Wednesday, April 03, 2024

ಮಾನವರಿಗೆ ಗಂಧರ್ವ ಭಾಗ್ಯ...

ಸುದ್ದಿ: ಬೆಂಗಳೂರಲ್ಲಿ ನೀರಿಲ್ಲ, ಪರ್ಫ್ಯೂಮ್ ಕೊಡುತ್ತಿವೆ ಪ್ರೈವೇಟ್ ಕಂಪನಿಗಳು!

ಸುದ್ದಿ ಉಲ್ಲೇಖ: "ಅಷ್ಟೇ ನೀರಿಲ್ಲದ ಪರದಾಡುತ್ತಿರವ ಕೆಲವು ಏರಿಯಾದ ಜನರು ಸ್ನಾವನ್ನೂ ಮಾಡದೇ ಆಫೀಸಿಗೆ ಹೋಗುವಂತಾಗಿದೆ. ಬೇಸಿಗೆ ಬೇರೆ. ಕೊಳಕು ದೇಹ ಮಾಡ್ಕೊಂಡು ಆಫೀಸಿಗೆ ಬಂದು, ಅಲ್ಲಿ ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವುದ ಕಂಟ್ರೋಲ್ ಮಾಡಲು ಪರ್ಫ್ಮೂಮ್ ಸಹ ನೀಡಲಾಗುತ್ತಿದೆ. "

ಐಟಿ ಕೂಲಿಗಳು ಒಮ್ಮೆಲೇ ಗಂಧರ್ವರಾಗಿಬಿಟ್ಟರೆ??? ಅಕಟಕಟಾ. ಅದೇ ದುರ್ಗಂಧ ಬೀರುವ ದುರ್ಗಂಧರ್ವರು. ಈಗ ಕಂಪನಿ ಕೊಡುವ ಎಂಟಾಣೆ ಸುಗಂಧ ಹೊಡೆದುಕೊಂಡು ಸುಗಂಧರ್ವರಾಗಿ ಕೆಲಸ ಮಾಡಬೇಕು. ಎಂತಹ ಸೌಭಾಗ್ಯ ಗುರುವೇ??? ಈ ದು ಸು ಗಂಧರ್ವರ ಮೈಗಂಧದ ಘಾಟಿಗೆ, ಕೂಲಿಗಳ ಮಧ್ಯೆ ಆಕರ್ಷಣೆ ಹೆಚ್ಚಾಗಿ ಗಂಧ ಮೂಲದ ಗಾಂಧರ್ವ ವಿವಾಹಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರಬಹುದು. 

ವಾಸನಾದ್ ವಾಸುದೇವಸ್ಯ ವಾಸಿತಮ್ ಭುವನತ್ರಯಂ...ಅಂದರೆ ವಾಸುದೇವನ ವಾಸನೆ ಮೂರೂ ಲೋಕಗಳಿಗೂ ಬರೋಬ್ಬರಿ ಪಸರಿಸಿದೆ ಎಂದು ವಿಷ್ಣು ಸಹಸ್ರನಾಮ ಹೇಳುತ್ತ ವಾಸು ಅಗರಬತ್ತಿ ಹಚ್ಚೋಣವೇ????

:) :) :)

1 comment:

sunaath said...

ಕತ್ತೆಗೋ ಒಂದು ಕಾಲ!