋಡಪಾ ನಮ್ಮಂತ ಸ್ವಾಮಿಗಳಿಗೆ ದಿನಾನೂ 'ಕಾಮ'ಣ್ಣನ ಹಬ್ಬ. ನಿಮ್ಮಂತವರಿಗೆ ದಿನಾನೂ ಹನುಮಾನ್ ಜಯಂತಿ. ಯೋಗಿ ಪಡೆದಿದ್ದು ಯೋಗಿಗೆ. ಭೋಗಿ ಪಡೆದಿದ್ದು ಭೋಗಿಗೆ. ಯೋಗಿಯಾಗೋ ನಿನ್ನಾಪನಾ ಯೋಗಿ ಮಹಾಯೋಗಿಯಾಗೋ!' ಅಂತ ಹೇಳಿದ ಸ್ವಾಮೀಜಿ ಪಟಾಕಾ ಫಿಗರೊಂದಿಗೆ ಸಮಾಧಿ ಕೋಣೆ ಹೊಕ್ಕರು.

ನಂತರ ಒಳಗೆ ನಡೆದಿದ್ದು ಭಯಂಕರ ಕಾಮ ದಹನ ಅನ್ನಿಸುತ್ತದೆ. ಅದರ ಬಿಸಿ ಝಳ ಹೊರಗೂ ತಟ್ಟುತ್ತಿತ್ತು. ಅಯ್ಯೋ! ಕಾಮ ದಹನ ಅಂದ್ರ ತಪ್ಪು ತಿಳ್ಕೊಬ್ಯಾಡ್ರೀ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಅನ್ನೋ ಷಡ್ವೈರಿಗಳ ದಹನ ಅಂತ. ಕಾಮ ದಹನದ ಬೆಂಕಿ ಹಚ್ಚಲಿಕ್ಕೆ, ಬೆಂಕಿ ಆರದಾಂಗ ಊದಕೊಳವಿ ಊದಲಿಕ್ಕೆ ಅಂತ ತಮ್ಮ ಶಿಷ್ಯೆ ಕರ್ಕೊಂಡು ಕೋಣೆ ಒಳ ಹೊಕ್ಕಿದ್ದರು ಸ್ವಾಮೀಜಿ. ಆದ್ರ ಅವರು ಮಾತ್ರ ಭಾಳ ಖಡಕ್ ಬ್ರ(ಬ್ರಾ)ಹ್ಮಚಾರಿ! ಚಿತ್ತ ಯಾವಾಗಲೂ ಅಲ್ಲೇ!

ಭಕ್ತ ಮಾತ್ರ ಗುರುವಿನ ಆಜ್ಞೆಯಂತೆ 'ಹನುಮಾನ್ ಜಯಂತಿ' ಆಚರಿಸಲು ಬೇಕಾಗೋ ಜಯಂತಿ ಅಲ್ಲಲ್ಲ ಲಂಗೋಟಿ ತರಲು ಪೇಟೆ ಕಡೆ ಹೊಂಟ.

ಜೈ ಬಜರಂಗ ಬಲಿ!

ಹ್ಯಾಪಿ ವ್ಯಾಲೆಂಟೈನ್ ಡೇ!

ಇತರೆ ಸಂಬಂಧಿತ ಪೋಸ್ಟುಗಳು:

ವಿಲಾಯತಿ ಸಂತನೂ, ದೇಸಿ Love Day ಯೂ 

ಆಂಟಿ ಅಂದರೆ ನರಕ, ACP ಅಂದರೆ ಸ್ವರ್ಗ...(F)art of Living

'ಹಾದಿ ಶಂಕರಾ' ಜಯಂತಿ, ಮುಬಾರಕ್, ಮುಬಾರಕ್! 



Monday, February 02, 2015

ಶಿವಪ್ಪ ಮೊಹೆಂಜೋದಾರೋ

ಟೀಚರ್: ಹರಪ್ಪ ಮೊಹೆಂಜೋದಾರೋ ಸಂಸ್ಕೃತಿಗೆ ಇರುವ ಮತ್ತೊಂದು ಹೆಸರು ಏನು?

ದ್ಯಾಮ್ಯಾ: ಶಿವಪ್ಪ ಮೊಹೆಂಜೋದಾರೋ ಸಂಸ್ಕೃತಿ!

ಕೇಳಿದ ಟೀಚರ್ ಫುಲ್ ಥಂಡಾ!

ಟೀಚರ್: ಏನಲೇ ಹಾಂಗದ್ರ?

ದ್ಯಾಮ್ಯಾ: ಹರಪ್ಪ ಅಂದ್ರ ಹರ + ಅಪ್ಪ ಹಾಂಗಾಗಿ  ಶಿವ + ಅಪ್ಪ. ಅದಕss ಶಿವಪ್ಪ. ಅದಕss ಶಿವಪ್ಪ ಮೊಹೆಂಜೋದಾರೋ. ಇದ್ರಾಗ ತಪ್ಪೇನೈತ್ರೀ???

ಟೀಚರ್: ನಿನ್ನ ತಲಿ.

ದ್ಯಾಮ್ಯಾ: ಶಿವಪ್ಪ ಮೊಹೆಂಜೋದಾರೋ ಬ್ಯಾಡ ಅಂದ್ರ ವಿರೂಪಾಕ್ಷಪ್ಪ ಮೊಹೆಂಜೋದಾರೋ, ಷಡಕ್ಷರಪ್ಪ ಮೊಹೆಂಜೋದಾರೋ, ಪಂಚಾಕ್ಷರಪ್ಪ ಮೊಹೆಂಜೋದಾರೋ, ನೀಲಕಂಠಪ್ಪ ಮೊಹೆಂಜೋದಾರೋ, ಗಜಚರ್ಮಾಂಬರಪ್ಪ ಮೊಹೆಂಜೋದಾರೋ.............................ಇದರಾಗ ಯಾವದಾರ ನಡಿತೈತೆನ್ರೀ????ಹಾಂ?

ಹರಪ್ಪ ಮೊಹೆಂಜೋದಾರೋ ಸಂಸ್ಕೃತಿಗೆ ಸಿಂಧೂ ಕಣಿವೆ ಸಂಸ್ಕೃತಿ ಅಂತ ಇನ್ನೊಂದು ಹೆಸರು ಹೇಳಬಹುದು ಅಂತ hoping against the hope ಆಶಿಸಿದ್ದ ಹಿಸ್ಟರಿ ಮೇಡಂ, 'ಶಿವನೇ ಭಯಹರನೇ.........' ಅಂತ ಭಜನಿ ಮಾಡಿಕೋತ್ತ, ತಾಳಾ ತಟ್ಟಿಕೋತ್ತ ಉಳಿಬಸಪ್ಪನ ಗುಡಿ ಕಡೆ ಹೋದವರು ಆಕಡೆನೇ ನಾಪತ್ತೆ ಅಂತ ಸುದ್ದಿ.