Thursday, June 30, 2016

ಹಾದರಗಿತ್ತಿ ಹಜಾಮತಿ

ಮಾಧವ ಅಂದು ಬೆಳಗಿನಿಂದಲೇ ಕುಡಿಯಲು ಆರಂಭಿಸಿದ್ದ. ಕುಡಿಯಲು ಆರಂಭಿಸಿದ್ದ ಅನ್ನಲಿಕ್ಕೆ ಯಾವಾಗ ಕುಡಿಯುವದನ್ನು ನಿಲ್ಲಿಸಿದ್ದ? ಅವನಿಗೇ ಮರೆತುಹೋಗಿದೆ. ಹಿಂದಿನ ರಾತ್ರಿ ಎಂದಿನಂತೆ ಬಾರಿನಲ್ಲಿ ಕಂಠಪೂರ್ತಿ ಕುಡಿದಿದ್ದ. ಅದು ದಿನದ ಅಭ್ಯಾಸ. ಗೆಳೆಯರು ಮನೆ ಮುಟ್ಟಿಸಿ ಹೋಗಿದ್ದರು. ಕುಡುಕ ಗೆಳೆಯರು ಅಷ್ಟಾದರೂ ಮಾಡುತ್ತಾರೆ. ತಾವೇ ನಶೆ ಏರಿ ಜೋಲಿ ಹೊಡೆದು ಗಟಾರಕ್ಕೆ ಬೀಳುವ ಸ್ಥಿತಿಯಲ್ಲಿದ್ದರೂ ಇವನನ್ನು ಮನೆಗೆ ಮುಟ್ಟಿಸದೇ ಹೋಗುವದಿಲ್ಲ. ಇದ್ದವರಲ್ಲಿಯೇ ಸ್ವಲ್ಪ ಮಾಲ್ದಾರ್ ರೊಕ್ಕದ ಆದ್ಮಿ ಇವನು. ಬಾರಿನ ಬಿಲ್ ಕೊಟ್ಟಿರುತ್ತಾನೆ. ಋಣ ಬಿದ್ದಿರುತ್ತದೆ. ಅದಕ್ಕಾಗಿ ಮನೆ ಮುಟ್ಟಿಸಿರುತ್ತಾರೆ. ಕುಡಿದು ಫುಲ್ ಔಟಾದ ಇವನನ್ನು ಮನೆಯ ಮುಂದಿನ ಬಾಗಿಲಿಗೆ ಆನಿಸಿ ಹೋಗಿರುತ್ತಾರೆ. ಬಾಗಿಲಿಗೆ ಅಕ್ಕಿ ಮೂಟೆಯಂತೆ ಆನಿಕೊಂಡಿರುತ್ತದೆ ಇವನ ದೇಹ. ಬಾಗಿಲು ತಟ್ಟಿ, ಮಾಧವನ ಹೆಂಡತಿ ವೀಣಾಳನ್ನು ಎಬ್ಬಿಸಿ, ಈ ಪುಣ್ಯಾತ್ಮನನ್ನು ಮನೆಯೊಳಕ್ಕೆ ತಳ್ಳುವ ಜುರ್ರತ್ ಯಾರೂ ಮಾಡುವದಿಲ್ಲ. ಯಾರಿಗೆ ಬೇಕು ಆ ನಡು ರಾತ್ರಿಯಲ್ಲಿ ಪೂಜ್ಯ ವೈನಿಯಾದ ವೀಣಾ ವೈನಿಯಿಂದ 'ಪೂಜೆ' ಮಾಡಿಸಿಕೊಳ್ಳುವ ಒಳ್ಳೆ ನಸೀಬು!? ಮಾಧವನಿಗಂತೂ ಮೈಮೇಲೆ ಹೋಶ್ ಇರುವದಿಲ್ಲ. ಬಾಗಿಲಿಗೆ ಆನಿಕೊಂಡೇ ನಿದ್ದೆ ಹೋಗಿರುತ್ತಾನೆ ಆ ಕುಡುಕ.

ಹಿಂದಿನ ದಿನವೂ ಹಾಗೆಯೇ ಆಗಿತ್ತು. ಬೆಳಿಗ್ಗೆ ಐದೂವರೆ ಹೊತ್ತಿಗೆ ಹಾಲಿನ ಪ್ಯಾಕೆಟ್ ಎತ್ತಿಕೊಳ್ಳಲು ಮುಂದಿನ ಬಾಗಿಲು ತೆಗೆದಿದ್ದಳು ವೀಣಾ. ಬಾಗಿಲು ತೆರೆದಂತೆ ಬಾಗಿಲಿಗೆ ಆನಿಕೊಂಡಿದ್ದ ಗಂಡ ಪ್ರಾಣಿ ಉಧೋ ಅಂತ ಹೊಸ್ತಿಲ ಮೇಲೆ ಪವಡಿಸಿಬಿಟ್ಟಿತು. 'ಕರ್ಮ! ಕರ್ಮ!' ಅಂತ ಹಣೆ ಹಣೆ ತಟ್ಟಿಕೊಳ್ಳುತ್ತ ಮಾಧವನ ಬಾಡಿಯನ್ನು ಎಳೆದು ಒಳಗೆ ಹಾಕಿದ್ದಳು. ಹಾಲಿನ ಪಾಕೇಟುಗಳನ್ನು ಗಡಿಬಿಡಿಯಲ್ಲಿ ಒಳಗೆ ತಂದುಕೊಂಡು ಬಾಗಿಲು ಮುಚ್ಚಿದ್ದಳು. 'ಓಣಿ ಜನರ ಮುಂದೆ ಮಾನ ಕಳೆಯುತ್ತಾನೆ! ಪ್ರಾರಬ್ಧ!' ಅಂದುಕೊಳ್ಳುತ್ತ ಒಳಗೆ ಹೋದಳು. ಮಾಧವನಿಗೆ ಕೊಂಚ ಎಚ್ಚರವಾಯಿತು. ಬಾಗಿಲಲ್ಲಿ ಕಾಲು ಒರೆಸುವ ಡೋರ್ ಮ್ಯಾಟ್ ಮೇಲೆ ಪವಡಿಸಿದ್ದೇನೆ ಅಂತ ಅರಿವಾಗಿ, ಹೇಗೋ ಮಾಡಿ ಮೇಲೆ ಎದ್ದು, ಹೋಗಿ ಬೆಡ್ರೂಮ್ ಸೇರಿಕೊಂಡು ಶಿವಾಯ ನಮಃ ಅಂತ ನಿದ್ದೆ ಹೋದ.

ಹೀಗೆ ನಿದ್ದೆ ಹೋದವ ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಎದ್ದ. ಎದ್ದ ಕೂಡಲೇ ಮತ್ತೆ ನೆನಪಾಯಿತು. ಚಹಾ ಅಲ್ಲ. ಎಣ್ಣೆ. ಹೇಗೂ ಮನೆಯಲ್ಲೂ ಸ್ಟಾಕ್ ಇಟ್ಟಿರುತ್ತಾನಲ್ಲ. ಅಲ್ಲೇ ಬೆಡ್ ರೂಮಿನಲ್ಲಿಯೇ ತೀರ್ಥ ಸೇವನೆ ಶುರು ಹಚ್ಚಿಕೊಂಡ. ಕೈಯಲ್ಲಿ ಟೀವಿ ರಿಮೋಟ್. ಅನ್ಯಮನಸ್ಕನಾಗಿ ಚಾನೆಲ್ ಬದಲಾಯಿಸುತ್ತ ಎಣ್ಣೆ ಗುಟುಕರಿಸುತ್ತ ಕೂತಿದ್ದ. ನಡುವೆ ಹೋಗಿ ಅಡುಗೆಮನೆಯಿಂದ ಮೆಲುಕಾಡಲು ಅಂತ ಒಂದಿಷ್ಟು ಚೂಡಾ ತಂದುಕೊಂಡ. ಮತ್ತೆ ಎಣ್ಣೆ ಸೇವನೆ ಮುಂದುವರೆಸಿದ. ಗಂಡನ ಕುಡಿತದಿಂದ ಇವತ್ತೂ ಕಿರಿಕಿರಿ ಅನುಭವಿಸುತ್ತಿದ್ದ ಪತ್ನಿ ಪಾತ್ರೆಗಳನ್ನು ಡಬಾ ಡಬಾ  ಅಂತ ಡಮರು ಬಾರಿಸುತ್ತ ಅಡಿಗೆಮನೆ ಕಡೆ ಕೆಲಸ ನಡೆಸಿದ್ದಳು. ಅವಳ ಪಾತ್ರೆಗಳ ಡಮರು ಆವಾಜ್ ಕಮ್ಮಿಯಾಗಲಿ ಅಂತ ಇವನು ಟೀವಿ ಆವಾಜನ್ನು ಜಾಸ್ತಿ ಮಾಡಿದ. ಮತ್ತೊಂದು ಪೆಗ್ ಎತ್ತಿದ. ಎಷ್ಟು ಪೆಗ್ಗುಗಳನ್ನು ಹಾಕಿದ್ದಾನೆ ಅಂತ ಅವನಿಗೆ ನೆನಪಿರಲಿಲ್ಲ. ಬೇಕಾಗೂ ಇರಲಿಲ್ಲ. ಘಂಟೆ ಸುಮಾರು ಮಧ್ಯಾಹ್ನ ಎರಡು ಘಂಟೆ. ಮುಖವನ್ನೂ ತೊಳೆಯದೇ ಎದ್ದವನೇ ಕುಡಿಯುತ್ತ ಕುಳಿತಿದ್ದಾನೆ.

ಕಾಲಿಂಗ್ ಬೆಲ್ ಸದ್ದಾಯಿತು. ಹೆಂಡತಿ ಹೋಗಿ ಬಾಗಿಲು ತೆಗೆಯುತ್ತಾಳೋ ಅಂತ ನೋಡಿದ. ಅವಳು ಅಡುಗೆಮನೆಯಿಂದ ಕದಲುವ ಲಕ್ಷಣ ಕಾಣಲಿಲ್ಲ. ಹೊರಗಿಂದ ಮತ್ತೆ ಮತ್ತೆ ಕಾಲಿಂಗ್ ಬೆಲ್ ಬಾರಿಸಿದರು. ಕಾಲಿಂಗ್ ಬೆಲ್ಲಿನ ಕರ್ಕಶ ಮೊರೆತ ಕೇಳಲಾಗದೇ ಕುಡುಕ ಕಾಳಿಂಗ ಎದ್ದ. ಅರೆಬರೆ ಬಿಚ್ಚಿದ್ದ ಲುಂಗಿಯನ್ನು ಗುಡಾಣ ಮಾದರಿಯ ಹೊಟ್ಟೆ ಮೇಲೆ ಕಟ್ಟಿದ. ಮೇಲೇನೂ ಬಟ್ಟೆ ಹಾಕಿರಲಿಲ್ಲ. ಅಲ್ಲೇ ಇದ್ದ ಸಣ್ಣ ಟಾವೆಲ್ ತರಹದ್ದನ್ನು ಹೊದ್ದುಕೊಂಡು, ವಿಕಾರವಾಗಿ ಆಕಳಿಸುತ್ತ ಬಾಗಿಲು ತೆಗೆಯಲು ಹೋದ.

ಬಾಗಿಲು ತೆಗೆದರೆ ಕಂಡವರು ಮಾಮಿ. ಒಂದು ತರಹದ embarrassment ಫೀಲ್ ಆಯಿತು. ಸರಿಯಾಗಿ ಬಾಯಿಬಿಟ್ಟು, 'ಬರ್ರಿ, ಒಳಗ ಬರ್ರಿ, ಮಾಮಿ,' ಅನ್ನಲೂ ಸಂಕೋಚ. ಬಾಯಿ ಬಿಟ್ಟರೆ ಅವನ ಗಬ್ಬು ನಾತ ಅವನಿಗೇ ಹೊಡೆಯುತ್ತಿದೆ. ಕುಡುಕರ ದೊಡ್ಡ ಪ್ರಾಬ್ಲೆಮ್ ಅದು. ರಾತ್ರಿ ಕುಡಿಯುವಾಗ ಜೊತೆಗೆ ಚಾಕಣಾ ಪಾಕಣಾ ಅಂತ ಏನೇನು ತಿಂದಿರುತ್ತಾರೋ ಏನೋ. ಎಲ್ಲದರ ಜೊತೆ ಭರ್ಜರಿ ಉಳ್ಳಾಗಡ್ಡೆ, ಬಳ್ಳೊಳ್ಳಿ ಮೆದ್ದಿರುತ್ತಾರೆ. ಹೆಂಡದ ಜೊತೆ ಸಿಕ್ಕಾಪಟ್ಟೆ ರುಚಿಯಾಗಿರುತ್ತದೆ. ಅಡ್ಡಾದಿಡ್ಡಿ ಕುಡಿದಿರುತ್ತಾರೆ. ಆ ಮದ್ಯ ಇನ್ನೂ ಹೊಟ್ಟೆಯಲ್ಲಿಯೇ ಕುಲುಕಾಡುತ್ತಿರುತ್ತದೆ. ರಾತ್ರಿ ಹಲ್ಲು ಗಿಲ್ಲು ತಿಕ್ಕಿ ಮಲಗುವ ಅಭ್ಯಾಸ ಕುಡುಕರಿಗೆ ಇರುವದಿಲ್ಲ. ಯಾವಾಗ ನಿದ್ದೆಗೆ ಬಿದ್ದಿರುತ್ತಾರೆ ಅಂತಲೇ ಗೊತ್ತಿರುವದಿಲ್ಲ. ಹಾಗಿರುವಾಗ ನೆನಪಿಟ್ಟುಕೊಂಡು ಹಲ್ಲು ಗಿಲ್ಲು ತಿಕ್ಕಿ ಮಲಗೋದು ಸಾಧ್ಯವೇ? ಬಾರಿನಿಂದ ಹೊರ ಬೀಳುವಾಗ ಉಳ್ಳಾಗಡ್ಡೆ, ಬಳ್ಳೊಳ್ಳಿ, ಹೆಂಡದ ದುರ್ವಾಸನೆಯೆಲ್ಲ ಹೋಗಲಿ ಅಂತ ಗುಟ್ಕಾವನ್ನೋ, ಜರ್ದಾ ಪಾನನ್ನೋ ಹಾಕಿಕೊಂಡು ಬಂದಿರುತ್ತಾರೆ. ಅದರದ್ದು ಮತ್ತೊಂದು ತರಹದ ದುರ್ವಾಸನೆ. ಹೀಗೆ ಎಲ್ಲ ಕೂಡಿ ಕುಡುಕರಿಗೆ ಬೆಳಿಗ್ಗೆ ಎದ್ದಾಗ ಅವರ ದುರ್ವಾಸನೆ ಅವರಿಗೇ ಅಸಹನೀಯವಾಗಿರುತ್ತದೆ. ಬೇರೆ ಯಾರಾದರೂ ಆ ದುರ್ವಾಸನೆ ಭರಿಸಿದರೆ ಎಚ್ಚರ ತಪ್ಪಿ ಬೀಳಬೇಕು. ಆ ಮಾದರಿಯ ಪರಿಸರ ಮಾಲಿನ್ಯ.

ಮಾಧವ ಅದೇನೇ ಸಣ್ಣ ಧ್ವನಿಯಲ್ಲಿ, ಮುಖಕ್ಕೆ ಟಾವೆಲ್ ಮುಚ್ಚಿಕೊಂಡು ಮಾಮಿಯನ್ನು ಸ್ವಾಗತಿಸಿದರೂ ಕುಡುಕರ ಕೆಟ್ಟ ದುರ್ವಾಸನೆ ಮಾಮಿಯ ಮೂಗಿಗೂ ಅಡರಿತು. ಮೂಗು ಸಿಂಡರಿಸಿ ಒಂದು ತರಹದ ಲುಕ್ ಕೊಟ್ಟರು. ತನ್ನ ಕಣ್ಣಲ್ಲೇ ಮಾಧವ ಮತ್ತೂ ಸಣ್ಣವನಾಗಿಹೋದ. ಅವನ ಅಮ್ಮನ ಖಾಸ್ ಗೆಳತಿ ಮಾಮಿ. ಸಣ್ಣವನಿದ್ದಾಗಿನಿಂದ ಅವರ ಮುಂದೆಯೇ ಬೆಳೆದವನು ಇವನು. ಅಂತಹ ಮಾಮಿಯ ಮುಂದೆ ತಿರುಪೆ ಎತ್ತುವವನ ಅವತಾರದಲ್ಲಿ ನಿಂತಿದ್ದಾನೆ. ಅಪರೂಪಕ್ಕೆ ತನ್ನ ಮೇಲೆಯೇ ತನಗೆ ಅಸಹ್ಯ ಮೂಡಿತು.

ದೂರ ಸರಿದು ಒಳಗೆ ನಡೆದ. ದೂರದಿಂದಲೇ, 'ಬರ್ರಿ, ಬರ್ರಿ. ಒಳಗ ಬರ್ರಿ. ಕೂಡ್ರಿ. ಒಂದೇ ಮಿನಿಟ್. ಸ್ನಾನ ಮುಗಿಸಿ ಬಂದೇಬಿಡ್ತೇನಿ,' ಅಂದವನೇ ಬಚ್ಚಲಿನತ್ತ ಓಡಿದ. ಮಾಮಿ ಬಂದಿದ್ದಕ್ಕೆ ಸ್ನಾನದ ಯೋಗ ಬಂದಿತ್ತು. ಇಲ್ಲವಾದರೆ ಕುಡಿದು ಕುಡಿದು ಚಿತ್ತಾಗಿ ಮತ್ತೆ ಅಲ್ಲೇ ನಿದ್ದೆ ಹೋಗಿಬಿಡುತ್ತಿದ್ದ. ಸಂಜೆ ಏಳೋ ಎಂಟೋ ಘಂಟೆಗೆ ಎಚ್ಚರವಾಗುತ್ತಿತ್ತು. ಮತ್ತೆ ಸಂಜೆಯ ತೀರ್ಥಯಾತ್ರೆಗೆ ಸಜ್ಜಾಗುತ್ತಿದ್ದ.

ಸ್ನಾನಕ್ಕೆ ಹೋಗುವ ಮುನ್ನ, 'ಏ, ವೀಣಾ. ಮಾಮಿ ಬಂದಾರ ನೋಡು. ನಾ ಬರ್ತೇನಿ ಸ್ನಾನ ಮಾಡಿ,' ಅಂತ ಹೇಳಿ ಹೋದ.

'ಮೊದಲೇ ಇವನದು ಈ ಅವತಾರ. ಅದೇ ಅವತಾರದಲ್ಲಿ ಹೋಗಿ ಮನೆಗೆ ಬಂದ ಅತಿಥಿಗಳ ಕಣ್ಣಿಗೆ ಬಿದ್ದಿದ್ದಾನೆ. ಈಗ ನಾನು ಹೋಗಿ ಅವರ ಮುಂದೆ ಕೂತು ಮಾತಾಡಬೇಕು. ನನಗೂ ಕೆಟ್ಟ ಅವಮಾನ. ಎಲ್ಲ ಇವನ ಕಾಲದಲ್ಲಿ. ಇವನ ಕುಡಿತದ ಕಾಲದಲ್ಲಿ. ಅಯ್ಯೋ ನನ್ನ ಕರ್ಮವೇ!' ಅಂತ ಮನದಲ್ಲೇ ಅಂದುಕೊಳ್ಳುತ್ತ ವೀಣಾ ಅಡುಗೆಮನೆಯಿಂದ ಹೊರಗೆ ಬಂದಳು. ಮಾಮಿಯ ಜೊತೆ ಮಾತುಕತೆಗೆ ಕೂತಳು. ಹಾಗೆ ಸುಮ್ಮನೆ ಟೈಂಪಾಸ್ ಮಾತುಕತೆ ಗಂಡ ಸ್ನಾನ ಮುಗಿಸಿ ಬರುವತನಕ.

ಬಂದು ಕೂತ ವೀಣಾ ಮಾಮಿಯ ಜೊತೆ ಅದು ಇದು ಮಾತಾಡಿದಳು. ತಲೆ ಮೇಲೆ ಸೆರಗು ಮುಚ್ಚಿಗೊಂಡು ಕೂತಿದ್ದಳು. ಇನ್ನೂ ಮೂವತ್ತರ ಹರೆಯದ ಯುವತಿ ಅದು ಏಕೆ ಹಾಗೆ ತಲೆ ಮೇಲೆ ಸೆರಗು ಮುಚ್ಚಿಕೊಂಡು ಕೂತಿದ್ದಾಳೆ ಅಂತ ಮಾಮಿಗೆ ಅಚ್ಚರಿಯಾಯಿತು. ವೀಣಾಳಲ್ಲಿ ಏನೋ ಬದಲಾವಣೆ ಆದಂತೆ ಕಂಡುಬಂತು. ಇನ್ನೇನು ಕೇಳಬೇಕು ಅನ್ನುವಷ್ಟರಲ್ಲಿ ಸ್ನಾನ ಮುಗಿಸಿದ ಮಾಧವ ಶುದ್ಧ ಬಟ್ಟೆ ಧರಿಸಿ, ಇನ್ನೂ ಒದ್ದೆಯಾಗಿದ್ದ ತಲೆಯನ್ನು ಒರೆಸಿಕೊಳ್ಳುತ್ತ ಮತ್ತೆ ಎಂಟ್ರಿ ಕೊಟ್ಟ.

'ಏನು ಮಾಮಿ? ಭಾಳ ಅಪರೂಪ. ಮಾಮಾ ಆರಾಮರೀ? ಮತ್ತರೀ??' ಅಂತ ಕೇಳಿದ. ಹಾಗೆ ಕೇಳುವದರಲ್ಲಿಯೇ ಮಾಮಿ ಬಂದ ಕೆಲಸದ ಬಗ್ಗೆಯೂ ವಿಚಾರಿಸಿಕೊಂಡಿದ್ದ.

ಸ್ನಾನ ಮಾಡಿ ಬಂದರೂ ಗಬ್ಬು ವಾಸನೆ ಹೋಗಿರಲಿಲ್ಲ. ಕುಡಿದ, ತಿಂದ ವಾಸನೆ ಏನು ಕೇವಲ ಬಾಯಿಗೆ ಮಾತ್ರ ಅಂಟಿಕೊಂಡಿರುತ್ತದೆಯೇ? ಅದು ಸೀದಾ ರಕ್ತ ಸೇರಿರುತ್ತದೆ. ಹಾಗಾಗಿಯೇ ಉಸಿರಾಡಿದಾಗೊಮ್ಮೆ ಗಬ್ಬು ನಾತ. ಅದು ದೇಹದಿಂದ ಪೂರ್ತಿ ನಿಕಾಲಿಯಾಗುವರೆಗೂ ವಾಯು ಮಾಲಿನ್ಯ. ಹಾಗಾಗಿಯೇ ಉಳ್ಳಾಗಡ್ಡೆ, ಬಳ್ಳೊಳ್ಳಿ ತಿಂದ ಮೇಲೆ ಮತ್ತು ಹೆಂಡ ಕುಡಿದ ಮೇಲೆ ಅದೇನೇ ಗಜಂ ನಿಂತರೂ, ಅದೆಷ್ಟೇ ಹಲ್ಲುಜ್ಜಿದರೂ, ಅದೆಷ್ಟೇ ಮಾಣಿಕ್ಚಂದ ಗುಟ್ಕಾ ಹಾಕಿಕೊಂಡರೂ ಗಬ್ಬು ವಾಸನೆ ಹೋಗುವದಿಲ್ಲ. ಮಾಧವನ ಕೇಸಿನಲ್ಲೂ ಅದೇ ಆಗಿತ್ತು.

'ಎಲ್ಲಾ ಆರಾಮ್ ಮಾಧವಾ. ಒಂದು ಒಳ್ಳೆ ಕೆಲಸಕ್ಕೆ ಚಂದಾ ಕೂಡಿಸಲಿಕತ್ತೇನಿ. ನಿನ್ನ ಕಡೆನೂ ಕೇಳೋಣ ಅಂತ ಬಂದೆ. ಕೈಲಾದಷ್ಟು ಕೊಟ್ಟು ಸಹಾಯ ಮಾಡಪಾ. ಒಳ್ಳೆ ಕೆಲಸ. ಅಷ್ಟು ಇಷ್ಟು ಅಂತಿಲ್ಲ. ಎಷ್ಟು ಮನಸ್ಸಿಗೆ ಬರ್ತದ ಅಷ್ಟು,' ಅಂದು ಫಿಟ್ಟಿಂಗ್ ಇಟ್ಟರು. ಮಾಮಿಯ ಸಮಾಜ ಸೇವೆಯ ಬಗ್ಗೆ ಎಲ್ಲರಿಗೂ ಗೊತ್ತು. ಒಂದಾದಮೇಲೊಂದು ಒಳ್ಳೆ ಕೆಲಸಗಳಿಗೆ ಆದಷ್ಟು ರೊಕ್ಕ ಸಂಗ್ರಹಿಸಿ ಕೊಡುತ್ತಿರುತ್ತಾರೆ. ತಾವೂ ಕೊಡುತ್ತಾರೆ. ಮತ್ತೆ ಮಂದಿಯ ಜೊತೆ ಒಳ್ಳೆ ಸಂಪರ್ಕ ಮಡಗಿದ್ದಾರೆ. ಊರ ಮಂದಿಯ ಜೊತೆ ಒಳ್ಳೆ ಬಾಂಧವ್ಯ ಇದೆ. ಮತ್ತೆ ಹಿರಿಯರು. ಹಾಗಾಗಿ ಮಾಧವನಿಗೆ ಕೊಡದೇ ಇರಲು ಕಾರಣವಿಲ್ಲ. ಮತ್ತೆ ಅವರದ್ದೂ ದೊಡ್ಡ ಮನೆತನವೇ. ಒಳ್ಳೆ ಕೆಲಸಗಳಿಗೆ ದಾನ ಧರ್ಮ ಮಾಡಿದವರೇ. ಹಾಗಾಗಿ ಮಾಮಿಗೆ ಒಂದಿಷ್ಟು ರೊಕ್ಕ ತಂದುಕೊಡಲು ಮಾಧವ ಒಳಗೆ ಹೋದ. ಒಂದಿಷ್ಟು ನೋಟು ಹಿಡಿದುಕೊಂಡು ಬಂದು ಮಾಮಿಗೆ ಕೊಟ್ಟು ಕೈಮುಗಿದ. ಮಾಮಿ ರಸೀದಿ ಬರೆದು ಕೊಟ್ಟರು. ಭರ್ಜರಿ ಥಾಂಕ್ಸ್ ಹೇಳಿದರು.

ರೊಕ್ಕ ಸಿಕ್ಕಿತು ಅಂತ ಹಾಗೇ ಸೀದಾ ಎದ್ದು ಹೋಗಲಿಕ್ಕೆ ಆಗುತ್ತದೆಯೇ? ಹಾಗೆ ಮಾಡಿದರೆ ಸ್ನೇಹಕ್ಕೆ, ಬಾಂಧವ್ಯಕ್ಕೆ ಕೊಡಲಿಯೇಟು ಬಿದ್ದಂತೆಯೇ. ಮುಂದಿನ ಸಲ ಚಂದಾ ಕೇಳಲು ಬಂದಾಗ, 'ಮುಂದ ಹೋಗ್ರೀ!' ಅಂತ ಹೇಳಿ ಗೇಟು ಬಾಗಿಲನ್ನು ಮುಚ್ಚುತ್ತಾರೆ. ಹಾಗಾಗಿ ಸುಮ್ಮನೆ ಒಂದಿಷ್ಟು ಮಾತಾಡುತ್ತ ಕೂತರು.

ಮಾಧವನ ಪತ್ನಿ ವೀಣಾ ಏನೋ ಒಂದು ತರಹದಲ್ಲಿ ಬದಲಾಗಿದ್ದು ನೆನಪಾಯಿತು. ಕೇಳಬೇಕೆನ್ನಿಸಿತು.

'ಏನು ವೀಣಾ? ಏನೋ ಬದಲಾದಂಗ ಅದಲ್ಲಾ? ಏನು? ತಿಳಿವಲ್ತು? ತಲಿ ಮ್ಯಾಲ ಸೆರಗು ಯಾಕ?' ಅಂತ ಮಾಮಿ ಸಹಜವಾಗಿ ಕೇಳಿದರು.

ವೀಣಾ ಒಂದು ಕ್ಷಣ confuse ಆದ ಲುಕ್ ಕೊಟ್ಟಳು. ಹೇಳಲೋ ಬೇಡವೋ ಅನ್ನುವ ವಿಚಾರ ಮಾಡಿದಳು. ಆಕೆ ಹೇಳುವ ಜರೂರತ್ತೇ ಬರಲಿಲ್ಲ. ಮಾಮಿಯ innocent ಪ್ರಶ್ನೆ ಕೇಳಿದ ಮಾಧವ ಸ್ಪೋಟಗೊಂಡಿದ್ದ. ಮೊದಲೇ ಸಿಕ್ಕಾಪಟ್ಟೆ ಕುಡಿದು ಕೂತಿದ್ದ. ಅದೆಲ್ಲಿತ್ತೋ ಹೆಂಡತಿ ಮೇಲಿನ ಸಿಟ್ಟು. ಸ್ಫೋಟ. ದೊಡ್ಡ ಸ್ಫೋಟ. ಅದೇ ಆಯಿತು.

'ನೋಡ್ರಿ! ನೋಡ್ರಿ! ಮಾಮಿ. ಇಕಿ ಏನು ಮಾಡಿಕೊಂಡು ಕೂತಾಳ ಅಂತ. ನೀವೇ ನೋಡ್ರಿ!' ಅಂತ ವಿಕಾರವಾಗಿ ಒದರಿದವನೇ ಹೆಂಡತಿಯ ಬುರುಡೆ ಮೇಲಿದ್ದ ಸೆರಗು ಕಿತ್ತುಬಿಟ್ಟ. ತಲೆ ಮೇಲಿನ ಸೆರಗು ಸರಿದದ್ದೇ ಸರಿದದ್ದು ವೀಣಾಳ ಹೊಸ ರೂಪದ ವಿಶ್ವದರ್ಶನವಾಯಿತು.

ಸದಾ ಉದ್ದ ಕೂದಲಿನಿಂದ ನಾಗವೇಣಿಯಂತೆ ಸುಶೋಭಿಸುತ್ತಿದ್ದ ವೀಣಾ ಬಾಬ್ ಕಟ್ ಮಾಡಿಸಿದ್ದಳು. ಹಾಗಾಗಿ ಹೊಸ ಲುಕ್.

ಸಾಂದರ್ಭಿಕ ಚಿತ್ರ

'ಹೊಸಾ ಹೇರ್ ಸ್ಟೈಲ್ ಏನವಾ? ಛಂದ ಕಾಣಸ್ತಿ ತೊಗೋ. ಛಂದ ಇದ್ದಿ. ಹಾಂಗಾಗಿ ಏನು ಮಾಡಿದರೂ ಎಲ್ಲಾ ಒಪ್ತದ,' ಅಂತ ತಮಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳಿಬಿಟ್ಟರು ಮಾಮಿ.

ಅದನ್ನು ಕೇಳಿದ ಮಾಧವ ಮತ್ತೂ ಉರಿದುಕೊಂಡ. ಹೆಂಡತಿ ಬಾಬ್ ಕಟ್ ಮಾಡಿಸಿಬಿಟ್ಟಿದ್ದಾಳೆ ಅಂತ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ತನ್ನನ್ನು ಒಂದು ಮಾತೂ ಕೇಳದೇ ಮಾಡಿಸಿದ್ದು ಕೆಟ್ಟ ಕೋಪ ತರಿಸಿತ್ತು. ಕೇಳಿದ್ದರೆ ಇವನು ಬೇಡ ಅನ್ನುತ್ತಿದ್ದ ಅನ್ನುವದರಲ್ಲಿ ಸಂಶಯವಿಲ್ಲ ಬಿಡಿ.

'ಇನ್ನು ಮುಗೀತು ಬಿಡ್ರಿ ಮಾಮಿ. ನೀವು ಬ್ಯಾರೆ ಒಪ್ಪಿಗೆ ಕೊಟ್ಟುಬಿಟ್ಟಿರಿ. ಇನ್ನು ಇಕಿನ್ನ ಹಿಡಿಲಿಕ್ಕೆ ಸಾಧ್ಯ ಇಲ್ಲ ಬಿಡ್ರೀ. ನೀವು ಹಿರಿಯರು, ಇಕಿ 'ಹಾದರಗಿತ್ತಿ ಹಜಾಮತಿ' ನೋಡಿ ಸ್ವಲ್ಪ ಬುದ್ಧಿ ಹೇಳ್ತೀರೋ ಅಂತ ನಾ ವಿಚಾರ ಮಾಡಿದ್ರ ನೀವೂ ಸಹ ಅಕಿನ್ನ ವಹಿಸಿಕೊಂಡು ಹೋಗೋದ? ಹಾಂ? ಏನು ಮಾಮಿ ನೀವು?' ಅಂತ ಮಾಮಿಯ ಮೇಲೂ ಆಕ್ಷೇಪಣೆ ತೋರಿಸಿದ.

'ಏ, ಸುಮ್ಮನಿರೋ ಸಾಕು. ಏನಾತೀಗ? ಇನ್ನೂ ಸಣ್ಣಾಕಿದ್ದಾಳ ಅಕಿ. ನಡಿತದ. ನಮ್ಮ ವಯಸ್ಸಿನ ಮುದುಕಿಯರೇ ಏನೇನೋ ಹೊಸಾ ಹೊಸಾ ಫ್ಯಾಷನ್ ಮಾಡ್ತಾವ ಈಗ. ನಿನ್ನ ಹೆಂಡ್ತಿ ಮಾಡಿದರೇನಾತು? ಛಂದ ಕಾಣಿಸ್ತಾಳ ತೊಗೋ!' ಅಂತ ಹೇಳಿದ ಮಾಮಿಯ ಮಾತು ಮಾಧವನಿಗೆ ಗಾಯದ ಮೇಲೆ ಬರೋಬ್ಬರಿ ಉಪ್ಪು ಸವರಿದಂತಾಯಿತು.

'ಏ, ಏನು ಹಚ್ಚೀರಿ ಮಾಮಿ? ನಮ್ಮ ಮನಿತನದಾಗ ಹೆಂಗಸೂರು ಕೂದಲಕ್ಕ ಕತ್ತರಿ ಮುಟ್ಟಿಸೋದು ಯಾವಾಗ ಹೇಳ್ರೀ?' ಅಂತ ಕೇಳಿದ. ಮುಂದುವರೆದು ಅವನೇ ಹೇಳಿದ, 'ಗಂಡ ಸತ್ತಾಗ ತಲಿ ಬೋಳಿಸಿಕೊಳ್ಳತಾರ ನೋಡ್ರಿ. ಆವಾಗ. ಇಕಿನ್ನ ನೋಡ್ರಿ. ನಾ ಜೀವಂತ ಇದ್ದಾಗ ಹೋಗಿ ತಲಿ ಬೋಳಿಸಿಕೊಂಡು ಬಂದಾಳ. ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬಂದಾಳ,' ಅನ್ನುವಷ್ಟರಲ್ಲಿ ಸಿಕ್ಕಾಪಟ್ಟೆ ಸಿಟ್ಟು ಬಂದು ತಡೆದುಕೊಳ್ಳಲು ಆಗಲೇ ಇಲ್ಲ.

'ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬರ್ತೀ? ಹಾಂ? ಮತ್ತೊಮ್ಮೆ ಮಾಡಿಸಿಕೊಂಡು ಬರ್ತೀ? ಬರ್ತೀ?' ಅಂತ ವಿಕಾರವಾಗಿ ಚೀರುತ್ತ ಹೆಂಡತಿಯ ಬುರುಡೆಗೆ ಎರಡು ಫಟ್ ಫಟ್ ಅಂತ ಕೊಟ್ಟೇಬಿಟ್ಟ. ಅಲ್ಲಿಗೆ ಗಂಡ ಹೆಂಡತಿಯ ಜಗಳ ತಾರಕಕ್ಕೆ ಮುಟ್ಟಿತ್ತು.

ಬುರುಡೆಗೆ ಏಟು ತಿಂದ ವೀಣಾ ಕೊಂಯ್ ಅಂತ ಅಳುವ ರಾಗ ಶುರು ಮಾಡಿದಳು. ಇವರಿಬ್ಬರ ಜಗಳವನ್ನು ಪರಿಹರಿಸಿ ಸಮಾಧಾನ ಮಾಡುವ ಕೆಲಸ ಮಾಮಿಗೆ. ಚಂದಾ ವಸೂಲಿ ಮಾಡಿ ಹೋಗೋಣ ಅಂತ ಬಂದರೆ ಇಲ್ಲದ ತಲೆಬಿಸಿ.

'ಏ, ಮಾಧವಾ! ಏನೋ ಇದು? ಹೀಂಗ ಮಾಡ್ತಾರೇನು ಯಾರಾದರೂ? ಇದು ಸರಿ ಅಲ್ಲ ನೋಡು. ಅಕಿ ಬಾಬ್ ಕಟ್ ಮಾಡಿಸಿಕೊಂಡು ಬಂದಿದ್ದು ನಿನಗ ಸೇರಿಲ್ಲ. ಆತು. ತಿಳಿಸಿ ಹೇಳೋದು ಬಿಟ್ಟು  ಅಕಿಗೆ ಹೀಂಗ ಹೊಲಸ್ ಹೊಲಸ್ ಬೈಕೋತ್ತ ಹೆಂಡತಿಗೆ ಹೊಡಿತಿಯಲ್ಲೋ? ಇದು ಸರಿಯೇನೋ?' ಅಂತ ಜಬರಿಸಿ ಕೇಳಿದರು ಮಾಮಿ. ಕೇಳಲು ಅವರಿಗೆ ಹಕ್ಕಿದೆ. ಮಾತೃಸಮಾನರು.

'ಮತ್ತೇನ್ರೀ ಮಾಮಿ? ನಮ್ಮ ಮನಿತನದ ಬಗ್ಗೆ ನಿಮಗ ಗೊತ್ತದನೋ ಇಲ್ಲೋ? ನಮ್ಮ ಮನಿಯಾಗ ಎಷ್ಟು ಮಡಿ, ಮೈಲಿಗಿ, ಆಚಾರ, ಪದ್ಧತಿ, ಸಂಪ್ರದಾಯ ಎಲ್ಲ ಅವ ಅಂತ ಗೊತ್ತದನೋ ಇಲ್ಲೋ? ಹಾಂಗಿದ್ದಾಗ ಇಕಿ ಹೀಂಗ ಹೋಗಿ ತಲಿ ಬೋಳಿಸಿಕೊಂಡು ಬರೋದು ಸರಿ ಏನ್ರೀ?' ಅಂತ ಮಾಮಿಗೆ ರಿವರ್ಸ್ ಬಾರಿಸಿದ.

ಸಣ್ಣ ಬ್ರೇಕ್ ತೆಗೆದುಕೊಂಡು ಮುಂದುವರೆಸಿದ. 'ನಿಮ್ಮ ಗೆಳತಿ ಅಂದ್ರ ನಮ್ಮವ್ವಾ ಈಗ ಇದ್ದಿದ್ದರ ಇಕಿ ಈ ಹಾದರಗಿತ್ತಿ ಹಜಾಮತಿ ಅವತಾರ ನೋಡಿ ಎದಿ ಒಡದು ಸಾಯ್ತಿದ್ದಳು. ಪುಣ್ಯಾ ಮಾಡಿದ್ದಳು. ಇಕಿ ಹಾದರಗಿತ್ತಿ ಹಜಾಮತಿ ಅವತಾರ ನೋಡೋಕಿಂತ ಮೊದಲೇ ಕಣ್ಣು ಮುಚ್ಚಿದಳು. ನನ್ನ ಕರ್ಮ. ಈಗ ನಾ ನೋಡ್ಕೋತ್ತ ಕೂಡಬೇಕಾಗ್ಯದ. ಏನು ಕರ್ಮ ರೀ? ಇಕಿಗೆ ಬೈಬ್ಯಾಡ, ಹೊಡಿಬ್ಯಾಡ ಅಂತೀರಿ. ಮತ್ತೇನು ಇಕಿನ್ನ ಪೂಜಾ ಮಾಡ್ಲ್ಯಾ? ಮಹಾಲಕ್ಷ್ಮಿ ಕಳೆಯಿರುವ ಹೆಣ್ಣುಮಕ್ಕಳು ಇರುವ ಮನಿತನ ನಮ್ಮದು. ಅಂತಾದ್ರಾಗ ಇಕಿ ನೋಡ್ರಿ ಹೀಂಗ ಅವತಾರ ಮಾಡಿಕೊಂಡು ಕೂತಾಳ!' ಅಂತ ಫುಲ್ ಆವಾಜ್ ಹಾಕಿದ.

'ಅಲ್ಲಪಾ ಮಾಧವಾ. ನಿನ್ನ ಕಡೆ ಈ ಮಾತು ಕೇಳಬಾರದು ಅಂದುಕೊಂಡಿದ್ದೆ. ಆದ್ರ ಈಗ ಕೇಳಲೇಬೇಕಾಗ್ಯದ. ಒಂದು ಮಾತು ಕೇಳಲೇನು?' ಅಂತ ಸಣ್ಣ ಪೀಠಿಕೆ ಇಟ್ಟರು ಮಾಮಿ.

'ಏ, ಮುದ್ದಾಂ ಕೇಳ್ರಿ ಮಾಮಿ. ನಮ್ಮ ಅವ್ವಾ ಹೋದಾಗಿನಿಂದ ನೀವೇ ನಮಗ ಮಾಮಿ, ಅವ್ವಾ ಎಲ್ಲಾ,' ಅಂತ ಮಾಧವನೂ ಸ್ವಲ್ಪ ಸೆಂಟಿ ಆದ. ಹಿರಿಯರಾದ ಮಾಮಿಗೆ ದಬಾಯಿಸಿದ್ದನಲ್ಲ? ಅವನಿಗೇ ಬೇಜಾರಿಯಿತೇನೋ? ಅದಕ್ಕೇ ಸ್ವಲ್ಪ ಸಾಫ್ಟ್ ಟಚ್ ಬಂತು ಮಾತಿನಲ್ಲಿ.

'ಅಲ್ಲಾ, ನಿಮ್ಮದು ಅಂತಾ ಮನೆತನ ಇಂತಾ ಮನೆತನ ಅಂತ ದೊಡ್ಡ ಭಾಷಣ ಮಾಡಿದಿ. ಎಲ್ಲಾ ಒಪ್ಕೋತ್ತೇನಿ. ಅದರ ಬಗ್ಗೆ ದೂಸರಾ ಮಾತೇ ಇಲ್ಲ. ನಿಮ್ಮದು ಖರೇನೇ ದೊಡ್ಡ ಮನೆತನ. ಮಡಿ, ಮೈಲಿಗಿ, ಆಚಾರ, ವಿಚಾರ, ಸಂಪ್ರದಾಯ, ಪದ್ಧತಿ ಎಲ್ಲಾ ಭಾಳ ಜಾಸ್ತಿ. ಎಲ್ಲಾ ಖರೆ. ಭಾಳ ಗೌರವ ಇತ್ತು. ಈಗೂ ಆದ...... ' ಅಂತ ಸಣ್ಣ ಬ್ರೇಕ್ ತೆಗೆದುಕೊಂಡರು ಮಾಮಿ.

ಎಲ್ಲ ಕಿವಿಯಾಗಿದ್ದ ಮಾಧವ, 'ಮುಂದ ಹೇಳ್ರೀ,' ಅನ್ನುವ ಲುಕ್ ಕೊಟ್ಟ.

'ಅಂಥಾ ದೊಡ್ಡ ಮನಿತನದ ಹಿರಿಯ ಮಗಾ ನೀನು. ಹೌದಿಲ್ಲೋ? ಅಂಥಾ ದೊಡ್ಡ ಮನಿತನದ ಹಿರಿಯ ಮಗ. ಅಷ್ಟು ದೊಡ್ಡ ಮಂದಿ ಮಗಾ. ನೀನು ನಾ ಬಂದಾಗ ಇದ್ದ ಅವತಾರ ಸರಿ ಇತ್ತೇನಪಾ? ಯಾವ ಅವತಾರದಾಗಿದ್ದಿ? ಸ್ವಲ್ಪ ನೆನಪು ಮಾಡ್ಕೋ. ಹಗಲು ಹೊತ್ತಿನಾಗೇ ಕಂಠಮಟ ಕುಡಿದು ಕೂತಿದ್ದಿ? ಅದು ಸರಿನ? ನಿನ್ನ ಹೀಂಗ ಕೇಳಿ ನಿನ್ನ ಮನಸ್ಸಿಗೆ ಬ್ಯಾಸರಾ ಮಾಡ್ಬೇಕು ಅಂತಲ್ಲ. ಸಂಕಟ ಆತೋ. ಗೆಳತಿ ಮಗನ್ನ ಆ ಅವತಾರದಾಗ ನೋಡಿ ಸಂಕಟ ಆತೋ. ಅದಕ್ಕೇ ಕೇಳಿದೆ. ಏನಪಾ? ನೀ ಮಾಡಿದ್ದು ಸರಿಯೇನೋ? ಆ ಕುಡಿತಕ್ಕ, ಮೋಜಿಗೆ, ಮಸ್ತಿಗೆ ಒಂದು ಲಿಮಿಟ್ ಇಲ್ಲೇನಪಾ? ಹಾಂ? ಹೀಂಗ ಮಾಡಿದ್ರ ಹ್ಯಾಂಗ???' ಅಂತ ಫುಲ್ ಇಟ್ಟರು. ಬರೋಬ್ಬರಿ ಗಜ್ಜು ಕೊಟ್ಟರು.

ಮಾಧವ ಏನು ಹೇಳಿಯಾನು? ತಪ್ಪು ಮಾಡಿಕೊಂಡು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಮೇಲಿಂದ ಹೆಂಡತಿಯ ತಪ್ಪು ಎತ್ತಿ ತೋರಿಸಲು ಹೋಗಿ ತಾನೇ ವಾಪಸ್ ಗಜ್ಜು ತಿಂದಿದ್ದಾನೆ. ಬೇರೆಯವರು ಅವನ ಕುಡಿತದ ಬಗ್ಗೆ ಮಾತಾಡಿಬಿಟ್ಟಿದ್ದಾರೆ. ಅದೂ ಅವನ ಮನೆಗೇ ಬಂದು. ಅದೂ ಚಂದಾ ವಸೂಲಿ ಮಾಡಿದ ಮೇಲೆ. ಬಿಟ್ಟಿಯಲ್ಲಿ ಗಜ್ಜು. ಶಿವಾಯ ನಮಃ!

ಕೂತಲ್ಲೇ ಮಾಧವ ಮಿಸುಗಿದ. ಆಕಡೆ ಈಕಡೆ ನೋಡಿದ. ಏನು ಹೇಳಲಿ ಅಂತ ತಿಳಿಯಲಿಲ್ಲ. ಏನೋ ಒಂದು ಹೇಳಲು ಹೋದ. 'ಮಾಮಿ, ಅದು ಏನಂದ್ರ, ಏನಂದ್ರ,' ಅಂತ ಏನೋ ವಿವರಣೆ ಕೊಡಲು ಹೋದ. ಮಾಮಿ ಮಾತಾಡಲಿಲ್ಲ. ಸುಮ್ಮನೆ ಕೈಯೆತ್ತಿ, 'ಸಾಕು, ಏನೂ ಹೇಳುವ ಜರೂರತ್ತಿಲ್ಲ. ಏನೇ ಸಬೂಬು ಕೊಟ್ಟರೂ ನಂಬಲು ಯಾರೂ ಕಿವಿ ಮೇಲೆ ಹೂವು ಇಟ್ಟುಕೊಂಡಿಲ್ಲ,' ಅನ್ನುವ ಲುಕ್ ಕೊಟ್ಟರು. ಅದೇನೂ ಜಾಸ್ತಿ ಚುಚ್ಚಲಿಲ್ಲ ಅವನಿಗೆ. ಆದರೆ ಹೆಂಡತಿಯ ಲುಕ್ ಮತ್ತೆ ವಿಪರೀತವಾಗಿ ಚುಚ್ಚಿತು. ಮಾಮಿ ಇವನನ್ನು ಪಾಂಗಿತವಾಗಿ ವಿಚಾರಿಸಿಕೊಳ್ಳುತ್ತಿದ್ದಾಗ, 'ಹೌದು. ಹೌದು. ಬರೋಬ್ಬರಿ. ಇನ್ನೂ ಹೇಳ್ರೀ. ಇನ್ನೊಂದಿಷ್ಟು ಬಯ್ಯಿರಿ,' ಅನ್ನುವ ರೀತಿಯಲ್ಲಿ ಹೆಂಡತಿ ತಲೆ ಕುಣಿಸುತ್ತ ಕೂತಿದ್ದು ವಿಪರೀತವಾಗಿ ಕೆರಳಿಸಿತ್ತು. ಮತ್ತೊಮ್ಮೆ ಹೆಂಡತಿ ಕಡೆ ನೋಡಿದ. ಆಕೆಯ ಮುಖದಲ್ಲಿ ಕುಹಕ. ಇತ್ತೋ ಇಲ್ಲವೋ ಗೊತ್ತಿಲ್ಲ. ಇವನಿಗಂತೂ ಕಂಡಿತು. ಕೆಟ್ಟ ಕೋಪ ಕಿಬ್ಬೊಟ್ಟೆಯಾಳದಿಂದ ಸೀದಾ ತೋಳಿಗೇ ಬಂತು.

'ಮಾಮಿ ನನಗ ಬೈದು ಬುದ್ಧಿ ಹೇಳಲಿಕತ್ತರ ಕೂತು ನನ್ನ ಅಣಗಸ್ತೀ? ನನ್ನ ಟಿಂಗಲ್ ಮಾಡ್ತೀ? ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬಂದ ಮ್ಯಾಲೆ ಸೊಕ್ಕು ಹೆಚ್ಚಾಗ್ಯದ ನಿನಗ? ನನ್ನ ಅಣಗಸ್ತೀ? ಗಂಡ ನಾನು ಜೀವಂತ ಇದ್ದಾಗೇ ತಲಿ ಬೋಳಿಸಿಕೊಂಡು ಬಂದಿದ್ದು ಒಂದೇ ಅಲ್ಲ ಮ್ಯಾಲಿಂದ ಗಂಡಗೇ ಅಣಗಸ್ತೀ?' ಅಂತ ವಿಚಿತ್ರವಾಗಿ ಹೂಂಕರಿಸುತ್ತ ಹೋದವನೇ ಹೆಂಡತಿಯನ್ನು ಎಬ್ಬಿಸಿ, ರಫ್ ಆಗಿ ಎಳೆದು, ಬಗ್ಗಿಸಿ, ಬೆನ್ನ ಮೇಲೆ ರಪಾ ರಪಾ ಅಂತ ನಾಲ್ಕು ಹಾಕೇಬಿಟ್ಟ. ಸಿಟ್ಟು ಇಳಿದಿರಲಿಲ್ಲ. 'ತಲಿ ಬೋಳಿಸಿಕೊಳ್ಳಲಿಕ್ಕೆ ಹೋದಾಕಿ ಪೂರ್ತಿ ತಲಿ ಬೋಳಿಸಿಕೊಂಡು ಬರಬೇಕಾಗಿತ್ತು? ಯಾರರೆ ಕೇಳಿದ್ರ, 'ನನ್ನ ಗಂಡ ಸತ್ತಾನ. ಅದಕ್ಕೇ ತಲಿ ಬೋಳಿಸಿಕೊಂಡೇನಿ' ಅಂತ ಹೇಳಬಹುದಿತ್ತಲ್ಲ? ನಾ ಹ್ಯಾಂಗೂ ನಿನ್ನ ಪಾಲಿಗೆ ಸತ್ತೇಹೋಗೇನಿ? ಅಲ್ಲಾ? ಅಲ್ಲಾ? ಹಾದರಗಿತ್ತಿ,' ಅಂತ ಕೆಟ್ಟದಾಗಿ ಬೈಯುತ್ತ ಮತ್ತೂ ನಾಲ್ಕು ಬಿಟ್ಟ.

'ನಾ ಸಾಯ್ತೇನ್ರೀ. ಖರೆ ಅಂದ್ರೂ ಸಾಯ್ತೇನ್ರೀ,' ಅಂತ ಚೀರುತ್ತ ವೀಣಾ ಒಳಗೆ ಅಡುಗೆಮನೆ ಕಡೆ ಓಡಿದಳು.

'ಸಾಯಿ. ಸತ್ತು ಹೋಗು. ಪೀಡಾ ಕಳೀತು ಅಂತ ತಿಳಿತೇನಿ. ರಂಡಿ ತಂದು. ಸೂಡ್ಲಿ,' ಅಂತ ಕೆಟ್ಟದಾಗಿ ಬೈಯುತ್ತ ಮಾಧವ ಖುರ್ಚಿ ಮೇಲೆ ಕುಸಿದ. ಮೊದಲೇ ದೊಡ್ಡ ದೇಹ. ಅದಕ್ಕೆ ವ್ಯಾಯಾಮ ಇಲ್ಲ. ಹಲವಾರು ಬೇನೆಗಳ ಬೀಡು ಅದು. ಅಂತಹ ಬರ್ಬಾದ್ ದೇಹವನ್ನು ಹೆಂಡತಿ ಮೇಲೆ ಕೂಗಾಡಿ, ಆಕೆಯನ್ನು ಬಡಿದು ವಿಪರೀತವಾಗಿ ದಣಿಸಿಬಿಟ್ಟಿದ್ದ. ಸುಸ್ತಾಗಿತ್ತು. 'ಭುಸ್! ಭುಸ್!' ಅಂತ ಶ್ವಾಸ ಬಿಡುತ್ತ ಕುಸಿದು ಕುಳಿತ.

ಒಳಗೆ ಹೋಗಿದ್ದ ವೀಣಾ ಮತ್ತೆ ವಾಪಸ್ ಪ್ರತ್ಯಕ್ಷಳಾಗಿದ್ದಳು. ಖರಾಬ್ ಸೀನ್. ಕೈಯಲ್ಲಿ ಒಂದು ಚಾಕು. ತರಕಾರಿ ಹೆಚ್ಚುವ ಚಾಕು. ಏನೋ ಹಡಾಗತಿ ಮಾಡಿಕೊಳ್ಳಲು ಹೊರಟಿದ್ದಾಳೆ ಅನ್ನುವ ಖಡಕ್ ನಿರ್ಧಾರದ ಭಾವನೆ ಮುಖದ ಮೇಲೆ. ನೋಡಿದ ಮಾಮಿ ದಂಗು ಹೊಡೆದರು.

'ಏನ ವೀಣಾ ಇದು? ಏನಿದು ಕೈಯಾಗ? ಯಾಕ?' ಅಂತ ಏನೋ ಅಂದರು. ಗಾಬರಿಯಾಗಿ ಮಾತೇ ಸರಿಯಾಗಿ ಹೊರಡಲಿಲ್ಲ.

'ಸಾಯ್ತೇನ್ರೀ. ನಾ ಸತ್ತು ಹೋಗ್ತೇನಿ. ಸಾಕಾಗಿ ಹೋಗ್ಯದ ನನಗೂ. ಇವರ ಕುಡಿತ, ಚಟ, ಬೈಯ್ಯೋದು, ಹೊಡೆಯೋದು, ಎಲ್ಲಾ ಸಹಿಸ್ಕೊಂಡು ಸಾಕಾಗಿ ಹೋಗ್ಯದ. ಈಗ ಸತ್ತೇಹೋಗ್ತೇನಿ. ನಿಮ್ಮ ಮುಂದs ಚಾಕು ಹಾಕಿಕೊಂಡು ಸತ್ತೇಹೋಗ್ತೇನಿ,' ಅಂತ ಅಬ್ಬರಿಸಿದಳು ವೀಣಾ.

'ಅಯ್ಯೋ! ಮಾಧವಾ! ಅಕಿಗೊಂದು ಮಾತು ಹೇಳೋ. ಸಿಟ್ಟಿನ ಕೈಯಾಗ ಬುದ್ಧಿ ಕೊಟ್ಟು ಏನರೆ ಮಾಡಿಕೊಂಡಾಳು ಅಕಿ. ಒಂದು ಮಾತು ಹೇಳೋ. ನಿನ್ನ ಕಟ್ಟಿಗೊಂಡ ಹೆಂಡ್ತಿ ಅಕಿ. ಸಾಯೋತನಕಾ ಬೇಕು. ಹೇಳೋ. ಹೇಳೋ,' ಅಂತ ಮಾಮಿ ಶಂಖ ಹೊಡೆದರು.

ಮಾಧವನಿಗೆ ಉಢಾಫೆ.

'ಏ, ನೀವು ಸುಮ್ಮ ಕೂಡ್ರೀ ಮಾಮಿ. ಇಕಿ ನೌಟಂಕಿ ಯಾವಾಗೂ ಇರೋದೇ. ಇದೇನೂ ಮೊದಲನೇ ಸಲ ಅಲ್ಲ. ನಾ ಏನರೆ ಹೇಳಿದ ಕೂಡಲೇ ಅಕಿ ಬಾಯಿಂದ ಬರೋ ಮಾತು ಅಂದ್ರ ಇದೇ. ಸತ್ತು ಹೋಗ್ತೇನಿ. ಸಾಕಾಗಿಬಿಟ್ಟದ. ಬರೇ ಡ್ರಾಮಾ ಬಾಜಿ. ಅಷ್ಟೇ. ಬರೇ ಡ್ರಾಮಾ. ನಾ ಎಲ್ಲಾ ಬೇಕಾದಷ್ಟು ಸಲೆ ನೋಡಿಬಿಟ್ಟೇನಿ,' ಅಂತ ಲೈಟಾಗಿ ಮಾತಾಡಿದ ಮಾಧವ. ಹೆಂಡತಿ ಕಡೆ ಒಂದು ಖರಾಬ್ ಲುಕ್ ಕೊಟ್ಟು, 'ನಾಟಕ ಸಾಕು. ಚಾಕು ಒಳಗಿಟ್ಟು ಬಾ. ನಿನ್ನ ಆಮೇಲೆ ನೋಡಿಕೊಳ್ಳುತ್ತೇನೆ,' ಅನ್ನುವ brush off ಮಾಡಿದ ಲುಕ್ ಕೊಟ್ಟ. ಅಷ್ಟೇ ಸಾಕಾಯಿತು ವೀಣಾಳಿಗೆ.

'ಈ ಸಲ ಖರೇನೇ ಸಾಯಕಿ ನಾ. ಖರೇನೇ ಸಾಯಾಕಿ. ಸತ್ತುಹೋಗಾಕಿ!' ಅಂತ ಹುಚ್ಚಿಯಂತೆ ಅಬ್ಬರಿಸುತ್ತ, ಮೈಮೇಲೆ ದೆವ್ವ ಬಂದಂತಾಡಿದ ವೀಣಾ ಚಾಕುವಿನಿಂದ ಚುಚ್ಚಿಕೊಂಡೇಬಿಟ್ಟಳು. ಮಟಾಷ್! ರಕ್ತ ಬಳಬಳ ಅಂತ ಹರಿಯತೊಡಗಿತು.

ಮಾಧವ ಮಾತ್ರ ಫುಲ್  ಕೂಲಾಗಿ ಕೂತಿದ್ದ.

'ಏ! ಡಾಕ್ಟರಿಗೆ ಫೋನ್ ಮಾಡೋ! ಆಂಬುಲೆನ್ಸಿಗೆ ಫೋನ್ ಮಾಡೋ! ಉಳಿಸಿಕೊಳ್ಳೋಣ. ಚಾಕು ಹಾಕಿಕೊಂಡಳು. ಲಗೂ ಫೋನ್ ಮಾಡೋ,' ಅಂತ ಮಾಮಿ ಬೊಬ್ಬೆ ಹೊಡೆದರು. ಚಾಕು ಹೆಟ್ಟಿಕೊಂಡು ನೆಲದ ಮೇಲೆ ಬಿದ್ದಿದ್ದ ವೀಣಾಳ ತಲೆಯನ್ನು ತಮ್ಮ ತೊಡೆ ಮೇಲೆ ಇಟ್ಟುಕೊಂಡು ವಾತ್ಸಲ್ಯದಿಂದ ನೇವರಿಸುತ್ತ, 'ಎಂತಾ ಕೆಲಸ ಮಾಡಿಕೊಂಡಿ ವೀಣಾ? ಹ್ಯಾಂಗದ ಈಗ? ಈಗ ಆಂಬುಲೆನ್ಸ್ ಬರ್ತದ. ಹಾಸ್ಪಿಟಲ್ಲಿಗೆ ಹೋಗೋಣಂತ. ಅಲ್ಲಿ ತನಕಾ ಜೀವಾ ಹಿಡ್ಕೋ ಮಾರಾಳ,' ಅಂತ ಏನೇನೋ ಸಮಾಧಾನ ಮಾಡುತ್ತ, 'ಏ, ಮಾಧವಾ! ಫೋನ್ ಮಾಡಿದಿ ಏನೋ? ಲಗೂ ಮಾಡೋ! ಇಕಿ ಜೀವಾ ಉಳಿಸಿಕೊಳ್ಳೋ. ನಿನಗ ಕೈ ಮುಗಿದು ಕೇಳಿಕೊಳ್ಳತೇನಿ. ಲಗೂ ಫೋನ್ ಮಾಡೋ,' ಅಂತ ಮಾಧವನನ್ನು ಅವಸರಿಸಿದರು.

ಮಾಧವ ಯಾರಿಗೋ ಫೋನ್ ಮಾಡಿದ. 'ನಿನ್ನ ಗೆಳತಿ ಮತ್ತ ಚಾಕು ಹೆಟ್ಟಿಕೊಂಡು ಕೂತಾಳ. ಬಂದು ನೋಡಿ ಹೋಗು. ಎಂಥಾ ಡಾಕ್ಟರ್ ನೀ? ಅಕಿಗೆ ಈ ಸಲ ಬಂದಾಕಿ ಸರಿ ಮಾಡಿ ಹೇಳಿ ಹೋಗು. ಎಲ್ಲಿ ಚುಚ್ಚಿಕೊಂಡ್ರ ಪ್ರಾಣ ಹೋಗ್ತದ ಅಂತ. ಪ್ರತಿ ಸಲೆ ಬರೇ ನಾಟಕ ನಡದದ. ಒಮ್ಮೆ ಕೈಗೆ ಚುಚ್ಚಿಕೊಂಡೆ. ಮತ್ತೊಮ್ಮೆ ಕಾಲಿಗೆ ಚುಚ್ಚಿಕೊಂಡೆ. ಇವತ್ತು ಹೋಗಿ ಹೋಗಿ ತೊಡಿಗೆ ಚುಚ್ಚಿಕೊಂಡು ಚೀರಾಡ್ಲಿಕತ್ತಾಳ. ಹ್ಯಾಂಗ ಸಾಯ್ಬೇಕು ಅನ್ನೋದನ್ನ ಹೇಳಿಹೋಗು ನಿಮ್ಮ ಗೆಳತಿಗೆ. ಬಾ ಲಗೂ. ರಕ್ತಾ ಸೋರಿಸಿಕೋತ್ತ ಕೂತಾಳ ಹೇಶಿ,' ಅಂತ ಹೇಳಿ ಫೋನಿಟ್ಟ. ಡಾಕ್ಟರಿಗೆ ಫೋನ್ ಮಾಡಿ ವಿನಂತಿ ಮಾಡಿಕೊಂಡನೋ ಅಥವಾ ಆವಾಜ್ ಹಾಕಿದನೋ ಅಂದುಕೊಂಡರು ಮಾಮಿ.

'ಮಾಮಿ, ನೀವು ಎದ್ದು ಬರ್ರಿ ಈಕಡೆ. ಅಕಿಗೆ ಏನೂ ಆಗಿಲ್ಲ. ಸುಮ್ಮನೇ ಸಾಯೋ ನಾಟಕ. ಇದು ಮೊದಲನೇ ಸಲ ಅಲ್ಲ. ಮಾತಿಗೊಮ್ಮೆ ಅಕಿ ಕೈಯಾಗ ಚಾಕು ಬರ್ತದ. ಕಾಯಿಪಲ್ಲೆ ಕಮ್ಮಿ ಹೆಚ್ಚತಾಳ. ಜಾಸ್ತಿ ತನ್ನ ತಾನೇ ಹೆಚ್ಚಿಕೊಳ್ಳತಾಳ. ಬರೇ ಡ್ರಾಮಾ ಬಾಜಿ. ಸಾಯ್ತೇನಿ, ಸಾಯ್ತೇನಿ ಅಂತ ರಂಪಾಟ. ಸಾಯೋದಿಲ್ಲ ಬಿಡೋದಿಲ್ಲ. ಇವತ್ತು ನೀವು ಬಂದೀರಿ ಅಂತ ಸ್ಪೆಷಲ್ ಎಫ್ಫೆಕ್ಟ್. ಹೋಗಿ ಹೋಗಿ ತೊಡಿಗೆ ಚಾಕು ಚುಚ್ಚಿಕೊಂಡು ಕೂತದ ಹುಚ್ಚು ಖೋಡಿ. ಅಕಿನ್ನ ಅಲ್ಲೇ ಬಿಟ್ಟು ಎದ್ದು ಬರ್ರಿ ನೀವು ಈಕಡೆ. ಈಗ ಬರ್ತಾಳ ಅಕಿ ಗೆಳತಿ. ಡಾಕ್ಟರಿಣಿಬಾಯಿ. ಬಂದು ಬ್ಯಾಂಡೇಜ್ ಮಾಡ್ತಾಳ. ಇಬ್ಬರೂ ಕೂಡಿ ನನಗೇ ಶಾಪಾ ಹಾಕ್ತಾರ. ಅಕಿ ಬಂದ ಕೂಡಲೇ ನಾನೂ ಹೊಂಟೆ. ನನಗೂ ಸಾಕಾಗಿ ಬಿಟ್ಟದ ಇಕಿ ಕಾಲದಾಗ,' ಅಂದ ಮಾಧವ. ಎಲ್ಲಿಗೆ ಹೋಗುತ್ತಾನೆ ಅಂತ ಕೇಳುವ ಜರೂರತ್ತಿರಲಿಲ್ಲ. ಮತ್ತೆಲ್ಲಿಗೆ? ಮನೆಯಲ್ಲಿ ಆದ ಲಫಡಾದಿಂದ ತಲೆ ಕೆಟ್ಟಿದೆ. ಬಾರಿಗೆ ಸ್ವಲ್ಪ ಬೇಗನೆ ಹೋಗುವ ವಿಚಾರದಲ್ಲಿದ್ದಾನೆ.

'ಮಾಮಿ, ನೀವೂ ಹೊಂಡ್ರಿ. ನಮ್ಮ ದರಿದ್ರ ಸಂಸಾರದಾಗ ಇದೆಲ್ಲಾ ಇದ್ದಿದ್ದೆ. ಅಲ್ಲಿ ಮನಿಯಾಗ ಮಾಮಾ ಒಬ್ಬರೇ ಇರಬೇಕು. ಮಧ್ಯಾಹ್ನ ಚಹಾದ ಹೊತ್ತಾತು. ಮನಿಗೆ ಹೋಗಿ ಮಾಮಾಗ ಚಹಾ ಮಾಡಿ ಕೊಡ್ರಿ. ನಮಸ್ಕಾರ ಹೇಳ್ರಿ. ಬಂದು ಭೆಟ್ಟಿಯಾಗತೇನಿ ನಾನು. ಏ! ಅಕಿನ್ನ ಅಲ್ಲೇ ಒಗೆದು ಎದ್ದು ಬರ್ರಿ. ಏನು ಜುಲ್ಮಿ ಮಾಡಿಕೋತ್ತ  ಕೂತೀರಿ ಅಕಿನ್ನ? ಡ್ರಾಮಾ ಕ್ವೀನ್ ಅಕಿ!' ಅಂದ ಮಾಧವ.

ಅಷ್ಟರಲ್ಲಿ ಯಾರೋ ಕಾಲಿಂಗ್ ಬೆಲ್ ಒತ್ತಿದರು. ಮಾಧವನೇ ಹೋಗಿ ಬಾಗಿಲು ತೆಗೆದ. ಡಾಕ್ಟರಿಣಿಬಾಯಿ ನಿಂತಿದ್ದಳು. ಮಾಧವನನ್ನು ಕಡೆಗಣಿಸಿ ಒಂದು ಲುಕ್ ಕೊಟ್ಟು, 'ಇದು ಸರಿಯಲ್ಲ' ಅನ್ನುವಂತೆ ತಲೆಯಾಡಿಸಿದಳು.

ಮಾಮಿ ಕಂಡಳು. ಎಲ್ಲ ಪರಿಚಿತರೇ. 'ನಮಸ್ಕಾರ್ರಿ, ಮಾಮಿ. ಆರಾಮರೀ?' ಅಂತ ಮಾಮಿಯನ್ನು ಕೂಡ ವಿಚಾರಿಕೊಂಡಳು ಡಾಕ್ಟರಿಣಿಬಾಯಿ. ಮಾಮಿ ದಂಗಾಗಿ ನಿಂತಿದ್ದರು.

'ಏನಲೇ ವೀಣಿ? ಏನಿದು ಅವತಾರ? ಈ ಸಲೆ ಎಲ್ಲೆ ಹೊಲಿಗೆ ಹಾಕೋದು ಅದ? ಏನಲೇ ಇದು? ಮಾತಿಗೊಮ್ಮೆ ಚಾಕು ಚುಚ್ಚಿಕೊಳ್ಳತಿಯಲ್ಲಲೇ??? ಹಾಂ?' ಅನ್ನುತ್ತ ಗೆಳತಿಯ ಶುಶ್ರೂಷೆಗೆ ನಿಂತಳು.

ಮಾಮಿ ಎದ್ದು ಹೊರಟರು. ಆಗ ತಾನೇ ಎಂಟ್ರಿ ಕೊಟ್ಟಿದ್ದ ಡಾಕ್ಟರಿಣಿಬಾಯಿಯ ಹತ್ತಿರವೂ ಚಂದಾ ವಸೂಲಿ ಮಾಡಲೇ ಅಂತ ವಿಚಾರ ಮಾಡಿದರು. ಬೇಡ ಅಂತ ಬಿಟ್ಟರು. ಎದ್ದು ತಮ್ಮ ಸಾಮಾನು ಸರಂಜಾಮು ಹೊಂದಿಸಿಕೊಂಡು ಎಲ್ಲರಿಗೂ ಹೇಳಿ ಹೊರಟರು.

ಮಾಧವ ವೀಣಾರ ಮನೆ ಬಿಟ್ಟು ಹೊರಗೆ ಬಿದ್ದಿದ್ದರೋ ಇಲ್ಲವೋ ಎದುರಿಗೇ ಕಂಡಿತು - 'ಅಪ್ಸರಾ ಬ್ಯೂಟಿ ಪಾರ್ಲರ್'.

ವೀಣಾ ತನ್ನ 'ಹಾದರಗಿತ್ತಿ ಹಜಾಮತಿ'.... ಛೀ.... ಛೀ... ಅಲ್ಲಲ್ಲ.... ಬಾಬ್ ಕಟ್ ಅಲ್ಲಿಯೇ ಮಾಡಿಸಿದ್ದಳೇ? ಅನ್ನುವ ವಿಚಾರ ಮಾಮಿಯ ಮನದಲ್ಲಿ ಮೂಡಿತೇ?

ಗೊತ್ತಿಲ್ಲ. ಕೇಳಬೇಕು.

Half bath!


Now that the real estate market has become hot again, that's become the most common point of discussion everywhere. Boring! God, is the entire self worth of these folks all locked up in the net worth of their real estate holdings?? Seems like that. Actually they have nothing much to speak of real estate holdings other than their primary dwelling but still that's what they talk about all the time.

Recently it so happened that some acquaintances were at their boring best talking about homes, how many baths, how many half baths, valuations, recent sales in their neighborhood etc. Blah! Blah!

Somebody asked me. 'What kind of a house you have?'

'I live in a rented apartment. I prefer to rent and not own,' I said.

'What kind?'.

'One bedroom apartment with one and a half bath,' I said stressing 'one and a half bath.'

'Really??? That's surprising,' said another person.

'What surprising???' I queried.

'An one bedroom apartment with one and a half bath??? Never heard of one before.'

'Ignorance is thy enemy!' I thought.

'Yes. Definitely. My apartment has one and a half bath!' I reinforced.

Curiosity perked up.

'I wonder how they have managed fit in a half bath in your place. Where is it??' asked the inquisitive one. He must have been thinking about remodeling his own house by adding another half bath.

'A half bath is in the clubhouse!'

'What????!!!!'

'Yes. My apartment's half bath is in apartment's clubhouse!' I said again. Some laughed out loud. Some looked annoyed. The architecturally inquisitive one felt taken for a ride and screamed in pseudo-hostile way, 'YooooooooooooooooU....YoooooooooUUUUUUUU!!!!'

'Good bye folks. Gotta go!.' I left. I have work to go and buy some real estate but not the brick and mortar type but REITs (Real Estate Investment Trusts).

REITS - smart way to own real estate and beef up your portfolio with real estate component.

**
half bath
noun (North American)
noun: half bath; plural noun: half baths; noun: half bathroom; plural noun: half bathrooms

a bathroom in a private home that contains a toilet and sink but no bathtub or shower.
"if it's just a half bath for guests, a nice sink, a sturdy toilet, and a decorative towel rack will do"

Saturday, June 25, 2016

When 'Rama' became 'Ravana'


I watched neither Ramayana or Mahabharata back then. We did not (choose to) have a TV till 1991. We spent our times doing something better....reading or doing something more productive than watching the idiot box. But, I must be grateful to those popular serials on Sunday mornings. During that one hour on Sunday morning, all hair cutting saloons in the town used to be totally empty. I timed my monthly trims to match those magic hours. Full empty. No 'ಪಾಳಿ ಹಚ್ಚೋದು' (prior booking) needed. No waiting either. Just walk in and the hairstylist (euphemism for country barber) would start working on your skull :) Full time saving

There was a funny incident reported in news papers around that time. Some people in Dharwad wanted to cash in on the popularity of 'Rama' actor. They organized some show and invited him as the celebrity chief guest. Of course for a hefty fee. Tickets were sold like crazy. People also bought like crazy. Mostly to see Rama in person and to support a good cause. 'Rama' flew in from Bombay to Belgaum or Goa and then came to Dharwad in a car. As usual a few hours late. People who had gathered at the 'Kala Bhavan' auditorium were going berserk at the delay. The organizers were having hard time keeping people pacified and calm. After reaching Dharwad, Rama threw usual celebrity tantrums. He complained about everything from hotel room to food. What did he ask for? Chicken! Chicken! Where is chicken? I want my chicken. Only after he was fed chicken from some place at that ungodly hour, he agreed to come to the auditorium. There he repeated some stale dialogs, did some tired acting and left. Just few minutes. That's it. Crowd went mad and demanded their money back. The organizers had to return money to many people. Big loss for the organizers who had hoped they would raise good amount of money for a good cause. Rama had become Ravana! :) lol

Tuesday, June 14, 2016

Prof. V.S. Rao...some memories

Jotted down the memories that came after reading this article - Prof VS Rao of BITS Pilani to join NIIT University as its next president

Prof. V.S.Rao (Pic courtsey: BITSAA.Org)

Oh, well!

Sorry to see our Prof. VS Rao leave BITS, Pilani family after serving close to 40 years. Awesome institution builder. So, it is only natural that he is moving on to build the next (hopefully) great institution.

During our time, 90-94, he was our hostel warden for the first 2 years and the chief warden for most of the decade along with being a chemistry prof etc. Awesome guy. Strict disciplinarian. Terror for anyone wanting to do anything illegal or monkey business. Ragging? Well, you don't want any junior going up to him and complain about you. You can kiss goodbye to at least one semester. First good yelling, bashing, then before DISCO (Disciplinary Committee) and then bye bye for one semester.

In my first semester, once I got so fed up with constant irritation by a senior that I just yelled at him, 'I am going to VS Rao man... I can't take it anymore!' Dreading the worst he disappeared but his wingies (fellow hostel mates sharing the same wing) were all over a good friend of mine to dissuade me from going to the super cop VSR. I was not anyway going to complain. It was just a ploy to get rid of the annoying senior who had asked me to watch his dirty mattress dry out in the sun!! That too on a nice Saturday afternoon when all I wanted to do was to nap.zzzzzzzzzzzzzzzz. But here was this mosquito of a senior asking me to do donkey work. As a junior in ragging period, I agreed to do but he was insistent that I sit right in front of his stinking mattress and watch it as if it contained diamonds. That's when I snapped and dropped the bombshell, 'I am going to VS Rao man!!' I don't think we ever made peace! No big loss. He was one guy who was really on my back from the get go. From my dress to hairstyle, he had problem with everything. Arbit idiot!

When we became second year students, for the first time I saw Prof.VSR in action. Shouting at a classmate for forcing the juniors to do donkey work of lugging the crate and shifting it to his room. In summer, all students pack their belongings in a wooden crate and leave them in the common room so that rooms can be cleaned and whitewashed. So, when you return from summer holidays, it is a backbreaking chore to shift the crate to your new room. Sometimes, as part of ragging, seniors use juniors to do the heavy lifting and donkey work. One of my classmates was unfortunately caught in the act. As our warden doing the rounds, Prof. VSR saw him making the juniors lift and lug his crate. He ordered them to just drop it. Just drop it. Freshers, what can they do? That too being ordered by the all powerful chief warden. They just dropped the creaky wooden crate from a few feet. It came down crashing and total gone case. The wooden crate was totally broken, stuff inside all on the floor and screaming warden to face. My classmate had met his nemesis on that day. I think that year ragging was even less, at least from anyone who saw Prof. VSR laying it in properly. Any of us who witnessed that showdown hardly ragged juniors in our remaining 3 years as seniors. Such was the shock treatment of Prof. VSR lambasting our classmate!

Another incident when he had shouted at us en masse was during the process of hostel wing allocation for the second year. Some disgruntled elements who either did not get the wing of their choice or had problems joining a wing had complained to VSR that the wing allocation process owned and carried out by a few students was not done fairly. It was unfortunate that a few innocents had to bear the brunt of warden's wrath. After yelling at all of us for messing it up, he let that go. Thank heavens for that.

I met Prof. VSR only once. We had a Kannada association. Small one with a few professors and students of Karnataka origin and more importantly Kannadigas. We wanted to hold our annual function in our hostel mess and needed warden's approval. I went to VSR's house which was next to the hostel. He was courteous. Took the application, scanned and signed then and there and sent me back saying 'you all have fun!' We indeed did.

Faculty members and students from BITS, Pilani going to NIIT is not new. In late 80s, then ex-director Prof. CR Mitra left to NIIT and took a large crowd along with him. Loss to BITS faculty but NIIT was transformed and became the premier computer training institute, thanks to the brain-drain from BITS. Now after 30 years history is repeating with Prof. VSR leaving to build a new university for NIIT.

Good luck Prof. VSR.

Good old memories!

Tuesday, June 07, 2016

ಮೊಸಳಿ ತತ್ತಿ ಎಂಬ ಚೌಕ ಗುಳಗಿ

ನದಿ ದಂಡಿ ಮ್ಯಾಗ ಚೆಂಡಾ ಆಡಾಕತ್ತಿದ್ದಿವಿರೀ ಸರ್ರಾ.

ಮುಂದ??

ಅದೇನಾತ್ರೀ ಅಂದ್ರ ನಮ್ಮ ಚೆಂಡರೀ, ಬಾಲ್ ಬಾಲ್, ನದಿಯಾಗ ಹೋಗಿ ಬಿತ್ತರೀ. ಏನಾತ್ ಹೇಳ್ರೀ?

ನೀವು ಆಡಾಕತ್ತಿದ್ದ ಚೆಂಡು ನದಿಯಾಗ ಹೋಗಿ ಬಿತ್ತು. ಮುಂದ??

ನದಿಯಾಗ ಇಳಿದು ಬಾಲ್ ತರೋಣ ಅಂದ್ರ ನದಿಯಾಗ ಒಂದು ಮೊಸಳಿ ಇತ್ತರೀ!!! ಗೊತ್ತೈತ್ರೀ??!!

ಹೌದಾ? ಮೊಸಳಿ? ನದಿಯಾಗ? ಮುಂದ? ಬಾಲ್ ಹಾಂಗs ಬಿಟ್ಟು ಮನಿಗೆ ಬಂದ್ರ್ಯಾ???

ಏ!! ಅದೆಂಗ ಬಾಲ್ ಬಿಟ್ಟು ಬರಾಕಾಗತೈತ್ರೀ ಸರ್ರಾ? ನದ್ಯಾಗ ಇಳಿದು ಬಾಲ್ ತರಾಕs ಬೇಕು. ಏನ್ರೀ?

ಹ್ಯಾಂಗ ತಂದ್ರೀ ಬಾಲ್? ಮೊಸಳಿ ಜೋಡಿ ಗುದ್ದಾಡಿ ತಂದ್ರ್ಯಾ???? ಹ್ಯಾಂ???

ಅವನೌನ್! ಜೋರ್ ಗಾಳಿ ಬೀಸಿದ್ರ ಹಾರಿಹೋಗೋ ಬಿರುಗಾಳಿ ಭೀಮನ ಪರ್ಸನಾಲಿಟಿ ನಂದ್ರಿ ಸರ್ರಾ. ನೀವ ನೋಡಾಕತ್ತಿರಲ್ಲಾ? ಹಾಂಗಿದ್ದಾಗ ಎಲ್ಲಿ ನದ್ಯಾಗ ಇಳಿದು ಮೊಸಳಿ ಜೋಡಿ ಗುದ್ದಾಡೋಣ? ಅದಕs ಒಂದು ಐಡಿಯಾ ಮಾಡಿದಿವಿ ಸರ್ರಾ.

ಐಡಿಯಾ ಮಾಡಿದ್ರ್ಯಾ? ಏನು? ಏನು ಐಡಿಯಾ??

ಸರ್ರಾ, ಅದೇನಾಗಿತ್ತು ಅಂದ್ರ ಆ ಮೊಸಳಿ ದಂಡಿ ಮ್ಯಾಗ ತತ್ತಿ ಇಟ್ಟಿತ್ತರೀ. ತತ್ತಿ ರೀ ಅವ ಮೊಟ್ಟೆ ಮೊಟ್ಟೆ. ದೊಡ್ಡ ರೌಂಡ್ ರೌಂಡ್ ಮೊಸಳಿ ತತ್ತಿ. ಗೊತ್ತಾತರೀ???

ಹಾಂ! ಗೊತ್ತಾತೋ ಮಾರಾಯಾ. ಮೊಸಳಿ ತತ್ತಿ ತಂದು ಆಮ್ಲೆಟ್ ಮಾಡಿ ತಿಂದ್ರ್ಯಾ??? ಲಗೂ ಹೇಳೋ!

ಸರ್ರಾ, ನಮ್ಮ ದೋಸ್ತ ಹೋಗಿ ಮೊಸಳಿ ತತ್ತಿಗೆ ಕೈ ಹಾಕಿದ ನೋಡ್ರೀ! 'ನನ್ನ ತತ್ತಿಗೆ ಅದ್ಯಾವ ಭಾಡ್ಕೋ ಸೂಳಿಮಗ ಕೈ ಹಚ್ಚಿದ' ಅನ್ನೋ ಸಿಟ್ಟಿನಾಗ ಮೊಸಳಿ ನೀರು ಬಿಟ್ಟು ದಂಡಿ ಮ್ಯಾಗ ಬಂದು ಭುಸ್ ಭುಸ್ ಅಂತು ನೋಡ್ರೀ!

ಅಬ್ಬಾ! ತತ್ತಿ ಮುಟ್ಟಿದರ ಮೊಸಳಿಗೆ ಅಷ್ಟು ಸಿಟ್ಟಾ??? ಮುಂದ???

ಮೊಸಳಿ ನದಿ ಬಿಟ್ಟು ಹೊರಗ ಬಂದಿದ್ದ ಬಂದಿದ್ದು, ನಾ ನೀರಾಗ ಜಿಗಿದು, ಸುಂಯ್ ಅಂತ ಈಜಿ, ಬಾಲ್ ತೊಗೊಂಡು ಬಂದೆ ನೋಡ್ರೀ. ಆ ಹುಚ್ಚ ಮೊಸಳಿ ತನ್ನ ತತ್ತಿ ಅದಾವೋ ಅಥವಾ ಆಮ್ಲೆಟ್ ಆಗಿಹೋಗ್ಯಾವೋ ಅಂತ ನೋಡಿಕೋತ್ತ ದಂಡಿ ಮ್ಯಾಗೆ ನಿಂತಿತ್ತು ನೋಡ್ರೀ ಸರ್ರಾ. ಹ್ಯಾಂಗೈತ್ರೀ????

ಚೌಕ್ ಗುಳಗಿ ಮಸ್ತ ಐತಿ. ಎಲ್ಲೆ ಸಿಗ್ತಾವ ಇಂತಾ ಚಚ್ಚೌಕ ಗುಳಗಿ? ನಮಗೂ ಒಂದು ಡಜನ್ ಬೇಕಾಗ್ಯಾವ.

ಯಾಕ ಸರ್ರಾ?

ನಿನ್ನಂತಾ ಕೆಲವು ಹಡಬಿಟ್ಟಿ ಮಂದಿಗೆ ಒಂದಿಷ್ಟು ಬಾಯಾಗ ಒಂದಿಷ್ಟು ಮು*ಳ್ಯಾಗ ಇಂತಾವೇ ಚೌಕ ಗುಳಗಿ ತುರ್ಕೋ ಮನಸ್ಸಾಗೈತಿ! ಭಾಳ ಮನಸ್ಸಾಗೈತಿ!

ಹಾಂಗ್ರೀ???!!!

* ದಿನಪೂರ್ತಿ ಇಂತವೇ ನಂಬಲು ಅಸಾಧ್ಯವಾದ ಕಾರ್ಪೊರೇಟ್ ಚೌಕ್ ಗುಳಿಗೆಗಳನ್ನು ತೆಗೆದುಕೊಂಡ ನಂತರ ಹೊಳೆದಿದ್ದು. ಈ ಕಾರ್ಪೊರೇಟ್ ಜನ ಅದೆಲ್ಲಿಂದ ಈಪರಿ ಛೋಡುತ್ತಾರೋ!? ಅದೂ ನಂಬೋ ರೀತಿಯಲ್ಲಿ ಛೋಡೋದೇ!??

:) :)

#ಕಾರ್ಪೊರೇಟಛೋಡ್

Saturday, June 04, 2016

Class 12 memories....


This blog post was triggered by the memories that came after reading the above article.

What a mess!!

So what happens now? Everyone's rank gets bumped up by 1??? Second rank holder becomes the first and so on.

Reminds me of a similar story that happened in 1982, my brother's PUC-II batch. Some girl went to court (if I recall correctly) over her results and somehow became 6th or 7th rank holder afterwards. So everyone below her rank got pushed down. One of my brother's friend who had initially secured the 10th rank also got the push down and being the last rank holder he became rankless as 11th rank does not count. Only top 10.

Not that it mattered. He went on to do well later in life.

That girl getting inserted herself in the middle did not matter to my bro. He was the state topper in science. His 570/600 was a new record and stayed so for many years only to be beaten and bettered by somebody in 1996 or sometime. Now forget it. Everyone scores like 590+ out of 600. But back then scoring was not that easy. That too scoring 570/600 with PCMB and Sanskrit was unheard of. Normally high scorers used to have Statistics or Electronics along with some foreign languages like French or German.

1982 was also a golden year for Dharwad and for Karnataka College Dharwad (KCD). First ranks in both science and arts streams were bagged by KCD students. Arts topper was KUD Chemistry Prof. Mahajanshetty's daughter. Also our family friends.

The year 1982 was also a golden year for our Havyaka community, a very small community of Brahmins who follow Advaita tradition and have their unique Kannada dialect and many other special cultural norms. Both PUC-II (science) and SSLC toppers were Havyakas. PUC-II topper was my bro. SSLC topper was Mahabaleshwar Hegde from Sirsi. SSLC rank list also had few more Havyakas like Vinay Hegde of Bairumbe, Sirsi. Dinesh Bhagwat of Kumata. Interesting thing happened in 1984. Dinesh Bhagwat and Mahabaleshwar Hegde swapped their ranks. Dinesh Bhagwat, who had come to study at KCD, got the first rank to the state in science stream. Mahabaleshwar Hegde got the 6th rank to the state. All went on to scale higher mountains later. All doing well.

Oh, good old memories.

Btw, just for the record, I got the 11th rank in PUC, 1990 (missed the 10th by one mark). Not that it mattered anyway (!?) :)

Thursday, June 02, 2016

ಎಲ್ಲ MRS ಕೃಪೆ! MRS ಗೆ ದೊಡ್ಡ ನಮಸ್ಕಾರ!

'ನಿಮ್ಮ ಕಾರ್ ಏನೂ ಜಾಸ್ತಿ ಎಣ್ಣೆ (oil) ಕುಡಿಯುತ್ತಿಲ್ಲ. ಏನೂ ರಿಪೇರಿ ಬೇಕಾಗಿಲ್ಲ,' ಅಂದ ಮೆಕಾನಿಕ್.

'ಕಾರಿನ ಮಾಲೀಕರೂ ಅಷ್ಟೇ. ಜಾಸ್ತಿ ಎಣ್ಣೆ ಕುಡಿಯೋದಿಲ್ಲ. ಹಾಗಾಗಿ ಕಾರ್ ಕೂಡ ಜಾಸ್ತಿ ಎಣ್ಣೆ ಕುಡಿಯೋದಿಲ್ಲ. ಹಿತಮಿತವಾಗಿ ಎಣ್ಣೆ ಕುಡಿಯುತ್ತೆ!' ಅಂತ ಬ್ಯಾಗ್ರೌಂಡಿನಲ್ಲಿ ನಟ ಜಗ್ಗೇಶ್ ಅವರ ವಿಶಿಷ್ಟ ಶೈಲಿಯಲ್ಲಿ ಕಿಚಾಯಿಸಿದಂತಾಯಿತು. ನೋಡಿದರೆ ಜಗ್ಗೇಶ್ ಟೈಪಿನ ಜನ ಯಾರೂ ಕಾಣಲಿಲ್ಲ. 'ಎದ್ದೇಳು ಮಂಜುನಾಥ' ಸಿನೆಮಾದಲ್ಲಿ ಜಗ್ಗೇಶರಿಗೆ ಆದಂತಹದ್ದೇ ಭ್ರಮೆ ಅಂತ ಕಾಣಿಸುತ್ತದೆ.

'ಕಾರಿನ ಎಣ್ಣೆ ಸೇವನೆ ಎಲ್ಲಾ ಬರೋಬ್ಬರಿ ಇದೆ. ರಿಪೇರಿ ಗಿಪೇರಿ ಬೇಡ,' ಅಂತ ಕೇಳಿ ನಿರುಮ್ಮಳವಾಯಿತು.

ಎಲ್ಲಾ MRS ಕೃಪೆ ಅಂದುಕೊಂಡು ಅಲ್ಲೇ MRS ಗೆ ಒಂದು ನಮಸ್ಕಾರ ಹಾಕಿದೆ.

ಅದೇನಾಗಿತ್ತು ಅಂದರೆ ಐದಾರು ತಿಂಗಳ ಹಿಂದೆ ಟೊಯೋಟಾ ಕಂಪನಿ ಒಂದು ಪತ್ರ ಹಾಕಿದ್ದರು. 'ಇಂತಹ ವರ್ಷದ, ಇಂತಹ ಮಾಡೆಲ್ಲಿನ ಕೆಲವು ಕಾರುಗಳು ಸಿಕ್ಕಾಪಟ್ಟೆ ಎಣ್ಣೆ ಕುಡಿಯುತ್ತಿವೆ. ಕೆಲವುಗಳ ಇಂಜಿನ್ ಕೂಡ ಶಿವಾಯ ನಮಃ ಆಗಿಹೋಗಿದೆ. ಹತ್ತಿರದ ಟೊಯೋಟಾ ಡೀಲರ್ ಹತ್ತಿರ ಹೋಗಿ ಟೆಸ್ಟ್ ಮಾಡಿಸಿ. ನಿಮ್ಮ ಕಾರ್ ಕೂಡ ಸಿಕ್ಕಾಪಟ್ಟೆ ಎಣ್ಣೆ ಹೊಡೆಯೋ ಅಲ್ಲಲ್ಲ ಕುಡಿಯೋ ಗಿರಾಕಿಯಾಗಿದ್ದರೆ ರಿಪೇರಿ ಮಾಡಿಕೊಡಲಾಗುತ್ತದೆ. ಎಲ್ಲ ಉಚಿತ. ಗ್ರಾಹಕರಿಗಾಗಿ ಟೊಯೋಟಾದ ಕೊಡುಗೆ,' ಅಂತ ಏನೋ ಬಂದಿತ್ತು. ಬರುತ್ತಲೇ ಇರುತ್ತವೆ. ವರ್ಷಕೊಮ್ಮೆ ಆ recall, ಈ recall ಅಂತ ಏನೇನೋ ಪತ್ರ ಬರುತ್ತಿರುತ್ತದೆ. ಎಲ್ಲ ಕಾರ್ ಕಂಪನಿಗಳ ಹಣೆಬರಹವೇ ಅಷ್ಟು. ಕಾರಿನಲ್ಲಿ ಕಂಪ್ಯೂಟರ್ ಜಾಸ್ತಿಯಾಗಿ, ಕಂಪ್ಯೂಟರಿನ ಕ್ರಿಮಿಗಳು ಉರ್ಫ್ bugs ಎಲ್ಲಾ ಕಾರಿನಲ್ಲಿ ಸೇರಿ ರಾಮರಾಡಿ ಎದ್ದಿದೆ ಅಂತ ಕಾಣುತ್ತದೆ. ಎಲ್ಲ ನಮ್ಮಂತಹ ಕಂಪ್ಯೂಟರ್ ಕೂಲಿಗಳ ಕಾಣಿಕೆ.

ಹಂ! ನೋಡಿದರೆ ನಮ್ಮ ಹಳೇ ಓಬಿರಾಯನ ಕಾಲದ ಕಾರು ಕೂಡ ಅದೇ ವರ್ಷದ್ದು. ಅದೇ ಮಾಡೆಲ್. ತಪಾಸಣೆ ಉಚಿತ, ಏನಾದರೂ ಪ್ರಾಬ್ಲಮ್ ಇದ್ದರೆ ರಿಪೇರಿ ಉಚಿತ ಅಂತ ಹಾಕಿದ್ದರು ನೋಡಿ. ಉಚಿತ ಉರ್ಫ್ ಬಿಟ್ಟಿ ಅಂದರೆ ನನಗೊಂದು ನಮ್ಮಪ್ಪನಿಗೊಂದು ಅಂತ ಫೀಲಿಂಗ್ ಬರೋದು ಸಹಜ. ಮತ್ತೆ ಎಲ್ಲಿಯಾದರೂ ಎಣ್ಣೆ ಜಾಸ್ತಿ ಕುಡಿದೂ ಕುಡಿದೂ ಇಂಜಿನ್ ಶಿವಾಯ ನಮಃ ಆಗಿಬಿಟ್ಟರೆ ಕಾರನ್ನು ಗುಜರಿಗೆ ಹಾಕಬೇಕಾಗುತ್ತದೆ ಅಷ್ಟೇ. ಯಾಕೆಂದ್ರೆ ಇಂಜಿನ್ ರಿಪೇರಿ ಗಿಪೇರಿ ಅಂತ ಕೂತರೆ ಕಮ್ಮಿ ಕಮ್ಮಿಯೆಂದರೂ ಐದಾರು ಸಾವಿರ ಡಾಲರುಗಳಿಗೆ ಕೆಲಶಿ ರಾಮನ ಬಡ್ಡು ಕೂಪು ಹಚ್ಚಿ ನೀರಿಲ್ಲದೆ ಬೋಳು ಕೆತ್ತಿಸಿಕೊಂಡಂತೆಯೇ. ಯಾರಿಗೆ ಬೇಕು ಆ ರಿಸ್ಕ್? ಹಾಗಂತ ವಿಚಾರ ಮಾಡಿ ನಾಲ್ಕಾರು ತಿಂಗಳ ಹಿಂದೆ ಸರ್ವೀಸಿಗೆ ತೆಗೆದುಕೊಂಡು ಹೋದಾಗ, 'ಅಣ್ಣಾ, ಅದೇನೋ ಕಾರಿನ ಎಣ್ಣೆ ಕುಡಿತದ ಟೆಸ್ಟ್ ಮಾಡ್ತೀರಂತೆ? ನಮ್ಮದಕ್ಕೂ ಸ್ವಲ್ಪ ಮಾಡಿ. ಎಲ್ಲಿ ಮುಂಡೇದು ಜಾಸ್ತಿ ಎಣ್ಣೆ ಕುಡಿಯುತ್ತಿದೆಯೇನೋ? ಗೊತ್ತಾಗಲ್ಲ ಕಣಣ್ಣ,' ಅಂದಿದ್ದೆ. ಅಷ್ಟು ವಿನಯದಿಂದ ಕೇಳಿದ್ದಕ್ಕೆ ಮಾಡಿದ್ದ. ಯಾಕೆಂದರೆ appointment ಕೇವಲ ಸರ್ವೀಸ್ ಮಾಡಲು ಮಾತ್ರ ಇತ್ತು. ಇದಕ್ಕೆ ಅಂತ ಬೇರೆ appointment ಬುಕ್ ಮಾಡಬೇಕಿತ್ತು. ತರಲೆ. ಮಾಡದೇ ಹೋಗಿದ್ದೆ. ಅಲ್ಲಿ ಹೋಗಿ, 'ಸ್ವಲ್ಪ ಅಡ್ಜಸ್ಟ್ ಮಾಡಿ,' ಅಂದಿದ್ದೆ. ಚೊಣ್ಣ ಹಾಕಿಕೊಂಡು, ಫುಲ್ ಬೆಂಡಾಗಿ, ಗೌರವದಿಂದ ಅಣ್ಣಾ, ಪಣ್ಣಾ ಅಂದಿದ್ದಕ್ಕೋ ಏನೋ ಗೊತ್ತಿಲ್ಲ. ಕೇಳಿಕೊಂಡಂತೆ ಸ್ವಲ್ಪ ಅಡ್ಜಸ್ಟ್ ಮಾಡಿದ್ದ.

ಈ ಎಣ್ಣೆ ಕುಡಿಯೋ ತಪಾಸಣೆ ಒಂದು ಪಟ್ಟಿಗೆ ಆಗುವಂತದ್ದಲ್ಲ ಅಂತ ಆವಾಗಲೇ ಗೊತ್ತಾಗಿದ್ದು. ಅದಾದ ನಂತರ ೧೧೦೦ ಮತ್ತು ೧೩೦೦ ಮೈಲುಗಳ ಅಂತರದಲ್ಲಿ ಮತ್ತೊಮ್ಮೆ ತರಲು ಹೇಳಿದ. ಕೆಟ್ಟ ಬೋರಿಂಗ್. ವರ್ಷಕ್ಕೆ ಒಂದು ಸಲ ಸರ್ವೀಸಿಂಗಿಗೆ ತೆಗೆದುಕೊಂಡು ಹೋಗಲೇ ನಮಗೆ ಕೆಟ್ಟ ಬೋರ್. ಈಗ ಈ ಎಣ್ಣೆ ಗಿರಾಕಿಗಾಗಿ ಮತ್ತೊಮ್ಮೆ ಹೋಗಬೇಕೇ??

ಸರಿ ಅಂತ ಹೇಳಿ ಬಂದಿದ್ದೆ. ಬಾನೆಟ್ ತೆಗೆದು ನೋಡಿದರೆ oil chamber, oil dipstick ಎಲ್ಲ ಸೀಲ್ ಮಾಡಿದ್ದರು. 'ಸೀಲ್ ಒಡೆದರೆ ಟೆಸ್ಟ್ void!' ಅಂತ ಎಚ್ಚರಿಕೆ ಬೇರೆ ಅದರ ಮೇಲೆ. 'ಹೌದಪ್ಪಾ, ಸೀಲ್ ಬಹಳ ಇಂಪಾರ್ಟೆಂಟ್. ಸೀಲ್ ಒಡೆದ ಮೇಲೆ ಎಲ್ಲವೂ void ಅಣ್ಣಾ! ಹಾಗಾಗಿ ಎಲ್ಲರೂ ಎಲ್ಲ ಸೀಲ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು!' ಅಂತ ಅಂದುಕೊಂಡೆ.

ಸರಿ ಹೇಗೂ ೧೧೦೦ ರಿಂದ ೧೩೦೦ ಮೈಲುಗಳ ಮಧ್ಯೆ ವಾಪಸ್ ತೆಗೆದುಕೊಂಡುಹೋಗಬೇಕು ತಾನೇ? ಹೋದರಾಯಿತು ಅಂದುಕೊಂಡೆ. ಮರೆತುಬಿಟ್ಟಿದ್ದೆ. ಮನ್ನಿತ್ತಲಾಗೆ ನೆನಪಾಗಿತ್ತು. ಅಲ್ಲೇ ಬಾಯಿ ಲೆಕ್ಕ ಮಾಡಿದೆ. ಹೇಗೂ ಇನ್ನೂ ಒಂದು ನೂರು ನೂರವೈತ್ತು ಮೈಲು ಮಾರ್ಜಿನ್ ಇದೆ. ಹೋಗಿಬಂದರಾಯಿತು ಅಂದುಕೊಂಡೆ. ಕಳೆದ ವಾರಾಂತ್ಯ ಮೂರು ದಿನ ರಜೆ ಬಂದು, U Turn ಸಿನೆಮಾ ನೋಡಲು ಅಲ್ಲಿಲ್ಲಿ ಹೋಗಿ ಬಂದು ಮಾಡಿದ್ದಕ್ಕೆ ಸುಮಾರು ಪ್ರಯಾಣವಾಗಿತ್ತು. ಹಾಗಾಗಿ ಇನ್ನೂ ತಡಮಾಡಿದರೆ ೧೩೦೦ ಮೈಲು ದಾಟಿಬಿಟ್ಟರೆ ಟೆಸ್ಟ್ void ಆಗಿಬಿಡುತ್ತದೆ. ಮತ್ತೊಮ್ಮೆ ಮಾಡಿಸಬೇಕು ಅಂದರೆ ದೊಡ್ಡ ತಲೆನೋವು. ಹಾಗಾಗಿ ಇವತ್ತೇ ಹೋಗಬೇಕು ಅಂತ ಹೋದೆ.

ಹೋಗಿ ನೋಡಿದರೆ!

೧೨೯೭ ಮೈಲುಗಳು. ಇನ್ನು ಮೂರು ಮೈಲು ಜಾಸ್ತಿಯಾಗಿಬಿಟ್ಟಿದ್ದರೆ ೧೩೦೦+ ಆಗಿಬಿಡುತ್ತಿತ್ತು. ಟೆಸ್ಟ್ void. ಸೀಲ್ ಒಡೆಯದಿದ್ದರೂ ಒಮ್ಮೊಮ್ಮೆ ಬೇರೆ ಕಾರಣಕ್ಕೆ void ಆಗಿಬಿಡುವ ರಿಸ್ಕ್ ಇರುತ್ತದೆ. ಅಂತೂ ಇಂತೂ ಮೂರು ಮೈಲಿನಲ್ಲಿ ಬಚಾವ್!

ಮತ್ತೊಮ್ಮೆ MRS ಕೃಪೆ. ಮೂರು ಮೈಲಿನಿಂದ ಬಚಾವ್ ಮಾಡಿಬಿಟ್ಟ.

ಎಣ್ಣೆ ತಪಾಸಣೆ ಎಲ್ಲ ಮುಗಿಯಿತು. ಏನೂ ತೊಂದರೆ ಇಲ್ಲ ಅಂದರು.

ಮತ್ತೊಮ್ಮೆ MRS ಗೆ ನಮಸ್ಕಾರ ಹೇಳಿದೆ.

ಇವತ್ತು ಗುರುವಾರ. ಅಪರೂಪಕ್ಕೆ ಬೆಳಿಗ್ಗೆ ಬೆಳಿಗ್ಗೆಯೇ MRS ನೆನಪಾಗಿದ್ದರು. ಸಂಕಟ ಬಂದಾಗ ವೆಂಕಟರಮಣ ಅನ್ನುವ ರೀತಿಯಲ್ಲಿ MRS ನೆನಪಾಗಿದ್ದರು.

MRS ನೆನಪಾಗಲು ಕಾರಣವೂ ಇತ್ತು. ಸುಮಾರು ಒಂದು ವಾರದ ಮೇಲೆ ಆಫೀಸಿನ ನೆನಪಾಗಿತ್ತು. ಹೋಗಬೇಕಾಗಿತ್ತು. ಕಳೆದ ವಾರಾಂತ್ಯ ಲಾಂಗ್ ವಾರಾಂತ್ಯ. ಮೆಮೋರಿಯಲ್ ಡೇ ಅಂತ ಸೋಮವಾರ ಕೂಡ ರಜೆ. ಲಾಂಗ್ ವಾರಾಂತ್ಯ ಅಂತ ಕಳೆದ ಶುಕ್ರವಾರ ಅರ್ಧ ದಿನಕ್ಕೇ ಅಂಗಡಿ ಬಂದ್ ಮಾಡಿದ್ದೆ. ಅದು ರೂಢಿ. ಮೂರು ಪ್ಲಸ್ ದಿನಗಳ ವಾರಾಂತ್ಯ ಮುಗಿದ ಮರುದಿನ ಅಂದರೆ ಮಂಗಳವಾರ ಎಲ್ಲೋ ಹೊರಗೆ ಟ್ರೇನಿಂಗ ಅಂತ ಹೋಗಿಬಿಟ್ಟೆ. ಬುಧವಾರವೂ ಟ್ರೇನಿಂಗ. ಹಾಗೆಲ್ಲ ಹೊರಗೆ 'ಕೆಲಸದ' (!) ಮೇಲಿದ್ದಾಗ ನಾವು ಆಫೀಸಿನ ಕೆಲಸ ಮಾಡುವದಿಲ್ಲ. ಇಮೇಲ್ ಕೂಡ ನೋಡುವದಿಲ್ಲ. ಇವತ್ತು ಬೆಳಿಗ್ಗೆ ಎದ್ದು ಸುಮ್ಮನೇ ಇಮೇಲ್ ಕೌಂಟ್ ನೋಡಿದರೆ ಐದುನೂರು ಓದದ ಈಮೇಲುಗಳು. ರಜೆ ಹಾಕಿ ಮಲಗಿಬಿಡೋಣ ಅನ್ನಿಸಿತ್ತು. ಹೇಗೂ ಇವತ್ತು ಗುರುವಾರ ರಜೆ ಹಾಕಿ, ಬೆಚ್ಚಗೆ ಹೊದ್ದುಕೊಂಡು ತಾಚಿ ತಾಚಿ ಮಾಡಿಬಿಟ್ಟರೆ ನಾಳೆ ಶುಕ್ರವಾರ. working from home. ಟೀಮಿನ ಮಹಾಲಕ್ಷ್ಮಿಯರಿಗೆ ಬಾಗೀನ ಕೊಟ್ಟು, ವೆಂಕಪ್ಪಗಳಿಗೆ ನಾಮ ಎಳೆದುಬಿಟ್ಟರೆ ಶುಕ್ರವಾರ ಮುಗಿಯುತ್ತದೆ. ಮತ್ತೆ ವಾರಾಂತ್ಯ. ಹೀಗೆ ವಿಚಾರ ಮಾಡಿ ತಾಚಿ ಮಾಡೋಣ ಅಂತ ಮುಸುಕೆಳೆಯಲು ರೆಡಿ ಆದಾಗ ಇದು ನೆನಪಾಯಿತು. ಕಾರ್ ಎಣ್ಣೆ ಸೇವನೆ ತಪಾಸಣೆ. ಅಷ್ಟರಲ್ಲಿ ಬಾಸ್ ಕೂಡ SMS ಮಾಡಿದ. 'ಏನೋ ರಾಡಿ ಎದ್ದಿದೆ. ಸಾಫ್ ಮಾಡಲು ಸಹಾಯದ ಅಗತ್ಯವಿದೆ,' ಅಂದ. 'ಓಹೋ! ಇವತ್ತು ಸಫಾಯಿ ಕರ್ಮಚಾರಿ ಕೆಲಸ. ಹೋಗಲಿಕ್ಕೇಬೇಕು. ಇಲ್ಲವಾದರೆ ನಾಳೆ, ಅದೂ ಶುಕ್ರವಾರ, ತಲೆ ಕೆಟ್ಟು ನಪರೆದ್ದು ಹನ್ನೆರಡಾಣೆ ಆಗಿಹೋಗುವಷ್ಟು ಕೆಲಸ ಬಂದುಬಿಡುತ್ತದೆ,' ಅಂತ ಹೆದರಿಕೆ ಉಂಟಾಗಿ ಎದ್ದೆ. ಪುಣ್ಯಕ್ಕೆ ಕಾರ್ ಎಣ್ಣೆ ತಪಾಸಣೆಯ appointment ಇತ್ತು.

ಕಾರ್ ಸರ್ವೀಸಿಗೆ ಬಿಟ್ಟು ಅವರದ್ದೇ ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡು ಆಫೀಸಿಗೆ ಬಂದರೆ ಎದಿದ್ದ ಎಲ್ಲ ರಾಡಿ ತಂತಾನೇ ಸ್ವಚ್ಛವಾಗಿಬಿಟ್ಟಿದೆ! ಸ್ವಚ್ಛ ಮಾಡಿ, ನಮ್ಮನ್ನು ಆ ರಾಡಿಯಿಂದ ಕಾಪಾಡಿದ ತಮ್ಮನಂತಹ ಹುಡುಗರ, ತಂಗಿಯರಂತಹ ಹುಡುಗಿಯರ ಬೆನ್ನು ತಟ್ಟುವ ಮೊದಲು (ಬೆನ್ನು ಸವರುವ ಮೊದಲು ಅಲ್ಲ ಮತ್ತೆ) ನೆನಪಾಗಿದ್ದು ಇದೇ MRS. 'ನಿನ್ನ ಕೃಪೆ ಅಪಾರ MRS. ಎಂದೂ ನೆನೆಯದವ ಇಂದು ನೆನೆದೆ. ಎಲ್ಲ ಕಷ್ಟಗಳನ್ನೂ ಹೂವು ಎತ್ತಿದಷ್ಟು ಸರಾಗವಾಗಿ ಪರಿಹರಿಸುತ್ತಿರುವೆಯೆಲ್ಲ ತಂದೇ!? ನಿನಗೆ ದೊಡ್ಡ ನಮಸ್ಕಾರ MRS!' ಅಂತ MRS ಗೆ ಮತ್ತೆ ನಮಿಸಿದೆ.

ಜಮಾ ಆಗಿದ್ದ ಐದುನೂರು ಈಮೇಲುಗಳನ್ನು ಓದಲಿಲ್ಲ. ಓದುವ ಇರಾದೆಯೂ ಇಲ್ಲ. ಇಂಪಾರ್ಟೆಂಟ್ ಇದ್ದರೆ ಮತ್ತೆ ಮೇಲ್ ಮಾಡುತ್ತಾರೆ. ಇನ್ನೂ ಇಂಪಾರ್ಟೆಂಟ್ ಇದ್ದರೆ ಫೋನ್ ಮಾಡುತ್ತಾರೆ. ಬಂದ ಇಮೇಲ್ ಎಲ್ಲ ಓದುತ್ತ ಕೂತರೆ ಇದ್ದ ಆಯುಷ್ಯ ಸಾಕಾಗುವದಿಲ್ಲ. ಏನೋ ತಲೆಗೆ ಬಂತು ಆ ಕ್ಷಣದಲ್ಲಿ ಒಂದು ಇಮೇಲ್ ಒಗಾಯಿಸಿರುತ್ತಾರೆ. ಅದನ್ನು ನೀವು ಮೂರು ದಿವಸಗಳ ನಂತರ ಓದಿ, ತಲೆ ಖರ್ಚು ಮಾಡಿ, ಅದಕ್ಕೊಂದು ವಿವರವಾದ ಉತ್ತರ ರೆಡಿ ಮಾಡಿ ಕಳಿಸಿದರೆ ಅವರಿಗೆ ಅಸಲಿ ವಿಷಯವೇ ಮರೆತುಹೋಗಿರುತ್ತದೆ. ಮೇಲಿನ, ಫೀಮೇಲಿನ ಆಯುಷ್ಯ ಎಷ್ಟೇ ಅದರೂ ಈಮೇಲಿನ ಆಯುಷ್ಯ ಹೆಚ್ಚೆಂದರೆ ನಾಲ್ಕು ಘಂಟೆ. ಅದರ ಮೇಲೆ ಅದರ ಬಗ್ಗೆ ಅದನ್ನು ಕಳಿಸಿದವರಿಗೇ ನೆನಪಿರುವದಿಲ್ಲ. ಅರ್ಥ ಆಯ್ತಾ? ಇಮೇಲ್ ಎಲ್ಲಾ ಬಂದಾಗ್ಬೇಕ್! ನನ್ಮಗಂದ್! :)

ಸರಿ, ಹೀಗೆ MRS ಕೃಪೆಯಿಂದ ಎಲ್ಲ ಸಾಂಗೋಪಸಾಂಗವಾಗಿ ಸಾಗಿತು. ಬಗೆಹರಿಯಿತು. ಗುರುವಾರದಂದೇ ಶನಿ ಬಂದು ವಕ್ಕರಿಸುವ ಎಲ್ಲ ಸಾಧ್ಯತೆಗಳಿದ್ದವು. ಅದೇನೋ ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ MRS ನೆನಪು. ನೆನಪಾದ ತಕ್ಷಣ ಭಕ್ತಿ. ಭಕ್ತಿ ಬಂದ ಕೂಡಲೇ ಸ್ತೋತ್ರ. ಸ್ತೋತ್ರ ಹೇಳುತ್ತ ಹೇಳುತ್ತ ಭಕ್ತಿಯಲ್ಲಿಯೇ ಫುಲ್ ಸಿಂಕು.

ಅಂದ ಹಾಗೆ ಇವತ್ತು ಇಷ್ಟೆಲ್ಲಾ ಕೃಪೆ ತೋರಿಸಿ, ಆಶೀರ್ವದಿಸಿ, ಸಲುಹಿ, ಎಲ್ಲ ಕಷ್ಟ ನಿವಾರಣೆ ಮಾಡಿದ MRS ಯಾರು ಅಂದುಕೊಂಡ್ರಾ? ಅವರೇ MRS. ಅವರೇ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು! MRS ಅಂದ್ರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಅಂತ. DMS ಅಂದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಅಂತ. TVS ಅಂದ್ರೆ? ಮೊಪೆಡ್ ಅಲ್ಲರೀ. ತಿರುಪತಿ ವೆಂಕಪ್ಪ ಸ್ವಾಮಿ ಅಂತ. ಎಲ್ಲರ ಕರುಣೆ, ಆಶೀರ್ವಾದ ಇರಲಿ. ನಾಳೆ ಶುಕ್ರವಾರ. 'ಶನಿವಾರದ ಶನಿ ಸ್ವಾಮೀ, ನಾಳೇನೇ ಬಂದು ಅಟಕಾಯಿಸಿಕೊಂಡುಬಿಡಬೇಡ ತಂದೆ. ಕೆಲಸ ಮಾಡಿ, ಮಾಡಿ ಸುಸ್ತಾಗಿ ಬಿಟ್ಟಿದೆ. ಬೇಗನೆ ಕೆಲಸ ಮುಗಿಸಿ, ವೀಕೆಂಡ್ ಶುರುಮಾಡಲು ಅನುವು ಮಾಡಿಕೊಡು ತಂದೇ!! :)

Wednesday, June 01, 2016

ಆಲ್ಬಮ್ ತೋರಿಸುವ ಪರಿಯನ್ನು ಅದು ಹೇಗೆ ಬಣ್ಣಿಸಲಿ?

ಕೃಪಾಕರ ಸೇನಾನಿಯವರ 'ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು' ಪುಸ್ತಕದಿಂದ (ಚಿತ್ರ ಕೃಪೆ: ವಿಕಾಸ್ ಹೆಗಡೆ)







ಹಾ....ಹಾ...ಒಟ್ಟಿನಲ್ಲಿ ಆಲ್ಬಮ್ ತೋರಿಸಿ ಮನೆಗೆ ಬಂದವರನ್ನು ಎಂಟರ್ಟೈನ್ ಮಾಡಬೇಕು. ಆಗಿನ ಕಾಲದಲ್ಲಿ ಸ್ಮಾರ್ಟ್ ಫೋನುಗಳು ಇರಲಿಲ್ಲವಲ್ಲ. ಬಂದವರು ಎಷ್ಟಂತ ಪೇಪರ್ ಓದಿಯಾರು? ಅವರೂ ಆ ಪೇಪರ್ ಮನೆಯಲ್ಲೇ ಓದಿರುತ್ತಿದ್ದರು. ಹಾಗಾಗಿ ಮಾತು ಮುಂದುವರಿಸಲು ಆಲ್ಬಮ್ ಬೆಸ್ಟ್. ವಿದೇಶ ಪ್ರವಾಸದ ಆಲ್ಬಮ್, ವಿದೇಶದಲ್ಲಿದ್ದ ಬಂಧುಗಳ ಆಲ್ಬಮ್. ಒಂದೇ ಎರಡೇ?

ವಿದೇಶದಲ್ಲಿದ್ದ ಕೆಲವು ಭಯಂಕರ ಪ್ರತಿಭಾವಂತರ ಅಲ್ಬಮ್ಮುಗಳನ್ನು ನೋಡಿ motivate ಆಗಿದ್ದಂತೂ ನಿಜ. ಅದರಲ್ಲಿ ದೂಸರಾ ಮಾತಿಲ್ಲ. ಇಪ್ಪತ್ತನೇ ವರ್ಷಕ್ಕೇ ಮಾಸ್ಟರ್ ಡಿಗ್ರಿ ಮುಗಿಸಿದ ಅಣ್ಣ, ಇಪ್ಪತ್ತೆರಡನೇ ವಯಸ್ಸಿಗೇ Phd ಮುಗಿಸಿದ ಅಕ್ಕ, ಇಂಗ್ಲೆಂಡಿನ ದೊಡ್ಡ ಸರ್ಜನ್ ಮಾಮಾ, ಅಮೇರಿಕಾದ ದೊಡ್ಡ ವಕೀಲ ಮತ್ತೊಬ್ಬ. ಹೀಗೆ ಪರಿಚಿತರ ಮಕ್ಕಳಲ್ಲಿ ಸುಮಾರು ದೊಡ್ಡ ಮಟ್ಟದ ಸಾಧಕರು ಇದ್ದರು. ಆರು ತಿಂಗಳಿಗೊಮ್ಮೆ ಅಂತವರ ಧಾರವಾಡದ ಮನೆಗೆ ಹೋಗಿಬಿಟ್ಟರೆ ಮುಗಿಯಿತು. ಒಂದು ವಿಶಿಷ್ಟ ಜಗತ್ತಿಗೆ ಹೋದಂತೆ. ವರ್ಷಕ್ಕೆ ಒಂದು ಎರಡು ಬಾರಿ ಮಕ್ಕಳ ಬಳಿ ಹೋಗಿಬಂದಿರುತ್ತಿದ್ದ ಆ ಮನೆಯವರು ಆಲ್ಬಮ್ ತೆಗೆದುಕೊಂಡು ಬಂದುಕೂತು, ತಾಸುಗಟ್ಟಲೆ ಎಲ್ಲಾ ವಿವರಿಸುತ್ತಿದ್ದರು. ಅವರ ಯಶಸ್ಸಿನ ಕಥೆಗಳೇ ಅಂದು ನಮಗೆ ದೊಡ್ಡ ಪ್ರೇರಣೆ. Those high achievers were our role models.

ಒಮ್ಮೊಮ್ಮೆ ಮಹಾ ಅದೃಷ್ಟವೋ ಎಂಬಂತೆ ಎಲ್ಲಿಯಾದರೂ ಒಂದು ಪೆನ್ನು, ಪೆನ್ಸಿಲ್, ವಾಚು, ಮುಂತಾದ ವಿದೇಶದ ಚಿಕ್ಕ ಉಡುಗೊರೆ ಕೂಡ ಸಿಗುತ್ತಿತ್ತು. 'ನಮ್ಮನಿ ಅಣ್ಣಾ ನಿನಗ ಅಂತ ಕೊಟ್ಟು ಕಳಿಸ್ಯಾನ, ತೊಗೋ', 'ನಿಮ್ಮ ಮಾಮಾ ಕೊಟ್ಟಾನ ನೋಡು ಮಹೇಶಗ ಕೊಡು ಅಂತ ಹೇಳಿ' ಅಂತ ಕೊಟ್ಟುಬಿಟ್ಟರೆ ಮುಗಿದೇಹೋಯಿತು. ವಿದೇಶದಲ್ಲಿ ಅಷ್ಟು ದೂರವಿದ್ದವರನ್ನೂ ಕೂಡ ಅಪ್ಪಿಕೊಂಡು ಕಿಸ್ ಹೊಡೆದೇಬಿಡಬೇಕು ಅನ್ನುವಷ್ಟು ಖುಷಿ. ಅಂತಹ ಅಣ್ಣಂದಿರ ಮೇಲೆ, ಅಕ್ಕಂದಿರ ಮೇಲೆ, ಮಾಮಾಗಳ ಮೇಲೆ ಮತ್ತೂ ಹೆಚ್ಚಿನ ಅಚ್ಚರಿ, ಗೌರವ, ಭಕ್ತಿ, ಮೂಡುತ್ತಿತ್ತು. ಅವರಂತೆ ಸಾಧಿಸಬೇಕು. ಸಾಧನೆ ಏನು ಅಂತ ತಿಳಿಯದಿದ್ದರೂ ಓಕೆ. ಒಟ್ಟಿನಲ್ಲಿ ಅವರಂತಾಗಿಬಿಡಬೇಕು. ತುರಂತ ಆಗಬೇಕು. ಅದೇ ಕನಸು.

ಇಂತಹ ಸಾಧಕ ಮಂದಿ ಮುಂದಿನ ಸಲ ಧಾರವಾಡಕ್ಕೆ ಬಂದಾಗ ಅಂತವರು ನಮಗೆ ಯಾವ ಸಿನೆಮಾ ಹೀರೋಗಿಂತಲೂ ಕಮ್ಮಿ ಅಲ್ಲ. role models. 'ಅವರಂತೆ ಆಗಬೇಕು!' ಅಂತ ಒಂದು ದಾರಿ ತೋರಿಸಲಿಕ್ಕೆ, ಕನಸು ಕಾಣಲಿಕ್ಕೆ ನೆರವಾಗಿದ್ದು ಇಂತಹ ಅಲ್ಬಮ್ ಗಳೇ. ಹಾಗಾಗಿ ಅಂತಹ ಆಲ್ಬಮ್ ಗಳಿಗೆ ದೊಡ್ಡ ಧನ್ಯವಾದ. ಈಗಿನ ಮಂದಿಗೆ ಆ ನಸೀಬ್ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಎಲ್ಲರ ಕೈಯಲ್ಲಿ ಅವೇ ಹಪ್ಪು ಸ್ಮಾರ್ಟ್ ಫೋನ್. ಅವೇ ಹಳಸಿದ ಫೇಸ್ಬುಕ್, ಟ್ವಿಟ್ಟರ್. ಉದ್ಯೋಗಿಲ್ಲದ ಮಂದಿ ಹಾಕಿದ ಯಬಡಾಸು 'ಸ್ವಂತಿ'ಗಳಿಗೆ ಲೈಕ್ ಒತ್ತುತ್ತಾ ಕೂಡುವ ಕರ್ಮ.

ಇನ್ನು ಮದುವೆ ಅಲ್ಬಮ್. ಕೆಟ್ಟ ಬೋರಿಂಗ್. ಮದುವೆ ಅಲ್ಬಮ್ ತೋರಿಸುವದಿದ್ದರೆ ಮದುವೆಯ ಮೂರು ವರ್ಷ / ೩೬,೦೦೦ ಕೀಮಿ ವಾರಂಟಿ ಮುಗಿದ ನಂತರ ತೋರಿಸಿ. ಈಗಿತ್ತಲಾಗೆ ಎಷ್ಟೋ ಮದುವೆಗಳು ಅಷ್ಟು ತಾಳಿಕೆ ಬರುತ್ತಲೇ ಇಲ್ಲ. ತಾಳಿದ್ದು ಬಾಳೀತು. ತಾಳದ ತಾಳಿ ಕಟ್ಟಿಕೊಂಡ ತಾಳಿಬಾನ್ ಮಂದಿಯ ಮದುವೆ ಅಲ್ಬಮ್ ತಂದರೆ ಸಟಾಕ್ ಅಂತ ಎಸ್ಕೇಪ್!

ಒಂದು ಪುಸ್ತಕದ excerpt ನೋಡಿ ಏನೆಲ್ಲಾ ನೆನಪಾಯಿತು!

* ನನ್ನ ಫೇಸ್ಬುಕ್ ಸ್ಟೇಟಸ್ ನಿಂದ ಎತ್ತಿದ್ದು.